Homeಅಂಕಣಗಳುಆತ್ಮಶ್ರೀಗಾಗಿ ಅವಧೂತರ ಬಳಿಹೋದ ಅಲ್ಪರು!

ಆತ್ಮಶ್ರೀಗಾಗಿ ಅವಧೂತರ ಬಳಿಹೋದ ಅಲ್ಪರು!

- Advertisement -
- Advertisement -

ನಮ್ಮ ಜನಪ್ರಿಯ ರಾಜಕಾರಣಿಯಾದ ಎಲ್.ಆರ್ ಶಿವರಾಮೇಗೌಡರು ಮಾದೇಗೌಡರನ್ನು ಕಟುವಾಗಿ ಟೀಕಿಸಿ ಆ ಕಾರಣವಾಗಿ ಕುಮಾರಣ್ಣನವರಿಂದ ನಿಂತ ನಿಲುವಿನಲ್ಲೇ ಪಾರ್ಟಿಯಿಂದ ವಜಾ ಆದ ಘಟನೆ ಈಗ ಹಳೆಯದು. ಆದರೇನು ಶಿವರಾಮೇಗೌಡರು ಇಂತಹ ಪನಿಶ್ಮೆಂಟಿಗೆಲ್ಲಾ ಹೆದರುವವರಲ್ಲ. ಅವರು ಈ ಹಿಂದೆ ಗೆದ್ದಿರುವುದೇ ಪಕ್ಷೇತರರಾಗಿ; ’ಈಗಲೂ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಲ್ಲುತ್ತೇನೆ. ಚಲುವರಾಯಸ್ವಾಮಿ ಮತ್ತು ಸುರೇಶ್‌ಗೌಡನ ಎದುರು ನನ್ನನ್ನು ಮತದಾರರು ಗೆಲ್ಲಿಸದಿದ್ದರೆ ಕೂಡಲೇ ಶಿರಶ್ಚೇದನ ಮಾಡಿಕೊಳ್ಳುತ್ತೆನೆಂದು’ ಹೆದರಿಸಿದ್ದಾರಲ್ಲಾ! ಸ್ವಾತಂತ್ರ್ಯ ಪಡೆಯುವುದಕ್ಕೇ ಹಲವು ವರ್ಷಗಳ ಮೊದಲು ಈ ದೇಶದಲ್ಲಿ ಸತಿಸಹಗಮನ ನಡಯುತ್ತಿತ್ತು. ಬಂಗಾಳದಲ್ಲಿಯೇ ವರ್ಷಕ್ಕೆ ಎಂಬತ್ತರಿಂದ ನೂರು ಜನ ಮಹಿಳೆಯರನ್ನು ಬೆಂಕಿಗೆ ದೂಡಲಾಗುತ್ತಿತ್ತು. ಜನ ಈ ದೃಶ್ಯವನ್ನು ಪದೇಪದೇ ನೋಡಿ ಮಾನವೀಯತೆಯನ್ನೆ ಕಳದುಕೊಂಡು ಮರುಗಟ್ಟಿಹೋಗಿದ್ದರು. ಆದುದರಿಂದ ಸತಿಸಹಗಮನ ಪದ್ಧತಿಯನ್ನು ನೋಡಲು ಯಾವಾಗಲೂ ಜಮಾಯಿಸುತ್ತಿದ್ದರು. ಅಂತದೇ ಮನಸ್ಥಿತಿಯ ಜನ ಈಗ ಹೆಚ್ಚಾಗಿರುವುದರಿಂದ, ದೇವೇಗೌಡರು ತಾವು ಸೋತಾಗ ಹಾಸನ ಜಿಲ್ಲೆಯನ್ನೇ ಬಹಿಷ್ಕರಿಸಿದಂತೆ, ಶಿವರಾಮೇಗೌಡರು ನಾಗಮಂಗಲದ ಕಡೆ ತಿರುಗಿ ನೋಡುವುದಿಲ್ಲ ಎಂದು ಶಪಥ ಬದಲಾಯಿಸಿಕೊಂಡರೆ ಒಳ್ಳೆಯದಲ್ಲವೆ, ಥೂತ್ತೇರಿ.

*****

ಈ ನೆಲದಲ್ಲಿ ಸದ್ಯಕ್ಕೆ ಎಂತಹ ವ್ಯಕ್ತಿಗಳಿಗೂ ಅಭಿಮಾನಿಗಳಿದ್ದಾರೆ. ಹೀಗಿರುವಾಗ ಗೌರಿಗದ್ದೆಯ ಅವಧೂತನಿಗೆ ಸಾವಿರಾರು ಮಂದಿ ಇರುವುದು ಅಚ್ಚರಿಯಲ್ಲ. ಈ ವಯಸ್ಸಿನಲ್ಲಿ ಇನ್ನೇನಾಗಬೇಕು ಎಂದು ಚಿಂತಿಸಬೇಕಾದ ದೇವೇಗೌಡರಿಂದ ಹಿಡಿದು ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಿ ಬಿಜೆಪಿಗಳ ಇ.ಡೀ ಈಡಿಯಟ್‌ಗಳಿಗೆ ತಕ್ಕ ಉತ್ತರ ಕೊಡಲು ಕಾದಿರುವ ಡಿ.ಕೆ ಶಿವಕುಮಾರ್ ಜೊತೆಗೆ, ಶಿವಕುಮಾರ್ ಅಭಿಮಾನಿಗಳೂ ಕೂಡ ಅವಧೂತನ ಅಭಿಮಾನಿಗಳಾಗಿರುವುದು ಅಚ್ಚರಿಯಲ್ಲ. ಕಳೆದ ಶತಮಾನದಲ್ಲಿ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಕರೆಕೊಟ್ಟು ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಋಷಿಕವಿ ಕುವೆಂಪುರವರ ಸಂಬಂಧಿಗಳು ನಾವೆಂದು ಕಿರೀಟ ಧರಿಸಿ ಮೆರೆಯುತ್ತಿದ್ದ ಮೂರ್ಖರೆಲ್ಲಾ ಗೌರಿಗದ್ದೆ ಅವಧೂತನ ಪಾದಕ್ಕೆ ಬಿದ್ದು ಕುವೆಂಪು ಹೆಸರಿಗೆ ಮಸಿ ಬಳಿದಿವೆಯಂತಲ್ಲಾ. ಹಾಗೆ ನೋಡಿದರೆ ಕುವೆಂಪುರವರ ವಿಚಾರಧಾರೆಗೆ, ಮಂತ್ರ ಮಾಂಗಲ್ಯದ ಕಲ್ಪನೆಗೆ ಈ ಮಲೆನಾಡಿಗರು ತಿಲಾಂಜಲಿಯಿತ್ತು ಬಹಳ ವರ್ಷಗಳಾಗಿವೆ. ಆದ್ದರಿಂದ ಈ ಮಂದಮತಿಗಳು ನಾವು ಕುವೆಂಪು ಪ್ರದೇಶದವರು ಅವರ ಸಂಬಂಧಿಗಳು ಎಂದು ಹೇಳಿಕೊಳ್ಳುವುದನ್ನ ನಿಲ್ಲಿಸಿದರೆ ಅದೇ ಕುವೆಂಪುರವರಿಗೆ ಕೊಡುವ ಗೌರವ ಎಂದು ಕುವೆಂಪುರವರನ್ನು ನಿಜವಾಗಿ ಅನುಸರಿಸುವವರ ಸಲಹೆಯಾಗಿದೆಯಂತಲ್ಲಾ, ಥೂತ್ತೇರಿ.

*****

ಶ್ರೇಷ್ಠ ಸಂವಿಧಾನ ಪಡೆದಿರುವ ನಮ್ಮ ವ್ಯವಸ್ಥೆಯಲ್ಲಿ ಕಾನೂನಿಗಿಂತ ಧರ್ಮವೇ ದೊಡ್ಡದೆಂದು ಪ್ರತಿಪಾದಿಸಿದ ಚಿತ್ರದುರ್ಗ ಪ್ರದೇಶದ ಜಗದ್ಗುರುವೊಬ್ಬರು ಅದನ್ನೇ ಅಧಿಕೃತಗೊಳಿಸುತ್ತ ಹೊರಟಿದ್ದಾರಲ್ಲಾ. ಅದೂ ಕೂಡ ತಾನೇ ನಡೆಸುತ್ತಿರುವ ಅನಧಿಕೃತ ನ್ಯಾಯಾಲಯದ ಉದಾಹರಣೆಗಳನ್ನ ಉದಾಹರಿಸುತ್ತ! ಅದಷ್ಟೇ ಅಲ್ಲ ಅವರ ಮಾತನ್ನು ಅಲ್ಲಗಳೆದವರನ್ನು ನಿಂದಿಸಲು ಭಕ್ತಾದಿಗಳನ್ನ ಪ್ರಚೋದಿಸುತ್ತ. ಇಲ್ಲಿ ಪೊಲೀಸ್ ಠಾಣೆ, ನ್ಯಾಯಾಲಯ, ವಕೀಲರ ಅಗತ್ಯವೇ ಇಲ್ಲ; ಬದಲಿಗೆ ಧರ್ಮದ ಮಾನದಂಡದಿಂದಲೇ ಜಾದೂ ಮಾಡಬಹುದು. ಇರಲಿ ಗುರುಗಳು ಕಾನೂನಿಗೆ ತಿಲಾಂಜಲಿ ಇಟ್ಟ ಫಲವಾಗಿಯೇ ಏನೋ ತರಳಬಾಳು ಕೇಂದ್ರದಲ್ಲಿ ಅಕ್ರಮ ಕಟ್ಟಡ ನಿರ್ಮಿಸುತ್ತಿರವ ಆರೋಪದ ಮೇಲೆ ಬಿಬಿಎಂಪಿ ಆಯುಕ್ತರ ವಿರುದ್ದ ಲೋಕಾಯುಕ್ತಕ್ಕೆ ದೂರು ಹೋಗಿದೆ. ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ನಿಯಮಗಳಿಗೆ ವ್ಯತಿರಿಕ್ತವಾಗಿ ತರಳಬಾಳು ಮಠವು ಆರ್.ಟಿ ನಗರದಲ್ಲಿ ಕಾನೂನುಬಾಹಿರ ಮತ್ತು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಜಿ.ಬಿ ವೆಂಕಟೇಶ್‌ರವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮುಂದೆ ಬುದ್ಧಿಯವರು ಪ್ರತಿಪಾದಿಸಿದ ಧರ್ಮದ ಸೆಕ್ಷೆನ್‌ಗಳನ್ನೇ ಬಳಸಿ ಹೋರಾಡುತ್ತಾರೋ ಅಥವಾ ಕಾನೂನು ಸಮರಕ್ಕೆ ತಲೆಬಾಗುತ್ತಾರೋ ಎಂಬುದು ಕುತೂಹಲಕ್ಕೆಡೆಮಾಡಿದೆಯಲ್ಲಾ, ಥೂತ್ತೇರಿ.

*****

ದೆಹಲಿಯಿಂದ ಇಲ್ಲಿಯವರೆಗೆ ಈ ದೇಶದ ವ್ಯವಸ್ಥೆಯೇ ಹಾಳಾಗಿಹೋಗಿದೆ. ಆದರೂ ಬಿಜೆಪಿಗಳು ಮತ್ತೆ ಚುನಾವಣೆಯಲ್ಲಿ ಗೆದ್ದುಬರುವ ಆತ್ಮವಿಶ್ವಾಸಕ್ಕೆ ಕಾರಣವೇನು ಎಂಬುದಕ್ಕೆ ಸಾಕ್ಷಾಧಾರವಾಗಿ ಬೆಂಗಳೂರಲ್ಲಿ ನಡೆದಿರುವ ಮತಪೆಟ್ಟಿಗೆ ಕನ್ನದ ಹಗರಣ ಹೊರಬಿದ್ದಿದೆಯಲ್ಲಾ. ಯಾವುದೇ ಸರ್ಕಾರ ಬರಲಿ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ ಸರಕಾರ ರಚನೆ ಮಾಡುವ ಸಂಚಿನ ಭರವಸೆಯಿಂದ ಬೀಗುತ್ತಿರುವ ಬಿಜೆಪಿಗಳ ತಮಗೆ ಮತಹಾಕದವರನ್ನು ಮತದಾರರ ಪಟ್ಟಿಯಿಂದಲೇ ಕಿತ್ತು ಬಿಸಾಡುವ ಷಡ್ಯಂತ್ರ ರೂಪಿಸಿದ್ದಾರಂತಲ್ಲಾ. ಇಂತಹ ಯಾವ ಸಂಚೂ ಇಲ್ಲದೆ ಈ ದೇಶ ಇರುವವರೆಗೂ ನಾವು ಅಧಿಕಾರದಲ್ಲಿರುತ್ತೇವೆಂದು ಭಾವಿಸಿ ಆರಾಮವಾಗಿದ್ದ ಕಾಂಗೈಗಳಿಗೆ ಬಿಜೆಪಿ ಸಂಚಿಗೆ ಪ್ರತಿತಂತ್ರವೇ ಹೊಳೆಯದೆ ಪ್ರತಿಭಟನೆಗೆ ಸ್ಪಷ್ಟ ಕಾರಣವೂ ಹೊಳೆಯದೆ ಕಂಗಾಲಾಗಿ ಕೂತಿವೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...