Homeಅಂಕಣಗಳುಆತ್ಮಶ್ರೀಗಾಗಿ ಅವಧೂತರ ಬಳಿಹೋದ ಅಲ್ಪರು!

ಆತ್ಮಶ್ರೀಗಾಗಿ ಅವಧೂತರ ಬಳಿಹೋದ ಅಲ್ಪರು!

- Advertisement -
- Advertisement -

ನಮ್ಮ ಜನಪ್ರಿಯ ರಾಜಕಾರಣಿಯಾದ ಎಲ್.ಆರ್ ಶಿವರಾಮೇಗೌಡರು ಮಾದೇಗೌಡರನ್ನು ಕಟುವಾಗಿ ಟೀಕಿಸಿ ಆ ಕಾರಣವಾಗಿ ಕುಮಾರಣ್ಣನವರಿಂದ ನಿಂತ ನಿಲುವಿನಲ್ಲೇ ಪಾರ್ಟಿಯಿಂದ ವಜಾ ಆದ ಘಟನೆ ಈಗ ಹಳೆಯದು. ಆದರೇನು ಶಿವರಾಮೇಗೌಡರು ಇಂತಹ ಪನಿಶ್ಮೆಂಟಿಗೆಲ್ಲಾ ಹೆದರುವವರಲ್ಲ. ಅವರು ಈ ಹಿಂದೆ ಗೆದ್ದಿರುವುದೇ ಪಕ್ಷೇತರರಾಗಿ; ’ಈಗಲೂ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಲ್ಲುತ್ತೇನೆ. ಚಲುವರಾಯಸ್ವಾಮಿ ಮತ್ತು ಸುರೇಶ್‌ಗೌಡನ ಎದುರು ನನ್ನನ್ನು ಮತದಾರರು ಗೆಲ್ಲಿಸದಿದ್ದರೆ ಕೂಡಲೇ ಶಿರಶ್ಚೇದನ ಮಾಡಿಕೊಳ್ಳುತ್ತೆನೆಂದು’ ಹೆದರಿಸಿದ್ದಾರಲ್ಲಾ! ಸ್ವಾತಂತ್ರ್ಯ ಪಡೆಯುವುದಕ್ಕೇ ಹಲವು ವರ್ಷಗಳ ಮೊದಲು ಈ ದೇಶದಲ್ಲಿ ಸತಿಸಹಗಮನ ನಡಯುತ್ತಿತ್ತು. ಬಂಗಾಳದಲ್ಲಿಯೇ ವರ್ಷಕ್ಕೆ ಎಂಬತ್ತರಿಂದ ನೂರು ಜನ ಮಹಿಳೆಯರನ್ನು ಬೆಂಕಿಗೆ ದೂಡಲಾಗುತ್ತಿತ್ತು. ಜನ ಈ ದೃಶ್ಯವನ್ನು ಪದೇಪದೇ ನೋಡಿ ಮಾನವೀಯತೆಯನ್ನೆ ಕಳದುಕೊಂಡು ಮರುಗಟ್ಟಿಹೋಗಿದ್ದರು. ಆದುದರಿಂದ ಸತಿಸಹಗಮನ ಪದ್ಧತಿಯನ್ನು ನೋಡಲು ಯಾವಾಗಲೂ ಜಮಾಯಿಸುತ್ತಿದ್ದರು. ಅಂತದೇ ಮನಸ್ಥಿತಿಯ ಜನ ಈಗ ಹೆಚ್ಚಾಗಿರುವುದರಿಂದ, ದೇವೇಗೌಡರು ತಾವು ಸೋತಾಗ ಹಾಸನ ಜಿಲ್ಲೆಯನ್ನೇ ಬಹಿಷ್ಕರಿಸಿದಂತೆ, ಶಿವರಾಮೇಗೌಡರು ನಾಗಮಂಗಲದ ಕಡೆ ತಿರುಗಿ ನೋಡುವುದಿಲ್ಲ ಎಂದು ಶಪಥ ಬದಲಾಯಿಸಿಕೊಂಡರೆ ಒಳ್ಳೆಯದಲ್ಲವೆ, ಥೂತ್ತೇರಿ.

*****

ಈ ನೆಲದಲ್ಲಿ ಸದ್ಯಕ್ಕೆ ಎಂತಹ ವ್ಯಕ್ತಿಗಳಿಗೂ ಅಭಿಮಾನಿಗಳಿದ್ದಾರೆ. ಹೀಗಿರುವಾಗ ಗೌರಿಗದ್ದೆಯ ಅವಧೂತನಿಗೆ ಸಾವಿರಾರು ಮಂದಿ ಇರುವುದು ಅಚ್ಚರಿಯಲ್ಲ. ಈ ವಯಸ್ಸಿನಲ್ಲಿ ಇನ್ನೇನಾಗಬೇಕು ಎಂದು ಚಿಂತಿಸಬೇಕಾದ ದೇವೇಗೌಡರಿಂದ ಹಿಡಿದು ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಿ ಬಿಜೆಪಿಗಳ ಇ.ಡೀ ಈಡಿಯಟ್‌ಗಳಿಗೆ ತಕ್ಕ ಉತ್ತರ ಕೊಡಲು ಕಾದಿರುವ ಡಿ.ಕೆ ಶಿವಕುಮಾರ್ ಜೊತೆಗೆ, ಶಿವಕುಮಾರ್ ಅಭಿಮಾನಿಗಳೂ ಕೂಡ ಅವಧೂತನ ಅಭಿಮಾನಿಗಳಾಗಿರುವುದು ಅಚ್ಚರಿಯಲ್ಲ. ಕಳೆದ ಶತಮಾನದಲ್ಲಿ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಕರೆಕೊಟ್ಟು ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಋಷಿಕವಿ ಕುವೆಂಪುರವರ ಸಂಬಂಧಿಗಳು ನಾವೆಂದು ಕಿರೀಟ ಧರಿಸಿ ಮೆರೆಯುತ್ತಿದ್ದ ಮೂರ್ಖರೆಲ್ಲಾ ಗೌರಿಗದ್ದೆ ಅವಧೂತನ ಪಾದಕ್ಕೆ ಬಿದ್ದು ಕುವೆಂಪು ಹೆಸರಿಗೆ ಮಸಿ ಬಳಿದಿವೆಯಂತಲ್ಲಾ. ಹಾಗೆ ನೋಡಿದರೆ ಕುವೆಂಪುರವರ ವಿಚಾರಧಾರೆಗೆ, ಮಂತ್ರ ಮಾಂಗಲ್ಯದ ಕಲ್ಪನೆಗೆ ಈ ಮಲೆನಾಡಿಗರು ತಿಲಾಂಜಲಿಯಿತ್ತು ಬಹಳ ವರ್ಷಗಳಾಗಿವೆ. ಆದ್ದರಿಂದ ಈ ಮಂದಮತಿಗಳು ನಾವು ಕುವೆಂಪು ಪ್ರದೇಶದವರು ಅವರ ಸಂಬಂಧಿಗಳು ಎಂದು ಹೇಳಿಕೊಳ್ಳುವುದನ್ನ ನಿಲ್ಲಿಸಿದರೆ ಅದೇ ಕುವೆಂಪುರವರಿಗೆ ಕೊಡುವ ಗೌರವ ಎಂದು ಕುವೆಂಪುರವರನ್ನು ನಿಜವಾಗಿ ಅನುಸರಿಸುವವರ ಸಲಹೆಯಾಗಿದೆಯಂತಲ್ಲಾ, ಥೂತ್ತೇರಿ.

*****

ಶ್ರೇಷ್ಠ ಸಂವಿಧಾನ ಪಡೆದಿರುವ ನಮ್ಮ ವ್ಯವಸ್ಥೆಯಲ್ಲಿ ಕಾನೂನಿಗಿಂತ ಧರ್ಮವೇ ದೊಡ್ಡದೆಂದು ಪ್ರತಿಪಾದಿಸಿದ ಚಿತ್ರದುರ್ಗ ಪ್ರದೇಶದ ಜಗದ್ಗುರುವೊಬ್ಬರು ಅದನ್ನೇ ಅಧಿಕೃತಗೊಳಿಸುತ್ತ ಹೊರಟಿದ್ದಾರಲ್ಲಾ. ಅದೂ ಕೂಡ ತಾನೇ ನಡೆಸುತ್ತಿರುವ ಅನಧಿಕೃತ ನ್ಯಾಯಾಲಯದ ಉದಾಹರಣೆಗಳನ್ನ ಉದಾಹರಿಸುತ್ತ! ಅದಷ್ಟೇ ಅಲ್ಲ ಅವರ ಮಾತನ್ನು ಅಲ್ಲಗಳೆದವರನ್ನು ನಿಂದಿಸಲು ಭಕ್ತಾದಿಗಳನ್ನ ಪ್ರಚೋದಿಸುತ್ತ. ಇಲ್ಲಿ ಪೊಲೀಸ್ ಠಾಣೆ, ನ್ಯಾಯಾಲಯ, ವಕೀಲರ ಅಗತ್ಯವೇ ಇಲ್ಲ; ಬದಲಿಗೆ ಧರ್ಮದ ಮಾನದಂಡದಿಂದಲೇ ಜಾದೂ ಮಾಡಬಹುದು. ಇರಲಿ ಗುರುಗಳು ಕಾನೂನಿಗೆ ತಿಲಾಂಜಲಿ ಇಟ್ಟ ಫಲವಾಗಿಯೇ ಏನೋ ತರಳಬಾಳು ಕೇಂದ್ರದಲ್ಲಿ ಅಕ್ರಮ ಕಟ್ಟಡ ನಿರ್ಮಿಸುತ್ತಿರವ ಆರೋಪದ ಮೇಲೆ ಬಿಬಿಎಂಪಿ ಆಯುಕ್ತರ ವಿರುದ್ದ ಲೋಕಾಯುಕ್ತಕ್ಕೆ ದೂರು ಹೋಗಿದೆ. ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ನಿಯಮಗಳಿಗೆ ವ್ಯತಿರಿಕ್ತವಾಗಿ ತರಳಬಾಳು ಮಠವು ಆರ್.ಟಿ ನಗರದಲ್ಲಿ ಕಾನೂನುಬಾಹಿರ ಮತ್ತು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಜಿ.ಬಿ ವೆಂಕಟೇಶ್‌ರವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮುಂದೆ ಬುದ್ಧಿಯವರು ಪ್ರತಿಪಾದಿಸಿದ ಧರ್ಮದ ಸೆಕ್ಷೆನ್‌ಗಳನ್ನೇ ಬಳಸಿ ಹೋರಾಡುತ್ತಾರೋ ಅಥವಾ ಕಾನೂನು ಸಮರಕ್ಕೆ ತಲೆಬಾಗುತ್ತಾರೋ ಎಂಬುದು ಕುತೂಹಲಕ್ಕೆಡೆಮಾಡಿದೆಯಲ್ಲಾ, ಥೂತ್ತೇರಿ.

*****

ದೆಹಲಿಯಿಂದ ಇಲ್ಲಿಯವರೆಗೆ ಈ ದೇಶದ ವ್ಯವಸ್ಥೆಯೇ ಹಾಳಾಗಿಹೋಗಿದೆ. ಆದರೂ ಬಿಜೆಪಿಗಳು ಮತ್ತೆ ಚುನಾವಣೆಯಲ್ಲಿ ಗೆದ್ದುಬರುವ ಆತ್ಮವಿಶ್ವಾಸಕ್ಕೆ ಕಾರಣವೇನು ಎಂಬುದಕ್ಕೆ ಸಾಕ್ಷಾಧಾರವಾಗಿ ಬೆಂಗಳೂರಲ್ಲಿ ನಡೆದಿರುವ ಮತಪೆಟ್ಟಿಗೆ ಕನ್ನದ ಹಗರಣ ಹೊರಬಿದ್ದಿದೆಯಲ್ಲಾ. ಯಾವುದೇ ಸರ್ಕಾರ ಬರಲಿ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ ಸರಕಾರ ರಚನೆ ಮಾಡುವ ಸಂಚಿನ ಭರವಸೆಯಿಂದ ಬೀಗುತ್ತಿರುವ ಬಿಜೆಪಿಗಳ ತಮಗೆ ಮತಹಾಕದವರನ್ನು ಮತದಾರರ ಪಟ್ಟಿಯಿಂದಲೇ ಕಿತ್ತು ಬಿಸಾಡುವ ಷಡ್ಯಂತ್ರ ರೂಪಿಸಿದ್ದಾರಂತಲ್ಲಾ. ಇಂತಹ ಯಾವ ಸಂಚೂ ಇಲ್ಲದೆ ಈ ದೇಶ ಇರುವವರೆಗೂ ನಾವು ಅಧಿಕಾರದಲ್ಲಿರುತ್ತೇವೆಂದು ಭಾವಿಸಿ ಆರಾಮವಾಗಿದ್ದ ಕಾಂಗೈಗಳಿಗೆ ಬಿಜೆಪಿ ಸಂಚಿಗೆ ಪ್ರತಿತಂತ್ರವೇ ಹೊಳೆಯದೆ ಪ್ರತಿಭಟನೆಗೆ ಸ್ಪಷ್ಟ ಕಾರಣವೂ ಹೊಳೆಯದೆ ಕಂಗಾಲಾಗಿ ಕೂತಿವೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...