Homeನ್ಯಾಯ ಪಥಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

ಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 14/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಜಾಕೊ ವಂಡೊಮಾಲ್

ಮಿಸ್ಟರ್ ನೋಬಡಿ (MR. Nobody, ಇಂಗ್ಲಿಷ್, 2009)

ವಿಚ್ಛೇದನೆಗೊಂಡಿರುವ ತಂದೆತಾಯಿಗಳು ಬೇರೆಯಾಗುತ್ತಿದ್ದಾರೆ. ಅವರ ಹತ್ತು ವರ್ಷದ ಮಗ ನಿಮೋ ನೋಬಡಿ ಯಾರೊಂದಿಗೆ ಹೋಗಬೇಕೆನ್ನುವ ಗೊಂದಲದಲ್ಲಿರುತ್ತಾನೆ. ರೈಲ್ವೆ ನಿಲ್ದಾಣದಲ್ಲಿ ತಾಯಿ ಮಾತ್ರ ರೈಲು ಹತ್ತುತ್ತಾಳೆ. ರೈಲು ಮುಂದಕ್ಕೆ ಚಲಿಸುತ್ತಿದ್ದಂತೆ, ತಾಯಿ ಮಗನನ್ನು ತನ್ನೊಂದಿಗೆ ಬರಲು ಕರೆಯುತ್ತಾಳೆ. ರೈಲಿನ ಹಿಂದೆ ಓಡುತ್ತಿರುವ ಬಾಲಕನನ್ನು ನಿಲ್ದಾಣದಲ್ಲಿ ನಿಂತಿರುವ ತಂದೆಯೂ ಅವನ ಬಳಿಗೆ ಬರಲು ಕರೆಯುತ್ತಾನೆ. ಈಗ ಯಾರ ಜೊತೆ ಹೋಗಬೇಕೆಂಬ ಆಯ್ಕೆಯಿಂದ ಪ್ರಾರಂಭವಾಗಿ, ಭವಿಷತ್ತಿನ ವಿವಿಧ ಸಂಭವನೀಯ ಬದುಕುಗಳೇ ಈ ಸಿನಿಮಾ.

ಸಿನಿಮಾದ ಮೊದಲ ದೃಶ್ಯ: ಅದು 2092ನೇ ಇಸವಿ, ಮನುಕುಲ ಸಾವನ್ನು ಜಯಿಸಿರುತ್ತದೆ. ಆಗ ಭೂಮಿಯ ಮೇಲೆ ಕೊನೆಯದಾಗಿ ಸಾಯುವವನು ನೂರ ಹದಿನೆಂಟು ವರ್ಷಗಳು ತುಂಬಿದ ವೃದ್ಧ ನೋಬಡಿ. ಕೋಮಾದಿಂದ ಹೊರಬಂದ ಮಿಸ್ಟರ್ ನೋಬಡಿಯ ಬದುಕಿನ ಬಗ್ಗೆ ಅಲ್ಲಿಗೆ ಬಂದ ಯುವ ಪತ್ರಕರ್ತನೊಬ್ಬ ಕೇಳುತ್ತಾನೆ. ಬಾಲಕನ ವಾಯ್ಸ್ ಓವರ್‌ನಿಂದ ಮುಂದುವರಿಯುವ ಕಥೆಯಲ್ಲಿ ಬಟರ್‌ಫ್ಲೈ ಎಫೆಕ್ಟ್
ಕುರಿತು ಹೇಳುತ್ತಾನೆ. ಚಿಟ್ಟೆಯೊಂದು ಹಾರುವಾಗ ಒಣಗಿದ ಎಲೆಯೊಂದು ಹಾರಿ ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ನಡೆದುಬರುತ್ತಿರುವ ಇಬ್ಬರು ಭೇಟಿಯಾಗಲು ಸಹಾಯ ಮಾಡುತ್ತದೆ. ಹೀಗೆ ಒಂದಾದ ಜೋಡಿಗೆ ಮಗನಾಗಿ ನಿಮೋ ಹುಟ್ಟುತ್ತಾನೆ.

ಹತ್ತು ವರ್ಷವಿರುವಾಗ ಸಿಹಿ ತಿಂಡಿಯ ಅಂಗಡಿಗೆ ಹೋಗುವ ನಿಮೋ ಎರಡು ಬಗೆಯ ತಿಂಡಿಯನ್ನು ನೋಡಿ ಆಯ್ಕೆ ಮಾಡಲು ಪ್ರಯತ್ನಿಸಿ ಸಾಧ್ಯವಾಗದೆ ವಾಪಸ್ಸಾಗುತ್ತಾನೆ. ಬರುವ ದಾರಿಯಲ್ಲಿ ನಿಮೋ ತನ್ನ ಮೂವರು ಗೆಳತಿಯರನ್ನು ನೋಡುತ್ತಾನೆ. ಅವರು ಅನ್ನಾ, ಎಲ್ಲಿಸ್ಸಾ ಮತ್ತು ಜೀನ್. ಅವರಲ್ಲಿ ಅನ್ನಾ ಅವನಿಗೆ ಅತಿ ಅಚ್ಚು ಮೆಚ್ಚು.

ಒಂದು ಕಥಾ ಎಳೆಯಲ್ಲಿ ತಾಯಿಯೊಂದಿಗೆ ಹೋದ ನಿಮೋ ಬೇರೆ ಊರಿನಲ್ಲಿ ಬೆಳೆದು ಹದಿನಾಲ್ಕು ವಯಸ್ಸಿನವನಾಗುತ್ತಾನೆ. ಅವನ ಶಾಲೆಗೆ ಅನ್ನಾ ಬರುತ್ತಾಳೆ. ಅನ್ನಾಳತ್ತ ಆಕರ್ಷಿತಗೊಳ್ಳುತ್ತಾನೆ. ಒಮ್ಮೆ ನದಿಯ ದಡದಲ್ಲಿ ಕುಳಿತಿರುವ ನಿಮೋನನ್ನು ಈಜಲು ಅನ್ನಾ ಕರೆಯುತ್ತಾಳೆ. ತನಗೆ ಈಜು ಬಾರದನ್ನು ಮುಚ್ಚಿಡಲು ಅವಳಿಗೆ ಕೋಪದಿಂದ ಬರುವುದಿಲ್ಲವೆನ್ನುತ್ತಾನೆ. ಅಲ್ಲಿಂದ ಅವನು ಒಂಟಿಯಾಗಿಯೇ ಬದುಕುತ್ತಾನೆ. ಇನ್ನೊಂದು ಆಯ್ಕೆಯಲ್ಲಿ ತನಗೆ ಈಜು ಬಾರದ ವಿಷಯವನ್ನು ಅನ್ನಾಗೆ ಹೇಳುತ್ತಾನೆ. ಅನ್ನಾ ನಿಮೋನ ನಡುವೆ ಪ್ರೀತಿಯಾಗುತ್ತದೆ. ಇಲ್ಲಿಂದ ಕಥೆ ಎರಡು ಭಾಗಗಳಾಗುತ್ತದೆ. ಮೊದಲನೆಯದು ಇಬ್ಬರು ಮದುವೆಯಾಗಿ ಮಕ್ಕಳೊಂದಿಗೆ ಸುಖವಾಗಿ ಬದುಕುತ್ತಿರುವಾಗ, ನಿಮೋನ ಕಾರು ನದಿಗೆ ಹಾರಿ ಬಾಗಿಲು ತೆಗೆಯಲಾಗದೆ ನಿಮೋ ಸಾಯುವುದು ಕಥೆಯ ಕೊನೆ.

ಇನ್ನೊಂದು ಕಥಾ ಎಳೆಯಲ್ಲಿ ನಿಮೋನ ತಾಯಿಯ ಹೊಸ ಗಂಡನ ಮುಂಚಿನ ಮದುವೆಯಿಂದ ಹುಟ್ಟಿರುವ ಮಗಳು ಅನ್ನಾ ನಿಮೋನ ಮನೆಗೆ ಬರುತ್ತಾಳೆ. ಮನೆಯಲ್ಲಿ ಯಾರಿಗೂ ತಿಳಿಯದಂತೆ ಅವರಿಬ್ಬರೂ ಪರಸ್ಪರ ಹತ್ತಿರವಾಗುತ್ತಾರೆ. ಸಮಯ ಕಳೆದಂತೆ ನಿಮೋ ತಾಯಿಗೂ, ಅನ್ನಾಳ ತಂದೆಗೂ ಹೊಂದಾಣಿಕೆಯಾಗದೆ, ಅವರಿಬ್ಬರೂ ಬೇರೆಯಾಗುತ್ತಾರೆ. ನಿಮೋ ಬೆಳೆದು ಯುವಕನಾಗಿ ಅನ್ನಾಳ ಕಾಯುವಿಕೆಯಲ್ಲೇ ಇರಬೇಕಾದಾಗ, ಆಕಸ್ಮಿಕವಾಗಿ ಅನ್ನಾಳನ್ನು ಭೇಟಿಯಾಗುತ್ತಾನೆ. ಆಗ ಅನ್ನಾ ತನ್ನ ದೂರವಾಣಿ ಸಂಖ್ಯೆಯನ್ನು ಕೊಟ್ಟು ಅಲ್ಲಿಂದ ಹೋಗುತ್ತಾಳೆ. ಆಕಾಶದಿಂದ ಬಿದ್ದ ಮೊದಲ ಮಳೆ ಹನಿ ಅನ್ನಾಳ ದೂರವಾಣಿ ಸಂಖ್ಯೆಯನ್ನು ಅಳಿಸಿಬಿಡುತ್ತದೆ. ಅವಳಿಗಾಗಿ ಜೀವನಪೂರ್ತಿ ಕಾದರೂ ಅನ್ನಾ ಬರದಿರುವುದು ಈ ಕಥೆಯ ಕೊನೆ.

ಮತ್ತೊಂದು ಎಳೆಯಲ್ಲಿ ತಂದೆಯೊಂದಿಗೆ ಹೋದಾಗ ತಂದೆ ಅಪಘಾತವೊಂದರಿಂದ ಅಂಗವಿಕಲನಾಗುತ್ತಾನೆ. ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮೋಗೆ ಬರುತ್ತದೆ. ಇಲ್ಲಿ ಇನ್ನೊಬ್ಬ ಗೆಳತಿಯಾದ ಎಲ್ಲಿಸ್ಸಾಳನ್ನು ಪ್ರೀತಿಸಿ ಅವಳಿಗೆ ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳಲು ಹೋಗುತ್ತಾನೆ. ಎಲ್ಲಿಸ್ಸಾ ಬೇಡವೆಂದಾಗ ಈ ಕಥೆ ಇನ್ನೆರಡಾಗಿ ಸೀಳುತ್ತದೆ. ಒಂದರಲ್ಲಿ ಬೈಕ್ ಅಪಘಾತವಾಗಿ ಆತ ಕೋಮಾಕ್ಕೆ ಹೋದರೆ. ಇನ್ನೊಂದರಲ್ಲಿ ಜೀನ್‌ಳನ್ನು ಮದುವೆಯಾಗಿ ಶ್ರೀಮಂತನಾಗಿ ಬದುಕಿದರೂ ನಿರುತ್ಸಾಹದಲ್ಲಿದ್ದು, ಕೊಲೆಯಾಗುತ್ತಾನೆ. ಎಲ್ಲಿಸ್ಸಾ ಒಪ್ಪಿಕೊಂಡಾಗ ಇಲ್ಲಿಂದ ಕಥೆ ಇನ್ನೆರಡು ಭಾಗಗಳಾಗುತ್ತವೆ. ಎಲ್ಲಿಸ್ಸಾಳನೊಂದಿಗೆ ಮದುವೆಯಾಗಿ ಕಾರು ಅಪಘಾತದಲ್ಲಿ ಎಲ್ಲಿಸ್ಸಾ ಸಾಯುತ್ತಾಳೆ. ಇನ್ನೊಂದು ಕಥಾಭಾಗದಲ್ಲಿ ಎಲ್ಲಿಸ್ಸಾ ಮದುವೆಯಾದರೂ ಸುಖವಾಗಿರದೆ ಎಲ್ಲಿಸ್ಸಾ ನಿಮೋನನ್ನು ಬಿಟ್ಟುಹೋಗುತ್ತಾಳೆ.

ಹೀಗೆ ಅನೇಕ ಕಥೆಗಳನ್ನು ಕೇಳಿದ ಪತ್ರಕರ್ತ, ವೃದ್ಧ ನಿಮೋನನ್ನು ನಿಜವಾಗಿ ನಡೆದ
ಕಥೆಯಾವುದೆಂದು ಕೇಳಿದಾಗ, ವೃದ್ಧ ನಿಮೋ ಇದೆಲ್ಲ ಹತ್ತು ವರ್ಷದ ಬಾಲಕನ ಕಲ್ಪನೆ ಎನ್ನುತ್ತಾನೆ. ತಂದೆ ಅಥವಾ ತಾಯಿಯ ಜೊತೆ ಹೋಗುವ ಆಯ್ಕೆಯಲ್ಲಿರುವ ಬಾಲಕ ನಿಮೋ ಬೇರೆಯದ್ದೇ ದಾರಿ ಆರಿಸಿಕೊಳ್ಳುವುದರ ಮೂಲಕ ಸಿನಿಮಾ ಮುಗಿಯುತ್ತದೆ.

ದಿ ಬ್ರ್ಯಾಂಡ್ ನ್ಯೂ ಟೆಸ್ಟಮೆಂಟ್ (The Brand New Testament,, ಫ್ರೆಂಚ್, 2015):

ಸಾಮಾನ್ಯವಾಗಿ ಬದುಕುತ್ತಿರುವ ಜನರ ಮೊಬೈಲ್ ಫೋನ್‌ಗಳಿಗೆ ಅವರವರ ಸಾವಿನ ದಿನಾಂಕ ಬಂದು, ಬದುಕು ಕೊನೆಯಾಗುವ ದಿನ ಖಚಿತವಾಗಿಬಿಟ್ಟರೆ? ಸಾವಿನ ಭಯವೇ ಇಲ್ಲವಾದರೆ ದೇವರ ಮೌಲ್ಯವೇನಾಗುತ್ತದೆ?
ದೇವರಾದವನು ಬ್ರಸಲ್ಸ್ ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ವಿಧೇಯಳಾಗಿರುವ ಹೆಂಡತಿ ಮತ್ತು ಒಂಭತ್ತು ವರ್ಷಗಳ ಮಗಳೊಂದಿಗೆ ವಾಸವಾಗಿರುತ್ತಾನೆ. ದೇವರು ಜಗಳಗಂಟ, ಸ್ಯಾಡಿಸ್ಟ್ ಆಗಿರುತ್ತಾನೆ. ದೇವರ ಹೆಂಡತಿ ಮುಗ್ಧೆ. ಸದಾ ಮೌನವಾಗಿ ಮನೆ ಕೆಲಸಗಳನ್ನು ಮಾಡುತ್ತಾ ತನ್ನ ಹೊಲಿಗೆ ಕೆಲಸದಲ್ಲಿ ನಿರತಳಾಗಿರುತ್ತಾಳೆ ಮತ್ತು ಅವಳಿಗೆ ಸುಂದರ ಹೂಗಳ ಚಿತ್ತಾರ ಬಿಡಿಸುವುದೆಂದರೆ ಅತಿ ಇಷ್ಟದ ಕೆಲಸ. ದೇವರು ಅವನ ರೂಮಿನ ಕಂಪ್ಯೂಟರಿನ ಮೂಲಕ ಮನುಷ್ಯರ ಹಣೆಬರಹವನ್ನು ನಿರ್ಧಾರಿಸುತ್ತಾನೆ. ಮನುಷ್ಯರು ದೇವರು ಮಾಡಿರುವ ನಿಯಮಗಳಿಂದ ಒದ್ದಾಡುವಾಗ ದೇವರು ನೋಡಿ ಖುಷಿ ಪಡುತ್ತಾನೆ. ರೈಲು, ವಿಮಾನ ಅಪಘಾತಗಳನ್ನು ಅವನ ಮನೋರಂಜನೆಗೋಸ್ಕರ ಅವನು ಮಾಡುತ್ತಿರುತ್ತಾನೆ.

ದೇವರ ಮಗಳಾದ ಈಯಾ ತಂದೆಯ ನಡತೆಯಿಂದ ಬೇಸತ್ತು, ದೇವರ ಕಂಪ್ಯೂಟರ್‌ನಿಂದ ಭೂಮಿಯಲ್ಲಿರುವ ಎಲ್ಲ ಮನುಷ್ಯರಿಗೆ ಅವರವರ ಸಾವಿನ ದಿನಾಂಕವನ್ನು ಅವರುಗಳ ಮೊಬೈಲ್ ಫೋನ್‌ಗಳಿಗೆ ಕಳುಹಿಸಿಬಿಡುತ್ತಾಳೆ. ದೇವರ ಹೆಂಡತಿ ಕಂಪ್ಯೂಟರಿನ ರೂಮನ್ನು ಒರೆಸುವಾಗ ಕಂಪ್ಯೂಟರಿನ ವೈರ್‌ಅನ್ನು ತೆಗೆದುಬಿಡುತ್ತಾಳೆ. ಸಾವಿನ ದಿನಾಂಕ ತಿಳಿದ ಜನರೆಲ್ಲ ಇಷ್ಟವಿಲ್ಲದ ಸಂಗಾತಿಗಳಿಂದ, ಕೆಲಸಗಳಿಂದ ದೂರವಾಗಿ ಅವರವರಿಗೆ ಇಷ್ಟದ ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ದೇವರ ಬಗ್ಗೆ ನೆನೆಯುವರೇ ಇರುವುದಿಲ್ಲ. ಇತ್ತ ಈಯಾ ಮನೆಯಿಂದ ಹೊರಬಂದು ನಿಜವಾದ ಪ್ರಪಂಚಕ್ಕೆ ಹೋಗಿ, ಅತಿ ನವೀನ ಒಡಂಬಡಿಕೆಯನ್ನು ಮಾಡುವುದಕ್ಕಾಗಿ, ಅಣ್ಣಾ ಜೆಸಿಯ (ಜೀಸಸ್ ಕ್ರೈಸ್ತ್) ಬಳಿ ಸಲಹೆ ಕೇಳುತ್ತಾಳೆ. ಶಿಲೆಯಾಗಿರುವ ಜೆಸಿ, ಈಯಾಳಿಗೆ ವಾಷಿಂಗ್ ಮಿಷನಿನಿಂದ ಹೊರ ಪ್ರಪಂಚಕ್ಕೆ ಹೋಗಿ, ಈಗಿರುವ ಹನ್ನೆರಡು ಮಂದಿ ಧರ್ಮ ಪ್ರಚಾರಕರ (ಅಪೊಸ್ತಲ್) ಜೊತೆಗೆ, ಹೆಚ್ಚುವರಿ ಆರು ಜನರನ್ನು ಹುಡುಕಾಟ ಮಾಡಿ, ಅವರಿಂದಲೇ ಬರೆಸುವಂತೆ ಹೇಳುತ್ತಾನೆ.

ಕೋಪಗೊಂಡ ತನ್ನ ತಂದೆ/ದೇವರ ಕೈಗೆ ಸಿಗದಂತೆ ಈಯಾ ವಾಷಿಂಗ್ ಮಿಷನಿನಿಂದ ನಿಜವಾದ ಪ್ರಪಂಚಕ್ಕೆ ಹೋಗುತ್ತಾಳೆ. ವಿವಿಧ ಬಗೆಯ ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ವಿಭಾಗಗಳಲ್ಲಿ ಆರು ಮಂದಿಯನ್ನು ಹುಡುಕಲು ಈಯಾ ಮುಂದಾಗುತ್ತಿರುವಾಗಲೇ, ಅತ್ತ ಅದೇ ವಾಷಿಂಗ್ ಮಿಷನಿನಿಂದ ದೇವರು ತಾನು ಸೃಷ್ಟಿಸಿದ ಪ್ರಪಂಚಕ್ಕೆ ಮಗಳನ್ನು ಹುಡುಕಿಕೊಂಡು ಕೋಪದಲ್ಲಿ ಬರುತ್ತಾನೆ.

ಇಲ್ಲಿ ದೇವರು ಮಾಡಿದ ಎಲ್ಲ ರೀತಿ ರಿವಾಜುಗಳು ಮತ್ತು ನಿಯಮಗಳು ಅವನಿಗೂ ಅನ್ವಯವಾಗುತ್ತದೆ. ಅವನು ಸಾಮಾನ್ಯ ಮನುಷ್ಯನಂತೆ ಒದ್ದಾಡುತ್ತಾನೆ. ಚರ್ಚಿನಲ್ಲಿ ಊಟಕ್ಕಾಗಿ ಕಾಯುವಾಗ ಏಸುವಿನ ಬಗ್ಗೆ ಅವಹೇಳನಕಾರಿ ಟಿಪ್ಪಣಿ ಮಾಡಿ, ಅಲ್ಲಿ ಒದೆಯನ್ನೂ ತಿನ್ನುತ್ತಾನೆ. ದೇವರಿಗೆ ಗುರುತಿನ ಚೀಟಿ ಇಲ್ಲದ ಕಾರಣ ಅವನನ್ನು ಬೇರೆ ದೇಶಕ್ಕೆ ಕಳುಹಿಸಲಾಗುತ್ತದೆ. ದೇವರು ವಾಷಿಂಗ್ ಮಿಷನಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಮತ್ತೆ ತನ್ನ ಮನೆಗೆ ವಾಪಸಾಗುವ ದಾರಿಯನ್ನು ಹುಡುಕುತ್ತಾನೆ.

ಇತ್ತ ಪ್ರಪಂಚವೇ ಮುಗಿಯುವ ಹಂತಕ್ಕೆ ಬಂದಾಗ ದೇವರ ಹೆಂಡತಿ ಕಂಪ್ಯೂಟರಿನ ವೈರ್‌ಅನ್ನು ಮತ್ತೆ ಕನೆಕ್ಟ್ ಮಾಡಿ, ಆಗುವ ಅನಾಹುತವನ್ನು ನಿಲ್ಲಿಸುತ್ತಾಳೆ. ನೀಲಿ ಆಕಾಶ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ವಿವಿಧ ಬಗೆಯ ಹೂಗಳ ವಿನ್ಯಾಸಗಳು ಭೂಮಿಯಲ್ಲೆಲ್ಲಾ ಕಾಣುತ್ತವೆ. ಅದನ್ನೆಲ್ಲ ನೋಡಿ ಈಯಾ ಇದು ತಾಯಿಯ ಕೆಲಸವೆಂದು ನಗುತ್ತಾಳೆ.

ಈ ಸಿನಿಮಾ ಕಾಮಿಡಿಯಾಗಿದ್ದು, ಬದುಕಿನ ವಿವಿಧ ಹಂತಗಳಲ್ಲಿರುವ ಜನಗಳ ಕಥೆಗಳನ್ನು ಹೇಳಿದರೂ ಎಲ್ಲರೂ ಪ್ರೀತಿಗಾಗಿ ಹಂಬಲಿಸುವವರೇ ಆಗಿರುತ್ತಾರೆ.

ಜಾಕೊ ವಂಡೊಮಾಲ್ (Jaco Van Dormel)

ಜಾಕೊರ ಕಥಾವಸ್ತುಗಳು ವಿಚಿತ್ರ ಮತ್ತು ವಿಭಿನ್ನವಾದವು. ಇವರ ಒಂದು ಸಿನಿಮಾದಲ್ಲಿ ಒಂದೇ ಕಥೆಯನ್ನು ಹೇಳದೆ ಕಥೆಯೊಳಗೆ ಹಲವಾರು ಕಥೆಗಳನ್ನು ಹೆಣೆದು ಹೇಳುತ್ತಾ, ವಿವಿಧ ಬಗೆಯ ಭಾವನೆಗಳನ್ನು ಹಿಡಿದಿಡಲು ಪ್ರಯತ್ನಿಸುತ್ತಾರೆ.

ಮಿಸ್ಟರ್ ನೋಬಡಿ ಸಿನಿಮಾದಲ್ಲಿ ಒಬ್ಬ ಬಾಲಕನ ಬದುಕಿನ ಹಲವಾರು ಆಯ್ಕೆಗಳು ಮತ್ತು ಆ ಆಯ್ಕೆಗಳಿಂದ ಹೊರಬರುವ ಬದುಕುಗಳನ್ನು ಚಿತ್ರಿಸಿದರೆ, ದಿ ಬ್ರ್ಯಾಂಡ್ ನ್ಯೂ ಟೆಸ್ಟಮೆಂಟಿನಲ್ಲಿ ಬದುಕಿನ ವಿವಿಧ ಹಂತಗಳಲ್ಲಿರುವ ಜನರ ಕಥೆಗಳನ್ನು ಹಿಡಿದಿಟ್ಟಿದ್ದಾರೆ.

ಇವರು ಮೊದಲು ಬೆಲ್ಜಿಯಂನಲ್ಲಿ ಸಿನಿಮಾ ಮಾಡುತ್ತಾ ಹಾಲಿವುಡ್‌ನಲ್ಲಿ ಸಿನಿಮಾ ಮಾಡುವ ಅವಕಾಶಗಳನ್ನು ಗಳಿಸಿಕೊಂಡು ಬಂದವರು. ಇವರ ’ದಿ ಶೇಪ್ (2019) ಎನ್ನುವ ಕಿರುಚಿತ್ರ ಎಲ್ಲರೂ ನೋಡಲೇಬೇಕಾದದ್ದು. ಇದರಲ್ಲಿ ಫ್ರೀಡಂ ಆಫ್ ಎಕ್ಸ್‌ಪ್ರೆಷನ್ (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು ಮಿಡಿಯಾ ಪ್ಲೂರಲಿಸಂನ (ಮಾಧ್ಯಮ ಬಹುತ್ವ) ಕುರಿತು ಸ್ಫುಟವಾಗಿ ಮತ್ತು ಅತಿ ಪರಿಣಾಮಕಾರಿಯಾಗಿ ಹೇಳಿದ್ದಾರೆ.

ನಿರಂಕುಶ ಪ್ರಭುತ್ವಗಳು ಹೇಗೆ ವ್ಯಕ್ತಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಹವಣಿಸುತ್ತವೆ ಹಾಗೂ ನಂತರದಲ್ಲಿ ಎಲ್ಲ ಸುದ್ದಿವಾಹಿನಿಗಳು ಸರ್ಕಾರದ ಕೈಗೊಂಬೆಗಳಾದಾಗ, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಜೆಗಳೇ ಧ್ವನಿ ಎತ್ತಿ ಬಲಿಷ್ಟ ಸರ್ಕಾರಗಳ ವಿರುದ್ಧ ಹೋರಾಡಬಹುದೆಂಬುದನ್ನು ದಿ ಶೇಪ್ ಕಿರುಚಿತ್ರದಲ್ಲಿ ಜಾಕೋ ಕಟ್ಟಿಕೊಟ್ಟಿದ್ದಾರೆ. ವಿಶ್ವದೆಲ್ಲೆಡೆ ಹಲವು ನಿರಂಕುಶ ಪ್ರಭುತ್ವಗಳ ಜೊತೆ ಸೆಣೆಸುತ್ತಿರುವ ಸಾಮಾನ್ಯ ಜನರ ಕಥೆಯಾಗಿದೆ ಇದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...