HomeಮುಖಪುಟFilm Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

- Advertisement -
- Advertisement -

“ಆತ್ಮಸಾಕ್ಷಿಯ ಸಂಗತಿಯಲ್ಲಿ ಬಹುಮತ ಅಥವಾ ಬಹುಸಂಖ್ಯಾತದ ಕಾನೂನಿಗೆ ಜಾಗವಿಲ್ಲ” ಎಂದಿದ್ದರು ಮಹಾತ್ಮ ಗಾಂಧೀಜಿ. ಇಂದಿನ ರಾಜಕೀಯ, ಸಾಮಾಜಿಕ ವಾತಾವರಣವನ್ನು ನೋಡಿದರೆ ಗಾಂಧೀಜಿಯವರ ಮಾತನ್ನು ಮತ್ತೆ ಮತ್ತೆ ಮನನ ಮಾಡಬೇಕಾದ ತುರ್ತು ಸೃಷ್ಟಿಯಾಗಿದೆ.

ವೈಚಾರಿಕತೆ, ವಿಮರ್ಶಾ ದೃಷ್ಟಿಗಿಂತ ಭಾವನಾತ್ಮಕತೆಯೇ ಮುಖ್ಯವಾದಾಗ ಮೋಸ ಮಾಡುವವರು ಹೆಚ್ಚಾಗುತ್ತಾರೆ. ವಿದ್ಯಮಾನವೊಂದರ ಒಳಸುರಳಿಯನ್ನು ಊಹಿಸುವಲ್ಲಿ ವಿಫಲವಾದ ಜನತೆಯನ್ನು ಒಂದು ವ್ಯವಸ್ಥೆ ಸುಲಭವಾಗಿ ಯಾಮಾರಿಸುತ್ತದೆ. ಹೀಗಾಗಿ ಸದಾ ಎಚ್ಚರದ ಕಣ್ಣುಗಳನ್ನು ಇಟ್ಟುಕೊಂಡಿರಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಯಾರು, ಯಾವುದನ್ನು, ಯಾವ ಉದ್ದೇಶಕ್ಕಾಗಿ ಹೇಳುತ್ತಿದ್ದಾರೆಂದು ತರ್ಕಿಸಿ ನೋಡಲೇಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮುಂದಿನ ವರ್ಷ ಕರ್ನಾಟಕದಲ್ಲಿ ಚುನಾವಣೆ ಎದುರಾಗಲಿದೆ. ಇದರ ಪೂರ್ವ ತಯಾರಿಯಾಗಿ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ. ಮತೀಯ ಗೂಂಡಾಗಿರಿಯ ಸಮರ್ಥನೆಯಿಂದ ಹಿಡಿದು ನಿನ್ನೆ ಮೊನ್ನೆಯ  ಹಿಜಾಬ್‌ ವಿವಾದ, ಭಿನ್ನ ಮತದವರ ವ್ಯಾಪಾರಕ್ಕೆ ಅಡ್ಡಿ, ಹಲಾಲ್‌, ಜಟ್ಕಾ ಕಟ್‌ ತನಕವೂ ಕೋಮು ಭಾವನೆ, ಕೋಮು ಪ್ರಚೋದನೆ, ಅಸಹಿಷ್ಣುತೆ ರಾಚಿದೆ. ದೃಶ್ಯಮಾಧ್ಯಮಗಳಿಗೆ ಇವೆಲ್ಲವೂ ಟಿಆರ್‌ಪಿಯ ಸರಕಾಗಿವೆ.

“ಮಾಧ್ಯಮ ಹೇಳಿದ್ದು ನಿಜವೋ ಅಥವಾ ನಿಜವನ್ನು ಮಾಧ್ಯಮಗಳು ಹೇಳುತ್ತಿವೆಯೋ?” ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. “ಮಾಧ್ಯಮದಲ್ಲಿ ಬಂದ ಮಾತ್ರಕ್ಕೆ ಸತ್ಯ ಸುಳ್ಳಾಗುವುದಿಲ್ಲ, ಸುಳ್ಳು ಸತ್ಯವಾಗುವುದಿಲ್ಲ. ಸತ್ಯವೇ ಎಂದಿಗೂ ಗೆಲ್ಲುತ್ತದೆ” ಎಂಬ ಆಶಾವಾದ ದೊಡ್ಡದು. ನೂರು ಜನ ಏನೇ ಹೇಳಿದರೂ ಆತ್ಮಸಾಕ್ಷಿಗೆ ವಿರುದ್ಧವಾದದ್ದು ಸುಳ್ಳಾಗಿಯೇ ಇರುತ್ತದೆ ಅಲ್ಲವೆ?

ಇದನ್ನೂ ಓದಿರಿ: ಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದ. ಪ್ರಕರಣ ತೀವ್ರ ಸ್ವರೂಪ ಪಡೆಯಿತು. ಹರ್ಷ ಕೊಲೆಯಾಗಿದ್ದು ಏತಕ್ಕೆ? ಇದರ ಹಿಂದೆ ಯಾರ್‍ಯಾರು ಇದ್ದಾರೆ? ಇದು ವೈಯಕ್ತಿಕ ಕಾರಣಕ್ಕೆ ಆದ ಕೊಲೆಯೋ, ಕೋಮು ಪ್ರಚೋದಿತ ಕೊಲೆಯೋ? ಇತ್ಯಾದಿಗಳನ್ನು ವಿಮರ್ಶಿಸುವ ತಾಳ್ಮೆಯನ್ನು ಯಾರೂ ತೋರಲಿಲ್ಲ. ಶವದ ಮೆರವಣಿಗೆ ಮಾಡಿ, ಮುಸ್ಲಿಮರ ಮನೆಗಳಿಗೆ, ಮದ್ರಾಸಗಳಿಗೆ ಕಲ್ಲು ಎಸೆಯಲಾಯಿತು. ರಾಜಕಾರಣಿಗಳು ಮೆರವಣಿಗೆಯ ಮುಂದಾಳತ್ವ ವಹಿಸಿದರು. ಅಶಾಂತಿಯ ವಾತಾವರಣವನ್ನು ನೋಡುತ್ತಾ ಪೊಲೀಸರು ಕೈ ಚೆಲ್ಲಿ ಕುಳಿತ್ತಿದ್ದರು. ತನಿಖೆ ನಡೆದು ವಿಷಯ ಹೊರಬರುವ ಮುನ್ನವೇ ತೀರ್ಪು ನೀಡಿಯಾಗಿತ್ತು. ರಾಜ್ಯದಲ್ಲಿ ಇನ್ಯಾವುದೇ ಸಮಸ್ಯೆ ಇಲ್ಲವೆಂಬಂತೆ ಮಾಧ್ಯಮಗಳು ದಿನಪೂರ್ತಿ ಇದನ್ನೇ ವರದಿ ಮಾಡಿದವು. ಜನಸಮೂಹ ಕೂಡ ಇದರ ಸುತ್ತಲೇ ಗಿರಕಿ ಹಾಕಿತು.

‘ಜನಗಣಮನ’ ಸಿನಿಮಾದ ಒಂದು ದೃಶ್ಯ

ಸಮೂಹ ಸನ್ನಿಯ ವಿಚಾರವಾಗಿ ಚರ್ಚಿಸುವಾಗ ತೆಲಂಗಾಣದಲ್ಲಾದ ಎನ್‌ಕೌಂಟರ್‌ ಪ್ರಕರಣ ಗಮನಿಸಲೇಬೇಕು. ಕನ್ನಡಿಗರೇ ಆದರೆ ವಿಶ್ವನಾಥ್‌ ಸಜ್ಜನರ್‌ ಸೈಬರಾಬಾದ್‌ ಪೊಲೀಸ್ ಆಯುಕ್ತರಾಗಿದ್ದರು. ಪಶುವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿ ಕೊಲೆ ಗೈದಿದ್ದಾರೆಂದು 2019ರಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ಘಟನೆಯ ಪುನರ್‌ ಸೃಷ್ಟಿಯ ಸಂದರ್ಭದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರೆಂದು ನಾಲ್ವರನ್ನೂ ಎನ್‌ಕೌಂಟರ್‌ ಮಾಡಲಾಗಿತ್ತು. “ಸಜ್ಜನರಿಂದ ದುರ್ಜನರ ಸಂಹಾರ”- ಎಂದೆಲ್ಲ ಮಾಧ್ಯಮಗಳು ವರ್ಣಿಸಿದವು. ನ್ಯಾಯದಾನ ವ್ಯವಸ್ಥೆಯ ವಿಳಂಬದಿಂದಾಗಿ ಜನರು ಈ ಎನ್‌ಕೌಂಟರ್‌‌ ಮೆಚ್ಚಿಕೊಂಡಿದ್ದಾರೆಂಬ ಚರ್ಚೆಯಾಯಿತು. ಆದರೆ ಅನೇಕ ಪ್ರಜ್ಞಾವಂತರು ಪೊಲೀಸರ ವರ್ತನೆಯನ್ನು ಖಂಡಿಸಿದರು. ಕೊಲ್ಲುವ ಅಧಿಕಾರವನ್ನು ಈ ಪೊಲೀಸರಿಗೆ ಕೊಟ್ಟಿದ್ದು ಯಾರು? ಎನ್‌ಕೌಂಟರ್‌ ಆದವರು ನಿಜವಾಗಿಯೂ ತಪ್ಪಿತಸ್ಥರೇ? ಆರೋಪ ಸಾಬೀತಾಗದ ಹೊರತು ಯಾರೂ ಅಪರಾಧಿಗಳಲ್ಲ ಎಂಬ ನ್ಯಾಯಾಂಗದ ಉದಾತ್ತ ಚಿಂತನೆಯನ್ನು ನಾವು ಮರೆತೆವೆ? ಈ ಎನ್‌ಕೌಂಟರ್‌ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಸರಿಯೇ? ಅತ್ಯಾಚಾರ ಮಾಡಿದವರನ್ನೆಲ್ಲ ಶೂಟ್ ಮಾಡಬೇಕು ಎನ್ನುವುದಾದರೆ ಘಟನಾನುಘಟಿಗಳ ತಲೆಗಳೇಕೆ ಉರುಳುವುದಿಲ್ಲ?- ಇತ್ಯಾದಿ ಪ್ರಶ್ನೆಗಳು ಮುನ್ನೆಲೆಗೆ ಬಂದವು.

ಹಿಂದುತ್ವ, ದೇಶಭಕ್ತಿ, ಸೈನ್ಯ, ಹಿಜಾಬ್‌, ವ್ಯಾಪಾರ ಎಲ್ಲವೂ ಈಗ ಸೆನ್ಸೇಷನ್‌. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿತವಾದದ್ದೇ ದೊಡ್ಡ ಸುದ್ದಿಯಾಗಿ ಉಳಿದೆಲ್ಲ ನಿತ್ಯದ ಸಮಸ್ಯೆಗಳು ಗೌಣವಾಗುತ್ತವೆ. ಜನಸಾಮಾನ್ಯರ ನಿತ್ಯದ ಸಂಕಷ್ಟದೊಂದಿಗೆ ಪ್ರಭುತ್ವ ಚೆಲ್ಲಾಟವಾಡುತ್ತಿದ್ದರೂ ಅವುಗಳನ್ನು ಮುಚ್ಚಿಹಾಕಲು ಒಂದು ಕೋಮು ಸಂಘರ್ಷ ಸಾಕೆನ್ನುವ ಮಟ್ಟಕ್ಕೆ ವ್ಯವಸ್ಥೆ ಬಂದು ನಿಂತಿರುವಂತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಕೆಲವು ಮತೀಯ ಶಕ್ತಿಗಳು ಬಹುಸಂಖ್ಯಾತವಾದದ ಅಸ್ತ್ರವಿಡಿದು ಸೃಷ್ಟಿಸುತ್ತಿರುವ ಗಲಾಟೆಗಳನ್ನು ನೋಡಿದಾಗ ಗಾಂಧಿಯ ಮಾತು ನೆನಪಾಗಲೇಬೇಕು- “ಆತ್ಮಸಾಕ್ಷಿಯ ಸಂಗತಿಯಲ್ಲಿ ಬಹುಮತದ ಕಾನೂನಿಗೆ ಬೆಲೆ ಇಲ್ಲ”.

ಇದನ್ನೂ ಓದಿರಿ: ಜೈ ಭೀಮ್‌ ವಿವಾದ: ಸೂರ್ಯ, ಜ್ಞಾನವೇಲ್‌, ಜ್ಯೋತಿಕಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರ್ಟ್ ಆದೇಶ

ಇತ್ತೀಚೆಗೆ ಬಿಡುಗಡೆಯಾದ ‘ಜನ ಗಣ ಮನ’ (ಮಲಯಾಳಂ) ಸಿನಿಮಾ ಜನರ ಆತ್ಮಸಾಕ್ಷಿಯನ್ನು, ಸಮೂಹ ಸನ್ನಿಯ ಹಿಂದಿರುವ ತಪ್ಪು ಹೆಜ್ಜೆಗಳನ್ನು ದಟ್ಟವಾಗಿ ತೆರೆದಿಡುವ ಪ್ರಯತ್ನ ಮಾಡಿದೆ. ಮನರಂಜನಾ ಪರಿಭಾಷೆಗಳನ್ನು ಸಶಕ್ತಿಯವಾಗಿ ಬಳಸಿಕೊಂಡೇ ದೇಶದ ಹಲವು ಸಮಸ್ಯೆಗಳಿಗೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಹತ್ತಾರು ಘಟನೆಗಳನ್ನು ಕಥೆಯೊಳಗೆ ತಂದಿದ್ದರೂ ಯಾವುವೂ ಬಿಡಿಬಿಡಿ ಸಂಗತಿಗಳಾಗಿ ಉಳಿಯುವುದಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಶ್ವವಿದ್ಯಾನಿಲಯಗಳಿಗೆ ಮತೀಯವಾದಿಗಳ ಪ್ರವೇಶ, ಕೇಸರಿ ರಾಜಕಾರಣ, ಶಿಕ್ಷಣ ಮಾಫಿಯಾ, ಶೈಕ್ಷಣಿಕ ವ್ಯವಸ್ಥೆಯೊಳಗೆ ತುಂಬಿದ ತರತಮ, ಪ್ರಜಾತಾಂತ್ರಿಕವಾಗಿ ಮುನ್ನುಗ್ಗುತ್ತಿರುವ ವಿದ್ಯಾರ್ಥಿಗಳಿಗೆ ದೇಶದ್ರೋಹದ ಪಟ್ಟ, ನ್ಯಾಯಾಧೀಶರಂತೆ ವರ್ತಿಸುವ ಮಾಧ್ಯಮಗಳು, ಬಹುಮತದ ಸನ್ನಿಯೊಳಗೆ ಕಳೆದು ಹೋದ ಸೂಕ್ಷ್ಮ ಪ್ರಜ್ಞೆ, ಭಾವನಾತ್ಮಾಕ ವಿಷಯಗಳನ್ನು ಎಳೆತಂದು ನಿಜ ಸಮಸ್ಯೆಗಳನ್ನು ಮರೆಮಾಚುವ ರಾಜಕಾರಣಿಗಳು, ಅಧಿಕಾರಶಾಹಿಯ ದರ್ಪ ಹಾಗೂ ಸುಳ್ಳುಗಳು, ಪ್ರಭತ್ವದ ಸುಳ್ಳುಗಳನ್ನು ಪ್ರಶ್ನಿಸಿದ ಪ್ರಾಮಾಣಿಕ ಅಧಿಕಾರಿಗಳಿಗೆ ಸಿಗುವ ಶಿಕ್ಷೆ- ಹೀಗೆ ಹಲವಾರು ಸಂಗತಿಗಳನ್ನು ಒಂದು ಕೋನದೊಳಗೆ ತರುವ ಪ್ರಯತ್ನವನ್ನು ನಿರ್ದೇಶಕ ಡಿಜೊ ಜೋಸ್‌ ಆಂಟೊನಿ ಸಶಕ್ತವಾಗಿ ಮಾಡಿದ್ದಾರೆ.

ಜನಗಣಮನ ಸಿನಿಮಾದ ಒಂದು ದೃಶ್ಯ

ಈ ಘಟನೆಯನ್ನು ಎಲ್ಲೋ ನೋಡಿದಂತಿದೆಯಲ್ಲ ಅನಿಸುತ್ತಿರುವಾಗಲೇ, ಮತ್ತೊಂದು ದೃಶ್ಯ ನಮ್ಮ ಮುಂದೆ ಬರುತ್ತದೆ. ಇದನ್ನೂ ಎಲ್ಲೋ ನೋಡಿದಂತಿದೆಯಲ್ಲ ಅನಿಸುತ್ತದೆ. ಆದರೆ ಪ್ರತ್ಯೇಕ ಘಟನೆಗಳನ್ನು ಒಂದಕ್ಕೊಂದು ಪೋಣಿಸಿರುವ ರೀತಿ ಮೆಚ್ಚುಗೆ ಪಡೆಯುತ್ತದೆ. ರಾಜಕಾರಣದ ವೃತ್ತದೊಳಗೆ ಎಲ್ಲ ಬಿಂದುಗಳು ಸೇರಿಕೊಂಡಿವೆ. ಶರೀನ್‌ ಮೊಹಮ್ಮದ್‌ ಸೊಗಸಾಗಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಪ್ರಸ್ತಾಪಿಸಲಾಗುವ ಸಂಗತಿಗಳು ಅತ್ಯಂತ ಗಂಭೀರವಾದರೂ, ‘ಕಲಾತ್ಮಕ ಸಿನಿಮಾ’ ಎಂಬ ಕ್ಯಾಟಗರಿಗೇನೂ ಒಳಪಡುವುದಿಲ್ಲ. ‘ಬ್ರಿಡ್ಜ್‌ ಸಿನಿಮಾ’ ಎಂದರೆ ತಪ್ಪಾಗಲಾರದು. ಚಿಂತನೆ ಹಾಗೂ ರಂಜನೆ ಹದವಾಗಿ ಬೆರೆತಿದೆ. ಅರ್ಥಪೂರ್ಣ ಹಾಗೂ ಪಂಚಿಂಗ್‌ ಎನ್ನಬಹುದಾದ ಸಂಭಾಷಣೆಯನ್ನು ಕಟ್ಟಿಕೊಡಲಾಗಿದೆ. ಭಾವುಕತೆ ಹಾಗೂ ವಿಚಾರವಂತಿಕೆಯನ್ನು ಸಮ ತೂಕದಲ್ಲಿ ಬೆರೆಸಲಾಗಿದೆ. ಜೇಕ್ಸ್‌ ಬೆಜಾಯ್‌ ಅವರ ಹಿನ್ನಲೆ ಸಂಗೀತವಂತೂ ಮೈ ನವಿರೇಳಿಸುವಂತಿದೆ.

ಇದನ್ನೂ ಓದಿರಿ: ದಮನಿತರ ಭೂಮಿ ಹಕ್ಕಿನ ಕಥೆ ‘ಪಡ’: ತಮಿಳು ಚಿತ್ರರಂಗದ ಹಾದಿಯಲ್ಲಿ ‘ಮಲಯಾಳಂ’ ಸಿನಿಮಾ

ಮತ್ತೊಂದು ಗಮನಿಸಲೇಬೇಕಾದ ಅಂಶ- ಇಡೀ ಸಿನಿಮಾ ಕಥೆಯನ್ನು ಕರ್ನಾಟಕ ರಾಜ್ಯವನ್ನು ಕೇಂದ್ರೀಕರಿಸಿ ಎಣೆಯಲಾಗಿದೆ. ದಕ್ಷಿಣ ಭಾರತದ ಬಹುದೊಡ್ಡ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದ್ದು, ಕೋಮು ಸಂಘರ್ಷ ಒಳಗೊಂಡ ಕಥೆಯನ್ನು ಉದ್ದೇಶಪೂರ್ವಕವಾಗಿಯೇ ಕರ್ನಾಟಕದ ಮೂಲಕ ಹೇಳಲಾಗಿದೆಯೇನೋ? ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳು, ಮತೀಯ ಸಂಘರ್ಷಗಳು ಹಾಗೂ ಜಮ ಗಣ ಮನ ಸಿನಿಮಾದ ಕಥೆಗೂ ಕಾಕತಾಳೀಯವೆಂಬಂತೆ ಹೋಲಿಕೆ ಕಾಣುತ್ತದೆ. ಆದರೆ ‘ಕಾಲ್ಪನಿಕ ಕಥೆ’ ಎಂಬ Anticipatory bail ಕೂಡ ಇದೆ.

ಟೀಸರ್‌ ಹಾಗೂ ಟ್ರೈಲರ್‌ನಲ್ಲಿ ತೋರಿಸಿದ ಕೆಲವು ದೃಶ್ಯಗಳನ್ನು ಸಿನಿಮಾದಲ್ಲಿ ತೆಗೆದು ಹಾಕಲಾಗಿದೆ. ಸಿನಿಮಾದ ಆರಂಭದಲ್ಲಿ ತೋರಿಸುವ ಕೆಲವು ದೃಶ್ಯಗಳ ಹಿನ್ನೆಲೆಯನ್ನು ಜೋಡಿಸುವುದಕ್ಕಾಗಿ ಕೊನೆಯ ಕೆಲವು ನಿಮಿಷಗಳನ್ನು ಮೀಸಲಿಡಲಾಗಿದೆ. ದ್ವಿತೀಯಾರ್ಧದ ಬಹುತೇಕ ಕಥೆ ಕೋರ್ಟ್ ಹಾಲ್‌ನೊಳಗೆ ನಡೆಯುತ್ತದೆ. ನ್ಯಾಯಾಧೀಶರ ಪಾತ್ರ ಪೂರ್ವಗ್ರಹ ಪೀಡಿತವಾಗಿದೆ ಏನೋ ಅನಿಸುತ್ತಿರುವಾಗಲೇ ನ್ಯಾಯಪ್ರಜ್ಞೆಯ ಹಾದಿಗೆ ಎಳೆದು ನಿಲ್ಲಿಸಲಾಗಿದೆ. ಕಥೆಯ ಸ್ವಾರಸ್ಯವನ್ನು ಕಾಪಾಡಲು ಬಹುಶಃ ಪಾತ್ರದ ಏರಿಳಿತ ಮಾಡಿದ್ದಾರೆ. ಕಥೆ ಕರ್ನಾಟಕ ಕೇಂದ್ರಿತವಾಗಿ ನಡೆಯುವುದರಿಂದ ಮಲಯಾಳಂ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್‌, ಹಿಂದಿ ಭಾಷೆಗಳನ್ನು ಅಲ್ಲಲ್ಲಿ ಬಳಸಲಾಗಿದೆ. ಕನ್ನಡ ವಾಕ್ಯಗಳ ಉಚ್ಚರಣೆಯಲ್ಲಿ ಮಲಯಾಳಂ ಪ್ರಭಾವ ಕಂಡು ಬರುವುದು ಆಭಾಸವೆನಿಸುತ್ತದೆ.

ಅಕ್ವೊಕೇಟ್‌ ಅರವಿಂದ ಸ್ವಾಮಿನಾಥನ್‌ ಪಾತ್ರದಲ್ಲಿ ಪೃಥ್ವಿರಾಜ್‌ ಸುಕುಮಾರನ್‌, ಎಸಿಪಿ ಸಜ್ಜನ್‌ ಕುಮಾರ್ ಪಾತ್ರದಲ್ಲಿ ಸೂರಜ್‌ ವೆಂಜರಮೂಡು, ಪ್ರೊ.ಸಬಾ ಮರಿಯಮ್‌ ಪಾತ್ರದಲ್ಲಿ ಮಮತಾ ಮೋಹನ್‌ದಾಸ್‌, ಕರ್ನಾಟಕದ ಹೋಮ್‌ ಮಿನಿಸ್ಟರ್‌ ಆಗಿ ಜಿ.ಎಂ. ಸುಂದರ್‌, ವಕೀಲ ರಘುರಾಮ್ ಅಯ್ಯರ್‌ ಆಗಿ ಶಮ್ಮಿ ತಿಲಕನ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಸೂರಜ್‌ ಹಾಗೂ ಪೃಥ್ವಿಯವರು ‘ಡ್ರೈವಿಂಗ್ ಲೈಸೆನ್ಸ್‌‌’ ಸಿನಿಮಾ ಬಳಿಕ ಮತ್ತೊಮ್ಮೆ ತಮ್ಮ ಕಾಂಬೊವನ್ನು ಮುಂದುವರಿಸಿದ್ದಾರೆ. ಪೃಥ್ವಿರಾಜ್‌ ಪ್ರೊಡಕ್ಷನ್‌ನಲ್ಲಿ ಜನಗಣಮನ ನಿರ್ಮಾಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...

ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆ: ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲಿಸಿ, ಅವುಗಳನ್ನು ಹಿಂಪಡೆಯುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸರ್ಕಾರವು ಆರು ಮಂದಿ ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿಯನ್ನು ರಚಿಸಿದೆ. ಸರ್ಕಾರದ ಅಧಿಕೃತ...

ಉದ್ಯಾನವನ ನುಂಗುವ ಕಾಯ್ದೆ ತಿದ್ದುಪಡಿ : ಸರ್ಕಾರದ ವಿರುದ್ಧ ಸಿಡಿದೆದ್ದ ಬೆಂಗಳೂರಿಗರು

ಕರ್ನಾಟಕ ವಿಧಾನಮಂಡಲವು ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಕೆಲವು ಭಾಗಗಳನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಬಳಸಲು ಅನುಮತಿಸುವ ಕಾಯ್ದೆ ತಿದ್ದುಪಡಿಯನ್ನು ಅಂಗೀಕರಿಸಿದ ನಂತರ, ಬೆಂಗಳೂರಿನ ಉದ್ಯಾನವನಗಳು ಹೊಸ ರಾಜಕೀಯ ಮತ್ತು ಪರಿಸರ ವಿವಾದದ...

ನೇಪಾಳ–ಟಿಬೆಟ್ ಭೀಕರ ಪ್ರವಾಹ: ನೇಪಾಳದಲ್ಲಿ 734 ಸಾವು, 2,498 ಮಂದಿ ನಾಪತ್ತೆ; ಒಟ್ಟು ಸಾವಿನ ಸಂಖ್ಯೆ 750ಕ್ಕೆ ಏರಿಕೆ!

ನೇಪಾಳ–ಚೀನಾ ಗಡಿ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಮತ್ತು ಅವಶೇಷ ಪ್ರವಾಹದಲ್ಲಿ ನೇಪಾಳದಲ್ಲಿ ಇದುವರೆಗೆ 734 ಮಂದಿ ಮೃತಪಟ್ಟಿದ್ದು, 2,498 ಮಂದಿ ನಾಪತ್ತೆಯಾಗಿದ್ದಾರೆ. ಚೀನಾದ ಟಿಬೆಟ್ ಪ್ರದೇಶದಲ್ಲಿ 16 ಮಂದಿ...

“ಇಂತಹ ಸೌಹಾರ್ದತೆಯ ಮಾತುಗಳನ್ನು ಅಮೆರಿಕಾದಲ್ಲಲ್ಲ, ಭಾರತಕ್ಕೆ ಬಂದು ಇಲ್ಲಿನ ಜನರಿಗೆ ಹೇಳಿ!” – ಭಾಗವತ್‌ಗೆ ವಿರೋಧ ಪಕ್ಷಗಳ ಸವಾಲು

ನ್ಯೂಯಾರ್ಕ್/ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನೀಡಿರುವ ಸೌಹಾರ್ದತೆಯ ಹೇಳಿಕೆ ಈಗ ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿದೇಶಿ ಮಣ್ಣಿನಲ್ಲಿ ಮುಸ್ಲಿಂ ಸಮುದಾಯದ ಪರವಾಗಿ...

ಸ್ವದೇಶದಲ್ಲಿ ಹಿಂದೂ ರಾಷ್ಟ್ರ, ವಿದೇಶದಲ್ಲಿ ಒಳಗೊಳ್ಳುವಿಕೆ ಮಂತ್ರ : ಆರ್‌ಎಸ್‌ಎಸ್‌ ದ್ವಂದ್ವ ನಿಲುವು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

"ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ" ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿದಲ್ಲಿ ನೀಡಿರುವ ಹೇಳಿಕೆಯ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ...

ಮಹಾರಾಷ್ಟ್ರ | ಬುಡಕಟ್ಟು ವಿದ್ಯಾರ್ಥಿಗಳ ಹೋರಾಟಕ್ಕೆ ಜಯ : ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಸರ್ಕಾರ

ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಆದ್ಯತೆ ಹಾಗೂ ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ...

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...