HomeಮುಖಪುಟFilm Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

- Advertisement -
- Advertisement -

“ಆತ್ಮಸಾಕ್ಷಿಯ ಸಂಗತಿಯಲ್ಲಿ ಬಹುಮತ ಅಥವಾ ಬಹುಸಂಖ್ಯಾತದ ಕಾನೂನಿಗೆ ಜಾಗವಿಲ್ಲ” ಎಂದಿದ್ದರು ಮಹಾತ್ಮ ಗಾಂಧೀಜಿ. ಇಂದಿನ ರಾಜಕೀಯ, ಸಾಮಾಜಿಕ ವಾತಾವರಣವನ್ನು ನೋಡಿದರೆ ಗಾಂಧೀಜಿಯವರ ಮಾತನ್ನು ಮತ್ತೆ ಮತ್ತೆ ಮನನ ಮಾಡಬೇಕಾದ ತುರ್ತು ಸೃಷ್ಟಿಯಾಗಿದೆ.

ವೈಚಾರಿಕತೆ, ವಿಮರ್ಶಾ ದೃಷ್ಟಿಗಿಂತ ಭಾವನಾತ್ಮಕತೆಯೇ ಮುಖ್ಯವಾದಾಗ ಮೋಸ ಮಾಡುವವರು ಹೆಚ್ಚಾಗುತ್ತಾರೆ. ವಿದ್ಯಮಾನವೊಂದರ ಒಳಸುರಳಿಯನ್ನು ಊಹಿಸುವಲ್ಲಿ ವಿಫಲವಾದ ಜನತೆಯನ್ನು ಒಂದು ವ್ಯವಸ್ಥೆ ಸುಲಭವಾಗಿ ಯಾಮಾರಿಸುತ್ತದೆ. ಹೀಗಾಗಿ ಸದಾ ಎಚ್ಚರದ ಕಣ್ಣುಗಳನ್ನು ಇಟ್ಟುಕೊಂಡಿರಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಯಾರು, ಯಾವುದನ್ನು, ಯಾವ ಉದ್ದೇಶಕ್ಕಾಗಿ ಹೇಳುತ್ತಿದ್ದಾರೆಂದು ತರ್ಕಿಸಿ ನೋಡಲೇಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮುಂದಿನ ವರ್ಷ ಕರ್ನಾಟಕದಲ್ಲಿ ಚುನಾವಣೆ ಎದುರಾಗಲಿದೆ. ಇದರ ಪೂರ್ವ ತಯಾರಿಯಾಗಿ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ. ಮತೀಯ ಗೂಂಡಾಗಿರಿಯ ಸಮರ್ಥನೆಯಿಂದ ಹಿಡಿದು ನಿನ್ನೆ ಮೊನ್ನೆಯ  ಹಿಜಾಬ್‌ ವಿವಾದ, ಭಿನ್ನ ಮತದವರ ವ್ಯಾಪಾರಕ್ಕೆ ಅಡ್ಡಿ, ಹಲಾಲ್‌, ಜಟ್ಕಾ ಕಟ್‌ ತನಕವೂ ಕೋಮು ಭಾವನೆ, ಕೋಮು ಪ್ರಚೋದನೆ, ಅಸಹಿಷ್ಣುತೆ ರಾಚಿದೆ. ದೃಶ್ಯಮಾಧ್ಯಮಗಳಿಗೆ ಇವೆಲ್ಲವೂ ಟಿಆರ್‌ಪಿಯ ಸರಕಾಗಿವೆ.

“ಮಾಧ್ಯಮ ಹೇಳಿದ್ದು ನಿಜವೋ ಅಥವಾ ನಿಜವನ್ನು ಮಾಧ್ಯಮಗಳು ಹೇಳುತ್ತಿವೆಯೋ?” ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. “ಮಾಧ್ಯಮದಲ್ಲಿ ಬಂದ ಮಾತ್ರಕ್ಕೆ ಸತ್ಯ ಸುಳ್ಳಾಗುವುದಿಲ್ಲ, ಸುಳ್ಳು ಸತ್ಯವಾಗುವುದಿಲ್ಲ. ಸತ್ಯವೇ ಎಂದಿಗೂ ಗೆಲ್ಲುತ್ತದೆ” ಎಂಬ ಆಶಾವಾದ ದೊಡ್ಡದು. ನೂರು ಜನ ಏನೇ ಹೇಳಿದರೂ ಆತ್ಮಸಾಕ್ಷಿಗೆ ವಿರುದ್ಧವಾದದ್ದು ಸುಳ್ಳಾಗಿಯೇ ಇರುತ್ತದೆ ಅಲ್ಲವೆ?

ಇದನ್ನೂ ಓದಿರಿ: ಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದ. ಪ್ರಕರಣ ತೀವ್ರ ಸ್ವರೂಪ ಪಡೆಯಿತು. ಹರ್ಷ ಕೊಲೆಯಾಗಿದ್ದು ಏತಕ್ಕೆ? ಇದರ ಹಿಂದೆ ಯಾರ್‍ಯಾರು ಇದ್ದಾರೆ? ಇದು ವೈಯಕ್ತಿಕ ಕಾರಣಕ್ಕೆ ಆದ ಕೊಲೆಯೋ, ಕೋಮು ಪ್ರಚೋದಿತ ಕೊಲೆಯೋ? ಇತ್ಯಾದಿಗಳನ್ನು ವಿಮರ್ಶಿಸುವ ತಾಳ್ಮೆಯನ್ನು ಯಾರೂ ತೋರಲಿಲ್ಲ. ಶವದ ಮೆರವಣಿಗೆ ಮಾಡಿ, ಮುಸ್ಲಿಮರ ಮನೆಗಳಿಗೆ, ಮದ್ರಾಸಗಳಿಗೆ ಕಲ್ಲು ಎಸೆಯಲಾಯಿತು. ರಾಜಕಾರಣಿಗಳು ಮೆರವಣಿಗೆಯ ಮುಂದಾಳತ್ವ ವಹಿಸಿದರು. ಅಶಾಂತಿಯ ವಾತಾವರಣವನ್ನು ನೋಡುತ್ತಾ ಪೊಲೀಸರು ಕೈ ಚೆಲ್ಲಿ ಕುಳಿತ್ತಿದ್ದರು. ತನಿಖೆ ನಡೆದು ವಿಷಯ ಹೊರಬರುವ ಮುನ್ನವೇ ತೀರ್ಪು ನೀಡಿಯಾಗಿತ್ತು. ರಾಜ್ಯದಲ್ಲಿ ಇನ್ಯಾವುದೇ ಸಮಸ್ಯೆ ಇಲ್ಲವೆಂಬಂತೆ ಮಾಧ್ಯಮಗಳು ದಿನಪೂರ್ತಿ ಇದನ್ನೇ ವರದಿ ಮಾಡಿದವು. ಜನಸಮೂಹ ಕೂಡ ಇದರ ಸುತ್ತಲೇ ಗಿರಕಿ ಹಾಕಿತು.

‘ಜನಗಣಮನ’ ಸಿನಿಮಾದ ಒಂದು ದೃಶ್ಯ

ಸಮೂಹ ಸನ್ನಿಯ ವಿಚಾರವಾಗಿ ಚರ್ಚಿಸುವಾಗ ತೆಲಂಗಾಣದಲ್ಲಾದ ಎನ್‌ಕೌಂಟರ್‌ ಪ್ರಕರಣ ಗಮನಿಸಲೇಬೇಕು. ಕನ್ನಡಿಗರೇ ಆದರೆ ವಿಶ್ವನಾಥ್‌ ಸಜ್ಜನರ್‌ ಸೈಬರಾಬಾದ್‌ ಪೊಲೀಸ್ ಆಯುಕ್ತರಾಗಿದ್ದರು. ಪಶುವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿ ಕೊಲೆ ಗೈದಿದ್ದಾರೆಂದು 2019ರಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ಘಟನೆಯ ಪುನರ್‌ ಸೃಷ್ಟಿಯ ಸಂದರ್ಭದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರೆಂದು ನಾಲ್ವರನ್ನೂ ಎನ್‌ಕೌಂಟರ್‌ ಮಾಡಲಾಗಿತ್ತು. “ಸಜ್ಜನರಿಂದ ದುರ್ಜನರ ಸಂಹಾರ”- ಎಂದೆಲ್ಲ ಮಾಧ್ಯಮಗಳು ವರ್ಣಿಸಿದವು. ನ್ಯಾಯದಾನ ವ್ಯವಸ್ಥೆಯ ವಿಳಂಬದಿಂದಾಗಿ ಜನರು ಈ ಎನ್‌ಕೌಂಟರ್‌‌ ಮೆಚ್ಚಿಕೊಂಡಿದ್ದಾರೆಂಬ ಚರ್ಚೆಯಾಯಿತು. ಆದರೆ ಅನೇಕ ಪ್ರಜ್ಞಾವಂತರು ಪೊಲೀಸರ ವರ್ತನೆಯನ್ನು ಖಂಡಿಸಿದರು. ಕೊಲ್ಲುವ ಅಧಿಕಾರವನ್ನು ಈ ಪೊಲೀಸರಿಗೆ ಕೊಟ್ಟಿದ್ದು ಯಾರು? ಎನ್‌ಕೌಂಟರ್‌ ಆದವರು ನಿಜವಾಗಿಯೂ ತಪ್ಪಿತಸ್ಥರೇ? ಆರೋಪ ಸಾಬೀತಾಗದ ಹೊರತು ಯಾರೂ ಅಪರಾಧಿಗಳಲ್ಲ ಎಂಬ ನ್ಯಾಯಾಂಗದ ಉದಾತ್ತ ಚಿಂತನೆಯನ್ನು ನಾವು ಮರೆತೆವೆ? ಈ ಎನ್‌ಕೌಂಟರ್‌ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಸರಿಯೇ? ಅತ್ಯಾಚಾರ ಮಾಡಿದವರನ್ನೆಲ್ಲ ಶೂಟ್ ಮಾಡಬೇಕು ಎನ್ನುವುದಾದರೆ ಘಟನಾನುಘಟಿಗಳ ತಲೆಗಳೇಕೆ ಉರುಳುವುದಿಲ್ಲ?- ಇತ್ಯಾದಿ ಪ್ರಶ್ನೆಗಳು ಮುನ್ನೆಲೆಗೆ ಬಂದವು.

ಹಿಂದುತ್ವ, ದೇಶಭಕ್ತಿ, ಸೈನ್ಯ, ಹಿಜಾಬ್‌, ವ್ಯಾಪಾರ ಎಲ್ಲವೂ ಈಗ ಸೆನ್ಸೇಷನ್‌. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿತವಾದದ್ದೇ ದೊಡ್ಡ ಸುದ್ದಿಯಾಗಿ ಉಳಿದೆಲ್ಲ ನಿತ್ಯದ ಸಮಸ್ಯೆಗಳು ಗೌಣವಾಗುತ್ತವೆ. ಜನಸಾಮಾನ್ಯರ ನಿತ್ಯದ ಸಂಕಷ್ಟದೊಂದಿಗೆ ಪ್ರಭುತ್ವ ಚೆಲ್ಲಾಟವಾಡುತ್ತಿದ್ದರೂ ಅವುಗಳನ್ನು ಮುಚ್ಚಿಹಾಕಲು ಒಂದು ಕೋಮು ಸಂಘರ್ಷ ಸಾಕೆನ್ನುವ ಮಟ್ಟಕ್ಕೆ ವ್ಯವಸ್ಥೆ ಬಂದು ನಿಂತಿರುವಂತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಕೆಲವು ಮತೀಯ ಶಕ್ತಿಗಳು ಬಹುಸಂಖ್ಯಾತವಾದದ ಅಸ್ತ್ರವಿಡಿದು ಸೃಷ್ಟಿಸುತ್ತಿರುವ ಗಲಾಟೆಗಳನ್ನು ನೋಡಿದಾಗ ಗಾಂಧಿಯ ಮಾತು ನೆನಪಾಗಲೇಬೇಕು- “ಆತ್ಮಸಾಕ್ಷಿಯ ಸಂಗತಿಯಲ್ಲಿ ಬಹುಮತದ ಕಾನೂನಿಗೆ ಬೆಲೆ ಇಲ್ಲ”.

ಇದನ್ನೂ ಓದಿರಿ: ಜೈ ಭೀಮ್‌ ವಿವಾದ: ಸೂರ್ಯ, ಜ್ಞಾನವೇಲ್‌, ಜ್ಯೋತಿಕಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರ್ಟ್ ಆದೇಶ

ಇತ್ತೀಚೆಗೆ ಬಿಡುಗಡೆಯಾದ ‘ಜನ ಗಣ ಮನ’ (ಮಲಯಾಳಂ) ಸಿನಿಮಾ ಜನರ ಆತ್ಮಸಾಕ್ಷಿಯನ್ನು, ಸಮೂಹ ಸನ್ನಿಯ ಹಿಂದಿರುವ ತಪ್ಪು ಹೆಜ್ಜೆಗಳನ್ನು ದಟ್ಟವಾಗಿ ತೆರೆದಿಡುವ ಪ್ರಯತ್ನ ಮಾಡಿದೆ. ಮನರಂಜನಾ ಪರಿಭಾಷೆಗಳನ್ನು ಸಶಕ್ತಿಯವಾಗಿ ಬಳಸಿಕೊಂಡೇ ದೇಶದ ಹಲವು ಸಮಸ್ಯೆಗಳಿಗೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಹತ್ತಾರು ಘಟನೆಗಳನ್ನು ಕಥೆಯೊಳಗೆ ತಂದಿದ್ದರೂ ಯಾವುವೂ ಬಿಡಿಬಿಡಿ ಸಂಗತಿಗಳಾಗಿ ಉಳಿಯುವುದಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಶ್ವವಿದ್ಯಾನಿಲಯಗಳಿಗೆ ಮತೀಯವಾದಿಗಳ ಪ್ರವೇಶ, ಕೇಸರಿ ರಾಜಕಾರಣ, ಶಿಕ್ಷಣ ಮಾಫಿಯಾ, ಶೈಕ್ಷಣಿಕ ವ್ಯವಸ್ಥೆಯೊಳಗೆ ತುಂಬಿದ ತರತಮ, ಪ್ರಜಾತಾಂತ್ರಿಕವಾಗಿ ಮುನ್ನುಗ್ಗುತ್ತಿರುವ ವಿದ್ಯಾರ್ಥಿಗಳಿಗೆ ದೇಶದ್ರೋಹದ ಪಟ್ಟ, ನ್ಯಾಯಾಧೀಶರಂತೆ ವರ್ತಿಸುವ ಮಾಧ್ಯಮಗಳು, ಬಹುಮತದ ಸನ್ನಿಯೊಳಗೆ ಕಳೆದು ಹೋದ ಸೂಕ್ಷ್ಮ ಪ್ರಜ್ಞೆ, ಭಾವನಾತ್ಮಾಕ ವಿಷಯಗಳನ್ನು ಎಳೆತಂದು ನಿಜ ಸಮಸ್ಯೆಗಳನ್ನು ಮರೆಮಾಚುವ ರಾಜಕಾರಣಿಗಳು, ಅಧಿಕಾರಶಾಹಿಯ ದರ್ಪ ಹಾಗೂ ಸುಳ್ಳುಗಳು, ಪ್ರಭತ್ವದ ಸುಳ್ಳುಗಳನ್ನು ಪ್ರಶ್ನಿಸಿದ ಪ್ರಾಮಾಣಿಕ ಅಧಿಕಾರಿಗಳಿಗೆ ಸಿಗುವ ಶಿಕ್ಷೆ- ಹೀಗೆ ಹಲವಾರು ಸಂಗತಿಗಳನ್ನು ಒಂದು ಕೋನದೊಳಗೆ ತರುವ ಪ್ರಯತ್ನವನ್ನು ನಿರ್ದೇಶಕ ಡಿಜೊ ಜೋಸ್‌ ಆಂಟೊನಿ ಸಶಕ್ತವಾಗಿ ಮಾಡಿದ್ದಾರೆ.

ಜನಗಣಮನ ಸಿನಿಮಾದ ಒಂದು ದೃಶ್ಯ

ಈ ಘಟನೆಯನ್ನು ಎಲ್ಲೋ ನೋಡಿದಂತಿದೆಯಲ್ಲ ಅನಿಸುತ್ತಿರುವಾಗಲೇ, ಮತ್ತೊಂದು ದೃಶ್ಯ ನಮ್ಮ ಮುಂದೆ ಬರುತ್ತದೆ. ಇದನ್ನೂ ಎಲ್ಲೋ ನೋಡಿದಂತಿದೆಯಲ್ಲ ಅನಿಸುತ್ತದೆ. ಆದರೆ ಪ್ರತ್ಯೇಕ ಘಟನೆಗಳನ್ನು ಒಂದಕ್ಕೊಂದು ಪೋಣಿಸಿರುವ ರೀತಿ ಮೆಚ್ಚುಗೆ ಪಡೆಯುತ್ತದೆ. ರಾಜಕಾರಣದ ವೃತ್ತದೊಳಗೆ ಎಲ್ಲ ಬಿಂದುಗಳು ಸೇರಿಕೊಂಡಿವೆ. ಶರೀನ್‌ ಮೊಹಮ್ಮದ್‌ ಸೊಗಸಾಗಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಪ್ರಸ್ತಾಪಿಸಲಾಗುವ ಸಂಗತಿಗಳು ಅತ್ಯಂತ ಗಂಭೀರವಾದರೂ, ‘ಕಲಾತ್ಮಕ ಸಿನಿಮಾ’ ಎಂಬ ಕ್ಯಾಟಗರಿಗೇನೂ ಒಳಪಡುವುದಿಲ್ಲ. ‘ಬ್ರಿಡ್ಜ್‌ ಸಿನಿಮಾ’ ಎಂದರೆ ತಪ್ಪಾಗಲಾರದು. ಚಿಂತನೆ ಹಾಗೂ ರಂಜನೆ ಹದವಾಗಿ ಬೆರೆತಿದೆ. ಅರ್ಥಪೂರ್ಣ ಹಾಗೂ ಪಂಚಿಂಗ್‌ ಎನ್ನಬಹುದಾದ ಸಂಭಾಷಣೆಯನ್ನು ಕಟ್ಟಿಕೊಡಲಾಗಿದೆ. ಭಾವುಕತೆ ಹಾಗೂ ವಿಚಾರವಂತಿಕೆಯನ್ನು ಸಮ ತೂಕದಲ್ಲಿ ಬೆರೆಸಲಾಗಿದೆ. ಜೇಕ್ಸ್‌ ಬೆಜಾಯ್‌ ಅವರ ಹಿನ್ನಲೆ ಸಂಗೀತವಂತೂ ಮೈ ನವಿರೇಳಿಸುವಂತಿದೆ.

ಇದನ್ನೂ ಓದಿರಿ: ದಮನಿತರ ಭೂಮಿ ಹಕ್ಕಿನ ಕಥೆ ‘ಪಡ’: ತಮಿಳು ಚಿತ್ರರಂಗದ ಹಾದಿಯಲ್ಲಿ ‘ಮಲಯಾಳಂ’ ಸಿನಿಮಾ

ಮತ್ತೊಂದು ಗಮನಿಸಲೇಬೇಕಾದ ಅಂಶ- ಇಡೀ ಸಿನಿಮಾ ಕಥೆಯನ್ನು ಕರ್ನಾಟಕ ರಾಜ್ಯವನ್ನು ಕೇಂದ್ರೀಕರಿಸಿ ಎಣೆಯಲಾಗಿದೆ. ದಕ್ಷಿಣ ಭಾರತದ ಬಹುದೊಡ್ಡ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದ್ದು, ಕೋಮು ಸಂಘರ್ಷ ಒಳಗೊಂಡ ಕಥೆಯನ್ನು ಉದ್ದೇಶಪೂರ್ವಕವಾಗಿಯೇ ಕರ್ನಾಟಕದ ಮೂಲಕ ಹೇಳಲಾಗಿದೆಯೇನೋ? ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳು, ಮತೀಯ ಸಂಘರ್ಷಗಳು ಹಾಗೂ ಜಮ ಗಣ ಮನ ಸಿನಿಮಾದ ಕಥೆಗೂ ಕಾಕತಾಳೀಯವೆಂಬಂತೆ ಹೋಲಿಕೆ ಕಾಣುತ್ತದೆ. ಆದರೆ ‘ಕಾಲ್ಪನಿಕ ಕಥೆ’ ಎಂಬ Anticipatory bail ಕೂಡ ಇದೆ.

ಟೀಸರ್‌ ಹಾಗೂ ಟ್ರೈಲರ್‌ನಲ್ಲಿ ತೋರಿಸಿದ ಕೆಲವು ದೃಶ್ಯಗಳನ್ನು ಸಿನಿಮಾದಲ್ಲಿ ತೆಗೆದು ಹಾಕಲಾಗಿದೆ. ಸಿನಿಮಾದ ಆರಂಭದಲ್ಲಿ ತೋರಿಸುವ ಕೆಲವು ದೃಶ್ಯಗಳ ಹಿನ್ನೆಲೆಯನ್ನು ಜೋಡಿಸುವುದಕ್ಕಾಗಿ ಕೊನೆಯ ಕೆಲವು ನಿಮಿಷಗಳನ್ನು ಮೀಸಲಿಡಲಾಗಿದೆ. ದ್ವಿತೀಯಾರ್ಧದ ಬಹುತೇಕ ಕಥೆ ಕೋರ್ಟ್ ಹಾಲ್‌ನೊಳಗೆ ನಡೆಯುತ್ತದೆ. ನ್ಯಾಯಾಧೀಶರ ಪಾತ್ರ ಪೂರ್ವಗ್ರಹ ಪೀಡಿತವಾಗಿದೆ ಏನೋ ಅನಿಸುತ್ತಿರುವಾಗಲೇ ನ್ಯಾಯಪ್ರಜ್ಞೆಯ ಹಾದಿಗೆ ಎಳೆದು ನಿಲ್ಲಿಸಲಾಗಿದೆ. ಕಥೆಯ ಸ್ವಾರಸ್ಯವನ್ನು ಕಾಪಾಡಲು ಬಹುಶಃ ಪಾತ್ರದ ಏರಿಳಿತ ಮಾಡಿದ್ದಾರೆ. ಕಥೆ ಕರ್ನಾಟಕ ಕೇಂದ್ರಿತವಾಗಿ ನಡೆಯುವುದರಿಂದ ಮಲಯಾಳಂ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್‌, ಹಿಂದಿ ಭಾಷೆಗಳನ್ನು ಅಲ್ಲಲ್ಲಿ ಬಳಸಲಾಗಿದೆ. ಕನ್ನಡ ವಾಕ್ಯಗಳ ಉಚ್ಚರಣೆಯಲ್ಲಿ ಮಲಯಾಳಂ ಪ್ರಭಾವ ಕಂಡು ಬರುವುದು ಆಭಾಸವೆನಿಸುತ್ತದೆ.

ಅಕ್ವೊಕೇಟ್‌ ಅರವಿಂದ ಸ್ವಾಮಿನಾಥನ್‌ ಪಾತ್ರದಲ್ಲಿ ಪೃಥ್ವಿರಾಜ್‌ ಸುಕುಮಾರನ್‌, ಎಸಿಪಿ ಸಜ್ಜನ್‌ ಕುಮಾರ್ ಪಾತ್ರದಲ್ಲಿ ಸೂರಜ್‌ ವೆಂಜರಮೂಡು, ಪ್ರೊ.ಸಬಾ ಮರಿಯಮ್‌ ಪಾತ್ರದಲ್ಲಿ ಮಮತಾ ಮೋಹನ್‌ದಾಸ್‌, ಕರ್ನಾಟಕದ ಹೋಮ್‌ ಮಿನಿಸ್ಟರ್‌ ಆಗಿ ಜಿ.ಎಂ. ಸುಂದರ್‌, ವಕೀಲ ರಘುರಾಮ್ ಅಯ್ಯರ್‌ ಆಗಿ ಶಮ್ಮಿ ತಿಲಕನ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಸೂರಜ್‌ ಹಾಗೂ ಪೃಥ್ವಿಯವರು ‘ಡ್ರೈವಿಂಗ್ ಲೈಸೆನ್ಸ್‌‌’ ಸಿನಿಮಾ ಬಳಿಕ ಮತ್ತೊಮ್ಮೆ ತಮ್ಮ ಕಾಂಬೊವನ್ನು ಮುಂದುವರಿಸಿದ್ದಾರೆ. ಪೃಥ್ವಿರಾಜ್‌ ಪ್ರೊಡಕ್ಷನ್‌ನಲ್ಲಿ ಜನಗಣಮನ ನಿರ್ಮಾಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ರದ್ದು: ಹೈಕೋರ್ಟ್‌ನಿಂದ ಮರುನೇಮಕಕ್ಕೆ ಆದೇಶ

ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತದ ಆರೋಪದಡಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಅಮಾನತು ಆದೇಶವನ್ನು ಪ್ರಶ್ನಿಸಿ ಶಿವಶಂಕರಪ್ಪ...

ಗೋಡ್ಸೆ ಹೊಗಳಿಕೆ, ದಲಿತದ್ವೇಷ, ಸ್ತ್ರೀದ್ವೇಷ ಮತ್ತು ಮುಸ್ಲಿಂ ದ್ವೇಷ: ತೀವ್ರ ಪರಿಶೀಲನೆಯಲ್ಲಿರುವ ಬಿಜೆಪಿಯ ಹೊಸ ಸಾಮಾಜಿಕ ಮಾಧ್ಯಮ ತಂಡದ ವಿರುದ್ಧ ಜನಾಕ್ರೋಶ

ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ಹೊಗಳಿದ ಹಳೆಯ ಪೋಸ್ಟ್‌ಗಳು, ಇಸ್ಲಾಮೋಫೋಬಿಕ್ ಹಾಗೂ ಜನಾಂಗೀಯ ಹತ್ಯೆಯ ಹೇಳಿಕೆಗಳು, ದಲಿತ ಹಾಗೂ ಮೀಸಲಾತಿ ವಿರೋಧಿ ಮಾತುಗಳು ಮತ್ತು ಮಹಿಳೆಯರ ವಿರುದ್ಧ ಬಳಸಿರುವ ಸ್ತ್ರೀದ್ವೇಷದ ಭಾಷೆಯ ಕಾರಣಕ್ಕಾಗಿ...

‘ಮಹಾತ್ಮ ಗಾಂಧಿ – ವಾಜಪೇಯಿ ಹಾಡಿದ್ದನ್ನೇ ನಾವು ಹಾಡಿದ್ದೇವೆ..’; ವಂದೇ ಮಾತರಂ ವಿವಾದದ ಕುರಿತು ಖರ್ಗೆ ಸ್ಪಷ್ಟನೆ

ಪಕ್ಷದ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಹಾಡಿದ ಬಗ್ಗೆ ನಡೆಯುತ್ತಿರುವ ವಿವಾದದ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್...

ದೆಹಲಿ ಪೊಲೀಸರಿಂದ AAP ಶಾಸಕನ ಅಪಹರಣ?: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ತುರ್ತು ವಿಚಾರಣೆಗೆ ಅಸ್ತು!

AAP ಶಾಸಕ ಕುಲ್ದೀಪ್ ಕುಮಾರ್ ಅವರನ್ನು ಅವರ ಮನೆಯಿಂದ ಅಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ (Habeas Corpus) ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ಒಪ್ಪಿಗೆ...

ಅದಾನಿ-ಎಲ್‌ಐಸಿ ತನಿಖಾ ವರದಿ: ಪತ್ರಕರ್ತ ರವಿ ನಾಯರ್ ಮನೆಗಳ ಮೇಲೆ ಗುಜರಾತ್ ಪೊಲೀಸರ ದಾಳಿ, ಡಿಜಿಟಲ್ ಉಪಕರಣಗಳ ವಶ

ಅದಾನಿ ಸಮೂಹ ಹಾಗೂ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ) ನಡುವಿನ ಹೂಡಿಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ತನಿಖಾ ವರದಿ ಪ್ರಕಟಿಸಿದ್ದ ಸ್ವತಂತ್ರ ಪತ್ರಕರ್ತ ರವಿ ನಾಯರ್ ಅವರ ದೆಹಲಿ ಮತ್ತು ಕೇರಳದಲ್ಲಿರುವ...

ಗುಜರಾತ್ | ನಕಲಿ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಿ ಸರ್ಕಾರದ ಅನುದಾನ ಲೂಟಿ; ಬೃಹತ್ ಹಗರಣ ಬಯಲು

ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಹೆಸರಿನಲ್ಲಿ 6 ನಕಲಿ ಸರ್ಕಾರಿ ಕಚೇರಿಗಳನ್ನು ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಸರ್ಕಾರಿ ಅನುದಾನವನ್ನು ಲೂಟಿ ಮಾಡಿರುವುದು ಪತ್ತೆಯಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ...

ಎನ್‌ಎಎಲ್‌ಎಸ್‌ಎಆರ್‌ ಘಟಿಕೋತ್ಸವದ ಆಹ್ವಾನವನ್ನು ನಾನು ಸ್ವೀಕರಿಸಿರಲೇ ಇಲ್ಲ: ಸಿಜೆಐ ಸೂರ್ಯ ಕಾಂತ್

ಎನ್‌ಎಎಲ್‌ಎಸ್‌ಎಆರ್‌ ಕಾನೂನು ವಿಶ್ವವಿದ್ಯಾಲಯದ ಮುಂಬರುವ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ನಾನು ಎಂದಿಗೂ ಒಪ್ಪಿಗೆ ನೀಡಿರಲಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹೇಳಿದ್ದಾರೆ. ವಿದ್ಯಾರ್ಥಿಗಳ ವಿರೋಧದ ನಡುವೆಯೂ...

ಎರಡು ವರ್ಷಗಳ ವಿಳಂಬದ ನಂತರ ಹಣಕಾಸು ವರದಿ ಬಿಡುಗಡೆ ಮಾಡಿದ ಪಿಎಂ ಕೇರ್ಸ್

ಎರಡು ವರ್ಷಗಳ ವಿಳಂಬದ ನಂತರ ಪಿಎಂ ಕೇರ್ಸ್ ನಿಧಿಯು ತನ್ನ 2023-24 ಮತ್ತು 2024-25ರ ಹಣಕಾಸು ವರ್ಷಗಳ ಆಡಿಟ್ ವರದಿಗಳನ್ನು (ಲೆಕ್ಕಪರಿಶೋಧನಾ ವರದಿ) ಆಗಸ್ಟ್ 17ರಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಪಿಎಂ...

ಭಾರತ ಚುನಾವಣಾ ವ್ಯವಸ್ಥೆಯನ್ನು ಹೊಗಳಿದ ಟ್ರಂಪ್: ಜ್ಞಾನೇಶ್ ಕುಮಾರ್ ಜೊತೆಗೆ EVMಅನ್ನು ತೆಗೆದುಕೊಂಡು ಹೋಗಿ ಎಂದು ಕಾಲೆಳೆದ ಕಾಂಗ್ರೆಸ್

ಭಾರತದ ಚುನಾವಣಾ ವ್ಯವಸ್ಥೆ ಹಾಗೂ ಮತದಾರರ ಫೋಟೋ ಗುರುತಿನ ಚೀಟಿ (Voter ID) ಕಡ್ಡಾಯ ನಿಯಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ, ಟ್ರಂಪ್ ಅವರ ಈ ಹೇಳಿಕೆಯನ್ನು ಇಟ್ಟುಕೊಂಡು...

ಬಿಜೆಪಿ ವಿರುದ್ಧ ಹೋರಾಟಕ್ಕೆ ಕರೆ ನೀಡಿದ ತ್ರಿಪುರ ಮಾಜಿ ಸಿಎಂ ಮಾಣಿಕ್ ಸರ್ಕಾರ್ ವಿರುದ್ಧ ಪ್ರಕರಣ ದಾಖಲು: ಬಿಜೆಪಿಯ ಕೀಳು ಮಟ್ಟದ ರಾಜಕೀಯ ಎಂದ ಸಿಪಿಐ(ಎಂ)

ತ್ರಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ಪಾಲಿಟ್‌ಬ್ಯೂರೋ ಹಿರಿಯ ಸದಸ್ಯ ಮಾಣಿಕ್ ಸರ್ಕಾರ್ ಅವರು ಇತ್ತೀಚೆಗೆ ಸಾರ್ವಜನಿಕ ರ್ಯಾಲಿಯೊಂದರಲ್ಲಿ ನೀಡಿದ್ದ ಹೇಳಿಕೆಯನ್ನು ಆಧರಿಸಿ, ಅವರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಣಿ...