Homeಎಲೆಮರೆಜೀತಕ್ಕಿದ್ದ ಜೇನುಕುರುಬರ ಸೋಮಣ್ಣರ ಪಾರಂಪರಿಕ ಜ್ಞಾನದ ಕಣಜ ಕಂಡರೆ ಬೆರಗಾಗುತ್ತೀರಿ!

ಜೀತಕ್ಕಿದ್ದ ಜೇನುಕುರುಬರ ಸೋಮಣ್ಣರ ಪಾರಂಪರಿಕ ಜ್ಞಾನದ ಕಣಜ ಕಂಡರೆ ಬೆರಗಾಗುತ್ತೀರಿ!

ಸೋಮಣ್ಣನಿಗೆ 2016 ರಲ್ಲಿ ಮೊದಲಪಟ್ಟಿಯಲ್ಲಿ ರಾಜ್ಯೋತ್ಸವ ಪ್ರಶಸ್ರಿ ಘೋಷಣೆಯಾಗಿ, ಎರಡನೆ ಪಟ್ಟಿಯಲ್ಲಿ ಕೈಬಿಡಲಾಗಿತ್ತು. ಹೀಗಾಗಿ ಜನಪರ ಚಿಂತಕರು ಸೋಮಣ್ಣನ ಹಾಡಿಗೆ ಹೋಗಿ `ಜನರಾಜ್ಯೋತ್ಸವ’ಪ್ರಶಸ್ತಿ ಪ್ರದಾನ ಮಾಡಿದ್ದರು.

- Advertisement -
- Advertisement -

ಎಲೆಮರೆ – 9

ಅರುಣ್ ಜೋಳದಕೂಡ್ಲಿಗಿ

ಹೆಗ್ಗಡದೇವನಕೋಟೆ ಸಮೀಪದ ಮೊತ್ತಹಾಡಿ ಜೇನುಕುರುಬರ ಹಾಡಿ. ಅಲ್ಲಿ ತನ್ನದೇ ಸಮುದಾಯಕ್ಕಾಗಿ ಹೋರಾಟ ರೂಪಿಸಿದ, ಬುಡಕಟ್ಟು ಪರಂಪರೆಯ ಅಪಾರ ಜ್ಞಾನ ಹೊಂದಿದ ಸೋಮಣ್ಣ ಇಂದಿಗೂ ತನ್ನ ಸಮುದಾಯದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಜೇನುಕುರುಬರ ಸೋಮಣ್ಣನ ಬದುಕಿನ ಪಯಣ ತ್ರಾಸದಾಯಕವಾದದ್ದು. 1957 ರಲ್ಲಿ ಜನಿಸಿದ ಸೋಮಣ್ಣ ಸಾಂಪ್ರದಾಯಕ ಶಿಕ್ಷಣ ಪಡೆಯದೆ, ಮನೆಯನ್ನು ಮುತ್ತಿದ್ದ ಬಡತನದ ಬೆಂಕಿಯಲ್ಲಿ ಅರಳಿ ಬಂದದ್ದೇ ಒಂದು ಸಾಹಸ. ತಂದೆ ಕುನ್ನಯ್ಯನಿಗಿದ್ದ ಪಾರಂಪರಿಕ ಜ್ಞಾನವನ್ನು ಜತನದಿಂದ ಕಲಿತ ಸೋಮಣ್ಣ ಕಾಡುಬದುಕಿನ ಎಲ್ಲಾ ಬಗೆಯ ತಿಳಿವು, ಅರಿವುಗಳನ್ನು ಪಡೆಯುತ್ತಲೇ ಪಾರಂಪರಿಕ ಜ್ಞಾನದ ಕಣಜವಾದದ್ದೊಂದು ಸಾಹಸದ ಪಯಣ. ಬಡತನದ ಕಾರಣಕ್ಕೆ ಸ್ಥಳೀಯ ಜಮೀನ್ದಾರರಲ್ಲಿ ಜೀತಕ್ಕಿದ್ದ ಸೋಮಣ್ಣ 1976ರಲ್ಲಿ ಜೀತಕಾರ್ಮಿಕ ವ್ಯವಸ್ಥೆ (ನಿಷೇಧ) ಕಾಯ್ದೆ ಜಾರಿಗೆ ಬಂದಾಗ ಇದರಿಂದ ಮುಕ್ತಿ ಪಡೆದರು. ಆಗ ಸೋಮಣ್ಣಗೆ 19 ವರ್ಷ. ಸೋಮಣ್ಣನಿಗೆ ಸಿಕ್ಕ ಈ ಬಗೆಯ ವೈಯಕ್ತಿಕ ಮುಕ್ತಿಯು ಸಮುದಾಯದ ಮುಕ್ತಿಯೆಡೆಗೆ ಸೆಳೆಯಿತು. ತನ್ನ ಒಡನಾಡಿ ಬಂಧುಗಳಾದ ಬುಡಕಟ್ಟು ಸಮುದಾಯದ ಅಸಂಖ್ಯಾತ ಜನ ಸಂಕಷ್ಟದಲ್ಲಿರುವುದು ಅರಿವಿಗೆ ಬಂತು.

1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಾಗ, ತಮ್ಮ ಸುತ್ತಮುತ್ತಲಿನ ನೂರಾರು ಬುಡಕಟ್ಟು ಕಾಲನಿಗಳು ಸ್ಥಳಾಂತರಗೊಂಡು ಅನಾಥಪ್ರಜ್ಞೆಯಲ್ಲಿ ಬದುಕಿದ್ದನ್ನೂ, 1974ರಲ್ಲಿ ಕಬಿನಿ ಅಣೆಕಟ್ಟು ನಿರ್ಮಾಣ ಆರಂಭವಾದಾಗ, ದೊಡ್ಡ ಪ್ರಮಾಣದಲ್ಲಿ ಅರಣ್ಯಭೂಮಿ ನಾಶವಾದದ್ದನ್ನೂ ಸೋಮಣ್ಣ ಸ್ವತಃ ನೋಡಿದ್ದರು. ಇದರಿಂದ ಕೇವಲ ನೈಸರ್ಗಿಕ ಅರಣ್ಯ ಮಾತ್ರ ನಾಶವಾಗುವುದಲ್ಲ; ಬದಲಾಗಿ ಬುಡಕಟ್ಟು ಜನರ ಜೀವನ, ಸಂಸ್ಕೃತಿ ಹಾಗೂ ಜ್ಞಾನವೂ ನಾಶವಾಗುತ್ತದೆ ಎನ್ನುವುದನ್ನು ತನ್ನ ಸಮುದಾಯಕ್ಕೆ ಸೋಮಣ್ಣ ಮನವರಿಕೆ ಮಾಡಿಕೊಡತೊಡಗಿದರು.

ಇಂತಹ ಹಾದಿಯಲ್ಲಿ ಸೋಮಣ್ಣನಿಗೆ ತನ್ನವರಿಗೆ ಭೂಮಿ ಸಿಕ್ಕರೆ ಇನ್ನೊಬ್ಬರ ಆಶ್ರಯವಿಲ್ಲದೆ ಬದುಕುತ್ತಾರೆ ಎಂಬ ಕನಸು ಚಿಗುರೊಡೆಯಿತು. ಈ ಕನಸಿನ ಜಾಡುಹಿಡಿದು ಕಳೆದ ಮೂರ್ನಾಲ್ಕು ದಶಕಗಳಿಂದ ಸೋಮಣ್ಣ ಭೂರಹಿತ ಆದಿವಾಸಿಗಳನ್ನು ಒಗ್ಗೂಡಿಸಿದ್ದಾರೆ. ಅಂತೆಯೇ ಸ್ಥಳೀಯ ಚಳವಳಿಗಳ ಸಂಗಾತಿಗಳ ಜೊತೆಗೂಡಿ ಕೂಡುಹೋರಾಟ ಕಟ್ಟಿದ್ದಾರೆ. ಇದರ ಫಲವಾಗಿ ಕಟ್ಟಿದ ರಾಜ್ಯ ಮೂಲನಿವಾಸಿ ವೇದಿಕೆಯ ಅಧ್ಯಕ್ಷನಾಗಿ ಜನಪರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇಂತಹ ನಿರಂತರ ಸಾಂಘಿಕ ಪ್ರಯತ್ನದಿಂದಾಗಿ ಆದಿವಾಸಿಗಳಿಗೆ ಸರಿಸುಮಾರು ಆರು ಸಾವಿರ ಎಕರೆ ಕೃಷಿ ಭೂಮಿ ಸಿಗುವಂತೆ ಮಾಡಿದ್ದಾರೆ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನಾಗರಹೊಳೆ ಮತ್ತು ಕಾಕನಕೋಟೆ ಅರಣ್ಯ ಪ್ರದೇಶದಿಂದ ಒಕ್ಕಲೆದ್ದ ಆದಿವಾಸಿಗಳನ್ನು ಸೋಮಣ್ಣ ಸಂಘಟಿಸಿ, ಪುನರ್ವಸತಿಗಾಗಿ ಅನೇಕ ಚಳವಳಿಗಳನ್ನು ರೂಪಿಸಿದ್ದಾರೆ. ಹೀಗಾಗಿ ಆದಿವಾಸಿಗಳು ಆತಂಕಕ್ಕೆ ಒಳಗಾದಾಗಲೆಲ್ಲಾ ಅವರುಗಳು ಎದೆಗುಂದಿ ತತ್ತರಿಸಿದಾಗಲೆಲ್ಲಾ ಸೋಮಣ್ಣ ಆದಿವಾಸಿಗಳ ಎಂದೂ ಜತೆಗಾರನಾಗಿ ಶಕ್ತಿ ತುಂಬಿದ್ದಾರೆ.

`ಸೋಮಣ್ಣ ಆದಿವಾಸಿಗಳ ಅಖಂಡ ಪ್ರಜ್ಞೆ, ಹರಿತ ಮುನ್ನೋಟ, ಜಟಿಲ ಮನಸ್ಥಿತಿ ಮತ್ತು ತಪ್ತ ಅಂತರಾಳಗಳನ್ನು ಏಕೀಭವಿಸಿದಂತಿದ್ದಾನೆ. ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಇವರನ್ನು ದಿಕ್ಕಾಪಾಲಾಗಿಸಿವೆ. ಸ್ಥಳೀಯ ಅಧಿಕಾರಸ್ಥ ಸಮುದಾಯಗಳು, ಯಾವ ಒಳನೋಟಗಳು ಇಲ್ಲದ ಸರಕಾರಗಳು, ಎನ್‍ಜಿಓಗಳು ಯಾವೂ ಸೋಮಣ್ಣನ ತಾಯ್ನೆಲವನ್ನು ಆತನಿಗೆ ಉಳಿಸಿಕೊಟ್ಟಿಲ್ಲ’ ಎಂದು ಪ್ರೊ. ಎ.ಎಸ್.ಪ್ರಭಾಕರ್ ಅವರು ಹೇಳುತ್ತಾರೆ.

ಕಾಡುಬದುಕಿನ ಬಗ್ಗೆ ಸೋಮಣ್ಣನ ಮಾತುಗಳನ್ನು ಕೇಳಿಸಿಕೊಂಡರೆ, ಆತ ಆದಿವಾಸಿಗಳ ವಿಷಾದ ಮತ್ತು ಚಿಂತನೆಗಳ ಫಲವಾಗಿ ರೂಪುಗೊಂಡ ಅನುಭಾವಿಯಂತೆ ಕಾಣುತ್ತಾನೆ. ಸರಿಸುಮಾರು ಅರ್ಧ ಶತಮಾನದಿಂದ ಅರಣ್ಯ ಮತ್ತು ಆದಿವಾಸಿಗಳ ಮೇಲೆ ಕಣ್ಣೆದುರು ನಡೆದ ಮತ್ತು ನಡೆಯುತ್ತಲೇ ಇರುವ ‘ನಾಗರಿಕ’ ಜಗತ್ತಿನ ಕ್ರೌರ್ಯವನ್ನು ಆತ ತನ್ನ ಮುಗುಳ್ನಗೆಯಿಂದಲೇ ಎದುರಿಸಿದ್ದಾನೆ. ತನ್ನ ಮೂಲ ನೆಲೆ, ದೈವ, ತನ್ನ ಹಿರೀಕರ ಆತ್ಮಗಳು, ಒಡನಾಡಿದ್ದ ಮರ ಗಿಡ ಹೂವುಗಳು, ಸಹಜೀವನ ನಡೆಸಿದ್ದ ಕಾಡುಪ್ರಾಣಿಗಳು ಇವ್ಯಾವು ಈಗ ಸೋಮಣ್ಣನ ಜೊತೆಗಿಲ್ಲ. ಪ್ರಭುತ್ವ ಈತನನ್ನು ವಂಚಿಸಿದೆ. ದಿಕ್ಕಾಪಾಲಾದ ಆದಿವಾಸಿಗಳು ಕಾಡಂಚಿನ ಪುಟ್ಟ ಜಾಗಗಳಲ್ಲಿ, ನಗರಗಳ ಕೊಳಗೇರಿಗಳಲ್ಲಿ ಬದುಕುತ್ತಿದ್ದಾರೆ. ಒಕ್ಕಲೇಳುವಾಗ ಪ್ರಭುತ್ವ ಕೊಟ್ಟ ಭರವಸೆಗಳು ಭ್ರಮೆಗಳಾಗಿ ಹೋಗಿವೆ. ಪ್ರಾಣಿಗಳೂ ವಾಸಿಸಲು ಯೋಗ್ಯವಾಗಿಲ್ಲದ ಸ್ಥಳಗಳಲ್ಲಿ ಆದಿವಾಸಿಗಳು ಬದುಕುತ್ತಿದ್ದಾರೆ. ಆದಿವಾಸಿಗಳಿಂದ ಎಲ್ಲವನ್ನೂ ಕಿತ್ತುಕೊಂಡು ಪ್ರಭುತ್ವ ಈ ಸಮುದಾಯಗಳನ್ನು ವಂಚಿಸುತ್ತಲೇ ಬಂದಿದೆ. ಇಂದೂ ಸಹ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟಂತೆ ಮಾಡಿ ಸೋಮಣ್ಣನಿಗೆ ವಂಚನೆ ಮಾಡಲಾಗಿದೆ. ಇದು ಕೇವಲ ಸೋಮಣ್ಣನಿಗೆ ಆದ ವಂಚನೆಯಲ್ಲ. ಕರ್ನಾಟಕದ ಆದಿವಾಸಿ ಸಮುದಾಯಗಳಿಗೆ ಆದ ವಂಚನೆಯೇ ಆಗಿದೆ.

ಸೋಮಣ್ಣನಿಗೆ 2016 ರಲ್ಲಿ ಮೊದಲಪಟ್ಟಿಯಲ್ಲಿ ರಾಜ್ಯೋತ್ಸವ ಪ್ರಶಸ್ರಿ ಘೋಷಣೆಯಾಗಿ, ಎರಡನೆ ಪಟ್ಟಿಯಲ್ಲಿ ಕೈಬಿಡಲಾಗಿತ್ತು. ಹೀಗಾಗಿ ಜನಪರ ಚಿಂತಕರು ಸೋಮಣ್ಣನ ಹಾಡಿಗೆ ಹೋಗಿ `ಜನರಾಜ್ಯೋತ್ಸವ’ಪ್ರಶಸ್ತಿ ಪ್ರದಾನ ಮಾಡಿದ್ದರು. ಆಗ ಪ್ರಶಸ್ತಿ ಪ್ರದಾನ ಮಾಡಿದ ದೇವನೂರ ಮಹಾದೇವ `ಇವತ್ತು ಅಂತಃಕರಣದ ಧ್ವನಿ ಮಾತಾಗಿದೆ, ಕರುಳಬಳ್ಳಿ ಸ್ಪಂದಿಸಿದೆ, ಅಂತಃಕರಣದ ಮಿಡಿತಕ್ಕೆ ಬೆಲೆ ಕಟ್ಟಲಾಗದು. ಮೂಲನಿವಾಸಿಗಳ ಉಸಿರಲ್ಲಿ ಮನುಕುಲದ ಉಸಿರಾಟ ಇದೆ, ಇಂತಹ ಬದುಕು ನಾಗರಿಕ ಜಗತ್ತಿನ ದಬ್ಬಾಳಿಕೆಗೆ ನಲುಗಿ ತತ್ತರಿಸಿದೆ. ಮೂಲನಿವಾಸಿಗಳು ಈ ನೆಲದ ಮಾಜಿ ಒಡೆಯರು. ಆದ್ದರಿಂದ ಆದಿವಾಸಿಗಳ ಇಂತಹ ಸಂಗತಿಗಳನ್ನು ಹುಡುಕಿ ಮತ್ತೆ ಬೀಜ ಬಿತ್ತಬೇಕಾಗಿದೆ. ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಅಂತಃಕರಣದ ಸ್ನೇಹಿತರಂತ ನೂರು ಜನ ಈ ರಾಜ್ಯದಲ್ಕಿ ಸಿಕ್ಕಿದರೆ ಸಾಕು ನಾವು ನಮ್ಮ ಕನಸುಗಳನ್ನು ನನಸು ಮಾಡಬಹುದು’ ಎಂದಿದ್ದರು.

ಪ್ರಶಸ್ತಿ ಸ್ವೀಕರಿಸಿದ ಸೋಮಣ್ಣ `ವಿಶಾಲ ಮನಸಿನ ಜನರು ಇವತ್ತು ನನಗೆ ಪ್ರಶಸ್ತಿ ಕೊಟ್ಟಿದ್ದೀರ, ಸರ್ಕಾರ ಪ್ರಶಸ್ತಿ ಕೊಟ್ಟಿದ್ರೂ ಕೂಡ ಇಷ್ಟೊಂದು ಸಂತೋಷ ಆಗ್ತಿರ್ಲಿಲ್ಲ. ನೀವು ಕೊಟ್ಟಿರೋ ಪ್ರಶಸ್ತಿ ಸುಪ್ರೀಂಕೋರ್ಟ್ ತೀರ್ಪಿಗಿಂತಲೂ ದೊಡ್ಡದು. ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ, ರಾಜ್ಯದ ಮೂಲೆಮೂಲೆಯ ಜನರು ಬಂದು ಜಾತಿಧರ್ಮದ ಭೇದವಿಲ್ಲದೆ ನನ್ನನ್ನು ಕಂಡಿದಿರಲ್ವಾ ಇದಕ್ಕಿಂತ ಹೆಚ್ಚು ನನಗೇನು ಬೇಕು? ಎನ್ನುತ್ತಾ ಭಾವುಕರಾದರು. ಸೋಮಣ್ಣನಂತಹವರ ಹಕ್ಕೊತ್ತಾಯದ ಹೋರಾಟಗಳಿಗೆ ಜನಪರ ಚಳವಳಿಗಾರರು, ಅಧ್ಯಯನಕಾರರು, ಪತ್ರಕರ್ತರು, ಚಿಂತಕರು ಜೊತೆಯಾಗಿ ಬೆಂಬಲಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....