Homeಕರ್ನಾಟಕಎದಿ ಬ್ಯಾನಿಯ ಹಾಡಿ ತೋರಿದ ಚೆನ್ನಣ್ಣ ವಾಲೀಕಾರರ ಸ್ಮರಣೆ - ಭಗತರಾಜ ನಿಜಾಮಕಾರಿ

ಎದಿ ಬ್ಯಾನಿಯ ಹಾಡಿ ತೋರಿದ ಚೆನ್ನಣ್ಣ ವಾಲೀಕಾರರ ಸ್ಮರಣೆ – ಭಗತರಾಜ ನಿಜಾಮಕಾರಿ

- Advertisement -
- Advertisement -

ಮರದ ಮೇಲಿನ ಗಾಳಿಗೆ ಹಕ್ಕಿಯೊಂದು ರೆಕ್ಕೆ ಬಿಚ್ಚಿ `ಕರಿತೆಲೆ ಮಾನವನ ಜೀಪದ’ ಹಾಡು ಹಾಡುತ್ತಿತ್ತು. `ಬಂಡೆದ್ದ ದಲಿತರ ಬೀದಿಹಾಡುಗಳು’, `ಪ್ಯಾಂಥರ್ಸ್ ಪದ್ಯಗಳು’, `ಧಿಕ್ಕಾರದ ಹಾಡುಗಳು’, `ಡಪ್ಪಿನಾಟ’ಗಳೊಂದಿಗೆ ಆ ಭೀಮಕಾಯ `ಬೆಳ್ಯ’ ಕುಣಿಯುತ್ತಲಿದ್ದ. ದಣಿವರಿವು ಅವನಿಗೆ ಗೊತ್ತಿಲ್ಲ. ಊಟಕ್ಕೆ ಕರೆದರೆ ಶತಮಾನದ ಸೇಡು ತೀರಿಸಿಕೊಳ್ಳುತಿದ್ದ. ರಾಯಚೂರಿನ ಕಡುಬಿಸಿಲಲ್ಲಿ ಬರೆಯಲು ಕುಳಿತರೆ, ಬರಿಮೈ, ಸುರಿವ ಬೆವರು, ಬಣ್ಣಬಣ್ಣದ ಹೂವುಗಳ ಲುಂಗಿ, ಬೆರಳಲ್ಲಿ ಪೆನ್ನು, ಸರಸರನೆ ಬಿಳಿಹಾಳೆಯ ತುಂಬ ಹಾವಿನಂತೆ ಹರಿದಾಡುತ್ತಿತ್ತು. ಹೆಪ್ಪುಗಟ್ಟಿದ ಸಮುದ್ರ, ಬೋಧಿವೃಕ್ಷದ ಹೂವು ಅರಳುತ್ತಿದ್ದವು.

ಇಂತಪ್ಪ ನಮ್ಮ ಚೆನ್ನಣ್ಣ ವಾಲೀಕಾರರು ಮೂಲತಃ ಜಾನಪದ ಲೋಕದ ಮನುಷ್ಯ. ಜಾನಪದದಲ್ಲಿಯೇ ಸಂಶೋಧನೆ ಮಾಡುತ್ತಿದ್ದರೆ ಅವರಿಗೆ ದೊಡ್ಡ ಪ್ರಶಸ್ತಿ ತಪ್ಪದೇ ಬರುತ್ತಿತ್ತು. ಆದರೆ ಅವರಿಗೆ ಪ್ರಶಸ್ತಿ, ಬಿರುದು-ಬಾವಲಿಗಳಿಗಿಂತ ತನ್ನ ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರನಾಗುವುದು ಮುಖ್ಯವಾಗಿತ್ತು. “ಯಾವ ಅP್ಷÀರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ” ಎಂದು ಕೈಯಲ್ಲಿ ಡಪ್ಪು ಹಿಡಿದು, ಸಾರ್ವಜನಿಕ ವೇದಿಕೆಗಳ ಮೇಲೆ ಧ್ವನಿ ಎತ್ತಿ ಹಾಡುತ್ತಿದ್ದ ಚೆನ್ನಣ್ಣ, ಹೈದ್ರಾಬಾದ ಕರ್ನಾಟಕ ಪ್ರದೇಶದ ದಲಿತರ ದನಿಯಾಗಿ ಹಗಲಿರುಳು ಶೋಷಿತರ ಬಗ್ಗೆ ಚಿಂತಿಸುತ್ತಿದ್ದರು. ಅವರ ಬಗ್ಗೆ ಹಲವಾರು ಕವನ, ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರವಾಸಕಥನ ಬರೆದುದಲ್ಲದೆ ಅವರೊಂದಿಗೆ ಪ್ರಾಮಾಣಿಕವಾಗಿ ಬದುಕಿದರು. ದೇಶದಲ್ಲಿರುವ ಅಸಹಿಷ್ಣುತೆ, ಜಾತೀಯತೆ, ಶೋಷಕರ ಬಲ, ಅವನತಿಗೆ ಜಾರುತ್ತಿರುವ ಮನುಕುಲದ ಮೌಲ್ಯಗಳನ್ನು ತಮ್ಮ ಸಾಹಿತ್ಯ ಬೋಧನೆಗಳಲ್ಲಿ ತರುತ್ತಿದ್ದರು.

ಧರ್ಮಸ್ಥಳದಲ್ಲಿ ಜರುಗುತ್ತಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (1979) ದಲಿತರಿಗಾಗಿ ಒಂದು ಗೋಷ್ಠಿ ಏರ್ಪಡಿಸಲು ವಿನಂತಿಸಿಕೊಂಡರೆ, ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು `ಸಾಹಿತ್ಯದಲ್ಲಿ ದಲಿತ-ಬಲಿತ-ಕಲಿತ ಎನ್ನುವುದಿಲ್ಲ’ ಎಂದು ಹೀಯಾಳಿಸಿದರು. ಆಗ ಜಂಬಣ್ಣ ಅಮರಚಿಂತ, ಬೋಳಬಂಡೆಪ್ಪ ಮತ್ತು ವಾಲೀಕಾರ ಧಿಕ್ಕಾರದ ಕೂಗು ಪತ್ರಿಕೆಯಲ್ಲಿ ಬಂದಿತು. ಸಾರಸ್ವತ ಲೋಕದಲ್ಲಿ ಅಲ್ಲೋಲ ಕಲ್ಲೋಲ ಎದ್ದಿತು. ಅದುವೇ ಬಂಡಾಯ ಸಾಹಿತ್ಯ ಚಳವಳಿಯ ಹುಟ್ಟಿಗೆ ಪ್ರೇರಣೆಯಾಯಿತು. ಈ ಚಳವಳಿಯ ಹುಟ್ಟಿಗೆ ಕಾರಣರಾದ ರಾಯಚೂರಿನ ಮೂವರು ಸಾಹಿತಿಗಳಲ್ಲಿ ಮೊದಲಿಬ್ಬರು ಬಾರದ ಲೋಕಕ್ಕೆ ಹೋಗಿಯಾಗಿದೆ.

ಈಗ ಮೂರನೆಯವರಾದ ಚೆನ್ನಣ್ಣ 24-11-2019 ರಂದು ರಾತ್ರಿ ಅವರನ್ನು ಕೂಡಿಕೊಂಡರು. ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಂಕರವಾಡಿ ಗ್ರಾಮದ ತಳವಾರ ಜನಾಂಗದ ಸಾಬಮ್ಮ-ಧೂಳಪ್ಪನ ಮಗನಾಗಿ (1943) ಚೆನ್ನಣ್ಣ ಜನಿಸಿದರು. ರಾಯಚೂರಿನ ಹಮದರ್ದ್ ಶಾಲೆಗೆ ಕನ್ನಡ ಮಾಸ್ತರರಾಗಿ ಬಂದು ಸೇರಿದರು. ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದು, ರಾಯಚೂರಿನ ಎಲ್.ವಿ.ಡಿ. ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬಳಿಕ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿ ನಿವೃತ್ತರಾದರು. ಅವರು ತಮ್ಮ ಸೃಜನಶೀಲ ಬರವಣಿಗೆ ಮತ್ತು ಪ್ರಗತಿಪರ ಚಿಂತನೆಗಳಿಂದಾಗಿ ನಾಡಿನ ಎಲ್ಲ ಭಾಗದ ಲೇಖಕರಿಗೂ ಸಾಹಿತ್ಯಾಭಿಮಾನಿಗಳಿಗೂ ಚಿರಪರಿಚಿತರು. ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ ಮತ್ತು ಬಂಡಾಯ ಚಿಂತನೆಗೆ ಅಡಿಪಾಯ ಹಾಕಿದವರು. ಈ ಭಾಗದ ಜನಪದ ಸಾಹಿತ್ಯಕ್ಕೆ ಜೀವ ತುಂಬಲು, ಹಗಲಿರುಳು ಎನ್ನದೆ ತಿರುಗಾಡಿ ಗ್ರಾಮದೇವತೆಗಳ ಬಗ್ಗೆ ಅಧ್ಯಯನ ಮಾಡಿ ಪಿಹೆಚ್.ಡಿ., ಪಡೆದವರು. ದೇವದಾಸಿಯವರ, ಆದಿವಾಸಿಗಳ, ಜೋಗತಿಯವರ ಜೀವನವನ್ನು ಅಭ್ಯಸಿಸಿ, ಕೆಳಜನರ ನೋವು ಕುಂಡುಂಡ, ಹಿಂದುಳಿದ ವರ್ಗಗಳ ದಲಿತ ಸಾಹಿತಿಯೆಂದು ಗುರುತಿಸಿಕೊಂಡವರು. ಎಂ.ಎಲ್.ಸಿ.ಯಾಗಿಯೊ, ವಿಶ್ವವಿದ್ಯಾಲಯವೊಂದರ ಉಪ-ಕುಲಪತಿಯಾಗಿ ನೇಮಕವಾಗುವ ಅವಕಾಶ ಅವರಿಗಿತ್ತು. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗುವ ಅವಕಾಶವಿತ್ತು. ಇದರಿಂದ ವಂಚಿತರಾದರು. ಯಾವುದನ್ನೂ ಬಯಸದೆ ಇದ್ದಂತೆ ಇರಲಿ ಬಂದಂತೆ ಬರಲಿ ಎಂದು ಬದುಕಿದರು.

ಚೆನ್ನಣ್ಣ `ಮರದ ಮೇಲಿನ ಗಾಳಿ’ ಕವನ ಸಂಕಲನದಿಂದ ಸಾಹಿತ್ಯ ರಚನೆ ಪ್ರಾರಂಭಿಸಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ಕಾವ್ಯ ಸಣ್ಣಕಥೆ, ವಚನ, ಕಾದಂಬರಿ, ನಾಟಕ, ಡಪ್ಪಿನ ಹಾಡು, ಮೊಹರಂ ಪದಗಳು, ಪ್ರವಾಸ ಕಥನಗಳು, ಸಂಶೋಧನೆ ಮುಂತಾದ ಪ್ರಕಾರಗಳಲ್ಲಿ 66 ಕೃತಿಗಳನ್ನು ಪ್ರಕಟಿಸಿದರು. ಇವರ `ಕರಿತಲಿ ಮಾನವನ ಜೀಪದ’ (ಕಾವ್ಯ) `ಬೆಳ್ಯ’ (ಕಾದಂಬರಿ) ಅಪರೂಪದ ಕೃತಿಗಳು. ಸಾವಿರ ಪುಟಗಳ `ವೋಮಾ-ವೋಮ’ವು, ಎಲ್ಲೂ ಅರ್ಧವಿರಾಮ ಪೂರ್ಣವಿರಾಮವಿಲ್ಲದೆ, ಯಾವುದೇ ಅಧ್ಯಾಯಗಳಿಲ್ಲದೆ ಸಾಗುವ ಮಹಾಕಾವ್ಯ. ಚೆನ್ನಣ್ಣ ಇತ್ತೀಚೆಗೆ ಬುದ್ಧನ ತತ್ವಗಳಿಗೆ ಮಾರುಹೋಗಿದ್ದರು. ಧರ್ಮ ಎಂದರೆ ಮನುಷ್ಯ. ಮನುಷ್ಯನೆಂದರೆ ಸಹಿಷ್ಣುತೆಯ ತೋಟ ಎನ್ನುತ್ತಿದ್ದರು. ಜೀವನದ ಕೊನೆಯ ದಿನಗಳಲ್ಲಿ ಬುದ್ಧನ ಕುರಿತು ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.

ಚೆನ್ನಣ್ಣ ಈ ಭಾಗದ ಸೃಜನಶೀಲ ದೈತ್ಯ ಲೇಖಕರು. ಆದರೆ ಅವರ ಸಾಹಿತ್ಯವನ್ನು ಓದುವ ವ್ಯವಧಾನ ಕಳೆದುಕೊಂಡಿರುವ ಪ್ರಸಿದ್ಧ ಲೇಖಕರು ಅವರ ಬಗ್ಗೆ ಉದಾಸೀನ ತಾಳಿದರು. ಕೆಲವು ಮಹನೀಯರು ಅವರ `ಮ್ಯೋಮಾ-ಮ್ಯೋಮ’ವನ್ನು ತಲೆದಿಂಬಿಗೆ ಹೋಲಿಸಿದರು. ಚೆನ್ನಣ್ಣ ಓದಲು ಕಳುಹಿಸಿದ ಕೃತಿಯನ್ನು ಕೆಲವರು ತಾವು ಓದದೆ ತಮ್ಮ ವಿದ್ಯಾರ್ಥಿನಿಯರಿಗೆ ಕೊಟ್ಟು ಹೀಯಾಳಿಸುತ್ತಿದ್ದರು. ಹೈದ್ರಾಬಾದ್-ಕರ್ನಾಟಕ ಪ್ರದೇಶದ ಪ್ರಸಿದ್ಧ ಲೇಖಕರು ಚೆನ್ನಣ್ಣನವರ ಕೃತಿಯ ಬಗ್ಗೆ ಮಾತಾಡದೆ ಅವರ ವ್ಯಕ್ತಿಗತ ಸಂಗತಿಗಳನ್ನೇ ಹೇಳುತ್ತಿದ್ದರು. ಆದರೂ ಚನ್ನಣ್ಣ ನಗುನಗುತ್ತಲೆ ಕೊನೆಯ ಉಸಿರು ಇರುವ ಶುದ್ಧಮನಸ್ಸಿನ ಬದ್ಧ ಲೇಖಕರಾಗಿ ಉಳಿದರು.

ಥಟ್ ಅಂತ ನೋಡಿದ ಕ್ಷಣ
ಬಯಲಾಟದ ಭೀಮನು
ದೊಡ್ಡಾಟದ ಬಕಾಸುರನು
ನಾಟಕದ ಖಳನಾಯಕನು
ಸ್ವಲ್ಪ ಸಮೀಪ ಹೋದರೆ-
ಗೆಳೆಯರೆ ಮಾವಂದಿರರು
ಮಕ್ಕಳಿಗೆ ಚಂದಮಾಮಾ ಇವನು

ಇನ್ನೂ ಹತ್ತಿರ ಹೋಗಿ ಇಣುಕಿದರೆ-
ಜನಪದ ಲೋಕವೇ ತೆರೆದುಕೊಳ್ಳುತ್ತದೆ
ಕಲ್ಲು ದೇವ-ದೇವತೆಯರಿಗೆ ಮಾತು ಬರುತ್ತದೆ
ಕಳಸ ಹೊತ್ತ ಗುಡಿಗಳು ಏಳುತ್ತವೆ
ನಮ್ಮ-ನಿಮ್ಮ ನಡುವೆ ಇರುವ ಇವನು
ಜೀವಂತ-ಜೀವಸೆಲೆ ಹುಡುಕುತ್ತಿರುವ ಜಲಗಾರನು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...