Homeಕರ್ನಾಟಕಎದಿ ಬ್ಯಾನಿಯ ಹಾಡಿ ತೋರಿದ ಚೆನ್ನಣ್ಣ ವಾಲೀಕಾರರ ಸ್ಮರಣೆ - ಭಗತರಾಜ ನಿಜಾಮಕಾರಿ

ಎದಿ ಬ್ಯಾನಿಯ ಹಾಡಿ ತೋರಿದ ಚೆನ್ನಣ್ಣ ವಾಲೀಕಾರರ ಸ್ಮರಣೆ – ಭಗತರಾಜ ನಿಜಾಮಕಾರಿ

- Advertisement -
- Advertisement -

ಮರದ ಮೇಲಿನ ಗಾಳಿಗೆ ಹಕ್ಕಿಯೊಂದು ರೆಕ್ಕೆ ಬಿಚ್ಚಿ `ಕರಿತೆಲೆ ಮಾನವನ ಜೀಪದ’ ಹಾಡು ಹಾಡುತ್ತಿತ್ತು. `ಬಂಡೆದ್ದ ದಲಿತರ ಬೀದಿಹಾಡುಗಳು’, `ಪ್ಯಾಂಥರ್ಸ್ ಪದ್ಯಗಳು’, `ಧಿಕ್ಕಾರದ ಹಾಡುಗಳು’, `ಡಪ್ಪಿನಾಟ’ಗಳೊಂದಿಗೆ ಆ ಭೀಮಕಾಯ `ಬೆಳ್ಯ’ ಕುಣಿಯುತ್ತಲಿದ್ದ. ದಣಿವರಿವು ಅವನಿಗೆ ಗೊತ್ತಿಲ್ಲ. ಊಟಕ್ಕೆ ಕರೆದರೆ ಶತಮಾನದ ಸೇಡು ತೀರಿಸಿಕೊಳ್ಳುತಿದ್ದ. ರಾಯಚೂರಿನ ಕಡುಬಿಸಿಲಲ್ಲಿ ಬರೆಯಲು ಕುಳಿತರೆ, ಬರಿಮೈ, ಸುರಿವ ಬೆವರು, ಬಣ್ಣಬಣ್ಣದ ಹೂವುಗಳ ಲುಂಗಿ, ಬೆರಳಲ್ಲಿ ಪೆನ್ನು, ಸರಸರನೆ ಬಿಳಿಹಾಳೆಯ ತುಂಬ ಹಾವಿನಂತೆ ಹರಿದಾಡುತ್ತಿತ್ತು. ಹೆಪ್ಪುಗಟ್ಟಿದ ಸಮುದ್ರ, ಬೋಧಿವೃಕ್ಷದ ಹೂವು ಅರಳುತ್ತಿದ್ದವು.

ಇಂತಪ್ಪ ನಮ್ಮ ಚೆನ್ನಣ್ಣ ವಾಲೀಕಾರರು ಮೂಲತಃ ಜಾನಪದ ಲೋಕದ ಮನುಷ್ಯ. ಜಾನಪದದಲ್ಲಿಯೇ ಸಂಶೋಧನೆ ಮಾಡುತ್ತಿದ್ದರೆ ಅವರಿಗೆ ದೊಡ್ಡ ಪ್ರಶಸ್ತಿ ತಪ್ಪದೇ ಬರುತ್ತಿತ್ತು. ಆದರೆ ಅವರಿಗೆ ಪ್ರಶಸ್ತಿ, ಬಿರುದು-ಬಾವಲಿಗಳಿಗಿಂತ ತನ್ನ ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರನಾಗುವುದು ಮುಖ್ಯವಾಗಿತ್ತು. “ಯಾವ ಅP್ಷÀರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ” ಎಂದು ಕೈಯಲ್ಲಿ ಡಪ್ಪು ಹಿಡಿದು, ಸಾರ್ವಜನಿಕ ವೇದಿಕೆಗಳ ಮೇಲೆ ಧ್ವನಿ ಎತ್ತಿ ಹಾಡುತ್ತಿದ್ದ ಚೆನ್ನಣ್ಣ, ಹೈದ್ರಾಬಾದ ಕರ್ನಾಟಕ ಪ್ರದೇಶದ ದಲಿತರ ದನಿಯಾಗಿ ಹಗಲಿರುಳು ಶೋಷಿತರ ಬಗ್ಗೆ ಚಿಂತಿಸುತ್ತಿದ್ದರು. ಅವರ ಬಗ್ಗೆ ಹಲವಾರು ಕವನ, ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರವಾಸಕಥನ ಬರೆದುದಲ್ಲದೆ ಅವರೊಂದಿಗೆ ಪ್ರಾಮಾಣಿಕವಾಗಿ ಬದುಕಿದರು. ದೇಶದಲ್ಲಿರುವ ಅಸಹಿಷ್ಣುತೆ, ಜಾತೀಯತೆ, ಶೋಷಕರ ಬಲ, ಅವನತಿಗೆ ಜಾರುತ್ತಿರುವ ಮನುಕುಲದ ಮೌಲ್ಯಗಳನ್ನು ತಮ್ಮ ಸಾಹಿತ್ಯ ಬೋಧನೆಗಳಲ್ಲಿ ತರುತ್ತಿದ್ದರು.

ಧರ್ಮಸ್ಥಳದಲ್ಲಿ ಜರುಗುತ್ತಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (1979) ದಲಿತರಿಗಾಗಿ ಒಂದು ಗೋಷ್ಠಿ ಏರ್ಪಡಿಸಲು ವಿನಂತಿಸಿಕೊಂಡರೆ, ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು `ಸಾಹಿತ್ಯದಲ್ಲಿ ದಲಿತ-ಬಲಿತ-ಕಲಿತ ಎನ್ನುವುದಿಲ್ಲ’ ಎಂದು ಹೀಯಾಳಿಸಿದರು. ಆಗ ಜಂಬಣ್ಣ ಅಮರಚಿಂತ, ಬೋಳಬಂಡೆಪ್ಪ ಮತ್ತು ವಾಲೀಕಾರ ಧಿಕ್ಕಾರದ ಕೂಗು ಪತ್ರಿಕೆಯಲ್ಲಿ ಬಂದಿತು. ಸಾರಸ್ವತ ಲೋಕದಲ್ಲಿ ಅಲ್ಲೋಲ ಕಲ್ಲೋಲ ಎದ್ದಿತು. ಅದುವೇ ಬಂಡಾಯ ಸಾಹಿತ್ಯ ಚಳವಳಿಯ ಹುಟ್ಟಿಗೆ ಪ್ರೇರಣೆಯಾಯಿತು. ಈ ಚಳವಳಿಯ ಹುಟ್ಟಿಗೆ ಕಾರಣರಾದ ರಾಯಚೂರಿನ ಮೂವರು ಸಾಹಿತಿಗಳಲ್ಲಿ ಮೊದಲಿಬ್ಬರು ಬಾರದ ಲೋಕಕ್ಕೆ ಹೋಗಿಯಾಗಿದೆ.

ಈಗ ಮೂರನೆಯವರಾದ ಚೆನ್ನಣ್ಣ 24-11-2019 ರಂದು ರಾತ್ರಿ ಅವರನ್ನು ಕೂಡಿಕೊಂಡರು. ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಂಕರವಾಡಿ ಗ್ರಾಮದ ತಳವಾರ ಜನಾಂಗದ ಸಾಬಮ್ಮ-ಧೂಳಪ್ಪನ ಮಗನಾಗಿ (1943) ಚೆನ್ನಣ್ಣ ಜನಿಸಿದರು. ರಾಯಚೂರಿನ ಹಮದರ್ದ್ ಶಾಲೆಗೆ ಕನ್ನಡ ಮಾಸ್ತರರಾಗಿ ಬಂದು ಸೇರಿದರು. ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದು, ರಾಯಚೂರಿನ ಎಲ್.ವಿ.ಡಿ. ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬಳಿಕ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿ ನಿವೃತ್ತರಾದರು. ಅವರು ತಮ್ಮ ಸೃಜನಶೀಲ ಬರವಣಿಗೆ ಮತ್ತು ಪ್ರಗತಿಪರ ಚಿಂತನೆಗಳಿಂದಾಗಿ ನಾಡಿನ ಎಲ್ಲ ಭಾಗದ ಲೇಖಕರಿಗೂ ಸಾಹಿತ್ಯಾಭಿಮಾನಿಗಳಿಗೂ ಚಿರಪರಿಚಿತರು. ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ ಮತ್ತು ಬಂಡಾಯ ಚಿಂತನೆಗೆ ಅಡಿಪಾಯ ಹಾಕಿದವರು. ಈ ಭಾಗದ ಜನಪದ ಸಾಹಿತ್ಯಕ್ಕೆ ಜೀವ ತುಂಬಲು, ಹಗಲಿರುಳು ಎನ್ನದೆ ತಿರುಗಾಡಿ ಗ್ರಾಮದೇವತೆಗಳ ಬಗ್ಗೆ ಅಧ್ಯಯನ ಮಾಡಿ ಪಿಹೆಚ್.ಡಿ., ಪಡೆದವರು. ದೇವದಾಸಿಯವರ, ಆದಿವಾಸಿಗಳ, ಜೋಗತಿಯವರ ಜೀವನವನ್ನು ಅಭ್ಯಸಿಸಿ, ಕೆಳಜನರ ನೋವು ಕುಂಡುಂಡ, ಹಿಂದುಳಿದ ವರ್ಗಗಳ ದಲಿತ ಸಾಹಿತಿಯೆಂದು ಗುರುತಿಸಿಕೊಂಡವರು. ಎಂ.ಎಲ್.ಸಿ.ಯಾಗಿಯೊ, ವಿಶ್ವವಿದ್ಯಾಲಯವೊಂದರ ಉಪ-ಕುಲಪತಿಯಾಗಿ ನೇಮಕವಾಗುವ ಅವಕಾಶ ಅವರಿಗಿತ್ತು. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗುವ ಅವಕಾಶವಿತ್ತು. ಇದರಿಂದ ವಂಚಿತರಾದರು. ಯಾವುದನ್ನೂ ಬಯಸದೆ ಇದ್ದಂತೆ ಇರಲಿ ಬಂದಂತೆ ಬರಲಿ ಎಂದು ಬದುಕಿದರು.

ಚೆನ್ನಣ್ಣ `ಮರದ ಮೇಲಿನ ಗಾಳಿ’ ಕವನ ಸಂಕಲನದಿಂದ ಸಾಹಿತ್ಯ ರಚನೆ ಪ್ರಾರಂಭಿಸಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ಕಾವ್ಯ ಸಣ್ಣಕಥೆ, ವಚನ, ಕಾದಂಬರಿ, ನಾಟಕ, ಡಪ್ಪಿನ ಹಾಡು, ಮೊಹರಂ ಪದಗಳು, ಪ್ರವಾಸ ಕಥನಗಳು, ಸಂಶೋಧನೆ ಮುಂತಾದ ಪ್ರಕಾರಗಳಲ್ಲಿ 66 ಕೃತಿಗಳನ್ನು ಪ್ರಕಟಿಸಿದರು. ಇವರ `ಕರಿತಲಿ ಮಾನವನ ಜೀಪದ’ (ಕಾವ್ಯ) `ಬೆಳ್ಯ’ (ಕಾದಂಬರಿ) ಅಪರೂಪದ ಕೃತಿಗಳು. ಸಾವಿರ ಪುಟಗಳ `ವೋಮಾ-ವೋಮ’ವು, ಎಲ್ಲೂ ಅರ್ಧವಿರಾಮ ಪೂರ್ಣವಿರಾಮವಿಲ್ಲದೆ, ಯಾವುದೇ ಅಧ್ಯಾಯಗಳಿಲ್ಲದೆ ಸಾಗುವ ಮಹಾಕಾವ್ಯ. ಚೆನ್ನಣ್ಣ ಇತ್ತೀಚೆಗೆ ಬುದ್ಧನ ತತ್ವಗಳಿಗೆ ಮಾರುಹೋಗಿದ್ದರು. ಧರ್ಮ ಎಂದರೆ ಮನುಷ್ಯ. ಮನುಷ್ಯನೆಂದರೆ ಸಹಿಷ್ಣುತೆಯ ತೋಟ ಎನ್ನುತ್ತಿದ್ದರು. ಜೀವನದ ಕೊನೆಯ ದಿನಗಳಲ್ಲಿ ಬುದ್ಧನ ಕುರಿತು ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.

ಚೆನ್ನಣ್ಣ ಈ ಭಾಗದ ಸೃಜನಶೀಲ ದೈತ್ಯ ಲೇಖಕರು. ಆದರೆ ಅವರ ಸಾಹಿತ್ಯವನ್ನು ಓದುವ ವ್ಯವಧಾನ ಕಳೆದುಕೊಂಡಿರುವ ಪ್ರಸಿದ್ಧ ಲೇಖಕರು ಅವರ ಬಗ್ಗೆ ಉದಾಸೀನ ತಾಳಿದರು. ಕೆಲವು ಮಹನೀಯರು ಅವರ `ಮ್ಯೋಮಾ-ಮ್ಯೋಮ’ವನ್ನು ತಲೆದಿಂಬಿಗೆ ಹೋಲಿಸಿದರು. ಚೆನ್ನಣ್ಣ ಓದಲು ಕಳುಹಿಸಿದ ಕೃತಿಯನ್ನು ಕೆಲವರು ತಾವು ಓದದೆ ತಮ್ಮ ವಿದ್ಯಾರ್ಥಿನಿಯರಿಗೆ ಕೊಟ್ಟು ಹೀಯಾಳಿಸುತ್ತಿದ್ದರು. ಹೈದ್ರಾಬಾದ್-ಕರ್ನಾಟಕ ಪ್ರದೇಶದ ಪ್ರಸಿದ್ಧ ಲೇಖಕರು ಚೆನ್ನಣ್ಣನವರ ಕೃತಿಯ ಬಗ್ಗೆ ಮಾತಾಡದೆ ಅವರ ವ್ಯಕ್ತಿಗತ ಸಂಗತಿಗಳನ್ನೇ ಹೇಳುತ್ತಿದ್ದರು. ಆದರೂ ಚನ್ನಣ್ಣ ನಗುನಗುತ್ತಲೆ ಕೊನೆಯ ಉಸಿರು ಇರುವ ಶುದ್ಧಮನಸ್ಸಿನ ಬದ್ಧ ಲೇಖಕರಾಗಿ ಉಳಿದರು.

ಥಟ್ ಅಂತ ನೋಡಿದ ಕ್ಷಣ
ಬಯಲಾಟದ ಭೀಮನು
ದೊಡ್ಡಾಟದ ಬಕಾಸುರನು
ನಾಟಕದ ಖಳನಾಯಕನು
ಸ್ವಲ್ಪ ಸಮೀಪ ಹೋದರೆ-
ಗೆಳೆಯರೆ ಮಾವಂದಿರರು
ಮಕ್ಕಳಿಗೆ ಚಂದಮಾಮಾ ಇವನು

ಇನ್ನೂ ಹತ್ತಿರ ಹೋಗಿ ಇಣುಕಿದರೆ-
ಜನಪದ ಲೋಕವೇ ತೆರೆದುಕೊಳ್ಳುತ್ತದೆ
ಕಲ್ಲು ದೇವ-ದೇವತೆಯರಿಗೆ ಮಾತು ಬರುತ್ತದೆ
ಕಳಸ ಹೊತ್ತ ಗುಡಿಗಳು ಏಳುತ್ತವೆ
ನಮ್ಮ-ನಿಮ್ಮ ನಡುವೆ ಇರುವ ಇವನು
ಜೀವಂತ-ಜೀವಸೆಲೆ ಹುಡುಕುತ್ತಿರುವ ಜಲಗಾರನು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ...

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...