Homeಮುಖಪುಟಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

ಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

- Advertisement -
- Advertisement -

|ಜಯಪ್ರಕಾಶ್ ಶೆಟ್ಟಿ. ಹೆಚ್ |
ಸಹಪ್ರಾಧ್ಯಾಪಕರು, ತೆಂಕನಿಡಿಯೂರು.ಉಡುಪಿ.

2008ರ ನವೆಂಬರ್‍ನಲ್ಲಿ ನಾನು ನಿರೀಕ್ಷೆಯೇ ಮಾಡಿರದ ರಾಜಕೀಯ ಪ್ರೇರಿತವಾದ ಅಕಸ್ಮಾತ್ ವರ್ಗಾವಣೆಯೊಂದು ನನಗೆ ನಾನು ಈ ಹಿಂದೆ ಕಂಡಿರದ ಹಾವೇರಿಯ ಹಿರೇಕೆರೂರಿನ ದುರ್ಗಮ್ಮನ ಕೆರೆಯನ್ನು ಕಾಣಿಸುವ ಜೊತೆಗೆ ನೇರನಡೆನುಡಿಯ ಗೆಳೆಯನೊಬ್ಬನನ್ನೂ ಕಾಣಿಸಿತ್ತು. ನೀರಿರದ ಊರಿಗೆ ನನ್ನನ್ನು ಎತ್ತಿ ಎಸೆಯುವ ಕೇಡಿಗರ ಧಾವಂತದಲ್ಲಿ ತುಂಬಿದ ಕೆರೆಯಿರುವ ಊರಿಗೆ ಹೋಗಿ ಬಿದ್ದ ನನಗೆ ಅರಿಯದ ಊರಿನ ಅನಾಥನೆಂಬ ಆತಂಕವೇ ಬಾಧಿಸದಂತೆ ಮನುಷ್ಯಪ್ರೀತಿಯ ನೆರಳೂ ಸಿಕ್ಕಿತ್ತು. ಸಂಸಾರದಿಂದ ದೂರವಿದ್ದ ಸಂಕಟ ಇದ್ದುದು ನಿಜವಿದ್ದರೂ ನಾನಾಗ ಜೀವಪರ ಚಿಂತನೆಯ ಆಲೋಚನೆಗಳನ್ನು ನಿರ್ಭೀತವಾಗಿ ಹಂಚಿಕೊಳ್ಳುತ್ತಿದ್ದ ಸಮಾನಮನಸ್ಕನೊಬ್ಬನ ಗೆಳೆತನದ ಮೂಲಕ ಬರಡು ನೆಲದಿಂದ ಕಿಂಚಿತ್ತಾದರೂ ಪಾರಾದ ಸುಖವನ್ನೂ ಅನುಭವಿಸಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ಶೇರು, ಬಡ್ಡಿ, ಚೀಟಿ, ಹೊಲ ಮನಿ, ಸೈಟು ಇವ್ಯಾವುದರ ಗೋಜಿಗೆ ಬೀಳದೆ ವೃತ್ತಿ ಮತ್ತು ವಿದ್ಯಾರ್ಥಿಗಳ ಜೊತೆಗೆ ಅಪಾರವಾಗಿ ಬದುಕನ್ನು ಪ್ರೀತಿಸುತ್ತಿದ್ದ ಅಸಲಿ ಮೇಷ್ಟರೊಬ್ಬರ ಗೆಳೆತನ ಉಂಡಿದ್ದೆ. ಹೀಗೆ ಅಂದು ಬೆಸೆದುಕೊಂಡ ಗೆಳೆಯ ಜೋಗುರನೆಂಬ ಆ ಪ್ರೀತಿಯ ಕೊಂಡಿ ಮತ್ತೆಂದೂ ಕಳಚಿಕೊಂಡಿರಲಿಲ್ಲ.

ಜೋಗುರರು ನನ್ನಂತಹ ಕೆಲವೇ ಮಂದಿ ಸ್ನೇಹಿತರಿಗಷ್ಟೇ ಪರಿಚಿತರಲ್ಲ. ಸಮಾಜಶಾಸ್ತ್ರದ ಉಪನ್ಯಾಸಕನಾಗಿ, ಹವ್ಯಾಸಿ ಪತ್ರಕರ್ತ, ಕತೆಗಾರ, ಸಮೂಹಪರ ಚಿಂತನೆಯ ಬರಹಗಾರ, ಅತ್ಯುತ್ತಮ ವಾಗ್ಮಿಯಾಗಿ ತನ್ನನ್ನು ಗುರುತಿಸಿಕೊಂಡ ಜೋಗುರ ಕನ್ನಡದ ಓದುಗರಿಗೆ ಚಿರಪರಿಚಿತರು. ಸಾವಿಗೆ ಸಮೀಪದಲ್ಲಿದ್ದಾಗಲೂ ಅಕ್ಷರ ಮತ್ತು ಬದುಕುಗಳೆರಡರ ಅಪಾರಪ್ರೀತಿಯಲ್ಲಿ ಜೀವಂತವಾಗಿ ಉಳಿದವರು. ಈ ಲೋಕದ ಸಾಮಾಜಿಕ ಆಗುಹೋಗುಗಳು ಮತ್ತು ರಾಜಕೀಯದ ಸೂಕ್ಷ್ಮಗಳ ಕುರಿತಂತೆ ಅನೇಕ ಜನಪರ ಚಳುವಳಿಗಳಲ್ಲಿ ಸಮಾನಮನಸ್ಕರೊಂದಿಗೆ ಪ್ರಗತಿಪರ ವಿವೇಕದೊಂದಿಗೆ ಬೆರೆಯುತ್ತಿದ್ದವರು. ಸಂವೇದನೆಗಳು ಸತ್ತು ಮತಿಹೀನ ಉದ್ರೇಕಗಳೇ ಮಿಂಚುತ್ತ್ತಿರುವ ಜಗತ್ತಿನಲ್ಲಿ ಒಬ್ಬ ಬರಹಗಾರನಿಗೆ ಇರುವ ಹೊಣೆಗಾರಿಕೆಯ ಮಹತ್ವವನ್ನು ಅರಿತವರು.

ಮನುಷ್ಯನಾಗಿ ಸ್ವಯಂ ಕಷ್ಟದ ಬದುಕನ್ನು ಬದುಕಿದ ಅನುಭವದ ಹಿನ್ನೆಲೆಯುಳ್ಳ ಜೋಗುರರು ಬಡತನದ ಬಗೆಗೆ ಎಂದೂ ಅವಹೇಳನ ಮಾಡಿದವರಲ್ಲ. ಈ ನೆಲದ ಜಾತಿಜಾಡ್ಯದ ಪರ ವಹಿಸಿದ ಸಣ್ಣತನದವರೂ ಅಲ್ಲ. ಜಾತಿಯನ್ನು ವಿರೋಧಿಸಿದ ಜೋಗುರರು ಸ್ವಯಂ ಅಂತಹ ಉದಾಹರಣೆಯಾಗಿ ಬದುಕಿದವರು. ಮಾತನ್ನು ಕೃತಿಯಾಗಿಸುವ ಬಸವಪರಂಪರೆಯ ನಿಜ ವಾರಸುದಾರನಂತೆ ಜಾತಿಯ ಕಕ್ಷೆಯನ್ನು ಮೀರಿ ವಿವಾಹ ಸಂಬಂಧವನ್ನು ಹೊಂದಿದ್ದಷ್ಟೇ ಅಲ್ಲ, ಅದನ್ನು ಅತ್ಯಂತ ಪ್ರೀತಿಯಿಂದ ಬದುಕಿದವರು. ಆದರೆ ಜೋಗುರರ ಬರಹಗಳನ್ನು ಗಮನಿಸುವುದಾದರೆ ಆ ಬರಹಗಳಲ್ಲಿ ಇರುವ ವ್ಯವಸ್ಥೆಯನ್ನು ನಿರಾಕರಿಸಲೇಬೇಕೆಂಬ ಹಟವೇನೂ ಇಲ್ಲ. ಮುಖ್ಯವಾಗಿ ಅವು ಸಾಮಾಜಿಕ ಸ್ವಾಸ್ಥ್ಯದ ಕಡೆಗೆ ಹೆಚ್ಚು ಒಲಿದವುಗಳು. ಅವರ ಅನೇಕ ಬರಹಗಳು ಕೆಲವೊಂದು ಸಾಮಾಜಿಕಸಂಸ್ಥೆಗಳನ್ನು ಅವುಗಳ ಆರೋಗ್ಯಕರ ಸ್ವರೂಪದಲ್ಲಿ ಹಾಗೆಯೇ ಮುಂದುವರೆಯಬೇಕೆಂದು ತಣ್ಣಗೆ ಆಶಿಸುವಂತೆಯೂ ಕಂಡುಬರುತ್ತವೆ. ಕುಟುಂಬ ಸಂಬಂಧ, ಮನುಷ್ಯ ಸಂಬಂಧಗಳ ಆರೋಗ್ಯಕರ ಇರುವಿಕೆಯ ನಿರೀಕ್ಷೆಯಲ್ಲಿ ಸಾಂಸ್ಥಿಕಸ್ವರೂಪಗಳನ್ನು ಒಂದು ಹಂತಗಳಲ್ಲಿ ಅವರ ಬರಹಗಳು ಬೆಂಬಲಿಸುತ್ತವೆ ಕೂಡಾ. ಅದು ಅವರ ಬದುಕಿನ ತರ್ಕವೂ ಆಗಿರುವಂತಿದೆ.

ಕೆಲವೇ ಸಮಯ ಒಟ್ಟಿಗೆ ಕೆಲಸ ಮಾಡಿದ ನಾವಿಬ್ಬರೂ ಒಟ್ಟಿಗೇ ವರ್ಗಾವಣೆ ಪಡೆದು ಹಿರೇಕೆರೂರನ್ನು ಬಿಟ್ಟು ನಾನು ಉಡುಪಿಗೆ ಬಂದೆ ಅವರು ಧಾರವಾಡಕ್ಕೆ ಹೋದರು. ಆದರೆ ನಮ್ಮ ಗೆಳೆತನ ಹಾಗೆಯೇ ಉಳಿದಿತ್ತು. ಅವರ ಹಟಕ್ಕೆ ಕಟ್ಟುಬಿದ್ದು ಕಾರವಾರದ ‘ಕರಾವಳಿ ಮುಂಜಾವು’ ದಿನಪತ್ರಿಕೆಯಲ್ಲಿ ನಾನು ಒಂದು ವರ್ಷದ ತನಕ ಅಂಕಣವನ್ನೂ ಬರೆದೆ. ಹೀಗೆ ಸಲುಗೆಯಲ್ಲಿ ಒತ್ತಾಯಿಸಬಲ್ಲ, ಅಷ್ಟೇ ಸಲೀಸಾಗಿ ತಾನು ಕಂಡ ಮಿತಿಯನ್ನು ಹೇಳಬಲ್ಲ ಪ್ರೀತಿಯ ಜೋಗುರ ಇನ್ನಿಲ್ಲವಾದರು ಎಂಬುದು ನನ್ನನ್ನೂ ಒಳಗೊಂಡಂತೆ ಅನೇಕ ಗೆಳೆಯರಿಗೆ ಮರೆಯಲಾರದ ನೋವು. ಆದರೆ ಅಗಲಿ ಹೋದ ಈ ಪ್ರೀತಿಯ ಕರುಳು ನಮ್ಮೊಳಗೆ ಉಳಿಸಿ ಹೋದ ಗೆಳೆತನದ ತೇವ ಮತ್ತು ಅಗಲಿಕೆಯ ನೋವುಗಳಲ್ಲಿ ಆ ಜೀವದ ನೆನಪು ನಮ್ಮೊಳಗೆ ಹಸಿರಾಗಿರಲಿ ಎಂಬುದಷ್ಟೇ ಕರಗಿ ಹೋದ ಗೆಳೆಯನಿಗೆ ನಮ್ಮೆಲ್ಲರ ಹರಕೆ ಎಂದುಕೊಳ್ಳುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...