Homeಮುಖಪುಟಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

ಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

- Advertisement -
- Advertisement -

|ಜಯಪ್ರಕಾಶ್ ಶೆಟ್ಟಿ. ಹೆಚ್ |
ಸಹಪ್ರಾಧ್ಯಾಪಕರು, ತೆಂಕನಿಡಿಯೂರು.ಉಡುಪಿ.

2008ರ ನವೆಂಬರ್‍ನಲ್ಲಿ ನಾನು ನಿರೀಕ್ಷೆಯೇ ಮಾಡಿರದ ರಾಜಕೀಯ ಪ್ರೇರಿತವಾದ ಅಕಸ್ಮಾತ್ ವರ್ಗಾವಣೆಯೊಂದು ನನಗೆ ನಾನು ಈ ಹಿಂದೆ ಕಂಡಿರದ ಹಾವೇರಿಯ ಹಿರೇಕೆರೂರಿನ ದುರ್ಗಮ್ಮನ ಕೆರೆಯನ್ನು ಕಾಣಿಸುವ ಜೊತೆಗೆ ನೇರನಡೆನುಡಿಯ ಗೆಳೆಯನೊಬ್ಬನನ್ನೂ ಕಾಣಿಸಿತ್ತು. ನೀರಿರದ ಊರಿಗೆ ನನ್ನನ್ನು ಎತ್ತಿ ಎಸೆಯುವ ಕೇಡಿಗರ ಧಾವಂತದಲ್ಲಿ ತುಂಬಿದ ಕೆರೆಯಿರುವ ಊರಿಗೆ ಹೋಗಿ ಬಿದ್ದ ನನಗೆ ಅರಿಯದ ಊರಿನ ಅನಾಥನೆಂಬ ಆತಂಕವೇ ಬಾಧಿಸದಂತೆ ಮನುಷ್ಯಪ್ರೀತಿಯ ನೆರಳೂ ಸಿಕ್ಕಿತ್ತು. ಸಂಸಾರದಿಂದ ದೂರವಿದ್ದ ಸಂಕಟ ಇದ್ದುದು ನಿಜವಿದ್ದರೂ ನಾನಾಗ ಜೀವಪರ ಚಿಂತನೆಯ ಆಲೋಚನೆಗಳನ್ನು ನಿರ್ಭೀತವಾಗಿ ಹಂಚಿಕೊಳ್ಳುತ್ತಿದ್ದ ಸಮಾನಮನಸ್ಕನೊಬ್ಬನ ಗೆಳೆತನದ ಮೂಲಕ ಬರಡು ನೆಲದಿಂದ ಕಿಂಚಿತ್ತಾದರೂ ಪಾರಾದ ಸುಖವನ್ನೂ ಅನುಭವಿಸಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ಶೇರು, ಬಡ್ಡಿ, ಚೀಟಿ, ಹೊಲ ಮನಿ, ಸೈಟು ಇವ್ಯಾವುದರ ಗೋಜಿಗೆ ಬೀಳದೆ ವೃತ್ತಿ ಮತ್ತು ವಿದ್ಯಾರ್ಥಿಗಳ ಜೊತೆಗೆ ಅಪಾರವಾಗಿ ಬದುಕನ್ನು ಪ್ರೀತಿಸುತ್ತಿದ್ದ ಅಸಲಿ ಮೇಷ್ಟರೊಬ್ಬರ ಗೆಳೆತನ ಉಂಡಿದ್ದೆ. ಹೀಗೆ ಅಂದು ಬೆಸೆದುಕೊಂಡ ಗೆಳೆಯ ಜೋಗುರನೆಂಬ ಆ ಪ್ರೀತಿಯ ಕೊಂಡಿ ಮತ್ತೆಂದೂ ಕಳಚಿಕೊಂಡಿರಲಿಲ್ಲ.

ಜೋಗುರರು ನನ್ನಂತಹ ಕೆಲವೇ ಮಂದಿ ಸ್ನೇಹಿತರಿಗಷ್ಟೇ ಪರಿಚಿತರಲ್ಲ. ಸಮಾಜಶಾಸ್ತ್ರದ ಉಪನ್ಯಾಸಕನಾಗಿ, ಹವ್ಯಾಸಿ ಪತ್ರಕರ್ತ, ಕತೆಗಾರ, ಸಮೂಹಪರ ಚಿಂತನೆಯ ಬರಹಗಾರ, ಅತ್ಯುತ್ತಮ ವಾಗ್ಮಿಯಾಗಿ ತನ್ನನ್ನು ಗುರುತಿಸಿಕೊಂಡ ಜೋಗುರ ಕನ್ನಡದ ಓದುಗರಿಗೆ ಚಿರಪರಿಚಿತರು. ಸಾವಿಗೆ ಸಮೀಪದಲ್ಲಿದ್ದಾಗಲೂ ಅಕ್ಷರ ಮತ್ತು ಬದುಕುಗಳೆರಡರ ಅಪಾರಪ್ರೀತಿಯಲ್ಲಿ ಜೀವಂತವಾಗಿ ಉಳಿದವರು. ಈ ಲೋಕದ ಸಾಮಾಜಿಕ ಆಗುಹೋಗುಗಳು ಮತ್ತು ರಾಜಕೀಯದ ಸೂಕ್ಷ್ಮಗಳ ಕುರಿತಂತೆ ಅನೇಕ ಜನಪರ ಚಳುವಳಿಗಳಲ್ಲಿ ಸಮಾನಮನಸ್ಕರೊಂದಿಗೆ ಪ್ರಗತಿಪರ ವಿವೇಕದೊಂದಿಗೆ ಬೆರೆಯುತ್ತಿದ್ದವರು. ಸಂವೇದನೆಗಳು ಸತ್ತು ಮತಿಹೀನ ಉದ್ರೇಕಗಳೇ ಮಿಂಚುತ್ತ್ತಿರುವ ಜಗತ್ತಿನಲ್ಲಿ ಒಬ್ಬ ಬರಹಗಾರನಿಗೆ ಇರುವ ಹೊಣೆಗಾರಿಕೆಯ ಮಹತ್ವವನ್ನು ಅರಿತವರು.

ಮನುಷ್ಯನಾಗಿ ಸ್ವಯಂ ಕಷ್ಟದ ಬದುಕನ್ನು ಬದುಕಿದ ಅನುಭವದ ಹಿನ್ನೆಲೆಯುಳ್ಳ ಜೋಗುರರು ಬಡತನದ ಬಗೆಗೆ ಎಂದೂ ಅವಹೇಳನ ಮಾಡಿದವರಲ್ಲ. ಈ ನೆಲದ ಜಾತಿಜಾಡ್ಯದ ಪರ ವಹಿಸಿದ ಸಣ್ಣತನದವರೂ ಅಲ್ಲ. ಜಾತಿಯನ್ನು ವಿರೋಧಿಸಿದ ಜೋಗುರರು ಸ್ವಯಂ ಅಂತಹ ಉದಾಹರಣೆಯಾಗಿ ಬದುಕಿದವರು. ಮಾತನ್ನು ಕೃತಿಯಾಗಿಸುವ ಬಸವಪರಂಪರೆಯ ನಿಜ ವಾರಸುದಾರನಂತೆ ಜಾತಿಯ ಕಕ್ಷೆಯನ್ನು ಮೀರಿ ವಿವಾಹ ಸಂಬಂಧವನ್ನು ಹೊಂದಿದ್ದಷ್ಟೇ ಅಲ್ಲ, ಅದನ್ನು ಅತ್ಯಂತ ಪ್ರೀತಿಯಿಂದ ಬದುಕಿದವರು. ಆದರೆ ಜೋಗುರರ ಬರಹಗಳನ್ನು ಗಮನಿಸುವುದಾದರೆ ಆ ಬರಹಗಳಲ್ಲಿ ಇರುವ ವ್ಯವಸ್ಥೆಯನ್ನು ನಿರಾಕರಿಸಲೇಬೇಕೆಂಬ ಹಟವೇನೂ ಇಲ್ಲ. ಮುಖ್ಯವಾಗಿ ಅವು ಸಾಮಾಜಿಕ ಸ್ವಾಸ್ಥ್ಯದ ಕಡೆಗೆ ಹೆಚ್ಚು ಒಲಿದವುಗಳು. ಅವರ ಅನೇಕ ಬರಹಗಳು ಕೆಲವೊಂದು ಸಾಮಾಜಿಕಸಂಸ್ಥೆಗಳನ್ನು ಅವುಗಳ ಆರೋಗ್ಯಕರ ಸ್ವರೂಪದಲ್ಲಿ ಹಾಗೆಯೇ ಮುಂದುವರೆಯಬೇಕೆಂದು ತಣ್ಣಗೆ ಆಶಿಸುವಂತೆಯೂ ಕಂಡುಬರುತ್ತವೆ. ಕುಟುಂಬ ಸಂಬಂಧ, ಮನುಷ್ಯ ಸಂಬಂಧಗಳ ಆರೋಗ್ಯಕರ ಇರುವಿಕೆಯ ನಿರೀಕ್ಷೆಯಲ್ಲಿ ಸಾಂಸ್ಥಿಕಸ್ವರೂಪಗಳನ್ನು ಒಂದು ಹಂತಗಳಲ್ಲಿ ಅವರ ಬರಹಗಳು ಬೆಂಬಲಿಸುತ್ತವೆ ಕೂಡಾ. ಅದು ಅವರ ಬದುಕಿನ ತರ್ಕವೂ ಆಗಿರುವಂತಿದೆ.

ಕೆಲವೇ ಸಮಯ ಒಟ್ಟಿಗೆ ಕೆಲಸ ಮಾಡಿದ ನಾವಿಬ್ಬರೂ ಒಟ್ಟಿಗೇ ವರ್ಗಾವಣೆ ಪಡೆದು ಹಿರೇಕೆರೂರನ್ನು ಬಿಟ್ಟು ನಾನು ಉಡುಪಿಗೆ ಬಂದೆ ಅವರು ಧಾರವಾಡಕ್ಕೆ ಹೋದರು. ಆದರೆ ನಮ್ಮ ಗೆಳೆತನ ಹಾಗೆಯೇ ಉಳಿದಿತ್ತು. ಅವರ ಹಟಕ್ಕೆ ಕಟ್ಟುಬಿದ್ದು ಕಾರವಾರದ ‘ಕರಾವಳಿ ಮುಂಜಾವು’ ದಿನಪತ್ರಿಕೆಯಲ್ಲಿ ನಾನು ಒಂದು ವರ್ಷದ ತನಕ ಅಂಕಣವನ್ನೂ ಬರೆದೆ. ಹೀಗೆ ಸಲುಗೆಯಲ್ಲಿ ಒತ್ತಾಯಿಸಬಲ್ಲ, ಅಷ್ಟೇ ಸಲೀಸಾಗಿ ತಾನು ಕಂಡ ಮಿತಿಯನ್ನು ಹೇಳಬಲ್ಲ ಪ್ರೀತಿಯ ಜೋಗುರ ಇನ್ನಿಲ್ಲವಾದರು ಎಂಬುದು ನನ್ನನ್ನೂ ಒಳಗೊಂಡಂತೆ ಅನೇಕ ಗೆಳೆಯರಿಗೆ ಮರೆಯಲಾರದ ನೋವು. ಆದರೆ ಅಗಲಿ ಹೋದ ಈ ಪ್ರೀತಿಯ ಕರುಳು ನಮ್ಮೊಳಗೆ ಉಳಿಸಿ ಹೋದ ಗೆಳೆತನದ ತೇವ ಮತ್ತು ಅಗಲಿಕೆಯ ನೋವುಗಳಲ್ಲಿ ಆ ಜೀವದ ನೆನಪು ನಮ್ಮೊಳಗೆ ಹಸಿರಾಗಿರಲಿ ಎಂಬುದಷ್ಟೇ ಕರಗಿ ಹೋದ ಗೆಳೆಯನಿಗೆ ನಮ್ಮೆಲ್ಲರ ಹರಕೆ ಎಂದುಕೊಳ್ಳುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...