Homeಮುಖಪುಟಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಮಾಡಿದ ಮೋಡಿ ಗೊತ್ತೆ?

ಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಮಾಡಿದ ಮೋಡಿ ಗೊತ್ತೆ?

- Advertisement -
- Advertisement -

ʻನೀಂ ಕಡು ಕಾಫಿ ಬಲ್ಲೆ, ಕಡು ಖೋಟಾ ಬಲ್ಲೆಯಾ?ʼ

ʻನಿನ್ನೆ ಹುಟ್ಟಿದವನಿಗಿಂತ ಇವತ್ತು ಹುಟ್ಟಿದವ ಶಾಣ್ಯಾʼ ಅಂತ ಒಂದು ಗಾದಿ ಮಾತು ಅದ. ಅದು ಬ್ಯಾರೆ ಎಲ್ಲೆರ ಇದು ಸುಳ್ಳು ಆಗಬಹುದು, ಆದರ ತಂತ್ರಜ್ಞಾನದ ವಿಷಯದಾಗ ಅಗದೀ ಖರೆ.

ನಮ್ಮ ಯುವ ಸಾಫ್ಟವೇರು ತಂತ್ರಜ್ಞರು ಒಂದು ಕಂಪ್ಯೂಟರು, ಒಂದು ಇಂಟರನೆಟ್ಟು ಇಟಗೊಂಡು ಏನೇನೆಲ್ಲಾ ಮಾಡತಾರ ಅಂದರ ಕೇಳಬ್ಯಾಡರಿ. ಅವರ ಮಾಡಿದ ಒಂದೊಂದ ಕೆಲಸದ ಪರಿಣಾಮ ತಿಳಕೊಳ್ಳಿಕ್ಕೆ ನಮಗ ಭಾಳ ಟೈಂ ಬೇಕಾಗತದ. ಒಂದು ತಿಳಕೊಳ್ಳೋದರಾಗ ಇನ್ನೊಂದ ಬಂದಿರತದ.

ಕೆಲವೊಮ್ಮೆ ತಿಳಿಯಂಗೇ ಇಲ್ಲ.

ಈಗ ಅಂಥಾದ್ದೊಂದ ಬಂದದ. ಅದರ ಹೆಸರು ಕಡು ಖೋಟಾ. ಖೋಟಾ ಅನ್ನೋದು ನಮಗ ಎಲ್ಲಾರಿಗೂ ಗೊತ್ತು. ದಿನಾ ಅದನ್ನ ನೋಡತೇವಿ, ಕೇಳತೇವಿ, ನಂಬತೇವಿ. ಈಗ ಇದೇನಪಾ ಕಡು ಖೋಟಾ?

ಕಡು ಖೋಟಾ ಅಥವಾ ಡೀಪ್ ಫೇಕು ಅನ್ನೋ ತಂತ್ರಜ್ಞಾನ ನಮ್ಮ ಎಲ್ಲಾ ನಂಬಿಕೆಗಳನ್ನ, ತಿಳಿವಳಿಕೆಯನ್ನ ಬುಡಮೇಲು ಮಾಡುವಷ್ಟು ಶಕ್ತಿ ಇರುವಂಥಾದ್ದು. ಇದು ಮುಂದೆ ಎಂದೋ ಬರೋದಲ್ಲಾ. ಈಗಾಗಲೇ ಬಂದು ಬಿಟ್ಟದ. ಬರೇ ಇಂಗ್ಲಂಡು- ಅಮೆರಿಕಾದಾಗ ಬಂದಿಲ್ಲಾ, ನಮ್ಮ ಭಾರತ ವರ್ಷದಾಗ ಬಂದು ಬಿಟ್ಟದ.

ಮೊನ್ನೆ ದೆಹಲಿ ಚುನಾವಣೆಯೊಳಗ ಇದರ ಉಪಯೋಗ ಆಗೇದ ಅಂತ ತಂತ್ರಜ್ಞಾನ ಕಂಪನಿ ವೈಸ್ ವರದಿ ಮಾಡೇದ.

ಕಡು ಖೋಟಾ ಅಂದರ ತುಂಬ ತೀಕ್ಷ್ಣ ತಂತ್ರಜ್ಞಾನ ಉಪಯೋಗಿಸಿ ಸುಳ್ಳು ಸುಳ್ಳು ವಿಡಿಯೋಗಳನ್ನು ತಯಾರು ಮಾಡೋದು. ಯಾವುದು ಅಸಾಧ್ಯವೋ, ಯಾವುದು ಆಗಲಿಕ್ಕೆ ಸಾಧ್ಯವೇ ಇಲ್ಲವೋ ಅದನ್ನ ಆಗೇ ಬಿಟ್ಟದ ಅನ್ನೋಹಂಗ ತೋರಸೋದು. ಇದು ಸಣ್ಣ ಹುಡುಗರ ವಿಡಿಯೋಗೇಮೋ, ಅನಿಮೇಷನ್ ಕಾರ್ಟೂನೋ ಇದ್ದರ ಸಮಸ್ಯೆ ಇರಲಿಲ್ಲ. ಆದರ ಇದು ಆಗತಾ ಇರೋದು ಸುದ್ದಿ ಮಾಧ್ಯಮದಾಗ. ಕಮಲ ಹಾಸನ ಅವರ ಇಂಡಿಯನ್ ಸಿನಿಮಾದಾಗ ನೇತಾಜಿ ಜೊತೆಗೆ ಚಿತ್ರದ ನಾಯಕ ಓಡಾಡಿದಂಗ ಮಾಡಿದ್ದರು. ಆದರ ಅದು ಕೃತಕ ಅಂತ ಗೊತ್ತಾಗತಿತ್ತು. ಕಡು ಖೋಟಾ ಅಂದರ ಗೊತ್ತೇ ಆಗದ ಹಂಗ ಕಲಬೆರಕೆ ಮಾಡೋ ಕಲೆ. ಇದು ಎಷ್ಟು ಅಪಾಯಕಾರಿ ಅಂತ ಸ್ವಲ್ಪ ವಿಚಾರ ಮಾಡಿದರ ತಿಳೀತದ.

ಉದಾಹರಣೆಗೆ ಕಳೆದ ವಾರ ಇಂಗ್ಲಂಡಿನ ಇಂಜಿನಿಯರು ಒಬ್ಬ ಕನ್ಸರ್ವೇಟಿವ್ ಪಕ್ಷದ ಬೋರಿಸ ಜಾನಸನ್ ಅವರು ಲಿಬರಲ್ ಪಕ್ಷದ ಸಭೆಯೊಳಗ ಭಾಷಣ ಮಾಡಿದಂಗ, ಲಿಬರಲ್ ಪಕ್ಷದ ಜಿಮ್ಮಿ ಕಾರ್ಬಿನ್ ಅವರು ವಿರೋಧ ಪಕ್ಷದ ಸಮಾರಂಭದಾಗ ಸನ್ಮಾನ ಸ್ವೀಕರಿಸಿದ ಹಂಗ ವಿಡಿಯೋ ತಯಾರು ಮಾಡಿಬಿಟ್ಟ. ಇದನ್ನ ಭಾಳ ಮಂದಿ ನಂಬಿ ಷೇರು, ಲೈಕು, ಕಾಮೆಂಟು ಮಾಡಿದರು.

ಗ್ಯಾಬೋನ್ ದೇಶದ ಅಧ್ಯಕ್ಷ ಅಲಿ ಬೊಂಗೋ ಅವರು ಮಾಡಿದ ಭಾಷಣದ ವಿಡಿಯೋ ತುಣುಕಿನಿಂದ ಅವರ ದೇಶದಾಗ ಒಂದು ಕ್ಷಿಪ್ರಕ್ರಾಂತಿ ಆತು. ಹಿಂಸಾಚಾರ ಆತು. ಆದರ ಆ ಭಾಷಣ ಅವರು ಮಾಡಿರಲೇ ಇಲ್ಲ. ಅವರ ಹಳೇ ವಿಡಿಯೋಗಳ ತುಣುಕುಗಳನ್ನು ಸೇರಿಸಿ, ಅವಕ್ಕೆ ಹೊಸಾ ಅಂಗಿ- ಪ್ಯಾಂಟು ಹಾಕಿ ಖೋಟಾ ವಿಡಿಯೋ ತಯಾರು ಮಾಡಲಾಯಿತು. ಅದು ಇಷ್ಟೆಲ್ಲಾ ಘೋಟಾಲಾ ಮಾಡಿತು.

ಕಡು ಖೋಟಾ ವಿಡಿಯೋ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ಹೇಳಿ ಸ್ಲೋವಾಕಿಯಾದ ಒಬ್ಬ ಪುಣ್ಯಾತ್ಮ ಪ್ರಯತ್ನ ಮಾಡಲಿಕ್ಕೆ ಹತ್ಯಾನ. ಕಂಟ್ರೋಲ್- ಶಿಫ್ಟ್ – ಫೇಸ್ ಅನ್ನೋ ಯೂಟ್ಯೂಬ ವಿಡಿಯೋ ಸರಣಿಯೊಳಗ ಆತ ಇಲ್ಲಿಯವರೆಗೂ 20 ಕಡು ಖೋಟಾ ವಿಡಿಯೋಗಳನ್ನ ಹಾಕ್ಯಾನ. ಅದರಾಗಿನ ಉದಾಹರಣೆ ಅಂದರ 1973 ರಲ್ಲಿ ತೀರಿ ಹೋಗಿರೋ ನಟ ಬ್ರೂಸ್ ಲೀ ಯನ್ನು ಹೀರೋ ಮಾಡಿ 2010 ಸಿನಿಮಾಗಳನ್ನು ಮರು ತಯಾರಿ ಮಾಡೋದು, ಬ್ಯಾಟ ಮ್ಯಾನಿನ ಜೋಕರ ಪಾತ್ರ ತೊಗೊಂಡು ಹೋಗಿ ಇನ್ನಾವುದೋ ಸಂಬಂಧ ಇರಲಾರದ ಸಿನಿಮಾದಾಗ ವಿಲನ್ ಮಾಡೋದು, ಈಗ ಜೀವಂತ ಇರಲಾರದ ಡೇವಿಡ್ ಬೋವಿ ಅವರಂತಹಾ ಪಾಪ್- ರಾಕ್ ಹಾಡುಗಾರರ ಬಾಯಾಗಿಂದಾ ಹೊಸಾ ಹಾಡುಗಳನ್ನು ಹೇಳಿಸೋದು, ಇತ್ಯಾದಿ.

ಉದಾಹರಣೆ ನೋಡಿ:

ನೀವು ಕಲ್ಪನೆ ಮಾಡಿಕೊರಿ. ಇವತ್ತಿನ ಚಲನಚಿತ್ರ ನಟಿಯರು ಕಪ್ಪು- ಬಿಳುಪಿನ ಸಿನಿಮಾದಾಗ ಮಾಡೋದು, ಅಥವಾ ಮೀನಾಕುಮಾರಿ, ಉದಯ ಚಂದ್ರಿಕಾ ಸರ್ವಮಂಗಳಾ ಇವರೆಲ್ಲಾ ಇವನೇ ಶ್ರೀಮನ್ನಾರಾಯಣ, ಕೆಜಿಎಫ್ ನಂತಾ ಸಿನಿಮಾದಾಗ ಮಾಡೋದು ಹೆಂಗಿರತದ?

ಇಂಥದೆಲ್ಲಾ ಮಸ್ತ ಮಜಾ ಇರಬಹದು ಬಿಡ್ರಿ.

ಆದರ ಇಂಥಾದೆಲ್ಲಾ ರಾಜಕೀಯದಾಗ ಬಂದರ? ಏನಾದೀತು?

ಉದಾಹರಣೆಗೆ ರಾಹುಲ ಗಾಂಧಿ ನರೇಂದ್ರಮೋದಿ ಚುನಾವಣಾ ಪ್ರಚಾರಕ್ಕ ನಿಂತರ? ದೇವೇಗೌಡರೂ- ಅಮಿತ ಷಾ ಆಲಿಂಗನ ಮಾಡಿಕೊಂಡ ವಿಡಿಯೋ ನಿಮ್ಮ ಫೋನಿನ್ಯಾಗ ಒಡಮೂಡಿದರ? ನೆಹರೂ – ಜಿನ್ನಾ ಇಬ್ಬರೂ ಅಣ್ಣ- ತಮ್ಮಾ ಅಂತ ವಾಟ್ಸಪ್ಪು ಮೆಸೇಜು ಈಗಾಗಲೇ ಬರಲಿಕ್ಕೆ ಹತ್ತೇದ. ಅವರಿಬ್ಬರೂ ನಾವು ಒಂದೇ ತಾಯಿಯ ಮಕ್ಕಳು ಅಂತ ಹೇಳೋ ವಿಡಿಯೋ ಹುಟ್ಟಿಗೊಂಡರ? ನನ್ನನ್ನ ಯಾರೂ ಹತ್ಯೆ ಮಾಡಿಲ್ಲ. ಸುಳ್ಳ ಸುಳ್ಳ ಯರ‍್ಯಾರನ್ನೋ ಬಯ್ಯಬ್ಯಾಡ್ರಿ. ಸಬಕೋ ಸನಮತಿ ದೇ ಭಗವಾನ ಅಂತ ಗಾಂಧಿ ದೇಶವನ್ನು ಸಂಬೋಧಿಸಿ ಮಾತಾಡೋ ವಿಡಿಯೋ ನಾಳೆ ಟೀವಿಯೊಳಗ ಪ್ರಸಾರ ಆದರ? ಇಂಥಾವೆಲ್ಲಾ ಸುರು ಆದರ ಸ್ವರ್ಗಕ್ಕೆ ಕಿಚ್ಚು ಹಚ್ಚೋದು ಅಲ್ಲಾ, ನರಕಕ್ಕೆ ಕಿಚ್ಚು ಹಚ್ಚೋದು ಆಗತೇತಿ.

ಯಾವುದು ಕಡು ಖೋಟಾ, ಯಾವುದು ಅಲ್ಲಾ ಅಂತ ಕಂಡುಹಿಡಿಯೋ ತಂತ್ರಜ್ಞಾನ ಇನ್ನೂ ಬಂದಿಲ್ಲಂತ. ಕೃತಕ ಬುದ್ಧಿಮತ್ತೆ ಕ್ಷೇತ್ರ ಬೆಳದಂಗ ಬರಬಹುದಂತ. ಆದರ ಪೇಪರು- ಫೋನಿನ್ಯಾಗ ಬಂದ ಖೋಟಾ ಸುದ್ದಿಗಳನ್ನು ವರೆಗೆ ಹಚ್ಚಲು ನಮ್ಮ ಜನಾ ತಯಾರಿಲ್ಲಾ ಎಲ್ಲಾನೂ ಹುಯ್ಯ ಅಂತ ನಂಬತಾರ. ಇನ್ನ ಕಡು ಖೋಟಾ ವಿಡಿಯೋ ಪ್ರಸಾರ ಆಗಲಿಕ್ಕೆ ಹತ್ತಿದವಂದರ ಏನಾದೀತ?

ಅಂದಂಗ ಬಿಜೆಪಿ ದೆಹಲಿ ಅಧ್ಯಕ್ಷ ಮನೋಜ ತಿವಾರಿ ಅವರು ಬೇರೆ ಬೇರೆ ಪೋಷಾಕು ಧರಿಸಿ ನಾಲ್ಕು -ಐದು ಭಾಷೆಯೊಳಗ ಮತದಾರರಿಗೆ ಮತ ಕೇಳೋ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರಂತ. ಅವರಿಗೆ ಅಷ್ಟು ಭಾಷಾನ ಬರಂಗಿಲ್ಲ, ಬಂದರೂ ಅಷ್ಟು ಸುಲಲಿತವಾಗಿ ಮಾತಾಡಲಿಕ್ಕೆ ಆಗಂಗಿಲ್ಲ ಅಂತ ಅವರನ್ನ ಬಲ್ಲವರಿಗೆ ಖಾತ್ರಿ ಆತಂತ. ಹಿಂಗಾಗಿ ಅವು ಕಡು ಖೋಟಾ ಅಂತ ಎಲ್ಲಾರಿಗೂ ಗುಮಾನಿ ಬಂತಂತ. ಆ ನಂತರ ವೈಸ್ ಸಂಸ್ಥೆಯ ವರದಿ ಬಂತು, ಅದು ಬ್ಯಾರೆ ವಿಷಯ. ಇದು ಅಂತ್ಯ ಅಲ್ಲ, ಆರಂಭ ಅನ್ನೋದನ್ನ ನಾವು ತಿಳಕೋಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...