Homeಮುಖಪುಟಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಮಾಡಿದ ಮೋಡಿ ಗೊತ್ತೆ?

ಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಮಾಡಿದ ಮೋಡಿ ಗೊತ್ತೆ?

- Advertisement -
- Advertisement -

ʻನೀಂ ಕಡು ಕಾಫಿ ಬಲ್ಲೆ, ಕಡು ಖೋಟಾ ಬಲ್ಲೆಯಾ?ʼ

ʻನಿನ್ನೆ ಹುಟ್ಟಿದವನಿಗಿಂತ ಇವತ್ತು ಹುಟ್ಟಿದವ ಶಾಣ್ಯಾʼ ಅಂತ ಒಂದು ಗಾದಿ ಮಾತು ಅದ. ಅದು ಬ್ಯಾರೆ ಎಲ್ಲೆರ ಇದು ಸುಳ್ಳು ಆಗಬಹುದು, ಆದರ ತಂತ್ರಜ್ಞಾನದ ವಿಷಯದಾಗ ಅಗದೀ ಖರೆ.

ನಮ್ಮ ಯುವ ಸಾಫ್ಟವೇರು ತಂತ್ರಜ್ಞರು ಒಂದು ಕಂಪ್ಯೂಟರು, ಒಂದು ಇಂಟರನೆಟ್ಟು ಇಟಗೊಂಡು ಏನೇನೆಲ್ಲಾ ಮಾಡತಾರ ಅಂದರ ಕೇಳಬ್ಯಾಡರಿ. ಅವರ ಮಾಡಿದ ಒಂದೊಂದ ಕೆಲಸದ ಪರಿಣಾಮ ತಿಳಕೊಳ್ಳಿಕ್ಕೆ ನಮಗ ಭಾಳ ಟೈಂ ಬೇಕಾಗತದ. ಒಂದು ತಿಳಕೊಳ್ಳೋದರಾಗ ಇನ್ನೊಂದ ಬಂದಿರತದ.

ಕೆಲವೊಮ್ಮೆ ತಿಳಿಯಂಗೇ ಇಲ್ಲ.

ಈಗ ಅಂಥಾದ್ದೊಂದ ಬಂದದ. ಅದರ ಹೆಸರು ಕಡು ಖೋಟಾ. ಖೋಟಾ ಅನ್ನೋದು ನಮಗ ಎಲ್ಲಾರಿಗೂ ಗೊತ್ತು. ದಿನಾ ಅದನ್ನ ನೋಡತೇವಿ, ಕೇಳತೇವಿ, ನಂಬತೇವಿ. ಈಗ ಇದೇನಪಾ ಕಡು ಖೋಟಾ?

ಕಡು ಖೋಟಾ ಅಥವಾ ಡೀಪ್ ಫೇಕು ಅನ್ನೋ ತಂತ್ರಜ್ಞಾನ ನಮ್ಮ ಎಲ್ಲಾ ನಂಬಿಕೆಗಳನ್ನ, ತಿಳಿವಳಿಕೆಯನ್ನ ಬುಡಮೇಲು ಮಾಡುವಷ್ಟು ಶಕ್ತಿ ಇರುವಂಥಾದ್ದು. ಇದು ಮುಂದೆ ಎಂದೋ ಬರೋದಲ್ಲಾ. ಈಗಾಗಲೇ ಬಂದು ಬಿಟ್ಟದ. ಬರೇ ಇಂಗ್ಲಂಡು- ಅಮೆರಿಕಾದಾಗ ಬಂದಿಲ್ಲಾ, ನಮ್ಮ ಭಾರತ ವರ್ಷದಾಗ ಬಂದು ಬಿಟ್ಟದ.

ಮೊನ್ನೆ ದೆಹಲಿ ಚುನಾವಣೆಯೊಳಗ ಇದರ ಉಪಯೋಗ ಆಗೇದ ಅಂತ ತಂತ್ರಜ್ಞಾನ ಕಂಪನಿ ವೈಸ್ ವರದಿ ಮಾಡೇದ.

ಕಡು ಖೋಟಾ ಅಂದರ ತುಂಬ ತೀಕ್ಷ್ಣ ತಂತ್ರಜ್ಞಾನ ಉಪಯೋಗಿಸಿ ಸುಳ್ಳು ಸುಳ್ಳು ವಿಡಿಯೋಗಳನ್ನು ತಯಾರು ಮಾಡೋದು. ಯಾವುದು ಅಸಾಧ್ಯವೋ, ಯಾವುದು ಆಗಲಿಕ್ಕೆ ಸಾಧ್ಯವೇ ಇಲ್ಲವೋ ಅದನ್ನ ಆಗೇ ಬಿಟ್ಟದ ಅನ್ನೋಹಂಗ ತೋರಸೋದು. ಇದು ಸಣ್ಣ ಹುಡುಗರ ವಿಡಿಯೋಗೇಮೋ, ಅನಿಮೇಷನ್ ಕಾರ್ಟೂನೋ ಇದ್ದರ ಸಮಸ್ಯೆ ಇರಲಿಲ್ಲ. ಆದರ ಇದು ಆಗತಾ ಇರೋದು ಸುದ್ದಿ ಮಾಧ್ಯಮದಾಗ. ಕಮಲ ಹಾಸನ ಅವರ ಇಂಡಿಯನ್ ಸಿನಿಮಾದಾಗ ನೇತಾಜಿ ಜೊತೆಗೆ ಚಿತ್ರದ ನಾಯಕ ಓಡಾಡಿದಂಗ ಮಾಡಿದ್ದರು. ಆದರ ಅದು ಕೃತಕ ಅಂತ ಗೊತ್ತಾಗತಿತ್ತು. ಕಡು ಖೋಟಾ ಅಂದರ ಗೊತ್ತೇ ಆಗದ ಹಂಗ ಕಲಬೆರಕೆ ಮಾಡೋ ಕಲೆ. ಇದು ಎಷ್ಟು ಅಪಾಯಕಾರಿ ಅಂತ ಸ್ವಲ್ಪ ವಿಚಾರ ಮಾಡಿದರ ತಿಳೀತದ.

ಉದಾಹರಣೆಗೆ ಕಳೆದ ವಾರ ಇಂಗ್ಲಂಡಿನ ಇಂಜಿನಿಯರು ಒಬ್ಬ ಕನ್ಸರ್ವೇಟಿವ್ ಪಕ್ಷದ ಬೋರಿಸ ಜಾನಸನ್ ಅವರು ಲಿಬರಲ್ ಪಕ್ಷದ ಸಭೆಯೊಳಗ ಭಾಷಣ ಮಾಡಿದಂಗ, ಲಿಬರಲ್ ಪಕ್ಷದ ಜಿಮ್ಮಿ ಕಾರ್ಬಿನ್ ಅವರು ವಿರೋಧ ಪಕ್ಷದ ಸಮಾರಂಭದಾಗ ಸನ್ಮಾನ ಸ್ವೀಕರಿಸಿದ ಹಂಗ ವಿಡಿಯೋ ತಯಾರು ಮಾಡಿಬಿಟ್ಟ. ಇದನ್ನ ಭಾಳ ಮಂದಿ ನಂಬಿ ಷೇರು, ಲೈಕು, ಕಾಮೆಂಟು ಮಾಡಿದರು.

ಗ್ಯಾಬೋನ್ ದೇಶದ ಅಧ್ಯಕ್ಷ ಅಲಿ ಬೊಂಗೋ ಅವರು ಮಾಡಿದ ಭಾಷಣದ ವಿಡಿಯೋ ತುಣುಕಿನಿಂದ ಅವರ ದೇಶದಾಗ ಒಂದು ಕ್ಷಿಪ್ರಕ್ರಾಂತಿ ಆತು. ಹಿಂಸಾಚಾರ ಆತು. ಆದರ ಆ ಭಾಷಣ ಅವರು ಮಾಡಿರಲೇ ಇಲ್ಲ. ಅವರ ಹಳೇ ವಿಡಿಯೋಗಳ ತುಣುಕುಗಳನ್ನು ಸೇರಿಸಿ, ಅವಕ್ಕೆ ಹೊಸಾ ಅಂಗಿ- ಪ್ಯಾಂಟು ಹಾಕಿ ಖೋಟಾ ವಿಡಿಯೋ ತಯಾರು ಮಾಡಲಾಯಿತು. ಅದು ಇಷ್ಟೆಲ್ಲಾ ಘೋಟಾಲಾ ಮಾಡಿತು.

ಕಡು ಖೋಟಾ ವಿಡಿಯೋ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ಹೇಳಿ ಸ್ಲೋವಾಕಿಯಾದ ಒಬ್ಬ ಪುಣ್ಯಾತ್ಮ ಪ್ರಯತ್ನ ಮಾಡಲಿಕ್ಕೆ ಹತ್ಯಾನ. ಕಂಟ್ರೋಲ್- ಶಿಫ್ಟ್ – ಫೇಸ್ ಅನ್ನೋ ಯೂಟ್ಯೂಬ ವಿಡಿಯೋ ಸರಣಿಯೊಳಗ ಆತ ಇಲ್ಲಿಯವರೆಗೂ 20 ಕಡು ಖೋಟಾ ವಿಡಿಯೋಗಳನ್ನ ಹಾಕ್ಯಾನ. ಅದರಾಗಿನ ಉದಾಹರಣೆ ಅಂದರ 1973 ರಲ್ಲಿ ತೀರಿ ಹೋಗಿರೋ ನಟ ಬ್ರೂಸ್ ಲೀ ಯನ್ನು ಹೀರೋ ಮಾಡಿ 2010 ಸಿನಿಮಾಗಳನ್ನು ಮರು ತಯಾರಿ ಮಾಡೋದು, ಬ್ಯಾಟ ಮ್ಯಾನಿನ ಜೋಕರ ಪಾತ್ರ ತೊಗೊಂಡು ಹೋಗಿ ಇನ್ನಾವುದೋ ಸಂಬಂಧ ಇರಲಾರದ ಸಿನಿಮಾದಾಗ ವಿಲನ್ ಮಾಡೋದು, ಈಗ ಜೀವಂತ ಇರಲಾರದ ಡೇವಿಡ್ ಬೋವಿ ಅವರಂತಹಾ ಪಾಪ್- ರಾಕ್ ಹಾಡುಗಾರರ ಬಾಯಾಗಿಂದಾ ಹೊಸಾ ಹಾಡುಗಳನ್ನು ಹೇಳಿಸೋದು, ಇತ್ಯಾದಿ.

ಉದಾಹರಣೆ ನೋಡಿ:

ನೀವು ಕಲ್ಪನೆ ಮಾಡಿಕೊರಿ. ಇವತ್ತಿನ ಚಲನಚಿತ್ರ ನಟಿಯರು ಕಪ್ಪು- ಬಿಳುಪಿನ ಸಿನಿಮಾದಾಗ ಮಾಡೋದು, ಅಥವಾ ಮೀನಾಕುಮಾರಿ, ಉದಯ ಚಂದ್ರಿಕಾ ಸರ್ವಮಂಗಳಾ ಇವರೆಲ್ಲಾ ಇವನೇ ಶ್ರೀಮನ್ನಾರಾಯಣ, ಕೆಜಿಎಫ್ ನಂತಾ ಸಿನಿಮಾದಾಗ ಮಾಡೋದು ಹೆಂಗಿರತದ?

ಇಂಥದೆಲ್ಲಾ ಮಸ್ತ ಮಜಾ ಇರಬಹದು ಬಿಡ್ರಿ.

ಆದರ ಇಂಥಾದೆಲ್ಲಾ ರಾಜಕೀಯದಾಗ ಬಂದರ? ಏನಾದೀತು?

ಉದಾಹರಣೆಗೆ ರಾಹುಲ ಗಾಂಧಿ ನರೇಂದ್ರಮೋದಿ ಚುನಾವಣಾ ಪ್ರಚಾರಕ್ಕ ನಿಂತರ? ದೇವೇಗೌಡರೂ- ಅಮಿತ ಷಾ ಆಲಿಂಗನ ಮಾಡಿಕೊಂಡ ವಿಡಿಯೋ ನಿಮ್ಮ ಫೋನಿನ್ಯಾಗ ಒಡಮೂಡಿದರ? ನೆಹರೂ – ಜಿನ್ನಾ ಇಬ್ಬರೂ ಅಣ್ಣ- ತಮ್ಮಾ ಅಂತ ವಾಟ್ಸಪ್ಪು ಮೆಸೇಜು ಈಗಾಗಲೇ ಬರಲಿಕ್ಕೆ ಹತ್ತೇದ. ಅವರಿಬ್ಬರೂ ನಾವು ಒಂದೇ ತಾಯಿಯ ಮಕ್ಕಳು ಅಂತ ಹೇಳೋ ವಿಡಿಯೋ ಹುಟ್ಟಿಗೊಂಡರ? ನನ್ನನ್ನ ಯಾರೂ ಹತ್ಯೆ ಮಾಡಿಲ್ಲ. ಸುಳ್ಳ ಸುಳ್ಳ ಯರ‍್ಯಾರನ್ನೋ ಬಯ್ಯಬ್ಯಾಡ್ರಿ. ಸಬಕೋ ಸನಮತಿ ದೇ ಭಗವಾನ ಅಂತ ಗಾಂಧಿ ದೇಶವನ್ನು ಸಂಬೋಧಿಸಿ ಮಾತಾಡೋ ವಿಡಿಯೋ ನಾಳೆ ಟೀವಿಯೊಳಗ ಪ್ರಸಾರ ಆದರ? ಇಂಥಾವೆಲ್ಲಾ ಸುರು ಆದರ ಸ್ವರ್ಗಕ್ಕೆ ಕಿಚ್ಚು ಹಚ್ಚೋದು ಅಲ್ಲಾ, ನರಕಕ್ಕೆ ಕಿಚ್ಚು ಹಚ್ಚೋದು ಆಗತೇತಿ.

ಯಾವುದು ಕಡು ಖೋಟಾ, ಯಾವುದು ಅಲ್ಲಾ ಅಂತ ಕಂಡುಹಿಡಿಯೋ ತಂತ್ರಜ್ಞಾನ ಇನ್ನೂ ಬಂದಿಲ್ಲಂತ. ಕೃತಕ ಬುದ್ಧಿಮತ್ತೆ ಕ್ಷೇತ್ರ ಬೆಳದಂಗ ಬರಬಹುದಂತ. ಆದರ ಪೇಪರು- ಫೋನಿನ್ಯಾಗ ಬಂದ ಖೋಟಾ ಸುದ್ದಿಗಳನ್ನು ವರೆಗೆ ಹಚ್ಚಲು ನಮ್ಮ ಜನಾ ತಯಾರಿಲ್ಲಾ ಎಲ್ಲಾನೂ ಹುಯ್ಯ ಅಂತ ನಂಬತಾರ. ಇನ್ನ ಕಡು ಖೋಟಾ ವಿಡಿಯೋ ಪ್ರಸಾರ ಆಗಲಿಕ್ಕೆ ಹತ್ತಿದವಂದರ ಏನಾದೀತ?

ಅಂದಂಗ ಬಿಜೆಪಿ ದೆಹಲಿ ಅಧ್ಯಕ್ಷ ಮನೋಜ ತಿವಾರಿ ಅವರು ಬೇರೆ ಬೇರೆ ಪೋಷಾಕು ಧರಿಸಿ ನಾಲ್ಕು -ಐದು ಭಾಷೆಯೊಳಗ ಮತದಾರರಿಗೆ ಮತ ಕೇಳೋ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರಂತ. ಅವರಿಗೆ ಅಷ್ಟು ಭಾಷಾನ ಬರಂಗಿಲ್ಲ, ಬಂದರೂ ಅಷ್ಟು ಸುಲಲಿತವಾಗಿ ಮಾತಾಡಲಿಕ್ಕೆ ಆಗಂಗಿಲ್ಲ ಅಂತ ಅವರನ್ನ ಬಲ್ಲವರಿಗೆ ಖಾತ್ರಿ ಆತಂತ. ಹಿಂಗಾಗಿ ಅವು ಕಡು ಖೋಟಾ ಅಂತ ಎಲ್ಲಾರಿಗೂ ಗುಮಾನಿ ಬಂತಂತ. ಆ ನಂತರ ವೈಸ್ ಸಂಸ್ಥೆಯ ವರದಿ ಬಂತು, ಅದು ಬ್ಯಾರೆ ವಿಷಯ. ಇದು ಅಂತ್ಯ ಅಲ್ಲ, ಆರಂಭ ಅನ್ನೋದನ್ನ ನಾವು ತಿಳಕೋಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...