HomeಮುಖಪುಟYes! ದೆ ಆರ್ ಅನ್‍ಬೀಟಬಲ್!! ಪ್ರಪಂಚವೇ ಬೆಚ್ಚಿಬೀಳುವಂತೆ ಡ್ಯಾನ್ಸ್‌ ಮಾಡಿದ ಸ್ಲಂ ಯುವಜನರ ತಂಡ..

Yes! ದೆ ಆರ್ ಅನ್‍ಬೀಟಬಲ್!! ಪ್ರಪಂಚವೇ ಬೆಚ್ಚಿಬೀಳುವಂತೆ ಡ್ಯಾನ್ಸ್‌ ಮಾಡಿದ ಸ್ಲಂ ಯುವಜನರ ತಂಡ..

- Advertisement -
- Advertisement -

ಅಮೆರಿಕಾ ಗಾಟ್ ಟ್ಯಾಲೆಂಟ್’ (AGT) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಮುಂಬೈನ 28 ಬಾಲಕ ಬಾಲಕಿಯರು ತಮ್ಮ ಡ್ಯಾನ್ಸ್ ಪ್ರದರ್ಶನದಲ್ಲಿ ಟ್ರೋಫಿಯನ್ನು ಗೆದ್ದು ಅಮೆರಿಕನ್ನರನ್ನು ಮಾತ್ರವಲ್ಲ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದಾರೆ.

ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡುವ ಅಮೆರಿಕಾ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಹೃದಯವೇ ನಿಂತುಹೋಗುವಂತಹ ಡ್ಯಾನ್ಸ್ ಪ್ರದರ್ಶನ ನೀಡಿ ರಿಯಾಲಿಟಿ ಶೋ ಟ್ರೋಫಿ ಗೆದ್ದಿರುವ ಈ ಯುವಜನರು ಪ್ರಪಂಚದ ಗಮನ ಸೆಳೆದಿದ್ದಾರೆ.

ಯಾರು ಈ “ವಿ ಅನ್‍ಬೀಟಬಲ್”

ವಿ ಅನ್‍ಬೀಟಬಲ್ ತಂಡ ಮುಂಬೈನ ಹಲವಾರು ಸ್ಲಂಗಳಲ್ಲಿ ವಾಸಿಸುವ ಯುವಜನರ ತಂಡ. ಮುಂಬೈನ ಸ್ಲಂಗಳಲ್ಲಿ ದುಸ್ತರವಾದ ಬದುಕು. ಕುಡಿಯಲು ಶುದ್ಧ ನೀರು ಸಿಗದೆ, ಕಾಲು ಚಾಚಿ ಮಲಗುವಷ್ಟು ಜಾಗವೂ ಇಲ್ಲದೆ, ಚಿಕ್ಕ ಶೆಡ್ಡುಗಳಂತಹ ಮನೆಗಳಲ್ಲಿ ಬದುಕುವ ಜನರ ಅಲ್ಲಿನ ನೋವುಗಳನ್ನು ಅನುಭವಿಸುತ್ತಾ ಬೆಳೆಯುತ್ತಿದ್ದ ಈ 28 ಯುವಜನರ ತಂಡವೇ ವಿ ಅನ್ಬೀಟಬಲ್.

ಮುಂಬೈನ ಸ್ಲಂಗಳಲ್ಲಿ ವಾಸಿಸುತ್ತಿರುವ 12ರಿಂದ 27ವಯಸ್ಸಿನವರೆಗಿನ ಬಾಲಕಬಾಲಕಿಯರು ಅವರು. “ಸ್ಲಂಗಳು ಅತ್ಯಂತ ಜನನಿಬಿಡವಾಗಿವೆ, ಕೊಳಕಾಗಿರುತ್ತದೆ, ಸೂಕ್ತ ವಿದ್ಯುತ್ ಸೌಲಭ್ಯ ಅಲ್ಲಿಲ್ಲ, ಒಂದೊಂದು ಸಣ್ಣ ಕೋಣೆಯಲ್ಲಿ 10 ಜನ ಇರಬೇಕಾಗುತ್ತದೆ, ಅಲ್ಲಿ ಬದುಕು ಉಳಿಸಿಕೊಳ್ಳುವುದೇ ಸವಾಲಿನ ಕೆಲಸ. ಇಂತಹ ಕಷ್ಟದ ಬದುಕಿನಲ್ಲಿ ಅವರು ಪ್ರಾರ್ಥಿಸುತ್ತಿದ್ದದ್ದು ಉತ್ತಮವಾದ, ಸ್ವಾವಲಂಬಿ-ಸ್ವಾಭಿಮಾನದ ಘನತೆಯ ಬದುಕಿಗಾಗಿ. ಆದರೆ ಆ ಯುವಜನರಿಗೆ ಸ್ಲಂಗಳಲ್ಲಿ ಸಿಗುತ್ತಿದ್ದ ಅವಕಾಶವೇ ಕಡಿಮೆ.., ಆದರೂ, ಬೆಳಗ್ಗೆಯಿಂದ ಸಂಜೆಯವರೆಗೂ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ ಈ ಯುವಜನರು, ಸಂಜೆಯ ಸಮಯದಲ್ಲಿ ಒಟ್ಟಿಗೆ ಸೇರಿ ಡ್ಯಾನ್ಸ್ ಮಾಡುತ್ತಾ ತಮ್ಮೆಲ್ಲರ ಮನಸ್ಸಿನ ಮಾನಸಿಕ ದುಗುಡ, ತಳಮಳ, ಬದುಕಿನ ಮೇಲಿನ ಆಕ್ರೋಶವನ್ನು ಕಳೆದುಕೊಂಡು, ಮನಸ್ಸನ್ನು ಹಗುರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಈ 28 ಯುವಜನರ ತಂಡ ತಾವು ಒಟ್ಟುಗೂಡಿ ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ತಮ್ಮ ಡ್ಯಾನ್ಸಿನ ಸ್ಕಿಲ್ಲನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಯೂಟ್ಯೂಬ್‌ನಲ್ಲಿ ನಾನಾ ರೀತಿಯ ಶೋಗಳನ್ನು ನೋಡುತ್ತಿದ್ದರು. ಡ್ಯಾನ್ಸ್ ಬಗ್ಗೆ ತುಡಿತ ಹೊಂದಿದ್ದ ಈ ಯುವಜನರ ಕಣ್ಣಿಗೆ ಕಂಡದ್ದು ‘ಅಮೆರಿಕಾ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋ. ಆ ಕಾರ್ಯಕ್ರಮವನ್ನು ನೋಡುವಾಗ ಆ ಯುವ ಮನಸ್ಸುಗಳಲ್ಲಿ ಮೂಡಿದ್ದು ನಾವು ಒಂದು ದಿನ ಅಲ್ಲಿಗೆ ಹೋಗಬಹುದಾ ಎಂಬ ಕನಸು. ಆ ಕನಸಿನ್ನು ನನಸಾಗಿಸಿಕೊಳ್ಳುವತ್ತ ಹೆಜ್ಜೆ ಹಾಕಿದ್ದ ಆ ತಂಡ ’ವಿ ಅನ್‍ಬೀಟಬಲ್’ ಹೆಸರನ್ನಿಟ್ಟುಕೊಂಡು ‘ಅಮೆರಿಕಾ ಗಾಟ್ ಟ್ಯಾಲೆಂಟ್’ ವೇದಿಯ ಮೇಲೇರಿ ತಮ್ಮ ಕನಸನ್ನ ನನಸಾಗಿಸಿಕೊಂಡಿದ್ದಾರೆ.

ವಿ ಅನ್‍ಬೀಟಬಲ್ ಗೆಲುವಿನ ಹಾದಿ!

V Unbeatable ಎಂಬ ಡ್ಯಾನ್ಸ್ ತಂಡ ಕಟ್ಟಿಕೊಂಡು ವಾರಗಳ ಕಾಲ ತಾಲೀಮು ನಡೆಸಿಕೊಂಡು ಎನ್‍ಬಿಸಿ ರಿಯಾಲಿಟಿ ಟಿವಿ ನಡೆಸುವ ‘ಅಮೆರಿಕ ಗಾಟ್ ಟ್ಯಾಲೆಂಟ್’ (AGT) ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಬಂದು ನಿಂತಾಗ ತಮ್ಮೆದುರು ತೀರ್ಪುಗಾರರಾಗಿ ಕುಳಿತ ಸೈಮನ್ ಕೌವೆಲ್, ಹೌವೀ ಮಂಡೆಲ್, ಗ್ಯಾಬ್ರಿಯೆಲ್ ಯೂನಿಯನ್ ಮತ್ತು ಜ್ಯೂಲಿಯನ್ ಹೌ ಅವರಿಗಾಗಲೀ, ಪ್ರೇಕ್ಷಕರಿಗಾಗಲೀ ಆ ಕಂದು ಬಣ್ಣದ ಹುಡುಗರು ಏನು ಮಾಡಲಿದ್ದಾರೆ ಎಂಬ ಊಹೆಯೂ ಇರಲಿಲ್ಲ.

ಶೋ ಆರಂಭದ ಮೊದಲ ದಿನ, ವಿಶಾಲ್ ದಾದ್ಲಾನಿಯ “ಮಲ್ಹಾರಿ” ಹಾಡಿಗೆ ಹುಡುಗರು ಮಾಡುವ ಡ್ಯಾನ್ಸ್ ಕೆಲ ನಿಮಿಷಗಳ ಕಾಲ ಎಲ್ಲರ ಎದೆಬಡಿತ ಹೆಚ್ಚಿಸುತ್ತದೆ. ಅದರಲ್ಲೂ ಸಣ್ಣ ಹುಡುಗರನ್ನು ಎತ್ತಿ ಹಾರಿಸುವ ಕೆಲವು ದೃಶ್ಯಗಳಂತೂ ಮೈ ಜುಮ್ ಎನಿಸಿದ್ದವು. ಬೊಂಬುಗಳನ್ನು ತಂದು ನಿಲ್ಲಿಸಿ ಅದರ ಮೇಲೆ ಕಾಲ್ಬೆರಳ ತುದಿಯಲ್ಲಿ ನಡೆದು, ನೆಗೆದು ತೋರಿಸುವ ದೃಶ್ಯಗಳಂತೂ ಚೇತೋಹಾರಿಯಾಗಿದ್ದವು.

ಆ ದೃಶ್ಯಗಳನ್ನು ನೋಡಿದರೆ, ಅಂತಹ ಪ್ರದರ್ಶನಗಳನ್ನು ಚೀನಾದ ತಂಡಗಳು ಮಾತ್ರ ನೀಡಲು ಸಾಧ್ಯ, ಮತ್ತಾರೂ ಮಾಡಲಾರರು ಎನ್ನುವಂತಿದ್ದವು. ಅಂತಹ ನೃತ್ಯವನ್ನು ಸೂಕ್ತ ತರಬೇತಿ ಸಿಕ್ಕಿದರೆ ಭಾರತದಲ್ಲಿ ವಾಸಿಸುವ ಸ್ಲಂ ಮಕ್ಕಳೂ ಸಹ ಅಸಾಧ್ಯವಾದುದನ್ನು ಸಾಧಿಸಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಬಲ್ಲರು ಎಂಬುದನ್ನು ವಿ ಅನ್ ಬೀಟಬಲ್ ತಂಡ ತೋರಿಸಿದೆ.

ಅಂದು ರಿಯಾಲಿಟಿ ಶೋ ವೇದಿಕೆ ಮೇಲೆ ನಿಂತ ಈ ಯುವಜನರನ್ನು ಅಮೆರಿಕಾ ಗಾಟ್ ಟ್ಯಾಲೆಂಟ್ ವಿನ್ನರ್ಸ್ ಪಟ್ಟಿಯಲ್ಲಿ ಸೇರಿದರೆ ನಿಮ್ಮ ಭವಿಷ್ಯಕ್ಕೆ ಏನು ಲಾಭ ಎಂದು ಜಡ್ಜ್ ಗ್ಯಾಬ್ರಿಯೆಲ್ ಕೇಳಿದ್ದಕ್ಕೆ ಮುಂಬೈ ಹುಡುಗ, “ಗೆಲುವು ಸಾಧಿಸಿದ್ದು ವಿ ಅನ್ ಬೀಟಬಲ್” ಎಂದು ಇಡೀ ಜಗತ್ತಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಇಂದು ಇಲ್ಲಿ ಸಿಕ್ಕಿರುವ ಅವಕಾಶ ನಮ್ಮ ಬದುಕನ್ನು ಬದಲಿಸಬಹುದು ಎಂಬ ಕನಸು ಹೊತ್ತು ಎಲ್ಲರೂ ಇಲ್ಲಿದ್ದೇವೆ ಎಂದು ಹೇಳಿದ್ದ.

ತಮ್ಮೆಲ್ಲರ ಕನಸನ್ನು ನನಸಾಗಿಸಿಕೊಂಡು ಅಮೆರಿಕಾ ಗಾಟ್ ಟ್ಯಾಲೆಂಟ್ ವೇದಿಕೆ ಏರಿದ್ದಷ್ಟೇ ಅಲ್ಲದೆ, ಈ ಶೋನ ಟ್ರೋಫಿಯನ್ನೂ ಗೆದ್ದು, ತಾವು ಬಯಸಿದ್ದ ಸಾಧನೆಯನ್ನು ಮಾಡಿ ಇಂದು ತಾವು ಗೆದ್ದಿದ್ದೇವೆಂದು ಆ 28 ಜನರ ತಂಡ ಇಡೀ ಜಗತ್ತಿಗೆ ಸಾರಿದ್ದಾರೆ.

ಇದು ಕೇವಲ ಮುಂಬೈನ ಸ್ಲಂ ಯುವಜನರ ಕತೆ ಅಷ್ಟೇ ಅಲ್ಲ, ಇಂತಹ ಎಲೆ ಮರೆಯ ಪ್ರತಿಭೆಗಳು ಈ ದೇಶದ ಅಸಮಾನತೆ ಮತ್ತು ಅವಕಾಶ ವಂಚನೆಯಿಂದಾಗಿ ತೆರೆಮರೆಯಲ್ಲೇ ಹುದುಗಿ ಹೋಗುತ್ತಿವೆ. ಕೆಲವು ವರ್ಷಗಳ ಹಿಂದೆ ಮಂಡ್ಯ ನಗರದ ಸ್ಲಂ ಹುಡುಗರೂ ಸಹ ಇಂತಹುದೇ ಡ್ಯಾನ್ಸ್ ತಂಡ ಕಟ್ಟಿಕೊಂಡಿದ್ದರು, ಉತ್ತರ ಕರ್ನಾಟಕದ ಬೀದರ್ ನಗರದ ಸ್ಲಂಗಳಲ್ಲಿಯೂ ಅಲೆಮಾರಿ ಸಮುದಾಯಗಳ ಹುಡುಗರು ಅದ್ಭುತ ಡ್ಯಾನ್ಸ್ ತಂಡಗಳನ್ನು ಕಟ್ಟಿಕೊಂಡಿದ್ದರು. ದೇಶದ ಸ್ಲಂಗಳಲ್ಲಿ/ಹಳ್ಳಿಗಳಲ್ಲಿ ಅಡಗಿರುವ ಈ ಸುಪ್ತ ಪ್ರತಿಭೆಗಳಿಗೆ ಸರಿಯಾದ ವೇದಿಕೆ ಸಿಕ್ಕಿದ್ದೇ ಆದಲ್ಲಿ ಭಾರತೀಯ ಯುವಜನರ ಹೊಸ ಯಶೋಗಾಥೆಯನ್ನು ಬರೆಯುವುದರಲ್ಲಿ ಸಂಶಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...