Homeನ್ಯಾಯ ಪಥಗೌರಿಯ ಮಗ ಕನ್ಹಯ್ಯ ಕುಮಾರ್ ಮತ್ತು ಬೆಗುಸರಾಯ್‍ನಲ್ಲಿ ಆಜಾದಿ

ಗೌರಿಯ ಮಗ ಕನ್ಹಯ್ಯ ಕುಮಾರ್ ಮತ್ತು ಬೆಗುಸರಾಯ್‍ನಲ್ಲಿ ಆಜಾದಿ

- Advertisement -
- Advertisement -

| ರೇಣುಕಾ ನಿಡಗುಂದಿ |

2017ರ ಅಗಸ್ಟ್ ತಿಂಗಳ ರಣಗುಡುವ ಬಿಸಿಲು, ಉರಿವ ಸೂರ್ಯ ದುಗುಡ ತುಂಬಿದ ಹಗಲಿನಲ್ಲಿ ಐಟಿಓದ ಬಳಿ ಯೂಜಿಸಿ ಕಛೇರಿಯ ಹತ್ತಿರ ಜೆಎನ್ಯೂ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಯ ಗುಂಪಿನಲ್ಲಿ ಪುಟ್ಟ ಬಿಳಿ ಪಾರಿವಾಳದಂತೆ ಗೌರಕ್ಕ ಪುಟುಪುಟು ಓಡಾಡಿದ್ದು, ಮಾತಾಡಿದ್ದು, ಕಣ್ಣಿಗೆ ಕಟ್ಟಿದಂತಿದೆ.

ಯೂಜಿಸಿ ಎಲ್ಲ ಗೇಟುಗಳನ್ನು ಭದ್ರಪಡಿಸಿ ಪೊಲೀಸ್ ಪಡೆಗಳು ಭದ್ರತೆಗಾಗಿ ಕರ್ತವ್ಯನಿರತರಾಗಿದ್ದರು. ಗೌರಕ್ಕ ರಸ್ತೆಯಲ್ಲಿ ಹಲಗೆ ಬಾರಿಸುತ್ತ ಆಜಾದಿಯ ಗೀತೆಯನ್ನು ಹಾಡುತ್ತಿದ್ದ ವಿದ್ಯಾರ್ಥಿಗಳ ಗುಂಪಿನಲ್ಲಿ ನುಸುಳಿ ತಮ್ಮ ಮಗ ಕನ್ಹಯ್ಯನನ್ನು, ಉಮರ್‍ನನ್ನು ಗುರುತಿಸಿ ‘ನಾನಿದ್ದೇನೆ ನಿಮ್ಮೊಂದಿಗೆ’ ಎಂದು ಬೆನ್ನುತಟ್ಟಿ ಬಂದಿದ್ದರು. ನಾನು, ವಿಶ್ವಾಸ್ ಮತ್ತು ಗೌರಕ್ಕ ಮೂವರೂ ಯೂಜಿಸಿ ಕಛೇರಿಯ ಪಕ್ಕದ ಫುಟ್ಪಾತಿನಲ್ಲೇ ..ಗಬ್ಬು ನಾರುತ್ತಿದ್ದ ನಾಲಾದ ಪಕ್ಕದಲ್ಲಿ, ಪೋಲಿಸರ ಸಾಲುಗಳಲ್ಲಿ ಸೇರಿ ಪ್ರೇಕ್ಷಕರಾಗಿ ಹೋದದ್ದು ನಿನ್ನೆ ಮೊನ್ನೆಯಂತಿದೆ. ಬಿಸಿಲಿಳಿದು, ದಣಿದ ಸೂರ್ಯನೂ ಪಶ್ಚಿಮದಲ್ಲಿ ಕರಗುವ ಹೊತ್ತಿನವರೆಗೂ ನಾವು ಕನ್ನ್ಹಯ್ಯ, ಉಮರ್ ಅವರ ಸಂಗಾತಿಗಳೊಡನೆಯೇ ಇದ್ದೆವು. ಅದೆಲ್ಲ ಈಗ ಎದೆ ಸುಡುವ ನೆನಪುಗಳಷ್ಟೇ !ಇಂದು ನಮ್ಮ ಗೌರಕ್ಕನ ಹೆಮ್ಮೆಯ ಮಗ ಬೆಗೂಸರಾಯ್‍ದಿಂದ ಚುನಾವಣೆಗೆ ನಿಂತಿದ್ದಾನೆ.

2016 ಅಲ್ಲಿ ಜೆಎನ್ಯೂನ ಕೆಲ ವಿದ್ಯಾರ್ಥಿಗಳು ಅಫ್ಜಲ್ ಗುರು ಪರ ಘೋಷಣೆಯನ್ನು ಕೂಗಿದ್ದರೆಂಬ ಆರೋಪದಡಿ ಅಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಕನ್ಹಯ್ಯನ ಮತ್ತು ಸಂಗಡಿಗರ ಮೇಲೆ ದೇಶದ್ರೋಹದ ಕೇಸನ್ನು ದಾಖಲಿಸಲಾಗಿತ್ತು. ಅವೆಲ್ಲ ಸುಳ್ಳು ಆರೋಪಗಳೆಂದು ಸಾಬೀತಾದವು. ಚಾರಿತ್ರಿಕವಾಗಿ ಈ ಘಟನೆ ತಥಾಕಥಿತ ದೇಶಭಕ್ತರ ಮುಖವಾಡಗಳನ್ನು ಕಳಚಿ ಹೊಸ ರಾಷ್ಟ್ರವಾದದ ಕರಾಳ ಮುಖವನ್ನು ಪರಿಚಯಿಸಿತು.

ಕನ್ಹಯ್ಯನ ಹೃದಯದ ಭಾಷೆ ದೇಶದ ಬಹುಸಂಖ್ಯಾತರ ಅಂತಃಸಾಕ್ಷಿಯನ್ನು ಬಡಿದೆಬ್ಬಿಸಿ ಹೊಸ ಚೈತನ್ಯವನ್ನು ತುಂಬಿತು. ಕನ್ಹಯ್ಯ ಸಾರಿದ ಸ್ವಾತಂತ್ರ್ಯದ ಸಮರ ಹೊರಗಿನ ಸ್ವಾತಂತ್ರ್ಯದ ಸಮರವಾಗಿರದೇ ನಮ್ಮೊಳಗಿನ ಆಂತರಿಕ ಸ್ವಾತಂತ್ರ್ಯಕ್ಕಾಗಿ ಕೂಗಿದ ಘೋಷವಾಕ್ಯವಾಗಿತ್ತು. ಬಂಡವಾಳಶಾಹಿ ವಿರುದ್ಧ ಸಮರ; ಸಂಘ ಪರಿವಾರದ ವಿರುದ್ಧ ಸಮರ; ಪಾಳೇಗಾರಿ ಪದ್ಧತಿ ವಿರುದ್ಧ ಸಮರ; ಹಸಿವಿನ ವಿರುದ್ಧ ಸಮರ; ಜಾತಿ ವ್ಯವಸ್ಥೆ ವಿರುದ್ಧ ಸಮರ; ಮನುವಾದದ ವಿರುದ್ಧ ಸಮರ’ ದಿಕ್ಕು ದಿಕ್ಕುಗಳಲ್ಲಿ ಅನುರಣಿಸುತ್ತಿದ್ದ ದನಿಯನ್ನು ಈ ದೇಶ ಬಹುಕಾಲದಿಂದ ಎದುರುನೋಡುತ್ತಿತ್ತು. ಕೋಟ್ಯಾಂತರ ಯುವಕರ ಭವಿಷ್ಯದ ಕುರಿತು ಮಾತಾಡುವವರೇ ಇಲ್ಲದಾಗ, ತಮ್ಮೆಲ್ಲ ಒಳಗುದಿಯನ್ನು ಅದುಮಿಟ್ಟುಕೊಂಡ ಯುವಪೀಳಿಗೆ ಕೂಪದೊಳಗಿಂದ ಹೊರಬಂದು ದನಿಯೆತ್ತುವಂತೆ ಮಾಡಿಬಿಟ್ಟ.

ಐದು ವರ್ಷದಿಂದ ಮೋದಿ ಗುಣಗಾನವನ್ನು ಕೇಳಿಕೇಳಿ ರೋಸಿಹೋಗಿದ್ದ ಜನರಲ್ಲಿ ಕನ್ಹ್ಯಯ್ಯನ ಮಾತುಗಳು ಜೀವತುಂಬಿದವು. ತನ್ನ ತಲೆಮಾರಿನ ಯುವಜನರನ್ನು ದ್ವೇಷ ಅಸಹಿಷ್ಣುತೆ, ಕೋಮುವಾದ, ಹಿಂಸೆಯ, ರಾಜಕಾರಣದ ದಾಸ್ಯದಿಂದ ಬಿಡಿಸಬಲ್ಲ ಶಕ್ತಿಯೊಂದರ ಅಗತ್ಯ ಇಂದು ತುರ್ತಾಗಿದ್ದಾಗ ಕನ್ಹಯ್ಯ ಭರವಸೆಯ ಬೆಳಕಾಗಿ ತಮ್ಮ ಹುಟ್ಟೂರು ಬೆಗೂಸರಾಯ್‍ದ ಘಟಾನುಘಟಿಗಳನ್ನು ಎದುರುಹಾಕಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದಾನೆ. ಭವಿಷ್ಯದ ಮುನ್ನೋಟವಿರದೇ ಧರ್ಮಾಂಧತೆ ಮತ್ತು ಕೋಮುವಾದಗಳಲ್ಲಿ ದೇಶವನ್ನು ಕತ್ತಲಯುಗಕ್ಕೆ ತಳ್ಳುತ್ತಿರುವ ವಿಪ್ಲವ ಕಾಲದಲ್ಲಿ ಪ್ರತಿಯೊಂದು ರಾಜ್ಯದಲ್ಲೂ ಕನ್ಹಯ್ಯರು ಬೇಕಿದ್ದಾರೆ.

2011ರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಜೆಎನ್ಯೂವಿನ ಸೆಂಟರ್ ಫಾರ್ ಆಫ್ರಿಕನ್ ಸ್ಟಡೀಸ್‍ನಲ್ಲಿ ಪ್ರವೇಶ ಪಡೆದಿದ್ದ ಕನ್ಹಯ್ಯ ಇದೇ ವರ್ಷ ವಿರೋಧಿಗಳು ಒಡ್ಡಿದ ದೇಶದ್ರೋಹದ ಆರೋಪ, ಸುಳ್ಳು ವದಂತಿ, ಒಳಸಂಚು, ದ್ವೇಷ ಪ್ರಚಾರಗಳ ನಡುವೆಯೂ ತನ್ನ – The Process of De-colonisation and Social Transformation in South Afriica, 1994-2015  ಥೀಸಿಸ್‍ಗೆ ಡಾಕ್ಟರೇಟ್ ಡಿಗ್ರಿಯನ್ನು ಪಡೆದಿದ್ದಾನೆ. ಅವಕಾಶ ಸಿಕ್ಕರೆ ಅಧ್ಯಾಪಕನಾಗುವ ಆಸೆಯಿದೆಯಂತೆ.

ರಾಜಕಾರಣ ಅವನ ಅಗತ್ಯವಲ್ಲ ಅದು ತೀರಿಸಬೇಕಾದ ಋಣ; ಸಾಮಾಜಿಕ ಜವಾಬ್ದಾರಿ.! ವ್ಯವಸ್ಥೆಯಲ್ಲಿನ ಪಾಚಿಯನ್ನು ಬುಡಸಹಿತ ಕಿತ್ತೊಗೆಯಬೇಕಾದರೆ ತನ್ನಂಥ ಯುವಕರು ರಾಜಕೀಯಕ್ಕೆ ಬರಬೇಕು ಎನ್ನುವ ಅಭಿಪ್ರಾಯ ಕನ್ಹಯ್ಯನದು. ಇದೇ ಮಾತನ್ನು ಡಾ.ಅಂಬೇಡ್ಕರ್ ಅವರೂ ಹೇಳಿದ್ದರು. “ಪರಿಶಿಷ್ಟ ಜಾತಿಯವರು ಭಾರತದ ರಾಜಕಾರಣದಲ್ಲಿ ಸಕ್ರಿಯವಾದ ಪಾತ್ರ ವಹಿಸದಿದ್ದರೆ ಅವರಿಗೆ ಉಳಿಗಾಲವಿಲ್ಲ”ವೆಂದು ಎಚ್ಚರಿಸಿದ್ದರು.

ಬಾಲ್ಯದಲ್ಲಿ ಚುರುಕಾಗಿದ್ದ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಕನ್ಹಯ್ಯನನ್ನು ಅವನ ತಾಯಿ ನೇತಾ ಅಂತಲೇ ಕರೆಯುತ್ತಿದ್ದಳಂತೆ. ನಾಲ್ಕನೇ ತರಗತಿಯಲ್ಲಿದ್ದಾಗಲೇ ಭಾಷಣ ಸ್ಪರ್ಧೆಯಲ್ಲಿ ಪುರಸ್ಕಾರವನ್ನೂ ಪಡೆದಿದ್ದ ಕನ್ಹಯ್ಯ ಅತ್ಯುತ್ತಮ ವಾಗ್ಮಿ. ಭಾಷಣದ ವಿಷಯ “ಮಮತಾಮಯಿ ಮದರ್ ತೆರೇಸಾ”. ಕಾಕತಾಳೀಯವೆಂಬಂತೆ ಕನ್ಹಯ್ಯನನ್ನು ದೇಶದ್ರೋಹದ ಆರೋಪದಡಿ ಜೈಲಿನಲ್ಲಿಟ್ಟಾಗ ಅವನಿದ್ದ ವಾರ್ಡ್ ಹೆಸರೂ “ಮದರ್ ತೆರೆಸಾ ವಾರ್ಡ“ ಆಗಿತ್ತೆಂದು ಕನ್ಹಯ್ಯ ನೆನೆದಿದ್ದಾನೆ. ಕನ್ಹಯ್ಯನ ಆತ್ಮಕಥೆ “ಫ್ರಾಮ್ ಬಿಹಾರ್ ಟೂ ತಿಹಾರ್” ಪುಸ್ತಕವನ್ನು ಯುವಪೀಳಿಗೆ ಓದಬೇಕಿದೆ.

ಕನ್ಹಯ್ಯ 2015ರಲ್ಲಿ ಜೆಎನ್ಯೂ ವಿದ್ಯಾರ್ಥಿ ಸಂಘದ ಅಧ್ಯಕ್ಷನಾದ AISF ನ ಮೊದಲ ಸದಸ್ಯ. ಆಗ AISA, ABVP, SFI & NSUI ದ ಎಲ್ಲ ಉಮೇದುವಾರರನ್ನು ಸೋಲಿಸಿ ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದು ಒಂದು ಐತಿಹಾಸಿಕ ಗೆಲುವಾಗಿತ್ತು. ಆದರೆ ಮಂದಿನ ದಿನಗಳಲ್ಲಿ ಅವನ ಜನಪ್ರಿಯತೆಯನ್ನು, ಅವನ ಸಿದ್ಧಾಂತಗಳನ್ನು ವಿರೋಧಿಗಳು ಸಹಿಸಲಿಲ್ಲ. ಅನೇಕ ಬಾರಿ ಅವನ ಮತ್ತು ಅವನ ಸಂಗಡಿಗರ ಮೇಲೆ ಮಾರಣಾಂತಿಕ ಹಲ್ಲೆಗಳಾದವು.

ಒಮ್ಮೆ ಇಂದೋರಿನಲ್ಲಿ ಸಿಪಿಐ ಪಕ್ಷದ ಎಐವೈಎಫ್ ಮತ್ತು ಎಐಎಸ್‍ಎಫ್ ಆಯೋಜಿಸಿದ್ದ “ಲಾಂಗ್ ಮಾರ್ಚ್”ನಲ್ಲಿ ಭಾಗವಹಿಸಲು ಹೋಗುತ್ತಿದ್ದ ಕನ್ಹಯ್ಯನ ಕಾರಿನ ಮೇಲೆ ಮೋದಿ ಭಕ್ತರು ದಾಳಿ ಮಾಡಿದ್ದರು. ದೇಶದ ಅನೇಕ ರಾಜ್ಯಗಳಿಗೆ ಭೆಟ್ಟಿಯಿತ್ತು ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರ ಮುಂದಿಡಲಾಗುತ್ತಿದ್ದ ಈ ಗುಂಪಿನ “ಲಾಂಗ್ ಮಾರ್ಚ” ನಡಿಗೆಯನ್ನು ಸಹಿಸದ ಮೂಲಭೂತವಾದಿಗಳು ದಾಳಿ ಮಾಡಿದ್ದರೂ ಕನ್ಹಯ್ಯಾ ಬೆದರಿರಲಿಲ್ಲ. ಆದರೆ ಅವನ ಗೆಳೆಯರಿಬ್ಬರಿಗೆ ಗಾಯಗಳಾಗಿದ್ದವು. ಇಂದೋರಿನಲ್ಲಿ ಕಲ್ಲುತೂರಿದರೆ, ಪಶ್ಚಿಮ ಬಂಗಾಳದಲ್ಲಿ ಕೊಳೆತ ಮೊಟ್ಟೆಗಳನ್ನು ತೂರಿದ್ದರು ಸಂಘಿಗಳು.

ಕನ್ಹಯ್ಯ ಫ್ರೀಲಾನ್ಸ್ ಮತ್ತು ಉಪನ್ಯಾಸಗಳನ್ನು ನೀಡುತ್ತಿದ್ದುದನ್ನು, ಪುಸ್ತಕದ ರಾಯಲ್ಟಿ ಹಣ, ಎರಡು ವರ್ಷದ ಆದಾಯ 8.5ಲಕ್ಷ, ಸ್ವಂತ ಭೂಮಿಯಿಲ್ಲ, ನಗದು 24,000 ಮತ್ತು ಮೂರುವರೆ ಲಕ್ಷದಷ್ಟು ಠೇವಣಿಯನ್ನು ಅಫಿಡವಿಟ್‍ನಲ್ಲಿ ನಮೂದಿಸಿದ್ದರೂ ತೃಪ್ತರಾಗದ ಭಕ್ತರು ಮೊನ್ನೆ ನಾಮಪತ್ರ ಸಲ್ಲಿಸಿದ ಬಳಿಕ ಎಂಟು ಲಕ್ಷ ಎಲ್ಲಿಂದ ಬಂತು ಅಂತ ವಾಗ್ದಾಳಿ ಮಾಡಿದ್ದಾರೆ. ಕೋಟಿಗಟ್ಟಲೆ ದೋಚಿಕೊಂಡು ಹೋದವರನ್ನು ಎಳೆದುತರುವ ತಾಕತ್ತಿರದವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟರು!

ಕನ್ಹಯ್ಯನ ಮಟ್ಟಿಗೆ ಚುನಾವಣೆಯೆಂಬುದು ದೇಶದ ಬಹುತ್ವ, ಐಕ್ಯತೆ, ಸಹಬಾಳ್ವೆಯ ಸಾಂಸ್ಕೃತಿಕ ಹೆಣಿಕೆಯನ್ನು ವಿರೂಪಗೊಳಿಸಿ ದ್ವೇಷವನ್ನು ಬಿತ್ತುತ್ತಿರುವ ಪ್ರಭುತ್ವದ ವಿರುದ್ಧದ ಹೋರಾಟವಾಗಿದೆ. ತತ್ವ ಸಿದ್ಧಾಂತಗಳಲ್ಲಿ ಬದ್ಢತೆಯುಳ್ಳ ಕಮ್ಯುನಿಸ್ಟರು ಜನರನ್ನು ತಲುಪುವಲ್ಲಿ ಸೋತಿದ್ದಾರೆಂಬ ವಾಸ್ತವದ ಅರಿವು ಕನ್ಹಯ್ಯನಿಗಿದೆ. ಇಂದಿನ ಸಂಘರ್ಷದ ಸಮಯದಲ್ಲಿ ಪ್ರಜಾಪ್ರಭುತ್ವವನ್ನು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾಗಿದೆ. ದೇಶದ ನೂರಾರು ಕಲಾವಿದರು, ಚಿಂತಕರು, ಗೆಳೆಯರು, ಹೋರಾಟಗಾರರು, ವಿಚಾರವಾದಿಗಳು ಕನ್ಹಯ್ಯನಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಇನ್ನು ಅನೇಕ ಕಲಾವಿದರು, ಬರಹಗಾರರು, ಬ್ಯೂರೋಕ್ರಾಟ್ಸಗಳು ಕೋಮುದ್ವೇಷವನ್ನು ಪ್ರೋತ್ಸಾಹಿಸುವ ಪಕ್ಷಕ್ಕೆ ವೋಟು ನೀಡದಂತೆ ಅಂತರ್ಜಾಲದ ಆಂದೋಲನವನ್ನೇ ಸಾರಿದ್ದಾರೆ.

ಕನ್ಹಯ್ಯನನ್ನು ನನ್ನ ಪ್ರೀತಿಯ ಕೂಸು ಎನ್ನುತ್ತಿದ್ದ ಗೌರಿಯನ್ನು ಕೊಂದ ಫ್ಯಾಸಿಸ್ಟ ಶಕ್ತಿಗಳು ನಾಶವಾಗಲೇ ಬೇಕು. ಈ ಸಮಯದಲ್ಲಿ ಅವಳಿದ್ದಿದ್ದರೆ ತನ್ನ ಕಂದನ ಹುಟ್ಟೂರಾದ ಬೇಗೂಸರಾಯಿಗೆ ಹೋಗಿ ಕನ್ಹಯ್ಯನಿಗೆ ಬೆಂಬಲವಾಗಿ ನಿಂತಿರುತ್ತಿದ್ದಳು. ಗೌರಿ ಬರೀ ವ್ಯಕ್ತಿಯಲ್ಲ, ಈ ದೇಶದ ಅಂತಃಶಕ್ತಿಯಾಗಿ ಜಿಗ್ನೇಶ್ ಮೇವಾನಿ, ಕನ್ಹಯ್ಯನಂತ ಯುವಶಕ್ತಿಗಳಿಗೆ ತಾಯಿಯಾಗಿದ್ದಾಳೆ. ಕಾರ್ಪೊರೇಟ್ ಪರ ಮತ್ತು ರೈತವಿರೋಧಿ, ಕಾರ್ಮಿಕ ವಿರೋಧಿ ಜನ ವಿರೋಧಿ ನೀತಿಗಳ ವಿರುದ್ದ ಸಿಡಿದೆದ್ದ ಚಳವಳಿಯ ಕಿಡಿಯಾಗಿ ದೇಶದಾದ್ಯಂತ ಬೆಳಗುತ್ತಿದ್ದಾಳೆ.

ಇವತ್ತು ನಮ್ಮೆಲ್ಲರ ಭರವಸೆಯ ದೀವಿಗೆಗಾಗಿ ನಮ್ಮ ಪ್ರೀತಿಯ ಕನ್ಹಯ್ಯ ದೊಡ್ದ ದೊಡ್ದ ಬಂಡವಾಳಗಾರರ ಮತ್ತು ದೊಡ್ಡ ದೊಡ್ಡ ನುರಿತ ರಾಜಕೀಯ ಧುರೀಣರೆದುರು ಚುನಾವಣೆಯ ಕಣಕ್ಕಿಳಿದಿದ್ದಾನೆ. ಕನ್ಹಯ್ಯನ ಗೆಲುವು ಪ್ರಜಾಪ್ರಭುತ್ವದ ಗೆಲುವು ! ಸಹಬಾಳ್ವೆ, ಸಮಾನತೆ, ಜಾತ್ಯತೀತ ಭಾರತವನ್ನು ಪ್ರೀತಿಸುವ ನಮ್ಮ ನಿಮ್ಮೆಲ್ಲರ ಗೆಲುವಾಗಲೆಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

"ಒಳಮೀಸಲಾತಿ ಇಲ್ಲದೆ ಒಂದೇಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ" ಎಂದು ಆಹಾರ...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...