Homeಕರ್ನಾಟಕ‘ಪಂಪ ಮಹಾಕವಿ ರಸ್ತೆ’ ಹೆಸರು ಬದಲಿಸಲು ಪ್ರಸ್ತಾವನೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್‌!

‘ಪಂಪ ಮಹಾಕವಿ ರಸ್ತೆ’ ಹೆಸರು ಬದಲಿಸಲು ಪ್ರಸ್ತಾವನೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್‌!

“ನಮ್ಮ ಎದುರಿನ ರಸ್ತೆಗೆ ನಮ್ಮತನ ಬೇಕಾಲ್ಲವೇ?” ಎಂದು ಪ್ರಶ್ನಿಸಿದ್ದಾರೆ ಕಸಾಪ ಅಧ್ಯಕ್ಷರಾದ ಮಹೇಶ್ ಜೋಶಿ.

- Advertisement -
- Advertisement -

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಮಂದಿನ ‘ಪಂಪ ಮಹಾಕವಿ ರಸ್ತೆ’ ಎಂಬ ಹೆಸರನ್ನು ಬದಲಿಸುವ ಪ್ರಸ್ತಾಪವನ್ನು ಕಸಾಪ ಮುಂದಿಟ್ಟಿದೆ.

ಈ ರಸ್ತೆಯಲ್ಲಿನ ಸುಮಾರು ಅರ್ಧ ಕಿಮೀಯನ್ನು ‘ಕನ್ನಡ ಸಾಹಿತ್ಯ ಪರಿಷತ್‌ ರಸ್ತೆ’ ಎಂದು ಹೆಸರಿಡಬೇಕೆಂದು ಕಸಾಪ ಬಯಸಿದೆ.

ಚಾಮರಾಜಪೇಟೆಯ ಮಿಂಟೋ ಆಸ್ಪತ್ರೆ ಮತ್ತು ಮಕ್ಕಳ ಕೂಟ ಪಾರ್ಕ್ ನಡುವಿನ ರಸ್ತೆಯನ್ನು ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಎಂದು ಮರುನಾಮಕರಣ ಮಾಡಲು ಕಸಾಪ ಮುಂದಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ರಸ್ತೆಗೆ ಪ್ರಸ್ತುತ ಪಂಪ ಮಹಾಕವಿ ಎಂದು ಹೆಸರಿಡಲಾಗಿದೆ. ಇಲ್ಲಿನ ಅರ್ಧ ಕಿ.ಮೀ.ಯಷ್ಟು ರಸ್ತೆಯನ್ನು ಕನ್ನಡ ಪರಿಮಳದಿಂದ, ಕನ್ನಡಮಯದಿಂದ ತುಂಬಬೇಕು ಎಂಬ ಪ್ರಸ್ತಾವನೆಯನ್ನು ಕಸಾಪ ಸಲ್ಲಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಕಸಾಪ ಅಧಿಕಾರಿಗಳು ಸಜ್ಜಾಗಿದ್ದಾರೆ.

ಕಸಾಪ ಅಧ್ಯಕ್ಷ ಮಹೇಶ್ ಜೋಶಿಯವರು ಬಿಬಿಎಂಪಿ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಮುಖ್ಯಮಂತ್ರಿಗಳು ಇತ್ತೀಚೆಗೆ ಪರಿಷತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗೂ ಚರ್ಚಿಸಿದ್ದೇವೆ ಎಂದಿದ್ದಾರೆ.

Interview| ಆರೆಸ್ಸೆಸ್‌ಗೆ ಸೇರಿದವನೆಂಬ ಅಪಪ್ರಚಾರ: ಮಹೇಶ ಜೋಶಿ | Prajavani
ಕಸಾಪ ಅಧ್ಯಕ್ಷರಾದ ಮಹೇಶ್ ಜೋಶಿ

ಕಸಾಪ ರಸ್ತೆ ಕಲ್ಪನೆಯ ಕುರಿತು ಚರ್ಚಿಸಲು ಆ ವ್ಯಾಪ್ತಿಯಲ್ಲಿರುವ ಸಂಸ್ಥೆಗಳು/ಸಂಘಟನೆಗಳೊಂದಿಗೆ ಶೀಘ್ರದಲ್ಲೇ ಸಭೆಯನ್ನು ಕರೆಯುವುದಾಗಿ ಜೋಶಿ ಹೇಳಿದ್ದಾರೆ.

“ಈ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಒಂದು ಪ್ರಾದೇಶಿಕ ಪತ್ರಿಕಾ ಕಚೇರಿ, ಕೆಲವು ಬ್ಯಾಂಕ್‌ಗಳು, ಉದ್ಯಾನವನ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಯಂತಹ ಕೆಲವು ಪ್ರಮುಖ ಸಂಸ್ಥೆಗಳಿವೆ. ನಮ್ಮ ಪ್ರಸ್ತಾಪವನ್ನು ಚರ್ಚಿಸಲು ಮತ್ತು ಅವರ ಸಲಹೆಗಳನ್ನು ಪಡೆಯಲು ನಾವು ಎಲ್ಲರನ್ನೂ ಆಹ್ವಾನಿಸುತ್ತೇವೆ” ಎಂದಿದ್ದಾರೆ.

“ಈ ರಸ್ತೆಯು ಕನ್ನಡ ಪ್ರೇಮಿಗಳ ಕಣ್ಣು ಮತ್ತು ಕಿವಿಗೆ ರಸದೌತಣ ನೀಡಲಿದೆ. ಬೆಂಗಳೂರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರನ್ನು ಆಕರ್ಷಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಆ ರಸ್ತೆಯಲ್ಲಿ ಕಾರ್ಯನಿರ್ವಹಿಸುವ ಕಚೇರಿಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಪರ್ಯಾಯ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವ ಕುರಿತು ಕಸಾಪ ಚರ್ಚಿಸುತ್ತಿದೆ. ಈ ರಸ್ತೆಯಲ್ಲಿ ಕನ್ನಡ ಕವಿಗಳ ಭಾವಚಿತ್ರವನ್ನು ಹಾಕಲಾಗುವುದು. ದೀಪಾಲಂಕಾರ ಮಾಡಲಾಗುವುದು. ಕನ್ನಡ ಪದಗಳಿಂದ ಅಲಂಕರಿಸಿದ ಗೋಡೆಗಳನ್ನು ನಿರ್ಮಿಸಲಾಗುವುದು. ಹಳದಿ-ಕೆಂಪು ಬಣ್ಣದಿಂದ ರಸ್ತೆಯ ಮೆರುಗು ಹೆಚ್ಚಿಸಲಾಗುವುದು ಎಂದು ಕಸಾಪ ಪ್ರಸ್ತಾಪಿಸಿದೆ.

ಕನ್ನಡದ ಆದಿಕವಿ ಪಂಪನ ಹೆಸರನ್ನು ಬದಲಿಸುವ ಅವಶ್ಯವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮಹೇಶ್ ಜೋಶಿಯವರು, “ನ್ಯಾಷನಲ್‌ ಕಾಲೇಜಿನಿಂದ ಆರಂಭವಾಗಿ ಮಿಂಟೋ ಆಸ್ಪತ್ರೆಯವರೆಗೆ ಪಂಪ ಮಹಾಕವಿ ರಸ್ತೆ ಇದೆ. ನ್ಯಾಷನಲ್ ಕಾಲೇಜಿನಿಂದ ಮಕ್ಕಳ ಕೂಟದವರೆಗೆ ಪಂಪ ಮಹಾಕವಿ ರಸ್ತೆ ಎಂದೇ ಇರುತ್ತದೆ. ಅದರ ಮುಂದಿನ ರಸ್ತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ ರಸ್ತೆ ಎಂದು ಇಡಬೇಕೆಂದು ಯೋಚಿಸಿದ್ದೇವೆ” ಎಂದರು.

ಪಂಪನ ಹೆಸರಲ್ಲಿರುವ ರಸ್ತೆಯಿಂದ ಕಸಾಪಕ್ಕೆ ಆಗುವ ನಷ್ಟವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕನ್ನಡ ಸಾಹಿತ್ಯ ಪರಿಷತ್‌ ಕೂಡ ಕನ್ನಡಕ್ಕಾಗಿಯೇ ದುಡಿದಿದೆ. ಮೈಸೂರು ಒಡೆಯರಿಂದ ಸ್ಥಾಪನೆಯಾಗಿರುವ ಸಂಸ್ಥೆ ಕಸಾಪ. ನಮ್ಮ ಎದುರಿನ ರಸ್ತೆಗೆ ನಮ್ಮತನ ಬೇಕಾಲ್ಲವೇ? ಕಸಾಪ ಎಂಬ ನಮ್ಮತನ ಬೇಡವೆ? ಪಂಪ ಎಂಬ ಹೆಸರನ್ನು ನಾವು ಬದಲಿಸುತ್ತಿಲ್ಲ. ಪಂಪ ರಸ್ತೆಯೂ ಇರುತ್ತದೆ. ಕನ್ನಡ ಸಾಹಿತ್ಯ ಪರಿಷತ್ ರಸ್ತೆಯೂ ಇರುತ್ತದೆ. ಹೀಗಾಗಿ ಈ ರಸ್ತೆಗೆ ಮತ್ತಷ್ಟು ಮೆರಗು ಬರುತ್ತದೆ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ಕಸಾಪ ಸದಸ್ಯತ್ವ ಮತ್ತು ಅನಕ್ಷರಸ್ಥತೆ; ಅಕ್ಷರಜ್ಞಾನ, ಸಾಹಿತ್ಯ, ಕಲೆ – ಒಂದು ವಿವೇಚನೆ

“ನಮ್ಮ ಸಂಸ್ಕೃತಿಯನ್ನು ತೆರೆದಿಡಬೇಕಿದೆ. ಈ ರಸ್ತೆಯಲ್ಲಿ ಕನ್ನಡತನ ತೆರೆದುಕೊಳ್ಳುತ್ತದೆ. ಹಳೆಯಗನ್ನಡ, ಹೊಸಗನ್ನಡದ ಸೊಬಗು ತೋರಿಸುತ್ತೇವೆ. ಕನ್ನಡತನವನ್ನು ಹೇಗೆಲ್ಲ ತರಬಹುದೆಂದು ಯೋಚನೆ ಮಾಡುತ್ತಿದ್ದೇವೆ. ಈಗ ಒಂದು ಕನಸು ಕಂಡಿದ್ದೇವೆ. ಇನ್ನೂ ಸಾಕಾರವಾಗಿಲ್ಲ” ಎಂದು ತಿಳಿಸಿದರು.

ಲೇಖಕಿ ಪ್ರತಿಭಾ ನಂದಕುಮಾರ್‌ ಅವರು ಈ ಕುರಿತು ಕಮೆಂಟ್ ಮಾಡಿದ್ದು, “ಇದಕ್ಕೆ ನನ್ನ ವಿರೋಧವಿದೆ” ಎಂದಿದ್ದಾರೆ.

ಬಿಜೆಪಿ ಮುಖಂಡ ಪ್ರಕಾಶ್‌ ಶೇಷರಾಘವಾಚರ್‌ ಪ್ರತಿಕ್ರಿಯಿಸಿ, “ಕನ್ನಡ ಭಾಷೆಯ ಶ್ರೀಮಂತಿಕೆ ಹೆಚ್ಚು ಮಾಡುವ ಕೆಲಸ ಮಾಡೋದು ಬಿಟ್ಟು ರಸ್ತೆಗೆ ಹೆಸರು ಬದಲಾಯಿಸುವ ಕೆಲಸಕ್ಕೆ ಮುಂದಾಗಿರುವುದು ಸರಿಯಲ್ಲ” ಎಂದು ಟೀಕಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

12 COMMENTS

  1. ಮೊದಲು ಎಲ್ಲಾ ಜಿಲ್ಲೆಗಳಲ್ಲಿ ಬಾಕಿ ಇರುವ ದತ್ತಿ ಕಾರ್ಯಕ್ರಮಗಳು, ಜಿಲ್ಲಾ ಮತ್ತು ತಾಲ್ಲೂಕು ಸಮ್ಮೇಳನಗಳನ್ನು ಮಾಡಿ
    ಅದು ಬಿಟ್ಟು ಪಂಪ ಮಹಾಕವಿ ರಸ್ತೆ ಹೆಸರು ಬದಲಿಸೋ ಕೆಲಸ ಬೇಡ… ಅದು ಆದ್ಯತೆಯ ಕೆಲಸವಲ್ಲ.*ಮಾನವ ಕುಲಂ ತಾನೊಂದೇ ವಲಂ* ಎಂದು ಸಮಾನತೆಯ ಸಂದೇಶವನ್ನು ಒಂದು ಸಾವಿರ ಸಾವಿರ ವರ್ಷಗಳ ಹಿಂದೆಯೇ ಪಂಪ‌ ಹೇಳಿದ್ದಾನೆ. ಅಂತ ಶ್ರೇಷ್ಠ ಕವಿಯ ಹೆಸರನ್ನು ಬದಲಿಸಲು ಕಸಾಪ ಅಧ್ಯಕ್ಷರು ಹೊರಟಿರುವುದು ಅಕ್ಷಮ್ಯ ಮತ್ತು ಖಂಡನೀಯ. ಕಸಾಪ ಕೂಡಲೇ ಈ ಹೆಸರು ಬದಲಾವಣೆ ಪ್ರಸ್ತಾಪವನ್ನು ಕೈ ಬಿಡಬೇಕು..

  2. ಈ ಜೋಶಿಗೆ ಎಲ್ಲೋ ತಲೆ ಕೆಟ್ಟಿದೆ. ಪಂಪ ನಮ್ಮವನಲ್ಲವಾ? ಹೆಸರು ಬದಲಾವಣೆ ಬೇಡ.

  3. ಜೋಶಿಯವರೇ, ಪಂಪ ನಮ್ಮವನಲ್ಲವೇ, ಇತ್ತೀಚಿಗೆ ರಸ್ತೆಯ, ಬಡಾವಣೆಯ ಹೆಸರು ಬದಲಾಯಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ, ದಶಕಗಳಿಂದ ಇಟ್ಟಿರುವ ಹೆಸರನ್ನು ಬದಲಾವಣೆ ಮಾಡುವ ಅಗತ್ಯವೆನಿದೆ, ಅದರ ಬದಲಿಗೆ ಕನ್ನಡ ಉಳಿಸುವ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಿ.

  4. ಮೊದಲು ಶಿಕಾರಿಪುರದಲ್ಲಿ ಕಸಾಪ ಕಟ್ಟಡವೆಲ್ಲಿ ಇದೆ ಅಂತ ಹುಡುಕಿ ತೋರಿಸು ,ಮುಂದೆ ರಸ್ತೆ ಹೆಸರು ಬದಲಾಯಿಸುವಂತೆ…ಮೂರ್ಖ ಶಿಖಾಮಣಿ.

  5. Y this president is acting like RSS man (he may love Bjp)because they are in d habit of changing roads name where ever they rule it’s a bad idea , pampa is our great ADI KAVI , no pl don’t do it 🙏

  6. Y this president is acting like RSS man (he may love Bjp too)because they are in d habit of changing roads name where ever they rule it’s a bad idea , pampa is our great ADI KAVI , no pl don’t do it 🙏

  7. ಇಂತಹ ಮಹಾಕವಿಗಳಿಂದಲೇ ನಮ್ಮ ನಾಡು, ಭಾಷೆಗೆ ಮೆರುಗು ಬಂದಿದೆ
    ಕಸ್ತೂರಿಯ ಕಂಪು ಇದೆ. ಇಂತಹ ಚಿಲ್ಲರೆ ವಿಚಾರಗಳನ್ನು ಬಿಟ್ಟು ನಾಡು, ಮರೆಆಗುತ್ತಿರುವ ಕನ್ನಡದ ಮೆರುಗನ್ನು ಆಧುನಿಕ ಯುಗದಲ್ಲಿ ಹೇಗೆ ಆಗಸದ ಎತ್ತರಕ್ಕೆ ಹರಡ ಬೇಕು ಎಂಬುದರ ಕಡೆಗೆ ಕಾರ್ಯ ಪ್ರವೃತ್ತ ರಾಗಿ

  8. ಪಂಪ ಅನ್ನಿ ಕನ್ನಡ ಅನ್ನಿ ಎಲ್ಲ ಒಂದೆ ಅಂತ ಮಹಾನ್ ಕವಿಯ ಹೆಸರನ್ನು ಬದಲಾಯಿಸುವುದು ಮೂರ್ಖತನದ ಪರಮಾವದಿ ಪಕ್ಕದ ರಸ್ತೆಗೆ ಆ ಹೆಸರಿಡಿ

  9. ಅಧಿಕವಿ ಹೆಸರನ್ನು ಬದಲಿಸುವುದಿರಲಿ ಅವರಹೇಸರೆಳೋಕು ನಾಲಾಯಕ್ ನೀನು ಲೆ ಜೋಶಿ.
    ನಿನ್ನ ತಲೆಗೆ ಬಲವಾದ ಪೆಟ್ ಹಾಕಿದ್ರೆ ಆಗ ನಿನಗಿಡಿದಿರೋ ಹುಚ್ಚು ಬಿಡುತ್ತಾ ನೋಡ್ಬೇಕು

  10. ಈ ಅಧ್ಯಕ್ಷರಿಗೆ ಮಾಡಲಿಕ್ಕೆ ಬೇರೆ ಕೆಲಸವಿಲ್ಲವಾ.ಆದಿಕವಿಯಿಂದ ಕನ್ನಡಕ್ಕೆ ಮೆರುಗು ಬಂದಿರೊದು.

  11. ಕನ್ನಡದ ದಿಕವಿ ಪಂಪನ ಹೆಸರಿರುವುದನ್ನು ಬದಲಾಯಿಸಬೇಕೆನ್ನುವ ಆಲೋಚನೆಯೇ ಕ.ಸಾ.ಪ ಕ್ಕೆ ಬಂದಿರುವುದು ದುರದೃಷ್ಟಕರ…..

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...