Homeಮುಖಪುಟಸೇತುಮಾನ್: ಫ್ಯೂಡಲ್ ಸಮುದಾಯದ ಒಣ ಪ್ರತಿಷ್ಠೆ, ಹೇಡಿತನ, ಕ್ರೌರ್ಯದ ಅನಾವರಣ

ಸೇತುಮಾನ್: ಫ್ಯೂಡಲ್ ಸಮುದಾಯದ ಒಣ ಪ್ರತಿಷ್ಠೆ, ಹೇಡಿತನ, ಕ್ರೌರ್ಯದ ಅನಾವರಣ

- Advertisement -
- Advertisement -

ಇದುವರೆಗೂ ನಾವು ನೋಡುತ್ತಾ ಬಂದಿರುವ ಬಹುಪಾಲು ಸಿನಿಮಾ, ಓದುತ್ತಾ ಬಂದಿರುವ ಸಾಹಿತ್ಯ ಹಾಗೂ ಇನ್ನಿತರ ಕಲಾ ಪ್ರಕಾರಗಳ ಸಾಂಗತ್ಯ, ಅವುಗಳಿಗೆ ಬಂದ ವಿಮರ್ಶೆ, ಚರ್ಚೆ, ಸಂವಾದಗಳು ಮತ್ತು ಇವುಗಳ ಪ್ರಭಾವದಿಂದ ನಮ್ಮಲ್ಲಿ ಆಳವಾಗಿ ಬೇರೂರಿವ ಅಭಿರುಚಿಗಳನ್ನು ಇವತ್ತಿಗೆ ಮತ್ತೊಮ್ಮೆ ಪರಾಮರ್ಶಿಸಿಕೊಳ್ಳಬೇಕಾದ ಜರೂರು ಇದೆ. ನಮ್ಮ ವಾಸ್ತವದ ಬದುಕು, ಸಮಾಜ, ವ್ಯವಸ್ಥೆ, ಪರಿಸರಗಳನ್ನ ಕಲಾ ಮಾಧ್ಯಮಗಳಲ್ಲಿ ಪ್ರತಿಬಿಂಬಿಸಿ, ಕಲಾರಸಿಕನ ಅಲೋಚನೆ ಮತ್ತು ಅಭಿರುಚಿಗಳನ್ನು ಬೆಳೆಸಬೇಕಾದ ಪ್ರಾಥಮಿಕ ಜವಾಬ್ದಾರಿ ಇವುಗಳ ನಿರ್ಮಾತೃಗಳಿಗಿದೆ. ಆದರೆ ಹೆಚ್ಚಿನ ಬಾರಿ ಈ ಕಲಾ ಮಾಧ್ಯಮಗಳು ಅಗ್ಗದ ಮನರಂಜನೆಗೆ ಸೀಮಿತವಾಗಿದ್ದು ಮಾತ್ರ ದುರಂತ. ನಮ್ಮ ವಾಸ್ತವದ ಬದುಕು, ವ್ಯವಸ್ಥೆಯಲ್ಲಿರುವ ಅಸಮಾನತೆ, ದೌರ್ಜನ್ಯಗಳನ್ನು ಇವುಗಳು ಒಳಗೊಳ್ಳಲೇ ಇಲ್ಲವೆಂದಲ್ಲ. ಆದರೆ, ಆಳದ ಪ್ರಜ್ಞೆಯಿಂದ ಕಾರ್ಯಕಾರಣಗಳ ಸಮೇತ ಸಮರ್ಪಕವಾಗಿ ಅದನ್ನು ನಿರ್ವಹಿಸಲಿಲ್ಲ ಮತ್ತು ಸಮಾಜದ ಎಲ್ಲಾ ಸಮುದಾಯವನ್ನು ಪ್ರತಿನಿಧಿಸಲು ಅವಕ್ಕೆ ಸಾಧ್ಯವಾಗಿಲ್ಲ. ಈ ಪರಂಪರೆಯಲ್ಲಿ ಯಜಮಾನಿಕೆ ಸಾಧಿಸಿದ್ದ ಒಂದು ಸಮುದಾಯ ಬಹುತೇಕ ಈ ಎಲ್ಲಾ ಕಲಾ ಪ್ರಕಾರಗಳು ಮತ್ತು ಅದರ ಸಂಪರ್ಕ ಸಾಧನಗಳನ್ನು ತನ್ನ ಕಪಿ ಮುಷ್ಠಿಯಲ್ಲಿಟ್ಟುಕೊಂಡಿದ್ದು, ಆ ಸಮುದಾಯದ ಪೂರ್ವಾಗ್ರಹ, ಸೀಮಿತ ತಿಳಿವಳಿಕೆ ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಅಭಿರುಚಿಗಳು ಬೆಳೆದು ಅದೇ ಚೌಕಟ್ಟಿನಲ್ಲಿಯೇ ಸಿಲುಕಿಕೊಂಡಿವೆ.

ಕೆಲವು ಬಿಡಿ ಪ್ರಯತ್ನಗಳ ಹೊರತಾಗಿಯೂ ನಮ್ಮಲ್ಲಿ ಆಳವಾಗಿ ಬೇರೂರಿಸಿರುವ ಪೂರ್ವಾಗ್ರಹ ಪೀಡಿತ ಜಡತ್ವದ ಅಭಿರುಚಿಗಳನ್ನು ತೊಡೆದು ಹಾಕುವುದು ಕಷ್ಟದ ಕೆಲಸ. ಇದಕ್ಕೆ ಒಂದು ಸಂಘಟಿತ ಮತ್ತು ಸಾಮೂಹಿಕ ಪ್ರಯತ್ನ ಬೇಕು. ಈ ಪ್ರಯತ್ನದ ಹಾದಿಯಲ್ಲಿ ಸಿನಿಮಾ ರಂಗಕ್ಕೆ ಹೊಸ ಗ್ರಹಿಕೆ, ಹೊಸ ಕಣ್ಣೋಟ, ಹೊಸ ಸಾಧ್ಯತೆಗಳನ್ನು ತೋರಿಸುತ್ತಿರುವುದು ಪ. ರಂಜಿತ್ ಹುಟ್ಟು ಹಾಕಿರುವ ’ನೀಲಂ ಪ್ರೊಡಕ್ಷನ್’ ಎಂಬ ನಿರ್ಮಾಣ ಸಂಸ್ಥೆ. ಇದರ ಭಾಗವಾಗಿಯೇ ನಿರ್ಮಾಣಗೊಂಡ ಸಿನಿಮಾ ಸೇತುಮಾನ್.

ಸೇತುಮಾನ್ (The Pig)

ಸೇತುಮಾನ್ ವರುಗರಿ (Roasted Meat) ಮತ್ತು ಮಾಪು ಕೊಡುಕ್ಕನುನ್ಜ್ ಸಾಮಿ (Grant us pardon, Sami) ಎಂಬ ಪೆರುಮಾಳ್ ಮುರಗನ್ ಅವರ ಎರಡು ಸಣ್ಣ ಕಥೆಗಳನ್ನು ಆಧರಿಸಿದ ಸಿನಿಮಾ ಸೇತುಮಾನ್ ಮೇಲುನೋಟಕ್ಕೆ ತಾತ ಮತ್ತು ಮೊಮ್ಮಗನ ನಡುವಿನ ಪ್ರೀತಿ ಮತ್ತು ಅವಲಂಬನೆಯನ್ನು ಹೇಳುತ್ತದೆ ಅನಿಸಿದರೂ, ಅದು ಬಹಳ ಮುಖ್ಯವಾಗಿ ಅನಾವರಣಗೊಳಿಸುವುದು ಫ್ಯೂಡಲ್ ಸಮುದಾಯದ ಒಣಪ್ರತಿಷ್ಠೆ, ಸಣ್ಣತನ, ಪುಕ್ಕಲು ಸ್ವಭಾವಗಳನ್ನು. ಇಷ್ಟೆಲ್ಲ ಅಸಹ್ಯಗಳ ನಡುವೆ ಅವರಲ್ಲಿ ಇರುವ ಜಾತಿ ಕ್ರೌರ್ಯವನ್ನು ಸಣ್ಣಸಣ್ಣ ಸಂಗತಿಗಳ ಮೂಲಕ ಬಹಳ ವಿವರವಾಗಿ ನಿರ್ದೇಶಕ ’ತಮಿಳ’ ಕಟ್ಟಿಕೊಡುತ್ತಾರೆ. ಮಾಂಸದ ಸಲುವಾಗಿ ದನವನ್ನು ಕೊಂದಿದ್ದಾನೆ ಎಂಬ ಕಾರಣಕ್ಕಾಗಿ ಪೂಚ್ಚಿಯಪ್ಪನ ಮಗನನ್ನು ಊರಿನ ಮೇಲ್ಜಾತಿ ಎಂದು ಕರೆದುಕೊಳ್ಳುವ ಜನ ಕೊಂದಿದ್ದಾರೆ. ಸೊಸೆ ಇದೇ ಕೊರಗಿನಲ್ಲಿ ಮಗುವಿಗೆ ಜನ್ಮ ನೀಡುವಾಗ ಅಸುನೀಗಿದ್ದಾಳೆ. ಈಗ ಬದುಕಿನಲ್ಲಿ ಅವನಿಗೆ ಉಳಿದಿರುವುದು ಮೊಮ್ಮಗ ಕುಮರೇಸನ್ ಮಾತ್ರ. ಅವನ ಏಕೈಕ ಗುರಿ ಮೊಮ್ಮಗನನ್ನು ವಿದ್ಯಾವಂತನನ್ನಾಗಿ ಮಾಡುವುದು. ಆ ಮೂಲಕ ಈ ಜಾತಿ ದೌರ್ಜನ್ಯದಿಂದ ಮುಕ್ತನನ್ನಾಗಿಸಿದರೆ, ತನ್ನ ಮೊಮ್ಮಗ ಘನತೆಯಿಂದ ಬದುಕಲು ಸಾಧ್ಯ ಎಂಬುದು ಅವನ ನಂಬುಗೆ. ಈ ಕಾರಣಕ್ಕಾಗಿ ಅವನು ಪ್ರಬಲ ಜಾತಿಯ ವಲ್ಲೈಯಾನ್ ಹತ್ತಿರ ಕೆಲಸಕ್ಕೆ ಸೇರಿದ್ದಾನೆ.

ಪೂಚ್ಚಿಯ ಯಜಮಾನ ವಲ್ಲೈಯಾನ್‌ಗೆ ಹಂದಿ ಮಾಂಸ ತಿನ್ನುವ ಮಹದಾಸೆ. ಹಂದಿ ಮಾಂಸ ತಿಂದರೆ ದೇಹಕ್ಕೆ ಯಾವ ರೀತಿಯ ಅನುಕೂಲಗಳಿವೆ ಎಂಬುದನ್ನು ತನ್ನ ಸಂಗಡಿಗರಿಗೆ ಮನವರಿಕೆ ಮಾಡಿ ಹಂದಿ ಕಡಿದು ಮಾಂಸ ಪಾಲು ಮಾಡಿಕೊಳ್ಳಲು ಪುಸಲಾಯಿಸುತ್ತಾನೆ. ದರ್ಪ, ಪ್ರತಿಷ್ಠೆ, ಕ್ರೌರ್ಯವನ್ನೆ ಮೈದುಂಬಿಸಿಕೊಂಡಿರುವ ಈ ಫ್ಯೂಡಲ್ ಸಮುದಾಯದ ಜನ ತನ್ನ ಇಷ್ಟದ ಊಟ ಮಾಡುವುದಕ್ಕೆ ಹೇಗೆ ಹೇಡಿಗಳ ರೀತಿ ವರ್ತಿಸುತ್ತಾರೆ ಮತ್ತು ಅದೇ ಸಂದರ್ಭದಲ್ಲಿ ದಲಿತರು ತಿನ್ನುವ ಆಹಾರದ ಬಗ್ಗೆ ಅಪಹಾಸ್ಯ ಮಾಡುವ ಇವರ ಬೂಟಾಟಿಕೆ, ಒಂದು ಮರದ ರೆಂಬೆಯ ವಿಷಯವಾಗಿ ವಲ್ಲೈಯಾನ್ ಮತ್ತು ಅವನ ದಾಯಾದಿ ನಡುವೆ ನಡೆಯುವ ಜಗಳದ ದೃಶ್ಯಗಳು ಈ ಸಮುದಾಯದ ಒಣಪ್ರತಿಷ್ಠೆಯನ್ನು ಅನಾವರಣ ಮಾಡುತ್ತದೆ. ಒಂದು ಮರದ ರೆಂಬೆಗೆ ಬಡಿದಾಡಿಕೊಳ್ಳುವ ಈ ದಾಯಾದಿಗಳು, ವಲ್ಲೈಯಾನ್ ತೋಟದಲ್ಲಿ, ಹಂದಿ ಮಾಂಸದ ಪಾಲಿಗೋಸ್ಕರ ತನ್ನ ಪ್ರತಿಷ್ಠೆ ಬಿಟ್ಟು ನಿಲ್ಲುವುದಂತು ಹಾಸ್ಯದ ಜೊತೆಗೆ ಹೇಸಿಗೆ ಹುಟ್ಟಿಸುತ್ತದೆ. ಆದರೆ ಮಾಂಸಕ್ಕಾಗಿ ಈ ದಾಯಾದಿಗಳಿಬ್ಬರ ನಡುವಿನ ಜಗಳ ಮತ್ತೆ ಶುರುವಾಗುತ್ತದೆ. ಇದನ್ನು ಬಿಡಿಸಲು ಬಂದ ಪೂಚ್ಚಿ ಸಾವಿನಲ್ಲಿ ಜಗಳ ಕೊನೆಯಾಗುತ್ತದೆ. ಕೊನೆಗೆ ಕುಮರೇಸನ್ ಅನಾಥನಾಗುತ್ತಾನೆ. ಈ ರೀತಿ ಫ್ಯೂಡಲ್ ಸಮುದಾಯದ ಒಣಪ್ರತಿಷ್ಠೆ, ದರ್ಪ, ಕ್ರೌರ್ಯಕ್ಕೆ ಬಲಿಯಾಗಿರುವ ಅಸಂಖ್ಯಾತ ಪೂಚ್ಚಿಯಪ್ಪ ಮತ್ತು ಈ ಕಾರಣಗಳಿಗಾಗಿಯೇ ಅನಾಥರಾದ ಅಸಂಖ್ಯಾತ ಕುಮರೇಸನ್ ನಮ್ಮ ಕಣ್ಣು ಮುಂದೆ ಇದ್ದಾರೆ ಮತ್ತು ಇಂತ ಘಟನೆಗಳು ಪ್ರತಿ ದಿನ ಘಟಿಸುತ್ತಲೆ ಇವೆ. ಆದರೆ ಯಜಮಾನಿಕೆಯ ಸಮುದಾಯಗಳ ಕಲಾ ನಿರ್ಮಾತೃಗಳಿಗೆ ಅವೆಲ್ಲಾ ಕಾಣಿಸುವುದು ಇಲ್ಲವೇ ಇಲ್ಲವೆನ್ನುವಷ್ಟು ವಿರಳವಾದ ವಿದ್ಯಮಾನ.

ಪೂಚ್ಚಿ ತನ್ನ ಮೊಮ್ಮಗನನ್ನು ಶಾಲೆಗೆ ಬಿಡಲು ಬಂದಾಗ ಅಲ್ಲಿಯ ಶಿಕ್ಷಕ ಆತನನ್ನು ಮೂದಲಿಸುವ ದೃಶ್ಯ, ಪೂಚ್ಚಿಯ ಸಮುದಾಯ ಅಕ್ಷರ ಕಲಿಯುವುದರ ಬಗ್ಗೆ ಆ ಶಿಕ್ಷಕನಿಗೆ ಎಷ್ಟು ಅಸಹನೆ ಇದೆ ಎಂಬುದನ್ನು ತೋರಿಸುತ್ತದೆ. ಶಾಲೆಯಲ್ಲಿ ದಲಿತ ಮಕ್ಕಳ ಕೈಯಿಂದ ಖಾಸಗಿ ಕೆಲಸ ಮಾಡಿಸುವುದು; ಅವರು ತಿನ್ನುವ ಊಟವನ್ನು ಲೇವಡಿ ಮಾಡುವುದು; ಈ ತರದ ಸೂಕ್ಷ್ಮ ವಿಚಾರಗಳನ್ನು ತಮಿಳ ಮಧ್ಯೆಮಧ್ಯೆ ತರುತ್ತಾರೆ. ಶಾಲೆಯಲ್ಲಿ ಕುಮರೇಸನ್‌ನನ್ನು ನೀನು ಯಾವಯಾವ ಮಾಂಸ ತಿನ್ನುತ್ತೀಯ ಎಂದು ಪ್ರಶ್ನೆ ಕೇಳಿ ಹಾಸ್ಯ ಮಾಡುವ ಅದೇ ಫ್ಯೂಡಲ್ ಸಮುದಾಯದ ಶಿಕ್ಷಕ, ತಾನು ಹಂದಿ ಮಾಂಸ ತಿಂದ ಸಂಗತಿಯನ್ನು ಶಾಲೆಯಲ್ಲಿ ಯಾರಿಗೂ ಹೇಳಬೇಡ ಎಂದು ಅಂಗಲಾಚುತ್ತಾನೆ. ಈ ಶೂದ್ರ ಸಮುದಾಯದ ’ಬಲಿಷ್ಟ’ ಜಾತಿ ಜನರ ಬೂಟಾಟಿಕೆಯೆ ವೈದಿಕಶಾಹಿಗಳ ಬಂಡವಾಳ. ಈ ಬಲಿಷ್ಟ ಶೂದ್ರ ಸಮುದಾಯ ಪ್ರತಿದಿನ ತಾವು ವೈದಿಕರಾಗಲು ಹವಣಿಸುತ್ತಿದ್ದಾರೆ. ತಾವು ತಿನ್ನುವ ಆಹಾರದ ಬಗ್ಗೆ ಕೀಳರಿಮೆ ಇಟ್ಟುಕೊಂಡಿರುವುದು, ನಿರ್ದಿಷ್ಟ ವಾರಗಳಂದು ಮಾಂಸ ತಿನ್ನುವುದಿಲ್ಲ ಎನ್ನುವುದು, ತಮ್ಮ ಇಷ್ಟದ ಆಹಾರವನ್ನು ಕದ್ದು ಮುಚ್ಚಿ ತಿನ್ನುವ ಈ ಹೇಡಿತನದ ವಿಚಾರಗಳನ್ನು ಸಿನಿಮಾದ ದೃಶ್ಯಾವಳಿಗಳು ನೆನಪಿಸುತ್ತವೆ.

ಈ ರೀತಿಯ ಜಾತಿ ಅಸಮಾನತೆ, ದಬ್ಬಾಳಿಕೆ, ದೌರ್ಜನ್ಯಕ್ಕೆ ಪ್ರತಿರೋಧದ ಧ್ವನಿಯಾಗಿ ’ರಂಗ’ನ ಪಾತ್ರವನ್ನು ನಿರ್ದೇಶಕ ’ತಮಿಳ’ ಕಟ್ಟಿಕೊಡುತ್ತಾನೆ. ’ಈಗ ದಲಿತ ಸಮುದಾಯದ ಯುವಕರಲ್ಲಿ ಬೆಳೆಯುತ್ತಿರುವ ಪ್ರಜ್ಞೆಯ ಪ್ರತೀಕ ಈ ರಂಗ’ ಎಂದು ಈ ಪಾತ್ರದ ಬಗ್ಗೆ ನಿರ್ದೇಶಕ ಹೇಳುತ್ತಾರೆ. ಶಾಲೆಯಲ್ಲಿ ತನ್ನ ಮಗಳ ಕೈಯಲ್ಲಿ ಖಾಸಗಿ ಕೆಲಸ ಮಾಡುವುದನ್ನು, ಹೊಟೆಲ್‌ನಲ್ಲಿ ಇವನ ಜಾತಿ ನೋಡಿ ಪೇಪರ್ ಗ್ಲಾಸಿನಲ್ಲಿ ಟೀ ಕೊಡುವುದು, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ ದೂರದೂರಿನ ಶಾಲೆಯ ಜೊತೆಗೆ ಅದನ್ನು ವಿಲೀನ ಮಾಡುವುದಕ್ಕೆ ಮುಂದಾಗುವುದನ್ನು ರಂಗ ಬಹಳ ಖಚಿತವಾಗಿ ವಿರೋಧಿಸುತ್ತಾನೆ. ನೇರವಾಗಿ ಟೀಕಿಸುತ್ತಾನೆ.

ಸೇತುಮಾನ್ ಸಿನಿಮಾ ಅದು ಚರ್ಚಿಸುವ ವಿಷಯದಿಂದಷ್ಟೆ ಮುಖ್ಯವಲ್ಲ, ಅದರ ಕಲಾತ್ಮಕತೆ, ಪಾತ್ರಾಭಿನಯಗಳಿಂದ ಕೂಡ ಪರಿಣಾಮಕಾರಿಯಾಗಿದೆ. ಇಷ್ಟಾಗಿಯೂ ಈ ಸಿನಿಮಾದ ಬಗ್ಗೆ ಯಾಕೆ ಹೆಚ್ಚು ಚರ್ಚೆಗಳು ನಡೆದಿಲ್ಲ ಎಂಬುದು ಸೋಜಿಗದ ಸಂಗತಿ. ಸಿನಿಮಾದಲ್ಲಿನ ಕೆಲವು ಲಾಂಗ್‌ಷಾಟ್‌ಗಳಲ್ಲಿ ತೋರುವ ಸ್ಥಿರ ದೃಶ್ಯಗಳು ಬಹಳ ಸಾವಯವಗಿ ಮೂಡಿವೆ. ಉದಾಹರಣೆಗೆ ಸಿನಿಮಾದ ಪ್ರಾರಂಭದಲ್ಲೆ, ವಿಸ್ತಾರವಾದ ಬಯಲಿನ ನಡುವೆ ಪೂಚ್ಚಿ ತನ್ನ ಮೊಮ್ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಡಲು ಹೋಗುತ್ತಿದ್ದಾನೆ. ತನ್ನ ತಾತನ ಹೆಗಲ ಮೇಲೆ ಕುಳಿತ ಕುಮರೇಸನ್ ಕೇಳುತ್ತಾನೆ: ’ನಾವ್ಯಾಕೆ ತಾತ ಊರಿನ ಹೊರಗೆ ಇರಬೇಕು, ಊರಿನ ಒಳಗೆ ಇದ್ದರೆ ನಾನು ಶಾಲೆಗೆ ಬೇಗ ಹೋಗಬಹುದಲ್ವಾ? ಈ ಪ್ರಶ್ನೆಯನ್ನು ಆ ದೃಶ್ಯ ಅದ್ಭುತವಾಗಿ ಕಟ್ಟಿಕೊಡುತ್ತದೆ. ಅದೇ ರೀತಿ ವಲ್ಲೈಯಾನ್ ತನ್ನ ಸಂಗಡಿಗರಿಗೆ ಹಂದಿ ಮಾಂಸದ ಮಹತ್ವವನ್ನು ವಿವರಿಸುವ ಮತ್ತು ಅವರ ನಡುವಿನ ಸಂಭಾಷಣೆಯ ದೃಶ್ಯ; ಸೇತುಮಾನ್‌ನಲ್ಲಿ ನಟಿಸಿರುವ ಕಲಾವಿದರನ್ನೂ ಈ ಹಿಂದೆ ಯಾವ ಸಿನಿಮಾಗಳಲ್ಲೂ ಹೆಚ್ಚು ಗಮನಿಸಿಲ್ಲ. ಇಡೀ ಸಿನಿಮಾ ಬಹಳ ತೀವ್ರವಾಗಿ ಪ್ರೇಕ್ಷಕನಿಗೆ ದಾಟುವುದಕ್ಕೆ ಈ ಪಾತ್ರಗಳ ಸಹಜ ಅಭಿನಯ ಮುಖ್ಯ ಕಾರಣ.

ಸೇತುಮಾನ್ ನೀಲಂ ಪ್ರೊಡಕ್ಷನ್‌ನಲ್ಲಿ ನಿರ್ಮಾಣಗೊಂಡಿರುವ ನಾಲ್ಕನೇ ಸಿನಿಮಾ. ಸಿನಿಮಾರಂಗಕ್ಕೆ ಹೊಸ ಗ್ರಹಿಕೆ, ಹೊಸ ಕಣ್ಣೋಟ, ಹೊಸ ಸಾಧ್ಯತೆಗಳನ್ನು ಕಟ್ಟಿಕೊಟ್ಟ ಮಾರಿ ಸೆಲ್ವರಾಜ್, ಫ್ರಾಂಕ್ಲಿನ್ ಜಾಕಬ್, ತಮಿಳರಂತಹ ಯುವ ನಿರ್ದೇಶಕರಿಗೆ ಅವಕಾಶ ನೀಡಿದ ಹೆಗ್ಗಳಿಕೆ ನೀಲಂ ಪ್ರೊಡಕ್ಷನ್‌ದು. ಈ ತರಹದ ಸೂಕ್ಷ್ಮತೆಯುಳ್ಳ ಅಸಂಖ್ಯಾತ ಯುವ ನಿರ್ದೇಶಕರು ನೀಲಂ ಪ್ರೊಡಕ್ಷನ್‌ನಿಂದ ಬೆಳಕಿಗೆ ಬರುವ ಸಾಧ್ಯತೆಗಳು ಈಗಾಗಲೇ ದಟ್ಟವಾಗಿ ಗೋಚರಿಸಿದೆ.

ಸೇತುಮಾನ್ ಸಿನಿಮಾದ ಭಾಗವಾದ ಎಲ್ಲರಿಗೂ ಅಭಿನಂದನೆಗಳು. ಈ ಸಿನಿಮಾ Sony Live ಒಟಿಟಿ ವೇದಿಕೆಯಲ್ಲಿ ಲಭ್ಯವಿದೆ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...