Homeಚಳವಳಿಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

- Advertisement -
- Advertisement -

ನಾವು ಒಂದು ಕ್ರಾಂತಿಯನ್ನು ಪದಕೋಶದ ಅರ್ಥದಲ್ಲಿ- ಸರಳವಾಗಿ, ಈಗಿರುವ ಸರಕಾರವನ್ನು ಶಾಂತಿಯುತವಾಗಿ ಅಥವಾ ಹಿಂಸಾತ್ಮಕವಾಗಿ ಕಿತ್ತೆಸೆಯುವುದು ಮತ್ತದರ ಜಾಗದಲ್ಲಿ ಹೊಸ ಸರಕಾರವೊಂದನ್ನು ಸ್ಥಾಪಿಸುವುದು ಎಂದು ಹೇಳುವುದರ ಮೂಲಕ ವ್ಯಾಖ್ಯಾನಿಸಬಹುದು. ಖಂಡಿತವಾಗಿಯೂ ಇದೊಂದು ಬಹಳ ಔಪಚಾರಿಕ ರಾಜಕೀಯ ವ್ಯಾಖ್ಯಾನವಾದರೂ, ನಿರ್ದಿಷ್ಟವಾಗಿ ಅಷ್ಟೇನೂ ಅರ್ಥಪೂರ್ಣವಲ್ಲ. ನಾವು ಒಂದು ರೀತಿಯ ಹೆಚ್ಚು ಮಾರ್ಕ್ಸ್‌ವಾದಿ ಅರ್ಥದಲ್ಲಿ ಒಂದು ಕ್ರಾಂತಿಯನ್ನು, ಅಸ್ತಿತ್ವದಲ್ಲಿರುವ ವ್ಯವಸ್ಥೆಯೊಂದನ್ನು ಹೆಚ್ಚು ಪ್ರಗತಿಪರವಾದ ವ್ಯವಸ್ಥೆಯಿಂದ ಬದಲಿಸುವುದು ಎಂದು ವ್ಯಾಖ್ಯಾನಿಸಬಹುದು. ಖಂಡಿತವಾಗಿಯೂ ಇಲ್ಲಿ ಪ್ರಶ್ನೆಯೊಂದು ಯಾವಾಗಲೂ ಏಳುತ್ತದೆ; ಏನೆಂದರೆ, ಯಾವುದು “ಐತಿಹಾಸಿಕವಾಗಿ ಹೆಚ್ಚು ಪ್ರಗತಿಪರ” ಎಂಬುದನ್ನು ನಿರ್ಧರಿಸುವವರು ಯಾರು ಎಂಬುದು. ಸಾಮಾನ್ಯವಾಗಿ- ಕನಿಷ್ಟ ಪಕ್ಷ ತಮ್ಮತಮ್ಮ ದೇಶದಲ್ಲಾದರೂ- ಅದು ಗೆದ್ದವರೇ ಆಗಿರುತ್ತಾರೆ.

ಅಂತಿಮವಾಗಿ, ಒಂದು ಕ್ರಾಂತಿಯನ್ನು ಕ್ರಾಂತಿಕಾರಿ ಗುಣಸ್ವಭಾವ ಹೊಂದಿರುವವರ ನೇತೃತ್ವವಿರುವ, ಕ್ರಾಂತಿಕಾರಿ ಗುಣಸ್ವಭಾವದ ಜನರನ್ನು ಆಕರ್ಷಿಸುವ ಒಂದು ರಾಜಕೀಯ ಚಳವಳಿ ಎಂದು ಹೇಳುವ ಮೂಲಕ ನಾವು ಮನಃಶಾಸ್ತ್ರೀಯ ಅರ್ಥದಲ್ಲಿ ವ್ಯಾಖ್ಯಾನಿಸಬಹುದು.

ಅದು, ಖಂಡಿತವಾಗಿಯೂ, ಅಂತಾ ಉತ್ತಮ ವ್ಯಾಖ್ಯಾನವೇನಲ್ಲವಾದರೂ, ಈ ಪ್ರಬಂಧದ ನಿಲುವಿನಿಂದ ನೋಡಿದಲ್ಲಿ, ಒಂದು ಉಪಯುಕ್ತ ಹೇಳಿಕೆಯಾಗಿದ್ದು, ಈಗ ಚರ್ಚಿಸಲಿರುವ ಪ್ರಶ್ನೆಯ ಮೇಲೆ ಎಲ್ಲಾ ಒತ್ತನ್ನು ನೀಡುತ್ತದೆ: ಅದೆಂದರೆ, ಯಾವುದು ಕ್ರಾಂತಿಕಾರಿ ಗುಣಸ್ವಭಾವ?

“ಕ್ರಾಂತಿಕಾರಿ ಗುಣಸ್ವಭಾವ”ದ ಅತ್ಯಂತ ಮೂಲಭೂತ ಗುಣಲಕ್ಷಣ ಎಂದರೆ, ಆತ ಸ್ವತಂತ್ರ ಮತ್ತು ಮುಕ್ತ. ಸ್ವಾತಂತ್ರ್ಯ ಎಂದರೆ, ಮೇಲಿರುವ ಬಲಶಾಲಿಗಳಿಗೆ ಸಹವಾಸದ ನಿಷ್ಠೆಯ ಮತ್ತು ನಾನು ಹಿಂದೆ ಸರ್ವಾಧಿಕಾರಿ ಗುಣಸ್ವಭಾವದ ಕುರಿತು ಮಾತನಾಡುವಾಗ ವಿವರಿಸಿದ ತಮಗಿಂತ ಕೆಳಗಿರುವ ಬಲಹೀನರ ಬಗೆಗಿನ ನಿಷ್ಠೆಯ ತದ್ವಿರುದ್ಧವಾದದ್ದು ಎಂದು ಮನಗಾಣುವುದು ಸುಲಭ.

ಆದರೆ, ಇದು “ಮುಕ್ತತೆ” ಮತ್ತು “ಸ್ವಾತಂತ್ರ್ಯ” (ಇಂಡಿಪೆಂಡೆನ್ಸ್ ಮತ್ತು ಫ್ರೀಡಂ) ಎಂದರೆ ಏನು ಎಂಬುದನ್ನು ಸಾಕಷ್ಟು ಸ್ಪಷ್ಟಪಡಿಸುವುದಿಲ್ಲ. ಸಮಸ್ಯೆ ಇರುವುದು ನಿರ್ದಿಷ್ಟವಾಗಿ “ಫ್ರೀಡಂ” ಮತ್ತು “ಇಂಡಿಪೆಂಡೆನ್ಸ್” ಎಂಬ ಪದಗಳನ್ನು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಪ್ರತಿಯೊಬ್ಬರೂ ಮುಕ್ತರು ಮತ್ತು ಸ್ವತಂತ್ರರು ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. (ಕನ್ನಡದಲ್ಲಿ ಎರಡೂ ಪದಗಳನ್ನು ಹೆಚ್ಚು ಕಡಿಮೆ ಒಂದೇ ಅರ್ಥದಲ್ಲಿ ಬಳಸಲಾಗುತ್ತಿದೆ- ಅನುವಾದಕನ ಟಿಪ್ಪಣಿ). ಈ ಎರಡೂ ಪದಗಳ ಪರಿಕಲ್ಪನೆಯ ಬೇರು ಇರುವುದು ಊಳಿಗಮಾನ್ಯ (ಫ್ಯೂಡಲ್) ವ್ಯವಸ್ಥೆಯ ವಿರುದ್ಧ ಮಧ್ಯಮ ವರ್ಗದ ಕ್ರಾಂತಿಯಲ್ಲಿ ಮತ್ತು ಅವುಗಳನ್ನು ಪ್ರಭುತ್ವಗಳ ತದ್ವಿರುದ್ಧವಾಗಿ ಇಟ್ಟು ನೋಡುವುದರಿಂದ ಅವು ಹೊಸ ಶಕ್ತಿಯನ್ನು ಪಡೆದುಕೊಂಡಿವೆ.

ಇದನ್ನೂ ಓದಿ: ಅನುವಾದ; ಕ್ರಾಂತಿಕಾರಿ ಗುಣಸ್ವಭಾವ-ಎರಿಕ್ ಫ್ರಾಮ್ ; ಭಾಗ-1

ಊಳಿಗಮಾನ್ಯ ಮತ್ತು ರಾಜಾಡಳಿತದ ಸರ್ವಾಧಿಕಾರದ ವ್ಯವಸ್ಥೆಯ ಕಾಲದಲ್ಲಿ, ವ್ಯಕ್ತಿಯು ಮುಕ್ತನಾಗಲೀ, ಸ್ವತಂತ್ರನಾಗಲೀ ಆಗಿರಲಿಲ್ಲ. ಆತ ತನಗಿಂತಲೂ ಮೇಲಿನವರ ಸಾಂಪ್ರದಾಯಿಕ ಅಥವಾ ನಿರಂಕುಶ ನಿಯಮ, ಕಾನೂನು ಮತ್ತು ಆಜ್ಞೆಗಳಿಗೆ ಅಧೀನನಾಗಿದ್ದ. ಯೂರೋಪ್ ಮತ್ತು ಅಮೆರಿಕಾದಲ್ಲಿ ಬೂರ್ಜ್ವಾ (bourgeois, ಮಧ್ಯಮ ವರ್ಗ) ಕ್ರಾಂತಿಗಳು ವ್ಯಕ್ತಿಗೆ ರಾಜಕೀಯ ಮುಕ್ತತೆ ಮತ್ತು ಸ್ವಾತಂತ್ರ್ಯವನ್ನು ತಂದುಕೊಟ್ಟವು.

ಈ ಸ್ವಾತಂತ್ರ್ಯವು “ಒಂದದಿಂದ ಸ್ವಾತಂತ್ರ್ಯ” ಆಗಿತ್ತು. ಅಂದರೆ, ರಾಜಕೀಯ ಅಧಿಕಾರಸ್ಥರಿಂದ ಸ್ವಾತಂತ್ರ್ಯ ಆಗಿತ್ತು. ಇಂದಿನ ಕೈಗಾರಿಕಾವಾದವು ಹೊಸ ರೀತಿಯ ಅಧಿಕಾರಶಾಹಿಗಳಲ್ಲಿ ಸಾಮಾನ್ಯರಿಗೆ ಹೊಸ ರೀತಿಯ ಅವಲಂಬನೆಗಳನ್ನು ಸೃಷ್ಟಿಸಿದ್ದರೂ, ಇದೊಂದು ಪ್ರಮುಖ ಬೆಳವಣಿಗೆಯಾಗಿತ್ತು, ಏಕೆಂದರೆ ಇದಕ್ಕೆ ವ್ಯತಿರಿಕ್ತವಾಗಿ ಕೈಗಾರಿಕಾವಾದವು ಹತ್ತೊಂಭತ್ತನೇ ಶತಮಾನದಲ್ಲಿ ವ್ಯಾಪಾರಿಗಳಿಗೆ ಅನಿಯಮಿತ ಅವಕಾಶ ಮತ್ತು ಸ್ವಾತಂತ್ರ್ಯವನ್ನು ಒದಗಿಸಿತ್ತು.

ಏನಿದ್ದರೂ, ಮುಕ್ತತೆ ಮತ್ತು ಸ್ವಾತಂತ್ರ್ಯದ ಸಮಸ್ಯೆಯು ಮೇಲೆ ಹೇಳಿದ ಅರ್ಥದ ಮುಕ್ತತೆ ಮತ್ತು ಸ್ವಾತಂತ್ರ್ಯಕ್ಕಿಂತ ಹೆಚ್ಚು ಆಳವಾಗಿದೆ. ವಾಸ್ತವದಲ್ಲಿ, ಸ್ವಾತಂತ್ರ್ಯದ ಸಮಸ್ಯೆಯು ಮಾನವ ಅಭಿವೃದ್ಧಿಯ ಆತ್ಯಂತ ಮೂಲಭೂತ ಅಂಶಗಳಲ್ಲಿ ಒಂದು- ನಾವು ಅದನ್ನು ಅದರ ಸಂಪೂರ್ಣ ಆಳ ಮತ್ತು ಅಗಲದಲ್ಲಿ ನೋಡಿದಲ್ಲಿ ಮಾತ್ರ.

ಆಗ ತಾನೇ ಹುಟ್ಟಿದ ಶಿಶು ತನ್ನ ಪರಿಸರದೊಂದಿಗೆ ಒಂದಾಗಿರುತ್ತದೆ. ಅದಕ್ಕೆ ಹೊರಗಿನ ಪ್ರಪಂಚವು ಆಗಿನ್ನೂ, ತನ್ನಿಂದ ಪ್ರತ್ಯೇಕವಾದ ಒಂದು ವಾಸ್ತವವಾಗಿ ಅಸ್ತಿತ್ವದಲ್ಲಿ ಇರುವುದಿಲ್ಲ. ಆಗಲೂ ಕೂಡಾ ಶಿಶುವು ತನ್ನಿಂದ ಹೊರಗಿರುವ ವಸ್ತುಗಳನ್ನು ಗುರುತಿಸಬಲ್ಲದು. ಹಾಗಿದ್ದೂ, ಅದು ಇನ್ನೂ ಬಹಳ ಕಾಲ ಅಸಹಾಯಕವಾಗಿರುತ್ತದೆ ಮತ್ತು ತನ್ನ ತಂದೆ, ತಾಯಿಯ ನೆರವಿಲ್ಲದೆ ಬದುಕಿ ಉಳಿಯಲಾರದು. ಇತರ ಎಳೆಯ ಪ್ರಾಣಿಗಳಿಗೆ ವ್ಯತಿರಿಕ್ತವಾಗಿ, ಮಾನವನ ಈ ದೀರ್ಘಕಾಲದ ಅಸಹಾಯಕತೆಯು ಅದರ ಬೆಳವಣಿಗೆಗೆ ಒಂದು ತಳಹದಿಯಾಗಿದ್ದರೂ, ಅದು ಅದಕ್ಕೆ ಅಧಿಕಾರವನ್ನು ಅವಲಂಬಿಸಿರಲು ಮತ್ತು ಅಧಿಕಾರಕ್ಕೆ ಭಯಪಡಲು ಕಲಿಸುತ್ತದೆ.

ಸಾಮಾನ್ಯವಾಗಿ ಹುಟ್ಟಿನಿಂದ ಪ್ರೌಢಾವಸ್ಥೆಯ ತನಕದ ವರ್ಷಗಳಲ್ಲಿ ಅಧಿಕಾರವನ್ನು ಪ್ರತಿನಿಧಿಸುವವರು ಹೆತ್ತವರಾಗಿರುತ್ತಾರೆ ಮತ್ತು ಅದು ಇಬ್ಬಗೆಯ ಆಯಾಮಗಳನ್ನು ಹೊಂದಿರುತ್ತದೆ: ನೆರವಾಗುವುದು ಮತ್ತು ಶಿಕ್ಷಿಸುವುದು. ಒಬ್ಬ ಎಳೆಯ ವ್ಯಕ್ತಿ ಪ್ರೌಢಾವಸ್ಥೆಗೆ ತಲಪುವ ಕಾಲದ ಆಸುಪಾಸಿನಲ್ಲಿ ತನ್ನನ್ನು ತಾನೇ ರಕ್ಷಿಸಿಕೊಳ್ಳಬಲ್ಲಂತ ಅಭಿವೃದ್ಧಿಯ ಹಂತ ತಲಪಿರುತ್ತಾನೆ (ಖಂಡಿತವಾಗಿಯೂ, ಸರಳ ಬೇಸಾಯಗಾರ ಸಮಾಜಗಳಲ್ಲಿ.) ಮತ್ತು ಇನ್ನೂ ತನ್ನ ಸಾಮಾಜಿಕ ಅಸ್ತಿತ್ವಕ್ಕಾಗಿ ಹೆತ್ತವರ ಋಣದಲ್ಲಿ ಇರಬೇಕಾದ ಅಗತ್ಯವಿರುವುದಿಲ್ಲ. ಆತ ಆರ್ಥಿಕವಾಗಿ ಅವರಿಂದ ಸ್ವತಂತ್ರನಾಗಿರಬಹುದು. ಹಲವು ಪ್ರಾಚೀನ ಸಮಾಜಗಳಲ್ಲಿ ಈ ಸ್ವಾತಂತ್ರ್ಯವನ್ನು (ಮುಖ್ಯವಾಗಿ ತಾಯಿಯಿಂದ) ದೀಕ್ಷೆಯ ವಿಧಿವಿಧಾನಗಳ ಮೂಲಕ ಅಭಿವ್ಯಕ್ತಿಸಲಾಗುತ್ತದೆ. ಆದರೆ, ಅವು ತನ್ನ ಕುಲದ ಮೇಲಿನ ಅಥವಾ ಅದರ ಗಂಡು ಅಂಶದ ಮೇಲಿನ ಅವಲಂಬನೆಯನ್ನು ಮುಟ್ಟಲು ಹೋಗುವುದಿಲ್ಲ. ಲೈಂಗಿಕವಾಗಿ ಪ್ರೌಢವಾಗುವುದು ಕೂಡಾ ಹೆತ್ತವರಿಂದ ಬಿಡುಗಡೆಯ ಪ್ರಕ್ರಿಯೆಯನ್ನು ಮುನ್ನಡೆಸುವ ಇನ್ನೊಂದು ಅಂಶವಾಗಿದೆ. ಲೈಂಗಿಕ ಬಯಕೆ ಮತ್ತು ಲೈಂಗಿಕ ತೃಪ್ತಿಯು ಒಬ್ಬ ವ್ಯಕ್ತಿಯನ್ನು ತನ್ನ ಕುಟುಂಬದ ಹೊರಗಿನವರ ಜೊತೆಗೆ ಕಟ್ಟಿಹಾಕುತ್ತದೆ. ಸ್ವತಃ ಲೈಂಗಿಕ ಕ್ರಿಯೆಯಲ್ಲಿ ಮಾತ್ರ- ತಂದೆಯಾಗಲೀ, ತಾಯಿಯಾಗಲೀ ನೆರವಾಗಲು ಸಾಧ್ಯವಿಲ್ಲ ಮತ್ತು ಇದರಲ್ಲಿ ಯುವ ವ್ಯಕ್ತಿ ತನ್ನ ದಾರಿ ಹುಡುಕಿಕೊಳ್ಳುತ್ತಾನೆ.

ಇದನ್ನೂ ಓದಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

ಪ್ರೌಢಾವಸ್ಥೆಗೆ ತಲಪಿದ ನಂತರದ ಐದು ಅಥವಾ ಹತ್ತು ವರ್ಷಗಳ ತನಕ ಲೈಂಗಿಕ ತೃಪ್ತಿಯನ್ನು ಮುಂದೂಡಲಾಗುವ ಸಮಾಜಗಳಲ್ಲಿ ಕೂಡಾ, ಎಚ್ಚೆತ್ತ ಲೈಂಗಿಕ ಬಯಕೆಯು ಸ್ವಾತಂತ್ರ್ಯಕ್ಕಾಗಿ ಹಂಬಲವನ್ನು ಹುಟ್ಟಿಸುತ್ತದೆ ಮತ್ತು ಹೆತ್ತವರ ಮತ್ತು ಸಾಮಾಜಿಕ ಅಧಿಕಾರಗಳ ಜೊತೆಗೆ ಸಂಘರ್ಷಗಳನ್ನುಂಟುಮಾಡುತ್ತದೆ. ಸಹಜ ವ್ಯಕ್ತಿಗಳು ಪ್ರೌಢಾವಸ್ಥೆಯ ನಂತರದ ಈ ವರ್ಷಗಳಲ್ಲಿ ಈ ಮಟ್ಟದ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಆದರೆ, ಆತ ಸ್ವಂತ ಸಂಪಾದನೆ ಮಾಡಿ ಜೀವನ ನಡೆಸಿದರೂ, ಮದುವೆಯಾಗಿ ಸ್ವಂತ ಮಕ್ಕಳನ್ನು ಸಾಕಿದರೂ, ಆತ ನಿಜವಾಗಿಯೂ ಮುಕ್ತ ಮತ್ತು ಸ್ವತಂತ್ರನಾಗುವುದಿಲ್ಲ.

ಅವನು ಇನ್ನೂ ಬಹುತೇಕ ಅಸಹಾಯಕನಾದ ಮತ್ತು ತನ್ನನ್ನು ರಕ್ಷಿಸಿಕೊಳ್ಳಲು, ತನಗೊಂದು ಖಾತರಿ, ಸ್ಥಿರತೆ ನೀಡುವಂತ ಅಧಿಕಾರವನ್ನು ಹುಡುಕಲು ಯತ್ನಿಸುತ್ತಿರುವ ಒಬ್ಬ ವಯಸ್ಕ ವ್ಯಕ್ತಿ ಮಾತ್ರ. ಈ ಸಹಾಯಕ್ಕೆ ಬದಲಾಗಿ ನೀಡುವ ಬೆಲೆಯಾಗಿ- ಆತ ತನ್ನನ್ನು ಅವರ (ಅಧಿಕಾರಸ್ಥರ) ಅವಲಂಬಿತನನ್ನಾಗಿ ಮಾಡಿಕೊಳ್ಳುತ್ತಾನೆ, ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತು ತನ್ನ ಬೆಳವಣಿಗೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಾನೆ. ಅವನು ತನ್ನ ಯೋಚನೆ, ಚಿಂತನೆಗಳನ್ನು ಅವರಿಂದ ಎರವಲು ಪಡೆಯುತ್ತಾನೆ- ತನ್ನ ಭಾವನೆಗಳು, ತನ್ನ ಗುರಿಗಳು, ತನ್ನ ಮೌಲ್ಯಗಳನ್ನು ಕೂಡಾ; ಯೋಚನೆ ಮಾಡುತ್ತಿರುವುದು, ಭಾವನೆಗಳನ್ನು ಹೊಂದಿರುವುದು ತಾನೇ ಮತ್ತು ತನ್ನ ನಿರ್ಧಾರಗಳನ್ನು ತಾನೇ ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದರೂ ಕೂಡಾ.

(ಮುಂದುವರಿಯುತ್ತದೆ…)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...