Homeಚಳವಳಿಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

- Advertisement -
- Advertisement -

ನಾವು ಒಂದು ಕ್ರಾಂತಿಯನ್ನು ಪದಕೋಶದ ಅರ್ಥದಲ್ಲಿ- ಸರಳವಾಗಿ, ಈಗಿರುವ ಸರಕಾರವನ್ನು ಶಾಂತಿಯುತವಾಗಿ ಅಥವಾ ಹಿಂಸಾತ್ಮಕವಾಗಿ ಕಿತ್ತೆಸೆಯುವುದು ಮತ್ತದರ ಜಾಗದಲ್ಲಿ ಹೊಸ ಸರಕಾರವೊಂದನ್ನು ಸ್ಥಾಪಿಸುವುದು ಎಂದು ಹೇಳುವುದರ ಮೂಲಕ ವ್ಯಾಖ್ಯಾನಿಸಬಹುದು. ಖಂಡಿತವಾಗಿಯೂ ಇದೊಂದು ಬಹಳ ಔಪಚಾರಿಕ ರಾಜಕೀಯ ವ್ಯಾಖ್ಯಾನವಾದರೂ, ನಿರ್ದಿಷ್ಟವಾಗಿ ಅಷ್ಟೇನೂ ಅರ್ಥಪೂರ್ಣವಲ್ಲ. ನಾವು ಒಂದು ರೀತಿಯ ಹೆಚ್ಚು ಮಾರ್ಕ್ಸ್‌ವಾದಿ ಅರ್ಥದಲ್ಲಿ ಒಂದು ಕ್ರಾಂತಿಯನ್ನು, ಅಸ್ತಿತ್ವದಲ್ಲಿರುವ ವ್ಯವಸ್ಥೆಯೊಂದನ್ನು ಹೆಚ್ಚು ಪ್ರಗತಿಪರವಾದ ವ್ಯವಸ್ಥೆಯಿಂದ ಬದಲಿಸುವುದು ಎಂದು ವ್ಯಾಖ್ಯಾನಿಸಬಹುದು. ಖಂಡಿತವಾಗಿಯೂ ಇಲ್ಲಿ ಪ್ರಶ್ನೆಯೊಂದು ಯಾವಾಗಲೂ ಏಳುತ್ತದೆ; ಏನೆಂದರೆ, ಯಾವುದು “ಐತಿಹಾಸಿಕವಾಗಿ ಹೆಚ್ಚು ಪ್ರಗತಿಪರ” ಎಂಬುದನ್ನು ನಿರ್ಧರಿಸುವವರು ಯಾರು ಎಂಬುದು. ಸಾಮಾನ್ಯವಾಗಿ- ಕನಿಷ್ಟ ಪಕ್ಷ ತಮ್ಮತಮ್ಮ ದೇಶದಲ್ಲಾದರೂ- ಅದು ಗೆದ್ದವರೇ ಆಗಿರುತ್ತಾರೆ.

ಅಂತಿಮವಾಗಿ, ಒಂದು ಕ್ರಾಂತಿಯನ್ನು ಕ್ರಾಂತಿಕಾರಿ ಗುಣಸ್ವಭಾವ ಹೊಂದಿರುವವರ ನೇತೃತ್ವವಿರುವ, ಕ್ರಾಂತಿಕಾರಿ ಗುಣಸ್ವಭಾವದ ಜನರನ್ನು ಆಕರ್ಷಿಸುವ ಒಂದು ರಾಜಕೀಯ ಚಳವಳಿ ಎಂದು ಹೇಳುವ ಮೂಲಕ ನಾವು ಮನಃಶಾಸ್ತ್ರೀಯ ಅರ್ಥದಲ್ಲಿ ವ್ಯಾಖ್ಯಾನಿಸಬಹುದು.

ಅದು, ಖಂಡಿತವಾಗಿಯೂ, ಅಂತಾ ಉತ್ತಮ ವ್ಯಾಖ್ಯಾನವೇನಲ್ಲವಾದರೂ, ಈ ಪ್ರಬಂಧದ ನಿಲುವಿನಿಂದ ನೋಡಿದಲ್ಲಿ, ಒಂದು ಉಪಯುಕ್ತ ಹೇಳಿಕೆಯಾಗಿದ್ದು, ಈಗ ಚರ್ಚಿಸಲಿರುವ ಪ್ರಶ್ನೆಯ ಮೇಲೆ ಎಲ್ಲಾ ಒತ್ತನ್ನು ನೀಡುತ್ತದೆ: ಅದೆಂದರೆ, ಯಾವುದು ಕ್ರಾಂತಿಕಾರಿ ಗುಣಸ್ವಭಾವ?

“ಕ್ರಾಂತಿಕಾರಿ ಗುಣಸ್ವಭಾವ”ದ ಅತ್ಯಂತ ಮೂಲಭೂತ ಗುಣಲಕ್ಷಣ ಎಂದರೆ, ಆತ ಸ್ವತಂತ್ರ ಮತ್ತು ಮುಕ್ತ. ಸ್ವಾತಂತ್ರ್ಯ ಎಂದರೆ, ಮೇಲಿರುವ ಬಲಶಾಲಿಗಳಿಗೆ ಸಹವಾಸದ ನಿಷ್ಠೆಯ ಮತ್ತು ನಾನು ಹಿಂದೆ ಸರ್ವಾಧಿಕಾರಿ ಗುಣಸ್ವಭಾವದ ಕುರಿತು ಮಾತನಾಡುವಾಗ ವಿವರಿಸಿದ ತಮಗಿಂತ ಕೆಳಗಿರುವ ಬಲಹೀನರ ಬಗೆಗಿನ ನಿಷ್ಠೆಯ ತದ್ವಿರುದ್ಧವಾದದ್ದು ಎಂದು ಮನಗಾಣುವುದು ಸುಲಭ.

ಆದರೆ, ಇದು “ಮುಕ್ತತೆ” ಮತ್ತು “ಸ್ವಾತಂತ್ರ್ಯ” (ಇಂಡಿಪೆಂಡೆನ್ಸ್ ಮತ್ತು ಫ್ರೀಡಂ) ಎಂದರೆ ಏನು ಎಂಬುದನ್ನು ಸಾಕಷ್ಟು ಸ್ಪಷ್ಟಪಡಿಸುವುದಿಲ್ಲ. ಸಮಸ್ಯೆ ಇರುವುದು ನಿರ್ದಿಷ್ಟವಾಗಿ “ಫ್ರೀಡಂ” ಮತ್ತು “ಇಂಡಿಪೆಂಡೆನ್ಸ್” ಎಂಬ ಪದಗಳನ್ನು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಪ್ರತಿಯೊಬ್ಬರೂ ಮುಕ್ತರು ಮತ್ತು ಸ್ವತಂತ್ರರು ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. (ಕನ್ನಡದಲ್ಲಿ ಎರಡೂ ಪದಗಳನ್ನು ಹೆಚ್ಚು ಕಡಿಮೆ ಒಂದೇ ಅರ್ಥದಲ್ಲಿ ಬಳಸಲಾಗುತ್ತಿದೆ- ಅನುವಾದಕನ ಟಿಪ್ಪಣಿ). ಈ ಎರಡೂ ಪದಗಳ ಪರಿಕಲ್ಪನೆಯ ಬೇರು ಇರುವುದು ಊಳಿಗಮಾನ್ಯ (ಫ್ಯೂಡಲ್) ವ್ಯವಸ್ಥೆಯ ವಿರುದ್ಧ ಮಧ್ಯಮ ವರ್ಗದ ಕ್ರಾಂತಿಯಲ್ಲಿ ಮತ್ತು ಅವುಗಳನ್ನು ಪ್ರಭುತ್ವಗಳ ತದ್ವಿರುದ್ಧವಾಗಿ ಇಟ್ಟು ನೋಡುವುದರಿಂದ ಅವು ಹೊಸ ಶಕ್ತಿಯನ್ನು ಪಡೆದುಕೊಂಡಿವೆ.

ಇದನ್ನೂ ಓದಿ: ಅನುವಾದ; ಕ್ರಾಂತಿಕಾರಿ ಗುಣಸ್ವಭಾವ-ಎರಿಕ್ ಫ್ರಾಮ್ ; ಭಾಗ-1

ಊಳಿಗಮಾನ್ಯ ಮತ್ತು ರಾಜಾಡಳಿತದ ಸರ್ವಾಧಿಕಾರದ ವ್ಯವಸ್ಥೆಯ ಕಾಲದಲ್ಲಿ, ವ್ಯಕ್ತಿಯು ಮುಕ್ತನಾಗಲೀ, ಸ್ವತಂತ್ರನಾಗಲೀ ಆಗಿರಲಿಲ್ಲ. ಆತ ತನಗಿಂತಲೂ ಮೇಲಿನವರ ಸಾಂಪ್ರದಾಯಿಕ ಅಥವಾ ನಿರಂಕುಶ ನಿಯಮ, ಕಾನೂನು ಮತ್ತು ಆಜ್ಞೆಗಳಿಗೆ ಅಧೀನನಾಗಿದ್ದ. ಯೂರೋಪ್ ಮತ್ತು ಅಮೆರಿಕಾದಲ್ಲಿ ಬೂರ್ಜ್ವಾ (bourgeois, ಮಧ್ಯಮ ವರ್ಗ) ಕ್ರಾಂತಿಗಳು ವ್ಯಕ್ತಿಗೆ ರಾಜಕೀಯ ಮುಕ್ತತೆ ಮತ್ತು ಸ್ವಾತಂತ್ರ್ಯವನ್ನು ತಂದುಕೊಟ್ಟವು.

ಈ ಸ್ವಾತಂತ್ರ್ಯವು “ಒಂದದಿಂದ ಸ್ವಾತಂತ್ರ್ಯ” ಆಗಿತ್ತು. ಅಂದರೆ, ರಾಜಕೀಯ ಅಧಿಕಾರಸ್ಥರಿಂದ ಸ್ವಾತಂತ್ರ್ಯ ಆಗಿತ್ತು. ಇಂದಿನ ಕೈಗಾರಿಕಾವಾದವು ಹೊಸ ರೀತಿಯ ಅಧಿಕಾರಶಾಹಿಗಳಲ್ಲಿ ಸಾಮಾನ್ಯರಿಗೆ ಹೊಸ ರೀತಿಯ ಅವಲಂಬನೆಗಳನ್ನು ಸೃಷ್ಟಿಸಿದ್ದರೂ, ಇದೊಂದು ಪ್ರಮುಖ ಬೆಳವಣಿಗೆಯಾಗಿತ್ತು, ಏಕೆಂದರೆ ಇದಕ್ಕೆ ವ್ಯತಿರಿಕ್ತವಾಗಿ ಕೈಗಾರಿಕಾವಾದವು ಹತ್ತೊಂಭತ್ತನೇ ಶತಮಾನದಲ್ಲಿ ವ್ಯಾಪಾರಿಗಳಿಗೆ ಅನಿಯಮಿತ ಅವಕಾಶ ಮತ್ತು ಸ್ವಾತಂತ್ರ್ಯವನ್ನು ಒದಗಿಸಿತ್ತು.

ಏನಿದ್ದರೂ, ಮುಕ್ತತೆ ಮತ್ತು ಸ್ವಾತಂತ್ರ್ಯದ ಸಮಸ್ಯೆಯು ಮೇಲೆ ಹೇಳಿದ ಅರ್ಥದ ಮುಕ್ತತೆ ಮತ್ತು ಸ್ವಾತಂತ್ರ್ಯಕ್ಕಿಂತ ಹೆಚ್ಚು ಆಳವಾಗಿದೆ. ವಾಸ್ತವದಲ್ಲಿ, ಸ್ವಾತಂತ್ರ್ಯದ ಸಮಸ್ಯೆಯು ಮಾನವ ಅಭಿವೃದ್ಧಿಯ ಆತ್ಯಂತ ಮೂಲಭೂತ ಅಂಶಗಳಲ್ಲಿ ಒಂದು- ನಾವು ಅದನ್ನು ಅದರ ಸಂಪೂರ್ಣ ಆಳ ಮತ್ತು ಅಗಲದಲ್ಲಿ ನೋಡಿದಲ್ಲಿ ಮಾತ್ರ.

ಆಗ ತಾನೇ ಹುಟ್ಟಿದ ಶಿಶು ತನ್ನ ಪರಿಸರದೊಂದಿಗೆ ಒಂದಾಗಿರುತ್ತದೆ. ಅದಕ್ಕೆ ಹೊರಗಿನ ಪ್ರಪಂಚವು ಆಗಿನ್ನೂ, ತನ್ನಿಂದ ಪ್ರತ್ಯೇಕವಾದ ಒಂದು ವಾಸ್ತವವಾಗಿ ಅಸ್ತಿತ್ವದಲ್ಲಿ ಇರುವುದಿಲ್ಲ. ಆಗಲೂ ಕೂಡಾ ಶಿಶುವು ತನ್ನಿಂದ ಹೊರಗಿರುವ ವಸ್ತುಗಳನ್ನು ಗುರುತಿಸಬಲ್ಲದು. ಹಾಗಿದ್ದೂ, ಅದು ಇನ್ನೂ ಬಹಳ ಕಾಲ ಅಸಹಾಯಕವಾಗಿರುತ್ತದೆ ಮತ್ತು ತನ್ನ ತಂದೆ, ತಾಯಿಯ ನೆರವಿಲ್ಲದೆ ಬದುಕಿ ಉಳಿಯಲಾರದು. ಇತರ ಎಳೆಯ ಪ್ರಾಣಿಗಳಿಗೆ ವ್ಯತಿರಿಕ್ತವಾಗಿ, ಮಾನವನ ಈ ದೀರ್ಘಕಾಲದ ಅಸಹಾಯಕತೆಯು ಅದರ ಬೆಳವಣಿಗೆಗೆ ಒಂದು ತಳಹದಿಯಾಗಿದ್ದರೂ, ಅದು ಅದಕ್ಕೆ ಅಧಿಕಾರವನ್ನು ಅವಲಂಬಿಸಿರಲು ಮತ್ತು ಅಧಿಕಾರಕ್ಕೆ ಭಯಪಡಲು ಕಲಿಸುತ್ತದೆ.

ಸಾಮಾನ್ಯವಾಗಿ ಹುಟ್ಟಿನಿಂದ ಪ್ರೌಢಾವಸ್ಥೆಯ ತನಕದ ವರ್ಷಗಳಲ್ಲಿ ಅಧಿಕಾರವನ್ನು ಪ್ರತಿನಿಧಿಸುವವರು ಹೆತ್ತವರಾಗಿರುತ್ತಾರೆ ಮತ್ತು ಅದು ಇಬ್ಬಗೆಯ ಆಯಾಮಗಳನ್ನು ಹೊಂದಿರುತ್ತದೆ: ನೆರವಾಗುವುದು ಮತ್ತು ಶಿಕ್ಷಿಸುವುದು. ಒಬ್ಬ ಎಳೆಯ ವ್ಯಕ್ತಿ ಪ್ರೌಢಾವಸ್ಥೆಗೆ ತಲಪುವ ಕಾಲದ ಆಸುಪಾಸಿನಲ್ಲಿ ತನ್ನನ್ನು ತಾನೇ ರಕ್ಷಿಸಿಕೊಳ್ಳಬಲ್ಲಂತ ಅಭಿವೃದ್ಧಿಯ ಹಂತ ತಲಪಿರುತ್ತಾನೆ (ಖಂಡಿತವಾಗಿಯೂ, ಸರಳ ಬೇಸಾಯಗಾರ ಸಮಾಜಗಳಲ್ಲಿ.) ಮತ್ತು ಇನ್ನೂ ತನ್ನ ಸಾಮಾಜಿಕ ಅಸ್ತಿತ್ವಕ್ಕಾಗಿ ಹೆತ್ತವರ ಋಣದಲ್ಲಿ ಇರಬೇಕಾದ ಅಗತ್ಯವಿರುವುದಿಲ್ಲ. ಆತ ಆರ್ಥಿಕವಾಗಿ ಅವರಿಂದ ಸ್ವತಂತ್ರನಾಗಿರಬಹುದು. ಹಲವು ಪ್ರಾಚೀನ ಸಮಾಜಗಳಲ್ಲಿ ಈ ಸ್ವಾತಂತ್ರ್ಯವನ್ನು (ಮುಖ್ಯವಾಗಿ ತಾಯಿಯಿಂದ) ದೀಕ್ಷೆಯ ವಿಧಿವಿಧಾನಗಳ ಮೂಲಕ ಅಭಿವ್ಯಕ್ತಿಸಲಾಗುತ್ತದೆ. ಆದರೆ, ಅವು ತನ್ನ ಕುಲದ ಮೇಲಿನ ಅಥವಾ ಅದರ ಗಂಡು ಅಂಶದ ಮೇಲಿನ ಅವಲಂಬನೆಯನ್ನು ಮುಟ್ಟಲು ಹೋಗುವುದಿಲ್ಲ. ಲೈಂಗಿಕವಾಗಿ ಪ್ರೌಢವಾಗುವುದು ಕೂಡಾ ಹೆತ್ತವರಿಂದ ಬಿಡುಗಡೆಯ ಪ್ರಕ್ರಿಯೆಯನ್ನು ಮುನ್ನಡೆಸುವ ಇನ್ನೊಂದು ಅಂಶವಾಗಿದೆ. ಲೈಂಗಿಕ ಬಯಕೆ ಮತ್ತು ಲೈಂಗಿಕ ತೃಪ್ತಿಯು ಒಬ್ಬ ವ್ಯಕ್ತಿಯನ್ನು ತನ್ನ ಕುಟುಂಬದ ಹೊರಗಿನವರ ಜೊತೆಗೆ ಕಟ್ಟಿಹಾಕುತ್ತದೆ. ಸ್ವತಃ ಲೈಂಗಿಕ ಕ್ರಿಯೆಯಲ್ಲಿ ಮಾತ್ರ- ತಂದೆಯಾಗಲೀ, ತಾಯಿಯಾಗಲೀ ನೆರವಾಗಲು ಸಾಧ್ಯವಿಲ್ಲ ಮತ್ತು ಇದರಲ್ಲಿ ಯುವ ವ್ಯಕ್ತಿ ತನ್ನ ದಾರಿ ಹುಡುಕಿಕೊಳ್ಳುತ್ತಾನೆ.

ಇದನ್ನೂ ಓದಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

ಪ್ರೌಢಾವಸ್ಥೆಗೆ ತಲಪಿದ ನಂತರದ ಐದು ಅಥವಾ ಹತ್ತು ವರ್ಷಗಳ ತನಕ ಲೈಂಗಿಕ ತೃಪ್ತಿಯನ್ನು ಮುಂದೂಡಲಾಗುವ ಸಮಾಜಗಳಲ್ಲಿ ಕೂಡಾ, ಎಚ್ಚೆತ್ತ ಲೈಂಗಿಕ ಬಯಕೆಯು ಸ್ವಾತಂತ್ರ್ಯಕ್ಕಾಗಿ ಹಂಬಲವನ್ನು ಹುಟ್ಟಿಸುತ್ತದೆ ಮತ್ತು ಹೆತ್ತವರ ಮತ್ತು ಸಾಮಾಜಿಕ ಅಧಿಕಾರಗಳ ಜೊತೆಗೆ ಸಂಘರ್ಷಗಳನ್ನುಂಟುಮಾಡುತ್ತದೆ. ಸಹಜ ವ್ಯಕ್ತಿಗಳು ಪ್ರೌಢಾವಸ್ಥೆಯ ನಂತರದ ಈ ವರ್ಷಗಳಲ್ಲಿ ಈ ಮಟ್ಟದ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಆದರೆ, ಆತ ಸ್ವಂತ ಸಂಪಾದನೆ ಮಾಡಿ ಜೀವನ ನಡೆಸಿದರೂ, ಮದುವೆಯಾಗಿ ಸ್ವಂತ ಮಕ್ಕಳನ್ನು ಸಾಕಿದರೂ, ಆತ ನಿಜವಾಗಿಯೂ ಮುಕ್ತ ಮತ್ತು ಸ್ವತಂತ್ರನಾಗುವುದಿಲ್ಲ.

ಅವನು ಇನ್ನೂ ಬಹುತೇಕ ಅಸಹಾಯಕನಾದ ಮತ್ತು ತನ್ನನ್ನು ರಕ್ಷಿಸಿಕೊಳ್ಳಲು, ತನಗೊಂದು ಖಾತರಿ, ಸ್ಥಿರತೆ ನೀಡುವಂತ ಅಧಿಕಾರವನ್ನು ಹುಡುಕಲು ಯತ್ನಿಸುತ್ತಿರುವ ಒಬ್ಬ ವಯಸ್ಕ ವ್ಯಕ್ತಿ ಮಾತ್ರ. ಈ ಸಹಾಯಕ್ಕೆ ಬದಲಾಗಿ ನೀಡುವ ಬೆಲೆಯಾಗಿ- ಆತ ತನ್ನನ್ನು ಅವರ (ಅಧಿಕಾರಸ್ಥರ) ಅವಲಂಬಿತನನ್ನಾಗಿ ಮಾಡಿಕೊಳ್ಳುತ್ತಾನೆ, ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತು ತನ್ನ ಬೆಳವಣಿಗೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಾನೆ. ಅವನು ತನ್ನ ಯೋಚನೆ, ಚಿಂತನೆಗಳನ್ನು ಅವರಿಂದ ಎರವಲು ಪಡೆಯುತ್ತಾನೆ- ತನ್ನ ಭಾವನೆಗಳು, ತನ್ನ ಗುರಿಗಳು, ತನ್ನ ಮೌಲ್ಯಗಳನ್ನು ಕೂಡಾ; ಯೋಚನೆ ಮಾಡುತ್ತಿರುವುದು, ಭಾವನೆಗಳನ್ನು ಹೊಂದಿರುವುದು ತಾನೇ ಮತ್ತು ತನ್ನ ನಿರ್ಧಾರಗಳನ್ನು ತಾನೇ ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದರೂ ಕೂಡಾ.

(ಮುಂದುವರಿಯುತ್ತದೆ…)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...