Homeಕರ್ನಾಟಕಕೋಟ್ಯಧಿಪತಿಯಲ್ಲಿ ಡ್ರಾಮಾ ಜ್ಯೂನಿಯರ್ಸ್!: ಪ್ರವಾಹ ಪರಿಹಾರಕ್ಕೆ ಪ್ರತಾಪ್, ತೇಜಸ್ವಿ ಗೆದ್ದ 12 ಲಕ್ಷ ಸಾಕೇ?

ಕೋಟ್ಯಧಿಪತಿಯಲ್ಲಿ ಡ್ರಾಮಾ ಜ್ಯೂನಿಯರ್ಸ್!: ಪ್ರವಾಹ ಪರಿಹಾರಕ್ಕೆ ಪ್ರತಾಪ್, ತೇಜಸ್ವಿ ಗೆದ್ದ 12 ಲಕ್ಷ ಸಾಕೇ?

ರವಿವಾರ ಕಲರ್ಸ್ ಕನ್ನಡ ಟಿವಿಯ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಪಾಲ್ಗೊಂಡಿದ್ದರು. ಒಂಥರಾ ಇವರಿಬ್ಬರ ನಾಟಕೀಯತ ನೋಡಿದಾಗ ‘ಡ್ರಾಮಾ ಜ್ಯೂನಿಯರ್ಸ್’ ನೆನಪಾಗಿತು.

- Advertisement -
- Advertisement -

ಕೋಟ್ಯಧಿಪತಿಯಲ್ಲಿ ಡ್ರಾಮಾ ಜ್ಯೂನಿಯರ್ಸ್ ! – ಹೆಡ್ಡಿಂಗ್ ನೋಡಿ ನಿಮಗೆ ಅನಿಸಬಹುದು: ಇದೇನಿದು ಕಲರ್ಸ್ ಟಿವಿ ಕಾರ್ಯಕ್ರಮಕ್ಕೆ ಝೀ ಟಿವಿಯ ಕಾರ್ಯಕ್ರಮದ ಟೈಟಲ್ಲು ಸೇರಿಸಿದ್ದಾರೆಂದು? ಕಲರ್ಸ್, ಝೀ ಎಲ್ಲ ಮೋದಿಯ ಆರಾಧಕರೇ ಎಂಬುದನ್ನು ಸೂಚ್ಯವಾಗಿ ಹೇಳಲಷ್ಟೇ ಇದನ್ನು ಬಳಸಿದ್ದೇವೆ ಅಷ್ಟೇ.

ಈಗ ವಿಷಯಕ್ಕೆ ಬರೋಣ. ಮೈಸೂರು-ಕೊಡಗಿನ ಸಂಸದ ಪ್ರತಾಪ್‍ಸಿಂಹ ಮತ್ತು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ನಿನ್ನೆ ರವಿವಾರ ಕಲರ್ಸ್ ಟಿವಿಯ ಕೋಟ್ಯಧಿಪತಿಯಲ್ಲಿ ಸಿಕ್ಕಾಪಟ್ಟೆ ಟ್ಯಾಲೆಂಟ್ ತೋರಿಸಿ ಹನ್ನೆರಡೂವರೆ ಲಕ್ಷ ಗೆದ್ದಿದ್ದಾರೆ ಮತ್ತು ಅದನ್ನು ನೆರೆಪ್ರವಾಹ ಪೀಡಿತರಿಗಾಗಿ ಮುಖ್ಯಮಂತ್ರಿ ನಿಧಿಗೆ ಕೊಡುವುದಾಗಿ ಘೋಷಿಸಿದ್ದಾರೆ. ಓಕ, ವೆಲ್ ಡನ್!

ಆದರೆ, ನಾವು ಇಲ್ಲಿ ಪ್ರಸ್ತಾಪಿಸುತ್ತಿರುವುದು ಇಡೀ ಕಾರ್ಯಕ್ರಮದ ಹಿಂದೆ ಒಂದು ಹಿಡನ್ ಅಜೆಂಡಾ ಇತ್ತು ಮತ್ತು ಈ ಇಬ್ಬರು ಸಂಸದರು ಕಾರ್ಯಕ್ರಮದ ಉದ್ದಕ್ಕೂ ಡ್ರಾಮಾ ಮಾಡುತ್ತಲೇ ಬಂದರು ಎನ್ನುವುದು. ಇಲ್ಲಿ ಕಾರ್ಯಕ್ರಮದ ಸಂಯೋಜಕ ಪುನೀತ್ ರಾಜಕುಮಾರ್ ಕೇವಲ ಒಬ್ಬ ನಿರೂಪಕರಷ್ಟೇ. ಇಡೀ ಕಾರ್ಯಕ್ರಮದ ಸ್ಕ್ರಿಪ್ಟ್ ಮೊದಲೇ ರೆಡಿ ಆಗಿತ್ತು (ಸೆಲೆಬ್ರಿಟಿಗಳು ಭಾಗವಹಿಸುವ ಎಲ್ಲ ರಿಯಾಲಿಟಿ ಶೋ ಗಳ ಸ್ಕ್ರಿಪ್ಟ್ ಕೂಡ ಮೊದಲೇ ಸಿದ್ದವಾಗಿರುತ್ತವೆ).

ಹಾಳಾಗಿ ಹೋಗಲಿ ಇವರೆಲ್ಲ. ನಮ್ಮ ಪ್ರಶ್ನೆಗಳಿಷ್ಟೇ:
1. ನೆರೆಪೀಡಿತರಿಗೆ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಉದಾಸೀನ ತೋರುತ್ತಿರುವಾಗ ಈ ಇಬ್ಬರು ಸಂಸದರು ಕೋಟ್ಯಧಿಪತಿಯಲ್ಲಿ ಬಂದು 12 ಚಿಲ್ಲರೆ ಲಕ್ಷ ಗೆಲ್ಲುವುದು ಸಾಕೇ? ತಮ್ಮದೇ ಕೇಂದ್ರ ಸರ್ಕಾರದ ಮೇಲೆ, ಅದೂ ನಮ್ಮದೇ ರಾಜ್ಯದ ನಾಲ್ಕು ಕೇಂದ್ರ ಸಚಿವರಿರುವ ಕೇಂದ್ರಕ್ಕೆ ಮನವಿ ಮಾಡಿ ಅನುದಾನ ತರಲು ಇಲ್ಲಿವರೆಗೂ ಶ್ರಮಿಸಲಿಲ್ಲವೇಕೆ?

2. ಕಾರ್ಯಕ್ರಮದ ಒಂದು ಹಂತದಲ್ಲಿ ಸಂಸದ ಪ್ರತಾಪಸಿಂಹ ಹೇಳಿದರು: ‘ಪ್ರಾಮಾಣಿಕ ಮತ್ತು ಗೌರವಾನ್ವಿತ ಸಂಸದರಿಗೆ ನೀಡುವ ಸಂಬಳ ಯಾತಕ್ಕೂ ಸಾಲುತ್ತಿರಲಿಲ್ಲ. ಆಗ 2.09 ಲಕ್ಷವಿತ್ತು. ನಾನು ಇದನ್ನು ಹೆಚ್ಚಿಸಬೇಕೆಂದು 85 ಸಂಸದರ ಸಹಿ ಮಾಡಿಸಿ ಮೋದಿಯವರಿಗೆ ಸಲ್ಲಿಸಿದ್ದೆ. ಅವರು 80 ಸಾವಿರ ಹೆಚ್ಚುವರಿ ಮಾಡಿದರು. ಈಗ ಸಂಸದರ ಸಂಭಾವನೆ 2.89 ಲಕ್ಷ.  ಅಯ್ಯೋ ಪ್ರತಾಪ ಮತ್ತು ತೇಜಸ್ವಿ 85 ಸಂಸದರನ್ನು ಬಿಡಿ, ನೀವಿಬ್ದರು ಸೇರಿದಂತೆ ಕರ್ನಾಟದಕ 28 ಸಂಸದರ ಸಹಿ ಮಾಡಿಸಿಕೊಂಡು ನೆರೆ ಪರಿಹಾರಕ್ಕೆ ‘ಚಂದ್ರಮುಖಿ’ ಪ್ರಧಾನಿಯ ಮುಂದೆ ಒಂದು ಪ್ರಸ್ತಾಪ ಇಡಬಹುದಿತ್ತಲ್ಲ? ಇಂತಹ ಪ್ರಶ್ನೆಯನ್ನು ಕೋಟ್ಯಾಧಿಪತಿಯ ತೆರೆ ಹಿಂದೆ ಕೆಲಸ ಮಾಡುವವವರು ಸೃಷ್ಟಿಸಲಿಲ್ಲವೇಕೆ?

3. ಕಲರ್ಸ್ ಕನ್ನಡದವರೇ, ನಿಮಗೆ ನಿಜಕ್ಕೂ ಕರ್ನಾಟಕದ ನೆರಪೀಡಿತರಿಗೆ ಸಹಾಯ ಮಾಡುವ ಉದ್ದೇಶವಿದ್ದರೆ ಇಡೀ ಬಹುಮಾನದ ಮೊತ್ತ ಒಂದು ಕೋಟಿಯನ್ನೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಬಹುದಿತ್ತು ಅಲ್ಲವಾ? ಆದರೆ, ನಿಮ್ಮ ಉದ್ದೇಶ ಇಬ್ಬರು ಹೋಪ್‍ ಲೆಸ್ ಸಂಸದರು ಮತ್ತು ಅವರ ಗುರು ಮೋದಿಗೆ ಪ್ರಚಾರ ಕೊಡುವುದೇ ಆಗಿತ್ತಲ್ಲವಾ?

ಒಟ್ಟಿನಲ್ಲಿ ಇಬ್ಬರು ಸಂಸದರನ್ನು ಇಟ್ಟುಕೊಂಡು ಕಾರ್ಯಕ್ರಮ ಮಾಡಲು ಹೋಗಿ ಕಲರ್ಸ್ ಬಣ್ಣ ಬಯಲಾಗಿದೆ. ಝೀ ಟಿವಿ ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಹಲವಾದರೂ ಪುಟ್ಟ ಮಕ್ಕಳ ಟ್ಯಾಲೆಂಟು ಗುರುತಿಸಲ್ಪಡುತ್ತಿದೆ. ಆದರೆ, ಕಲರ್ಸ್‍ನವರೇ ನೀವು ಈ ಇಬ್ಬರು ‘ಪಟ್ಟ’ ಸಂಸದರ ಹಿಂದೆ ಬೀಳುವ ಮೂಲಕ ಕೋಟ್ಯಧಿಪತಿಯಲ್ಲಿ ಡ್ರಾಮಾ ಜ್ಯೂನಿಯರ್ಸ್ ತಂದು ಬಿಟ್ಟಿರಲ್ಲ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...