Homeಮುಖಪುಟತಬ್ರೆಜ್ ಲಿಂಚಿಂಗ್ ಮತ್ತು ಸಾವು: ಆರೋಪಿಗಳ ಮೇಲಿನ ಕೊಲೆ ಆಪಾದನೆ ಕೈಬಿಟ್ಟ ಚಾರ್ಜ್ ಶೀಟ್!!

ತಬ್ರೆಜ್ ಲಿಂಚಿಂಗ್ ಮತ್ತು ಸಾವು: ಆರೋಪಿಗಳ ಮೇಲಿನ ಕೊಲೆ ಆಪಾದನೆ ಕೈಬಿಟ್ಟ ಚಾರ್ಜ್ ಶೀಟ್!!

- Advertisement -
- Advertisement -

“ನಾನು ಗರ್ಭಿಣಿಯಾಗಿದ್ದೇನೆ ಎಂದು ಅವನು ಸತ್ತ ಎರಡು ದಿನಗಳ ನಂತರ ನಾನು ತಿಳಿದುಕೊಂಡೆ. ಆದರೆ ಕೆಲವು ವಾರಗಳ ನಂತರ ನಾನು ನನ್ನ ಮಗುವನ್ನು ಸಹ ಕಳೆದುಕೊಂಡೆ. ವೈದ್ಯರು ಹೇಳುವಂತೆ ನನ್ನ ದೇಹವು ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ನಾವು ನಿಜವಾಗಿಯೂ ಮಗುವನ್ನು ಬಯಸಿದ್ದೆವು” ಈ ರೀತಿ ಅಳುತ್ತಾ ದಿ ಕ್ವಿಂಟ್‌ನೊಂದಿಗೆ ಮಾತನಾಡಿದ್ದು ತಬ್ರೆಜ್ ಅನ್ಸಾರಿ ಅವರ ಪತ್ನಿ ಶಹಿಸ್ತ..

ಏಪ್ರಿಲ್ 27 ರಂದು ತಬ್ರೆಜ್ ಅವರೊಂದಿಗೆ ಶಹಿಸ್ತ ಅವರು ಮದುವೆಯಾದ ದಿನ. ಅವರದು ಪ್ರೇಮ ವಿವಾಹವಾಗಿದ್ದು, ಅವರು ಸಾಯುವ ಎರಡು ತಿಂಗಳ ಮೊದಲು ಏಪ್ರಿಲ್ 27 ರಂದು ಅವರ ವಿವಾಹ ನಡೆದಿತ್ತು. ಮದುವೆಯ ನಂತರ ಹೊಸಬದುಕು ಕಟ್ಟಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಜೂನ್ 17 ರಂದು ತಬ್ರೆಜ್‌ನನ್ನು ಕಂಬಕ್ಕೆ ಕಟ್ಟಿ, ಕಳ್ಳತನದ ಆರೋಪ ಹೊರಿಸಲಾಯಿತು. ಜೈ ಶ್ರೀ ರಾಮ್ ಮತ್ತು ಜೈ ಹನುಮಾನ್ ಘೋಷಣೆ ಕೂಗುವಂತೆ ಒತ್ತಾಯಿಸಲಾಯಿತು ಮತ್ತು ಕನಿಷ್ಠ ಏಳು ಗಂಟೆಗಳ ಕಾಲ ನಿಷ್ಕರುಣೆಯಿಂದ ಹೊಡೆಯಲಾಯಿತು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಹೊಡೆದ ಆರೋಪಿಗಳ ಬದಲಾಗಿ ಕಳ್ಳತನದ ಆರೋಪ ಹೊರಿಸಿ ತಬ್ರೆಜ್ ನನ್ನು ಬಂಧಿಸಿದ್ದರು. ತದನಂತರ ಆತನನ್ನು ಆಸ್ಪತ್ರೆಗೆ ಸೇರಿಸಿತ್ತಾದರೂ ವೈದ್ಯರು ಸಮರ್ಪಕ ಚಿಕಿತ್ಸೆ ನೀಡಿರಲಿಲ್ಲ. ತಲೆಗೆ ತೀವ್ರ ಪೆಟ್ಟಾಗಿದ್ದರೂ ವೈದ್ಯರು ಅದನ್ನು ಗುರುತಿಸಿರಲಿಲ್ಲ ಮತ್ತು ಸಿಟಿ ಸ್ಕ್ಯಾನ್ ಸಹ ಮಾಡಿರಲಿಲ್ಲ ಎಂದು ಹೆಸರು ಹೇಳಲಿಚ್ಚಿಸದ ವೈದ್ಯರೊಬ್ಬರು ತಿಳಿಸಿದ್ದರು. ಆದಾದ ಐದು ದಿನಗಳ ನಂತರ ಜೂನ್ 22 ರಂದು ತಬ್ರೆಜ್ ಸಾವನಪ್ಪಿದ್ದರು.

ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ವ್ಯಾಪಕ ಖಂಡನೆಗೊಳಗಾದ ಈ ಪ್ರಕರಣವೀಗ ದಾರಿ ತಪ್ಪುತ್ತಿದೆ ಎಂದು ತಬ್ರೆಜ್ ಪತ್ನಿ ಶಹಿಸ್ತ ವಕೀಲರು ದೂರಿದ್ದಾರೆ.

ನಾನೀಗ ಪೊಲೀಸ್ ತನಿಖೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದಾನೆ. “ದಯವಿಟ್ಟು ನನಗೆ ನ್ಯಾಯ ಪಡೆಯಲು ಸಹಾಯ ಮಾಡಿ. ದಯವಿಟ್ಟು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಿ. ದಯವಿಟ್ಟು ನನ್ನ ಶಾಂತಿಯನ್ನು ಮರಳಿ ಪಡೆಯಲು ಸಹಾಯ ಮಾಡಿ.”ಎಂದು ಶಹಿಸ್ತ ಅವಲತ್ತುಕೊಂಡಿದ್ದಾಳೆ. ಕಾರಣವೆಂದರೆ ಜುಲೈ 29 ರಂದು ಪೊಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಆಕೆಯ ಗಂಡನ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕೊಲೆ ಆರೋಪವನ್ನು ಕೈಬಿಟ್ಟಿದೆ. ಇದು ಅವಳನ್ನು ಚಿಂತಾಕ್ರಾಂತಳನ್ನಾಗಿಸಿದೆ.

ಇದೇ ಸಂದರ್ಭದಲ್ಲಿ ಪೊಲೀಸ್ ತನಿಖೆಗೆ ಆಕ್ಷೇಪ ವ್ಯಕ್ತಪಡಿಸಿರುವ ಆಕೆಯ ವಕೀಲ ಅಲ್ತಾಫ್ ಹುಸೇನ್ ಆಗಸ್ಟ್ 31 ರಂದು ನ್ಯಾಯಾಲಯದಲ್ಲಿ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಲಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಸೆಕ್ಷನ್ 147 (ಗಲಭೆ), 149 (ಕಾನೂನುಬಾಹಿರ ಸಭೆ), 341 (ತಪ್ಪಾದ ಸಂಯಮ), 342 (ತಪ್ಪಾಗಿ ಬಂಧನ), 323 (ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು), 325 (ತೀವ್ರ ನೋವನ್ನುಂಟುಮಾಡುವುದು), 304 (ಅಪರಾಧಿ ನರಹತ್ಯೆ ಕೊಲೆಗೆ ಸಮನಾಗಿಲ್ಲ) ಮತ್ತು 295 ಎ (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಇವುಗಳನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳನ್ನಾಗಿ ಪ್ರಕಾಶ್ ಮಂಡಲ್ ಅಲಿಯಾಸ್ ಪಪ್ಪು ಮಂಡಲ್, ಕಮಲ್ ಮಹತೋ, ಸುನಮೋ ಪ್ರಧಾನ್, ಪ್ರೇಮ್‌ಚಂದ್ ಮಹಾಲಿ, ಸುಮಂತ್ ಮಹತೋ, ಮದನ್ ನಾಯಕ್, ಚಾಮು ನಾಯಕ್, ಮಹೇಶ್ ಮಹಾಲಿ, ಕುಶಾಲ್ ಮಹಾಲಿ, ಸತ್ಯನಾರಾಯಣ್ ನಾಯಕ್ ಮತ್ತು ಭೀಮ್ ಸೇನ್ ಮಂಡಲ್ ಎಂದು ಗುರುತಿಸಲಾಗಿದೆ.

ಕೊಲೆ ಆರೋಪವನ್ನು ತೆಗೆದುಹಾಕಲು ಏನು ಕಾರಣ?
“ತಬ್ರೆಜ್ ಹಠಾತ್ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂಬ ವರದಿಗಳನ್ನು ನಾವು ಕೇಳುತ್ತಿದ್ದೇವೆ. ಆದರೆ ಅವರ ತಲೆಗೆ ದೊಡ್ಡ ಗಾಯವಾಗಿತ್ತು, ಹೊಡೆತದಿಂದ ಅವನ ತಲೆಬುರುಡೆ ಬಿರುಕು ಬಿಟ್ಟಿತ್ತು. ಸಾವಿಗೆ ಕಾರಣ ಕೇವಲ ಹೃದಯ ಸ್ತಂಭನ ಎಂದು ಅವರು ಹೇಗೆ ಹೇಳಬಹುದು?” ಎಂದು ವಕೀಲರಾದ ಅಲ್ತಾಫ್ ಪ್ರಶ್ನಿಸಿದ್ದಾರೆ. ಪೊಲೀಸರು ತಮ್ಮದೇ ಆದ ಬೇಜವಾಬ್ದಾರಿಯನ್ನು ಮರೆಮಾಡಲು ಮತ್ತು ಆರೋಪಿಗಳನ್ನು ರಕ್ಷಿಸಲು ‘ಹಠಾತ್ ಹೃದಯ ಸ್ತಂಭನ’ ವನ್ನು ಬಳಸುತ್ತಿದ್ದಾರೆ ಎಂದು ಶಹಿಸ್ತ ಅವರ ವಕೀಲ ಅಲ್ತಾಫ್ ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರಕರಣದ ತನಿಖಾ ಅಧಿಕಾರಿ ಆರ್. ನಾರಾಯಣ್ ಅವರು “ಸಾವಿಗೆ ಕಾರಣವೆಂದರೆ ಹಠಾತ್ ಹೃದಯ ಸ್ತಂಭನ. “ನಾವು ಇದನ್ನು ದೃಢೀಕರಿಸಿದ ಇಬ್ಬರು ವೈದ್ಯರ ಅಭಿಪ್ರಾಯವನ್ನು ಪಡೆದಿದ್ದೇವೆ” ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read