Homeನ್ಯಾಯ ಪಥಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು? ಜಿಲ್ಲೆ - ಪದಮೂಲ, ಇತಿಹಾಸ : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್

ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು? ಜಿಲ್ಲೆ – ಪದಮೂಲ, ಇತಿಹಾಸ : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ಇವತ್ತು ಕೆಲವು ವಿಷಯಗಳನ್ನು ಪಾಯಿಂಟ್ ಶೀರ್ ಕಲಿಯೋಣು.

ಒಂದನೇ ಪಾಯಿಂಟು- ಸಂಖ್ಯೆ
ಕರ್ನಾಟಕ ರಾಜ್ಯದೊಳಗ 30 ಜಿಲ್ಲೆ ಅವ. 32 ಅಲ್ಲ. 34 ನೂ ಅಲ್ಲ. ಕೆಲವರು 34 ಏನು 43 ಮಾಡಬೇಕು ಅಂತ ಹೊಂಟಾರ. ಅದು ಬೇರೆ ವಿಷಯ.

ಎರಡನೇ ಪಾಯಿಂಟು-ಜಿಲ್ಲೆಗಳ ಪಟ್ಟಿ
ಕರ್ನಾಟಕದ ಜಿಲ್ಲೆಗಳ ಹೆಸರು ಈ ರೀತಿ ಇವೆ – ಬಾಗಲಕೋಟಿ, ಬೆಳಗಾವಿ, ವಿಜಯಪುರ (ಬಿಜಾಪುರ), ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ(ಕಾರವಾರ), ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಕಲಬುರ್ಗಿ (ಗುಲಬರ್ಗಾ), ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ (ಮಂಗಳೂರು), ಹಾಸನ, ಕೊಡಗು (ಕೂರ್ಗು, ಮಡಿಕೇರಿ, ಮರಕೇರಾ), ಮಂಡ್ಯ, ಮೈಸೂರು, ಉಡುಪಿ

ಮೂರನೇ ಪಾಯಿಂಟು – ಆ ಪದಾ ಈ ಪದಾ
‘ಜಿಲ್ಲೆ’ ಎನ್ನುವುದು ಕನ್ನಡ ಪದವಾಗಲು ಅದೇನು ಕಬ್ಬಿನ ಜಲ್ಲೆ ಅಲ್ಲ. ಅದು ಜಿಲಾಃ ಎನ್ನುವ ಪರ್ಶಿಯನ್ ಅಥವಾ ಪಾರ್ಸಿ ಪದದಿಂದ ಬಂದ ಶಬ್ದ.

ನಮಗೆ ಗೊತ್ತಿಲ್ಲದಂಗನ ನಮ್ಮ ಅರಮನೀ ಕಂಬದಾಗ ನರಸಿಂಹಸ್ವಾಮಿ ಹೆಂಗ ಅವತಾರ ಹೆಂಗ ಇರತಾನೋ, ಹಂಗ ನಮ್ಮ ಖನ್ನಡ ಬಾಸೆಯೊಳಗ ಅಸಂಖ್ಯ ಪರ್ಶಿಯನ್ ಅಥವಾ ಪಾರ್ಸಿ ಪದಾ ಅವ. ಹಂಗನ ಇದೂ ಒಂದು ಪಾರ್ಸಿ ಪದ. “ಗಂಡಸರ ಲುಂಗಿ, ಹೆಂಗಸರು ಲುಂಗಿ, ಲಂಗೋಟಿ ಇವು ಯಾವುವೂ ಕನ್ನಡದವಲ್ಲ. ಅವೆಲ್ಲವೂ ಪಾರ್ಸಿ ಅಂತ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಹೇಳ್ಯಾರಲ್ಲ, ಅದು ಖರೇನ. ಕನ್ನಡದ ಕಸ್ತೂರಿ ತೇಯುವಾಗ ಕೊರಡಿಗೆ ಅಂಟಿಕೊಂಡ ಗಂಧದ ವಾಸನಿಯ ಹಂಗ ಅವು ನಮ್ಮ ಭಾಷಾ ಸೇರಿಕೊಂಡು ಅದರ ಘಮಲು ಹೆಚ್ಚು ಆಗೇದ.

ನಮ್ಮ ಕಲ್ಪನಾ ಇಲ್ಲದಂಗ ಅವು ನಮ್ಮ ಮ್ಯಾಲೆ ಪ್ರಭಾವ ಬೀರ್ಯಾವು. ಬ್ಯಾರೆ ಎಲ್ಲಾ ಹೋಗಲಿ ಬಿಡಲಿ. ನಮ್ಮ ಜೀವನಾಧಾರ ಆಗಿರೋ `ನೀರು’ ಸಹಿತ ಫಾರ್ಸಿ. ಹೋಗಲಿ ಬಿಡ್ರಿ, ಅವು ಯಾವಾವು ಶಬ್ದಾ ಅನ್ನುವುದನ್ನು ಇನ್ನೊಮ್ಮೆ ನೋಡೋಣ.

ನಾಲ್ಕನೆಯ ಪಾಯಿಂಟು – ಇತಿಹಾಸ
ಸಾವಿರಾರು ವರ್ಷಗಳಿಂದ ಗ್ರಾಮ ಪಂಚಾಯಿತಿಯೇ ಭಾರತದಲ್ಲಿ ಆಡಳಿತದ ಕೇಂದ್ರವಾಗಿತ್ತು. ಸರಿ ಸುಮಾರು ಒಂದು ಸಾವಿರ ವರ್ಷದ ಹಿಂದೆ ಘುರಿಡ್ ರಾಜ ಮನೆತನದವರು ಭಾರತದ ಆಡಳಿತ ವನ್ನು ಕೈಗೆ ತೆಗೆದುಕೊಂಡಾಗ ಪ್ರತಿ ಪ್ರದೇಶಕ್ಕೊಬ್ಬ ಸರದಾರನನ್ನು ನೇಮಿಸಿದರು. ಇವರಲ್ಲಿ ಒಬ್ಬನಾದ ಕುತುಬ್ದೀನ ಐಬಕ್‍ನ ಅಧಿಕಾರಿಗಳು ಕೈಕೊಂಡ ಆಡಳಿತ ಸುಧಾರಣೆ ಅಂಗವಾಗಿ ಹುಟ್ಟಿದ್ದವೇ ಜಿಲಾಃ ಗಳು. ಇವುಗಳನ್ನು ನಂತರ ದೆಹಲಿ ಸುಲ್ತಾನರು, ದಖನ್ನಿನ ಬಹಮನಿಗಳು, ಮುಘಲರು, ಹಾಗೂ ಹೈದರಾಬಾದು ನಿಜಾಮರು ಆಡಳಿತ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡರು. ಹೈದರಾಬಾದಿನಲ್ಲಿ, `ನಿಜಾಮರು ಜಿಲ್ಲಾಗಳಿಂದ ರಾಜಧಾನಿಯವರೆಗೆ ಕೇಳಬೇಕಾದ್ದು ಸಂಗೀತದ ದನಿಯೊಂದೇ, ಷಿಕಾಯತ್ (ದೂರು) ಇಲ್ಲಿಗೆ ಬರಬೇಕಿಲ್ಲ. ಅಲ್ಲಲ್ಲಿಯೇ ಪರಿಹರಿಸಿಕೊಳ್ಳಬಹುದು’ ಎಂದು ಹೇಳುತ್ತಿದ್ದರು ಎಂಬ ಮಾತಿದೆ.

ಬ್ರಿಟಿಷರ ಕಾಲದಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ಅಧಿಕಾರಿಗಳನ್ನು ಜಿಲ್ಲೆಗಳಲ್ಲಿ ನೇಮಿಸಲಾಯಿತು. ಅವರಿಗೆ ಹೆಚ್ಚಿನ ಅಧಿಕಾರಗಳನ್ನು ಕೊಟ್ಟದಕ್ಕನ, ದೂರದ ಒಂಬತ್ತು ಸಾವಿರ ಕಿಲೋಮೀಟರು ದೂರದ ಲಂಡನ್ನಿನಿಂದ ಅವರಿಗೆ ಅಧಿಕಾರ ಚಲಾಯಿಸಲಿಕ್ಕೆ ಸಾಧ್ಯ ಆತು. ಸಿಂಗಾಪುರದ ಗಡಿಯಿಂದ ಆಫ್ಘಾನಿಸ್ತಾನದವರೆಗೂ ಹಬ್ಬಿದ್ದ ಅಂದಿನ ಭಾರತವನ್ನು ಆಳಲಿಕ್ಕೆ ಕೇವಲ ಎರಡು ಸಾವಿರ ಬಿಳಿಯ ಅಧಿಕಾರಿಗಳು ಇದ್ದರು. (ಸೇನೆ ಹಾಗೂ ಐಸಿಎಸ್ ಆಡಳಿತ ಸೇವೆ ಸೇರಿ).

ಐದನೆಯ ಪಾಯಿಂಟು- ಜಿಲ್ಲೆಯಲ್ಲಿ ಏನುಂಟು, ಏನಿಲ್ಲ?
ಜಿಲ್ಲೆ ಎನ್ನುವುದು ಒಂದು ಪ್ರದೇಶದ ಆಡಳಿತಾತ್ಮಕ ಮುಖ್ಯ ಕಚೇರಿಗಳನ್ನು ಹೊಂದಿರೋ ಊರು. ಅದರಾಗ ನಮ್ಮ ತೆರಿಗೆ ಹಣದಿಂದ ಕಟ್ಟಿದ ಇಟ್ಟಂಗಿ – ಸಿಮಿಂಟ್ ಕಟ್ಟಡಗಳಲ್ಲಿ ಇರುವ ಕಲ್ಲಿನ ಹೃದಯದ ಅಧಿಕಾರಿಗಳು ಕೂತಿರತಾರ. ಇವರು ಜನರ ಕೆಲಸ ಮಾಡೋಕಿಂತ ಜಾಸ್ತಿ ಜನರ ಪ್ರತಿನಿಧಿಗಳು ಎಂದು ಹೇಳಿಕೊಳ್ಳುವ ಪುಢಾರಿಗಳ ಕೆಲಸಾ ಮಾಡೋದ ಜಾಸ್ತಿ.

ಇಂತಿಪ್ಪ ಪುಢಾರಿಗಳು ಜನಾಸಕ್ತಿಗಾಗಿ ಹೆಚ್ಚಿನ ಜಿಲ್ಲೆ ಮಾಡಬೇಕು, ನಾನು ಇರೋ ಊರೇ ಜಿಲ್ಲೆ ಮುಖ್ಯ ಸ್ಥಾನ ಆಗಬೇಕು. ನಮ್ಮ ಮನಿ ಹಿಂದನ, ನಮ್ ಭಾವಮೈದುನನೇ ಜಿಲ್ಲಾಧಿಕಾರಿ ಆಗಬೇಕು ಅಂತ ಹೇಳಲಿಕ್ಕೆ ಹತ್ಯಾರಲ್ಲ, ಏನದರ ಮರ್ಮ? ಇದರ ಉತ್ತರ ಈ ಖೋಲಿಯೊಳಗ ಸಿಗೋದಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...