Homeನ್ಯಾಯ ಪಥಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು? ಜಿಲ್ಲೆ - ಪದಮೂಲ, ಇತಿಹಾಸ : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್

ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು? ಜಿಲ್ಲೆ – ಪದಮೂಲ, ಇತಿಹಾಸ : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ಇವತ್ತು ಕೆಲವು ವಿಷಯಗಳನ್ನು ಪಾಯಿಂಟ್ ಶೀರ್ ಕಲಿಯೋಣು.

ಒಂದನೇ ಪಾಯಿಂಟು- ಸಂಖ್ಯೆ
ಕರ್ನಾಟಕ ರಾಜ್ಯದೊಳಗ 30 ಜಿಲ್ಲೆ ಅವ. 32 ಅಲ್ಲ. 34 ನೂ ಅಲ್ಲ. ಕೆಲವರು 34 ಏನು 43 ಮಾಡಬೇಕು ಅಂತ ಹೊಂಟಾರ. ಅದು ಬೇರೆ ವಿಷಯ.

ಎರಡನೇ ಪಾಯಿಂಟು-ಜಿಲ್ಲೆಗಳ ಪಟ್ಟಿ
ಕರ್ನಾಟಕದ ಜಿಲ್ಲೆಗಳ ಹೆಸರು ಈ ರೀತಿ ಇವೆ – ಬಾಗಲಕೋಟಿ, ಬೆಳಗಾವಿ, ವಿಜಯಪುರ (ಬಿಜಾಪುರ), ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ(ಕಾರವಾರ), ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಕಲಬುರ್ಗಿ (ಗುಲಬರ್ಗಾ), ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ (ಮಂಗಳೂರು), ಹಾಸನ, ಕೊಡಗು (ಕೂರ್ಗು, ಮಡಿಕೇರಿ, ಮರಕೇರಾ), ಮಂಡ್ಯ, ಮೈಸೂರು, ಉಡುಪಿ

ಮೂರನೇ ಪಾಯಿಂಟು – ಆ ಪದಾ ಈ ಪದಾ
‘ಜಿಲ್ಲೆ’ ಎನ್ನುವುದು ಕನ್ನಡ ಪದವಾಗಲು ಅದೇನು ಕಬ್ಬಿನ ಜಲ್ಲೆ ಅಲ್ಲ. ಅದು ಜಿಲಾಃ ಎನ್ನುವ ಪರ್ಶಿಯನ್ ಅಥವಾ ಪಾರ್ಸಿ ಪದದಿಂದ ಬಂದ ಶಬ್ದ.

ನಮಗೆ ಗೊತ್ತಿಲ್ಲದಂಗನ ನಮ್ಮ ಅರಮನೀ ಕಂಬದಾಗ ನರಸಿಂಹಸ್ವಾಮಿ ಹೆಂಗ ಅವತಾರ ಹೆಂಗ ಇರತಾನೋ, ಹಂಗ ನಮ್ಮ ಖನ್ನಡ ಬಾಸೆಯೊಳಗ ಅಸಂಖ್ಯ ಪರ್ಶಿಯನ್ ಅಥವಾ ಪಾರ್ಸಿ ಪದಾ ಅವ. ಹಂಗನ ಇದೂ ಒಂದು ಪಾರ್ಸಿ ಪದ. “ಗಂಡಸರ ಲುಂಗಿ, ಹೆಂಗಸರು ಲುಂಗಿ, ಲಂಗೋಟಿ ಇವು ಯಾವುವೂ ಕನ್ನಡದವಲ್ಲ. ಅವೆಲ್ಲವೂ ಪಾರ್ಸಿ ಅಂತ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಹೇಳ್ಯಾರಲ್ಲ, ಅದು ಖರೇನ. ಕನ್ನಡದ ಕಸ್ತೂರಿ ತೇಯುವಾಗ ಕೊರಡಿಗೆ ಅಂಟಿಕೊಂಡ ಗಂಧದ ವಾಸನಿಯ ಹಂಗ ಅವು ನಮ್ಮ ಭಾಷಾ ಸೇರಿಕೊಂಡು ಅದರ ಘಮಲು ಹೆಚ್ಚು ಆಗೇದ.

ನಮ್ಮ ಕಲ್ಪನಾ ಇಲ್ಲದಂಗ ಅವು ನಮ್ಮ ಮ್ಯಾಲೆ ಪ್ರಭಾವ ಬೀರ್ಯಾವು. ಬ್ಯಾರೆ ಎಲ್ಲಾ ಹೋಗಲಿ ಬಿಡಲಿ. ನಮ್ಮ ಜೀವನಾಧಾರ ಆಗಿರೋ `ನೀರು’ ಸಹಿತ ಫಾರ್ಸಿ. ಹೋಗಲಿ ಬಿಡ್ರಿ, ಅವು ಯಾವಾವು ಶಬ್ದಾ ಅನ್ನುವುದನ್ನು ಇನ್ನೊಮ್ಮೆ ನೋಡೋಣ.

ನಾಲ್ಕನೆಯ ಪಾಯಿಂಟು – ಇತಿಹಾಸ
ಸಾವಿರಾರು ವರ್ಷಗಳಿಂದ ಗ್ರಾಮ ಪಂಚಾಯಿತಿಯೇ ಭಾರತದಲ್ಲಿ ಆಡಳಿತದ ಕೇಂದ್ರವಾಗಿತ್ತು. ಸರಿ ಸುಮಾರು ಒಂದು ಸಾವಿರ ವರ್ಷದ ಹಿಂದೆ ಘುರಿಡ್ ರಾಜ ಮನೆತನದವರು ಭಾರತದ ಆಡಳಿತ ವನ್ನು ಕೈಗೆ ತೆಗೆದುಕೊಂಡಾಗ ಪ್ರತಿ ಪ್ರದೇಶಕ್ಕೊಬ್ಬ ಸರದಾರನನ್ನು ನೇಮಿಸಿದರು. ಇವರಲ್ಲಿ ಒಬ್ಬನಾದ ಕುತುಬ್ದೀನ ಐಬಕ್‍ನ ಅಧಿಕಾರಿಗಳು ಕೈಕೊಂಡ ಆಡಳಿತ ಸುಧಾರಣೆ ಅಂಗವಾಗಿ ಹುಟ್ಟಿದ್ದವೇ ಜಿಲಾಃ ಗಳು. ಇವುಗಳನ್ನು ನಂತರ ದೆಹಲಿ ಸುಲ್ತಾನರು, ದಖನ್ನಿನ ಬಹಮನಿಗಳು, ಮುಘಲರು, ಹಾಗೂ ಹೈದರಾಬಾದು ನಿಜಾಮರು ಆಡಳಿತ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡರು. ಹೈದರಾಬಾದಿನಲ್ಲಿ, `ನಿಜಾಮರು ಜಿಲ್ಲಾಗಳಿಂದ ರಾಜಧಾನಿಯವರೆಗೆ ಕೇಳಬೇಕಾದ್ದು ಸಂಗೀತದ ದನಿಯೊಂದೇ, ಷಿಕಾಯತ್ (ದೂರು) ಇಲ್ಲಿಗೆ ಬರಬೇಕಿಲ್ಲ. ಅಲ್ಲಲ್ಲಿಯೇ ಪರಿಹರಿಸಿಕೊಳ್ಳಬಹುದು’ ಎಂದು ಹೇಳುತ್ತಿದ್ದರು ಎಂಬ ಮಾತಿದೆ.

ಬ್ರಿಟಿಷರ ಕಾಲದಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ಅಧಿಕಾರಿಗಳನ್ನು ಜಿಲ್ಲೆಗಳಲ್ಲಿ ನೇಮಿಸಲಾಯಿತು. ಅವರಿಗೆ ಹೆಚ್ಚಿನ ಅಧಿಕಾರಗಳನ್ನು ಕೊಟ್ಟದಕ್ಕನ, ದೂರದ ಒಂಬತ್ತು ಸಾವಿರ ಕಿಲೋಮೀಟರು ದೂರದ ಲಂಡನ್ನಿನಿಂದ ಅವರಿಗೆ ಅಧಿಕಾರ ಚಲಾಯಿಸಲಿಕ್ಕೆ ಸಾಧ್ಯ ಆತು. ಸಿಂಗಾಪುರದ ಗಡಿಯಿಂದ ಆಫ್ಘಾನಿಸ್ತಾನದವರೆಗೂ ಹಬ್ಬಿದ್ದ ಅಂದಿನ ಭಾರತವನ್ನು ಆಳಲಿಕ್ಕೆ ಕೇವಲ ಎರಡು ಸಾವಿರ ಬಿಳಿಯ ಅಧಿಕಾರಿಗಳು ಇದ್ದರು. (ಸೇನೆ ಹಾಗೂ ಐಸಿಎಸ್ ಆಡಳಿತ ಸೇವೆ ಸೇರಿ).

ಐದನೆಯ ಪಾಯಿಂಟು- ಜಿಲ್ಲೆಯಲ್ಲಿ ಏನುಂಟು, ಏನಿಲ್ಲ?
ಜಿಲ್ಲೆ ಎನ್ನುವುದು ಒಂದು ಪ್ರದೇಶದ ಆಡಳಿತಾತ್ಮಕ ಮುಖ್ಯ ಕಚೇರಿಗಳನ್ನು ಹೊಂದಿರೋ ಊರು. ಅದರಾಗ ನಮ್ಮ ತೆರಿಗೆ ಹಣದಿಂದ ಕಟ್ಟಿದ ಇಟ್ಟಂಗಿ – ಸಿಮಿಂಟ್ ಕಟ್ಟಡಗಳಲ್ಲಿ ಇರುವ ಕಲ್ಲಿನ ಹೃದಯದ ಅಧಿಕಾರಿಗಳು ಕೂತಿರತಾರ. ಇವರು ಜನರ ಕೆಲಸ ಮಾಡೋಕಿಂತ ಜಾಸ್ತಿ ಜನರ ಪ್ರತಿನಿಧಿಗಳು ಎಂದು ಹೇಳಿಕೊಳ್ಳುವ ಪುಢಾರಿಗಳ ಕೆಲಸಾ ಮಾಡೋದ ಜಾಸ್ತಿ.

ಇಂತಿಪ್ಪ ಪುಢಾರಿಗಳು ಜನಾಸಕ್ತಿಗಾಗಿ ಹೆಚ್ಚಿನ ಜಿಲ್ಲೆ ಮಾಡಬೇಕು, ನಾನು ಇರೋ ಊರೇ ಜಿಲ್ಲೆ ಮುಖ್ಯ ಸ್ಥಾನ ಆಗಬೇಕು. ನಮ್ಮ ಮನಿ ಹಿಂದನ, ನಮ್ ಭಾವಮೈದುನನೇ ಜಿಲ್ಲಾಧಿಕಾರಿ ಆಗಬೇಕು ಅಂತ ಹೇಳಲಿಕ್ಕೆ ಹತ್ಯಾರಲ್ಲ, ಏನದರ ಮರ್ಮ? ಇದರ ಉತ್ತರ ಈ ಖೋಲಿಯೊಳಗ ಸಿಗೋದಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...