Homeಕರ್ನಾಟಕಮೇ 23 ಮುಗಿದೋಯ್ತು, ಬಿಜೆಪಿ ಗೆದ್ದಾಯ್ತು: ರಾಜ್ಯ ಸರ್ಕಾರದ ಭವಿಷ್ಯವೇನು?

ಮೇ 23 ಮುಗಿದೋಯ್ತು, ಬಿಜೆಪಿ ಗೆದ್ದಾಯ್ತು: ರಾಜ್ಯ ಸರ್ಕಾರದ ಭವಿಷ್ಯವೇನು?

ಬಿಜೆಪಿ ಪರವಾಗಿ ತುತ್ತೂರಿ ಊದುತ್ತಲೇ ಇರುವ ಮಾಧ್ಯಮಗಳು ಸದಾಕಾಲ ಮೈತ್ರಿ ಸರ್ಕಾರದ ವಿರುದ್ಧ ಅರ್ಧ ಸತ್ಯ ಮತ್ತು ಸುಳ್ಳುಗಳನ್ನು ಹೊಸೆಯುತ್ತಲೇ ಇರುತ್ತವೆ.

- Advertisement -
- Advertisement -

| ನೀಲಗಾರ |

ಮೇ 23ರಂದು ಎಚ್.ಡಿ.ಕುಮಾರಸ್ವಾಮಿಯವರ ಸರ್ಕಾರ ಉರುಳುತ್ತದೆ ಎಂದು ಯಡಿಯೂರಪ್ಪನವರು ಮತ್ತು ಬಿಜೆಪಿಯವರು ಆಗಿಂದಾಗ್ಗೆ ಹೇಳುತ್ತಿದ್ದರು. ಭಿನ್ನಮತೀಯರೆಂದು ಹೇಳಲಾದ ಕೆಲವು ಕಾಂಗ್ರೆಸ್ ಶಾಸಕರು ಲೋಕಸಭಾ ಚುನಾವಣೆಯಲ್ಲೂ ತಟಸ್ಥರಾಗಿದ್ದರು ಅಥವಾ ಸರಿಯಾಗಿ ಪ್ರಚಾರಕ್ಕಿಳಿಯಲಿಲ್ಲ. ಹೀಗಾಗಿ ಚುನಾವಣೆಯ ನಂತರ ಅವರುಗಳ ನಡೆಯೇನಾಗಿರಬಹುದು ಎಂಬ ಸೂಚನೆಯನ್ನು ಕೊಟ್ಟಿದ್ದರು.

ಇದೀಗ ದೇಶದಲ್ಲಿ ಬಿಜೆಪಿ ಹಿಂದಿಗಿಂತ ಹೆಚ್ಚು ಬಲದೊಂದಿಗೆ ಅಧಿಕಾರಕ್ಕೆ ಬಂದಿದೆ ಮತ್ತು ಕರ್ನಾಟಕದಲ್ಲಿ ಬಿಜೆಪಿಗೆ ಭಾರೀ ಗೆಲುವು ಸಿಕ್ಕಿದೆ. ಯಾವ ಪ್ರಮಾಣದ ಗೆಲುವೆಂದರೆ, ಸ್ವತಃ ಬಿಜೆಪಿಯೇ ನಿರೀಕ್ಷೆ ಮಾಡದಿದ್ದ ಗೆಲುವು. ಎಕ್ಸಿಟ್ ಪೋಲ್‍ನಲ್ಲಿ ಈ ಸುಳಿವು ಸಿಕ್ಕ ನಂತರ ಶಿವಾಜಿನಗರದ ಶಾಸಕ ರೋಷನ್‍ಬೇಗ್ ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರುಗಳು ಮೈತ್ರಿಧರ್ಮವನ್ನು ಪಾಲಿಸಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅದರ ಪರಿಣಾಮವಾಗಿ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳು ಪರಸ್ಪರ ಬೈದಾಡಿಕೊಂಡರು. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಚುನಾವಣೆ ಆಗುವವರೆಗೂ ಕಾಂಗ್ರೆಸ್‍ನವರು ಜೆಡಿಎಸ್ ಮೇಲೆ ಕಿಡಿಕಾರುತ್ತಿದ್ದರೆ, ಚುನಾವಣೆಯ ನಂತರ ಜೆಡಿಎಸ್‍ನವರು ಕಾಂಗ್ರೆಸ್ ನಾಯಕರ ಅದರಲ್ಲೂ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದರು. ಎರಡು ದಿನಗಳ ಕೆಳಗೆ ರಾಹುಲ್‍ಗಾಂಧಿ ಕಾಂಗ್ರೆಸ್ ಧುರೀಣರನ್ನು ಕರೆಸಿಕೊಂಡು ಮೈತ್ರಿ ಮುಂದುವರೆಸಲು ಬೇಕಾದ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರಾದರೂ, ಅದರ ಪರಿಣಾಮ ಎಷ್ಟಿರುತ್ತದೆಂದು ಹೇಳಲಾಗದು.

ಮೈತ್ರಿಯಿಂದ ಯಾವ ಒಳಿತೂ ಆಗಲಿಲ್ಲ ಎಂಬುದನ್ನೂ ಚುನಾವಣಾ ಫಲಿತಾಂಶವು ತೋರಿಸುತ್ತಿದೆ. ವಾಸ್ತವದಲ್ಲಿ ಮೈತ್ರಿಯಿಂದ ಬಿಜೆಪಿಗೆ ಹಲವು ರೀತಿಯ ಲಾಭಗಳಾಗಿವೆ. ನಾವು ಇದನ್ನೇ ಹೇಳುತ್ತಿದ್ದದ್ದು ಎಂದು ಕಾಂಗ್ರೆಸ್‍ನಲ್ಲಿನ ಮೈತ್ರಿ ವಿರೋಧಿಗಳು ಹೇಳುವ ಸಾಧ್ಯತೆಗಳಿವೆ. ಇವೆಲ್ಲಾ ಕಾರಣಗಳಿಂದ ಮುಂದಿನ ಸಾಧ್ಯತೆಗಳೇನಾಗಿರಬಹುದು ಎಂಬುದನ್ನು ವಿಶ್ಲೇಷಿಸುವ ಮುನ್ನ, ಅಂಕಿ-ಸಂಖ್ಯೆಗಳತ್ತ ಒಮ್ಮೆ ನೋಡೋಣ.

225 ಸದಸ್ಯ ಬಲದ ವಿಧಾನಸಭೆಯಲ್ಲಿ ಒಬ್ಬರು ಆಂಗ್ಲೋ ಇಂಡಿಯನ್ ಸದಸ್ಯರನ್ನು ಮೈತ್ರಿ ಪಕ್ಷ ನೇಮಕ ಮಾಡಿಕೊಂಡಿರುತ್ತದೆ. ನಿರ್ಣಾಯಕ ಸಂದರ್ಭದಲ್ಲಿ ಸ್ಪೀಕರ್ ಸರ್ಕಾರದ ಪರವಾಗಿಯೇ ಮತ ಹಾಕುತ್ತಾರೆಂದುಕೊಳ್ಳೋಣ. ಇವೆರಡನ್ನು ಹೊರತುಪಡಿಸಿದರೆ, ಈಗಿನ ಬಲಾಬಲ ಹೀಗಿವೆ. ಬಿಜೆಪಿ 104+ ಚಿಂಚೋಳಿ+ ಇಬ್ಬರು ಪಕ್ಷೇತರರು ಸೇರಿ 107. ಮೈತ್ರಿ ಪಕ್ಷಗಳದ್ದು, ಕಾಂಗ್ರೆಸ್‍ನ 78 + ಕುಂದಗೋಳ+ ಜೆಡಿಎಸ್‍ನ 37 ಸೇರಿದರೆ 116. ಅಂತಹ ಸಂದರ್ಭ ಬಂದರೆ ಬಿಎಸ್‍ಪಿಯ ಎನ್.ಮಹೇಶ್ ಅವರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಭಾವಿಸಿದರೆ ಒಟ್ಟು 117.

ಕಾಂಗ್ರೆಸ್ ಮತ್ತು ಜೆಡಿಎಸ್‍ನ ಒಟ್ಟು 11 ಜನ ಶಾಸಕರನ್ನು ರಾಜೀನಾಮೆ ಕೊಡಿಸಿದರೆ, ಮೈತ್ರಿಯ ಬಲ 106ಕ್ಕೆ ಇಳಿದು ಬಿಜೆಪಿಗೆ ಸರಳ ಬಹುಮತ ಬಂದಂತಾಗುತ್ತದೆ. ಆ 11 ಜನ ಯಾರು ಎಂಬುದೇ ಈಗಿನ ಲೆಕ್ಕಾಚಾರ. ರಮೇಶ್ ಜಾರಕಿಹೊಳಿ, ಕುಮಟಳ್ಳಿ ಮತ್ತು ನಾಗೇಂದ್ರ ಈಗಾಗಲೇ ಆ ಕಡೆಗೆ ಹೋಗಲು ಸಿದ್ಧರಿದ್ದಾರೆಂಬುದು ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರದಿಂದ ದಾಳಿಗೊಳಗಾಗುವ ಭೀತಿಯಲ್ಲಿರುವ ಆನಂದ್‍ಸಿಂಗ್, ತೀರ್ಮಾನ ಮಾಡಿಕೊಂಡೇ ಕಾಂಗ್ರೆಸ್ ನಾಯಕರ ವಿರುದ್ಧ ಮಾತಾಡುತ್ತಿರುವ ರೋಷನ್ ಬೇಗ್ ಇಬ್ಬರೂ ಬಿಜೆಪಿ ಪರ ನಿಲ್ಲುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಲೋಕಸಭಾ ಚುನಾವಣೆಯಲ್ಲೂ ಕಡೆಯಲ್ಲಿ ಮೊಯ್ಲಿ ಪರವಾಗಿ ಕೆಲಸ ಮಾಡಲಿಲ್ಲ; ಮತ ಎಣಿಕೆಗೆ ಮುನ್ನ ವೀರಪ್ಪ ಮೊಯ್ಲಿಯವರು ಕರೆದಿದ್ದ ಏಜೆಂಟರ ಸಭೆಗೆ ಸುಧಾಕರ್ ಹಿಂಬಾಲಕರ್ಯಾರೂ ಹೋಗಿರಲಿಲ್ಲ.

ಈ 6 ಜನರ ಹೊತ್ತಿಗೆ, ಸಚಿವ ಸ್ಥಾನ ಸಿಗದೇ ಅಸಮಾಧಾನದಲ್ಲಿರುವ ಬಿ.ಸಿ.ಪಾಟೀಲ್ ಥರದ ಹಲವರು ಹೊಸ್ತಿಲು ದಾಟುವ ಎಲ್ಲಾ ಸಾಧ್ಯತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ದೇಶದಲ್ಲಿ ಬಿಜೆಪಿ ಪಡೆದುಕೊಂಡಿರುವ ಗೆಲುವು ಐತಿಹಾಸಿಕ ಗೆಲುವಾಗಿದ್ದು, 1984ರ ಚುನಾವಣೆಯ ನಂತರ ಯಾವುದೇ ಪಕ್ಷ ಸಾಧಿಸಿರುವ ಎರಡನೇ ಸತತ ಗೆಲುವು ಇದಾಗಿದೆ. ಹೀಗಾಗಿ ಇದು ಉಂಟು ಮಾಡುವ ಆತಂಕ ಮತ್ತು ಅನಿಶ್ಚಿತತೆಗಳು ಹಲವರನ್ನು ಬೇಲಿ ದಾಟಿಸುತ್ತವೆ.

11 ಶಾಸಕರ ರಾಜೀನಾಮೆಯ ಅಗತ್ಯವಿರುವುದು, ಈಗಿಂದೀಗಲೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕಾದರೆ ಮಾತ್ರ. ಇಲ್ಲದಿದ್ದರೆ 6 ಶಾಸಕರು ರಾಜೀನಾಮೆ ಕೊಟ್ಟು, ಆ ಕ್ಷೇತ್ರಗಳಲ್ಲಿ ಚುನಾವಣೆ ನಡೆದು ಎಲ್ಲಾ ಕಡೆ ಬಿಜೆಪಿ ಗೆದ್ದರೂ ಬಹುಮತ ಇಲ್ಲವಾಗುತ್ತದೆ. ರಾಜೀನಾಮೆ ಅಂಗೀಕಾರವಾದ ಕೂಡಲೇ ಚುನಾವಣೆ ಘೋಷಣೆ ಮಾಡಿಸುವುದು ಬಿಜೆಪಿಗೆ ಕಷ್ಟದ ಕೆಲಸವೇನಲ್ಲ. ಹೇಗೂ ಚುನಾವಣಾ ಆಯೋಗವು ಈಗ ಸ್ವತಂತ್ರ ಸಂಸ್ಥೆಯಾಗಿ ಉಳಿದಿಲ್ಲ.

ಶಾಸಕರು ವಲಸೆ ಹೋಗುವುದಾದರೆ ಅದಕ್ಕೆ ಮುಖ್ಯ ಕಾರಣ ಬಿಜೆಪಿಯಲ್ಲ; ಬದಲಿಗೆ ಮೈತ್ರಿ ಸರ್ಕಾರದಲ್ಲಿನ ಅಭದ್ರತೆ. ಹೀಗೇ ಮುಂದುವರೆದರೆ ಮೈತ್ರಿ ಸರ್ಕಾರವು ತನ್ನಂತೆ ತಾನೇ ಬಿದ್ದು ಚುನಾವಣೆ ನಡೆದರೆ ತಾವು ಈಗಿರುವ ಪಕ್ಷದಿಂದ ಗೆಲ್ಲದೇ ಹೋಗಬಹುದು ಎಂಬ ಭಯ ಹಲವರಲ್ಲಿ ಇದೆ. ಅದರ ಬದಲಿಗೆ ಮತ್ತೆ ಸಾರ್ವತ್ರಿಕ ಚುನಾವಣೆ ನಡೆಯದೇ, ಈಗಲೇ ಪಕ್ಷಾಂತರ ಮಾಡಿ ಬಿಜೆಪಿಯಿಂದ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವ ಲೆಕ್ಕಾಚಾರ ಹಲವರನ್ನು ಬಿಜೆಪಿಯ ಕಡೆಗೆ ತಳ್ಳುತ್ತದೆ.
ಈ ಮನೋಭಾವ ಕೇವಲ ಕಾಂಗ್ರೆಸ್ ಶಾಸಕರದ್ದಲ್ಲ. ಬಿಜೆಪಿಗೆ ಹೋಗಿ ಮರಳಿ ಜೆಡಿಎಸ್‍ಗೆ ಬಂದಿರುವ ಜಿ.ಟಿ.ದೇವೇಗೌಡರಿಗೆ ಹೊಸ ಸರ್ಕಾರದಲ್ಲೂ ಸಚಿವ ಸ್ಥಾನ ಖಾತರಿಯಾದರೆ ಹೋಗುತ್ತಾರೆಂಬುದು ಅವರ ಆಪ್ತ ವಲಯದ ಹೇಳಿಕೆಯಾಗಿದೆ. ಖಾತೆ ಹಂಚಿಕೆಯ ಸಂದರ್ಭದಲ್ಲೇ ತೀವ್ರ ಅಸಮಾಧಾನ ಹೊಂದಿದ್ದ ಜಿಟಿಡಿ ಮೈತ್ರಿ ಸರ್ಕಾರ ಉಳಿಯಲು ಬಯಸುವುದಿಲ್ಲ. ಸ್ವತಃ ಕಾಂಗ್ರೆಸ್‍ನ ಹಲವಾರು ನಾಯಕರಿಗೆ, ಕೆಲವು ಸಚಿವರಿಗೂ ಸಹ ‘ಈ ಸರ್ಕಾರವು ಉಳಿಯಬಾರದು’ ಎಂಬ ಅನಿಸಿಕೆ ನಾಲ್ಕೈದು ತಿಂಗಳಿಂದ ಇದೆ.

ಇಡೀ ದೇಶದಲ್ಲೂ, ಕರ್ನಾಟಕದಲ್ಲೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿರುವ ಗೆಲುವಿನ ಹೊಡೆತವು ಮೈತ್ರಿ ಸರ್ಕಾರವನ್ನು ಉಳಿಯಲು ಬಿಡುವುದಿಲ್ಲ. ಎಕ್ಸಿಟ್ ಪೋಲ್ ಬಂದ ತಕ್ಷಣವೇ ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕರ ನಿಯೋಗ ರಾಜಭವನಕ್ಕೆ ಹೋಗಿತ್ತು. ಅಲ್ಲಿನ ಸರ್ಕಾರವು ಅಲ್ಪಮತಕ್ಕಿಳಿದಿರುವುದರಿಂದ ವಿಶ್ವಾಸಮತ ಯಾಚನೆಗೆ ಮುಂದಾಗಬೇಕು ಎಂದು ಅಲ್ಲಿ ಕೇಳಿದ್ದರು. ಒಂದು ಪಕ್ಷದ ಸರ್ಕಾರವಿರುವಾಗಲೇ ಅಂತಹ ಪರಿಸ್ಥಿತಿ ಇರುವಾಗ, ಕರ್ನಾಟಕದಲ್ಲಿ ನೂರೆಂಟು ಗಂಟುಗಳಿರುವ ಮೈತ್ರಿಕೂಟ ಉಳಿಯುವುದು ಕಷ್ಟವೇ ಕಷ್ಟ.

ಇವೆಲ್ಲವನ್ನೂ ದಾಟಿ ಉಳಿಯಬೇಕೆಂದರೆ, ಎರಡೂ ಪಕ್ಷಗಳಿಗೆ ಸರ್ವೈವಲ್ ಇನ್‍ಸ್ಟಿಂಕ್ಟ್ ಕಾಡಬೇಕು. ಅಂದರೆ, ಈ ಸರ್ಕಾರವನ್ನಾದರೂ ಉಳಿಸಿಕೊಳ್ಳದಿದ್ದರೆ ತಮಗೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಎಲ್ಲಾ ಹಿರಿಯ ನಾಯಕರಿಗೂ ಅನ್ನಿಸಬೇಕು. ಆ ಸಾಧ್ಯತೆ ಕಾಣುತ್ತಿಲ್ಲ. ಏಕೆಂದರೆ, ಅಂತಹ ಸೂಚನೆಗಳು ಸಿಕ್ಕಿ ಬಹಳ ದಿನಗಳಾಗಿವೆ. ಮೈತ್ರಿ ಮಾಡಿಕೊಂಡಿದ್ದೇ ಬಿಜೆಪಿಯನ್ನು ಹಿಮ್ಮೆಟ್ಟಿಸಲು. ಆದರೆ, ಎರಡೂ ಪಕ್ಷಗಳ ದೊಡ್ಡ ನಾಯಕರು ನಡೆದುಕೊಂಡಿದ್ದು ತಮ್ಮ ವ್ಯಕ್ತಿಗತ ಸ್ವಾರ್ಥದ ದೃಷ್ಟಿಯಿಂದ ಮಾತ್ರ. ಬಿಜೆಪಿಯ ಈ ಗೆಲುವು ಅಂಥದ್ದೇನಾದರೂ ತರುತ್ತದಾ ಎಂಬುದನ್ನು ಕಾದು ನೋಡಬೇಕು.
ಅಂತಹ ಯಾವ ಸಾಧ್ಯತೆಗಳೂ ಗೋಚರಿಸುತ್ತಿಲ್ಲ. ಏಕೆಂದರೆ, ನರೇಂದ್ರ ಮೋದಿಯವರನ್ನು ನರಹಂತಕ ಎಂದು ಬಹಿರಂಗವಾಗಿ ಕರೆಯುವಷ್ಟು ಸೆಕ್ಯುಲರ್ ಆದ ಸಿದ್ದರಾಮಯ್ಯನವರಿಗೆ ಈ ಮೈತ್ರಿ ಇಷ್ಟವಿಲ್ಲ. ಆ ಕಾರಣದಿಂದಲೂ, ಮೂರ್ನಾಲ್ಕು ಸೀಟುಗಳನ್ನು ಮೈತ್ರಿ ಕಳೆದುಕೊಂಡಿದೆ. ಅದಲ್ಲದೇ ಮನಸ್ಸಿಟ್ಟು ಕೆಲಸ ಮಾಡಿದ್ದರೆ ಪಡೆಯಬಹುದಾಗಿದ್ದ ಇನ್ನೂ ಮೂರ್ನಾಲ್ಕು ಸೀಟುಗಳನ್ನೂ ಈ ಪಕ್ಷಗಳು ಕಳೆದುಕೊಂಡಿವೆ. ಹಾಗಿದ್ದ ಮೇಲೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಅದರ ವೈಫಲ್ಯತೆಯಿಂದ ಮತ್ತೆ ಅಧಿಕಾರಕ್ಕೆ ಬರುವ ದೂರಾಲೋಚನೆಯಷ್ಟೇ ಹೊಂದಿರುತ್ತಾರೆ.

ಎಲ್ಲಕ್ಕಿಂತ ಮಿಗಿಲಾಗಿ ಕಳೆದ ಒಂದು ವರ್ಷದಿಂದ ಈ ಸರ್ಕಾರದ ಸಾಧನೆಯೇನು ಎಂಬುದು ಜನರ ಗಮನಕ್ಕೆ ಬಂದಿಲ್ಲ. ಬಿಜೆಪಿ ಪರವಾಗಿ ತುತ್ತೂರಿ ಊದುತ್ತಲೇ ಇರುವ ಮಾಧ್ಯಮಗಳು ಸದಾಕಾಲ ಮೈತ್ರಿ ಸರ್ಕಾರದ ವಿರುದ್ಧ ಅರ್ಧ ಸತ್ಯ ಮತ್ತು ಸುಳ್ಳುಗಳನ್ನು ಹೊಸೆಯುತ್ತಲೇ ಇರುತ್ತವೆ. ಹೀಗಿರುವಾಗ ಮುಂದೊಂದು ದಿನ ಸರ್ಕಾರವು ಬಿದ್ದು ಬಿಜೆಪಿಯು ದೊಡ್ಡ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವ ಬದಲು, ಈಗಲೇ ಒಂದಷ್ಟು ಶಾಸಕರು ಕಿತ್ತುಕೊಂಡು ಹೋಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವುದೇ ಲೇಸೆಂಬ ಅನಿಸಿಕೆ ಪ್ರಾಮಾಣಿಕ ಕಾರ್ಯಕರ್ತರಲ್ಲೂ ಇದೆ.

ಇದಕ್ಕೆ ಕಾರಣ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಿಂತ ಹೆಚ್ಚಾಗಿ ಮೈತ್ರಿ ನಾಯಕರ ಬೇಜವಾಬ್ದಾರಿಯೇ ಆಗಿದೆ. ಬಿಜೆಪಿಯಂತಹ ಪಕ್ಷವು ದೇಶದಲ್ಲೂ, ರಾಜ್ಯದಲ್ಲೂ ಅಧಿಕಾರ ಹಿಡಿಯುವುದರ ಅಪಾಯದ ಅರಿವು ಈ ಪಕ್ಷಗಳಿಗಿರುವ ಯಾವುದೇ ಲಕ್ಷಣ ತೋರುತ್ತಿಲ್ಲ. ಸಮಾಜದಲ್ಲಿ ಕೋಮುವಾದಿ ಶಕ್ತಿಗಳು ಬೆಳೆಯುತ್ತಿರುವಾಗ, ಸರ್ಕಾರದಲ್ಲಾದರೂ ಆ ಶಕ್ತಿಗಳು ಇಲ್ಲದಿದ್ದರೆ ಒಂದು ಮಟ್ಟಿಗಿನ ತಡೆ ಇರುತ್ತದೆ; ಇಲ್ಲದಿದ್ದರೆ ಸಾಂವಿಧಾನಿಕ ಸಂಸ್ಥೆಗಳೂ ದುರ್ಬಲಗೊಂಡು ಬಿಡುತ್ತವೆ. ಬಹುಶಃ ಕರ್ನಾಟಕವು ಅಂತಹ ದುರಂತದ ಸ್ಥಿತಿಗೆ ಪ್ರವೇಶ ಪಡೆಯುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...