Homeಕರ್ನಾಟಕಮೇ 23 ಮುಗಿದೋಯ್ತು, ಬಿಜೆಪಿ ಗೆದ್ದಾಯ್ತು: ರಾಜ್ಯ ಸರ್ಕಾರದ ಭವಿಷ್ಯವೇನು?

ಮೇ 23 ಮುಗಿದೋಯ್ತು, ಬಿಜೆಪಿ ಗೆದ್ದಾಯ್ತು: ರಾಜ್ಯ ಸರ್ಕಾರದ ಭವಿಷ್ಯವೇನು?

ಬಿಜೆಪಿ ಪರವಾಗಿ ತುತ್ತೂರಿ ಊದುತ್ತಲೇ ಇರುವ ಮಾಧ್ಯಮಗಳು ಸದಾಕಾಲ ಮೈತ್ರಿ ಸರ್ಕಾರದ ವಿರುದ್ಧ ಅರ್ಧ ಸತ್ಯ ಮತ್ತು ಸುಳ್ಳುಗಳನ್ನು ಹೊಸೆಯುತ್ತಲೇ ಇರುತ್ತವೆ.

- Advertisement -
- Advertisement -

| ನೀಲಗಾರ |

ಮೇ 23ರಂದು ಎಚ್.ಡಿ.ಕುಮಾರಸ್ವಾಮಿಯವರ ಸರ್ಕಾರ ಉರುಳುತ್ತದೆ ಎಂದು ಯಡಿಯೂರಪ್ಪನವರು ಮತ್ತು ಬಿಜೆಪಿಯವರು ಆಗಿಂದಾಗ್ಗೆ ಹೇಳುತ್ತಿದ್ದರು. ಭಿನ್ನಮತೀಯರೆಂದು ಹೇಳಲಾದ ಕೆಲವು ಕಾಂಗ್ರೆಸ್ ಶಾಸಕರು ಲೋಕಸಭಾ ಚುನಾವಣೆಯಲ್ಲೂ ತಟಸ್ಥರಾಗಿದ್ದರು ಅಥವಾ ಸರಿಯಾಗಿ ಪ್ರಚಾರಕ್ಕಿಳಿಯಲಿಲ್ಲ. ಹೀಗಾಗಿ ಚುನಾವಣೆಯ ನಂತರ ಅವರುಗಳ ನಡೆಯೇನಾಗಿರಬಹುದು ಎಂಬ ಸೂಚನೆಯನ್ನು ಕೊಟ್ಟಿದ್ದರು.

ಇದೀಗ ದೇಶದಲ್ಲಿ ಬಿಜೆಪಿ ಹಿಂದಿಗಿಂತ ಹೆಚ್ಚು ಬಲದೊಂದಿಗೆ ಅಧಿಕಾರಕ್ಕೆ ಬಂದಿದೆ ಮತ್ತು ಕರ್ನಾಟಕದಲ್ಲಿ ಬಿಜೆಪಿಗೆ ಭಾರೀ ಗೆಲುವು ಸಿಕ್ಕಿದೆ. ಯಾವ ಪ್ರಮಾಣದ ಗೆಲುವೆಂದರೆ, ಸ್ವತಃ ಬಿಜೆಪಿಯೇ ನಿರೀಕ್ಷೆ ಮಾಡದಿದ್ದ ಗೆಲುವು. ಎಕ್ಸಿಟ್ ಪೋಲ್‍ನಲ್ಲಿ ಈ ಸುಳಿವು ಸಿಕ್ಕ ನಂತರ ಶಿವಾಜಿನಗರದ ಶಾಸಕ ರೋಷನ್‍ಬೇಗ್ ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರುಗಳು ಮೈತ್ರಿಧರ್ಮವನ್ನು ಪಾಲಿಸಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅದರ ಪರಿಣಾಮವಾಗಿ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳು ಪರಸ್ಪರ ಬೈದಾಡಿಕೊಂಡರು. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಚುನಾವಣೆ ಆಗುವವರೆಗೂ ಕಾಂಗ್ರೆಸ್‍ನವರು ಜೆಡಿಎಸ್ ಮೇಲೆ ಕಿಡಿಕಾರುತ್ತಿದ್ದರೆ, ಚುನಾವಣೆಯ ನಂತರ ಜೆಡಿಎಸ್‍ನವರು ಕಾಂಗ್ರೆಸ್ ನಾಯಕರ ಅದರಲ್ಲೂ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದರು. ಎರಡು ದಿನಗಳ ಕೆಳಗೆ ರಾಹುಲ್‍ಗಾಂಧಿ ಕಾಂಗ್ರೆಸ್ ಧುರೀಣರನ್ನು ಕರೆಸಿಕೊಂಡು ಮೈತ್ರಿ ಮುಂದುವರೆಸಲು ಬೇಕಾದ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರಾದರೂ, ಅದರ ಪರಿಣಾಮ ಎಷ್ಟಿರುತ್ತದೆಂದು ಹೇಳಲಾಗದು.

ಮೈತ್ರಿಯಿಂದ ಯಾವ ಒಳಿತೂ ಆಗಲಿಲ್ಲ ಎಂಬುದನ್ನೂ ಚುನಾವಣಾ ಫಲಿತಾಂಶವು ತೋರಿಸುತ್ತಿದೆ. ವಾಸ್ತವದಲ್ಲಿ ಮೈತ್ರಿಯಿಂದ ಬಿಜೆಪಿಗೆ ಹಲವು ರೀತಿಯ ಲಾಭಗಳಾಗಿವೆ. ನಾವು ಇದನ್ನೇ ಹೇಳುತ್ತಿದ್ದದ್ದು ಎಂದು ಕಾಂಗ್ರೆಸ್‍ನಲ್ಲಿನ ಮೈತ್ರಿ ವಿರೋಧಿಗಳು ಹೇಳುವ ಸಾಧ್ಯತೆಗಳಿವೆ. ಇವೆಲ್ಲಾ ಕಾರಣಗಳಿಂದ ಮುಂದಿನ ಸಾಧ್ಯತೆಗಳೇನಾಗಿರಬಹುದು ಎಂಬುದನ್ನು ವಿಶ್ಲೇಷಿಸುವ ಮುನ್ನ, ಅಂಕಿ-ಸಂಖ್ಯೆಗಳತ್ತ ಒಮ್ಮೆ ನೋಡೋಣ.

225 ಸದಸ್ಯ ಬಲದ ವಿಧಾನಸಭೆಯಲ್ಲಿ ಒಬ್ಬರು ಆಂಗ್ಲೋ ಇಂಡಿಯನ್ ಸದಸ್ಯರನ್ನು ಮೈತ್ರಿ ಪಕ್ಷ ನೇಮಕ ಮಾಡಿಕೊಂಡಿರುತ್ತದೆ. ನಿರ್ಣಾಯಕ ಸಂದರ್ಭದಲ್ಲಿ ಸ್ಪೀಕರ್ ಸರ್ಕಾರದ ಪರವಾಗಿಯೇ ಮತ ಹಾಕುತ್ತಾರೆಂದುಕೊಳ್ಳೋಣ. ಇವೆರಡನ್ನು ಹೊರತುಪಡಿಸಿದರೆ, ಈಗಿನ ಬಲಾಬಲ ಹೀಗಿವೆ. ಬಿಜೆಪಿ 104+ ಚಿಂಚೋಳಿ+ ಇಬ್ಬರು ಪಕ್ಷೇತರರು ಸೇರಿ 107. ಮೈತ್ರಿ ಪಕ್ಷಗಳದ್ದು, ಕಾಂಗ್ರೆಸ್‍ನ 78 + ಕುಂದಗೋಳ+ ಜೆಡಿಎಸ್‍ನ 37 ಸೇರಿದರೆ 116. ಅಂತಹ ಸಂದರ್ಭ ಬಂದರೆ ಬಿಎಸ್‍ಪಿಯ ಎನ್.ಮಹೇಶ್ ಅವರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಭಾವಿಸಿದರೆ ಒಟ್ಟು 117.

ಕಾಂಗ್ರೆಸ್ ಮತ್ತು ಜೆಡಿಎಸ್‍ನ ಒಟ್ಟು 11 ಜನ ಶಾಸಕರನ್ನು ರಾಜೀನಾಮೆ ಕೊಡಿಸಿದರೆ, ಮೈತ್ರಿಯ ಬಲ 106ಕ್ಕೆ ಇಳಿದು ಬಿಜೆಪಿಗೆ ಸರಳ ಬಹುಮತ ಬಂದಂತಾಗುತ್ತದೆ. ಆ 11 ಜನ ಯಾರು ಎಂಬುದೇ ಈಗಿನ ಲೆಕ್ಕಾಚಾರ. ರಮೇಶ್ ಜಾರಕಿಹೊಳಿ, ಕುಮಟಳ್ಳಿ ಮತ್ತು ನಾಗೇಂದ್ರ ಈಗಾಗಲೇ ಆ ಕಡೆಗೆ ಹೋಗಲು ಸಿದ್ಧರಿದ್ದಾರೆಂಬುದು ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರದಿಂದ ದಾಳಿಗೊಳಗಾಗುವ ಭೀತಿಯಲ್ಲಿರುವ ಆನಂದ್‍ಸಿಂಗ್, ತೀರ್ಮಾನ ಮಾಡಿಕೊಂಡೇ ಕಾಂಗ್ರೆಸ್ ನಾಯಕರ ವಿರುದ್ಧ ಮಾತಾಡುತ್ತಿರುವ ರೋಷನ್ ಬೇಗ್ ಇಬ್ಬರೂ ಬಿಜೆಪಿ ಪರ ನಿಲ್ಲುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಲೋಕಸಭಾ ಚುನಾವಣೆಯಲ್ಲೂ ಕಡೆಯಲ್ಲಿ ಮೊಯ್ಲಿ ಪರವಾಗಿ ಕೆಲಸ ಮಾಡಲಿಲ್ಲ; ಮತ ಎಣಿಕೆಗೆ ಮುನ್ನ ವೀರಪ್ಪ ಮೊಯ್ಲಿಯವರು ಕರೆದಿದ್ದ ಏಜೆಂಟರ ಸಭೆಗೆ ಸುಧಾಕರ್ ಹಿಂಬಾಲಕರ್ಯಾರೂ ಹೋಗಿರಲಿಲ್ಲ.

ಈ 6 ಜನರ ಹೊತ್ತಿಗೆ, ಸಚಿವ ಸ್ಥಾನ ಸಿಗದೇ ಅಸಮಾಧಾನದಲ್ಲಿರುವ ಬಿ.ಸಿ.ಪಾಟೀಲ್ ಥರದ ಹಲವರು ಹೊಸ್ತಿಲು ದಾಟುವ ಎಲ್ಲಾ ಸಾಧ್ಯತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ದೇಶದಲ್ಲಿ ಬಿಜೆಪಿ ಪಡೆದುಕೊಂಡಿರುವ ಗೆಲುವು ಐತಿಹಾಸಿಕ ಗೆಲುವಾಗಿದ್ದು, 1984ರ ಚುನಾವಣೆಯ ನಂತರ ಯಾವುದೇ ಪಕ್ಷ ಸಾಧಿಸಿರುವ ಎರಡನೇ ಸತತ ಗೆಲುವು ಇದಾಗಿದೆ. ಹೀಗಾಗಿ ಇದು ಉಂಟು ಮಾಡುವ ಆತಂಕ ಮತ್ತು ಅನಿಶ್ಚಿತತೆಗಳು ಹಲವರನ್ನು ಬೇಲಿ ದಾಟಿಸುತ್ತವೆ.

11 ಶಾಸಕರ ರಾಜೀನಾಮೆಯ ಅಗತ್ಯವಿರುವುದು, ಈಗಿಂದೀಗಲೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕಾದರೆ ಮಾತ್ರ. ಇಲ್ಲದಿದ್ದರೆ 6 ಶಾಸಕರು ರಾಜೀನಾಮೆ ಕೊಟ್ಟು, ಆ ಕ್ಷೇತ್ರಗಳಲ್ಲಿ ಚುನಾವಣೆ ನಡೆದು ಎಲ್ಲಾ ಕಡೆ ಬಿಜೆಪಿ ಗೆದ್ದರೂ ಬಹುಮತ ಇಲ್ಲವಾಗುತ್ತದೆ. ರಾಜೀನಾಮೆ ಅಂಗೀಕಾರವಾದ ಕೂಡಲೇ ಚುನಾವಣೆ ಘೋಷಣೆ ಮಾಡಿಸುವುದು ಬಿಜೆಪಿಗೆ ಕಷ್ಟದ ಕೆಲಸವೇನಲ್ಲ. ಹೇಗೂ ಚುನಾವಣಾ ಆಯೋಗವು ಈಗ ಸ್ವತಂತ್ರ ಸಂಸ್ಥೆಯಾಗಿ ಉಳಿದಿಲ್ಲ.

ಶಾಸಕರು ವಲಸೆ ಹೋಗುವುದಾದರೆ ಅದಕ್ಕೆ ಮುಖ್ಯ ಕಾರಣ ಬಿಜೆಪಿಯಲ್ಲ; ಬದಲಿಗೆ ಮೈತ್ರಿ ಸರ್ಕಾರದಲ್ಲಿನ ಅಭದ್ರತೆ. ಹೀಗೇ ಮುಂದುವರೆದರೆ ಮೈತ್ರಿ ಸರ್ಕಾರವು ತನ್ನಂತೆ ತಾನೇ ಬಿದ್ದು ಚುನಾವಣೆ ನಡೆದರೆ ತಾವು ಈಗಿರುವ ಪಕ್ಷದಿಂದ ಗೆಲ್ಲದೇ ಹೋಗಬಹುದು ಎಂಬ ಭಯ ಹಲವರಲ್ಲಿ ಇದೆ. ಅದರ ಬದಲಿಗೆ ಮತ್ತೆ ಸಾರ್ವತ್ರಿಕ ಚುನಾವಣೆ ನಡೆಯದೇ, ಈಗಲೇ ಪಕ್ಷಾಂತರ ಮಾಡಿ ಬಿಜೆಪಿಯಿಂದ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವ ಲೆಕ್ಕಾಚಾರ ಹಲವರನ್ನು ಬಿಜೆಪಿಯ ಕಡೆಗೆ ತಳ್ಳುತ್ತದೆ.
ಈ ಮನೋಭಾವ ಕೇವಲ ಕಾಂಗ್ರೆಸ್ ಶಾಸಕರದ್ದಲ್ಲ. ಬಿಜೆಪಿಗೆ ಹೋಗಿ ಮರಳಿ ಜೆಡಿಎಸ್‍ಗೆ ಬಂದಿರುವ ಜಿ.ಟಿ.ದೇವೇಗೌಡರಿಗೆ ಹೊಸ ಸರ್ಕಾರದಲ್ಲೂ ಸಚಿವ ಸ್ಥಾನ ಖಾತರಿಯಾದರೆ ಹೋಗುತ್ತಾರೆಂಬುದು ಅವರ ಆಪ್ತ ವಲಯದ ಹೇಳಿಕೆಯಾಗಿದೆ. ಖಾತೆ ಹಂಚಿಕೆಯ ಸಂದರ್ಭದಲ್ಲೇ ತೀವ್ರ ಅಸಮಾಧಾನ ಹೊಂದಿದ್ದ ಜಿಟಿಡಿ ಮೈತ್ರಿ ಸರ್ಕಾರ ಉಳಿಯಲು ಬಯಸುವುದಿಲ್ಲ. ಸ್ವತಃ ಕಾಂಗ್ರೆಸ್‍ನ ಹಲವಾರು ನಾಯಕರಿಗೆ, ಕೆಲವು ಸಚಿವರಿಗೂ ಸಹ ‘ಈ ಸರ್ಕಾರವು ಉಳಿಯಬಾರದು’ ಎಂಬ ಅನಿಸಿಕೆ ನಾಲ್ಕೈದು ತಿಂಗಳಿಂದ ಇದೆ.

ಇಡೀ ದೇಶದಲ್ಲೂ, ಕರ್ನಾಟಕದಲ್ಲೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿರುವ ಗೆಲುವಿನ ಹೊಡೆತವು ಮೈತ್ರಿ ಸರ್ಕಾರವನ್ನು ಉಳಿಯಲು ಬಿಡುವುದಿಲ್ಲ. ಎಕ್ಸಿಟ್ ಪೋಲ್ ಬಂದ ತಕ್ಷಣವೇ ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕರ ನಿಯೋಗ ರಾಜಭವನಕ್ಕೆ ಹೋಗಿತ್ತು. ಅಲ್ಲಿನ ಸರ್ಕಾರವು ಅಲ್ಪಮತಕ್ಕಿಳಿದಿರುವುದರಿಂದ ವಿಶ್ವಾಸಮತ ಯಾಚನೆಗೆ ಮುಂದಾಗಬೇಕು ಎಂದು ಅಲ್ಲಿ ಕೇಳಿದ್ದರು. ಒಂದು ಪಕ್ಷದ ಸರ್ಕಾರವಿರುವಾಗಲೇ ಅಂತಹ ಪರಿಸ್ಥಿತಿ ಇರುವಾಗ, ಕರ್ನಾಟಕದಲ್ಲಿ ನೂರೆಂಟು ಗಂಟುಗಳಿರುವ ಮೈತ್ರಿಕೂಟ ಉಳಿಯುವುದು ಕಷ್ಟವೇ ಕಷ್ಟ.

ಇವೆಲ್ಲವನ್ನೂ ದಾಟಿ ಉಳಿಯಬೇಕೆಂದರೆ, ಎರಡೂ ಪಕ್ಷಗಳಿಗೆ ಸರ್ವೈವಲ್ ಇನ್‍ಸ್ಟಿಂಕ್ಟ್ ಕಾಡಬೇಕು. ಅಂದರೆ, ಈ ಸರ್ಕಾರವನ್ನಾದರೂ ಉಳಿಸಿಕೊಳ್ಳದಿದ್ದರೆ ತಮಗೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಎಲ್ಲಾ ಹಿರಿಯ ನಾಯಕರಿಗೂ ಅನ್ನಿಸಬೇಕು. ಆ ಸಾಧ್ಯತೆ ಕಾಣುತ್ತಿಲ್ಲ. ಏಕೆಂದರೆ, ಅಂತಹ ಸೂಚನೆಗಳು ಸಿಕ್ಕಿ ಬಹಳ ದಿನಗಳಾಗಿವೆ. ಮೈತ್ರಿ ಮಾಡಿಕೊಂಡಿದ್ದೇ ಬಿಜೆಪಿಯನ್ನು ಹಿಮ್ಮೆಟ್ಟಿಸಲು. ಆದರೆ, ಎರಡೂ ಪಕ್ಷಗಳ ದೊಡ್ಡ ನಾಯಕರು ನಡೆದುಕೊಂಡಿದ್ದು ತಮ್ಮ ವ್ಯಕ್ತಿಗತ ಸ್ವಾರ್ಥದ ದೃಷ್ಟಿಯಿಂದ ಮಾತ್ರ. ಬಿಜೆಪಿಯ ಈ ಗೆಲುವು ಅಂಥದ್ದೇನಾದರೂ ತರುತ್ತದಾ ಎಂಬುದನ್ನು ಕಾದು ನೋಡಬೇಕು.
ಅಂತಹ ಯಾವ ಸಾಧ್ಯತೆಗಳೂ ಗೋಚರಿಸುತ್ತಿಲ್ಲ. ಏಕೆಂದರೆ, ನರೇಂದ್ರ ಮೋದಿಯವರನ್ನು ನರಹಂತಕ ಎಂದು ಬಹಿರಂಗವಾಗಿ ಕರೆಯುವಷ್ಟು ಸೆಕ್ಯುಲರ್ ಆದ ಸಿದ್ದರಾಮಯ್ಯನವರಿಗೆ ಈ ಮೈತ್ರಿ ಇಷ್ಟವಿಲ್ಲ. ಆ ಕಾರಣದಿಂದಲೂ, ಮೂರ್ನಾಲ್ಕು ಸೀಟುಗಳನ್ನು ಮೈತ್ರಿ ಕಳೆದುಕೊಂಡಿದೆ. ಅದಲ್ಲದೇ ಮನಸ್ಸಿಟ್ಟು ಕೆಲಸ ಮಾಡಿದ್ದರೆ ಪಡೆಯಬಹುದಾಗಿದ್ದ ಇನ್ನೂ ಮೂರ್ನಾಲ್ಕು ಸೀಟುಗಳನ್ನೂ ಈ ಪಕ್ಷಗಳು ಕಳೆದುಕೊಂಡಿವೆ. ಹಾಗಿದ್ದ ಮೇಲೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಅದರ ವೈಫಲ್ಯತೆಯಿಂದ ಮತ್ತೆ ಅಧಿಕಾರಕ್ಕೆ ಬರುವ ದೂರಾಲೋಚನೆಯಷ್ಟೇ ಹೊಂದಿರುತ್ತಾರೆ.

ಎಲ್ಲಕ್ಕಿಂತ ಮಿಗಿಲಾಗಿ ಕಳೆದ ಒಂದು ವರ್ಷದಿಂದ ಈ ಸರ್ಕಾರದ ಸಾಧನೆಯೇನು ಎಂಬುದು ಜನರ ಗಮನಕ್ಕೆ ಬಂದಿಲ್ಲ. ಬಿಜೆಪಿ ಪರವಾಗಿ ತುತ್ತೂರಿ ಊದುತ್ತಲೇ ಇರುವ ಮಾಧ್ಯಮಗಳು ಸದಾಕಾಲ ಮೈತ್ರಿ ಸರ್ಕಾರದ ವಿರುದ್ಧ ಅರ್ಧ ಸತ್ಯ ಮತ್ತು ಸುಳ್ಳುಗಳನ್ನು ಹೊಸೆಯುತ್ತಲೇ ಇರುತ್ತವೆ. ಹೀಗಿರುವಾಗ ಮುಂದೊಂದು ದಿನ ಸರ್ಕಾರವು ಬಿದ್ದು ಬಿಜೆಪಿಯು ದೊಡ್ಡ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವ ಬದಲು, ಈಗಲೇ ಒಂದಷ್ಟು ಶಾಸಕರು ಕಿತ್ತುಕೊಂಡು ಹೋಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವುದೇ ಲೇಸೆಂಬ ಅನಿಸಿಕೆ ಪ್ರಾಮಾಣಿಕ ಕಾರ್ಯಕರ್ತರಲ್ಲೂ ಇದೆ.

ಇದಕ್ಕೆ ಕಾರಣ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಿಂತ ಹೆಚ್ಚಾಗಿ ಮೈತ್ರಿ ನಾಯಕರ ಬೇಜವಾಬ್ದಾರಿಯೇ ಆಗಿದೆ. ಬಿಜೆಪಿಯಂತಹ ಪಕ್ಷವು ದೇಶದಲ್ಲೂ, ರಾಜ್ಯದಲ್ಲೂ ಅಧಿಕಾರ ಹಿಡಿಯುವುದರ ಅಪಾಯದ ಅರಿವು ಈ ಪಕ್ಷಗಳಿಗಿರುವ ಯಾವುದೇ ಲಕ್ಷಣ ತೋರುತ್ತಿಲ್ಲ. ಸಮಾಜದಲ್ಲಿ ಕೋಮುವಾದಿ ಶಕ್ತಿಗಳು ಬೆಳೆಯುತ್ತಿರುವಾಗ, ಸರ್ಕಾರದಲ್ಲಾದರೂ ಆ ಶಕ್ತಿಗಳು ಇಲ್ಲದಿದ್ದರೆ ಒಂದು ಮಟ್ಟಿಗಿನ ತಡೆ ಇರುತ್ತದೆ; ಇಲ್ಲದಿದ್ದರೆ ಸಾಂವಿಧಾನಿಕ ಸಂಸ್ಥೆಗಳೂ ದುರ್ಬಲಗೊಂಡು ಬಿಡುತ್ತವೆ. ಬಹುಶಃ ಕರ್ನಾಟಕವು ಅಂತಹ ದುರಂತದ ಸ್ಥಿತಿಗೆ ಪ್ರವೇಶ ಪಡೆಯುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...