Homeನಿಜವೋ ಸುಳ್ಳೋನಾನೇ ಒಂದು ಜುಮ್ಲಾ : ಗೋಡ್ಸೆ ಜೊತೆ ಒಂದು ಕಾಲ್ಪನಿಕ ಸಂದರ್ಶನ

ನಾನೇ ಒಂದು ಜುಮ್ಲಾ : ಗೋಡ್ಸೆ ಜೊತೆ ಒಂದು ಕಾಲ್ಪನಿಕ ಸಂದರ್ಶನ

- Advertisement -
- Advertisement -

ಸ್ವಾತಂತ್ರ್ಯ ಚಳವಳಿಯ ನೇತಾರ ಮಹಾತ್ಮ ಗಾಂಧಿಯವರನ್ನು ಕೊಂದ ದೇಶದ ಮೊದಲ ಭಯೋತ್ಪಾದಕ ನಾಥುರಾಮ್ ಗೋಡ್ಸೆಯನ್ನು ಗಲ್ಲಿಗೇರಿಸಿದ ದಿನ ಇಂದು. ಜೆ.ಎನ್.ಯು.ಎಸ್.ಯು ಮಾಜಿ ಅಧ್ಯಕ್ಷರಾದ ಲೋಕೇಶ್ ಮಾಲ್ತಿ ಪ್ರಕಾಶ್ ರವರು ಗೋಡ್ಸೆಯೊಂದಿಗೆ ಒಂದು ಕಾಲ್ಪನಿಕ ಸಂದರ್ಶನ ನಡೆಸಿದ್ದಾರೆ. 

ಭಾರತದಲ್ಲಿ 2014ರಿಂದ ದೇಶಭಕ್ತ ಸರ್ಕಾರ ಬಂದ ಮೇಲೆ, ತಾನು ಮತ್ತು ತನ್ನ ಸಾಹಸಗಳ ಬಗ್ಗೆ ಭಾರತದಲ್ಲಿ ಹೊಸ ಆಸಕ್ತಿ ಹುಟ್ಟಿದೆ ಎಂಬ ಸುದ್ದಿ ಕಳೆದೆರಡು ವರ್ಷಗಳ ಹಿಂದೆ ನಾಥುರಾಮ್ ಗೋಡ್ಸೆಯನ್ನು ತಲುಪಿತು. ಉಲ್ಲಸಿತನಾದ ಗೋಡ್ಸೆ ಭೂಮಿಗೆ ತಲುಪಲು ಟ್ರಾವೆಲ್ ವೀಸಾಕ್ಕೆ ಅರ್ಜಿ ಹಾಕಿದ. ಆದರೆ ಒಪ್ಪಿಗೆ ಪಡೆಯಲು ಹಲವಾರು ಅಡೆತಡೆ ಎದುರಾದವು. ಅದ್ಹೇಗೋ ಅಧಿಕಾರಿಗಳ ‘ರೆಡ್‍ಟೇಪ್’ ಬಾಹು ಯಮಲೋಕಕ್ಕೂ ಚಾಚಿತು.

ಕೈ ಬೆಚ್ಚಗಿಲ್ಲದೇ ಈ ಬಾಬುಗಳು ಗೋಡ್ಸೆ ಫೈಲನ್ನು ಮುಂದಕ್ಕೆ ಹೋಗಲು ಬಿಡಲೇ ಇಲ್ಲ. ಆದರೂ ಅದ್ಹೇಗೋ ಸ್ವಲ್ಪ ಮುಂದಕ್ಕೆ ಚಲಿಸಿದಾಗ ದುಷ್ಟ ಕಾಂಗ್ರೆಸ್ ಉನ್ನತ ಅಧಿಕಾರಿಗೆ ಈ ಗೋಡ್ಸೆ ಭೂಮಿಗೆ ಬರುವುದು ಇಷ್ಟವಾಗಲಿಲ್ಲ. ಗೋಡ್ಸೆ ಸ್ವರ್ಗ ಮತ್ತು ಭೂಮಿಯಲ್ಲಿರುವ ಕೆಲವು ಎಳೆಗಳನ್ನು ಎಳೆದ. ಅಂತಿಮವಾಗಿ ಭೂಮಿಯ ಮೇಲಿನ ಭಯಂಕರ ಹೆಣ್ಣುಮಗಳೊಬ್ಬಳು ಶಾಪ ಕೊಟ್ಟ ಪರಿಣಾಮವಾಗಿ ಆ ಉನ್ನತ ಅಧಿಕಾರಿ ಅಲ್ಲಿಂದ ವರ್ಗಾವಣೆಗೊಂಡ! ಹಾಂ, ಗೋಡ್ಸೆಗೆ ಭಾರತಕ್ಕೆ ಟ್ರಾವೆಲ್ ವೀಸಾ ಸಿಕ್ಕೇ ಬಿಡ್ತು. ಗೋಡ್ಸೆ ಕೇದಾರನಾಥದ ಗುಹೆಯೊಂದರಲ್ಲಿ ‘ಸಮಾಧಿ’ ಸ್ಥಿತಿಗೆ ತೆರಳುವ ಮುನ್ನ ನನಗೆ ಆತನ ಸಂದರ್ಶನ ಮಾಡುವ ಅವಕಾಶ ಸಿಕ್ಕಿತು. ಆ ಸಂದರ್ಶನದ ಕೆಲವು ತುಣುಕುಗಳು ನಿಮಗಾಗಿ:

ಪ್ರಶ್ನೆ: ಮಿ. ಗೋಡ್ಸೆ, ಹಲವಾರು ದಶಕಗಳ ನಂತರ ಮತ್ತೆ ಹೆಡ್‍ಲೈನಿನಲ್ಲಿರುವುದು ಹೇಗನಿಸುತ್ತೆ?
ಗೋಡ್ಸೆ: ಸೂಪರ್, ಗ್ರೇಟ್! ಇಂತಹ ಒಂದು ಅವಕಾಶ ಮಾಡಿಕೊಟ್ಟ ಸಾಧ್ವಿಗೆ ಥ್ಯಾಂಕ್ಸ್ ಹೇಳ ಬಯಸುತ್ತೇನೆ. ದೇಶಭಕ್ತರು ಅಧಿಕಾರಕ್ಕೆ ಬಂದಾಗಿನಿಂದ ನನಗೊಂದು ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ಭರವಸೆಯಲ್ಲಿದ್ದೆ. ನಿಮಗೆ ಗೊತ್ತಾ, ಭೂಮಿಯ ಮೇಲೆ ನಿನಗಿಂತ ನನಗೆ ಹೆಚ್ಚು ಭಕ್ತರಿದ್ದಾರೆ ಎಂದು ನಾನು ಹಿಟ್ಲರ್‍ಗೇ ಚಾಲೆಂಜ್ ಮಾಡಿ ಬಂದಿದ್ದೇನೆ. ಅವನು ಇದರಲ್ಲಿ ಸೋತರೆ, ಗೋಮೂತ್ರ ಕುಡಿಯಲೇಬೇಕು. ಗೋಮೂತ್ರವಷ್ಟೇ ನಿನ್ನನ್ನು ನಿಜವಾದ ಆರ್ಯನನ್ನಾಗಿ ಮಾಡಬಲ್ಲದು ಎಂದು ಅವನಿಗೆ ಹೇಳಿದ್ದೇನೆ ಕೂಡ…

ಪ್ರ: ಆದರೆ, ಪ್ರಧಾನಿ ತಮಗೆ ಅಸಂತೋಷವಾಗಿದೆ ಎಂದಿದ್ದಾರೆ, ಅವರು ತಮ್ಮ ಹೃದಯದಿಂದ ಸಾದ್ವಿಯನ್ನು ಕ್ಷಮಿಸಲ್ಲವಂತೆ..
ಗೋಡ್ಸೆ: ಅವರು ಪಿಎಂ. ಅವರು ಬಹಳಷ್ಟು ಜನರನ್ನು ಓಲೈಸಬೇಕಾಗುತ್ತೆ. ಅದು ಡೆಮಾಕ್ರಸಿಯ ಧ್ವನಿ… ನೀವು ಎಲ್ಲರನ್ನು ಸಂತುಷ್ಟಗೊಳಿಸಬೇಕಾಗುತ್ತೆ.

ಪ್ರಶ್ನೆ: ಸಾಧ್ವಿಯನ್ನು ಎಂದೂ ಕ್ಷಮಿಸಲ್ಲ ಅಂದಿದ್ದಾರೆ ಅಂದಮೇಲೆ, ಸಾಧ್ವಿ ಏನೋ ಘನಘೋರ ತಪ್ಪು ಮಾಡಿರಬೇಕಲ್ಲ?
ಗೋಡ್ಸೆ: ಇದು ಎಲೆಕ್ಷನ್ ಟೈಮ್. ಎಲೆಕ್ಷನ್ ಟೈಮ್ ಅಂದರೆ ‘ಜುಮ್ಲಾ ಟೈಮ್’…

ಪ್ರಶ್ನೆ: ಅಂದ್ರೆ ಪಿಎಂ ಸುಮ್ಮನೇ ಒಂದು ‘ಜುಮ್ಲಾ’ ಹೊಡೀತಿದ್ದಾರೆ ವಿನಹ ಸತ್ಯವನ್ನಲ್ಲ?
ಗೋಡ್ಸೆ: ಜನರನ್ನು ಇದು ಸತ್ಯ ಅಂತಾ ನಂಬಿಸ್ತೀವಲ್ಲ, ಅದೇ ಸತ್ಯ…

ಪ್ರಶ್ನೆ: ಕೆಲವು ಜನ ಹೇಳ್ತಾರೆ, ನೀನು ದೇಶಭಕ್ತ ಅಂತಾ. ಅದು ಜುಮ್ಲಾನಾ, ಸತ್ಯವಾ?
ಗೋಡ್ಸೆ: ಅದು ವೀಕ್ಷಕನ (ಅಬ್ಸರ್ವರ್) ಮೇಲೆ ಅವಲಂಬಿತ…

ಪ್ರಶ್ನೆ: ಅಂದರೆ ಹಾಗೇ ಹೇಳತಿರೋ ವ್ಯಕ್ತಿ ಮೇಲಲ್ಲ…
ಗೋಡ್ಸೆ: ಅದು ಆತನ ಪಾಲಿಗೆ ಜುಮ್ಲಾ. ಆತನಿಗೆ ಗೊತ್ತು ತಾನೊಂದು ಜುಮ್ಲಾ ಹೊಡಿತಿದ್ದೀನಿ ಅಂತಾ. ಆದರೆ ಅದನ್ನು ಸತ್ಯ ಅಂತಾ ಸ್ವೀಕರಿಸ್ತಾರೆ ಅಂತಾನೂ ಆತನಿಗೆ ಗೊತ್ತಿರುತ್ತೆ. ಅದೇ ಜುಮ್ಲಾದ ಶಕ್ತಿ. ಅದು ಪಿಎಂ ತಮ್ಮ ಹೃದಯದಿಂದ ( ಅದಕ್ಕೂ ಹೃದಯ ಬೇಕು) ಯಾರನ್ನೋ ಕ್ಷಮಿಸುತ್ತಿದ್ದಾರೆ ಅನ್ನೋ ಬಿಂಬವೂ ಹೌದು, ಪಿಎಂ ತನ್ನ ಹೃದಯದಿಂದ ಕ್ಷಮಿಸಲ್ಲ ಅನ್ನುವ ಸತ್ಯವೂ ಹೌದು…

ಪ್ರಶ್ನೆ: ನಿನ್ನ ಬಗ್ಗೆ ನಿನಗೆ ಏನು ಅನಿಸುತ್ತೆ? ನೀನು ದೇಶಭಕ್ತನಾ?
ಗೋಡ್ಸೆ: ನಾನೊಬ್ಬ ಜುಮ್ಲಾ, ನಾನೊಂದು ಜುಮ್ಲಾ…

ಪ್ರಶ್ನೆ: ಅಂದರೆ ಇದೆಲ್ಲ ಒಂದು ಸುಳ್ಳಿನ ಕಂತೆ?
ಗೋಡ್ಸೆ: ಅದು ಸುಳ್ಳಿನ ಕಂತೆಯಲ್ಲ, ಅದು ‘ಫೀಲ್ ಗುಡ್’ ಭಾವ.. ಜುಮ್ಲಾದಿಂದ ನಿನಗೆ ಒಂದು ಆಹ್ಲಾದಕರ ಭಾವ ಆವರಿಸುತ್ತೆ, ಅದೇ ಜುಮ್ಲಾದ ಉದ್ದೇಶವೂ ಕೂಡ. ಅಚ್ಛೇ ದಿನ್ ಅಂದರೆ ಅದೇ…ಪಕೋಡಾ ಮಾರ್ತಾ ಮಾರ್ತಾ, ಗಾಡಿ ತೊಳಿತಾ ತೊಳಿತಾ ಅಥವಾ ಚಾ ಮಾರ್ತಾ ಮಾರ್ತಾ ನಿನಗೆ ‘ಫೀಲ್ ಗುಡ್’ ಎಂಬ ಸಂತೋಷದ ಭಾವ ಉಂಟಾಗುತ್ತೆ. ಕೊಲ್ಲೋ ಮೂಲಕವೂ ನೀನು ‘ಫೀಲ್‍ಗುಡ್’ ಆನಂದ ಪಡಿಬಹುದು. ಒಳ್ಳೆಯ ಭಾವನೆಗಳಿಗಿಂತ ಈ ‘ಫಿಲ್‍ಗುಡ್’ನ ಸೆನ್ಸೆಷನ್ ಇದೆಯಲ್ಲ, ಇದು ಬಹಳ ಬಹಳ ದೊಡ್ಡದು. ನಾನಿಲ್ಲಿ ಶಬ್ದಗಳ ಆಟ ಆಡ್ತಿಲ್ಲ. ಭಾರತೀಯ ಫಿಲಾಸಫಿಯಲ್ಲಿ ಎಲ್ಲವೂ ಮಾಯೆಯೇ. ಅದರರ್ಥ ಇಡೀ ವಿಶ್ವವೇ ಒಂದು ನಹಾನ್ ಜುಮ್ಲಾ. ನೀನು ಈಗಾಗಲೇ ಜುಮ್ಲಾಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದೀಯಾ. ಒಂದಿಷ್ಟು ಜುಮ್ಲಾ ಸೇರಿಸಿದ್ದಕ್ಕೆ ನನ್ನನ್ನು ಏಕೆ ದೂಷಣೆ ಮಾಡ್ತೀಯಾ? ಒಂದೇ ದಾರಿ ಅಂದರೆ ನ್ಯಾಯ ಪಡೆಯುವುದಲ್ಲ ಮುಕ್ತಿ ಪಡೆಯುವುದು. ಅದೊಂದು ಮರೀಚಿಕೆ.

ಪ್ರಶ್ನೆ: ಜನರಿಗೆ ಮೋಕ್ಷಕ್ಕಿಂತ ನ್ಯಾಯದ ಅಗತ್ಯ ಬಹಳ ಇದೆಯಲ್ಲ?
ಗೋಡ್ಸೆ: ಜನರಿಗೆ ತಮಗೇನೂ ಬೇಕಂತನೇ ಗೊತ್ತಿಲ್ಲ. ನನಗೆ ಜುಮ್ಲಾಗಳೇ ಬೇಕು ಅಂತಾ ಯಾವನಾದರೂ ಹೇಳಿದ್ದಾನಾ? ಇಲ್ಲ, ಆದರೆ ದೇಶಭಕ್ತ ಪಾರ್ಟಿಗೆ ಗೊತ್ತು, ಎಲ್ಲರಿಗೂ ಜುಮ್ಲಾ ಬೇಕು ಅಂತಾ. ಅದಕ್ಕೇ ಅವರು ಯಥೇಚ್ಛವಾಗಿ ಜುಮ್ಲಾಗಳನ್ನು ಒದಗಿಸ್ತಾ ಇದ್ದಾರೆ…7 ದಶಕಗಳಿಂದ ಜಾತ್ಯತೀತ ಸರ್ಕಾರಗಳು ಜನರನ್ನು ಈ ಹಸಿವಿನಿಂದ ಕಾಡಿದವು. ದೇಶಭಕ್ತ ಸರ್ಕಾರವು ಅವರ ಖಾಲಿ ಹೊಟ್ಟಗಳನ್ನು ಜುಮ್ಲಾಗಳಿಂದ ಭರ್ತಿ ಮಾಡಿತು.

ಪ್ರಶ್ನೆ: ನೀನು ಅಲ್ಲಿ ಮೇಲೆ ಮೋಡಗಳಲ್ಲಿ ಇರ್ತೀಯಾ. ಯಾವುದಾದರೂ ಸ್ಯಾಟ್‍ಲೈಟ್ ನಿನ್ನ ಇರುವಿಕೆಯನ್ನ ಪತ್ತೆ ಮಾಡಿದೆಯಾ?
ಗೋಡ್ಸೆ: ಇಲ್ಲವೇ ಇಲ್ಲ, ಸಾಧ್ಯಾನೇ ಇಲ್ಲ. ಮೋಡಗಳಲ್ಲಿ ಬದುಕುವುದರ ಅನುಕೂಲ ಅಂದ್ರೆನೇ ಅದು. ಸ್ಯಾಟ್‍ಲೈಟ್ಸ್ ಮತ್ತು ರೆಡಾರ್‍ಗಳು ಎಂದೂ ನಿನ್ನ ಪತ್ತೆ ಹಚ್ಚಕಾಗಲ್ಲ. ಅದಕ್ಕೇ ಟ್ರಂಪ್‍ಗೆ ಆಕಾಶದಲ್ಲಿ ನನ್ನ ಚಲನವಲನ ಗೊತ್ತಾಗದ ರೀತಿಯಲ್ಲಿ ನಾನು ಭಾರತದಲ್ಲಿ ಬಂದಿಳಿದೆ.
ಇದರ ನಂತರ ಗೋಡ್ಸೆ ತನ್ನ ‘ಸಮಾಧಿ’ಯತ್ತ ಹೊರಟ…


ಇದನ್ನೂ ಓದಿ: ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಗೋಡ್ಸೆ ಅವರನ್ನ ಭಯೋತ್ಪಾದಕ ಅಂತ ಕರೆಯುವುದಾದರೆ ,ಭಗತ್ ಸಿಂಗ್ ಅವರನ್ನು ನೇಣು ಕುಣಿಕೆ ತಪ್ಪಿಸಲು ಆಗದವರನ್ನ ,ಸುಭಾಷ್ ಚಂದ್ರಭೋಸ್ ಅವರ ಮೇಲೆ ಗೂಢಾಚಾರಿಕೆ ಮಾಡಲು ನೆರವಾದ ಸೋಕಾಲ್ಡ್ ಒಂದು ಕುಟುಂಬ ರಾಜಕಾರಣದ ಪರಿವಾರದವರನ್ನ ,ಚೀನಾದೊಂದಿಗೆ ಹಿಂದಿನಿಂದಲೂ ಸಹಾಯ ಪಡೆಯುತ್ತಿರುವ ಈಗಲೂ ನೆರವು ಪಡೆದು ಚೀನಾದ ಪರ ನಿಲ್ಲೋ ಭಾರತದ ಕಮ್ಯೂನಿಸ್ಟ್ ರನ್ನ ಯಾವ ಭಯೋತ್ಪಾದನೆ ಯವರು ಎಂದು ಕರೆಯಬಹುದು.

LEAVE A REPLY

Please enter your comment!
Please enter your name here

- Advertisment -

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...