Homeಕರ್ನಾಟಕಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಲಿ: ನೆಟ್ಟಿಗರಿಂದ ಸ್ವಾರಸ್ಯಕರ ಮತ್ತು ಮಹತ್ವದ ಚರ್ಚೆ

ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಲಿ: ನೆಟ್ಟಿಗರಿಂದ ಸ್ವಾರಸ್ಯಕರ ಮತ್ತು ಮಹತ್ವದ ಚರ್ಚೆ

- Advertisement -
- Advertisement -

ಇಂದು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಟ್ವಿಟ್ಟರ್ ಟ್ರೆಂಡಿಂಗ್ #KarnatakaJobsForKannadigas ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವರು ಚರ್ಚಿಸಿದ್ದರು. ಬಹುತೇಕರು ಅದನ್ನು ಬೆಂಬಲಿಸಿದ್ದರೂ, ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳಿದ್ದಾರೆ. ಕೆಲವರು ಇದು ಪ್ರಾಕ್ಟಿಕಲ್ ಅಲ್ಲ ಎಂದಿದ್ದಾರೆ. ಕನ್ನಡಿಗರಿಗೆ ಉದ್ಯೋಗ ನಷ್ಟ ಆಗುತ್ತಿರುವುದು ಎಲ್ಲಿ ಎಂಬ ಕುರಿತು ಉದಾಹರಣೆಗಳ ಮೂಲಕ ಚರ್ಚೆ ನಡೆದಿದೆ.

ಪತ್ರಕರ್ತರಾದ ನವೀನ್ ಸೂರಿಂಜೆ ಈ ರೀತಿ ಹೇಳುತ್ತಾರೆ.

ಕರಾವಳಿಯಲ್ಲಿ ಸ್ಥಾಪನೆಯಾದ ವಿಜಯಾ ಬ್ಯಾಂಕನ್ನು ಇನ್ನಿಲ್ಲದಂತೆ ಮಾಡಿದ ಬ್ಯಾಂಕ್ ವಿಲೀನ‌ ಪ್ರಕ್ರಿಯೆಯ ವಿರುದ್ದ ಮಾಡಿದ ಹೋರಾಟವೇನೋ ವ್ಯರ್ಥವಾಯ್ತು. ವಿಜಯಾ ಬ್ಯಾಂಕ್ ಇದ್ದಾಗಲೇ ಸ್ವಲ್ಪಅಸ್ಥೆ ವಹಿಸಿದ್ದರೆ ಬ್ಯಾಂಕ್ ಉಳಿಯುತ್ತಿತ್ತೇನೋ ! ಮೂಲ್ಕಿ ಸುಂದರರಾಮ ಶೆಟ್ಟರಿಂದ ವೈಭವದ ದಿನಗಳನ್ನು ಕಂಡ ವಿಜಯಾ ಬ್ಯಾಂಕಿನಲ್ಲಿ ಎಷ್ಟೊಂದು ಜನ ಪರಿಚಿತರು ಇದ್ದರು. ಮೂಲ್ಕಿಯವರೇಆಗಿದ್ದಕ್ಕೋ ಏನೋ… ನನ್ನಪ್ಪನ ಗೆಳೆಯರಲ್ಲಿ ಬಹುತೇಕರು ವಿಜಯಾ ಬ್ಯಾಂಕ್ ಸಿಬ್ಬಂದಿಗಳು. ನನ್ನ ತಲೆಮಾರಿನ ಯಾರೂ ಕೂಡಾ ನಾನು ವಿಜಯಾ ಬ್ಯಾಂಕ್ ಉದ್ಯೋಗಿ ಎಂದು ಹೇಳಿಕೊಂಡಿದ್ದನ್ನು ನಾನುಕೇಳಿಲ್ಲ. ಆಗಲೇ ನಮಗೆ ಅಪಾಯ ಅರಿವಾಗಬೇಕಿತ್ತು.
ನನ್ನೂರಲ್ಲಿ ಹುಟ್ಟಿದ ಬ್ಯಾಂಕ್ ನಲ್ಲಿ ನನ್ನೂರಿನ ಯುವಕರಿಗೆ ಕೆಲಸ ವಂಚಿಸಿ, ಪರ ಬಾಷಿಕರಿಗೆ ಉದ್ಯೋಗ ನೀಡಿದಾಗಲೇ ವಿಜಯಾ ಬ್ಯಾಂಕ್ ಅವನತಿ ಪರ್ವ ಪ್ರಾರಂಭವಾಗಿತ್ತು. ಇವತ್ತು ವಿಜಯಾ ಬ್ಯಾಂಕ್ಉದ್ಯೋಗಿಗಳೆಲ್ಲರೂ ಕನ್ನಡಿಗರಾಗಿದ್ದರೆ ವಿಲೀನ ಪ್ರಕ್ರಿಯೆಗೆ ಉದ್ಯೋಗಿಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು ?
ವಿಜಯಾ ಬ್ಯಾಂಕನ್ನೇನೋ ಕಳೆದುಕೊಂಡೆವು. ಕನ್ನಡಿಗರ ಉಳಿದ ಬ್ಯಾಂಕುಗಳನ್ನಾದರೂ ರಕ್ಷಿಸಬೇಕಿದೆ. ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಪ್ರಾತಿನಿದ್ಯ ಸಿಗಬೇಕಿದೆ. ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆಗೆಅವಕಾಶ ನೀಡಬೇಕಿದೆ.
ಸದ್ಯ, ಕನ್ನಡಿಗರೆಲ್ಲರೂ ಕರ್ನಾಟಕ ರಣಧೀರ ಪಡೆ ಹಮ್ಮಿಕೊಂಡಿರುವ ಕನ್ನಡಿಗರಿಗೆ ಉದ್ಯೋಗ ಚಳುವಳಿಯಲ್ಲಿ ಭಾಗಿಯಾಗಬೇಕಿದೆ.

ಎಂ.ಎಸ್.ಶ್ರೀ ಹರ್ಷ ಎನ್ನುವವರು ಇದಕ್ಕೆ ಸಹಮತ ಹೊಂದಿಲ್ಲ.

ಇದು ಪ್ರಾಕ್ಟಿಕಲ್ ಅಲ್ಲ. ಅಭಿವೃದ್ಧಿ ಆದ ಕಡೆ ವಲಸೆ ಆಗಿಯೇ ಆಗುತ್ತದೆ. ಇಂತಹ ಹೋರಾಟಗಳಿಂದ ಏನೂ ಪ್ರಯೋಜನವಿಲ್ಲ. ನನ್ನ ಮಾತಿನಲ್ಲಿ ನಂಬುಗೆ ಇಲ್ಲದಿದ್ದರೆ ಪ್ರಯತ್ನ ಮಾಡಿ ನೋಡಿ.

#ಅಭಿವೃದ್ಧಿ ಯ ವಿರುದ್ಧ ದನಿ ಎತ್ತದ ಇಂತಹ ಹೋರಾಟಗಳು ಕ್ಷಣಿಕ ಆರಾಮು ನೀಡುವ ಪೇನ್ ಕಿಲ್ಲರ್ ಗಳು ಅಷ್ಟೆ.

This is an #impractical movement ..

 

ಮಂಗಳೂರಿನ ಹೋರಾಟಗಾರ ಮುನೀರ್ ಕಾಟಿಪಳ್ಳ ಇದನ್ನು ಬೆಂಬಲಿಸುತ್ತಾರಾದರೂ, ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳುತ್ತಾರೆ.

ಉದ್ಯೋಗ ಸೃಷ್ಟಿಯ ಆಮಿಷವನ್ನು ಒಡ್ಡಿ ತುಳುನಾಡಿನ ಚಿನ್ನದಂತಹ ಭೂಮಿ, ನೇತ್ರಾವತಿಯ ಅಮೃತದಂತಹ ನೀರನ್ನು ಪಡೆದು ಸ್ಥಾಪನೆಯಾದ mrpl ಉದ್ಯೋಗ ಸೃಷ್ಟಿಸಿದ್ದು ಅಷ್ಟರಲ್ಲೇ ಇದೆ. ನಾಲ್ಕುಸಾವಿರ ಎಕರೆ ಭೂಮಿ, ಲಕ್ಷಾಂತರ ಕೋಟಿ ಹಣ ಹೂಡಿಯೂ ಸೃಷ್ಟಿಯಾಗಿರುವ ಉದ್ಯೋಗ ಎರಡು ಸಾವಿರಕ್ಕೂ ಕಡಿಮೆ. ಆ ಎರಡು ಸಾವಿರದಲ್ಲಿ ಕನ್ನಡಿಗರ ಸಂಖ್ಯೆ ಶೇಕಡಾ 25 ರಷ್ಟೂ ಇಲ್ಲ. ತುಳುವರನ್ನುಹುಡುಕಬೇಕಷ್ಟೆ. ಉದ್ಯೋಗ ಸಿಕ್ಕವರಲ್ಲಿ ಬಹುತೇಕರು ಭೂಮಿ ಕೊಟ್ಟ ಕಾರಣಕ್ಕೆ ಪ್ರತಿಯಾಗಿ ಪಡೆದುಕೊಂಡದ್ದೇ ಹೆಚ್ಚು. ಅಂತಹ mrpl ತಿಂಗಳ ಹಿಂದೆ 150 ಅಪ್ರೆಂಟಿಸ್ ಗಳನ್ನು ನೇಮಕಾತಿಮಾಡಿಕೊಂಡಿತು. ಆ 150 ರಲ್ಲಿ ತುಳುವರು ಬಿಡಿ, ಕನ್ನಡಿಗರು ಒಬ್ಬರೂ ಇಲ್ಲವಂತೆ. ಇದು ಅತ್ಯಂತ ಕಳವಳಕಾರಿ ಸಂಗತಿ.

ಈ ಅನ್ಯಾಯ, ತಾರತಮ್ಯ ಕೊನೆಯಾಗಲೇ ಬೇಕು. ನಮ್ಮ ನೆಲ, ಜಲವನ್ನು ಬಳಸಿ ಸ್ಥಾಪನೆಯಾಗುವ ಕೈಗಾರಿಕೆ, ಉದ್ದಿಮೆ, ವ್ಯವಹಾರಗಳು ಉದ್ಯೋಗವನ್ನು ಸೃಷ್ಟಿಸಬೇಕು, ಸ್ಥಳೀಯರಿಗೆ ಅದರಲ್ಲಿಆದ್ಯತೆಯಲ್ಲಿ ಉದ್ಯೋಗ ಸಿಗಲೇಬೇಕು. ಅದಿಲ್ಲದಿದ್ದರೆ ಎದ್ದು ಹೊರ ನಡೆಯಿರಿ ಅನ್ನಬೇಕು.

(ಕರ್ನಾಟಕ ರಣಧೀರ ಪಡೆ ಹಮ್ಮಿಕೊಂಡಿರುವ ಕನ್ನಡಿಗರಿಗೆ ಉದ್ಯೋಗ ಕೊಡಿ ಟ್ವಿಟ್ಟರ್, ಫೇಸ್ ಬುಕ್ ಅಭಿಯಾನಕ್ಕೆ ನನ್ನ ಬೆಂಬಲ ಇದೆ. ಆದರೆ ಇದು ಅಂದಾಭಿಮಾನವೋ, ಪರ ರಾಜ್ಯದವರ ಕುರಿತುಅಸಹನೆಯೋ ಆಗಬಾರದು. ಹೊರ ರಾಜ್ಯದವರೂ ಇರಲಿ. ಕನ್ನಡಿಗರಿಗೆ, ಸ್ಥಳೀಯರಿಗೆ ಆದ್ಯತೆಯಲ್ಲಿ ಅವಕಾಶ ಸಿಗಲಿ ಎಂಬುದು ನನ್ನ ನಿಲುವು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಇಡೀದೇಶದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಸರಕಾರದ ಆದ್ಯತೆ ಆಗಬೇಕು. ಗುತ್ತಿಗೆ, ಹೊರಗುತ್ತಿಗೆ ಪದ್ದತಿ ರದ್ದಾಗಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆಯ ಕಾನೂನುಗಳುಜಾರಿಯಾಗಬೇಕು. ಒಟ್ಟಾರೆ ಹೋರಾಟ ನಿರುದ್ಯೋಗ, ಅರೆ ಉದ್ಯೋಗದ ವಿರುದ್ದ, ಸ್ಥಳೀಯರಿಗೆ ಆದ್ಯತೆ ಎಂದಾಗಬೇಕು)

#ಕರ್ನಾಟಕದ_ಉದ್ಯೋಗ_ಕನ್ನಡಿಗರಿಗೆ_ಸಿಗಲಿ
#karnatakaJobsForKannadigas

 

ಪ್ರದೀಪ್ ತೊರೆನೂರು ಎನ್ನುವವರೂ ಸಹಾ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಬೆಂಗ್ಳೂರಿನಲ್ಲಿ ಒಂದು ಸುತ್ತು ತಿರುಗಾಡುತ್ತಾ ನೋಡಿದರೆ ಹಲವಾರು ಉದ್ಯಮಗಳು ಹಾಗೂ ಕೆಲಸ ಮಾಡುವ ಜನ ಕನ್ನಡೇತರರು ಕಾಣಿಸುತ್ತಾರೆ … ಮತ್ತೊಂದೆಡೆ ಹಲವಾರು ಕನ್ನಡಿಗರು ಕೆಲಸ ಸಿಗದೆ ಒದ್ದಾಡುತ್ತಿದ್ದಾರೆ …

ಸ್ವತಂತ್ರ ನಂತರ ಕೇವಲ ಕೇಂದ್ರ ಸರ್ಕಾರ ಕಚೇರಿ ಹೆಚ್ ಎ ಎಲ್ , ಬೆಮ್‌ಲ್ , ಮುಂತಾದ ಕಡೆ ತಮ್ಮ ಬೇರು ಗಟ್ಟಿ ಮಾಡಿಕೊಂಡು ಅನ್ಯ ಭಾಷಿಕರು ಕರ್ನಾಟಕದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು , ಅದುಕ್ರಮೇಣ ಮಾಹಿತಿ ತಂತ್ರಜಾನ ಕಾರ್ಖಾನೆಗಳಲ್ಲಿ ಅನ್ಯ ರಾಜ್ಯದವರು ತಮ್ಮ ಹಿಡಿತ ಇಟ್ಟುಕೊಂಡು ಕನ್ನಡಿಗರು ಏನೇ ಓದಿ , ಒಳ್ಳೆಯ ಅನುಭವ ಇದ್ದರೂ ಅವರನ್ನು ಕಡೆಗಣಿಸಿದರು ..

ಈ ದೊಡ್ಡ ಮಟ್ಟದ ಕಾರ್ಖನಗಳಲ್ಲಿ ಇದ್ದ ಅನ್ಯ ಭಾಷಿಕರ ಜನ ಇವತ್ತು ನನಗೆ ಆಟೋ ಗಳಲ್ಲಿ , ಮಾಲ್ ಗಳಲ್ಲಿ , ಚಿಕ್ಕ ಚಿಕ್ಕ ಉದ್ಯಮಗಳಲ್ಲಿ ನಿಧಾನವಾಗಿ ತಮ್ಮ ಬೇರು ಗಟ್ಟಿ ಮಾಡಿಕೊಳ್ಳುತಿರುವುದುಕನ್ನಡಿಗರಿಗೆ ಮುಂದಿನ ದಿನಗಳಲ್ಲಿ ಕೆಲಸ ಸಿಗುವ ಅವಕಾಶಗಳು ಕಡಿಮೆಯಾಗಳಿದ್ದು, ಬೆಂಗಳೂರು ನಿಧಾನವಾಗಿ ಅನ್ಯ ರಾಜ್ಯದವರ ತೆಕ್ಕೆಗೆ ಬೀಳುವುದು ಶತ ಸಿದ್ದ !

ಮೊದಲನೆಯದಾಗಿ ಕರ್ನಾಟಕ ಸರ್ಕಾರ ರಾಜ್ಯದ ಒಟ್ಟೂ ನಿರುದ್ಯೋಗಿಗಳ ಅಂಕಿ ಅಂಶ ಬಗ್ಗೆ ಜನರಿಗೆ ತಿಳಿಸಬೇಕು ! ಪ್ರತಿಯೊಂದು ಉದ್ಯಮದಲ್ಲಿ ಸ್ಥಳೀಯರು ಇರುವ ಅಂಕಿ ಅಂಶ ಬಯಲಾಗಬೇಕು ! ಇಂದು ಕಸದ ಕಾಂಟ್ರ್ಯಾಕ್ಟ್ ಗಳಿಂದ ಯಾವ ಯಾವ ಕಾಂಟ್ರ್ಯಾಕ್ಟ್ ಗಳು ಕನ್ನಡಿಗರಿಗೆ ಸಿಕ್ಕಿದೆ , ಅನ್ಯ ಭಾಷಿಕರಿಗೆ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಕರ್ನಾಟಕ ಸರ್ಕಾರ ಬಹಿರಂಗ ಪಡಿಸಲಿ

ಇಲ್ಲಿ ಅನ್ಯಭಾಷಿಕರ ಸಂಖ್ಯೆ ಆಯಾ ರಾಜ್ಯದ ಆಧಾರದ ಮೇಲೆ ವಿಂಗಡಣೆಯಾಗಿ ಆಯಾ ರಾಜ್ಯದ ಉದ್ಯೋಗ ಸೃಷ್ಟಿಸುವಲ್ಲಿ ಆಯಾ ರಾಜ್ಯದ ವೈಪಲ್ಯ ಎತ್ತಿ ತೋರಿಸಬೇಕು !

#Nation_First ಎಂದರೆ ನಮ್ಮ ಕೆಲಸ ಉದ್ಯಮ ಹಾಗೂ ಸ್ವಾಭಿಮವನ್ನು ಅನ್ಯ ರಾಜ್ಯದವರಿಗೆ ಕೊಟ್ಟು ನಾವು ಬಿಕಾರಿ ಯಾಗುವುದಲ್ಲ , ನಾವು ನಮ್ಮ ಹಕ್ಕನ್ನು ಪಡೆದು , ಸ್ಥಳೀಯರಾಗಿ ಕೆಲಸ ಪಡೆದು ,ಒಳ್ಳೆಯ ವ್ಯಾಪಾರ ವಹಿವಾಟು ಮಾಡಿ ಭಾರತ ದೇಶದ ಅಭಿವೃದ್ದಿಗಾಗಿ ಶ್ರಮಿಸುವುದು !

ಸ್ಥಳೀಯರಿಗೆ ಕೆಲ್ಸ ಸಿಕ್ಕ ಮೆಳ್ಳೆ ಉಳಿದ ಕೆಲಸಗಳು ಅನ್ಯ ರಾಜ್ಯದವರು ಪಡೆಯಬಹುದು !

ಇದು ಆಗದೆ ಇದ್ದಲ್ಲಿ ಕನ್ನಡಿಗರು ತಮ್ಮದೇ ನಾಡಿನಲ್ಲಿ ಕೆಲಸ ಇಲ್ಲದೆ ಪರದಾಡುವ ದಿನ ಬರುವುದು ಶತಸಿದ್ದ !

#KarnatakaJobsForKannadigas
#ಕರ್ನಾಟಕದ_ಉದ್ಯೋಗ_ಕನ್ನಡಿಗರಿಗೇ_ಸಿಗಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...