Homeಕರ್ನಾಟಕಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಲಿ: ನೆಟ್ಟಿಗರಿಂದ ಸ್ವಾರಸ್ಯಕರ ಮತ್ತು ಮಹತ್ವದ ಚರ್ಚೆ

ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಲಿ: ನೆಟ್ಟಿಗರಿಂದ ಸ್ವಾರಸ್ಯಕರ ಮತ್ತು ಮಹತ್ವದ ಚರ್ಚೆ

- Advertisement -
- Advertisement -

ಇಂದು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಟ್ವಿಟ್ಟರ್ ಟ್ರೆಂಡಿಂಗ್ #KarnatakaJobsForKannadigas ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವರು ಚರ್ಚಿಸಿದ್ದರು. ಬಹುತೇಕರು ಅದನ್ನು ಬೆಂಬಲಿಸಿದ್ದರೂ, ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳಿದ್ದಾರೆ. ಕೆಲವರು ಇದು ಪ್ರಾಕ್ಟಿಕಲ್ ಅಲ್ಲ ಎಂದಿದ್ದಾರೆ. ಕನ್ನಡಿಗರಿಗೆ ಉದ್ಯೋಗ ನಷ್ಟ ಆಗುತ್ತಿರುವುದು ಎಲ್ಲಿ ಎಂಬ ಕುರಿತು ಉದಾಹರಣೆಗಳ ಮೂಲಕ ಚರ್ಚೆ ನಡೆದಿದೆ.

ಪತ್ರಕರ್ತರಾದ ನವೀನ್ ಸೂರಿಂಜೆ ಈ ರೀತಿ ಹೇಳುತ್ತಾರೆ.

ಕರಾವಳಿಯಲ್ಲಿ ಸ್ಥಾಪನೆಯಾದ ವಿಜಯಾ ಬ್ಯಾಂಕನ್ನು ಇನ್ನಿಲ್ಲದಂತೆ ಮಾಡಿದ ಬ್ಯಾಂಕ್ ವಿಲೀನ‌ ಪ್ರಕ್ರಿಯೆಯ ವಿರುದ್ದ ಮಾಡಿದ ಹೋರಾಟವೇನೋ ವ್ಯರ್ಥವಾಯ್ತು. ವಿಜಯಾ ಬ್ಯಾಂಕ್ ಇದ್ದಾಗಲೇ ಸ್ವಲ್ಪಅಸ್ಥೆ ವಹಿಸಿದ್ದರೆ ಬ್ಯಾಂಕ್ ಉಳಿಯುತ್ತಿತ್ತೇನೋ ! ಮೂಲ್ಕಿ ಸುಂದರರಾಮ ಶೆಟ್ಟರಿಂದ ವೈಭವದ ದಿನಗಳನ್ನು ಕಂಡ ವಿಜಯಾ ಬ್ಯಾಂಕಿನಲ್ಲಿ ಎಷ್ಟೊಂದು ಜನ ಪರಿಚಿತರು ಇದ್ದರು. ಮೂಲ್ಕಿಯವರೇಆಗಿದ್ದಕ್ಕೋ ಏನೋ… ನನ್ನಪ್ಪನ ಗೆಳೆಯರಲ್ಲಿ ಬಹುತೇಕರು ವಿಜಯಾ ಬ್ಯಾಂಕ್ ಸಿಬ್ಬಂದಿಗಳು. ನನ್ನ ತಲೆಮಾರಿನ ಯಾರೂ ಕೂಡಾ ನಾನು ವಿಜಯಾ ಬ್ಯಾಂಕ್ ಉದ್ಯೋಗಿ ಎಂದು ಹೇಳಿಕೊಂಡಿದ್ದನ್ನು ನಾನುಕೇಳಿಲ್ಲ. ಆಗಲೇ ನಮಗೆ ಅಪಾಯ ಅರಿವಾಗಬೇಕಿತ್ತು.
ನನ್ನೂರಲ್ಲಿ ಹುಟ್ಟಿದ ಬ್ಯಾಂಕ್ ನಲ್ಲಿ ನನ್ನೂರಿನ ಯುವಕರಿಗೆ ಕೆಲಸ ವಂಚಿಸಿ, ಪರ ಬಾಷಿಕರಿಗೆ ಉದ್ಯೋಗ ನೀಡಿದಾಗಲೇ ವಿಜಯಾ ಬ್ಯಾಂಕ್ ಅವನತಿ ಪರ್ವ ಪ್ರಾರಂಭವಾಗಿತ್ತು. ಇವತ್ತು ವಿಜಯಾ ಬ್ಯಾಂಕ್ಉದ್ಯೋಗಿಗಳೆಲ್ಲರೂ ಕನ್ನಡಿಗರಾಗಿದ್ದರೆ ವಿಲೀನ ಪ್ರಕ್ರಿಯೆಗೆ ಉದ್ಯೋಗಿಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು ?
ವಿಜಯಾ ಬ್ಯಾಂಕನ್ನೇನೋ ಕಳೆದುಕೊಂಡೆವು. ಕನ್ನಡಿಗರ ಉಳಿದ ಬ್ಯಾಂಕುಗಳನ್ನಾದರೂ ರಕ್ಷಿಸಬೇಕಿದೆ. ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಪ್ರಾತಿನಿದ್ಯ ಸಿಗಬೇಕಿದೆ. ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆಗೆಅವಕಾಶ ನೀಡಬೇಕಿದೆ.
ಸದ್ಯ, ಕನ್ನಡಿಗರೆಲ್ಲರೂ ಕರ್ನಾಟಕ ರಣಧೀರ ಪಡೆ ಹಮ್ಮಿಕೊಂಡಿರುವ ಕನ್ನಡಿಗರಿಗೆ ಉದ್ಯೋಗ ಚಳುವಳಿಯಲ್ಲಿ ಭಾಗಿಯಾಗಬೇಕಿದೆ.

ಎಂ.ಎಸ್.ಶ್ರೀ ಹರ್ಷ ಎನ್ನುವವರು ಇದಕ್ಕೆ ಸಹಮತ ಹೊಂದಿಲ್ಲ.

ಇದು ಪ್ರಾಕ್ಟಿಕಲ್ ಅಲ್ಲ. ಅಭಿವೃದ್ಧಿ ಆದ ಕಡೆ ವಲಸೆ ಆಗಿಯೇ ಆಗುತ್ತದೆ. ಇಂತಹ ಹೋರಾಟಗಳಿಂದ ಏನೂ ಪ್ರಯೋಜನವಿಲ್ಲ. ನನ್ನ ಮಾತಿನಲ್ಲಿ ನಂಬುಗೆ ಇಲ್ಲದಿದ್ದರೆ ಪ್ರಯತ್ನ ಮಾಡಿ ನೋಡಿ.

#ಅಭಿವೃದ್ಧಿ ಯ ವಿರುದ್ಧ ದನಿ ಎತ್ತದ ಇಂತಹ ಹೋರಾಟಗಳು ಕ್ಷಣಿಕ ಆರಾಮು ನೀಡುವ ಪೇನ್ ಕಿಲ್ಲರ್ ಗಳು ಅಷ್ಟೆ.

This is an #impractical movement ..

 

ಮಂಗಳೂರಿನ ಹೋರಾಟಗಾರ ಮುನೀರ್ ಕಾಟಿಪಳ್ಳ ಇದನ್ನು ಬೆಂಬಲಿಸುತ್ತಾರಾದರೂ, ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳುತ್ತಾರೆ.

ಉದ್ಯೋಗ ಸೃಷ್ಟಿಯ ಆಮಿಷವನ್ನು ಒಡ್ಡಿ ತುಳುನಾಡಿನ ಚಿನ್ನದಂತಹ ಭೂಮಿ, ನೇತ್ರಾವತಿಯ ಅಮೃತದಂತಹ ನೀರನ್ನು ಪಡೆದು ಸ್ಥಾಪನೆಯಾದ mrpl ಉದ್ಯೋಗ ಸೃಷ್ಟಿಸಿದ್ದು ಅಷ್ಟರಲ್ಲೇ ಇದೆ. ನಾಲ್ಕುಸಾವಿರ ಎಕರೆ ಭೂಮಿ, ಲಕ್ಷಾಂತರ ಕೋಟಿ ಹಣ ಹೂಡಿಯೂ ಸೃಷ್ಟಿಯಾಗಿರುವ ಉದ್ಯೋಗ ಎರಡು ಸಾವಿರಕ್ಕೂ ಕಡಿಮೆ. ಆ ಎರಡು ಸಾವಿರದಲ್ಲಿ ಕನ್ನಡಿಗರ ಸಂಖ್ಯೆ ಶೇಕಡಾ 25 ರಷ್ಟೂ ಇಲ್ಲ. ತುಳುವರನ್ನುಹುಡುಕಬೇಕಷ್ಟೆ. ಉದ್ಯೋಗ ಸಿಕ್ಕವರಲ್ಲಿ ಬಹುತೇಕರು ಭೂಮಿ ಕೊಟ್ಟ ಕಾರಣಕ್ಕೆ ಪ್ರತಿಯಾಗಿ ಪಡೆದುಕೊಂಡದ್ದೇ ಹೆಚ್ಚು. ಅಂತಹ mrpl ತಿಂಗಳ ಹಿಂದೆ 150 ಅಪ್ರೆಂಟಿಸ್ ಗಳನ್ನು ನೇಮಕಾತಿಮಾಡಿಕೊಂಡಿತು. ಆ 150 ರಲ್ಲಿ ತುಳುವರು ಬಿಡಿ, ಕನ್ನಡಿಗರು ಒಬ್ಬರೂ ಇಲ್ಲವಂತೆ. ಇದು ಅತ್ಯಂತ ಕಳವಳಕಾರಿ ಸಂಗತಿ.

ಈ ಅನ್ಯಾಯ, ತಾರತಮ್ಯ ಕೊನೆಯಾಗಲೇ ಬೇಕು. ನಮ್ಮ ನೆಲ, ಜಲವನ್ನು ಬಳಸಿ ಸ್ಥಾಪನೆಯಾಗುವ ಕೈಗಾರಿಕೆ, ಉದ್ದಿಮೆ, ವ್ಯವಹಾರಗಳು ಉದ್ಯೋಗವನ್ನು ಸೃಷ್ಟಿಸಬೇಕು, ಸ್ಥಳೀಯರಿಗೆ ಅದರಲ್ಲಿಆದ್ಯತೆಯಲ್ಲಿ ಉದ್ಯೋಗ ಸಿಗಲೇಬೇಕು. ಅದಿಲ್ಲದಿದ್ದರೆ ಎದ್ದು ಹೊರ ನಡೆಯಿರಿ ಅನ್ನಬೇಕು.

(ಕರ್ನಾಟಕ ರಣಧೀರ ಪಡೆ ಹಮ್ಮಿಕೊಂಡಿರುವ ಕನ್ನಡಿಗರಿಗೆ ಉದ್ಯೋಗ ಕೊಡಿ ಟ್ವಿಟ್ಟರ್, ಫೇಸ್ ಬುಕ್ ಅಭಿಯಾನಕ್ಕೆ ನನ್ನ ಬೆಂಬಲ ಇದೆ. ಆದರೆ ಇದು ಅಂದಾಭಿಮಾನವೋ, ಪರ ರಾಜ್ಯದವರ ಕುರಿತುಅಸಹನೆಯೋ ಆಗಬಾರದು. ಹೊರ ರಾಜ್ಯದವರೂ ಇರಲಿ. ಕನ್ನಡಿಗರಿಗೆ, ಸ್ಥಳೀಯರಿಗೆ ಆದ್ಯತೆಯಲ್ಲಿ ಅವಕಾಶ ಸಿಗಲಿ ಎಂಬುದು ನನ್ನ ನಿಲುವು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಇಡೀದೇಶದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಸರಕಾರದ ಆದ್ಯತೆ ಆಗಬೇಕು. ಗುತ್ತಿಗೆ, ಹೊರಗುತ್ತಿಗೆ ಪದ್ದತಿ ರದ್ದಾಗಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆಯ ಕಾನೂನುಗಳುಜಾರಿಯಾಗಬೇಕು. ಒಟ್ಟಾರೆ ಹೋರಾಟ ನಿರುದ್ಯೋಗ, ಅರೆ ಉದ್ಯೋಗದ ವಿರುದ್ದ, ಸ್ಥಳೀಯರಿಗೆ ಆದ್ಯತೆ ಎಂದಾಗಬೇಕು)

#ಕರ್ನಾಟಕದ_ಉದ್ಯೋಗ_ಕನ್ನಡಿಗರಿಗೆ_ಸಿಗಲಿ
#karnatakaJobsForKannadigas

 

ಪ್ರದೀಪ್ ತೊರೆನೂರು ಎನ್ನುವವರೂ ಸಹಾ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಬೆಂಗ್ಳೂರಿನಲ್ಲಿ ಒಂದು ಸುತ್ತು ತಿರುಗಾಡುತ್ತಾ ನೋಡಿದರೆ ಹಲವಾರು ಉದ್ಯಮಗಳು ಹಾಗೂ ಕೆಲಸ ಮಾಡುವ ಜನ ಕನ್ನಡೇತರರು ಕಾಣಿಸುತ್ತಾರೆ … ಮತ್ತೊಂದೆಡೆ ಹಲವಾರು ಕನ್ನಡಿಗರು ಕೆಲಸ ಸಿಗದೆ ಒದ್ದಾಡುತ್ತಿದ್ದಾರೆ …

ಸ್ವತಂತ್ರ ನಂತರ ಕೇವಲ ಕೇಂದ್ರ ಸರ್ಕಾರ ಕಚೇರಿ ಹೆಚ್ ಎ ಎಲ್ , ಬೆಮ್‌ಲ್ , ಮುಂತಾದ ಕಡೆ ತಮ್ಮ ಬೇರು ಗಟ್ಟಿ ಮಾಡಿಕೊಂಡು ಅನ್ಯ ಭಾಷಿಕರು ಕರ್ನಾಟಕದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು , ಅದುಕ್ರಮೇಣ ಮಾಹಿತಿ ತಂತ್ರಜಾನ ಕಾರ್ಖಾನೆಗಳಲ್ಲಿ ಅನ್ಯ ರಾಜ್ಯದವರು ತಮ್ಮ ಹಿಡಿತ ಇಟ್ಟುಕೊಂಡು ಕನ್ನಡಿಗರು ಏನೇ ಓದಿ , ಒಳ್ಳೆಯ ಅನುಭವ ಇದ್ದರೂ ಅವರನ್ನು ಕಡೆಗಣಿಸಿದರು ..

ಈ ದೊಡ್ಡ ಮಟ್ಟದ ಕಾರ್ಖನಗಳಲ್ಲಿ ಇದ್ದ ಅನ್ಯ ಭಾಷಿಕರ ಜನ ಇವತ್ತು ನನಗೆ ಆಟೋ ಗಳಲ್ಲಿ , ಮಾಲ್ ಗಳಲ್ಲಿ , ಚಿಕ್ಕ ಚಿಕ್ಕ ಉದ್ಯಮಗಳಲ್ಲಿ ನಿಧಾನವಾಗಿ ತಮ್ಮ ಬೇರು ಗಟ್ಟಿ ಮಾಡಿಕೊಳ್ಳುತಿರುವುದುಕನ್ನಡಿಗರಿಗೆ ಮುಂದಿನ ದಿನಗಳಲ್ಲಿ ಕೆಲಸ ಸಿಗುವ ಅವಕಾಶಗಳು ಕಡಿಮೆಯಾಗಳಿದ್ದು, ಬೆಂಗಳೂರು ನಿಧಾನವಾಗಿ ಅನ್ಯ ರಾಜ್ಯದವರ ತೆಕ್ಕೆಗೆ ಬೀಳುವುದು ಶತ ಸಿದ್ದ !

ಮೊದಲನೆಯದಾಗಿ ಕರ್ನಾಟಕ ಸರ್ಕಾರ ರಾಜ್ಯದ ಒಟ್ಟೂ ನಿರುದ್ಯೋಗಿಗಳ ಅಂಕಿ ಅಂಶ ಬಗ್ಗೆ ಜನರಿಗೆ ತಿಳಿಸಬೇಕು ! ಪ್ರತಿಯೊಂದು ಉದ್ಯಮದಲ್ಲಿ ಸ್ಥಳೀಯರು ಇರುವ ಅಂಕಿ ಅಂಶ ಬಯಲಾಗಬೇಕು ! ಇಂದು ಕಸದ ಕಾಂಟ್ರ್ಯಾಕ್ಟ್ ಗಳಿಂದ ಯಾವ ಯಾವ ಕಾಂಟ್ರ್ಯಾಕ್ಟ್ ಗಳು ಕನ್ನಡಿಗರಿಗೆ ಸಿಕ್ಕಿದೆ , ಅನ್ಯ ಭಾಷಿಕರಿಗೆ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಕರ್ನಾಟಕ ಸರ್ಕಾರ ಬಹಿರಂಗ ಪಡಿಸಲಿ

ಇಲ್ಲಿ ಅನ್ಯಭಾಷಿಕರ ಸಂಖ್ಯೆ ಆಯಾ ರಾಜ್ಯದ ಆಧಾರದ ಮೇಲೆ ವಿಂಗಡಣೆಯಾಗಿ ಆಯಾ ರಾಜ್ಯದ ಉದ್ಯೋಗ ಸೃಷ್ಟಿಸುವಲ್ಲಿ ಆಯಾ ರಾಜ್ಯದ ವೈಪಲ್ಯ ಎತ್ತಿ ತೋರಿಸಬೇಕು !

#Nation_First ಎಂದರೆ ನಮ್ಮ ಕೆಲಸ ಉದ್ಯಮ ಹಾಗೂ ಸ್ವಾಭಿಮವನ್ನು ಅನ್ಯ ರಾಜ್ಯದವರಿಗೆ ಕೊಟ್ಟು ನಾವು ಬಿಕಾರಿ ಯಾಗುವುದಲ್ಲ , ನಾವು ನಮ್ಮ ಹಕ್ಕನ್ನು ಪಡೆದು , ಸ್ಥಳೀಯರಾಗಿ ಕೆಲಸ ಪಡೆದು ,ಒಳ್ಳೆಯ ವ್ಯಾಪಾರ ವಹಿವಾಟು ಮಾಡಿ ಭಾರತ ದೇಶದ ಅಭಿವೃದ್ದಿಗಾಗಿ ಶ್ರಮಿಸುವುದು !

ಸ್ಥಳೀಯರಿಗೆ ಕೆಲ್ಸ ಸಿಕ್ಕ ಮೆಳ್ಳೆ ಉಳಿದ ಕೆಲಸಗಳು ಅನ್ಯ ರಾಜ್ಯದವರು ಪಡೆಯಬಹುದು !

ಇದು ಆಗದೆ ಇದ್ದಲ್ಲಿ ಕನ್ನಡಿಗರು ತಮ್ಮದೇ ನಾಡಿನಲ್ಲಿ ಕೆಲಸ ಇಲ್ಲದೆ ಪರದಾಡುವ ದಿನ ಬರುವುದು ಶತಸಿದ್ದ !

#KarnatakaJobsForKannadigas
#ಕರ್ನಾಟಕದ_ಉದ್ಯೋಗ_ಕನ್ನಡಿಗರಿಗೇ_ಸಿಗಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೇಮಕಾತಿ ಅಕ್ರಮ ಖಂಡಿಸಿ ಜಾರ್ಖಂಡ್‌ನಲ್ಲಿ ಧರಣಿ: ವಿದ್ಯಾರ್ಥಿಗಳ ಹೋರಾಟಕ್ಕೆ ತಲೆಬಾಗಿದ ಸಿಎಂ ಹೇಮಂತ್ ಸೊರೇನ್, ‘ನ್ಯಾಯದ ಭರವಸೆ’

ಜಾರ್ಖಂಡ್‌ನ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಹಾಗೂ ಯುವಜನತೆ ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿಗಿಳಿದು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು...

ಪ.ಬಂಗಾಳ : ಮಮತಾ ಬ್ಯಾನರ್ಜಿ ಕಾರಿನ ಮೇಲೆ ದಾಳಿ; ಕಲ್ಲು, ಚಪ್ಪಲಿ ತೂರಿದ ಗುಂಪು

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ...

SIR ನೆಪದಲ್ಲಿ 1 ಕೋಟಿ ಮತ ಡಿಲೀಟ್ ಮಾಡೋ ಸಂಚು: ಎಚ್ಚೆತ್ತುಕೊಳ್ಳುವಂತೆ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ

SIR ನೆಪದಲ್ಲಿ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತಗಳನ್ನು ಅಳಿಸುವ ಸಂಚು ನಡೆಯುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯ...

‘ಮೋದಿ ದೇಶದ ಯುವಕರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದ್ದಾರೆ ’: ‘ಜೆನ್ ಝೀ’ಗಳನ್ನು ‘ಬಾಹ್ಯ ಶಕ್ತಿಗಳು ದಾರಿ ತಪ್ಪಿಸುತ್ತಿವೆ’: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ

ಭುವನೇಶ್ವರ: ಜಾಗತಿಕ ವೇದಿಕೆಯಲ್ಲಿ "ತಮ್ಮನ್ನು ದಾರಿ ತಪ್ಪಿಸಲು ಮತ್ತು ಭಾರತವನ್ನು ದುರ್ಬಲಗೊಳಿಸಲು" ನಿರಂತರವಾಗಿ ಪ್ರಯತ್ನಿಸುತ್ತಿರುವ "ಬಾಹ್ಯ ಶಕ್ತಿಗಳಿಗೆ" ಬಲಿಯಾಗಬೇಡಿ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ಜೆನ್ ಝೀ (GEN-Z)...

ಪದವಿ ಪ್ರದಾನ ಸಮಾರಂಭಕ್ಕೆ CJI ಆಹ್ವಾನಿಸಲು ಹೈದರಾಬಾದ್ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧ

ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಾರದು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ...

3ನೇ ಹಂತದ ‘SIR’ ಕರಡು ಮತದಾರರ ಪಟ್ಟಿ ಬಿಡುಗಡೆ: 12 ರಾಜ್ಯಗಳಲ್ಲಿ 1.58 ಕೋಟಿ ಮತದಾರರ ಹೆಸರು ಕೈಬಿಟ್ಟ ಆಯೋಗ, ಇನ್ನು ಕರ್ನಾಟಕ ಬಾಕಿ

3ನೇ ಹಂತದದಲ್ಲಿ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈನಿಂದ ನಡೆಸಲಾದ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಬಳಿಕ ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಹೆಸರುಗಳು...

ದಾರುಲ್ ಉಲೂಮ್ ದಿಯೋಬಂದ್ ಆವರಣದಲ್ಲಿ ಶಿವಲಿಂಗವಿದೆ ಎಂದ ಹಿಂದುತ್ವ ಸಂಘಟನೆ : ಆ.11ರಂದು ಗಂಗಾಜಲ ಅರ್ಪಿಸುವುದಾಗಿ ಘೋಷಣೆ

ಉತ್ತರ ಪ್ರದೇಶದ ದಿಯೋಬಂದ್‌ನಲ್ಲಿರುವ ಪ್ರಸಿದ್ದ ಮುಸ್ಲಿಂ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ಆವರಣದಲ್ಲಿ ಶಿವಲಿಂಗವಿದೆ ಎಂದು ಪ್ರತಿಪಾದಿಸಿರುವ ಹಿಂದೂ ರಕ್ಷಾ ದಳ ಸಂಘಟನೆ, ಆಗಸ್ಟ್ 11 ರಂದು ಸಂಸ್ಥೆಗೆ ಭೇಟಿ ನೀಡಿ ಗಂಗಾಜಲ...

‘ಮೋದಿ ನಮ್ಮನ್ನು ಗುಂಡಿಕ್ಕಿ ಕೊಂದರೂ ಈ ಜೀವಿತಾವಧಿಯಲ್ಲಿ ವಂದೇ ಮಾತರಂ ಪೂರ್ಣ ಆವೃತ್ತಿ ಹಾಡುವುದಿಲ್ಲ’: ಕೇರಳ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತ್ತಾನ್

ಕಾಸರಗೋಡು (ಕೇರಳ): ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ 'ಹರ್ ಘರ್ ತಿರಂಗಾ' ಅಭಿಯಾನದ ಸಮಯದಲ್ಲಿ ರಾಷ್ಟ್ರಗೀತೆ 'ವಂದೇ ಮಾತರಂ'ನ ಸಂಪೂರ್ಣ ವಾಗ್ವಾದ/ಆವೃತ್ತಿಯನ್ನು ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸಂವಹನದ ಸುತ್ತ ಭಾರಿ ವಿವಾದ...

ಮೊಜ್ತಬಾ ಖಾಮಿನೈ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದ ಇಸ್ರೇಲ್ ಮಾಧ್ಯಮಗಳು : ವಿಡಿಯೋ ಬಿಡುಗಡೆ ಮಾಡಿ ಕೌಂಟರ್ ಕೊಟ್ಟ ಇರಾನ್

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಅವರ ಆರೋಗ್ಯ ಸ್ಥಿತಿ 'ಅತ್ಯಂತ ಗಂಭೀರವಾಗಿದೆ' ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ, ಅವರು ಉತ್ತಮ ಆರೋಗ್ಯದಿಂದ ಇರುವಂತೆ ಕಾಣಿಸುವ ದಿನಾಂಕವಿಲ್ಲದ ವಿಡಿಯೋ ಒಂದನ್ನು...

‘ಬ್ರಿಟಿಷರಿಂದ ಕಠಿಣ ಶಿಕ್ಷೆ ಅನುಭವಿಸಿದವರು ಸಾವರ್ಕರ್’ ಎಂಬ ಕೇರಳ ಶಾಲೆಯೊಂದರ ಕ್ವಿಜ್‌ ಪ್ರಶ್ನೆ ತಂದಿಟ್ಟ ವಿವಾದ

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರಂ ಮತ್ತು ಕುಂಬಳೆ ಉಪಜಿಲ್ಲೆಗಳ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕ್ವಿಜ್‌ನಲ್ಲಿ ವಿ ವಿನಾಯಕ ದಾಮೋದರ ಸಾವರ್ಕರ್ ಕುರಿತಾದ ಪ್ರಶ್ನೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ....