Homeಕರ್ನಾಟಕಕಾರವಾರ: ಕಿಮ್ಸ್‌ನಲ್ಲಿ ವಿಡಿಯೋ-ಆಡಿಯೋ ಗುದುಮುರಿಗೆ!!

ಕಾರವಾರ: ಕಿಮ್ಸ್‌ನಲ್ಲಿ ವಿಡಿಯೋ-ಆಡಿಯೋ ಗುದುಮುರಿಗೆ!!

- Advertisement -
- Advertisement -

ಕಾರವಾರದ ಮೆಡಿಕಲ್ ಕಾಲೇಜು ಉರುಫ್ ಕಿಮ್ಸ್ ಗಲೀಜು-ಗಲಾಟೆ-ಗುಳುಂಗಳಿಂದ ಗಬ್ಬೆದ್ದು ನಾರುತ್ತಿದೆ. ಈ ಕಿಮ್ಸ್ ಶುರುವಾದಾಗಿಂದಲೂ ಅಲ್ಲಿ ಆಡಳಿತದಲ್ಲಿ ‘ಕಾರವಾರ ರಿಪಬ್ಲಿಕ್’ ಕಿಂಗ್‍ಗಳು ಕೈಯಾಡಿಸುತ್ತಲೇ ಬಂದಿದ್ದಾರೆ. ಆರಂಭದಲ್ಲಿ ತಮ್ಮೊಂದಿಗೆ ಹೊಂದಿಕೊಂಡಿದ್ದ, ನಂತರ ಸೆಟೆದು ನಿಂತಿದ್ದ ಡೀನ್ ಕಮ್ ಡೈರೆಕ್ಟರ್ ಡಾ| ದೊಡ್ಮನಿಯನ್ನು ಎತ್ತಗಂಡಿ ಮಾಡಿಸಿ ಅನರ್ಹ ಡಾ| ಗಜಾನನ ನಾಯಕ್‍ನನ್ನು ಇದೇ ಕಾರವಾರ್ ರಿಪಬ್ಲಿಕ್ ಪ್ರತಿಷ್ಠಾಪಿಸಿಕೊಂಡಿತ್ತು. ಆತನಿಂದ ಜಿಲ್ಲಾ ಆಸ್ಪತ್ರೆ ನಂದನವನವಾಗುತ್ತದೆ; ರೋಗಿಗಳಿಗೆ ತೊಂದರೆ-ಕೊರತೆಯೆಂಬುದೇ ಆಗುವುದಿಲ್ಲ ಎಂಬಂತೆ ರಿಪಬ್ಲಿಕ್ ಮಾಫಿಯಾ ಬಿಂಬಿಸಿತ್ತು. ಆದರೆ ಎಂದೂ ಕ್ಲಿನಿಕಲ್ ಪ್ರಾಕ್ಟೀಸ್ ಮಾಡದ ಡಾ| ಗಜಾನನ ವಕ್ಕರಿಸಿದ್ದೇ ತಡ, ಕಿಮ್ಸ್‍ನಲ್ಲಿ ಸರಣಿ ಅವಾಂತರ-ಅನಾಹುತ-ಆಧ್ವಾನ ಆಗಹತ್ತಿದೆ……..

ಕಿಮ್ಸ್‍ನ ಕೋವಿಡ್-19 ವಾರ್ಡ್‍ಂತೂ ರೌರವ ನರಕ. ವಾರ್ಡ್ ತುಂಬ ಕಸ-ಕೊಚ್ಚೆ ಶುದ್ಧ ಕುಡಿಯುವ ನೀರಿಗೂ ಗತಿಯಿಲ್ಲ. ಹೈಜೀನಿಕ್ ಊಟ-ತಿಂಡಿ ಕೇಳಲೇಬೇಡಿ. ಡಾಕ್ಟರ್-ದಾದಿಯರು ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ಸ್ವಚ್ಛತಾ ಕರ್ಮಚಾರಿಗಳಂತೂ ಕಾಣುವುದೇ ಇಲ್ಲ. ಕಿಮ್ಸ್ ಡೈರೆಕ್ಟರ್ ಡಾ| ಗಜಾನನ ಮತ್ತು ವೈದ್ಯಕೀಯ ಅಧೀಕ್ಷರು, ಡಾ| ಕುಡ್ತರ್‍ಕರ್ ಪಿಪಿಇ ಕಿಟ್ ಧರಿಸಿ ವಾರ್ಡಿಗೆ ಹೋದದ್ದೇ ಇಲ್ಲ!! ರೋಗ ನಿರೋಧಕ ಶಕ್ತಿಯಿದ್ದ ರೋಗಿ ಕಿಮ್ಸ್‍ನಿಂದ ಬಚಾವಾಗಿ ಬರಬೇಕೇ ಹೊರತು ಇಲ್ಲಿಯ ಶುಶ್ರೂಷೆಯಿಂದ ಬದುಕಲು ಸಾಧ್ಯವೇ ಇಲ್ಲ. ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಉತ್ಸಾಹಿ ಐಎಎಸ್ ಅಧಿಕಾರಿ ಮಹಮ್ಮದ್ ರೋಷನ್ ಕೋವಿಡ್ ಕೇಂದ್ರದ ಉಸ್ತುವಾರಿ ನೋಡಿಕೊಂಡಷ್ಟು ದಿನ ಯಾವುದೇ ಸಮಸ್ಯೆಯಿರಲಿಲ್ಲ.

ಕಿಮ್ಸ್ ಡೈರೆಕ್ಟರ್ ಡಾ| ಗಜಾನನ ಮತ್ತು ಸುಪರಿಂಡೆಂಟೆಂಟ್ ಡಾ| ಕುಡ್ತರ್‍ಕರ್ ಕೋವಿಡ್ ಕೇಂದ್ರದ ಯಜಮಾನಿಕೆಗಾಗಿ ಲಾಬಿ ಮಾಡುತ್ತಿದ್ದಂತೆಯೇ ಜಿಲ್ಲಾಡಳಿತ ಅಂತರ ಕಾಯ್ದುಕೊಂಡಿತು. ಕೋವಿಡ್ ಕೇಂದ್ರ ಕಬ್ಜಾ ಮಾಡಿಕೊಂಡ ಡಾ| ಗಜಾನನ ಸಿಇಓ ರೊಷನ್‍ರ ಸಾಧನೆ ಶ್ರಮವೆಲ್ಲ ತನ್ನ ಸಾಹಸವೆಂಬಂತೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಕಾರವಾರದ ಅವರ ಜಾತಿವಂತರ ಪತ್ರಿಕೆಯಂತೂ ‘ಮೃತ್ಯುಂಜಯ’ ಎಂಬ ಹಾಸ್ಯಾಸ್ಪದ ಬಿರುದು ಕೊಟ್ಟುಬಿಟ್ಟಿತು.

ಸೋಂಕಿತರು ಗುಣವಾಗಿ ಹೋಗುವಾಗ ಹೂವು ಕೊಟ್ಟು ಚಪ್ಪಾಳೆ ಹೊಡೆದು ಫೋಟೋ ಸೆಷನ್ ನಡೆಸಿ ಕಾಳಜಿಯ ವೈದ್ಯಾಗ್ರೇಸನ ಪೋಸು ಕೊಡುತ್ತಿದ್ದವರ ಬಣ್ಣ ಕಳೆದ 10-7-2020ರಂದು ಬಯಲಾಗಿ ಹೋಯಿತು. ಬೆಂಗಳೂರಲ್ಲಿ ಚಾರ್ಟ್‍ಟೆಡ್ ಅಕೌಂಟೆಂಟ್ ಉದ್ಯೋಗ ಮಾಡಿಕೊಂಡಿದ್ದ ಕಾರವಾರದ ನಿತಿನ್ ನಾಯಕ್ ಎಂಬ ತರುಣ ಮೂರು ದಿನಗಳ ಹಿಂದೆ ಈ ಕೋವಿಡ್ ಕೇಂದ್ರಕ್ಕೆ ದಾಖಲಾಗಿದ್ದ. ಅಲ್ಲಿದ್ದ ಸೋಂಕಿತರೆಲ್ಲ ಹೀನಾಯ ಸ್ಥಿತಿಯಲ್ಲಿದ್ದರು; ಮೂರು ದಿನ ನಿತಿನ್ ಸಹ ಹಿಂಸೆ ಅನುಭವಿಸಿದ್ದಾನೆ. ಈತ ಇಡೀ ಉದ್ದಗಲಕ್ಕೆ ಓಡಾಡುತ್ತ ಅಲ್ಲಿಯ ಅವ್ಯವಸ್ಥೆ-ಅನೈರ್ಮಲ್ಯ-ಲೋಪ-ದೋಷ ಲೈವ್ ಕಮೆಂಟರಿ ಮೂಲಕ ತೋರಿಸುತ್ತ ವಿಡಿಯೋ ಮಾಡಿಸಿಕೊಂಡಿದ್ದಾನೆ. ಆತನಿಗೆ ವಾರ್ಡ್‍ನ ಇತರ ಸೋಂಕಿತರು ಶೂಟಿಂಗ್‍ಗೆ ನೆರವಾಗಿದ್ದಾರೆ. ವಾರ್ಡಿಗೆ ಡಾಕ್ಟರ್ಸ್-ದಾದಿಯರು ಮತ್ತ ಸ್ವಚ್ಛತಾ ಕರ್ಮಚಾರಿಗಳ್ಯಾರು ಬರುತ್ತಿಲ್ಲ; ರೋಗಿಗಳ ಮೇಲೆ ಯಾರಿಗೂ ನಿಗಾಇಲ್ಲ ಎಂದಿರುವ ನಿತಿನ್ ವಾರ್ಡ್ ತುಂಬ ತುಂಬಿರುವ ಬಯೋಲಾಜಿಕಲ್ ತ್ಯಾಜ್ಯ, ನೀರು ನಿಂತು ಕೊಚ್ಚೆ ನಿರ್ಮಾಣವಾಗಿರುವುದು, ಬಿಸಿ ನೀರಿಗೂ ಗತಿಯಿಲ್ಲದಿರುವುದು, ಶೌಚಾಲಯದ ದುರವಸ್ಥೆ-ಅಸಹ್ಯ, ಅತಿ ಅವಶ್ಯವಾದ ನೀರೂ ಸರಬರಾಜಾಗದಿರುವುದು, ಸ್ವಚ್ಛತೆಯಿಲ್ಲದ ಊಟ-ಉಪಹಾರದ ಕತೆ ಹೇಳುತ್ತ ಹೊರಜಗತ್ತಿಗೆ ಕಳುಹಿಸಿದ್ದಾನೆ. ಇದಕ್ಕಿಂತ ಮುಖ್ಯವಾಗಿ 4 ದಿನಗಳ ಹಿಂದೆ ಅಸುನೀಗಿದ್ದ ಶಿರಸಿಯ ವ್ಯಕ್ತಿಗೆ ಸೇರಿದ ಹಾಸಿಗೆ-ಸಾಮಾನುಗಳು ಆತ ಜೀವ ಬಿಟ್ಟಲ್ಲೇ ಬಿದ್ದಿರುವುದು ತೋರಿಸಿದ್ದಾನೆ. ಆತ ಈ ವೀಡಿಯೋ ಶೇರ್ ಮಾಡಿದ ಹತ್ತೇ ನಿಮಿಷದಲ್ಲಿ ವೈರಲ್ ಆಗಿದೆ.

ಅಲ್ಲಿಗೆ ಡೀನ್ ಡಾ|ಗಜಾನನರ ಗ್ಯಾಂಗಿನ ಕರ್ಮಕಾಂಡ ಜಗಜ್ಜಾಹೀರಾಗಿ ಹೋಗಿದೆ. ಇದರಿಂದ ಕಂಗಾಲಾದ ಅವರ ಮರುದಿನವೇ ಗುಣಪಟ್ಟು ಬಿಡುಗಡೆಯಾದ ಸೋಂಕಿತರಿಂದ ಆಸ್ಪತ್ರೆಯಲ್ಲಿ ಅತ್ಯುತ್ತಮ ವ್ಯವಸ್ಥೆಯಿದೆ…. ಹಣ್ಣು.. ಮೊಟ್ಟೆ… ಭರ್ಜರಿ ಊಟ ಕೊಡಲಾಗುತ್ತದೆ.. ವೈದ್ಯರು-ದಾದಿಯರು ಕಾಳಜಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.. ಎಂದೆಲ್ಲಾ ಹೇಳಿಸಿ ವೀಡಿಯೋ ಮಾಡಿಸಿದ್ದಾರೆ. ಈ ವಿಡಿಯೋದಲ್ಲಿ ಬೇಡವೆಂದರೂ ಡಾ| ಗಜಾನನ ಮತ್ತು ಡಾ| ಕುಡ್ತರ್ಕರ್ ಕಾಣಿಸುತ್ತಾರೆ. ಪ್ರತಿದಿನ ಸಂಜೆ ನಾಲ್ಕು ಗಂಟೆಗೆ ತ್ಯಾಜ್ಯ ಹೊರಸಾಗಿಸಲಾಗುತ್ತದೆಂದು ಡಾ| ಗಜಾನನ ಹೇಳಿದ್ದಾರೆ. ಆದರೆ ವಾರ್ಡ್‍ನ ಮೂಲೆ ಮೂಲೆಯಲ್ಲಿ ನಾಲ್ಕೈದು ದಿನ ಸಂಗ್ರಹವಾಗುವಷ್ಟು ತ್ಯಾಜ್ಯ ತುಂಬಿರುವುದು ಅವರು ಹಸೀ ಸುಳ್ಳು ಹೇಳುತ್ತಿದ್ದಾರೆಂಬುದನ್ನು ಸಾಬೀತುಪಡಿಸುತ್ತದೆ.

ಇಷ್ಟಕ್ಕೇ ಅವರ ಹತಾಶೆ-ಆಕ್ರೋಶ ನಿಂತಿಲ್ಲ. ಅವ್ಯವಸ್ಥೆಯ ವಿಡಿಯೋ ಮಾಡಿದ ತರುಣ ಮತ್ತವನಿಗೆ ಸಹಾಯ ಮಾಡಿದ ಸೋಂಕಿತರನ್ನು ಆಸ್ಪತ್ರೆಯ ಬಾಗಿಲಿಗೆ ಕರೆಸಿಕೊಂಡಿದ್ದಾರೆ. ಗಾಜಿನ ಗೋಡೆಯ ಆಚೆ ನಿಂತು ಪಕ್ಕ ರೌಡಿಯಂತೆ ಹಾರಾಡಿ, ಸೋಂಕಿತರೊಂದಿಗೆ ಜಗಳವಾಡಿದ್ದಾರೆ. ವಿಡಿಯೋ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ವಿಡಿಯೋ ಕೂಡ ಕ್ಷಣಾರ್ಧದಲ್ಲಿ ವೈರಲ್ ಆಗಿಹೋಗಿದೆ. ಈ ಎಲ್ಲಾ ವಿಡಿಯೋಗಳು, ಫೋಟೋಗಳು ನಮಗೆ ಲಭ್ಯವಾಗಿವೆ. ಈ ಪುರಾವೆಗಳಿಂದ ಡೀನ್ ಸಾಹೇಬರ ‘ಯೋಗ್ಯತೆ’ ಊರಿಗೆಲ್ಲ ಪಕ್ಕ ಆಗಿದೆ!! ಅವರ ಪರವಾಗಿ ಪತ್ರಕರ್ತ ಮಾಧವ ನಾಯ್ಕರೇಕೆ ವಕಾಲತ್ತು ವಹಿಸುತ್ತಿದ್ದಾರೆ ಎಂಬುದೇ ಸೋಜಿಗದ ಸಂಗತಿ.

ವಿಡಿಯೋ ಧೀರ ನಿತಿನ್ ಮಾಧವನಾಯ್ಕ್‍ರ ಜಾತಿ ಬಂಧು. ಆತನ ತಂದೆ ಕಾರವಾರದ ಪ್ರಮುಖ ರಾಜಕಾರಣಿ. ಹೀಗಾಗಿ ನಿತಿನ್‍ಗೆ ಪೂಸಿ ಹೊಡೆಯಬೇಕಾಗಿ ಬಂತು. ಮಾಧವನಾಯ್ಕ್ ನಿನಗೆ ಸಪೋರ್ಟ್ ಮಾಡ್ತೇನೆ ಎಂದು ನಿತಿನ್‍ಗೆ ಹೇಳಿದ್ದಂತೆ ಕಾಣುತ್ತಿದೆ. ಆದರೆ ಅವರೇ ಮರುದಿನ ನಿತಿನ್ ವಿಡಿಯೋ ಮಾಡಿದ್ದು ತಪ್ಪು ಎಂದು ಹೇಳಿಕೆ ಬದಲಾಯಿಸಿದ್ದರು. ಇದರಿಂದ ಕೆರಳಿದ ನಿತಿನ್ ಮಾಧವನಾಯ್ಕ್‍ರಿಗೆ ಫೋನಾಯಿಸಿ “ಇದೆಂಥ ವಿಶ್ವಾಸ ದ್ರೋಹ ಸಾರ್” ಎಂದಿದ್ದಾನೆ. ಕಕ್ಕಾಬಿಕ್ಕಿಯಾದ ಮಾಧವ ಏನೋ ಸಮಜಾಯಿಷಿ ಕೊಟ್ಟಿದ್ದಾರೆ. ನಿತಿನ್ ತನ್ನನ್ನು ನಾಲ್ಕು ದಿನದಿಂದ ಒಬ್ಬೇ ಒಬ್ಬ ಡಾಕ್ಟರ್ ಅಥವಾ ನರ್ಸ್ ಮಾತಾಡಿಸಿಲ್ಲ, ತಾನು ಕೊಳಚೆಯಲ್ಲಿದ್ದೇನೆ ಎಂದಿದ್ದಾನೆ. ಹಾಗಿದ್ದರೆ ಡಾ.ಗಜಾನನರಿಗೆ ಫೋನ್ ಸಂಪರ್ಕ ಮಡುತ್ತೇನೆ ನೀನೇ ಮಾತಾಡು ಎಂದಿದ್ದಾನೆ. ಮೂವರ ನಡುವೆ ಬರೋಬ್ಬರಿ ಮುವ್ವತ್ತಾ ಮೂರುವರೆ ನಿಮಿಷ ಕಾನ್ಫರೆನ್ಸ್ ಸಂಭಾಷಣೆ ನಡೆದಿದೆ.

ನಿತಿನ್‍ನ ಒಂದು ಪ್ರಶ್ನೆಗೂ ಉತ್ತರಿಸಲಾಗದೆ ಡಾ| ಗಜಾನನ ಮತ್ತು ಮಾಧವ ನಾಯ್ಕ್ ತಡವರಿಸಿದ್ದಾರೆ! ಈ ಆಡಿಯೋ ಸಹ ಜಿಲ್ಲೆಯಲ್ಲಿ ಹಿಟ್ ಆಗಿದೆ! ಈ ವಿಡಿಯೋ ಮತ್ತು ಆಡಿಯೋ ವಾರ್ ಜಿಲ್ಲಾಧಿಕಾರಿ ಡಾ| ಹರೀಶ್‍ಕುಮಾರ್ ಮತ್ತು ಶಾಸಕಿ ರೂಪಾಲಿ ನಾಯ್ಕ್ “ಸುಮ್ಮನೆ” ನೋಡಿದ್ದು ಅನೇಕ ಅನುಮಾನ ಮೂಡಿಸಿದೆ. ‘ಕೊರೊನಾ ಸಂಹಾರ ಸೈನ್ಯ’ದ ಸುಪ್ರೀಂ ಕಮಾಂಡರ್ ಆಗಿರುವ ಜಿಲ್ಲಾಧಿಕಾರಿ ಕಿಮ್ಸ್‍ನ ಕರ್ಮಕಾಂಡ ಕಂಡೂ ಕಾಣದಂತಿರುವುದೇಕೆ? ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡ್ತೇನೆಂದು ಭರವಸೆ ನೀಡುವ ಶಾಸಕಿ ರೂಪಾಲಿಯಮ್ಮ ಕೋವಿಡ್ ರೋಗಿಗಳಿಗೆ ಕೊಡಬೇಕಾದ ಮೊಟ್ಟೆ ಸಿಗದಿದ್ದರೂ ಕೇಳುತ್ತಿಲ್ಲ! ಹೀಗಿರುವಾಗ ಅದ್ಹೇಗೆ ಕಿಮ್ಸ್‍ನ ಅವ್ಯವಹಾರ-ಅವಾಂತರ ಪ್ರಶ್ನಿಸಿಯಾರು? ಒಟ್ಟಿನಲ್ಲಿ ಸಾವಿರಾರು ರೂಪಾಯಿ ಅನುದಾನದ ಕಿಮ್ಸ್‍ನ ಕೋವಿಡ್ ವಾರ್ಡ್‍ನಲ್ಲಿ ಬೇಲಿಯೇ ಹೊಲ ಮೇಯುತ್ತಿದೆ.


ಇದನ್ನು ಓದಿ: ಕರ್ನಾಟಕದ ಕೊರೊನಾ ಡಾಕ್ಟರ್ ಏನು ಹೇಳುತ್ತಾರೆ? ಡಾ.ಆಸಿಮ ಬಾನು ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...