Homeಕರ್ನಾಟಕಕಾರವಾರ: ಕಿಮ್ಸ್‌ನಲ್ಲಿ ವಿಡಿಯೋ-ಆಡಿಯೋ ಗುದುಮುರಿಗೆ!!

ಕಾರವಾರ: ಕಿಮ್ಸ್‌ನಲ್ಲಿ ವಿಡಿಯೋ-ಆಡಿಯೋ ಗುದುಮುರಿಗೆ!!

- Advertisement -
- Advertisement -

ಕಾರವಾರದ ಮೆಡಿಕಲ್ ಕಾಲೇಜು ಉರುಫ್ ಕಿಮ್ಸ್ ಗಲೀಜು-ಗಲಾಟೆ-ಗುಳುಂಗಳಿಂದ ಗಬ್ಬೆದ್ದು ನಾರುತ್ತಿದೆ. ಈ ಕಿಮ್ಸ್ ಶುರುವಾದಾಗಿಂದಲೂ ಅಲ್ಲಿ ಆಡಳಿತದಲ್ಲಿ ‘ಕಾರವಾರ ರಿಪಬ್ಲಿಕ್’ ಕಿಂಗ್‍ಗಳು ಕೈಯಾಡಿಸುತ್ತಲೇ ಬಂದಿದ್ದಾರೆ. ಆರಂಭದಲ್ಲಿ ತಮ್ಮೊಂದಿಗೆ ಹೊಂದಿಕೊಂಡಿದ್ದ, ನಂತರ ಸೆಟೆದು ನಿಂತಿದ್ದ ಡೀನ್ ಕಮ್ ಡೈರೆಕ್ಟರ್ ಡಾ| ದೊಡ್ಮನಿಯನ್ನು ಎತ್ತಗಂಡಿ ಮಾಡಿಸಿ ಅನರ್ಹ ಡಾ| ಗಜಾನನ ನಾಯಕ್‍ನನ್ನು ಇದೇ ಕಾರವಾರ್ ರಿಪಬ್ಲಿಕ್ ಪ್ರತಿಷ್ಠಾಪಿಸಿಕೊಂಡಿತ್ತು. ಆತನಿಂದ ಜಿಲ್ಲಾ ಆಸ್ಪತ್ರೆ ನಂದನವನವಾಗುತ್ತದೆ; ರೋಗಿಗಳಿಗೆ ತೊಂದರೆ-ಕೊರತೆಯೆಂಬುದೇ ಆಗುವುದಿಲ್ಲ ಎಂಬಂತೆ ರಿಪಬ್ಲಿಕ್ ಮಾಫಿಯಾ ಬಿಂಬಿಸಿತ್ತು. ಆದರೆ ಎಂದೂ ಕ್ಲಿನಿಕಲ್ ಪ್ರಾಕ್ಟೀಸ್ ಮಾಡದ ಡಾ| ಗಜಾನನ ವಕ್ಕರಿಸಿದ್ದೇ ತಡ, ಕಿಮ್ಸ್‍ನಲ್ಲಿ ಸರಣಿ ಅವಾಂತರ-ಅನಾಹುತ-ಆಧ್ವಾನ ಆಗಹತ್ತಿದೆ……..

ಕಿಮ್ಸ್‍ನ ಕೋವಿಡ್-19 ವಾರ್ಡ್‍ಂತೂ ರೌರವ ನರಕ. ವಾರ್ಡ್ ತುಂಬ ಕಸ-ಕೊಚ್ಚೆ ಶುದ್ಧ ಕುಡಿಯುವ ನೀರಿಗೂ ಗತಿಯಿಲ್ಲ. ಹೈಜೀನಿಕ್ ಊಟ-ತಿಂಡಿ ಕೇಳಲೇಬೇಡಿ. ಡಾಕ್ಟರ್-ದಾದಿಯರು ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ಸ್ವಚ್ಛತಾ ಕರ್ಮಚಾರಿಗಳಂತೂ ಕಾಣುವುದೇ ಇಲ್ಲ. ಕಿಮ್ಸ್ ಡೈರೆಕ್ಟರ್ ಡಾ| ಗಜಾನನ ಮತ್ತು ವೈದ್ಯಕೀಯ ಅಧೀಕ್ಷರು, ಡಾ| ಕುಡ್ತರ್‍ಕರ್ ಪಿಪಿಇ ಕಿಟ್ ಧರಿಸಿ ವಾರ್ಡಿಗೆ ಹೋದದ್ದೇ ಇಲ್ಲ!! ರೋಗ ನಿರೋಧಕ ಶಕ್ತಿಯಿದ್ದ ರೋಗಿ ಕಿಮ್ಸ್‍ನಿಂದ ಬಚಾವಾಗಿ ಬರಬೇಕೇ ಹೊರತು ಇಲ್ಲಿಯ ಶುಶ್ರೂಷೆಯಿಂದ ಬದುಕಲು ಸಾಧ್ಯವೇ ಇಲ್ಲ. ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಉತ್ಸಾಹಿ ಐಎಎಸ್ ಅಧಿಕಾರಿ ಮಹಮ್ಮದ್ ರೋಷನ್ ಕೋವಿಡ್ ಕೇಂದ್ರದ ಉಸ್ತುವಾರಿ ನೋಡಿಕೊಂಡಷ್ಟು ದಿನ ಯಾವುದೇ ಸಮಸ್ಯೆಯಿರಲಿಲ್ಲ.

ಕಿಮ್ಸ್ ಡೈರೆಕ್ಟರ್ ಡಾ| ಗಜಾನನ ಮತ್ತು ಸುಪರಿಂಡೆಂಟೆಂಟ್ ಡಾ| ಕುಡ್ತರ್‍ಕರ್ ಕೋವಿಡ್ ಕೇಂದ್ರದ ಯಜಮಾನಿಕೆಗಾಗಿ ಲಾಬಿ ಮಾಡುತ್ತಿದ್ದಂತೆಯೇ ಜಿಲ್ಲಾಡಳಿತ ಅಂತರ ಕಾಯ್ದುಕೊಂಡಿತು. ಕೋವಿಡ್ ಕೇಂದ್ರ ಕಬ್ಜಾ ಮಾಡಿಕೊಂಡ ಡಾ| ಗಜಾನನ ಸಿಇಓ ರೊಷನ್‍ರ ಸಾಧನೆ ಶ್ರಮವೆಲ್ಲ ತನ್ನ ಸಾಹಸವೆಂಬಂತೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಕಾರವಾರದ ಅವರ ಜಾತಿವಂತರ ಪತ್ರಿಕೆಯಂತೂ ‘ಮೃತ್ಯುಂಜಯ’ ಎಂಬ ಹಾಸ್ಯಾಸ್ಪದ ಬಿರುದು ಕೊಟ್ಟುಬಿಟ್ಟಿತು.

ಸೋಂಕಿತರು ಗುಣವಾಗಿ ಹೋಗುವಾಗ ಹೂವು ಕೊಟ್ಟು ಚಪ್ಪಾಳೆ ಹೊಡೆದು ಫೋಟೋ ಸೆಷನ್ ನಡೆಸಿ ಕಾಳಜಿಯ ವೈದ್ಯಾಗ್ರೇಸನ ಪೋಸು ಕೊಡುತ್ತಿದ್ದವರ ಬಣ್ಣ ಕಳೆದ 10-7-2020ರಂದು ಬಯಲಾಗಿ ಹೋಯಿತು. ಬೆಂಗಳೂರಲ್ಲಿ ಚಾರ್ಟ್‍ಟೆಡ್ ಅಕೌಂಟೆಂಟ್ ಉದ್ಯೋಗ ಮಾಡಿಕೊಂಡಿದ್ದ ಕಾರವಾರದ ನಿತಿನ್ ನಾಯಕ್ ಎಂಬ ತರುಣ ಮೂರು ದಿನಗಳ ಹಿಂದೆ ಈ ಕೋವಿಡ್ ಕೇಂದ್ರಕ್ಕೆ ದಾಖಲಾಗಿದ್ದ. ಅಲ್ಲಿದ್ದ ಸೋಂಕಿತರೆಲ್ಲ ಹೀನಾಯ ಸ್ಥಿತಿಯಲ್ಲಿದ್ದರು; ಮೂರು ದಿನ ನಿತಿನ್ ಸಹ ಹಿಂಸೆ ಅನುಭವಿಸಿದ್ದಾನೆ. ಈತ ಇಡೀ ಉದ್ದಗಲಕ್ಕೆ ಓಡಾಡುತ್ತ ಅಲ್ಲಿಯ ಅವ್ಯವಸ್ಥೆ-ಅನೈರ್ಮಲ್ಯ-ಲೋಪ-ದೋಷ ಲೈವ್ ಕಮೆಂಟರಿ ಮೂಲಕ ತೋರಿಸುತ್ತ ವಿಡಿಯೋ ಮಾಡಿಸಿಕೊಂಡಿದ್ದಾನೆ. ಆತನಿಗೆ ವಾರ್ಡ್‍ನ ಇತರ ಸೋಂಕಿತರು ಶೂಟಿಂಗ್‍ಗೆ ನೆರವಾಗಿದ್ದಾರೆ. ವಾರ್ಡಿಗೆ ಡಾಕ್ಟರ್ಸ್-ದಾದಿಯರು ಮತ್ತ ಸ್ವಚ್ಛತಾ ಕರ್ಮಚಾರಿಗಳ್ಯಾರು ಬರುತ್ತಿಲ್ಲ; ರೋಗಿಗಳ ಮೇಲೆ ಯಾರಿಗೂ ನಿಗಾಇಲ್ಲ ಎಂದಿರುವ ನಿತಿನ್ ವಾರ್ಡ್ ತುಂಬ ತುಂಬಿರುವ ಬಯೋಲಾಜಿಕಲ್ ತ್ಯಾಜ್ಯ, ನೀರು ನಿಂತು ಕೊಚ್ಚೆ ನಿರ್ಮಾಣವಾಗಿರುವುದು, ಬಿಸಿ ನೀರಿಗೂ ಗತಿಯಿಲ್ಲದಿರುವುದು, ಶೌಚಾಲಯದ ದುರವಸ್ಥೆ-ಅಸಹ್ಯ, ಅತಿ ಅವಶ್ಯವಾದ ನೀರೂ ಸರಬರಾಜಾಗದಿರುವುದು, ಸ್ವಚ್ಛತೆಯಿಲ್ಲದ ಊಟ-ಉಪಹಾರದ ಕತೆ ಹೇಳುತ್ತ ಹೊರಜಗತ್ತಿಗೆ ಕಳುಹಿಸಿದ್ದಾನೆ. ಇದಕ್ಕಿಂತ ಮುಖ್ಯವಾಗಿ 4 ದಿನಗಳ ಹಿಂದೆ ಅಸುನೀಗಿದ್ದ ಶಿರಸಿಯ ವ್ಯಕ್ತಿಗೆ ಸೇರಿದ ಹಾಸಿಗೆ-ಸಾಮಾನುಗಳು ಆತ ಜೀವ ಬಿಟ್ಟಲ್ಲೇ ಬಿದ್ದಿರುವುದು ತೋರಿಸಿದ್ದಾನೆ. ಆತ ಈ ವೀಡಿಯೋ ಶೇರ್ ಮಾಡಿದ ಹತ್ತೇ ನಿಮಿಷದಲ್ಲಿ ವೈರಲ್ ಆಗಿದೆ.

ಅಲ್ಲಿಗೆ ಡೀನ್ ಡಾ|ಗಜಾನನರ ಗ್ಯಾಂಗಿನ ಕರ್ಮಕಾಂಡ ಜಗಜ್ಜಾಹೀರಾಗಿ ಹೋಗಿದೆ. ಇದರಿಂದ ಕಂಗಾಲಾದ ಅವರ ಮರುದಿನವೇ ಗುಣಪಟ್ಟು ಬಿಡುಗಡೆಯಾದ ಸೋಂಕಿತರಿಂದ ಆಸ್ಪತ್ರೆಯಲ್ಲಿ ಅತ್ಯುತ್ತಮ ವ್ಯವಸ್ಥೆಯಿದೆ…. ಹಣ್ಣು.. ಮೊಟ್ಟೆ… ಭರ್ಜರಿ ಊಟ ಕೊಡಲಾಗುತ್ತದೆ.. ವೈದ್ಯರು-ದಾದಿಯರು ಕಾಳಜಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.. ಎಂದೆಲ್ಲಾ ಹೇಳಿಸಿ ವೀಡಿಯೋ ಮಾಡಿಸಿದ್ದಾರೆ. ಈ ವಿಡಿಯೋದಲ್ಲಿ ಬೇಡವೆಂದರೂ ಡಾ| ಗಜಾನನ ಮತ್ತು ಡಾ| ಕುಡ್ತರ್ಕರ್ ಕಾಣಿಸುತ್ತಾರೆ. ಪ್ರತಿದಿನ ಸಂಜೆ ನಾಲ್ಕು ಗಂಟೆಗೆ ತ್ಯಾಜ್ಯ ಹೊರಸಾಗಿಸಲಾಗುತ್ತದೆಂದು ಡಾ| ಗಜಾನನ ಹೇಳಿದ್ದಾರೆ. ಆದರೆ ವಾರ್ಡ್‍ನ ಮೂಲೆ ಮೂಲೆಯಲ್ಲಿ ನಾಲ್ಕೈದು ದಿನ ಸಂಗ್ರಹವಾಗುವಷ್ಟು ತ್ಯಾಜ್ಯ ತುಂಬಿರುವುದು ಅವರು ಹಸೀ ಸುಳ್ಳು ಹೇಳುತ್ತಿದ್ದಾರೆಂಬುದನ್ನು ಸಾಬೀತುಪಡಿಸುತ್ತದೆ.

ಇಷ್ಟಕ್ಕೇ ಅವರ ಹತಾಶೆ-ಆಕ್ರೋಶ ನಿಂತಿಲ್ಲ. ಅವ್ಯವಸ್ಥೆಯ ವಿಡಿಯೋ ಮಾಡಿದ ತರುಣ ಮತ್ತವನಿಗೆ ಸಹಾಯ ಮಾಡಿದ ಸೋಂಕಿತರನ್ನು ಆಸ್ಪತ್ರೆಯ ಬಾಗಿಲಿಗೆ ಕರೆಸಿಕೊಂಡಿದ್ದಾರೆ. ಗಾಜಿನ ಗೋಡೆಯ ಆಚೆ ನಿಂತು ಪಕ್ಕ ರೌಡಿಯಂತೆ ಹಾರಾಡಿ, ಸೋಂಕಿತರೊಂದಿಗೆ ಜಗಳವಾಡಿದ್ದಾರೆ. ವಿಡಿಯೋ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ವಿಡಿಯೋ ಕೂಡ ಕ್ಷಣಾರ್ಧದಲ್ಲಿ ವೈರಲ್ ಆಗಿಹೋಗಿದೆ. ಈ ಎಲ್ಲಾ ವಿಡಿಯೋಗಳು, ಫೋಟೋಗಳು ನಮಗೆ ಲಭ್ಯವಾಗಿವೆ. ಈ ಪುರಾವೆಗಳಿಂದ ಡೀನ್ ಸಾಹೇಬರ ‘ಯೋಗ್ಯತೆ’ ಊರಿಗೆಲ್ಲ ಪಕ್ಕ ಆಗಿದೆ!! ಅವರ ಪರವಾಗಿ ಪತ್ರಕರ್ತ ಮಾಧವ ನಾಯ್ಕರೇಕೆ ವಕಾಲತ್ತು ವಹಿಸುತ್ತಿದ್ದಾರೆ ಎಂಬುದೇ ಸೋಜಿಗದ ಸಂಗತಿ.

ವಿಡಿಯೋ ಧೀರ ನಿತಿನ್ ಮಾಧವನಾಯ್ಕ್‍ರ ಜಾತಿ ಬಂಧು. ಆತನ ತಂದೆ ಕಾರವಾರದ ಪ್ರಮುಖ ರಾಜಕಾರಣಿ. ಹೀಗಾಗಿ ನಿತಿನ್‍ಗೆ ಪೂಸಿ ಹೊಡೆಯಬೇಕಾಗಿ ಬಂತು. ಮಾಧವನಾಯ್ಕ್ ನಿನಗೆ ಸಪೋರ್ಟ್ ಮಾಡ್ತೇನೆ ಎಂದು ನಿತಿನ್‍ಗೆ ಹೇಳಿದ್ದಂತೆ ಕಾಣುತ್ತಿದೆ. ಆದರೆ ಅವರೇ ಮರುದಿನ ನಿತಿನ್ ವಿಡಿಯೋ ಮಾಡಿದ್ದು ತಪ್ಪು ಎಂದು ಹೇಳಿಕೆ ಬದಲಾಯಿಸಿದ್ದರು. ಇದರಿಂದ ಕೆರಳಿದ ನಿತಿನ್ ಮಾಧವನಾಯ್ಕ್‍ರಿಗೆ ಫೋನಾಯಿಸಿ “ಇದೆಂಥ ವಿಶ್ವಾಸ ದ್ರೋಹ ಸಾರ್” ಎಂದಿದ್ದಾನೆ. ಕಕ್ಕಾಬಿಕ್ಕಿಯಾದ ಮಾಧವ ಏನೋ ಸಮಜಾಯಿಷಿ ಕೊಟ್ಟಿದ್ದಾರೆ. ನಿತಿನ್ ತನ್ನನ್ನು ನಾಲ್ಕು ದಿನದಿಂದ ಒಬ್ಬೇ ಒಬ್ಬ ಡಾಕ್ಟರ್ ಅಥವಾ ನರ್ಸ್ ಮಾತಾಡಿಸಿಲ್ಲ, ತಾನು ಕೊಳಚೆಯಲ್ಲಿದ್ದೇನೆ ಎಂದಿದ್ದಾನೆ. ಹಾಗಿದ್ದರೆ ಡಾ.ಗಜಾನನರಿಗೆ ಫೋನ್ ಸಂಪರ್ಕ ಮಡುತ್ತೇನೆ ನೀನೇ ಮಾತಾಡು ಎಂದಿದ್ದಾನೆ. ಮೂವರ ನಡುವೆ ಬರೋಬ್ಬರಿ ಮುವ್ವತ್ತಾ ಮೂರುವರೆ ನಿಮಿಷ ಕಾನ್ಫರೆನ್ಸ್ ಸಂಭಾಷಣೆ ನಡೆದಿದೆ.

ನಿತಿನ್‍ನ ಒಂದು ಪ್ರಶ್ನೆಗೂ ಉತ್ತರಿಸಲಾಗದೆ ಡಾ| ಗಜಾನನ ಮತ್ತು ಮಾಧವ ನಾಯ್ಕ್ ತಡವರಿಸಿದ್ದಾರೆ! ಈ ಆಡಿಯೋ ಸಹ ಜಿಲ್ಲೆಯಲ್ಲಿ ಹಿಟ್ ಆಗಿದೆ! ಈ ವಿಡಿಯೋ ಮತ್ತು ಆಡಿಯೋ ವಾರ್ ಜಿಲ್ಲಾಧಿಕಾರಿ ಡಾ| ಹರೀಶ್‍ಕುಮಾರ್ ಮತ್ತು ಶಾಸಕಿ ರೂಪಾಲಿ ನಾಯ್ಕ್ “ಸುಮ್ಮನೆ” ನೋಡಿದ್ದು ಅನೇಕ ಅನುಮಾನ ಮೂಡಿಸಿದೆ. ‘ಕೊರೊನಾ ಸಂಹಾರ ಸೈನ್ಯ’ದ ಸುಪ್ರೀಂ ಕಮಾಂಡರ್ ಆಗಿರುವ ಜಿಲ್ಲಾಧಿಕಾರಿ ಕಿಮ್ಸ್‍ನ ಕರ್ಮಕಾಂಡ ಕಂಡೂ ಕಾಣದಂತಿರುವುದೇಕೆ? ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡ್ತೇನೆಂದು ಭರವಸೆ ನೀಡುವ ಶಾಸಕಿ ರೂಪಾಲಿಯಮ್ಮ ಕೋವಿಡ್ ರೋಗಿಗಳಿಗೆ ಕೊಡಬೇಕಾದ ಮೊಟ್ಟೆ ಸಿಗದಿದ್ದರೂ ಕೇಳುತ್ತಿಲ್ಲ! ಹೀಗಿರುವಾಗ ಅದ್ಹೇಗೆ ಕಿಮ್ಸ್‍ನ ಅವ್ಯವಹಾರ-ಅವಾಂತರ ಪ್ರಶ್ನಿಸಿಯಾರು? ಒಟ್ಟಿನಲ್ಲಿ ಸಾವಿರಾರು ರೂಪಾಯಿ ಅನುದಾನದ ಕಿಮ್ಸ್‍ನ ಕೋವಿಡ್ ವಾರ್ಡ್‍ನಲ್ಲಿ ಬೇಲಿಯೇ ಹೊಲ ಮೇಯುತ್ತಿದೆ.


ಇದನ್ನು ಓದಿ: ಕರ್ನಾಟಕದ ಕೊರೊನಾ ಡಾಕ್ಟರ್ ಏನು ಹೇಳುತ್ತಾರೆ? ಡಾ.ಆಸಿಮ ಬಾನು ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...