Homeಕರ್ನಾಟಕಕಸಾಪ ಅಧ್ಯಕ್ಷ ಮಹೇಶ ಜೋಶಿ, ಗುರುಗೋವಿಂದ ಭಟ್ಟರ ಮರಿಮೊಮ್ಮಗ ಎಂಬುದು ಸುಳ್ಳು: ವರದಿ

ಕಸಾಪ ಅಧ್ಯಕ್ಷ ಮಹೇಶ ಜೋಶಿ, ಗುರುಗೋವಿಂದ ಭಟ್ಟರ ಮರಿಮೊಮ್ಮಗ ಎಂಬುದು ಸುಳ್ಳು: ವರದಿ

- Advertisement -
- Advertisement -

ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಂ ಬರಹಗಾರರನ್ನು ಹೊರಗಿಟ್ಟು ಕನ್ನಡತನವನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಮಹೇಶ ಜೋಶಿ ಮರೆತ್ತಿದ್ದಾರೆ ಎಂಬ ಆರೋಪಗಳು ಬಂದಿವೆ. ಇದರ ಬೆನ್ನಲ್ಲೇ ಕಸಾಪ ಅಧ್ಯಕ್ಷರು, “ನಾನು ಗುರು ಗೋವಿಂದಭಟ್ಟರ ಮರಿಮೊಮ್ಮಗ, ನನಗಿಂತ ಜಾತ್ಯತೀತ ವ್ಯಕ್ತಿ ಬೇಕಾ?” ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಗುರು ಗೋವಿಂದ ಭಟ್ಟರಿಗೂ ಮಹೇಶ ಜೋಶಿಯವರಿಗೂ ಯಾವುದೇ ಸಂಬಂಧವಿಲ್ಲ ಎಂದು ‘ಈ ದಿನ.ಕಾಂ’ ವಿಶೇಷ ವರದಿ ಮಾಡಿದೆ.

ಪತ್ರಕರ್ತ ನವೀನ್ ಸೂರಿಂಜೆಯವರು ಬರೆದಿರುವ ವರದಿಯಲ್ಲಿ, “ಮಹೇಶ ಜೋಶಿಯವರು ಸುಳ್ಳನ್ನು ಹೇಳುತ್ತಿದ್ದಾರೆ” ಎಂದು ಪ್ರತಿಪಾದಿಸಲಾಗಿದೆ. ಕಳಸದ ಗೋವಿಂದ ಭಟ್ಟರು ಮತ್ತು ಸಂತ ಶಿಶುನಾಳ ಶರೀಫರ ಗುರು-ಶಿಷ್ಯ ಸಂಬಂಧ ನಾಡಿನ ಅಸ್ಮಿತೆಗೆ ಬಹುದೊಡ್ಡ ಉದಾಹರಣೆ. ಆದರೆ ಗೋವಿಂದ ಭಟ್ಟರ ವಂಶಸ್ಥರೆಂದು ಮಹೇಶ ಜೋಶಿಯವರು ಹೇಳಿಕೊಂಡು ತಮ್ಮ ಕೋಮುವಾದಿ ಕಾರ್ಯಾಚರಣೆಯನ್ನು ಮರೆಮಾಚಲು ಯತ್ನಿಸುತ್ತಿರುವ ಆರೋಪಗಳು ಬಂದಿವೆ. ಇದರ ಬೆನ್ನಲ್ಲೇ ‘ಈ ದಿನ’ ವರದಿ ವಿಶೇಷ ಬೆಳಕು ಚೆಲ್ಲಿದೆ.

ಶಿಥಿಲಾವಾಸ್ಥೆಯಲ್ಲಿದ್ದ ಗುರುಗೋವಿಂದ ಭಟ್ಟರ ಗರ್ಭಗುಡಿ ಕಟ್ಟಿಸಿದ ಕಾಳಪ್ಪ ಕೊಟ್ರಪ್ಪ ಪ್ಯಾಟಿ ಅವರ ಪುತ್ರ ಹಾಗೂ ಗುರುಗೋವಿಂದ ಭಟ್ಟರ ಗುಡಿ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖಪ್ಪ ಕಾಳಪ್ಪ ಪ್ಯಾಟಿಯವರು ಪ್ರತಿಕ್ರಿಯಿಸಿದ್ದು, “ಗುರು ಗೋವಿಂದ ಭಟ್ಟರ ವಂಶಾವಳಿಗೂ, ಮಹೇಶ್ ಜೋಷಿಯವರ ವಂಶಾವಳಿಗೂ ಸಂಬಂಧವಿಲ್ಲ. ಅವೆರಡೂ ಬೇರೆ ಬೇರೆ ವಂಶಾವಳಿಗಳು. ಗುರು ಗೋವಿಂದ ಭಟ್ಟರ ಬಗ್ಗೆ ನಮ್ಮ ಹಿರಿಯರಲ್ಲಿ ಗೊಂದಲಗಳಿವೆ. ಗೋವಿಂದ ಭಟ್ಟರಿಗೆ ಅಣ್ಣ, ತಮ್ಮ ಇದ್ದರೇ ಎಂಬ ಪ್ರಶ್ನೆಗಳಿತ್ತು. ಆದರೆ ಗೋವಿಂದ ಭಟ್ಟರಿಗೆ ಅಣ್ಣ, ತಮ್ಮ ಇರಲಿಲ್ಲ. ಅವರ ಸಂಬಂಧಿಕರು ಯಾರೂ ಕೂಡಾ ಇಲ್ಲ” ಎಂದಿದ್ದಾರೆ.

“ಮಹೇಶ ಜೋಶಿ ಮತ್ತು ಗುರು ಗೋವಿಂದ ಭಟ್ಟರು ಇಬ್ಬರೂ ಬ್ರಾಹ್ಮಣರೇ ಎಂಬುದನ್ನು ಹೊರತುಪಡಿಸಿದರೆ ಇವರಿಬ್ಬರಿಗೂ ಇನ್ನಾವುದೇ ಸಂಬಂಧವೂ ಇಲ್ಲ. ಅವರು ಭಟ್ಟರು, ಇವರು ಜೋಷಿ. ಭಟ್ಟರೇ ಬೇರೆ, ಜೋಷಿಯವರೇ ಬೇರೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಮಹೇಶ್ ಜೋಷಿಯವರು ತಾನು ಗುರು ಗೋವಿಂದ ಭಟ್ಟರ ವಂಶಸ್ಥ ಎಂಬುದಕ್ಕೆ ದಾಖಲೆ ಕೊಡಬೇಕು. ಗುರು ಗೋವಿಂದ ಭಟ್ಟರ ವಂಶಸ್ಥರು ಯಾರೂ ಇಲ್ಲ. ಗುರು ಗೋವಿಂದ ಭಟ್ಟರ ವಂಶಸ್ಥರು ಯಾರೂ ಇಲ್ಲ ಎಂದೇ ನಾವು ತೀರ್ಮಾನಿಸಿರುವಾಗ ಈ ದೇವಸ್ಥಾನಕ್ಕೆ ಬಂದು ತಾನು ಗುರು ಗೋವಿಂದ ಭಟ್ಟರ ವಂಶಸ್ಥ ಎಂದು ಹೇಳುವವರು ದಾಖಲೆ ನೀಡಬೇಕಾಗುತ್ತದೆ” ಎಂದು ಒತ್ತಾಯಿಸಿದ್ದಾರೆ.

“ಗುರು ಗೋವಿಂದ ಭಟ್ಟರ ದೇವಸ್ಥಾನದಲ್ಲಿ ಈ ಹಿಂದೆ ಅವರ ವಂಶಸ್ಥರು ಪೂಜಾದಿಗಳನ್ನು ಮಾಡುತ್ತಿದ್ದರು. ಅವರ ವಂಶಸ್ಥರು ನಶಿಸಿ ಹೋದ್ದರಿಂದ ನಾವುಗಳು ಜೋಷಿ ಮನೆತನದವರನ್ನು ಕರೆದುಕೊಂಡು ಬಂದು ಅರ್ಚನೆ ಮಾಡುತ್ತಿದ್ದೇವೆ. ಈ ದೇವಸ್ಥಾನದ ಅರ್ಚಕರ ವಂಶಕ್ಕೂ ಮಹೇಶ್ ಜೋಷಿಗೂ ಸಂಬಂಧವಿದ್ದರೂ ಇರಬಹುದು. ಗುರುಗೋವಿಂದ ಭಟ್ಟರ ವಂಶಕ್ಕೂ ಮಹೇಶ್ ಜೋಷಿ ವಂಶಕ್ಕೂ ಸಂಬಂಧವಿಲ್ಲ” ಎಂದಿದ್ದಾರೆ.

ಗುರುಗೋವಿಂದ ಭಟ್ಟರ ಊರಾಗಿರುವ ಕಳಸ ಗ್ರಾಮದ ಹಿರಿಯ ಮುಖಂಡರೂ, ಗುರುಗೋವಿಂದ ಭಟ್ಟರ ದೇವಸ್ಥಾನ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಮಾತನಾಡುತ್ತಾ, “ಜೋಷಿಗೂ ಭಟ್ಟರಿಗೂ ಬ್ರಾಹ್ಮಣರು ಎಂಬುದನ್ನು ಹೊರತುಪಡಿಸಿದರೆ ಬೇರೆ ಸಂಬಂಧ ಇಲ್ಲ. ಗುರು ಗೋವಿಂದ ಭಟ್ಟರ ಮನೆತನದವರು ಯಾರೂ ಇಲ್ಲ. ಮಹೇಶ್ ಜೋಷಿ ಗುರು ಗೋವಿಂದ ಭಟ್ಟರ ಮನೆತನದವರಲ್ಲ. ಜೋಷಿ ಮನೆತನದವರು ಈ ದೇವಸ್ಥಾನದ ಪೂಜೆ ಮಾತ್ರ ಮಾಡುತ್ತಾರೆ. ಜೋಷಿ ಮನೆತನಕ್ಕೂ ನಮ್ಮ ಗುರುಗೋವಿಂದ ಭಟ್ಟ ದೇವಸ್ಥಾನಕ್ಕಾಗಲೀ, ಮನೆತನಕ್ಕಾಗಲೀ ಸಂಬಂಧವಿಲ್ಲ” ಎಂದು ತಿಳಿಸಿದ್ದಾರೆ.

ಈ ವರದಿಗೆ ಸಂಬಂಧಿಸಿದಂತೆ ಮಹೇಶ ಜೋಶಿಯವರ ಪ್ರತಿಕ್ರಿಯೆ ಪಡೆಯಲು ‘ನಾನುಗೌರಿ.ಕಾಂ’ ಪ್ರಯತ್ನಿಸಿತು. ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ. ಮುಸ್ಲಿಂ ಸಮುದಾಯವನ್ನು ಸಮ್ಮೇಳನದಿಂದ ಹೊರಗಿಟ್ಟಿರುವ ವಿವಾದ ಶುರುವಾದಾಗಿನಿಂದ ನಾಲ್ಕಾರು ಸಲ ಜೋಶಿಯವರಿಗೆ ಕರೆ ಮಾಡಲಾಗಿದ್ದು, ಈವರೆಗೆ ಒಂದಕ್ಕೂ ಪ್ರತಿಕ್ರಿಯೆ ನೀಡಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ಪೆಂಡಾಲ್ ದೋಸಿಗೆ, ಗೋವಿಂದ ಬಟ್ಟರ ಲಿಂಕೂ ಸಿಗಲಿಲ್ಲವಾ? ಮನುವಾದಿಗಳು ಸುಮ್ಮನಾಗುವುದಿಲ್ಲ. ಬೇರೆ ಯಾವುದಾದರೂ ದಾರಿ ಹುಡುಕುತ್ತಾರೆ. ಸದ್ಯಕ್ಕೆ ಗೋವಿಂದ ಬಟ್ಟರು ಇವನಿಂದ ಬಚಾವಾದರಲ್ಲ. ಅದು ಕನ್ನಡಿಗರಿಗೆ ಸಮಾದಾನಕರ ಸಂಗತಿ.

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...