Homeಮುಖಪುಟಕೇರಳ: ಸ್ವಿಗ್ಗಿ ಕೆಲಸಗಾರರಿಂದ ಮುಂದುವರಿದ ಮುಷ್ಕರ; ಬೇಡಿಕೆಗೆ ಸ್ಪಂದಿಸುವುದೇ ಕಂಪೆನಿ?

ಕೇರಳ: ಸ್ವಿಗ್ಗಿ ಕೆಲಸಗಾರರಿಂದ ಮುಂದುವರಿದ ಮುಷ್ಕರ; ಬೇಡಿಕೆಗೆ ಸ್ಪಂದಿಸುವುದೇ ಕಂಪೆನಿ?

- Advertisement -
- Advertisement -

ಕೇರಳದ ಕೊಚ್ಚಿಯಲ್ಲಿ 5,000 ಸ್ವಿಗ್ಗಿ ಉದ್ಯೋಗಿಗಳು ಹೆಚ್ಚಿನ ಸಂಭಾವನೆ ಮತ್ತು ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳಿಗಾಗಿ ಒತ್ತಾಯಿಸಿ ಮುಷ್ಕರ ನಡೆಸಿ 11 ದಿನಗಳು ಕಳೆದಿವೆ.

ಜಿಲ್ಲಾ ಕಾರ್ಮಿಕ ಅಧಿಕಾರಿಗಳು ನಡೆಸಿದ ಮಾತುಕತೆಗಳು ಮುರಿದು ಬಿದ್ದಿವೆ. ಸ್ವಿಗ್ಗಿಯು ತನ್ನ ಕಾರ್ಮಿಕರಿಗೆ ಸ್ಥಿರ ಮತ್ತು ವಿಶ್ವಾಸಾರ್ಹ ಆದಾಯದ ಅವಕಾಶಗಳನ್ನು ನೀಡುವುದಾಗಿ ಹೇಳುತ್ತಿದೆ. ಆದರೆ ಕಾರ್ಮಿಕರ ಪ್ರಮುಖ ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಭರವಸೆಯನ್ನು ನೀಡುತ್ತಿಲ್ಲ.

“ನಾನು ಬೆಳಿಗ್ಗೆ 8 ಗಂಟೆಗೆ ಅಪ್ಲಿಕೇಶನ್‌ಗೆ ಲಾಗಿನ್ ಆಗಿ, ಒಂಬತ್ತುವರೆವರೆಗೆ ಆರ್ಡರ್‌ಗಳನ್ನು ತೆಗೆದುಕೊಂಡರೆ, ನಾನು ಗಳಿಸುವ ಮೊತ್ತ ಗರಿಷ್ಠ 900 ರೂ. ಆಗಿರುತ್ತದೆ. ಅದರಲ್ಲಿ 400 ರೂ ಪೆಟ್ರೋಲ್‌ಗೆ ಹೋಗುತ್ತದೆ” ಎಂದು ಸ್ವಿಗ್ಗಿ ಡೆಲಿವರಿ ಪಾಲುದಾರರಾಗಿ ಅರೆಕಾಲಿಕ ಕೆಲಸ ಮಾಡುವ 27 ವರ್ಷದ ಬೆಸಿಲ್ ಎಲ್ಡೋ ಹೇಳುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“14 ಅಥವಾ 15 ಗಂಟೆಗಳ ಕಾಲ ಓಡಾಡಿದ ಬಳಿಕ, ಒಬ್ಬ ಉದ್ಯೋಗಿ ಕೇವಲ 300-400 ರೂ. ಗಳಿಸುತ್ತಾನೆ” ಎಂದು ವಿಷಾದಿಸುತ್ತಾರೆ ಬೆಸಿಲ್‌.

ಕೊಚ್ಚಿಯಲ್ಲಿರುವ ಸ್ವಿಗ್ಗಿ ಕಾರ್ಮಿಕರಿಗೆ ಪ್ರಸ್ತುತ ಪ್ರತಿ ಕಿ.ಮೀ.ಗೆ 5 ರೂ. ನೀಡಲಾಗುತ್ತಿದೆ. “ಆರ್ಡರ್‌ಗಳು ಕಡಿಮೆಯಾಗುತ್ತಿವೆ, ಆದರೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಇದರಿಂದಾಗಿ ಪ್ರತಿ ಕಿ.ಮೀಗೆ 8 ರೂ.ಗೆ ಹೆಚ್ಚಿಸಬೇಕು” ಎಂದು ಸ್ವಿಗ್ಗಿ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನೊಂದಿಗೆ ಸಂಯೋಜಿತವಾಗಿರುವ ‘ಫುಡ್ ಆನ್‌ಲೈನ್ ಡೆಲಿವರಿ ವರ್ಕರ್ಸ್ ಅಸೋಸಿಯೇಷನ್ (FODW) ಅಕ್ಟೋಬರ್ 31ರಂದು ಕೊಚ್ಚಿಯಲ್ಲಿರುವ ಸ್ವಿಗ್ಗಿ ಉದ್ಯೋಗಿಗಳ ಕಚೇರಿಗೆ ಪತ್ರ ಬರೆಯಿತು. “ಉದ್ಯೋಗದಲ್ಲಿನ ಅನ್ಯಾಯ, ಪಾವತಿ ರಚನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ” ಕುರಿತು ಪತ್ರದಲ್ಲಿ ಉಲ್ಲೇಖಿಸಲಾಯಿತು.

ಪ್ರತಿ ವಾರ ಇನ್‌ಸೆನ್‌ಟೀವ್ಸ್‌ ನೀಡಬೇಕು. ವಾರದಲ್ಲಿ ಕನಿಷ್ಠ ಎರಡು ದಿನ ರಜೆ, ಭವಿಷ್ಯ ನಿಧಿ ಪ್ರಯೋಜನ, ಪಾವತಿ ರಚನೆಯಲ್ಲಿ ಕಾರ್ಮಿಕರ ಅನುಮತಿ, ಎರಡೂವರೆಗೆ ಕಿಮಿಗೆ 35 ರೂಪಾಯಿ ಪಾವತಿ- ಸೇರಿದಂತೆ ಮೊದಲಾದ ಬೇಡಿಕೆಗಳನ್ನು ಇಡಲಾಯಿತು.

ನವೆಂಬರ್ 12ರಂದು, ಕೊಚ್ಚಿಯ ಮರೈನ್ ಡ್ರೈವ್ ಬಳಿಯ ಸ್ವಿಗ್ಗಿ ಕಚೇರಿಗೆ ಡೆಲಿವರಿ ಪಾರ್ಟ್‌ನರ್‌‌‌ ತೆರಳಿ ಕಂಪನಿಯ ಅಧಿಕಾರಿಗಳ ಜೊತೆ ಮಾತನಾಡಿದರು. ಸಭೆಯಲ್ಲಿ ಆಪರೇಷನ್ ಮ್ಯಾನೇಜರ್‌ ಸೇರಿದಂತೆ ಸ್ವಿಗ್ಗಿಯ ನಾಲ್ವರು ಅಧಿಕಾರಿಗಳು ಭಾಗವಹಿಸಿದ್ದರು. ಕೆಲವು ಬೇಡಿಕೆಗಳನ್ನು ಅಂಗೀಕರಿಸುವುದಾಗಿ ಹೇಳಿದ ಕಂಪನಿಯು ಪ್ರಮುಖ ಬೇಡಿಕೆಯಾದ ಪಾವತಿ ಹೆಚ್ಚಳವನ್ನು ಒಪ್ಪಲಿಲ್ಲ.

ನಂತರ ನವೆಂಬರ್ 14ರಂದು ಮುಷ್ಕರ ಪ್ರಾರಂಭವಾಯಿತು. ಅಂದು ರಾತ್ರಿ 11 ಗಂಟೆ ಸುಮಾರಿಗೆ ಮುಷ್ಕರ ನಿರತ ಕಾರ್ಮಿಕರು ಮತ್ತು ಸ್ವಿಗ್ಗಿ ಅಧಿಕಾರಿಗಳ ನಡುವೆ ಜಿಲ್ಲಾ ಕಾರ್ಮಿಕ ಅಧಿಕಾರಿ ಸಭೆ ಆಯೋಜಿಸಿದ್ದರು. “ನಾವು 2.5 ಕಿಮೀಗೆ 34 ರೂ ಕೇಳಿದ್ದೇವೆ” ಎಂದು ಹಾಜರಿದ್ದ ಬೇಸಿಲ್ ಹೇಳಿದರು. ಕಾರ್ಮಿಕ ಅಧಿಕಾರಿ ಪ್ರತಿ ನಾಲ್ಕು ಕಿ.ಮೀ.ಗೆ 30 ರೂ. ನೀಡುವುದಾಗಿ ಹೇಳಿದರು. ಕಾರ್ಮಿಕರ ಬೇಡಿಕೆಯನ್ನು ಸ್ವಿಗ್ಗಿ ತಿರಸ್ಕರಿಸಿತು ಮತ್ತು ಮುಷ್ಕರ ಮುಂದುವರೆಯಿತು.

ನವೆಂಬರ್ 17 ರಂದು, ಸುಮಾರು 300-400 ಸ್ವಿಗ್ಗಿ ಡೆಲಿವರಿ ಪಾರ್ಟ್‌‌ನರ್‌‌ ಮರೈನ್ ಡ್ರೈವ್‌ನಲ್ಲಿ ರ್‍ಯಾಲಿಯನ್ನು ನಡೆಸಿದರು. ನವೆಂಬರ್ 18 ರಂದು, ಎರ್ನಾಕುಲಂ ಪ್ರಾದೇಶಿಕ ಕಾರ್ಮಿಕ ಕಚೇರಿಯಲ್ಲಿ ಸ್ವಿಗ್ಗಿ ಅಧಿಕಾರಿಗಳು ಮತ್ತು ಕಾರ್ಮಿಕರ ನಡುವೆ ಎರಡನೇ ಸಭೆ ನಡೆಯಿತು. ಕಾರ್ಮಿಕರು ಪ್ರತಿ ಮೂರು ಕಿಮೀಗೆ 25 ರೂ ಕೇಳಿದರು. ಆದರೆ ಸ್ವಿಗ್ಗಿ ಕಂಪನಿಯು ಪ್ರತಿ ನಾಲ್ಕು ಕಿಮೀಗೆ 23 ರೂ. ನೀಡುವುದಾಗಿ ಹೇಳಿತು. ಕಾರ್ಮಿಕರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು.

ಮುಷ್ಕರ ಮುಂದುವರಿಯಲಿದೆ ಎಂದು FODW ಕಾರ್ಯದರ್ಶಿ ವಿಪಿನ್ ವಿನ್ಸೆಂಟ್ ‘ನ್ಯೂಸ್‌ಲಾಂಡ್ರಿ’ಗೆ ತಿಳಿಸಿದ್ದಾರೆ. “ನಾವು ಬಹಳ ಸಮಯದಿಂದ ಕಂಪನಿಗೆ ಸೇವೆ ಸಲ್ಲಿಸುತ್ತಿದ್ದೇವೆ” ಎಂದಿದ್ದಾರೆ. “ಡೆಲಿವರಿ ಕೆಲಸಗಾರರು ಈಗ ತಮ್ಮ ಹಕ್ಕುಗಳ ಬಗ್ಗೆ ತಿಳಿದಿದ್ದಾರೆ. ಹೀಗಾಗಿ ನಮ್ಮ ಹಕ್ಕು ಸಿಗುವವರೆಗೂ ಹೋರಾಟ ನಡೆಸುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿರಿ: ಗುಜರಾತ್‌: 2036ರ ಒಲಂಪಿಕ್ಸ್‌ ಆಯೋಜನೆ ಕನಸು ಕಂಡ ಬಿಜೆಪಿ ಪ್ರಣಾಳಿಕೆ

ನವೆಂಬರ್ 25 ರಂದು ಕಾರ್ಮಿಕರು ಎರ್ನಾಕುಲಂ ಜಿಲ್ಲಾಧಿಕಾರಿಗಳಿಗೆ ಮುಷ್ಕರದ ಕಾಲಮಿತಿಯೊಂದಿಗೆ ಪತ್ರವನ್ನು ಸಲ್ಲಿಸಿದರು. “ದಯವಿಟ್ಟು ಮನವಿಯನ್ನು ಸ್ವೀಕರಿಸಿ, ನಾವು ಎತ್ತಿರುವ ಬೇಡಿಕೆಗಳನ್ನು ಪಡೆಯಲು ನಮಗೆ ಸಹಾಯ ಮಾಡಿ” ಎಂದು ಒತ್ತಾಯಿಸಲಾಗಿದೆ. ಸೋಮವಾರ ಮತ್ತೊಂದು ಸಭೆಗೆ ಕಾರ್ಮಿಕ ಕಚೇರಿ ಕರೆದಿದೆ ಎಂದು ಬೆಸಿಲ್ ಮಾಹಿತಿ ನೀಡಿದ್ದಾರೆ.

ಸ್ವಿಗ್ಗಿ, ಜೊಮೊಟೊ, ಊಬರ್‌‌, ಓಲಾ ಥರದ ಆನ್‌ಲೈನ್‌ ಸೇವೆಗಳು ಕೆಲಸಗಾರರ ಹಕ್ಕುಗಳನ್ನು ನಿರ್ಲಕ್ಷಿಸುತ್ತಿರುವ ಕುರಿತು ಮೊದಲಿನಿಂದಲೂ ಆಕ್ಷೇಪಗಳು ಬರುತ್ತಿವೆ. ಸ್ವಿಗ್ಗಿ, ಜೊಮೊಟೊದಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಡೆಲಿವರಿ ಕೆಲಸಗಾರರು ಮಾತನಾಡಲಾರಂಭಿಸಿದ್ದಾರೆ.

ಆ್ಯಪ್ ಆಧಾರಿತ ಕೆಲಸಗಾರರಿಗೆ ಭದ್ರತೆ ನೀಡುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದಿದೆ. ಪ್ರತಿವಾದಿ ಸ್ಥಾನದಲ್ಲಿರುವ ಕೇಂದ್ರ ಸರ್ಕಾರ ಇನ್ನೂ ಈ ವಿಚಾರದಲ್ಲಿ ಅಫಿಡವಿಟ್ ಸಲ್ಲಿಸಿಲ್ಲ.

ವರದಿ ಕೃಪೆ: ನ್ಯೂಸ್‌ ಲಾಂಡ್ರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...