Homeಮುಖಪುಟಖಬರ್ ಲಹರಿಯಾ: ದಲಿತ ಹೆಣ್ಣು ಮಕ್ಕಳ ಯಶಸ್ವಿ ಪತ್ರಿಕೋದ್ಯಮ

ಖಬರ್ ಲಹರಿಯಾ: ದಲಿತ ಹೆಣ್ಣು ಮಕ್ಕಳ ಯಶಸ್ವಿ ಪತ್ರಿಕೋದ್ಯಮ

ಇವತ್ತು ‘ಖಬರ್ ಲಹರಿಯಾ’ ಅಲ್ಲಿನ ಓದುಗರ ಹೃದಯದ ಪತ್ರಿಕೆಯಾಗಲು ಮುಖ್ಯ ಕಾರಣ, ಜನರಾಡುವ ಭಾಷೆಗಳಲ್ಲಿ ಇದು ಪ್ರಕಟವಾಗುವುದು.

- Advertisement -
- Advertisement -

ಡಾ. ಸ್ವಾತಿ ಶುಕ್ಲ

ಕನ್ನಡಕ್ಕೆ : ಮಲ್ಲನಗೌಡರ್ ಪಿ.ಕೆ

ನಟರಂತೆ ಹಾವಭಾವ ಪ್ರದರ್ಶಿಸುತ್ತ ದಿನವೀಡೀ ಅರಚಾಡುವ ಟಿವಿ ನಿರೂಪಕರಿಂದ ತಲೆ ಚಿಟ್ಟು ಹಿಡಿದಿದೆಯಾ? ಮತ್ತದೇ ಮೋದಿ ವರ್ಸಸ್ ರಾಹುಲ್ ಎಂಬ ಎರಡೇ ಆಯ್ಕೆಗಳ ಮೂರ್ಖತನವೂ ನಿಮಗೆ ಬೋರ್ ಹೊಡೆಸಿದೆಯಾ? ಹಾಗಾದರೆ ನೀವು ಪರ್ಯಾಯ ಮಾಧ್ಯಮದತ್ತ ಮುಖ ಮಾಡಲೇಬೇಕಾದ ಸಮಯವಿದು.

ಯಾವ ಬಂಡವಾಳಶಾಹಿಯ ಹಂಗಿಲ್ಲದೇ ಜನರೇ ಹಲವು ಪತ್ರಿಕೆಗಳನ್ನು ತರುವ ಮೂಲಕ ತಳ ಸಮುದಾಯಗಳಲ್ಲಿ ಎಚ್ಚರ ಮೂಡಿಸುವ ಯತ್ನಗಳು ದೇಶದ ಅಲ್ಲಲ್ಲಿ ನಡೆದಿವೆ. ಅಂತಹ ಒಂದು ಅಮೋಘ ಸಾಹಸವೇ ‘ಖಬರ್ ಲಹರಿಯಾ’… ಅಂದರೆ ಸುದ್ದಿಯ ಅಲೆಗಳು.. ‘ಖಬರ್ ಲಹರಿಯಾ’ ಎಂಬ ಈ ವಾರಪತ್ರಿಕೆಗೆ ಹಲವು ವೈಶಿಷ್ಟ್ಯಗಳು ಮತ್ತು ತನ್ನದೇ ಆದ ಅನನ್ಯತೆಯಿದೆ. ಮಹಿಳೆಯರಿಂದ ನಡೆಸಲ್ಪಡುವ ಸ್ವತಂತ್ರ, ಗ್ರಾಮೀಣ ವಿಷಯಾಧಾರಿತ ಮೊದಲ ಭಾರತೀಯ ವಾರಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಯದ್ದು.

ಗ್ರಾಮೀಣ ಮಹಿಳೆಯರೇ ಸೇರಿಕೊಂಡು ಇಂತಹ ಪ್ರಯೋಗ ಮಾಡಿ ಉತ್ತರ ಭಾರತದ ಗ್ರಾಮಗಳಲ್ಲಿ ಯಶಸ್ವಿಯಾಗಿದ್ದು ಇದೇ ಮೊದಲು. ಮಹಿಳೆಯರೇ ಬರೆಯುತ್ತಾರೆ, ಎಡಿಟ್ ಮಾಡುತ್ತಾರೆ, ಫೋಟೊಗ್ರಫಿ ಕೂಡ ಅವರದೇ. ವಿಷಯ ಆಯ್ಕೆಯನ್ನು ಅವರೇ ಮಾಡುತ್ತಾರೆ ಮಾತ್ರವಲ್ಲ ಮಾರ್ಕೆಟಿಂಗ್ ಕೂಡ ಮಹಿಳೆಯರೆ ನಿಭಾಯಿಸುತ್ತಾರೆ. ಅಂದಂತೆ, ಈ ಮಹಿಳೆಯರ ಪೈಕಿ ಬಹುಪಾಲು ಜನ ದಲಿತ, ಆದಿವಾಸಿ ಮತ್ತು ಮುಸ್ಲಿಮ ಸಮುದಾಯಗಳಿಗೆ ಸೇರಿದವರು. ಈ ಸಮುದಾಯಗಳಿಂದಲೇ ಮಹಿಳೆಯರನ್ನು ಆಯ್ಕೆ ಮಾಡಿ, ಅವರಿಗೆ ವರದಿಗಾರಿಕೆ, ಫೋಟೊಗ್ರಫಿ, ವಿಡಿಯೋ ಮಾಡುವುದರ ಕುರಿತು ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ.

ಪತ್ರಿಕೆಗಳೇ ಇಲ್ಲದ ಗ್ರಾಮಗಳಿಗೆ ‘ಖಬರ್ ಲಹರಿಯಾ’ ಸುದ್ದಿಯ ಅಲೆಗಳನ್ನು, ಅದೂ ಬದುಕಿನ ಕುರಿತಾದ, ಮಹಿಳೆಯ ಬದುಕಿನ ಕುರಿತಾದ ವಿಷಯಗಳನ್ನು ತರುತ್ತಿದೆ. ಮೊದಲು ಇದು ಉತ್ತರಪ್ರದೇಶದ ಬುಂದೇಲ್‍ಖಂಡದಲ್ಲಿ ಶುರುವಾಗಿತು. ಲೈಂಗಿಕ ಹಕ್ಕುಗಳ ಕುರಿತು ಕೆಲಸ ಮಾಡುವ ದೆಹಲಿ ಮೂಲದ ‘ನಿರಂತರ್’ ಎಂಬ ಸಂಘಟನೆಯ ಆಸಕ್ತಿಯಿಂದ 2002ರಲ್ಲಿ ಈ ಪ್ರಯೋಗ ಅರಳಿತು. ಆಗ ಈ ಪತ್ರಿಕೆಯ ಹೆಸರು ‘ಮಹಿಳಾ ಢಾಕಿಯಾ’ (ಮಹಿಳಾ ಅಂಚೆಪೇದೆ).

ಇವತ್ತು ‘ಖಬರ್ ಲಹರಿಯಾ’ ಅಲ್ಲಿನ ಓದುಗರ ಹೃದಯದ ಪತ್ರಿಕೆಯಾಗಲು ಮುಖ್ಯ ಕಾರಣ, ಜನರಾಡುವ ಭಾಷೆಗಳಲ್ಲಿ ಇದು ಪ್ರಕಟವಾಗುವುದು. ಮೊದಲು ಬುಂದೇಲಿ ಭಾಷೆಯಲ್ಲಿ ಬಂದ ಪತ್ರಿಕೆ ಈಗ ತಳ ಸಮುದಾಯಗಳ ಐದು ಭಾಷೆಗಳಿಗೆ (ಬಜ್ಜಿಕಾ, ಅವಧಿ, ಹಿಂದೂಸ್ತಾನಿ, ಭೋಜಪುರಿ) ವಿಸ್ತರಣೆಗೊಂಡಿದೆ. ಗ್ರಾಮೀಣ ಮಹಿಳೆಯರಿಗಾಗಿಯೇ ಈ ಪತ್ರಿಕೆ ಬರುತ್ತಿದ್ದು, ಬಹಳಷ್ಟು ಕಡೆ, ಅನಕ್ಷರಸ್ಥರು ಇರುವಲ್ಲಿ ಪತ್ರಿಕೆ ವರದಿಗಾರೇ ಜನರ ಎದುರು ಪತ್ರಿಕೆಯನ್ನು ಓದಿ ವಿವರಿಸುತ್ತಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರಗಳಲ್ಲಿ 80 ಸಾವಿರ ಓದುಗರನ್ನು ಹೊಂದಿರುವ ಈ ಪತ್ರಿಕೆ ಎರಡು ವರ್ಷಗಳ ಹಿಂದೆ ತನ್ನ ಡಿಜಿಟಲ್ ಆವೃತ್ತಿಯನ್ನು ಹೊರ ತಂದು, ನಗರವಾಸಿಗಳನ್ನೂ ತಲುಪುತ್ತಿದೆ. ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ತಿಂಗಳಿಗೆ 50 ಲಕ್ಷ ಜನರನ್ನು ಇದು ತಲುಪುತ್ತಿದೆ.

ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ 13 ಜಿಲ್ಲೆಗಳಲ್ಲಿ 30 ವರದಿಗಾರು ಮತ್ತು ಸ್ಟಿಂಜರ್‌ಗಳನ್ನು ಹೊಂದಿರುವ ಲಹರಿಯಾ, ಗ್ರಾಮೀಣ ಸಮಸ್ಯೆಗಳು, ದುಡಿಯುವ ಜನರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುತ್ತ ಬಂದಿದೆ. ಜನಪ್ರತಿನಿಧಿಗಳು ಕುಡಿಯುವ ನೀರು, ಶೌಚಾಲಯ ವವ್ಯಸ್ಥೆ ಮಾಡಿದ್ದಾರೋ ಇಲ್ಲವೋ ಎಂಬ ಕುರಿತಾಗಿ ರಿಯಾಲಿಟಿ ಚೆಕ್ ವರದಿಗಳನ್ನು ಬರೆದು ಜನರಲ್ಲಿ ಅರಿವು ತುಂಬಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ವಿಶೇಷ ಪುರವಣಿಯನ್ನೂ ತರಲಾಗುತ್ತಿದೆ. 2018ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ‘ಯೋಗಿ ಟ್ರ್ಯಾಕರ್’ ಎಂಬ ಅಂಕಣವನ್ನೇ ಆರಂಭಿಸಲಾಗಿತು. ಗ್ರಾಮೀಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಬೆಳಕಿಗೆ ತರಲು ‘ಮೀಟೂ’ ಚಳವಳಿಯನ್ನು ಕೂಡ ಈ ಪತ್ರಿಕೆ ನಡೆಸುತ್ತಿದೆ.

ಖಬರ್ ಲಹರಿಯಾದ ಅನನ್ಯ ಸಾಧನೆಯನ್ನು ಮೆಚ್ಚಿ ಯುನೆಸ್ಕೊ ಪ್ರಶಸ್ತಿಯನ್ನು ನೀಡಿದೆ. ಜರ್ಮನಿಯ ಚಾನೆಲ್ಲೊಂದು ಕೂಡ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಗೌರವ, ಪ್ರಶಸ್ತಿ ಪಡೆದು ಮುನ್ನುಗುತ್ತಿರುವ ‘ಖಬರ್ ಲಹರಿಯಾ’ ಪ್ರಜಾಪ್ರಭುತ್ವದ ಬೆಳಕು, ಹೊಸತನದ ಅಲೆ…. ಜೊತೆಗೆ ಕನ್ನಡದ ಸ್ವತಂತ್ರ ಮಾಧ್ಯಮಗಳಿಗೆ ಮಾದರಿ.


ಇದನ್ನೂ ಓದಿ; ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...