Homeಮುಖಪುಟಖಬರ್ ಲಹರಿಯಾ: ದಲಿತ ಹೆಣ್ಣು ಮಕ್ಕಳ ಯಶಸ್ವಿ ಪತ್ರಿಕೋದ್ಯಮ

ಖಬರ್ ಲಹರಿಯಾ: ದಲಿತ ಹೆಣ್ಣು ಮಕ್ಕಳ ಯಶಸ್ವಿ ಪತ್ರಿಕೋದ್ಯಮ

ಇವತ್ತು ‘ಖಬರ್ ಲಹರಿಯಾ’ ಅಲ್ಲಿನ ಓದುಗರ ಹೃದಯದ ಪತ್ರಿಕೆಯಾಗಲು ಮುಖ್ಯ ಕಾರಣ, ಜನರಾಡುವ ಭಾಷೆಗಳಲ್ಲಿ ಇದು ಪ್ರಕಟವಾಗುವುದು.

- Advertisement -
- Advertisement -

ಡಾ. ಸ್ವಾತಿ ಶುಕ್ಲ

ಕನ್ನಡಕ್ಕೆ : ಮಲ್ಲನಗೌಡರ್ ಪಿ.ಕೆ

ನಟರಂತೆ ಹಾವಭಾವ ಪ್ರದರ್ಶಿಸುತ್ತ ದಿನವೀಡೀ ಅರಚಾಡುವ ಟಿವಿ ನಿರೂಪಕರಿಂದ ತಲೆ ಚಿಟ್ಟು ಹಿಡಿದಿದೆಯಾ? ಮತ್ತದೇ ಮೋದಿ ವರ್ಸಸ್ ರಾಹುಲ್ ಎಂಬ ಎರಡೇ ಆಯ್ಕೆಗಳ ಮೂರ್ಖತನವೂ ನಿಮಗೆ ಬೋರ್ ಹೊಡೆಸಿದೆಯಾ? ಹಾಗಾದರೆ ನೀವು ಪರ್ಯಾಯ ಮಾಧ್ಯಮದತ್ತ ಮುಖ ಮಾಡಲೇಬೇಕಾದ ಸಮಯವಿದು.

ಯಾವ ಬಂಡವಾಳಶಾಹಿಯ ಹಂಗಿಲ್ಲದೇ ಜನರೇ ಹಲವು ಪತ್ರಿಕೆಗಳನ್ನು ತರುವ ಮೂಲಕ ತಳ ಸಮುದಾಯಗಳಲ್ಲಿ ಎಚ್ಚರ ಮೂಡಿಸುವ ಯತ್ನಗಳು ದೇಶದ ಅಲ್ಲಲ್ಲಿ ನಡೆದಿವೆ. ಅಂತಹ ಒಂದು ಅಮೋಘ ಸಾಹಸವೇ ‘ಖಬರ್ ಲಹರಿಯಾ’… ಅಂದರೆ ಸುದ್ದಿಯ ಅಲೆಗಳು.. ‘ಖಬರ್ ಲಹರಿಯಾ’ ಎಂಬ ಈ ವಾರಪತ್ರಿಕೆಗೆ ಹಲವು ವೈಶಿಷ್ಟ್ಯಗಳು ಮತ್ತು ತನ್ನದೇ ಆದ ಅನನ್ಯತೆಯಿದೆ. ಮಹಿಳೆಯರಿಂದ ನಡೆಸಲ್ಪಡುವ ಸ್ವತಂತ್ರ, ಗ್ರಾಮೀಣ ವಿಷಯಾಧಾರಿತ ಮೊದಲ ಭಾರತೀಯ ವಾರಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಯದ್ದು.

ಗ್ರಾಮೀಣ ಮಹಿಳೆಯರೇ ಸೇರಿಕೊಂಡು ಇಂತಹ ಪ್ರಯೋಗ ಮಾಡಿ ಉತ್ತರ ಭಾರತದ ಗ್ರಾಮಗಳಲ್ಲಿ ಯಶಸ್ವಿಯಾಗಿದ್ದು ಇದೇ ಮೊದಲು. ಮಹಿಳೆಯರೇ ಬರೆಯುತ್ತಾರೆ, ಎಡಿಟ್ ಮಾಡುತ್ತಾರೆ, ಫೋಟೊಗ್ರಫಿ ಕೂಡ ಅವರದೇ. ವಿಷಯ ಆಯ್ಕೆಯನ್ನು ಅವರೇ ಮಾಡುತ್ತಾರೆ ಮಾತ್ರವಲ್ಲ ಮಾರ್ಕೆಟಿಂಗ್ ಕೂಡ ಮಹಿಳೆಯರೆ ನಿಭಾಯಿಸುತ್ತಾರೆ. ಅಂದಂತೆ, ಈ ಮಹಿಳೆಯರ ಪೈಕಿ ಬಹುಪಾಲು ಜನ ದಲಿತ, ಆದಿವಾಸಿ ಮತ್ತು ಮುಸ್ಲಿಮ ಸಮುದಾಯಗಳಿಗೆ ಸೇರಿದವರು. ಈ ಸಮುದಾಯಗಳಿಂದಲೇ ಮಹಿಳೆಯರನ್ನು ಆಯ್ಕೆ ಮಾಡಿ, ಅವರಿಗೆ ವರದಿಗಾರಿಕೆ, ಫೋಟೊಗ್ರಫಿ, ವಿಡಿಯೋ ಮಾಡುವುದರ ಕುರಿತು ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ.

ಪತ್ರಿಕೆಗಳೇ ಇಲ್ಲದ ಗ್ರಾಮಗಳಿಗೆ ‘ಖಬರ್ ಲಹರಿಯಾ’ ಸುದ್ದಿಯ ಅಲೆಗಳನ್ನು, ಅದೂ ಬದುಕಿನ ಕುರಿತಾದ, ಮಹಿಳೆಯ ಬದುಕಿನ ಕುರಿತಾದ ವಿಷಯಗಳನ್ನು ತರುತ್ತಿದೆ. ಮೊದಲು ಇದು ಉತ್ತರಪ್ರದೇಶದ ಬುಂದೇಲ್‍ಖಂಡದಲ್ಲಿ ಶುರುವಾಗಿತು. ಲೈಂಗಿಕ ಹಕ್ಕುಗಳ ಕುರಿತು ಕೆಲಸ ಮಾಡುವ ದೆಹಲಿ ಮೂಲದ ‘ನಿರಂತರ್’ ಎಂಬ ಸಂಘಟನೆಯ ಆಸಕ್ತಿಯಿಂದ 2002ರಲ್ಲಿ ಈ ಪ್ರಯೋಗ ಅರಳಿತು. ಆಗ ಈ ಪತ್ರಿಕೆಯ ಹೆಸರು ‘ಮಹಿಳಾ ಢಾಕಿಯಾ’ (ಮಹಿಳಾ ಅಂಚೆಪೇದೆ).

ಇವತ್ತು ‘ಖಬರ್ ಲಹರಿಯಾ’ ಅಲ್ಲಿನ ಓದುಗರ ಹೃದಯದ ಪತ್ರಿಕೆಯಾಗಲು ಮುಖ್ಯ ಕಾರಣ, ಜನರಾಡುವ ಭಾಷೆಗಳಲ್ಲಿ ಇದು ಪ್ರಕಟವಾಗುವುದು. ಮೊದಲು ಬುಂದೇಲಿ ಭಾಷೆಯಲ್ಲಿ ಬಂದ ಪತ್ರಿಕೆ ಈಗ ತಳ ಸಮುದಾಯಗಳ ಐದು ಭಾಷೆಗಳಿಗೆ (ಬಜ್ಜಿಕಾ, ಅವಧಿ, ಹಿಂದೂಸ್ತಾನಿ, ಭೋಜಪುರಿ) ವಿಸ್ತರಣೆಗೊಂಡಿದೆ. ಗ್ರಾಮೀಣ ಮಹಿಳೆಯರಿಗಾಗಿಯೇ ಈ ಪತ್ರಿಕೆ ಬರುತ್ತಿದ್ದು, ಬಹಳಷ್ಟು ಕಡೆ, ಅನಕ್ಷರಸ್ಥರು ಇರುವಲ್ಲಿ ಪತ್ರಿಕೆ ವರದಿಗಾರೇ ಜನರ ಎದುರು ಪತ್ರಿಕೆಯನ್ನು ಓದಿ ವಿವರಿಸುತ್ತಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರಗಳಲ್ಲಿ 80 ಸಾವಿರ ಓದುಗರನ್ನು ಹೊಂದಿರುವ ಈ ಪತ್ರಿಕೆ ಎರಡು ವರ್ಷಗಳ ಹಿಂದೆ ತನ್ನ ಡಿಜಿಟಲ್ ಆವೃತ್ತಿಯನ್ನು ಹೊರ ತಂದು, ನಗರವಾಸಿಗಳನ್ನೂ ತಲುಪುತ್ತಿದೆ. ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ತಿಂಗಳಿಗೆ 50 ಲಕ್ಷ ಜನರನ್ನು ಇದು ತಲುಪುತ್ತಿದೆ.

ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ 13 ಜಿಲ್ಲೆಗಳಲ್ಲಿ 30 ವರದಿಗಾರು ಮತ್ತು ಸ್ಟಿಂಜರ್‌ಗಳನ್ನು ಹೊಂದಿರುವ ಲಹರಿಯಾ, ಗ್ರಾಮೀಣ ಸಮಸ್ಯೆಗಳು, ದುಡಿಯುವ ಜನರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುತ್ತ ಬಂದಿದೆ. ಜನಪ್ರತಿನಿಧಿಗಳು ಕುಡಿಯುವ ನೀರು, ಶೌಚಾಲಯ ವವ್ಯಸ್ಥೆ ಮಾಡಿದ್ದಾರೋ ಇಲ್ಲವೋ ಎಂಬ ಕುರಿತಾಗಿ ರಿಯಾಲಿಟಿ ಚೆಕ್ ವರದಿಗಳನ್ನು ಬರೆದು ಜನರಲ್ಲಿ ಅರಿವು ತುಂಬಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ವಿಶೇಷ ಪುರವಣಿಯನ್ನೂ ತರಲಾಗುತ್ತಿದೆ. 2018ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ‘ಯೋಗಿ ಟ್ರ್ಯಾಕರ್’ ಎಂಬ ಅಂಕಣವನ್ನೇ ಆರಂಭಿಸಲಾಗಿತು. ಗ್ರಾಮೀಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಬೆಳಕಿಗೆ ತರಲು ‘ಮೀಟೂ’ ಚಳವಳಿಯನ್ನು ಕೂಡ ಈ ಪತ್ರಿಕೆ ನಡೆಸುತ್ತಿದೆ.

ಖಬರ್ ಲಹರಿಯಾದ ಅನನ್ಯ ಸಾಧನೆಯನ್ನು ಮೆಚ್ಚಿ ಯುನೆಸ್ಕೊ ಪ್ರಶಸ್ತಿಯನ್ನು ನೀಡಿದೆ. ಜರ್ಮನಿಯ ಚಾನೆಲ್ಲೊಂದು ಕೂಡ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಗೌರವ, ಪ್ರಶಸ್ತಿ ಪಡೆದು ಮುನ್ನುಗುತ್ತಿರುವ ‘ಖಬರ್ ಲಹರಿಯಾ’ ಪ್ರಜಾಪ್ರಭುತ್ವದ ಬೆಳಕು, ಹೊಸತನದ ಅಲೆ…. ಜೊತೆಗೆ ಕನ್ನಡದ ಸ್ವತಂತ್ರ ಮಾಧ್ಯಮಗಳಿಗೆ ಮಾದರಿ.


ಇದನ್ನೂ ಓದಿ; ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...