Homeಮುಖಪುಟಖಬರ್ ಲಹರಿಯಾ: ದಲಿತ ಹೆಣ್ಣು ಮಕ್ಕಳ ಯಶಸ್ವಿ ಪತ್ರಿಕೋದ್ಯಮ

ಖಬರ್ ಲಹರಿಯಾ: ದಲಿತ ಹೆಣ್ಣು ಮಕ್ಕಳ ಯಶಸ್ವಿ ಪತ್ರಿಕೋದ್ಯಮ

ಇವತ್ತು ‘ಖಬರ್ ಲಹರಿಯಾ’ ಅಲ್ಲಿನ ಓದುಗರ ಹೃದಯದ ಪತ್ರಿಕೆಯಾಗಲು ಮುಖ್ಯ ಕಾರಣ, ಜನರಾಡುವ ಭಾಷೆಗಳಲ್ಲಿ ಇದು ಪ್ರಕಟವಾಗುವುದು.

- Advertisement -
- Advertisement -

ಡಾ. ಸ್ವಾತಿ ಶುಕ್ಲ

ಕನ್ನಡಕ್ಕೆ : ಮಲ್ಲನಗೌಡರ್ ಪಿ.ಕೆ

ನಟರಂತೆ ಹಾವಭಾವ ಪ್ರದರ್ಶಿಸುತ್ತ ದಿನವೀಡೀ ಅರಚಾಡುವ ಟಿವಿ ನಿರೂಪಕರಿಂದ ತಲೆ ಚಿಟ್ಟು ಹಿಡಿದಿದೆಯಾ? ಮತ್ತದೇ ಮೋದಿ ವರ್ಸಸ್ ರಾಹುಲ್ ಎಂಬ ಎರಡೇ ಆಯ್ಕೆಗಳ ಮೂರ್ಖತನವೂ ನಿಮಗೆ ಬೋರ್ ಹೊಡೆಸಿದೆಯಾ? ಹಾಗಾದರೆ ನೀವು ಪರ್ಯಾಯ ಮಾಧ್ಯಮದತ್ತ ಮುಖ ಮಾಡಲೇಬೇಕಾದ ಸಮಯವಿದು.

ಯಾವ ಬಂಡವಾಳಶಾಹಿಯ ಹಂಗಿಲ್ಲದೇ ಜನರೇ ಹಲವು ಪತ್ರಿಕೆಗಳನ್ನು ತರುವ ಮೂಲಕ ತಳ ಸಮುದಾಯಗಳಲ್ಲಿ ಎಚ್ಚರ ಮೂಡಿಸುವ ಯತ್ನಗಳು ದೇಶದ ಅಲ್ಲಲ್ಲಿ ನಡೆದಿವೆ. ಅಂತಹ ಒಂದು ಅಮೋಘ ಸಾಹಸವೇ ‘ಖಬರ್ ಲಹರಿಯಾ’… ಅಂದರೆ ಸುದ್ದಿಯ ಅಲೆಗಳು.. ‘ಖಬರ್ ಲಹರಿಯಾ’ ಎಂಬ ಈ ವಾರಪತ್ರಿಕೆಗೆ ಹಲವು ವೈಶಿಷ್ಟ್ಯಗಳು ಮತ್ತು ತನ್ನದೇ ಆದ ಅನನ್ಯತೆಯಿದೆ. ಮಹಿಳೆಯರಿಂದ ನಡೆಸಲ್ಪಡುವ ಸ್ವತಂತ್ರ, ಗ್ರಾಮೀಣ ವಿಷಯಾಧಾರಿತ ಮೊದಲ ಭಾರತೀಯ ವಾರಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಯದ್ದು.

ಗ್ರಾಮೀಣ ಮಹಿಳೆಯರೇ ಸೇರಿಕೊಂಡು ಇಂತಹ ಪ್ರಯೋಗ ಮಾಡಿ ಉತ್ತರ ಭಾರತದ ಗ್ರಾಮಗಳಲ್ಲಿ ಯಶಸ್ವಿಯಾಗಿದ್ದು ಇದೇ ಮೊದಲು. ಮಹಿಳೆಯರೇ ಬರೆಯುತ್ತಾರೆ, ಎಡಿಟ್ ಮಾಡುತ್ತಾರೆ, ಫೋಟೊಗ್ರಫಿ ಕೂಡ ಅವರದೇ. ವಿಷಯ ಆಯ್ಕೆಯನ್ನು ಅವರೇ ಮಾಡುತ್ತಾರೆ ಮಾತ್ರವಲ್ಲ ಮಾರ್ಕೆಟಿಂಗ್ ಕೂಡ ಮಹಿಳೆಯರೆ ನಿಭಾಯಿಸುತ್ತಾರೆ. ಅಂದಂತೆ, ಈ ಮಹಿಳೆಯರ ಪೈಕಿ ಬಹುಪಾಲು ಜನ ದಲಿತ, ಆದಿವಾಸಿ ಮತ್ತು ಮುಸ್ಲಿಮ ಸಮುದಾಯಗಳಿಗೆ ಸೇರಿದವರು. ಈ ಸಮುದಾಯಗಳಿಂದಲೇ ಮಹಿಳೆಯರನ್ನು ಆಯ್ಕೆ ಮಾಡಿ, ಅವರಿಗೆ ವರದಿಗಾರಿಕೆ, ಫೋಟೊಗ್ರಫಿ, ವಿಡಿಯೋ ಮಾಡುವುದರ ಕುರಿತು ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ.

ಪತ್ರಿಕೆಗಳೇ ಇಲ್ಲದ ಗ್ರಾಮಗಳಿಗೆ ‘ಖಬರ್ ಲಹರಿಯಾ’ ಸುದ್ದಿಯ ಅಲೆಗಳನ್ನು, ಅದೂ ಬದುಕಿನ ಕುರಿತಾದ, ಮಹಿಳೆಯ ಬದುಕಿನ ಕುರಿತಾದ ವಿಷಯಗಳನ್ನು ತರುತ್ತಿದೆ. ಮೊದಲು ಇದು ಉತ್ತರಪ್ರದೇಶದ ಬುಂದೇಲ್‍ಖಂಡದಲ್ಲಿ ಶುರುವಾಗಿತು. ಲೈಂಗಿಕ ಹಕ್ಕುಗಳ ಕುರಿತು ಕೆಲಸ ಮಾಡುವ ದೆಹಲಿ ಮೂಲದ ‘ನಿರಂತರ್’ ಎಂಬ ಸಂಘಟನೆಯ ಆಸಕ್ತಿಯಿಂದ 2002ರಲ್ಲಿ ಈ ಪ್ರಯೋಗ ಅರಳಿತು. ಆಗ ಈ ಪತ್ರಿಕೆಯ ಹೆಸರು ‘ಮಹಿಳಾ ಢಾಕಿಯಾ’ (ಮಹಿಳಾ ಅಂಚೆಪೇದೆ).

ಇವತ್ತು ‘ಖಬರ್ ಲಹರಿಯಾ’ ಅಲ್ಲಿನ ಓದುಗರ ಹೃದಯದ ಪತ್ರಿಕೆಯಾಗಲು ಮುಖ್ಯ ಕಾರಣ, ಜನರಾಡುವ ಭಾಷೆಗಳಲ್ಲಿ ಇದು ಪ್ರಕಟವಾಗುವುದು. ಮೊದಲು ಬುಂದೇಲಿ ಭಾಷೆಯಲ್ಲಿ ಬಂದ ಪತ್ರಿಕೆ ಈಗ ತಳ ಸಮುದಾಯಗಳ ಐದು ಭಾಷೆಗಳಿಗೆ (ಬಜ್ಜಿಕಾ, ಅವಧಿ, ಹಿಂದೂಸ್ತಾನಿ, ಭೋಜಪುರಿ) ವಿಸ್ತರಣೆಗೊಂಡಿದೆ. ಗ್ರಾಮೀಣ ಮಹಿಳೆಯರಿಗಾಗಿಯೇ ಈ ಪತ್ರಿಕೆ ಬರುತ್ತಿದ್ದು, ಬಹಳಷ್ಟು ಕಡೆ, ಅನಕ್ಷರಸ್ಥರು ಇರುವಲ್ಲಿ ಪತ್ರಿಕೆ ವರದಿಗಾರೇ ಜನರ ಎದುರು ಪತ್ರಿಕೆಯನ್ನು ಓದಿ ವಿವರಿಸುತ್ತಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರಗಳಲ್ಲಿ 80 ಸಾವಿರ ಓದುಗರನ್ನು ಹೊಂದಿರುವ ಈ ಪತ್ರಿಕೆ ಎರಡು ವರ್ಷಗಳ ಹಿಂದೆ ತನ್ನ ಡಿಜಿಟಲ್ ಆವೃತ್ತಿಯನ್ನು ಹೊರ ತಂದು, ನಗರವಾಸಿಗಳನ್ನೂ ತಲುಪುತ್ತಿದೆ. ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ತಿಂಗಳಿಗೆ 50 ಲಕ್ಷ ಜನರನ್ನು ಇದು ತಲುಪುತ್ತಿದೆ.

ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ 13 ಜಿಲ್ಲೆಗಳಲ್ಲಿ 30 ವರದಿಗಾರು ಮತ್ತು ಸ್ಟಿಂಜರ್‌ಗಳನ್ನು ಹೊಂದಿರುವ ಲಹರಿಯಾ, ಗ್ರಾಮೀಣ ಸಮಸ್ಯೆಗಳು, ದುಡಿಯುವ ಜನರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುತ್ತ ಬಂದಿದೆ. ಜನಪ್ರತಿನಿಧಿಗಳು ಕುಡಿಯುವ ನೀರು, ಶೌಚಾಲಯ ವವ್ಯಸ್ಥೆ ಮಾಡಿದ್ದಾರೋ ಇಲ್ಲವೋ ಎಂಬ ಕುರಿತಾಗಿ ರಿಯಾಲಿಟಿ ಚೆಕ್ ವರದಿಗಳನ್ನು ಬರೆದು ಜನರಲ್ಲಿ ಅರಿವು ತುಂಬಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ವಿಶೇಷ ಪುರವಣಿಯನ್ನೂ ತರಲಾಗುತ್ತಿದೆ. 2018ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ‘ಯೋಗಿ ಟ್ರ್ಯಾಕರ್’ ಎಂಬ ಅಂಕಣವನ್ನೇ ಆರಂಭಿಸಲಾಗಿತು. ಗ್ರಾಮೀಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಬೆಳಕಿಗೆ ತರಲು ‘ಮೀಟೂ’ ಚಳವಳಿಯನ್ನು ಕೂಡ ಈ ಪತ್ರಿಕೆ ನಡೆಸುತ್ತಿದೆ.

ಖಬರ್ ಲಹರಿಯಾದ ಅನನ್ಯ ಸಾಧನೆಯನ್ನು ಮೆಚ್ಚಿ ಯುನೆಸ್ಕೊ ಪ್ರಶಸ್ತಿಯನ್ನು ನೀಡಿದೆ. ಜರ್ಮನಿಯ ಚಾನೆಲ್ಲೊಂದು ಕೂಡ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಗೌರವ, ಪ್ರಶಸ್ತಿ ಪಡೆದು ಮುನ್ನುಗುತ್ತಿರುವ ‘ಖಬರ್ ಲಹರಿಯಾ’ ಪ್ರಜಾಪ್ರಭುತ್ವದ ಬೆಳಕು, ಹೊಸತನದ ಅಲೆ…. ಜೊತೆಗೆ ಕನ್ನಡದ ಸ್ವತಂತ್ರ ಮಾಧ್ಯಮಗಳಿಗೆ ಮಾದರಿ.


ಇದನ್ನೂ ಓದಿ; ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...