Homeಮುಖಪುಟಲಂಕೇಶ್-86; ದಾರಿದೀಪವಾದ ಲಂಕೇಶ್ ಪತ್ರಿಕೆ; ಲಂಕೇಶ್ ಪತ್ರಿಕೆಯ ಪ್ರೂಫ್‌ರೀಡರ್ ಒಬ್ಬರ ನೆನಪುಗಳು

ಲಂಕೇಶ್-86; ದಾರಿದೀಪವಾದ ಲಂಕೇಶ್ ಪತ್ರಿಕೆ; ಲಂಕೇಶ್ ಪತ್ರಿಕೆಯ ಪ್ರೂಫ್‌ರೀಡರ್ ಒಬ್ಬರ ನೆನಪುಗಳು

ಪತ್ರಿಕೆ ಮೂಲಕ ಹುಟ್ಟಿಬಂದ ಬರಹಗಾರರೂ ಅಸಂಖ್ಯ. ಇವರುಗಳ ಜತೆ ನಾನೂ ಕೆಲಸ ಮಾಡಿರುವುದು ನನ್ನ ಪುಣ್ಯ. ಜೀವನದ ದಿಕ್ಕನ್ನೇ ಬದಲಾಯಿಸಿದ ಸಂದರ್ಭ

- Advertisement -
- Advertisement -

’ಯಾವ ಮನುಷ್ಯನಲ್ಲಿ ಶ್ರದ್ಧೆ, ಆಸಕ್ತಿ ಇರುತ್ತದೋ ಆತ ಜೀವನದಲ್ಲಿ ಮುಂದೆ ಬರಲು ಸಾಧ್ಯ, ಉನ್ನತ ಸ್ಥಾನಕ್ಕೂ ಏರಬಹುದು’.

ಇದನ್ನು ನಮ್ಮ ಮೇಷ್ಟ್ರು ಲಂಕೇಶ್ ಪದೇ ಪದೇ ಹೇಳುತ್ತಿದ್ದರು. ಇವರ ಈ ಧ್ಯೇಯವಾಕ್ಯವನ್ನು ಪಾಲಿಸಿದವರು ನಮ್ಮ ಕಣ್ಣಮುಂದಯೇ ಬೆಳೆದು, ಹೆಸರು ಗೌರವಗಳನ್ನು ಗಳಿಸಿದ್ದಾರೆ. ಟಿ.ಎನ್ ಸೀತಾರಾಂ, ಸಿ.ಎಸ್ ದ್ವಾರಕಾನಾಥ್, ಆರ್ ಶಂಕರ್, ಡಿ.ಆರ್ ನಾಗರಾಜ್, ಶೂದ್ರ ಶ್ರೀನಿವಾಸ್, ಸದಾಶಿವ ಶೆಣೈ – ಹೀಗೆ ಅವರ ನಿಕಟವರ್ತಿಗಳ ಪಟ್ಟಿ ಮಾಡುತ್ತಾ ಹೋದರೆ ಕೊನೆ ಮೊದಲಿಲ್ಲ. ಪತ್ರಿಕೆ ಮೂಲಕ ಹುಟ್ಟಿಬಂದ ಬರಹಗಾರರೂ ಅಸಂಖ್ಯ. ಇವರುಗಳ ಜತೆ ನಾನೂ ಕೆಲಸ ಮಾಡಿರುವುದು ನನ್ನ ಪುಣ್ಯ. ಜೀವನದ ದಿಕ್ಕನ್ನೇ ಬದಲಾಯಿಸಿದ ಸಂದರ್ಭ.

ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಉರುಫ್ ಗುಂ ಹಾಗೂ ಬಂಗಾರಪ್ಪ ಉರುಫ್ ಬಂ ಹಾಗೂ ದೇವರಾಜ ಅರಸರ ಕಾಲದಲ್ಲಿ ಪತ್ರಿಕೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ರಾಜಕಾರಣಿಗಳಿಗೆ ಒಂದು ತರಹ ಸಿಂಹಸ್ವಪ್ನದಂತಾಗಿತ್ತು. ಪತ್ರಿಕೆ ಪ್ರಕಟವಾಗುವುದನ್ನೇ ಕಾಯುತ್ತಿದ್ದ ಓದುಗರು ಸಂಜೆವಾಣಿ ಪತ್ರಿಕೆ ಕಚೇರಿಯ ಹತ್ತಿರವೇ ಬಂದುಬಿಡುತ್ತಿದ್ದರು. (ಏಕೆಂದರೆ ಲಂಕೇಶ್ ಪತ್ರಿಕೆ ಪ್ರಿಂಟ್ ಆಗುತ್ತಿದ್ದುದು ಅಲ್ಲಿಯೇ). ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಎಲ್ಲ ಕಾಲಮ್‌ಗಳಿಗೆ ವಿವಿಧ ರೀತಿಯ ಓದುಗರು ಇರುತ್ತಿದ್ದರು. ಅವೆಲ್ಲವೂ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು.

ಮುಖ್ಯಮಂತ್ರಿಯಾಗಿದ್ದ ಜೆ.ಎಚ್ ಪಟೇಲ್, ಎಂಪಿ ಪ್ರಕಾಶ್, ಅನಂತನಾಗ್, ಜಯಮಾಲ, ಬಿ.ಎಲ್ ಶಂಕರ್ ಇನ್ನೂ ಹಲವು ರಾಜಕಾರಣಿಗಳು ಕೂಡ ಮೇಷ್ಟ್ರು ಅವರ ಒಡನಾಟವನ್ನು ಇಟ್ಟುಕೊಂಡಿದ್ದರು. ತಿಂಗಳಿಗೊಂದು ಸಲ ಅವರ ತೋಟದಲ್ಲಿ ಸಾಹಿತಿಗಳು, ರಾಜಕಾರಣಿಗಳು, ಸ್ನೇಹಿತರು ಎಲ್ಲ ಸೇರಿ ಸಂವಾದ, ಹರಟೆ, ರಾಜಕೀಯ ವಿಶ್ಲೇಷಣೆ, ಚಿಂತನಮಂಥನ ನಡೆಸೋ ಕ್ಷಣ – ಇವೆಲ್ಲ ನೆನಪಿಸಿಕೊಂಡರೆ ಗತಕಾಲದ ವೈಭವ ಮತ್ತೆ ಮರುಕಳಿಸಬಾರದೇ ಎಂದೆನಿಸುತ್ತದೆ.

ನಾನು 83ರಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನಾನು ಲಂಕೇಶ್ ಪತ್ರಿಕೆ ಓದುವುದು ಮಾತ್ರವಲ್ಲ ಅದರ ಅಭಿಮಾನಿಯಾಗಿದ್ದೆ. ’ತುಂಟಾಟ’ ಕಾಲಮ್ ಓದುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ. ಅವುಗಳ ಕಟಿಂಗ್ಸ್‌ನ್ನೆಲ್ಲ ಒಂದು ಪುಸ್ತಕದಲ್ಲಿ ಸಂಗ್ರಹಿಸಿ ಈಗಲೂ ಇಟ್ಟಿರುವೆ. ಇವೆಲ್ಲ ಇಂದಿಗೂ ನನಗೆ ಅಮೂಲ್ಯ ರತ್ನಗಳು. ಎಷ್ಟೇ ಹಣ ಕೊಟ್ಟರೂ ಸಿಗದಂತಹ ಮುತ್ತುಗಳು.

ರಾಷ್ಟ್ರೋತ್ಥಾನ ಸಂಸ್ಥೆಯವರು ಬೇಡ ಲಂಕೇಶ್ ಪತ್ರಿಕೆ ಇವತ್ತಲ್ಲ ನಾಳೆ ನಿಂತು ಹೋಗುತ್ತದೆ. ರಾಜಕಾರಣಿಗಳು ಇದರ ಮೇಲೆ ಒಂದು ಕಣ್ಣು ಇಟ್ಟಿದ್ದಾರೆ. ಯಾವತ್ತಿದ್ದರೂ ಅಪಾಯವೇ ಇಲ್ಲೇ ಇರಿ ಎಂದು ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದೆ ಲಂಕೇಶ್‌ಗೆ ಬಂದು ಸೇರಿಕೊಂಡೆ. ಮೇಷ್ಟ್ರು ನನ್ನನ್ನು ಸಂದರ್ಶನ ಮಾಡಿ ತಾನಾಗಿ 600 ಸಂಬಳಕ್ಕೆ ಗೊತ್ತು ಮಾಡಿದರೂ ತಿಂಗಳಾದ ಮೇಲೆ ಕೊಟ್ಟಿದ್ದು 700. 100 ಹೆಚ್ಚಿಗೆ ಕೊಟ್ಟಿದ್ದು ನನಗೆ ಆನೆ ಬಲ ಬಂದಂತೆ ಆಯಿತು.

ಲಂಕೇಶ್ ಪತ್ರಿಕೆಯಲ್ಲಿ ಸೇರಿದ್ದಾನೆ ಎಂಬ ಕಾರಣಕ್ಕಾಗಿಯೇ ಎಷ್ಟೋ ಕಡೆ ಹೆಣ್ಣು ಕೊಡಲು ಮುಂದೆ ಬರುತ್ತಿದ್ದರು. ಆದರೆ ಪಟ್ಟು ಬಿಡದೇ ’ಲಂಕೇಶ್ ಎಂಬ ನಾಮಬಲದಿಂದ ನಮ್ಮ ಸಂಬಂಧಿಕರಲ್ಲೇ ನನಗೆ ಲಗ್ನವಾಯಿತು. ಎಲ್ಲೇ ಹೋಗಲಿ ಎಲ್ಲಿ ಕೆಲಸ ಎಂದರೆ ಹೇಳಿಕೊಳ್ಳಲು ಒಂದು ಹೆಮ್ಮೆ. ಆಗ ವಾರ ಪತ್ರಿಕೆ ಸುಧಾ ಬಿಟ್ಟರೆ ಲಂಕೇಶ್ ಪತ್ರಿಕೆಯ ಸರ್ಕುಲೇಶನ್ ಉನ್ನತ ತಲುಪಿತ್ತು. ಸುಮಾರು ಒಂದೂವರೆ ಲಕ್ಷದಷ್ಟು ಪ್ರಸಾರವಿತ್ತು. ಇದರಿಂದ ನನಗೂ ಒಂದು ಗೌರವ ಸ್ಥಾನಮಾನ ಸಿಗುತ್ತಿತ್ತು. ನನ್ನ ಪಾಲಿಗೆ ಜೀವನದ ದಾರಿದೀಪವಾಗಿ ಮುಂದುವರೆದಿತ್ತು ಪತ್ರಿಕೆ.

ರಾಷ್ಟ್ರೋತ್ಥಾನ ಸಂಸ್ಥೆಯವರು ಹೆದರಿಸಿದ್ದಾಗ ಆಗಿದ್ದ ಭಯ ಪತ್ರಿಕೆಗೆ ಬಂದ ಮೇಲೆ ತನ್ನಿಂದತಾನೇ ದೂರವಾಯಿತು. ಜೆ.ಎಚ್ ಪಟೇಲ್, ಎಂ.ಪಿ ಪ್ರಕಾಶ್, ಅನಂತನಾಗ್, ಚಿತ್ರನಟಿ ತಾರಾ, ಜಯಮಾಲ ಇವರುಗಳನ್ನೆಲ್ಲ ಹತ್ತಿರದಿಂದ ನೋಡುವ ಸೌಭಾಗ್ಯ ದೊರಕಿದಂತಾಗಿತ್ತು.

ಮೇಷ್ಟ್ರರ ಕಾಲಮ್ಮುಗಳಂತೂ ಓದುಗರಿಗೆ ಅಚ್ಚುಮೆಚ್ಚು. ಛೆಛೆ ಕಾಲಮ್, ರಾಜಕಾರಣಿಗಳಿಗೆ ಛಾಟಿ ಏಟಿನಂತಿತ್ತು. ಕಣ್ಣಾಮುಚ್ಚಾಲೆ ಕಾಲಮ್ ಕಚಗುಳಿ ಇಟ್ಟರೆ, ಹಲವರಿಗೆ ಪರಸ್ಪರ ವಿಳಾಸ ತಿಳಿದುಕೊಳ್ಳಲು ಸಹಾಯ ಮಾಡಿ ಸರಳ ಮದುವೆಗಳಿಗೆ ಕಾರಣವಾಗಿದೆ. ಮರೆಯುವ ಮುನ್ನ ಓದುಗರಿಗೆ ಪ್ರಿಯವಾದ ಕಾಲಮ್ಮು. ಯುವ ಪೀಳಿಗೆಗೆ ’ತುಂಟಾಟ’ ಕಾಲಮ್ ನೆನಪಿನಲ್ಲಿ ಉಳಿಯುವ ಹಾಸ್ಯವಾಗಿ ಮತ್ತು ಒಂದು ತರಹ ಕಚಗುಳಿಯಿಡುವ ಚುಟುಕಾಗಿತ್ತು. ಬಿ.ಎ ಶ್ರೀಧರ್ ರವರ ’ಪ್ರಪಂಚ ಪರ್ಯಟನೆ’, ಬಾಲಾಜಿ ಅವರ ಗಾರ್ದಭನಗರಿ, ಪ್ರಸಿದ್ಧ ಕಲಾವಿದ ಪಂಜುಗಂಗೊಳ್ಳಿ ಅವರ ‘ಅರೇಬಿಯನ್ ನೈಟ್ಸ್’ ಓದುಗರನ್ನು ಮಂತ್ರಮುಗ್ಧರನ್ನಾಗಿಸಿ, ಮುಂದಿನ ವಾರಕ್ಕೆ ಕಾದು ಓದಲು ಪ್ರೋತ್ಸಾಹಿಸುತ್ತಿದ್ದವು.

ಚಂದ್ರೇಗೌಡರ ಕಟ್ಟೆಪುರಾಣ, ಸುದ್ದಿಬಿಂಬ, ಟೀಕೆಟಿಪ್ಪಣಿ, ಸಿನಿಮಾ ಕಾಲಂ, ವಿದೇಶ ಸುದ್ದಿ, ಎಚ್‌ಎಲ್‌ಕೆ ಅವರ ರಾಜಕೀಯ ವಿಡಂಬನೆ ಹೀಗೆ ಹಲವು ಕಾಲಮ್‌ಗಳು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು. ವಿಧಾನಸೌಧದ ಪಡಸಾಲೆಯಲ್ಲಿಯೂ ಲಂಕೇಶ್ ಪತ್ರಿಕೆ ಕಲರವ ಮೂಡಿತ್ತು. ಹೆಗಡೆ ಸರ್ಕಾರವನ್ನು ಬೆಚ್ಚಿ ಬೀಳಿಸಿದಂತೆಯೇ ಲಂಕೇಶ್ ಪತ್ರಿಕೆ ವರದಿಗಳು ರೇವಜೀತು ಹಗರಣದಲ್ಲಿ ಅಂದಿನ ಸರ್ಕಾರದ ಬುಡ ಅಲ್ಲಾಡಿಸಿದ್ದವು.
ಲಂಕೇಶ್ ಮೇಷ್ಟ್ರನ್ನು ಒಂದು ಅರ್ಥದಲ್ಲಿ ಅನ್ನದಾತ ಸುಖೀಭವ ಅನ್ನಬೇಕು! ಏಕೆಂದರೆ ಕಚೇರಿಯ ಮೇಲಿನ ಕೋಣೆಯಲ್ಲಿ 60 ಜನರಿಗೆ ಅಡುಗೆ ಮಾಡಿಸಿಕೊಡುತ್ತಿದ್ದರು. ಅದಕ್ಕಾಗಿ ತಿಂಗಳಿಗೆ ಸಂಬಳದಿಂದ ಹಿಡಿಯುತ್ತಿದ್ದುದು ಕೇವಲ 60ರೂ ಮಾತ್ರ. ದಿನಕ್ಕೊಂದು ತರಹೇವಾರಿ ತರಕಾರಿಯ ಸಾಂಬಾರು, ಅನ್ನ ಮಜ್ಜಿಗೆ, ತುಪ್ಪ, ಹಪ್ಪಳ, ರಾಗಿಮುದ್ದೆ ಹೀಗೆ ರುಚಿಕಟ್ಟಿನ ಮತ್ತು ಪ್ರೀತಿಪಾತ್ರದ ಅಡುಗೆಗೆ ಬೆಲೆ ಕಟ್ಟಲಾದೀತೇ! ನಮ್ಮ ಬಡತನವನ್ನು ಮರೆಸುತ್ತಿದ್ದ ಕ್ಷಣಗಳು ಅವು.

ಈಗ ಅವನ್ನೆಲ್ಲ ನೆನಪಿಸಿಕೊಂಡರೆ, ಆ ದಿನಗಳು ಮತ್ತೆ ಮರುಕಳಿಸಬಾರದೆ ಎನಿಸುತ್ತದೆ. ಲಂಕೇಶ್ ಮರಣಾನಂತರ ಪತ್ರಿಕೆ ಮುಗಿಯಿತು ಎನ್ನುತ್ತಿದ್ದಂತೆ ದೆಹಲಿಯ ಇಂಗ್ಲಿಷ್ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗೌರಿ ಮೇಡಂ ಹಲವು ಬುದ್ಧಿಜೀವಿಗಳ ಒತ್ತಾಯದ ಮೇರೆಗೆ ಪತ್ರಿಕೆ ಮುಂದುವರೆಸಲು ಕೈ ಹಿಡಿದರು. ಆದರೆ ಕನ್ನಡವೇ ಗೊತ್ತಿಲ್ಲದ ಅವರಿಗೆ ಹೇಗೆ ನಿಭಾಯಿಸಲು ಸಾಧ್ಯ ಎಂಬ ಸಂದೇಹ ಹಲವರಲ್ಲಿ ಮೂಡಿದ್ದೂ ನಿಜ. ಹಲವು ಬುದ್ಧಿಜೀವಿಗಳ ಒಡನಾಟ, ಪ್ರೋತ್ಸಾಹ ಮತ್ತು ಸ್ವಯಂ ಶ್ರದ್ಧೆಯಿಂದ ಗೌರಿ ಲಂಕೇಶ್ ಅವರು ಕನ್ನಡ ಕಲಿತು ಪತ್ರಿಕೆಗೆ ಸಂಪಾದಕಿ ಆದದ್ದು ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಅವರು ಕೂಡ ಹೊಸ ಕಾಲಮ್ ಶುರುಮಾಡಿ ಅದು ಪ್ರಸಿದ್ದಿಯೂ ಪಡೆಯಿತು. ಕೊನೆಗೆ ಹಂತಕರ ಗುಂಡಿಗೆ ಮೇಡಂ ಬಲಿಯಾದದ್ದು ದುರದೃಷ್ಟಕರ ಮತ್ತು ದುರಂತ.

ಲಂಕೇಶರ 86ನೇ ಜನ್ಮದಿನದ ಮತ್ತು ಲಂಕೇಶ್ ಪತ್ರಿಕೆಗೆ 40 ದಾಟಿರುವ ಈ ಸಂದರ್ಭದಲ್ಲಿ ಆ ಕಾಲದ ಗತ ವೈಭವಗಳನ್ನು ನೆನಪು ಮಾಡಿಕೊಳ್ಳುವುದರಿಂದ ಎಷ್ಟು ಉಪಯೋಗ.ಆದರೆ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದ, ಹೊಸ ತಿರುವನ್ನು ನೀಡಿದ ಲಂಕೇಶ್ ಪತ್ರಿಕೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನನಗೆ ದಾರಿದೀಪವಾಗಿ ಲಂಕೇಶ್ ಪತ್ರಿಕೆಗೆ ಮತ್ತು ಈಗ ನಮ್ಮ ಜೊತೆಗೆ ಭೌತಿಕವಾಗಿ ಇರದಿದ್ದರೂ ನೆನಪನಲ್ಲಿ ಅಚ್ಚಳಿಯದೆ ಉಳಿದಿರುವ ಮೇಷ್ಟ್ರಿಗೆ Many Many Thanks.

ಎಚ್. ಎನ್.ದ್ವಾರಕಾನಾಥ್

ಎಚ್ ಎನ್ ದ್ವಾರಕಾನಾಥ್
ಲಂಕೇಶ್ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಸುಮಾರು ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದವರು ದ್ವಾರಕಾನಾಥ್. ಈಗ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ಸರ್ಕಾರ ಎಂದರೆ ದೇಶ ಅಲ್ಲ… ದೇಶವೆಂಬುದು ಸರ್ಕಾರಕ್ಕಿಂತ ದೊಡ್ಡದು: ಡಿ ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...