Homeಮುಖಪುಟಲಂಕೇಶ್-86; ದಾರಿದೀಪವಾದ ಲಂಕೇಶ್ ಪತ್ರಿಕೆ; ಲಂಕೇಶ್ ಪತ್ರಿಕೆಯ ಪ್ರೂಫ್‌ರೀಡರ್ ಒಬ್ಬರ ನೆನಪುಗಳು

ಲಂಕೇಶ್-86; ದಾರಿದೀಪವಾದ ಲಂಕೇಶ್ ಪತ್ರಿಕೆ; ಲಂಕೇಶ್ ಪತ್ರಿಕೆಯ ಪ್ರೂಫ್‌ರೀಡರ್ ಒಬ್ಬರ ನೆನಪುಗಳು

ಪತ್ರಿಕೆ ಮೂಲಕ ಹುಟ್ಟಿಬಂದ ಬರಹಗಾರರೂ ಅಸಂಖ್ಯ. ಇವರುಗಳ ಜತೆ ನಾನೂ ಕೆಲಸ ಮಾಡಿರುವುದು ನನ್ನ ಪುಣ್ಯ. ಜೀವನದ ದಿಕ್ಕನ್ನೇ ಬದಲಾಯಿಸಿದ ಸಂದರ್ಭ

- Advertisement -
- Advertisement -

’ಯಾವ ಮನುಷ್ಯನಲ್ಲಿ ಶ್ರದ್ಧೆ, ಆಸಕ್ತಿ ಇರುತ್ತದೋ ಆತ ಜೀವನದಲ್ಲಿ ಮುಂದೆ ಬರಲು ಸಾಧ್ಯ, ಉನ್ನತ ಸ್ಥಾನಕ್ಕೂ ಏರಬಹುದು’.

ಇದನ್ನು ನಮ್ಮ ಮೇಷ್ಟ್ರು ಲಂಕೇಶ್ ಪದೇ ಪದೇ ಹೇಳುತ್ತಿದ್ದರು. ಇವರ ಈ ಧ್ಯೇಯವಾಕ್ಯವನ್ನು ಪಾಲಿಸಿದವರು ನಮ್ಮ ಕಣ್ಣಮುಂದಯೇ ಬೆಳೆದು, ಹೆಸರು ಗೌರವಗಳನ್ನು ಗಳಿಸಿದ್ದಾರೆ. ಟಿ.ಎನ್ ಸೀತಾರಾಂ, ಸಿ.ಎಸ್ ದ್ವಾರಕಾನಾಥ್, ಆರ್ ಶಂಕರ್, ಡಿ.ಆರ್ ನಾಗರಾಜ್, ಶೂದ್ರ ಶ್ರೀನಿವಾಸ್, ಸದಾಶಿವ ಶೆಣೈ – ಹೀಗೆ ಅವರ ನಿಕಟವರ್ತಿಗಳ ಪಟ್ಟಿ ಮಾಡುತ್ತಾ ಹೋದರೆ ಕೊನೆ ಮೊದಲಿಲ್ಲ. ಪತ್ರಿಕೆ ಮೂಲಕ ಹುಟ್ಟಿಬಂದ ಬರಹಗಾರರೂ ಅಸಂಖ್ಯ. ಇವರುಗಳ ಜತೆ ನಾನೂ ಕೆಲಸ ಮಾಡಿರುವುದು ನನ್ನ ಪುಣ್ಯ. ಜೀವನದ ದಿಕ್ಕನ್ನೇ ಬದಲಾಯಿಸಿದ ಸಂದರ್ಭ.

ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಉರುಫ್ ಗುಂ ಹಾಗೂ ಬಂಗಾರಪ್ಪ ಉರುಫ್ ಬಂ ಹಾಗೂ ದೇವರಾಜ ಅರಸರ ಕಾಲದಲ್ಲಿ ಪತ್ರಿಕೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ರಾಜಕಾರಣಿಗಳಿಗೆ ಒಂದು ತರಹ ಸಿಂಹಸ್ವಪ್ನದಂತಾಗಿತ್ತು. ಪತ್ರಿಕೆ ಪ್ರಕಟವಾಗುವುದನ್ನೇ ಕಾಯುತ್ತಿದ್ದ ಓದುಗರು ಸಂಜೆವಾಣಿ ಪತ್ರಿಕೆ ಕಚೇರಿಯ ಹತ್ತಿರವೇ ಬಂದುಬಿಡುತ್ತಿದ್ದರು. (ಏಕೆಂದರೆ ಲಂಕೇಶ್ ಪತ್ರಿಕೆ ಪ್ರಿಂಟ್ ಆಗುತ್ತಿದ್ದುದು ಅಲ್ಲಿಯೇ). ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಎಲ್ಲ ಕಾಲಮ್‌ಗಳಿಗೆ ವಿವಿಧ ರೀತಿಯ ಓದುಗರು ಇರುತ್ತಿದ್ದರು. ಅವೆಲ್ಲವೂ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು.

ಮುಖ್ಯಮಂತ್ರಿಯಾಗಿದ್ದ ಜೆ.ಎಚ್ ಪಟೇಲ್, ಎಂಪಿ ಪ್ರಕಾಶ್, ಅನಂತನಾಗ್, ಜಯಮಾಲ, ಬಿ.ಎಲ್ ಶಂಕರ್ ಇನ್ನೂ ಹಲವು ರಾಜಕಾರಣಿಗಳು ಕೂಡ ಮೇಷ್ಟ್ರು ಅವರ ಒಡನಾಟವನ್ನು ಇಟ್ಟುಕೊಂಡಿದ್ದರು. ತಿಂಗಳಿಗೊಂದು ಸಲ ಅವರ ತೋಟದಲ್ಲಿ ಸಾಹಿತಿಗಳು, ರಾಜಕಾರಣಿಗಳು, ಸ್ನೇಹಿತರು ಎಲ್ಲ ಸೇರಿ ಸಂವಾದ, ಹರಟೆ, ರಾಜಕೀಯ ವಿಶ್ಲೇಷಣೆ, ಚಿಂತನಮಂಥನ ನಡೆಸೋ ಕ್ಷಣ – ಇವೆಲ್ಲ ನೆನಪಿಸಿಕೊಂಡರೆ ಗತಕಾಲದ ವೈಭವ ಮತ್ತೆ ಮರುಕಳಿಸಬಾರದೇ ಎಂದೆನಿಸುತ್ತದೆ.

ನಾನು 83ರಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನಾನು ಲಂಕೇಶ್ ಪತ್ರಿಕೆ ಓದುವುದು ಮಾತ್ರವಲ್ಲ ಅದರ ಅಭಿಮಾನಿಯಾಗಿದ್ದೆ. ’ತುಂಟಾಟ’ ಕಾಲಮ್ ಓದುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ. ಅವುಗಳ ಕಟಿಂಗ್ಸ್‌ನ್ನೆಲ್ಲ ಒಂದು ಪುಸ್ತಕದಲ್ಲಿ ಸಂಗ್ರಹಿಸಿ ಈಗಲೂ ಇಟ್ಟಿರುವೆ. ಇವೆಲ್ಲ ಇಂದಿಗೂ ನನಗೆ ಅಮೂಲ್ಯ ರತ್ನಗಳು. ಎಷ್ಟೇ ಹಣ ಕೊಟ್ಟರೂ ಸಿಗದಂತಹ ಮುತ್ತುಗಳು.

ರಾಷ್ಟ್ರೋತ್ಥಾನ ಸಂಸ್ಥೆಯವರು ಬೇಡ ಲಂಕೇಶ್ ಪತ್ರಿಕೆ ಇವತ್ತಲ್ಲ ನಾಳೆ ನಿಂತು ಹೋಗುತ್ತದೆ. ರಾಜಕಾರಣಿಗಳು ಇದರ ಮೇಲೆ ಒಂದು ಕಣ್ಣು ಇಟ್ಟಿದ್ದಾರೆ. ಯಾವತ್ತಿದ್ದರೂ ಅಪಾಯವೇ ಇಲ್ಲೇ ಇರಿ ಎಂದು ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದೆ ಲಂಕೇಶ್‌ಗೆ ಬಂದು ಸೇರಿಕೊಂಡೆ. ಮೇಷ್ಟ್ರು ನನ್ನನ್ನು ಸಂದರ್ಶನ ಮಾಡಿ ತಾನಾಗಿ 600 ಸಂಬಳಕ್ಕೆ ಗೊತ್ತು ಮಾಡಿದರೂ ತಿಂಗಳಾದ ಮೇಲೆ ಕೊಟ್ಟಿದ್ದು 700. 100 ಹೆಚ್ಚಿಗೆ ಕೊಟ್ಟಿದ್ದು ನನಗೆ ಆನೆ ಬಲ ಬಂದಂತೆ ಆಯಿತು.

ಲಂಕೇಶ್ ಪತ್ರಿಕೆಯಲ್ಲಿ ಸೇರಿದ್ದಾನೆ ಎಂಬ ಕಾರಣಕ್ಕಾಗಿಯೇ ಎಷ್ಟೋ ಕಡೆ ಹೆಣ್ಣು ಕೊಡಲು ಮುಂದೆ ಬರುತ್ತಿದ್ದರು. ಆದರೆ ಪಟ್ಟು ಬಿಡದೇ ’ಲಂಕೇಶ್ ಎಂಬ ನಾಮಬಲದಿಂದ ನಮ್ಮ ಸಂಬಂಧಿಕರಲ್ಲೇ ನನಗೆ ಲಗ್ನವಾಯಿತು. ಎಲ್ಲೇ ಹೋಗಲಿ ಎಲ್ಲಿ ಕೆಲಸ ಎಂದರೆ ಹೇಳಿಕೊಳ್ಳಲು ಒಂದು ಹೆಮ್ಮೆ. ಆಗ ವಾರ ಪತ್ರಿಕೆ ಸುಧಾ ಬಿಟ್ಟರೆ ಲಂಕೇಶ್ ಪತ್ರಿಕೆಯ ಸರ್ಕುಲೇಶನ್ ಉನ್ನತ ತಲುಪಿತ್ತು. ಸುಮಾರು ಒಂದೂವರೆ ಲಕ್ಷದಷ್ಟು ಪ್ರಸಾರವಿತ್ತು. ಇದರಿಂದ ನನಗೂ ಒಂದು ಗೌರವ ಸ್ಥಾನಮಾನ ಸಿಗುತ್ತಿತ್ತು. ನನ್ನ ಪಾಲಿಗೆ ಜೀವನದ ದಾರಿದೀಪವಾಗಿ ಮುಂದುವರೆದಿತ್ತು ಪತ್ರಿಕೆ.

ರಾಷ್ಟ್ರೋತ್ಥಾನ ಸಂಸ್ಥೆಯವರು ಹೆದರಿಸಿದ್ದಾಗ ಆಗಿದ್ದ ಭಯ ಪತ್ರಿಕೆಗೆ ಬಂದ ಮೇಲೆ ತನ್ನಿಂದತಾನೇ ದೂರವಾಯಿತು. ಜೆ.ಎಚ್ ಪಟೇಲ್, ಎಂ.ಪಿ ಪ್ರಕಾಶ್, ಅನಂತನಾಗ್, ಚಿತ್ರನಟಿ ತಾರಾ, ಜಯಮಾಲ ಇವರುಗಳನ್ನೆಲ್ಲ ಹತ್ತಿರದಿಂದ ನೋಡುವ ಸೌಭಾಗ್ಯ ದೊರಕಿದಂತಾಗಿತ್ತು.

ಮೇಷ್ಟ್ರರ ಕಾಲಮ್ಮುಗಳಂತೂ ಓದುಗರಿಗೆ ಅಚ್ಚುಮೆಚ್ಚು. ಛೆಛೆ ಕಾಲಮ್, ರಾಜಕಾರಣಿಗಳಿಗೆ ಛಾಟಿ ಏಟಿನಂತಿತ್ತು. ಕಣ್ಣಾಮುಚ್ಚಾಲೆ ಕಾಲಮ್ ಕಚಗುಳಿ ಇಟ್ಟರೆ, ಹಲವರಿಗೆ ಪರಸ್ಪರ ವಿಳಾಸ ತಿಳಿದುಕೊಳ್ಳಲು ಸಹಾಯ ಮಾಡಿ ಸರಳ ಮದುವೆಗಳಿಗೆ ಕಾರಣವಾಗಿದೆ. ಮರೆಯುವ ಮುನ್ನ ಓದುಗರಿಗೆ ಪ್ರಿಯವಾದ ಕಾಲಮ್ಮು. ಯುವ ಪೀಳಿಗೆಗೆ ’ತುಂಟಾಟ’ ಕಾಲಮ್ ನೆನಪಿನಲ್ಲಿ ಉಳಿಯುವ ಹಾಸ್ಯವಾಗಿ ಮತ್ತು ಒಂದು ತರಹ ಕಚಗುಳಿಯಿಡುವ ಚುಟುಕಾಗಿತ್ತು. ಬಿ.ಎ ಶ್ರೀಧರ್ ರವರ ’ಪ್ರಪಂಚ ಪರ್ಯಟನೆ’, ಬಾಲಾಜಿ ಅವರ ಗಾರ್ದಭನಗರಿ, ಪ್ರಸಿದ್ಧ ಕಲಾವಿದ ಪಂಜುಗಂಗೊಳ್ಳಿ ಅವರ ‘ಅರೇಬಿಯನ್ ನೈಟ್ಸ್’ ಓದುಗರನ್ನು ಮಂತ್ರಮುಗ್ಧರನ್ನಾಗಿಸಿ, ಮುಂದಿನ ವಾರಕ್ಕೆ ಕಾದು ಓದಲು ಪ್ರೋತ್ಸಾಹಿಸುತ್ತಿದ್ದವು.

ಚಂದ್ರೇಗೌಡರ ಕಟ್ಟೆಪುರಾಣ, ಸುದ್ದಿಬಿಂಬ, ಟೀಕೆಟಿಪ್ಪಣಿ, ಸಿನಿಮಾ ಕಾಲಂ, ವಿದೇಶ ಸುದ್ದಿ, ಎಚ್‌ಎಲ್‌ಕೆ ಅವರ ರಾಜಕೀಯ ವಿಡಂಬನೆ ಹೀಗೆ ಹಲವು ಕಾಲಮ್‌ಗಳು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು. ವಿಧಾನಸೌಧದ ಪಡಸಾಲೆಯಲ್ಲಿಯೂ ಲಂಕೇಶ್ ಪತ್ರಿಕೆ ಕಲರವ ಮೂಡಿತ್ತು. ಹೆಗಡೆ ಸರ್ಕಾರವನ್ನು ಬೆಚ್ಚಿ ಬೀಳಿಸಿದಂತೆಯೇ ಲಂಕೇಶ್ ಪತ್ರಿಕೆ ವರದಿಗಳು ರೇವಜೀತು ಹಗರಣದಲ್ಲಿ ಅಂದಿನ ಸರ್ಕಾರದ ಬುಡ ಅಲ್ಲಾಡಿಸಿದ್ದವು.
ಲಂಕೇಶ್ ಮೇಷ್ಟ್ರನ್ನು ಒಂದು ಅರ್ಥದಲ್ಲಿ ಅನ್ನದಾತ ಸುಖೀಭವ ಅನ್ನಬೇಕು! ಏಕೆಂದರೆ ಕಚೇರಿಯ ಮೇಲಿನ ಕೋಣೆಯಲ್ಲಿ 60 ಜನರಿಗೆ ಅಡುಗೆ ಮಾಡಿಸಿಕೊಡುತ್ತಿದ್ದರು. ಅದಕ್ಕಾಗಿ ತಿಂಗಳಿಗೆ ಸಂಬಳದಿಂದ ಹಿಡಿಯುತ್ತಿದ್ದುದು ಕೇವಲ 60ರೂ ಮಾತ್ರ. ದಿನಕ್ಕೊಂದು ತರಹೇವಾರಿ ತರಕಾರಿಯ ಸಾಂಬಾರು, ಅನ್ನ ಮಜ್ಜಿಗೆ, ತುಪ್ಪ, ಹಪ್ಪಳ, ರಾಗಿಮುದ್ದೆ ಹೀಗೆ ರುಚಿಕಟ್ಟಿನ ಮತ್ತು ಪ್ರೀತಿಪಾತ್ರದ ಅಡುಗೆಗೆ ಬೆಲೆ ಕಟ್ಟಲಾದೀತೇ! ನಮ್ಮ ಬಡತನವನ್ನು ಮರೆಸುತ್ತಿದ್ದ ಕ್ಷಣಗಳು ಅವು.

ಈಗ ಅವನ್ನೆಲ್ಲ ನೆನಪಿಸಿಕೊಂಡರೆ, ಆ ದಿನಗಳು ಮತ್ತೆ ಮರುಕಳಿಸಬಾರದೆ ಎನಿಸುತ್ತದೆ. ಲಂಕೇಶ್ ಮರಣಾನಂತರ ಪತ್ರಿಕೆ ಮುಗಿಯಿತು ಎನ್ನುತ್ತಿದ್ದಂತೆ ದೆಹಲಿಯ ಇಂಗ್ಲಿಷ್ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗೌರಿ ಮೇಡಂ ಹಲವು ಬುದ್ಧಿಜೀವಿಗಳ ಒತ್ತಾಯದ ಮೇರೆಗೆ ಪತ್ರಿಕೆ ಮುಂದುವರೆಸಲು ಕೈ ಹಿಡಿದರು. ಆದರೆ ಕನ್ನಡವೇ ಗೊತ್ತಿಲ್ಲದ ಅವರಿಗೆ ಹೇಗೆ ನಿಭಾಯಿಸಲು ಸಾಧ್ಯ ಎಂಬ ಸಂದೇಹ ಹಲವರಲ್ಲಿ ಮೂಡಿದ್ದೂ ನಿಜ. ಹಲವು ಬುದ್ಧಿಜೀವಿಗಳ ಒಡನಾಟ, ಪ್ರೋತ್ಸಾಹ ಮತ್ತು ಸ್ವಯಂ ಶ್ರದ್ಧೆಯಿಂದ ಗೌರಿ ಲಂಕೇಶ್ ಅವರು ಕನ್ನಡ ಕಲಿತು ಪತ್ರಿಕೆಗೆ ಸಂಪಾದಕಿ ಆದದ್ದು ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಅವರು ಕೂಡ ಹೊಸ ಕಾಲಮ್ ಶುರುಮಾಡಿ ಅದು ಪ್ರಸಿದ್ದಿಯೂ ಪಡೆಯಿತು. ಕೊನೆಗೆ ಹಂತಕರ ಗುಂಡಿಗೆ ಮೇಡಂ ಬಲಿಯಾದದ್ದು ದುರದೃಷ್ಟಕರ ಮತ್ತು ದುರಂತ.

ಲಂಕೇಶರ 86ನೇ ಜನ್ಮದಿನದ ಮತ್ತು ಲಂಕೇಶ್ ಪತ್ರಿಕೆಗೆ 40 ದಾಟಿರುವ ಈ ಸಂದರ್ಭದಲ್ಲಿ ಆ ಕಾಲದ ಗತ ವೈಭವಗಳನ್ನು ನೆನಪು ಮಾಡಿಕೊಳ್ಳುವುದರಿಂದ ಎಷ್ಟು ಉಪಯೋಗ.ಆದರೆ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದ, ಹೊಸ ತಿರುವನ್ನು ನೀಡಿದ ಲಂಕೇಶ್ ಪತ್ರಿಕೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನನಗೆ ದಾರಿದೀಪವಾಗಿ ಲಂಕೇಶ್ ಪತ್ರಿಕೆಗೆ ಮತ್ತು ಈಗ ನಮ್ಮ ಜೊತೆಗೆ ಭೌತಿಕವಾಗಿ ಇರದಿದ್ದರೂ ನೆನಪನಲ್ಲಿ ಅಚ್ಚಳಿಯದೆ ಉಳಿದಿರುವ ಮೇಷ್ಟ್ರಿಗೆ Many Many Thanks.

ಎಚ್. ಎನ್.ದ್ವಾರಕಾನಾಥ್

ಎಚ್ ಎನ್ ದ್ವಾರಕಾನಾಥ್
ಲಂಕೇಶ್ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಸುಮಾರು ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದವರು ದ್ವಾರಕಾನಾಥ್. ಈಗ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ಸರ್ಕಾರ ಎಂದರೆ ದೇಶ ಅಲ್ಲ… ದೇಶವೆಂಬುದು ಸರ್ಕಾರಕ್ಕಿಂತ ದೊಡ್ಡದು: ಡಿ ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...