Homeಮುಖಪುಟಲಂಕೇಶ್-86; ದಾರಿದೀಪವಾದ ಲಂಕೇಶ್ ಪತ್ರಿಕೆ; ಲಂಕೇಶ್ ಪತ್ರಿಕೆಯ ಪ್ರೂಫ್‌ರೀಡರ್ ಒಬ್ಬರ ನೆನಪುಗಳು

ಲಂಕೇಶ್-86; ದಾರಿದೀಪವಾದ ಲಂಕೇಶ್ ಪತ್ರಿಕೆ; ಲಂಕೇಶ್ ಪತ್ರಿಕೆಯ ಪ್ರೂಫ್‌ರೀಡರ್ ಒಬ್ಬರ ನೆನಪುಗಳು

ಪತ್ರಿಕೆ ಮೂಲಕ ಹುಟ್ಟಿಬಂದ ಬರಹಗಾರರೂ ಅಸಂಖ್ಯ. ಇವರುಗಳ ಜತೆ ನಾನೂ ಕೆಲಸ ಮಾಡಿರುವುದು ನನ್ನ ಪುಣ್ಯ. ಜೀವನದ ದಿಕ್ಕನ್ನೇ ಬದಲಾಯಿಸಿದ ಸಂದರ್ಭ

- Advertisement -
- Advertisement -

’ಯಾವ ಮನುಷ್ಯನಲ್ಲಿ ಶ್ರದ್ಧೆ, ಆಸಕ್ತಿ ಇರುತ್ತದೋ ಆತ ಜೀವನದಲ್ಲಿ ಮುಂದೆ ಬರಲು ಸಾಧ್ಯ, ಉನ್ನತ ಸ್ಥಾನಕ್ಕೂ ಏರಬಹುದು’.

ಇದನ್ನು ನಮ್ಮ ಮೇಷ್ಟ್ರು ಲಂಕೇಶ್ ಪದೇ ಪದೇ ಹೇಳುತ್ತಿದ್ದರು. ಇವರ ಈ ಧ್ಯೇಯವಾಕ್ಯವನ್ನು ಪಾಲಿಸಿದವರು ನಮ್ಮ ಕಣ್ಣಮುಂದಯೇ ಬೆಳೆದು, ಹೆಸರು ಗೌರವಗಳನ್ನು ಗಳಿಸಿದ್ದಾರೆ. ಟಿ.ಎನ್ ಸೀತಾರಾಂ, ಸಿ.ಎಸ್ ದ್ವಾರಕಾನಾಥ್, ಆರ್ ಶಂಕರ್, ಡಿ.ಆರ್ ನಾಗರಾಜ್, ಶೂದ್ರ ಶ್ರೀನಿವಾಸ್, ಸದಾಶಿವ ಶೆಣೈ – ಹೀಗೆ ಅವರ ನಿಕಟವರ್ತಿಗಳ ಪಟ್ಟಿ ಮಾಡುತ್ತಾ ಹೋದರೆ ಕೊನೆ ಮೊದಲಿಲ್ಲ. ಪತ್ರಿಕೆ ಮೂಲಕ ಹುಟ್ಟಿಬಂದ ಬರಹಗಾರರೂ ಅಸಂಖ್ಯ. ಇವರುಗಳ ಜತೆ ನಾನೂ ಕೆಲಸ ಮಾಡಿರುವುದು ನನ್ನ ಪುಣ್ಯ. ಜೀವನದ ದಿಕ್ಕನ್ನೇ ಬದಲಾಯಿಸಿದ ಸಂದರ್ಭ.

ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಉರುಫ್ ಗುಂ ಹಾಗೂ ಬಂಗಾರಪ್ಪ ಉರುಫ್ ಬಂ ಹಾಗೂ ದೇವರಾಜ ಅರಸರ ಕಾಲದಲ್ಲಿ ಪತ್ರಿಕೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ರಾಜಕಾರಣಿಗಳಿಗೆ ಒಂದು ತರಹ ಸಿಂಹಸ್ವಪ್ನದಂತಾಗಿತ್ತು. ಪತ್ರಿಕೆ ಪ್ರಕಟವಾಗುವುದನ್ನೇ ಕಾಯುತ್ತಿದ್ದ ಓದುಗರು ಸಂಜೆವಾಣಿ ಪತ್ರಿಕೆ ಕಚೇರಿಯ ಹತ್ತಿರವೇ ಬಂದುಬಿಡುತ್ತಿದ್ದರು. (ಏಕೆಂದರೆ ಲಂಕೇಶ್ ಪತ್ರಿಕೆ ಪ್ರಿಂಟ್ ಆಗುತ್ತಿದ್ದುದು ಅಲ್ಲಿಯೇ). ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಎಲ್ಲ ಕಾಲಮ್‌ಗಳಿಗೆ ವಿವಿಧ ರೀತಿಯ ಓದುಗರು ಇರುತ್ತಿದ್ದರು. ಅವೆಲ್ಲವೂ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು.

ಮುಖ್ಯಮಂತ್ರಿಯಾಗಿದ್ದ ಜೆ.ಎಚ್ ಪಟೇಲ್, ಎಂಪಿ ಪ್ರಕಾಶ್, ಅನಂತನಾಗ್, ಜಯಮಾಲ, ಬಿ.ಎಲ್ ಶಂಕರ್ ಇನ್ನೂ ಹಲವು ರಾಜಕಾರಣಿಗಳು ಕೂಡ ಮೇಷ್ಟ್ರು ಅವರ ಒಡನಾಟವನ್ನು ಇಟ್ಟುಕೊಂಡಿದ್ದರು. ತಿಂಗಳಿಗೊಂದು ಸಲ ಅವರ ತೋಟದಲ್ಲಿ ಸಾಹಿತಿಗಳು, ರಾಜಕಾರಣಿಗಳು, ಸ್ನೇಹಿತರು ಎಲ್ಲ ಸೇರಿ ಸಂವಾದ, ಹರಟೆ, ರಾಜಕೀಯ ವಿಶ್ಲೇಷಣೆ, ಚಿಂತನಮಂಥನ ನಡೆಸೋ ಕ್ಷಣ – ಇವೆಲ್ಲ ನೆನಪಿಸಿಕೊಂಡರೆ ಗತಕಾಲದ ವೈಭವ ಮತ್ತೆ ಮರುಕಳಿಸಬಾರದೇ ಎಂದೆನಿಸುತ್ತದೆ.

ನಾನು 83ರಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನಾನು ಲಂಕೇಶ್ ಪತ್ರಿಕೆ ಓದುವುದು ಮಾತ್ರವಲ್ಲ ಅದರ ಅಭಿಮಾನಿಯಾಗಿದ್ದೆ. ’ತುಂಟಾಟ’ ಕಾಲಮ್ ಓದುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ. ಅವುಗಳ ಕಟಿಂಗ್ಸ್‌ನ್ನೆಲ್ಲ ಒಂದು ಪುಸ್ತಕದಲ್ಲಿ ಸಂಗ್ರಹಿಸಿ ಈಗಲೂ ಇಟ್ಟಿರುವೆ. ಇವೆಲ್ಲ ಇಂದಿಗೂ ನನಗೆ ಅಮೂಲ್ಯ ರತ್ನಗಳು. ಎಷ್ಟೇ ಹಣ ಕೊಟ್ಟರೂ ಸಿಗದಂತಹ ಮುತ್ತುಗಳು.

ರಾಷ್ಟ್ರೋತ್ಥಾನ ಸಂಸ್ಥೆಯವರು ಬೇಡ ಲಂಕೇಶ್ ಪತ್ರಿಕೆ ಇವತ್ತಲ್ಲ ನಾಳೆ ನಿಂತು ಹೋಗುತ್ತದೆ. ರಾಜಕಾರಣಿಗಳು ಇದರ ಮೇಲೆ ಒಂದು ಕಣ್ಣು ಇಟ್ಟಿದ್ದಾರೆ. ಯಾವತ್ತಿದ್ದರೂ ಅಪಾಯವೇ ಇಲ್ಲೇ ಇರಿ ಎಂದು ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದೆ ಲಂಕೇಶ್‌ಗೆ ಬಂದು ಸೇರಿಕೊಂಡೆ. ಮೇಷ್ಟ್ರು ನನ್ನನ್ನು ಸಂದರ್ಶನ ಮಾಡಿ ತಾನಾಗಿ 600 ಸಂಬಳಕ್ಕೆ ಗೊತ್ತು ಮಾಡಿದರೂ ತಿಂಗಳಾದ ಮೇಲೆ ಕೊಟ್ಟಿದ್ದು 700. 100 ಹೆಚ್ಚಿಗೆ ಕೊಟ್ಟಿದ್ದು ನನಗೆ ಆನೆ ಬಲ ಬಂದಂತೆ ಆಯಿತು.

ಲಂಕೇಶ್ ಪತ್ರಿಕೆಯಲ್ಲಿ ಸೇರಿದ್ದಾನೆ ಎಂಬ ಕಾರಣಕ್ಕಾಗಿಯೇ ಎಷ್ಟೋ ಕಡೆ ಹೆಣ್ಣು ಕೊಡಲು ಮುಂದೆ ಬರುತ್ತಿದ್ದರು. ಆದರೆ ಪಟ್ಟು ಬಿಡದೇ ’ಲಂಕೇಶ್ ಎಂಬ ನಾಮಬಲದಿಂದ ನಮ್ಮ ಸಂಬಂಧಿಕರಲ್ಲೇ ನನಗೆ ಲಗ್ನವಾಯಿತು. ಎಲ್ಲೇ ಹೋಗಲಿ ಎಲ್ಲಿ ಕೆಲಸ ಎಂದರೆ ಹೇಳಿಕೊಳ್ಳಲು ಒಂದು ಹೆಮ್ಮೆ. ಆಗ ವಾರ ಪತ್ರಿಕೆ ಸುಧಾ ಬಿಟ್ಟರೆ ಲಂಕೇಶ್ ಪತ್ರಿಕೆಯ ಸರ್ಕುಲೇಶನ್ ಉನ್ನತ ತಲುಪಿತ್ತು. ಸುಮಾರು ಒಂದೂವರೆ ಲಕ್ಷದಷ್ಟು ಪ್ರಸಾರವಿತ್ತು. ಇದರಿಂದ ನನಗೂ ಒಂದು ಗೌರವ ಸ್ಥಾನಮಾನ ಸಿಗುತ್ತಿತ್ತು. ನನ್ನ ಪಾಲಿಗೆ ಜೀವನದ ದಾರಿದೀಪವಾಗಿ ಮುಂದುವರೆದಿತ್ತು ಪತ್ರಿಕೆ.

ರಾಷ್ಟ್ರೋತ್ಥಾನ ಸಂಸ್ಥೆಯವರು ಹೆದರಿಸಿದ್ದಾಗ ಆಗಿದ್ದ ಭಯ ಪತ್ರಿಕೆಗೆ ಬಂದ ಮೇಲೆ ತನ್ನಿಂದತಾನೇ ದೂರವಾಯಿತು. ಜೆ.ಎಚ್ ಪಟೇಲ್, ಎಂ.ಪಿ ಪ್ರಕಾಶ್, ಅನಂತನಾಗ್, ಚಿತ್ರನಟಿ ತಾರಾ, ಜಯಮಾಲ ಇವರುಗಳನ್ನೆಲ್ಲ ಹತ್ತಿರದಿಂದ ನೋಡುವ ಸೌಭಾಗ್ಯ ದೊರಕಿದಂತಾಗಿತ್ತು.

ಮೇಷ್ಟ್ರರ ಕಾಲಮ್ಮುಗಳಂತೂ ಓದುಗರಿಗೆ ಅಚ್ಚುಮೆಚ್ಚು. ಛೆಛೆ ಕಾಲಮ್, ರಾಜಕಾರಣಿಗಳಿಗೆ ಛಾಟಿ ಏಟಿನಂತಿತ್ತು. ಕಣ್ಣಾಮುಚ್ಚಾಲೆ ಕಾಲಮ್ ಕಚಗುಳಿ ಇಟ್ಟರೆ, ಹಲವರಿಗೆ ಪರಸ್ಪರ ವಿಳಾಸ ತಿಳಿದುಕೊಳ್ಳಲು ಸಹಾಯ ಮಾಡಿ ಸರಳ ಮದುವೆಗಳಿಗೆ ಕಾರಣವಾಗಿದೆ. ಮರೆಯುವ ಮುನ್ನ ಓದುಗರಿಗೆ ಪ್ರಿಯವಾದ ಕಾಲಮ್ಮು. ಯುವ ಪೀಳಿಗೆಗೆ ’ತುಂಟಾಟ’ ಕಾಲಮ್ ನೆನಪಿನಲ್ಲಿ ಉಳಿಯುವ ಹಾಸ್ಯವಾಗಿ ಮತ್ತು ಒಂದು ತರಹ ಕಚಗುಳಿಯಿಡುವ ಚುಟುಕಾಗಿತ್ತು. ಬಿ.ಎ ಶ್ರೀಧರ್ ರವರ ’ಪ್ರಪಂಚ ಪರ್ಯಟನೆ’, ಬಾಲಾಜಿ ಅವರ ಗಾರ್ದಭನಗರಿ, ಪ್ರಸಿದ್ಧ ಕಲಾವಿದ ಪಂಜುಗಂಗೊಳ್ಳಿ ಅವರ ‘ಅರೇಬಿಯನ್ ನೈಟ್ಸ್’ ಓದುಗರನ್ನು ಮಂತ್ರಮುಗ್ಧರನ್ನಾಗಿಸಿ, ಮುಂದಿನ ವಾರಕ್ಕೆ ಕಾದು ಓದಲು ಪ್ರೋತ್ಸಾಹಿಸುತ್ತಿದ್ದವು.

ಚಂದ್ರೇಗೌಡರ ಕಟ್ಟೆಪುರಾಣ, ಸುದ್ದಿಬಿಂಬ, ಟೀಕೆಟಿಪ್ಪಣಿ, ಸಿನಿಮಾ ಕಾಲಂ, ವಿದೇಶ ಸುದ್ದಿ, ಎಚ್‌ಎಲ್‌ಕೆ ಅವರ ರಾಜಕೀಯ ವಿಡಂಬನೆ ಹೀಗೆ ಹಲವು ಕಾಲಮ್‌ಗಳು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು. ವಿಧಾನಸೌಧದ ಪಡಸಾಲೆಯಲ್ಲಿಯೂ ಲಂಕೇಶ್ ಪತ್ರಿಕೆ ಕಲರವ ಮೂಡಿತ್ತು. ಹೆಗಡೆ ಸರ್ಕಾರವನ್ನು ಬೆಚ್ಚಿ ಬೀಳಿಸಿದಂತೆಯೇ ಲಂಕೇಶ್ ಪತ್ರಿಕೆ ವರದಿಗಳು ರೇವಜೀತು ಹಗರಣದಲ್ಲಿ ಅಂದಿನ ಸರ್ಕಾರದ ಬುಡ ಅಲ್ಲಾಡಿಸಿದ್ದವು.
ಲಂಕೇಶ್ ಮೇಷ್ಟ್ರನ್ನು ಒಂದು ಅರ್ಥದಲ್ಲಿ ಅನ್ನದಾತ ಸುಖೀಭವ ಅನ್ನಬೇಕು! ಏಕೆಂದರೆ ಕಚೇರಿಯ ಮೇಲಿನ ಕೋಣೆಯಲ್ಲಿ 60 ಜನರಿಗೆ ಅಡುಗೆ ಮಾಡಿಸಿಕೊಡುತ್ತಿದ್ದರು. ಅದಕ್ಕಾಗಿ ತಿಂಗಳಿಗೆ ಸಂಬಳದಿಂದ ಹಿಡಿಯುತ್ತಿದ್ದುದು ಕೇವಲ 60ರೂ ಮಾತ್ರ. ದಿನಕ್ಕೊಂದು ತರಹೇವಾರಿ ತರಕಾರಿಯ ಸಾಂಬಾರು, ಅನ್ನ ಮಜ್ಜಿಗೆ, ತುಪ್ಪ, ಹಪ್ಪಳ, ರಾಗಿಮುದ್ದೆ ಹೀಗೆ ರುಚಿಕಟ್ಟಿನ ಮತ್ತು ಪ್ರೀತಿಪಾತ್ರದ ಅಡುಗೆಗೆ ಬೆಲೆ ಕಟ್ಟಲಾದೀತೇ! ನಮ್ಮ ಬಡತನವನ್ನು ಮರೆಸುತ್ತಿದ್ದ ಕ್ಷಣಗಳು ಅವು.

ಈಗ ಅವನ್ನೆಲ್ಲ ನೆನಪಿಸಿಕೊಂಡರೆ, ಆ ದಿನಗಳು ಮತ್ತೆ ಮರುಕಳಿಸಬಾರದೆ ಎನಿಸುತ್ತದೆ. ಲಂಕೇಶ್ ಮರಣಾನಂತರ ಪತ್ರಿಕೆ ಮುಗಿಯಿತು ಎನ್ನುತ್ತಿದ್ದಂತೆ ದೆಹಲಿಯ ಇಂಗ್ಲಿಷ್ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗೌರಿ ಮೇಡಂ ಹಲವು ಬುದ್ಧಿಜೀವಿಗಳ ಒತ್ತಾಯದ ಮೇರೆಗೆ ಪತ್ರಿಕೆ ಮುಂದುವರೆಸಲು ಕೈ ಹಿಡಿದರು. ಆದರೆ ಕನ್ನಡವೇ ಗೊತ್ತಿಲ್ಲದ ಅವರಿಗೆ ಹೇಗೆ ನಿಭಾಯಿಸಲು ಸಾಧ್ಯ ಎಂಬ ಸಂದೇಹ ಹಲವರಲ್ಲಿ ಮೂಡಿದ್ದೂ ನಿಜ. ಹಲವು ಬುದ್ಧಿಜೀವಿಗಳ ಒಡನಾಟ, ಪ್ರೋತ್ಸಾಹ ಮತ್ತು ಸ್ವಯಂ ಶ್ರದ್ಧೆಯಿಂದ ಗೌರಿ ಲಂಕೇಶ್ ಅವರು ಕನ್ನಡ ಕಲಿತು ಪತ್ರಿಕೆಗೆ ಸಂಪಾದಕಿ ಆದದ್ದು ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಅವರು ಕೂಡ ಹೊಸ ಕಾಲಮ್ ಶುರುಮಾಡಿ ಅದು ಪ್ರಸಿದ್ದಿಯೂ ಪಡೆಯಿತು. ಕೊನೆಗೆ ಹಂತಕರ ಗುಂಡಿಗೆ ಮೇಡಂ ಬಲಿಯಾದದ್ದು ದುರದೃಷ್ಟಕರ ಮತ್ತು ದುರಂತ.

ಲಂಕೇಶರ 86ನೇ ಜನ್ಮದಿನದ ಮತ್ತು ಲಂಕೇಶ್ ಪತ್ರಿಕೆಗೆ 40 ದಾಟಿರುವ ಈ ಸಂದರ್ಭದಲ್ಲಿ ಆ ಕಾಲದ ಗತ ವೈಭವಗಳನ್ನು ನೆನಪು ಮಾಡಿಕೊಳ್ಳುವುದರಿಂದ ಎಷ್ಟು ಉಪಯೋಗ.ಆದರೆ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದ, ಹೊಸ ತಿರುವನ್ನು ನೀಡಿದ ಲಂಕೇಶ್ ಪತ್ರಿಕೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನನಗೆ ದಾರಿದೀಪವಾಗಿ ಲಂಕೇಶ್ ಪತ್ರಿಕೆಗೆ ಮತ್ತು ಈಗ ನಮ್ಮ ಜೊತೆಗೆ ಭೌತಿಕವಾಗಿ ಇರದಿದ್ದರೂ ನೆನಪನಲ್ಲಿ ಅಚ್ಚಳಿಯದೆ ಉಳಿದಿರುವ ಮೇಷ್ಟ್ರಿಗೆ Many Many Thanks.

ಎಚ್. ಎನ್.ದ್ವಾರಕಾನಾಥ್

ಎಚ್ ಎನ್ ದ್ವಾರಕಾನಾಥ್
ಲಂಕೇಶ್ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಸುಮಾರು ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದವರು ದ್ವಾರಕಾನಾಥ್. ಈಗ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ಸರ್ಕಾರ ಎಂದರೆ ದೇಶ ಅಲ್ಲ… ದೇಶವೆಂಬುದು ಸರ್ಕಾರಕ್ಕಿಂತ ದೊಡ್ಡದು: ಡಿ ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...