Homeಕರ್ನಾಟಕವಿಧಾನ ಪರಿಷತ್ ಖಂಡಿತಾ ಉಳಿಸಿಕೊಳ್ಳಬೇಕಿದೆ; ಉತ್ತಮ ಪ್ರತಿನಿಧಿತ್ವಕ್ಕಾಗಿ ಸುಧಾರಣೆಗಳ ಜೊತೆಗೆ..

ವಿಧಾನ ಪರಿಷತ್ ಖಂಡಿತಾ ಉಳಿಸಿಕೊಳ್ಳಬೇಕಿದೆ; ಉತ್ತಮ ಪ್ರತಿನಿಧಿತ್ವಕ್ಕಾಗಿ ಸುಧಾರಣೆಗಳ ಜೊತೆಗೆ..

- Advertisement -
- Advertisement -

ವಿಧಾನ ಪರಿಷತ್ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಅದರ ಭಾನಗಡಿಗಳ ಬಗ್ಗೆ ಆಕ್ರೋಶ, ಅದರ ಪ್ರಸ್ತುತ್ತೆಯ ಬಗ್ಗೆ ಚರ್ಚೆ ನಡೆಯುವುದು ಸಹಜವೇ. ಕಳೆದ ವಾರದ ಪತ್ರಿಕೆಯಲ್ಲಿ ಹೃಷಿಕೇಶ ಬಹದ್ದೂರ ದೇಸಾಯಿಯವರು “ಮೇಲ್ಮನೆ ಯಾರಿಗೆ ಬೇಕಾಗಿದೆ?” ಎಂದು ಕೇಳಿದ್ದರು. ಅದರಲ್ಲಿ ಪರಿಷತ್ತು ಹೇಗೆ ತನ್ನ ಉದ್ದೇಶ, ಮೌಲ್ಯಗಳಿಂದ ದೂರ ಸರಿಯುತ್ತಾ ಅಪ್ರಸ್ತುತವಾಗುತ್ತಿದೆ, ಕುಟುಂಬ ರಾಜಕಾರಣ, ಸೋತವರ ರೀಹ್ಯಾಬಿಲಿಟೇಷನ್ ಸೆಂಟರ್ ಮತ್ತು ಮುಖ್ಯವಾಗಿ ಮೇಲ್ಮನೆಯಲ್ಲಿ ಮೀಸಲಾತಿ ಇಲ್ಲದಿರುವುದರಿಂದ ಹೇಗೆ ಪ್ರಬಲ ಜಾತಿಗಳ ಅಡುಂಬೋಲವಾಗಿದೆ ಎಂದು ಸೋದಾಹರಣವಾಗಿ ವಿವರಿಸಿದ್ದರು. ಆದರೆ ನನಗೆ ಆ ಲೇಖನದ ಬಗ್ಗೆ ಎರಡು ಆಕ್ಷೇಪಗಳಿವೆ, ಹಾಗಾಗಿ ಇಲ್ಲಿ ಪತ್ರಿಕೆಯಲ್ಲೇ ಪ್ರತಿಕ್ರಿಯುಸುತ್ತಿದ್ದೇನೆ.

“ಮೇಲ್ಮನೆ ಯಾರಿಗೆ ಬೇಕಾಗಿದೆ?” ಎಂಬ ಪ್ರಶ್ನೆಯಲ್ಲಿ ಸದ್ಯದ ಪರಿಸ್ಥಿತಿಯ, ಅದು ತಲುಪಿರುವ ಅಧೋಗತಿಯ ಬಗ್ಗೆ ವಿಷಾದ ಇದೆ. ಇದು ನಮ್ಮ ನ್ಯಾಯಾಲಯಗಳು ಆಗಾಗ ’ಇಷ್ಟನ್ನೂ ಮಾಡಲಾಗದಿದ್ದರೆ ಏಕಿರಬೇಕು, ನಗರಪಾಲಿಕೆಯನ್ನು ಮುಚ್ಚಿಹಾಕಿಬಿಡೋಣವೆ’ ಎಂದು ರೆಟರಿಕ್ ಆಗಿ ಕೇಳುತ್ತಲ್ಲವೆ, ಹಾಗೆ ಎಂದು ನಾನು ಭಾವಿಸುತ್ತೇನೆ. ಆದರೆ ನ್ಯಾಯಾಲಯವಾದರೂ ಸರಿ, ನಾವಾದರೂ ಸರಿ, ಹೀಗೆ ಸಂಸ್ಥೆಗಳಲ್ಲಿನ ಸಮಸ್ಯೆಗಳಿಗೆ ಯಾವ ಮಟ್ಟದಲ್ಲಾದರೂ ಅದನ್ನು ಮುಚ್ಚುವ, ಬಹಿಷ್ಕರಿಸುವ ಮಾತಾಡುವುದು ಸಮಂಜಸವಲ್ಲವೆಂಬುದು ನನ್ನ ಭಾವನೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಸಂಘ ಪರಿವಾರ ಮತ್ತು ಬಿಜೆಪಿ ಬೆಂಬಲಿತ ಮಹೇಶ ಜೋಷಿ ಗೆದ್ದಾಗಲೂ ಇಂಥದ್ದೇ ಮಾತುಗಳು ಕೇಳಿಬಂದಿದ್ದವು. ಅದೂ ಯುಕ್ತವಲ್ಲ ಎಂದೇ ನನ್ನ ವಾದ. ರದ್ದು ಮಾಡುವುದೇ ಉತ್ತರವಾದರೆ ವಿಧಾನಸಭೆ, ಲೋಕಸಭೆಗಳೇನು ಕಮ್ಮಿ ಕೆಟ್ಟಿವೆಯೇ?

ಹೃಷಿಕೇಶರು ನೆರೆಯ ಆಂಧ್ರಪ್ರದೇಶದ ಉದಾಹರಣೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಮಾಡುವ ಯುವ ಮುಖ್ಯಮಂತ್ರಿಯ ಹೊಸ ವಿಚಾರಕ್ಕೆ ವಿರೋಧಪಕ್ಷಗಳ ಬಾಹುಳ್ಯ ಇರುವ ಪರಿಷತ್ತು ಅಡ್ಡಿ ಆಗಿದೆ, ಹಾಗಾಗಿ ಪರಿಷತ್ತನ್ನು ಬರಖಾಸ್ತು ಮಾಡುವ ಕೂಗೆದ್ದಿದೆ ಎಂದು ಹೇಳಿದ್ದಾರೆ. 175ರಲ್ಲಿ 150 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದೊಂದಿಗೆ ಆಡಳಿತ ನಡೆಸುತ್ತಿರುವ ಜಗನ್‌ಮೋಹನ ರೆಡ್ಡಿಯದು, ಮೋದಿಯನ್ನೂ ಮೀರಿದ ದುರಾಡಳಿತ, ಆರ್ಥಿಕ ಅಶಿಸ್ತು, ತುಘಲಕ್ ದರ್ಬಾರ್ ಮತ್ತು ದರ್ಪದ ಸರ್ವಾಧಿಕಾರ ಎಂಬುದು ನನ್ನ ಅಭಿಪ್ರಾಯ, ಇರಲಿ. ಮೂರು ರಾಜಧಾನಿಯದು ಕಾನೂನಾತ್ಮಕವಾಗಿಯೂ ಸಮಂಜಸವಾಗಿಲ್ಲ ಅಷ್ಟೇ ಅಲ್ಲ, ಅಲ್ಲಿ ಅಮರಾವತಿಯೇ ರಾಜಧಾನಿ ಆಗಿರಬೇಕೆಂದು ನಡೆಯುತ್ತಿರುವ “ನ್ಯಾಯಾಲಯಂ ನುಂಚಿ ದೇವಾಲಯಂ” ಪಾದಯಾತ್ರೆಗೆ ಲಭಿಸಿರುವ ಅಪಾರ ಜನಾದರಣೆಯನ್ನು, ಬೆಂಬಲವನ್ನೂ ನೋಡಿದರೆ ಜನಕ್ಕೂ ಮೂರು ರಾಜಧಾನಿಗಳು ಬೇಕಿಲ್ಲ ಎಂಬುದು ವಿದಿತ. ಇವತ್ತು ಇಷ್ಟು ದೊಡ್ಡ ಬಹುಮತ ಪಡೆದಿರುವ ಸರ್ಕಾರವೊಂದು ’ಗೂಳಿ’ಯಂತೆ ಮುನ್ನುಗ್ಗುವುದರಿಂದ, ಅದರ ಸರ್ವಾಧಿಕಾರಿ ಧೋರಣೆಗೆ ಇರುವ ಒಂದೇ ಅಂಕುಶ ಅಲ್ಲಿನ ಪರಿಷತ್ತು. ಇದುವರೆಗೂ ಹಲವು ರಾಜ್ಯಗಳಲ್ಲಿ ಪರಿಷತ್ತನ್ನು ರದ್ದು ಮಾಡಲಾಗಿದೆ. ಬಹುತೇಕ ಇದು ಆಳುವ ಪಕ್ಷಕ್ಕೆ ಪರಿಷತ್ತಿನಲ್ಲಿ ಬಹುಮತ ಇಲ್ಲದೇ ಇದ್ದಾಗಲೇ ಆಗಿದೆ. ಅದೇ ಅದರ ಪ್ರಸ್ತುತತೆ.

ಇನ್ನು ಸದ್ಯ ಇರುವಂತೆ ಪರಿಷತ್ತು ದಿನೇದಿನೇ ಅಪ್ರಸ್ತುತವಾಗುತ್ತಾ ಹೋಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ ಇದಕ್ಕೆ ಹೃಷಿಕೇಶರ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಆದರೆ ನಾವು ಇವತ್ತು ಅದರ ಸಂರಚನೆಯನ್ನು ಪ್ರಸ್ತುತಗೊಳಿಸಬೇಕಿದೆ. ಇವತ್ತು ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಅರ್ಥವೇ ಉಳಿದಿಲ್ಲ. ಪದವೀಧರರು ವಿರಳವಾಗಿದ್ದ ಕಾಲಕ್ಕೆ ಅದು ಬೇಕಾಗಿತ್ತು, ಇವತ್ತಿಗಲ್ಲ. ಪದವೀಧರರೆಲ್ಲರೂ ಮೇಧಾವಿಗಳು, ವಿವೇಕಯುಕ್ತರು ಎಂಬಂತಿದೆ. ಇನ್ನು ಶಿಕ್ಷಕರಿಗೆ ಮಾತ್ರ ಏಕೆ ನಾಲ್ಕು ಸ್ಥಾನಗಳು? ಅವರು ಮಾತ್ರವೇ ಪ್ರಜ್ಞಾವಂತರೆಂದೋ? ಇವತ್ತು ಅನೇಕ ಇತರೆ ದನಿ ಇಲ್ಲದ, ಪ್ರಾತಿನಿಧ್ಯ ಇಲ್ಲದ ಗುಂಪುಗಳಿಗೆ ಪರಿಷತ್ತಿನಲ್ಲಿ ತಾವು ಮಾಡಿಕೊಡಬೇಕಿದೆ.

ಅಂತಹ ಗುಂಪುಗಳ ಪ್ರಾತಿನಿಧ್ಯಕ್ಕೆ ಕೆಲವು ಸಲಹೆಗಳು: ಈ ವಲಯಗಳಿಂದ ಆಯ್ಕೆ ಆಗುವ ಸದಸ್ಯರು ಕಡ್ಡಾಯವಾಗಿ ಅದೇ ವಲಯದಲ್ಲಿ ತೊಡಗಿಸಿಕೊಂಡಿರುವವರಾಗಿರಬೇಕು. ಆ ರೀತಿಯ ನಿಯಮಗಳನ್ನು ಪ್ರತಿ ವಲಯಕ್ಕೂ ತರಬೇಕು.

1. ರಾಜ್ಯದ ಮಹಿಳೆಯರು: ಅವರ 5-6 ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು, ಲೈಂಗಿಕ ಅಲ್ಪಸಂಖ್ಯಾತರಿಗೆ ಒಂದು ಸ್ಥಾನ.
2. ರಾಜ್ಯದ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತರಿಗೆ ಒಂದು ಸ್ಥಾನ, ಪೌರಕಾರ್ಮಿಕರಿಗೆ ಒಂದು ಸ್ಥಾನ.
3. ರಾಜ್ಯದ ರೈತರು ಅವರ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು.
4. ರಾಜ್ಯದ ಕಾರ್ಮಿಕರಿಗೆ ಕನಿಷ್ಠ ಎರಡು ಸ್ಥಾನ
5. ಶಿಕ್ಷಕರ ಪ್ರಾತಿನಿಧ್ಯವನ್ನು ಗರಿಷ್ಠ ಎರಡಕ್ಕೆ ಮಿತಿಗೊಳಿಸುವುದು. ಇನ್ನುಳಿದ ಎರಡು ಪ್ರತಿನಿಧಿಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು.
6. ರಾಜ್ಯದ ವೈದ್ಯರು ಒಂದು ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ.
7. ರಾಜ್ಯದ ಸಹಕಾರಿ ವಲಯದಿಂದ ಕೆಲವು ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿದೆ.

ಇನ್ನು ಪರಿಷತ್ತಿನಲ್ಲಿ ರಾಜ್ಯದ ಸ್ವಾಯತ್ತ ಸಂಸ್ಥೆಗಳ ನೇತೃತ್ವ ವಹಿಸಿದವರೆಲ್ಲರನ್ನೂ ex-officio ಸದಸ್ಯರನ್ನಾಗಿ ಮಾಡಬೇಕು. ಈ ಹುದ್ದೆಗಳ politicisation ತಡೆಯಲು ಅಗತ್ಯವಿದ್ದರೆ ಇವರಿಗೆ ಮತದಾನದ ಹಕ್ಕು ನೀಡದಿರುವುದು ಅಗತ್ಯವಾಗಬಹುದು. ಆದರೆ ಇವರೆಲ್ಲರೂ ಪರಿಷತ್ತಿನಲ್ಲಿ ಇದ್ದರೆ, ಈ ಸಂಸ್ಥೆಗಳ ವರದಿಗಳನ್ನು ಕಡ್ಡಾಯವಾಗಿ ಮಂಡಿಸುವಂತಾದರೆ, ಅಲ್ಲಿನ ಚರ್ಚೆಗೊಂದು ವಿಸ್ತಾರವೂ, ಸರ್ಕಾರಕ್ಕೊಂದು ಅಂಕುಶವೂ ಇರುತ್ತದೆ.

ಇವರೆಲ್ಲರೂ ex-officio ಸದಸ್ಯರಾಗಬೇಕು:

1. ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷರು
2. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು
3. ಕರ್ನಾಟಕದ ಆಡಿಟರ್ ಜನರಲ್
4. ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು
5. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು
6. ಕರ್ನಾಟಕ ಲೋಕಾಯುಕ್ತರು
7. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು
8. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು
9. ಈ ನಾಡಿನ ಎಲ್ಲ ಸರ್ಕಾರೀ ವಿಶ್ವವಿದ್ಯಾಲಯಗಳ ಉಪಕುಲಪತಿಗಳು.
10. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು
11. ಕರ್ನಾಟಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು
12. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು

ಇನ್ನು ಪರಿಷತ್ತಿನಲ್ಲಿ ಈ ಕೂಡಲೇ ಮೀಸಲಾತಿ ತರಬೇಕಿದೆ. ದಿ ಹಿಂದೂ ಪತ್ರಿಕೆಯು ಈಗ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಿಲ್ಲಿಸಿರುವ ಉಮೇದುವಾರರ ಜಾತಿಗಣತಿ ನಡೆಸಿ ಎಲ್ಲ ಉಮೇದುವಾರರ ಪೈಕಿ ಶೇ.60ಕ್ಕಿಂತಲೂ ಹೆಚ್ಚು ಜನ ಒಕ್ಕಲಿಗ, ಲಿಂಗಾಯತ ಜಾತಿಗಳಿಗೆ ಸೇರಿದವರು ಎಂದು ತೋರಿಸಿದ್ದಾರೆ. ಮೀಸಲಾತಿ ಇಲ್ಲದಿದ್ದರೆ ಎಲ್ಲೆಡೆಯೂ ಇದೇ ವಾಸ್ತವ. ಇನ್ನು ಹಿರಿಯರ, ಪ್ರಾಜ್ಞರ ಮನೆಗೆ ಮೀಸಲಾತಿ ಇಲ್ಲದಿರುವುದು ಕೆಟ್ಟ ಮೆರಿಟ್ ವಾದವನ್ನು ಸರ್ಕಾರವೇ ಮಾಡಿದಂತೆ. ಈ ಕೂಡಲೇ ಪರಿಶಿಷ್ಟ ಜಾತಿ, ವರ್ಗಗಳಿಗೆ ಸಾಂವಿಧಾನಿಕ ಹಕ್ಕಾದ ಮೀಸಲಾತಿಯನ್ನು ನೀಡಬೇಕು.

ಹೀಗೆ ಇನ್ನೂ ಬೆಳೆಸಿ ಪರಿಷತ್ತನ್ನು ನಿಜಕ್ಕೂ ಮತ್ತೆ ಪ್ರಜಾಪ್ರತಿನಿಧಿ ಸಭೆ ಮಾಡಬೇಕಿದೆ. ಈ ರೀತಿಯಾಗಿ ಪ್ರತಿನಿಧಿತ್ವವನ್ನು ಸರಿಪಡಿಸಿ ವಿಧಾನ ಪರಿಷತ್ತನ್ನು ಉಳಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.


ಇದನ್ನೂ ಓದಿ: ಮೇಲ್ಮನೆ ವಿಧಾನ ಪರಿಷತ್ ಯಾರಿಗೆ ಬೇಕಾಗಿದೆ?

ಇದನ್ನೂ ಓದಿ: ನಾಯಕತ್ವ ವ್ಯಕ್ತಿಯೊಬ್ಬರ ‘ದೈವಿಕ ಹಕ್ಕಲ್ಲ’: ರಾಹುಲ್ ಗಾಂಧಿ ವಿರುದ್ದ ಪ್ರಶಾಂತ್‌ ಕಿಶೋರ್‌ ವಾಗ್ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ ಪ್ರತಿಭಟನೆ ವೇಳೆ ಆಕ್ಷೇಪಾರ್ಹ ಹೇಳಿಕೆ : ತಮಿಳುನಾಡಿನ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಬಂಧನ

ಸೋಮವಾರ (ಆ.3) ತಂಜಾವೂರಿನಲ್ಲಿ ನಡೆದ ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಉದಯನಿಧಿ ಬಂಧನಕ್ಕೂ...

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...