Homeಕರ್ನಾಟಕವಿಧಾನ ಪರಿಷತ್ ಖಂಡಿತಾ ಉಳಿಸಿಕೊಳ್ಳಬೇಕಿದೆ; ಉತ್ತಮ ಪ್ರತಿನಿಧಿತ್ವಕ್ಕಾಗಿ ಸುಧಾರಣೆಗಳ ಜೊತೆಗೆ..

ವಿಧಾನ ಪರಿಷತ್ ಖಂಡಿತಾ ಉಳಿಸಿಕೊಳ್ಳಬೇಕಿದೆ; ಉತ್ತಮ ಪ್ರತಿನಿಧಿತ್ವಕ್ಕಾಗಿ ಸುಧಾರಣೆಗಳ ಜೊತೆಗೆ..

- Advertisement -
- Advertisement -

ವಿಧಾನ ಪರಿಷತ್ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಅದರ ಭಾನಗಡಿಗಳ ಬಗ್ಗೆ ಆಕ್ರೋಶ, ಅದರ ಪ್ರಸ್ತುತ್ತೆಯ ಬಗ್ಗೆ ಚರ್ಚೆ ನಡೆಯುವುದು ಸಹಜವೇ. ಕಳೆದ ವಾರದ ಪತ್ರಿಕೆಯಲ್ಲಿ ಹೃಷಿಕೇಶ ಬಹದ್ದೂರ ದೇಸಾಯಿಯವರು “ಮೇಲ್ಮನೆ ಯಾರಿಗೆ ಬೇಕಾಗಿದೆ?” ಎಂದು ಕೇಳಿದ್ದರು. ಅದರಲ್ಲಿ ಪರಿಷತ್ತು ಹೇಗೆ ತನ್ನ ಉದ್ದೇಶ, ಮೌಲ್ಯಗಳಿಂದ ದೂರ ಸರಿಯುತ್ತಾ ಅಪ್ರಸ್ತುತವಾಗುತ್ತಿದೆ, ಕುಟುಂಬ ರಾಜಕಾರಣ, ಸೋತವರ ರೀಹ್ಯಾಬಿಲಿಟೇಷನ್ ಸೆಂಟರ್ ಮತ್ತು ಮುಖ್ಯವಾಗಿ ಮೇಲ್ಮನೆಯಲ್ಲಿ ಮೀಸಲಾತಿ ಇಲ್ಲದಿರುವುದರಿಂದ ಹೇಗೆ ಪ್ರಬಲ ಜಾತಿಗಳ ಅಡುಂಬೋಲವಾಗಿದೆ ಎಂದು ಸೋದಾಹರಣವಾಗಿ ವಿವರಿಸಿದ್ದರು. ಆದರೆ ನನಗೆ ಆ ಲೇಖನದ ಬಗ್ಗೆ ಎರಡು ಆಕ್ಷೇಪಗಳಿವೆ, ಹಾಗಾಗಿ ಇಲ್ಲಿ ಪತ್ರಿಕೆಯಲ್ಲೇ ಪ್ರತಿಕ್ರಿಯುಸುತ್ತಿದ್ದೇನೆ.

“ಮೇಲ್ಮನೆ ಯಾರಿಗೆ ಬೇಕಾಗಿದೆ?” ಎಂಬ ಪ್ರಶ್ನೆಯಲ್ಲಿ ಸದ್ಯದ ಪರಿಸ್ಥಿತಿಯ, ಅದು ತಲುಪಿರುವ ಅಧೋಗತಿಯ ಬಗ್ಗೆ ವಿಷಾದ ಇದೆ. ಇದು ನಮ್ಮ ನ್ಯಾಯಾಲಯಗಳು ಆಗಾಗ ’ಇಷ್ಟನ್ನೂ ಮಾಡಲಾಗದಿದ್ದರೆ ಏಕಿರಬೇಕು, ನಗರಪಾಲಿಕೆಯನ್ನು ಮುಚ್ಚಿಹಾಕಿಬಿಡೋಣವೆ’ ಎಂದು ರೆಟರಿಕ್ ಆಗಿ ಕೇಳುತ್ತಲ್ಲವೆ, ಹಾಗೆ ಎಂದು ನಾನು ಭಾವಿಸುತ್ತೇನೆ. ಆದರೆ ನ್ಯಾಯಾಲಯವಾದರೂ ಸರಿ, ನಾವಾದರೂ ಸರಿ, ಹೀಗೆ ಸಂಸ್ಥೆಗಳಲ್ಲಿನ ಸಮಸ್ಯೆಗಳಿಗೆ ಯಾವ ಮಟ್ಟದಲ್ಲಾದರೂ ಅದನ್ನು ಮುಚ್ಚುವ, ಬಹಿಷ್ಕರಿಸುವ ಮಾತಾಡುವುದು ಸಮಂಜಸವಲ್ಲವೆಂಬುದು ನನ್ನ ಭಾವನೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಸಂಘ ಪರಿವಾರ ಮತ್ತು ಬಿಜೆಪಿ ಬೆಂಬಲಿತ ಮಹೇಶ ಜೋಷಿ ಗೆದ್ದಾಗಲೂ ಇಂಥದ್ದೇ ಮಾತುಗಳು ಕೇಳಿಬಂದಿದ್ದವು. ಅದೂ ಯುಕ್ತವಲ್ಲ ಎಂದೇ ನನ್ನ ವಾದ. ರದ್ದು ಮಾಡುವುದೇ ಉತ್ತರವಾದರೆ ವಿಧಾನಸಭೆ, ಲೋಕಸಭೆಗಳೇನು ಕಮ್ಮಿ ಕೆಟ್ಟಿವೆಯೇ?

ಹೃಷಿಕೇಶರು ನೆರೆಯ ಆಂಧ್ರಪ್ರದೇಶದ ಉದಾಹರಣೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಮಾಡುವ ಯುವ ಮುಖ್ಯಮಂತ್ರಿಯ ಹೊಸ ವಿಚಾರಕ್ಕೆ ವಿರೋಧಪಕ್ಷಗಳ ಬಾಹುಳ್ಯ ಇರುವ ಪರಿಷತ್ತು ಅಡ್ಡಿ ಆಗಿದೆ, ಹಾಗಾಗಿ ಪರಿಷತ್ತನ್ನು ಬರಖಾಸ್ತು ಮಾಡುವ ಕೂಗೆದ್ದಿದೆ ಎಂದು ಹೇಳಿದ್ದಾರೆ. 175ರಲ್ಲಿ 150 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದೊಂದಿಗೆ ಆಡಳಿತ ನಡೆಸುತ್ತಿರುವ ಜಗನ್‌ಮೋಹನ ರೆಡ್ಡಿಯದು, ಮೋದಿಯನ್ನೂ ಮೀರಿದ ದುರಾಡಳಿತ, ಆರ್ಥಿಕ ಅಶಿಸ್ತು, ತುಘಲಕ್ ದರ್ಬಾರ್ ಮತ್ತು ದರ್ಪದ ಸರ್ವಾಧಿಕಾರ ಎಂಬುದು ನನ್ನ ಅಭಿಪ್ರಾಯ, ಇರಲಿ. ಮೂರು ರಾಜಧಾನಿಯದು ಕಾನೂನಾತ್ಮಕವಾಗಿಯೂ ಸಮಂಜಸವಾಗಿಲ್ಲ ಅಷ್ಟೇ ಅಲ್ಲ, ಅಲ್ಲಿ ಅಮರಾವತಿಯೇ ರಾಜಧಾನಿ ಆಗಿರಬೇಕೆಂದು ನಡೆಯುತ್ತಿರುವ “ನ್ಯಾಯಾಲಯಂ ನುಂಚಿ ದೇವಾಲಯಂ” ಪಾದಯಾತ್ರೆಗೆ ಲಭಿಸಿರುವ ಅಪಾರ ಜನಾದರಣೆಯನ್ನು, ಬೆಂಬಲವನ್ನೂ ನೋಡಿದರೆ ಜನಕ್ಕೂ ಮೂರು ರಾಜಧಾನಿಗಳು ಬೇಕಿಲ್ಲ ಎಂಬುದು ವಿದಿತ. ಇವತ್ತು ಇಷ್ಟು ದೊಡ್ಡ ಬಹುಮತ ಪಡೆದಿರುವ ಸರ್ಕಾರವೊಂದು ’ಗೂಳಿ’ಯಂತೆ ಮುನ್ನುಗ್ಗುವುದರಿಂದ, ಅದರ ಸರ್ವಾಧಿಕಾರಿ ಧೋರಣೆಗೆ ಇರುವ ಒಂದೇ ಅಂಕುಶ ಅಲ್ಲಿನ ಪರಿಷತ್ತು. ಇದುವರೆಗೂ ಹಲವು ರಾಜ್ಯಗಳಲ್ಲಿ ಪರಿಷತ್ತನ್ನು ರದ್ದು ಮಾಡಲಾಗಿದೆ. ಬಹುತೇಕ ಇದು ಆಳುವ ಪಕ್ಷಕ್ಕೆ ಪರಿಷತ್ತಿನಲ್ಲಿ ಬಹುಮತ ಇಲ್ಲದೇ ಇದ್ದಾಗಲೇ ಆಗಿದೆ. ಅದೇ ಅದರ ಪ್ರಸ್ತುತತೆ.

ಇನ್ನು ಸದ್ಯ ಇರುವಂತೆ ಪರಿಷತ್ತು ದಿನೇದಿನೇ ಅಪ್ರಸ್ತುತವಾಗುತ್ತಾ ಹೋಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ ಇದಕ್ಕೆ ಹೃಷಿಕೇಶರ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಆದರೆ ನಾವು ಇವತ್ತು ಅದರ ಸಂರಚನೆಯನ್ನು ಪ್ರಸ್ತುತಗೊಳಿಸಬೇಕಿದೆ. ಇವತ್ತು ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಅರ್ಥವೇ ಉಳಿದಿಲ್ಲ. ಪದವೀಧರರು ವಿರಳವಾಗಿದ್ದ ಕಾಲಕ್ಕೆ ಅದು ಬೇಕಾಗಿತ್ತು, ಇವತ್ತಿಗಲ್ಲ. ಪದವೀಧರರೆಲ್ಲರೂ ಮೇಧಾವಿಗಳು, ವಿವೇಕಯುಕ್ತರು ಎಂಬಂತಿದೆ. ಇನ್ನು ಶಿಕ್ಷಕರಿಗೆ ಮಾತ್ರ ಏಕೆ ನಾಲ್ಕು ಸ್ಥಾನಗಳು? ಅವರು ಮಾತ್ರವೇ ಪ್ರಜ್ಞಾವಂತರೆಂದೋ? ಇವತ್ತು ಅನೇಕ ಇತರೆ ದನಿ ಇಲ್ಲದ, ಪ್ರಾತಿನಿಧ್ಯ ಇಲ್ಲದ ಗುಂಪುಗಳಿಗೆ ಪರಿಷತ್ತಿನಲ್ಲಿ ತಾವು ಮಾಡಿಕೊಡಬೇಕಿದೆ.

ಅಂತಹ ಗುಂಪುಗಳ ಪ್ರಾತಿನಿಧ್ಯಕ್ಕೆ ಕೆಲವು ಸಲಹೆಗಳು: ಈ ವಲಯಗಳಿಂದ ಆಯ್ಕೆ ಆಗುವ ಸದಸ್ಯರು ಕಡ್ಡಾಯವಾಗಿ ಅದೇ ವಲಯದಲ್ಲಿ ತೊಡಗಿಸಿಕೊಂಡಿರುವವರಾಗಿರಬೇಕು. ಆ ರೀತಿಯ ನಿಯಮಗಳನ್ನು ಪ್ರತಿ ವಲಯಕ್ಕೂ ತರಬೇಕು.

1. ರಾಜ್ಯದ ಮಹಿಳೆಯರು: ಅವರ 5-6 ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು, ಲೈಂಗಿಕ ಅಲ್ಪಸಂಖ್ಯಾತರಿಗೆ ಒಂದು ಸ್ಥಾನ.
2. ರಾಜ್ಯದ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತರಿಗೆ ಒಂದು ಸ್ಥಾನ, ಪೌರಕಾರ್ಮಿಕರಿಗೆ ಒಂದು ಸ್ಥಾನ.
3. ರಾಜ್ಯದ ರೈತರು ಅವರ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು.
4. ರಾಜ್ಯದ ಕಾರ್ಮಿಕರಿಗೆ ಕನಿಷ್ಠ ಎರಡು ಸ್ಥಾನ
5. ಶಿಕ್ಷಕರ ಪ್ರಾತಿನಿಧ್ಯವನ್ನು ಗರಿಷ್ಠ ಎರಡಕ್ಕೆ ಮಿತಿಗೊಳಿಸುವುದು. ಇನ್ನುಳಿದ ಎರಡು ಪ್ರತಿನಿಧಿಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು.
6. ರಾಜ್ಯದ ವೈದ್ಯರು ಒಂದು ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ.
7. ರಾಜ್ಯದ ಸಹಕಾರಿ ವಲಯದಿಂದ ಕೆಲವು ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿದೆ.

ಇನ್ನು ಪರಿಷತ್ತಿನಲ್ಲಿ ರಾಜ್ಯದ ಸ್ವಾಯತ್ತ ಸಂಸ್ಥೆಗಳ ನೇತೃತ್ವ ವಹಿಸಿದವರೆಲ್ಲರನ್ನೂ ex-officio ಸದಸ್ಯರನ್ನಾಗಿ ಮಾಡಬೇಕು. ಈ ಹುದ್ದೆಗಳ politicisation ತಡೆಯಲು ಅಗತ್ಯವಿದ್ದರೆ ಇವರಿಗೆ ಮತದಾನದ ಹಕ್ಕು ನೀಡದಿರುವುದು ಅಗತ್ಯವಾಗಬಹುದು. ಆದರೆ ಇವರೆಲ್ಲರೂ ಪರಿಷತ್ತಿನಲ್ಲಿ ಇದ್ದರೆ, ಈ ಸಂಸ್ಥೆಗಳ ವರದಿಗಳನ್ನು ಕಡ್ಡಾಯವಾಗಿ ಮಂಡಿಸುವಂತಾದರೆ, ಅಲ್ಲಿನ ಚರ್ಚೆಗೊಂದು ವಿಸ್ತಾರವೂ, ಸರ್ಕಾರಕ್ಕೊಂದು ಅಂಕುಶವೂ ಇರುತ್ತದೆ.

ಇವರೆಲ್ಲರೂ ex-officio ಸದಸ್ಯರಾಗಬೇಕು:

1. ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷರು
2. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು
3. ಕರ್ನಾಟಕದ ಆಡಿಟರ್ ಜನರಲ್
4. ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು
5. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು
6. ಕರ್ನಾಟಕ ಲೋಕಾಯುಕ್ತರು
7. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು
8. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು
9. ಈ ನಾಡಿನ ಎಲ್ಲ ಸರ್ಕಾರೀ ವಿಶ್ವವಿದ್ಯಾಲಯಗಳ ಉಪಕುಲಪತಿಗಳು.
10. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು
11. ಕರ್ನಾಟಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು
12. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು

ಇನ್ನು ಪರಿಷತ್ತಿನಲ್ಲಿ ಈ ಕೂಡಲೇ ಮೀಸಲಾತಿ ತರಬೇಕಿದೆ. ದಿ ಹಿಂದೂ ಪತ್ರಿಕೆಯು ಈಗ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಿಲ್ಲಿಸಿರುವ ಉಮೇದುವಾರರ ಜಾತಿಗಣತಿ ನಡೆಸಿ ಎಲ್ಲ ಉಮೇದುವಾರರ ಪೈಕಿ ಶೇ.60ಕ್ಕಿಂತಲೂ ಹೆಚ್ಚು ಜನ ಒಕ್ಕಲಿಗ, ಲಿಂಗಾಯತ ಜಾತಿಗಳಿಗೆ ಸೇರಿದವರು ಎಂದು ತೋರಿಸಿದ್ದಾರೆ. ಮೀಸಲಾತಿ ಇಲ್ಲದಿದ್ದರೆ ಎಲ್ಲೆಡೆಯೂ ಇದೇ ವಾಸ್ತವ. ಇನ್ನು ಹಿರಿಯರ, ಪ್ರಾಜ್ಞರ ಮನೆಗೆ ಮೀಸಲಾತಿ ಇಲ್ಲದಿರುವುದು ಕೆಟ್ಟ ಮೆರಿಟ್ ವಾದವನ್ನು ಸರ್ಕಾರವೇ ಮಾಡಿದಂತೆ. ಈ ಕೂಡಲೇ ಪರಿಶಿಷ್ಟ ಜಾತಿ, ವರ್ಗಗಳಿಗೆ ಸಾಂವಿಧಾನಿಕ ಹಕ್ಕಾದ ಮೀಸಲಾತಿಯನ್ನು ನೀಡಬೇಕು.

ಹೀಗೆ ಇನ್ನೂ ಬೆಳೆಸಿ ಪರಿಷತ್ತನ್ನು ನಿಜಕ್ಕೂ ಮತ್ತೆ ಪ್ರಜಾಪ್ರತಿನಿಧಿ ಸಭೆ ಮಾಡಬೇಕಿದೆ. ಈ ರೀತಿಯಾಗಿ ಪ್ರತಿನಿಧಿತ್ವವನ್ನು ಸರಿಪಡಿಸಿ ವಿಧಾನ ಪರಿಷತ್ತನ್ನು ಉಳಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.


ಇದನ್ನೂ ಓದಿ: ಮೇಲ್ಮನೆ ವಿಧಾನ ಪರಿಷತ್ ಯಾರಿಗೆ ಬೇಕಾಗಿದೆ?

ಇದನ್ನೂ ಓದಿ: ನಾಯಕತ್ವ ವ್ಯಕ್ತಿಯೊಬ್ಬರ ‘ದೈವಿಕ ಹಕ್ಕಲ್ಲ’: ರಾಹುಲ್ ಗಾಂಧಿ ವಿರುದ್ದ ಪ್ರಶಾಂತ್‌ ಕಿಶೋರ್‌ ವಾಗ್ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...