Homeಕರ್ನಾಟಕಲಿಂಗಾಯತರು ಅರ್ಥ ಮಾಡಿಕೊಳ್ಳಲೇಬೇಕಾದ ಪಾಠವಿದು!

ಲಿಂಗಾಯತರು ಅರ್ಥ ಮಾಡಿಕೊಳ್ಳಲೇಬೇಕಾದ ಪಾಠವಿದು!

ಇವತ್ತಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಭೂಪಟದಲ್ಲಿ ಲಿಂಗಾಯತರು ಮೇಲ್ಜಾತಿಯ ಬೆಚ್ಚಪ್ಪುಗೆಯಲ್ಲಿ ಇದ್ದಾರಾದರು, ಆರೆಸೆಸ್ ನಂಬುವ ಚಾತುರ್ವರ್ಣದ ವ್ಯವಸ್ಥೆಯಲ್ಲಿ ಅವರು ಯಾವತ್ತಿಗೂ ‘ಶೂದ್ರ ವಿಂಗಡಣೆಗೇ ಸೀಮಿತವಾಗುವಂತವರು.

- Advertisement -
- Advertisement -

ಮೊನ್ನೆ ಸಿಎಂ ಯಡಿಯೂರಪ್ಪನವರು ದಿಲ್ಲಿಗೆ ಹೋಗಿಬಂದರು. ಹಾಗೆ ಹೋಗಲು ಅವರ ಬಳಿ ಎರಡು ಕಾರಣಗಳಿದ್ದವು. ಒಂದು, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಒಂದಷ್ಟು ಪರಿಹಾರ ಮಂಜೂರು ಮಾಡಿಸಿಕೊಳ್ಳೋದು. ಎರಡನೆಯದು, ಸಚಿವ ಸಂಪುಟ ರಚನೆಗೆ ಹೈಕಮಾಂಡಿನಿಂದ ಅನುಮತಿ ಪಡೆದು ಬರೋದು. ಮೊದಲನೇ ಕೆಲಸದಲ್ಲಿ ಅವರು ಸಂಪೂರ್ಣ ಸೋತುಹೋದರೂ ಎರಡನೇ ಕೆಲಸದಲ್ಲಿ ಭಾಗಶಃ ಗೆದ್ದು ಬಂದಿದ್ದಾರೆ. ಈಗವರ ಅರೆಸಂಪುಟವೂ ಸಿದ್ದವಾಗಿದೆ. ಆದರೆ ನೆರೆ ಮತ್ತು ಸಂಪುಟ ರಚನೆ ಅಬ್ಬರದಲ್ಲಿ ಅವರ ದಿಲ್ಲಿ ಭೇಟಿಯ ಒಂದು ಸಂಗತಿ ಹೆಚ್ಚು ಮಹತ್ವ ಪಡೆಯದೇ ಹೋಯ್ತು. ಅದು ಯಡಿಯೂರಪ್ಪನವರು ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನು ಭೇಟಿಯಾದದ್ದು. ಆ ಹುದ್ದೆಯಲ್ಲಿರೋದು ಬೇರಾರೂ ಅಲ್ಲ,ಕರ್ನಾಟಕದಿಂದಲೇ ಹೋದ ಬಿ.ಎಲ್.ಸಂತೋಷ್! ಇನ್ನೂ ನಿಖರವಾಗಿ ಹೇಳಬೇಕೆಂದರೆ, ಯಡಿಯೂರಪ್ಪನವರಿಗೆ ಬಿಜೆಪಿಯೊಳಗೆ ಮಗ್ಗುಲ ಮುಳ್ಳಾಗಿ ಹೆಜ್ಜೆಹೆಜ್ಜೆಗು ಕಾಡುತ್ತಾ ಬಂದ ವ್ಯಕ್ತಿ. ಈ ಬ್ರಹ್ಮಚಾರಿ ಬ್ರಾಹ್ಮಣ ಮಹಾಶಯರ ಹಿಕಮತ್ತಿನಿಂದಲೇ ಹಿಂದೆ ತಾನು ಬಿಜೆಪಿ ತೊರೆದು ಕೆಜೆಪಿ ಕಟ್ಟಬೇಕಾಯ್ತು;ವಾಪಾಸ್ ಬಿಜೆಪಿಗೆ ಬಂದಮೇಲೂ ತನ್ನ ವಿರುದ್ಧ ಬ್ರಿಗೇಡು ಪಿತೂರಿಗಳು ನಡೆದದ್ದೂ ಸಂತೋಷ್ ಶಿಷ್ಯರ ಹಿಕಮತ್ತಿನಿಂದಲೇ ಎಂಬುದನ್ನು ಸ್ವತಃ ಯಡಿಯೂರಪ್ಪನವರೇ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದುಂಟು.

ಈಗ ಅಂಥಾ ಸಂತೋಷ್‌ರವರ ಮುಂದೆಯೇ ಯಡಿಯೂರಪ್ಪನವರು ಮಂತ್ರಿಮಂಡಲ ರಚನೆಗಾಗಿ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬಂದೆರಗಿದೆ. ಆ ವ್ಯಕ್ತಿಯ ಬಳಿಹೋಗಿ ಚರ್ಚಿಸಿದ ನಂತರವಷ್ಟೇ ಯಡಿಯೂರಪ್ಪನವರ ಸಂಪುಟ ಹಿಗ್ಗಲು ಅನುಮತಿ ಸಿಕ್ಕಿರೋದು. ಇದು ಪಕ್ಷದೊಳಗೆ ನಡೆದ ಅಕಸ್ಮಾತ್ ಹಾವುಏಣಿಯ ಆಟವಲ್ಲ, ವ್ಯವಸ್ಥಿತವಾಗಿ ಹೆಣೆದ ಹುನ್ನಾರ. ಯಾಕೆಂದರೆ ಈ ಸಂತೋಷ್‌ರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಮೇಲ್ದರ್ಜೆಗೇರಿಸಿದ್ದೇ ತೀರಾ ಇತ್ತೀಚೆಗೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಲೇಟೆಸ್ಟ್ ಆಪರೇಷನ್ ಕಮಲದ ವಹಿವಾಟುಗಳು ಶುರುವಾಗಿ ಇನ್ನೇನು ಯಡಿಯೂರಪ್ಪನವರು ಸಿಎಂ ಆಗಿಯೇ ಬಿಡುತ್ತಾರೆ ಎಂಬ ಎಲ್ಲಾ ಸಾಧ್ಯತೆಗಳು ನಿಶ್ಚಯವಾದ ನಂತರವೇ!

ಬಿಜೆಪಿಯನ್ನು ನಿಂತ್ರಿಸುತ್ತಿರುವುದು ಆರೆಸೆಸ್ ಎಂಬುದಾಗಲಿ, ಈ ಆರೆಸೆಸ್ ಯಾವ ಸಮುದಾಯದ ಕ್ಷೇಮಾಭಿವೃದ್ಧಿ ‘ಸಂಘ’ ಎಂಬುದಾಗಲಿ ಈಗ ರಹಸ್ಯವಾಗೇನೂ ಉಳಿದಿಲ್ಲ. ರಾಜಕೀಯ ಅನುಕೂಲಕ್ಕಾಗಿ ಆಯಾ ಪ್ರಾಂತ್ಯಗಳ ಮೇಲ್ವರ್ಗಗಳ ಪ್ರತಿನಿಧಿಯಂತೆ ಬಿಜೆಪಿ ವರ್ತಿಸಿದರೂ, ಅದರ ಸೈದ್ಧಾಂತಿಕ ಬೆನ್ನೆಲುಬಾದ ಆರೆಸೆಸ್‌ನ ಅಜಮಾಸು ಈ ನೂರು ವರ್ಷಗಳ ಅವಧಿಯಲ್ಲಿ ಅದಕ್ಕೆ ಮುಖ್ಯಸ್ಥನಾಗಲು ಸಾಧ್ಯವಾದದ್ದು ಕೇವಲ ಒಬ್ಬ ಬ್ರಾಹ್ಮಣೇತರ ವ್ಯಕ್ತಿಗಷ್ಟೇ ಎಂಬುದನ್ನೂ ನಾವು ಮರೆಯಬಾರದು.

ಇವತ್ತಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಭೂಪಟದಲ್ಲಿ ಲಿಂಗಾಯತರು ಮೇಲ್ಜಾತಿಯ ಬೆಚ್ಚಪ್ಪುಗೆಯಲ್ಲಿ ಇದ್ದಾರಾದರು, ಆರೆಸೆಸ್ ನಂಬುವ ಚಾತುರ್ವರ್ಣದ ವ್ಯವಸ್ಥೆಯಲ್ಲಿ ಅವರು ಯಾವತ್ತಿಗೂ ‘ಶೂದ್ರ ವಿಂಗಡಣೆಗೇ ಸೀಮಿತವಾಗುವಂತವರು. ಬ್ರಾಹ್ಮಣರೂ ಅಲ್ಲದ, ವೈಶ್ಯರೂ ಆಗದ, ಯುದ್ಧ ಮಾಡುವ ಕ್ಷತ್ರಿಯರೂ ಅನಿಸಿಕೊಳ್ಳದ, ಕೃಷಿಯಂತಹ ‘ಶ್ರಮ’ದಾಯಕ ಕಸುಬುಗಳನ್ನು ನಂಬಿಬದುಕುವ ಲಿಂಗಾಯತರು ಈ ನಾಲ್ಕು ಅಂತಸ್ತಿನ ಮಹಡಿಯಲ್ಲಿ ತಳಮಹಡಿಗೆ ತಳ್ಳಲ್ಪಡದೆ ಇನ್ನೆಲ್ಲಿಗೆ ಸೇರಿಯಾರು? ಶೂದ್ರರನ್ನು ಈ ಚಾತುರ್ವರ್ಣ ವ್ಯವಸ್ಥೆಹೇಗೆಲ್ಲ ಬಳಸಿಕೊಳ್ಳುತ್ತಾ ಬಂದಿದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ.

ತನ್ನೊಂದು ಸಂಪುಟ ರಚಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲದೆ, ತನ್ನದೇ ಪಕ್ಷ ಕೇಂದ್ರ ಸರ್ಕಾರವಾಗಿದ್ದಾಗ್ಯೂ ಭೀಕರ ಪ್ರವಾಹಕ್ಕೆ ಪರಿಹಾರವನ್ನು ಮಂಜೂರು ಮಾಡಿಸಿಕೊಳ್ಳಲಿಕ್ಕೂ ಆಗದೆ ಜನರ ದೃಷ್ಟಿಯಲ್ಲಿ ‘ನಾಲಾಯಕ್ ಸಿಎಂ ಮೂದಲಿಕೆಗೆ ತುತ್ತಾಗಿರುವ ಯಡಿಯೂರಪ್ಪನವರದು ಇಂಥಾ ಚಾರಿತ್ರಿಕ ಹಿನ್ನೆಲೆಯ ಸಾಂದರ್ಭಿಕ ನಿದರ್ಶನವಷ್ಟೆ.

ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಇಲ್ಲಿದ್ದ ಮೈತ್ರಿ ಸರ್ಕಾರವನ್ನು ಬೀಳಿಸುವುದು ಬಿಜೆಪಿಯ ಸೈದ್ಧಾಂತಿಕ ಮಿದುಳುಗಳ ಯೋಜನೆಯಾಗಿತ್ತೇ ವಿನಾಃ ಅವರನ್ನು ಸಿಎಂ ಮಾಡುವುದಾಗಿರಲಿಲ್ಲ. ಮಧ್ಯಂತರ ಚುನಾವಣೆಗೆ ಹೋಗಿ, ಯಡಿಯೂರಪ್ಪನವರ ಹಂಗಿಲ್ಲದೆ ನಡೆಯಲಿದ್ದ ಆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಜನಾದೇಶ ‘ಖರೀದಿ’ಸಿಕೊಂಡು ಒಬ್ಬ ಸಂಘನಿಷ್ಠ ವ್ಯಕ್ತಿಯನ್ನು (ಅದು ಬಿ.ಎಲ್.ಸಂತೋಷ್ ಎಂಬ ಮಾತಿದೆ) ಸಿಎಂ ಮಾಡುವ ಆಲೋಚನೆ ಅವರಿಗಿತ್ತು. ಆದರೆ ಯಡಿಯೂರಪ್ಪನವರ ಬ್ಲ್ಯಾಕ್‌ಮೇಲ್ ತಂತ್ರ ಮತ್ತು ಸ್ಪೀಕರ್-ಸುಪ್ರೀಂ ಕೋರ್ಟ್‌ನಂತಹ ಸಾಂವಿಧಾನಿಕ ಬಿಕ್ಕಟ್ಟುಗಳಿಂದಾಗಿ ಪರಿವಾರ ತನ್ನ ಯೋಜನೆಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಬೇಕಾಯ್ತು. ಆದರೆ ಅದಕ್ಕು ಮುನ್ನ ರಾಜ್ಯ ರಾಜಕಾರಣದಲ್ಲಿದ್ದ ಸಂತೋಷ್‌ರಿಗೆ ಪದೋನ್ನತಿ ಕೊಟ್ಟು ರಾಷ್ಟ್ರ ರಾಜಕಾರಣದ ಮೇಲ್ದರ್ಜೆಗೇರಿಸುವುದನ್ನು ಮರೆಯಲಿಲ್ಲ. ಆ ಮೂಲಕ ಯಡಿಯೂರಪ್ಪ ಸಿಎಂ ಆದರೂ ಸಂತೋಷ್‌ರ ಎದುರು ಕೈಕಟ್ಟಿ ನಿಲ್ಲುವಂತಹ ಅನಿವಾರ್ಯತೆಗೆ ರಾಜಕಾರಣವನ್ನು ಅಣಿಗೊಳಿಸಲಾಯ್ತು. ಇದರ ಭಾಗವಾಗಿಯೇ ಸಂಪುಟ ರಚನೆಗೆ ಸತಾಯಿಸಿದ್ದು, ಕಡೆಗೆ ಯಡಿಯೂರಪ್ಪ ಸಂತೋಷ್‌ರ ಮುಂದೆ ಅವಲತ್ತು ಕಂಡ ನಂತರವೇ ಗ್ರೀನ್‌ಸಿಗ್ನಲ್ ಸಿಕ್ಕಿದ್ದು.

ಇದನ್ನು ಕೇವಲ ರಾಜಕೀಯ ಸನ್ನಿವೇಶವಾಗಿಯಷ್ಟೆ ನೋಡದೆ, ಶೂದ್ರರನ್ನು ಪಳಗಿಸುವ ಮತ್ತು ಕಟ್ಟಕಡೆಗೆ ಅವರು ತಮ್ಮ ಮುಂದೆ ತಲೆಬಾಗಿ ನಿಲ್ಲುವಂತೆ ಮಾಡುವ ಚಾರಿತ್ರಿಕ ಹುನ್ನಾರದ ಭಾಗವಾಗಿಯೂ ನೋಡಬೇಕಿದೆ. ಭರತ ಖಂಡದ ಇತಿಹಾಸ ಸಾಗಿಬಂದಿರುವುದೇ ಇಂಥಾ ಹುನ್ನಾರಗಳ ಅಡ್ಡಹಾದಿಯಲ್ಲಿ.‘ಇವ ನಮ್ಮವ’ ಎಂಬ ಕಾರಣಕ್ಕೆ ಯಡಿಯೂರಪ್ಪನವರ ಬೆನ್ನಿಗೆ ನಿಲ್ಲಲು ಹೋಗಿ ಚಾತುರ್ವರ್ಣ ಪ್ರತಿಪಾದಕ ಬಿಜೆಪಿಯ ಸಾರಾಸಗಟು ಮತದಾರರು ಎನಿಸಿಕೊಂಡಿರುವ ಲಿಂಗಾಯತರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅದಕ್ಕು ಮುನ್ನ ತನ್ನ ರಾಜಕೀಯ ಹಿತಾಸಕ್ತಿಗಾಗಿ ತನ್ನನ್ನು ನಂಬಿಹೊರಟಿರುವ ಲಿಂಗಾಯತ ಸಮುದಾಯಕ್ಕೆ ತಾನೆಂಥ ಚಾರಿತ್ರಿಕ ದ್ರೋಹ ಎಸಗುತ್ತಿದ್ದೇನೆ ಎಂಬುದನ್ನು ಯಡಿಯೂರಪ್ಪನವರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಲಿಂಗಾಯತ ಎಂಬುದು ಜಾತಿ ಅಲ್ಲವೇ ಅಲ್ಲ….ಲಿಂಗಾಯತರಲ್ಲಿ ಬ್ರಾಹ್ಮಣ ,ಕ್ಷತ್ರಿಯ, ವೈಶ್ಯ,ಶೂದ್ರ ಮೂಲದ ಒಳಪಂಗಡದವರಿದ್ದಾರೆ…..

  2. For heaven sake donot go with wrong information on caste Veerashaiva Lingayaths are more intelligent. Brave. Couraged people than so called subgroup shudra ksthriya all other brahmin groups . There is no major recognizable contribution to human society from bramins than Lingayaths. Santhosh may be now acting but he is now where recognised in Karnataka.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...