Homeಕರ್ನಾಟಕಲಿಂಗಾಯತರು ಅರ್ಥ ಮಾಡಿಕೊಳ್ಳಲೇಬೇಕಾದ ಪಾಠವಿದು!

ಲಿಂಗಾಯತರು ಅರ್ಥ ಮಾಡಿಕೊಳ್ಳಲೇಬೇಕಾದ ಪಾಠವಿದು!

ಇವತ್ತಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಭೂಪಟದಲ್ಲಿ ಲಿಂಗಾಯತರು ಮೇಲ್ಜಾತಿಯ ಬೆಚ್ಚಪ್ಪುಗೆಯಲ್ಲಿ ಇದ್ದಾರಾದರು, ಆರೆಸೆಸ್ ನಂಬುವ ಚಾತುರ್ವರ್ಣದ ವ್ಯವಸ್ಥೆಯಲ್ಲಿ ಅವರು ಯಾವತ್ತಿಗೂ ‘ಶೂದ್ರ ವಿಂಗಡಣೆಗೇ ಸೀಮಿತವಾಗುವಂತವರು.

- Advertisement -
- Advertisement -

ಮೊನ್ನೆ ಸಿಎಂ ಯಡಿಯೂರಪ್ಪನವರು ದಿಲ್ಲಿಗೆ ಹೋಗಿಬಂದರು. ಹಾಗೆ ಹೋಗಲು ಅವರ ಬಳಿ ಎರಡು ಕಾರಣಗಳಿದ್ದವು. ಒಂದು, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಒಂದಷ್ಟು ಪರಿಹಾರ ಮಂಜೂರು ಮಾಡಿಸಿಕೊಳ್ಳೋದು. ಎರಡನೆಯದು, ಸಚಿವ ಸಂಪುಟ ರಚನೆಗೆ ಹೈಕಮಾಂಡಿನಿಂದ ಅನುಮತಿ ಪಡೆದು ಬರೋದು. ಮೊದಲನೇ ಕೆಲಸದಲ್ಲಿ ಅವರು ಸಂಪೂರ್ಣ ಸೋತುಹೋದರೂ ಎರಡನೇ ಕೆಲಸದಲ್ಲಿ ಭಾಗಶಃ ಗೆದ್ದು ಬಂದಿದ್ದಾರೆ. ಈಗವರ ಅರೆಸಂಪುಟವೂ ಸಿದ್ದವಾಗಿದೆ. ಆದರೆ ನೆರೆ ಮತ್ತು ಸಂಪುಟ ರಚನೆ ಅಬ್ಬರದಲ್ಲಿ ಅವರ ದಿಲ್ಲಿ ಭೇಟಿಯ ಒಂದು ಸಂಗತಿ ಹೆಚ್ಚು ಮಹತ್ವ ಪಡೆಯದೇ ಹೋಯ್ತು. ಅದು ಯಡಿಯೂರಪ್ಪನವರು ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನು ಭೇಟಿಯಾದದ್ದು. ಆ ಹುದ್ದೆಯಲ್ಲಿರೋದು ಬೇರಾರೂ ಅಲ್ಲ,ಕರ್ನಾಟಕದಿಂದಲೇ ಹೋದ ಬಿ.ಎಲ್.ಸಂತೋಷ್! ಇನ್ನೂ ನಿಖರವಾಗಿ ಹೇಳಬೇಕೆಂದರೆ, ಯಡಿಯೂರಪ್ಪನವರಿಗೆ ಬಿಜೆಪಿಯೊಳಗೆ ಮಗ್ಗುಲ ಮುಳ್ಳಾಗಿ ಹೆಜ್ಜೆಹೆಜ್ಜೆಗು ಕಾಡುತ್ತಾ ಬಂದ ವ್ಯಕ್ತಿ. ಈ ಬ್ರಹ್ಮಚಾರಿ ಬ್ರಾಹ್ಮಣ ಮಹಾಶಯರ ಹಿಕಮತ್ತಿನಿಂದಲೇ ಹಿಂದೆ ತಾನು ಬಿಜೆಪಿ ತೊರೆದು ಕೆಜೆಪಿ ಕಟ್ಟಬೇಕಾಯ್ತು;ವಾಪಾಸ್ ಬಿಜೆಪಿಗೆ ಬಂದಮೇಲೂ ತನ್ನ ವಿರುದ್ಧ ಬ್ರಿಗೇಡು ಪಿತೂರಿಗಳು ನಡೆದದ್ದೂ ಸಂತೋಷ್ ಶಿಷ್ಯರ ಹಿಕಮತ್ತಿನಿಂದಲೇ ಎಂಬುದನ್ನು ಸ್ವತಃ ಯಡಿಯೂರಪ್ಪನವರೇ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದುಂಟು.

ಈಗ ಅಂಥಾ ಸಂತೋಷ್‌ರವರ ಮುಂದೆಯೇ ಯಡಿಯೂರಪ್ಪನವರು ಮಂತ್ರಿಮಂಡಲ ರಚನೆಗಾಗಿ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬಂದೆರಗಿದೆ. ಆ ವ್ಯಕ್ತಿಯ ಬಳಿಹೋಗಿ ಚರ್ಚಿಸಿದ ನಂತರವಷ್ಟೇ ಯಡಿಯೂರಪ್ಪನವರ ಸಂಪುಟ ಹಿಗ್ಗಲು ಅನುಮತಿ ಸಿಕ್ಕಿರೋದು. ಇದು ಪಕ್ಷದೊಳಗೆ ನಡೆದ ಅಕಸ್ಮಾತ್ ಹಾವುಏಣಿಯ ಆಟವಲ್ಲ, ವ್ಯವಸ್ಥಿತವಾಗಿ ಹೆಣೆದ ಹುನ್ನಾರ. ಯಾಕೆಂದರೆ ಈ ಸಂತೋಷ್‌ರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಮೇಲ್ದರ್ಜೆಗೇರಿಸಿದ್ದೇ ತೀರಾ ಇತ್ತೀಚೆಗೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಲೇಟೆಸ್ಟ್ ಆಪರೇಷನ್ ಕಮಲದ ವಹಿವಾಟುಗಳು ಶುರುವಾಗಿ ಇನ್ನೇನು ಯಡಿಯೂರಪ್ಪನವರು ಸಿಎಂ ಆಗಿಯೇ ಬಿಡುತ್ತಾರೆ ಎಂಬ ಎಲ್ಲಾ ಸಾಧ್ಯತೆಗಳು ನಿಶ್ಚಯವಾದ ನಂತರವೇ!

ಬಿಜೆಪಿಯನ್ನು ನಿಂತ್ರಿಸುತ್ತಿರುವುದು ಆರೆಸೆಸ್ ಎಂಬುದಾಗಲಿ, ಈ ಆರೆಸೆಸ್ ಯಾವ ಸಮುದಾಯದ ಕ್ಷೇಮಾಭಿವೃದ್ಧಿ ‘ಸಂಘ’ ಎಂಬುದಾಗಲಿ ಈಗ ರಹಸ್ಯವಾಗೇನೂ ಉಳಿದಿಲ್ಲ. ರಾಜಕೀಯ ಅನುಕೂಲಕ್ಕಾಗಿ ಆಯಾ ಪ್ರಾಂತ್ಯಗಳ ಮೇಲ್ವರ್ಗಗಳ ಪ್ರತಿನಿಧಿಯಂತೆ ಬಿಜೆಪಿ ವರ್ತಿಸಿದರೂ, ಅದರ ಸೈದ್ಧಾಂತಿಕ ಬೆನ್ನೆಲುಬಾದ ಆರೆಸೆಸ್‌ನ ಅಜಮಾಸು ಈ ನೂರು ವರ್ಷಗಳ ಅವಧಿಯಲ್ಲಿ ಅದಕ್ಕೆ ಮುಖ್ಯಸ್ಥನಾಗಲು ಸಾಧ್ಯವಾದದ್ದು ಕೇವಲ ಒಬ್ಬ ಬ್ರಾಹ್ಮಣೇತರ ವ್ಯಕ್ತಿಗಷ್ಟೇ ಎಂಬುದನ್ನೂ ನಾವು ಮರೆಯಬಾರದು.

ಇವತ್ತಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಭೂಪಟದಲ್ಲಿ ಲಿಂಗಾಯತರು ಮೇಲ್ಜಾತಿಯ ಬೆಚ್ಚಪ್ಪುಗೆಯಲ್ಲಿ ಇದ್ದಾರಾದರು, ಆರೆಸೆಸ್ ನಂಬುವ ಚಾತುರ್ವರ್ಣದ ವ್ಯವಸ್ಥೆಯಲ್ಲಿ ಅವರು ಯಾವತ್ತಿಗೂ ‘ಶೂದ್ರ ವಿಂಗಡಣೆಗೇ ಸೀಮಿತವಾಗುವಂತವರು. ಬ್ರಾಹ್ಮಣರೂ ಅಲ್ಲದ, ವೈಶ್ಯರೂ ಆಗದ, ಯುದ್ಧ ಮಾಡುವ ಕ್ಷತ್ರಿಯರೂ ಅನಿಸಿಕೊಳ್ಳದ, ಕೃಷಿಯಂತಹ ‘ಶ್ರಮ’ದಾಯಕ ಕಸುಬುಗಳನ್ನು ನಂಬಿಬದುಕುವ ಲಿಂಗಾಯತರು ಈ ನಾಲ್ಕು ಅಂತಸ್ತಿನ ಮಹಡಿಯಲ್ಲಿ ತಳಮಹಡಿಗೆ ತಳ್ಳಲ್ಪಡದೆ ಇನ್ನೆಲ್ಲಿಗೆ ಸೇರಿಯಾರು? ಶೂದ್ರರನ್ನು ಈ ಚಾತುರ್ವರ್ಣ ವ್ಯವಸ್ಥೆಹೇಗೆಲ್ಲ ಬಳಸಿಕೊಳ್ಳುತ್ತಾ ಬಂದಿದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ.

ತನ್ನೊಂದು ಸಂಪುಟ ರಚಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲದೆ, ತನ್ನದೇ ಪಕ್ಷ ಕೇಂದ್ರ ಸರ್ಕಾರವಾಗಿದ್ದಾಗ್ಯೂ ಭೀಕರ ಪ್ರವಾಹಕ್ಕೆ ಪರಿಹಾರವನ್ನು ಮಂಜೂರು ಮಾಡಿಸಿಕೊಳ್ಳಲಿಕ್ಕೂ ಆಗದೆ ಜನರ ದೃಷ್ಟಿಯಲ್ಲಿ ‘ನಾಲಾಯಕ್ ಸಿಎಂ ಮೂದಲಿಕೆಗೆ ತುತ್ತಾಗಿರುವ ಯಡಿಯೂರಪ್ಪನವರದು ಇಂಥಾ ಚಾರಿತ್ರಿಕ ಹಿನ್ನೆಲೆಯ ಸಾಂದರ್ಭಿಕ ನಿದರ್ಶನವಷ್ಟೆ.

ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಇಲ್ಲಿದ್ದ ಮೈತ್ರಿ ಸರ್ಕಾರವನ್ನು ಬೀಳಿಸುವುದು ಬಿಜೆಪಿಯ ಸೈದ್ಧಾಂತಿಕ ಮಿದುಳುಗಳ ಯೋಜನೆಯಾಗಿತ್ತೇ ವಿನಾಃ ಅವರನ್ನು ಸಿಎಂ ಮಾಡುವುದಾಗಿರಲಿಲ್ಲ. ಮಧ್ಯಂತರ ಚುನಾವಣೆಗೆ ಹೋಗಿ, ಯಡಿಯೂರಪ್ಪನವರ ಹಂಗಿಲ್ಲದೆ ನಡೆಯಲಿದ್ದ ಆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಜನಾದೇಶ ‘ಖರೀದಿ’ಸಿಕೊಂಡು ಒಬ್ಬ ಸಂಘನಿಷ್ಠ ವ್ಯಕ್ತಿಯನ್ನು (ಅದು ಬಿ.ಎಲ್.ಸಂತೋಷ್ ಎಂಬ ಮಾತಿದೆ) ಸಿಎಂ ಮಾಡುವ ಆಲೋಚನೆ ಅವರಿಗಿತ್ತು. ಆದರೆ ಯಡಿಯೂರಪ್ಪನವರ ಬ್ಲ್ಯಾಕ್‌ಮೇಲ್ ತಂತ್ರ ಮತ್ತು ಸ್ಪೀಕರ್-ಸುಪ್ರೀಂ ಕೋರ್ಟ್‌ನಂತಹ ಸಾಂವಿಧಾನಿಕ ಬಿಕ್ಕಟ್ಟುಗಳಿಂದಾಗಿ ಪರಿವಾರ ತನ್ನ ಯೋಜನೆಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಬೇಕಾಯ್ತು. ಆದರೆ ಅದಕ್ಕು ಮುನ್ನ ರಾಜ್ಯ ರಾಜಕಾರಣದಲ್ಲಿದ್ದ ಸಂತೋಷ್‌ರಿಗೆ ಪದೋನ್ನತಿ ಕೊಟ್ಟು ರಾಷ್ಟ್ರ ರಾಜಕಾರಣದ ಮೇಲ್ದರ್ಜೆಗೇರಿಸುವುದನ್ನು ಮರೆಯಲಿಲ್ಲ. ಆ ಮೂಲಕ ಯಡಿಯೂರಪ್ಪ ಸಿಎಂ ಆದರೂ ಸಂತೋಷ್‌ರ ಎದುರು ಕೈಕಟ್ಟಿ ನಿಲ್ಲುವಂತಹ ಅನಿವಾರ್ಯತೆಗೆ ರಾಜಕಾರಣವನ್ನು ಅಣಿಗೊಳಿಸಲಾಯ್ತು. ಇದರ ಭಾಗವಾಗಿಯೇ ಸಂಪುಟ ರಚನೆಗೆ ಸತಾಯಿಸಿದ್ದು, ಕಡೆಗೆ ಯಡಿಯೂರಪ್ಪ ಸಂತೋಷ್‌ರ ಮುಂದೆ ಅವಲತ್ತು ಕಂಡ ನಂತರವೇ ಗ್ರೀನ್‌ಸಿಗ್ನಲ್ ಸಿಕ್ಕಿದ್ದು.

ಇದನ್ನು ಕೇವಲ ರಾಜಕೀಯ ಸನ್ನಿವೇಶವಾಗಿಯಷ್ಟೆ ನೋಡದೆ, ಶೂದ್ರರನ್ನು ಪಳಗಿಸುವ ಮತ್ತು ಕಟ್ಟಕಡೆಗೆ ಅವರು ತಮ್ಮ ಮುಂದೆ ತಲೆಬಾಗಿ ನಿಲ್ಲುವಂತೆ ಮಾಡುವ ಚಾರಿತ್ರಿಕ ಹುನ್ನಾರದ ಭಾಗವಾಗಿಯೂ ನೋಡಬೇಕಿದೆ. ಭರತ ಖಂಡದ ಇತಿಹಾಸ ಸಾಗಿಬಂದಿರುವುದೇ ಇಂಥಾ ಹುನ್ನಾರಗಳ ಅಡ್ಡಹಾದಿಯಲ್ಲಿ.‘ಇವ ನಮ್ಮವ’ ಎಂಬ ಕಾರಣಕ್ಕೆ ಯಡಿಯೂರಪ್ಪನವರ ಬೆನ್ನಿಗೆ ನಿಲ್ಲಲು ಹೋಗಿ ಚಾತುರ್ವರ್ಣ ಪ್ರತಿಪಾದಕ ಬಿಜೆಪಿಯ ಸಾರಾಸಗಟು ಮತದಾರರು ಎನಿಸಿಕೊಂಡಿರುವ ಲಿಂಗಾಯತರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅದಕ್ಕು ಮುನ್ನ ತನ್ನ ರಾಜಕೀಯ ಹಿತಾಸಕ್ತಿಗಾಗಿ ತನ್ನನ್ನು ನಂಬಿಹೊರಟಿರುವ ಲಿಂಗಾಯತ ಸಮುದಾಯಕ್ಕೆ ತಾನೆಂಥ ಚಾರಿತ್ರಿಕ ದ್ರೋಹ ಎಸಗುತ್ತಿದ್ದೇನೆ ಎಂಬುದನ್ನು ಯಡಿಯೂರಪ್ಪನವರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಲಿಂಗಾಯತ ಎಂಬುದು ಜಾತಿ ಅಲ್ಲವೇ ಅಲ್ಲ….ಲಿಂಗಾಯತರಲ್ಲಿ ಬ್ರಾಹ್ಮಣ ,ಕ್ಷತ್ರಿಯ, ವೈಶ್ಯ,ಶೂದ್ರ ಮೂಲದ ಒಳಪಂಗಡದವರಿದ್ದಾರೆ…..

  2. For heaven sake donot go with wrong information on caste Veerashaiva Lingayaths are more intelligent. Brave. Couraged people than so called subgroup shudra ksthriya all other brahmin groups . There is no major recognizable contribution to human society from bramins than Lingayaths. Santhosh may be now acting but he is now where recognised in Karnataka.

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...