Homeಕರ್ನಾಟಕಯುವಜನರೊಂದಿಗೆ ಸಮಾನತೆಯ ಆಶಯದೊಂದಿಗೆ ಸಂವಾದಕ್ಕಿಳಿದ 'ಮತ್ತೆ ಕಲ್ಯಾಣ'ದ ಪ್ರಯೋಗ ಜನಪರವಲ್ಲವೇ?

ಯುವಜನರೊಂದಿಗೆ ಸಮಾನತೆಯ ಆಶಯದೊಂದಿಗೆ ಸಂವಾದಕ್ಕಿಳಿದ ‘ಮತ್ತೆ ಕಲ್ಯಾಣ’ದ ಪ್ರಯೋಗ ಜನಪರವಲ್ಲವೇ?

- Advertisement -
- Advertisement -

ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳುವಳಿಯ ಆಶಯಗಳನ್ನು ಜನಸಾಮಾನ್ಯರು ಮತ್ತು ಯುವಜನರ ಬಳಿ ಮತ್ತೆ ತೆಗೆದುಕೊಂಡು ಹೋಗಬೇಕೆನ್ನುವ ಆಶಯದೊಂದಿಗೆ ಒಂದು ವಿಶಿಷ್ಟ ಕಾರ್ಯಕ್ರಮ ಶುರುವಾಗಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಜಿಗಳ ನೇತೃತ್ವದಲ್ಲಿ ವಿವಿಧ ಸ್ವಾಮೀಜಿಗಳು, ಜನಪರ ಸಂಘಟನೆಗಳ ಸಹಯೋಗದಲ್ಲಿ ಮತ್ತೆ ಕಲ್ಯಾಣ ಎಂಬ ಆಂದೋಲನ ನಡೆಯುತ್ತಿದೆ.

ಮತ್ತೆ ಕಲ್ಯಾಣದ ಪರಿಕಲ್ಪನೆ ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಾನವೀಯ ಮೌಲ್ಯಗಳನ್ನು ಮುನ್ನೆಲೆಗೆ ತಂದ ಶರಣ ಚಳುವಳಿಯ ಆಶಯಗಳನ್ನು ಸಮಾಜದ ಮಧ್ಯೆ ತೆಗೆದುಕೊಂಡು ಹೋಗಲು ಹುಟ್ಟಿಕೊಂಡ ಒಂದು ಆಂದೋಲನವಾಗಿದೆ. ಈ ಆಂದೋಲನವು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕಾರ್ಯಕ್ರಮವನ್ನು ನಡೆಸುತ್ತಿದ್ದು ಯುವಜನರೊಂದಿಗೆ ಸಂವಾದ ನಡೆಸುವುದು ಇದರ ಮುಖ್ಯವಾದ ಭಾಗವಾಗಿದೆ.

ನಾವು ಮುಖ್ಯವಾಗಿ ಗಮನಿಸಬೇಕೇರುವುದು ಬಹುಪಾಲು ವಾಟ್ಸಪ್ , ಫೇಸ್‌ಬುಕ್ ಪದವಿಧರರಾಗಿರುವ ಯುವಜನರ ಜೊತೆ ಈ ಆಂದೋಲನ ಎದುರಾಗುತ್ತಿರುವುದು. ಇಲ್ಲಿ ಸ್ವಾಮೀಜಿಯವರನ್ನು ಒಳಗೊಂಡಂತೆ ಇಬ್ಬರು ಚಿಂತಕರಿಗೆ ಬಂದಂತಹ ಹೆಚ್ಚಿನ ಪ್ರಶ್ನೆಗಳಾವುವು ನೋಡಬೇಕು. ಎಲ್ಲಾ ಕಡೆ ಎದುರಾಗುತ್ತಿರುವ ಪ್ರಶ್ನೆ ಎಂದರೆ ಮೀಸಲಾತಿಯಿಂದ ಮೇಲ್ಜಾತಿಯವರಿಗೆ ಅನ್ಯಾಯವಾಗುತ್ತಿದೆ. ಈ ಮೀಸಲಾತಿಯನ್ನು ಕೊನೆಗಾಣಿಸಬೇಕಲ್ಲವೆ ಎಂಬುದು. ಈ ರೀತಿಯ ಯೋಚನೆಗಳು ಇತ್ತೀಚಿಗೆ ಹೆಚ್ಚು ಕೇಳಿ ಬರುತ್ತಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣ ಬಲಪಂಥೀಯ ಶಕ್ತಿಗಳು ಸೋಷೀಯಲ್ ಮೀಡೀಯಾದಲ್ಲಿ ಇದನ್ನು ಒಂದು ನಿರಂತರ ಅಜೆಂಡಾವಾಗಿ ಮಾಡಿಕೊಂಡು ಅಭಿಪ್ರಾಯ ರೂಪಿಸಲು ಸತತವಾಗಿ ಪ್ರಯತ್ನಪಡುತ್ತಲೇ ಇವೆ. ಮೀಸಲಾತಿಯಿಂದಲೇ ಈ ದೇಶ ಹಿಂದುಳಿದಿದೆ ಎನ್ನುವಂತಹ ಮನಸ್ಥಿತಿಯನ್ನು ರೂಪಿಸುವಲ್ಲಿ ಒಂದು ಮಟ್ಟಿಗೆ ಯಶಸ್ಸನ್ನೂ ಪಡೆದಿದ್ದಾರೆ. ದುರಂತವೆಂದರೆ ಎಸ್.ಸಿ/ ಎಸ್.ಟಿ ಸಮುದಾಯಗಳಂತೆ ಮೀಸಲಾತಿಯ ಫಲಾನುಭವಿಗಳಾದಂತಹ ಒ.ಬಿ.ಸಿ ಸಮುದಾಯದ ಯುವಜನರಲ್ಲೇ  ಹೆಚ್ಚು ಈ ರೀತಿಯ ಮನಸ್ಥಿತಿ ಬೆಳೆಯುತ್ತಿದೆ.

ಈ ಪ್ರಶ್ನೆಯನ್ನು ಸಮರ್ಥವಾಗಿ ಎದುರಿಸುತ್ತಿರುವ ಪಂಡಿತಾರಾಧ್ಯ ಸ್ವಾಮೀಜಿಗಳು ಜಾತಿ ಇರುವವರೆಗೂ, ಅಸಮಾನತೆ ತೊಲಗುವವರೆಗೂ ಮೀಸಲಾತಿ ಅವಶ್ಯಕ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ನಿಜವಾಗಲೂ ಸಮಾನತೆ ಬಂದಮೇಲೆ ಮೀಸಲಾತಿ, ಬಡ್ತಿ ಮೀಸಲಾತಿಯ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದ್ದರು. ಈ ಸುಧ್ದಿ ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಕಟವಾಗಿ ನಂತರ ಸ್ವಾಮೀಜಿಯವರು ಸ್ಫಷ್ಟನೆ ನೀಡಬೇಕಾಗಿ ಬಂದಿತು. ಈ ಮಧ್ಯೆ ಸಾಕಷ್ಟು ಜನರ ಟೀಕೆಗಳು ಬಂದು ಹೋದವು. ಈಗ ಅರ್ಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮುಗಿಯುತ್ತಾ ಬಂದಿದೆ. ಎಲ್ಲಾ ಜಿಲ್ಲೆಗಳಲ್ಲೂ ಬಂದ ಜಾತಿ ಬಗೆಗಿನ, ಮೀಸಲಾತಿ ಬಗೆಗಿನ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದ್ದಾರೆ ಮತ್ತು ಲಿಂಗಾಯತ ಜಾತಿವಾದಿಗಳು ಸಹ ಕಟು ವಾಸ್ತವಗಳನ್ನು ಕೇಳಿಸಿಕೊಂಡಿದ್ದಾರೆ.

ತರಿಕೆರೆಯಲ್ಲಿ ಸ್ವಾಮೀಜಿಗಳಿಗೆ ಒಬ್ಬ ವಿದ್ಯಾರ್ಥಿ ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಮತ್ತು ಹನ್ನೆರಡನೆ ಶತಮಾನದ ಶರಣರ ಕೊಲೆಗಳು ಒಂದೇನಾ ? ಅನ್ನುವ ಪ್ರಶ್ನೆಗೆ ಇದು ಭಿನ್ನವಾದ ಸಂದರ್ಭದಲ್ಲಿ ನಡೆದ ಹತ್ಯೆಗಳಾದರೂ, ಹತ್ಯೆ ಮಾಡಿದರು ಒಂದೇ ವಂಶಜರು, ಪಟ್ಟಭದ್ರ ಹಿತಾಸಕ್ತಿಗಳಿಂದಲೇ ನಡೆಯಿತು ಎಂದು ಉತ್ತರಿಸಿದರು. ಈ ರೀತಿ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಮತ್ತೆ ಕಲ್ಯಾಣ ತಂಡ ಎದುರಿಸುತ್ತಾ ಯಶಸ್ವಿಯಾಗಿ ಇಂದಿಗೆ ೧೯ ಜಿಲ್ಲೆಗಳನ್ನು ಮುಕ್ತಾಯ ಮಾಡಿದೆ. ಈ ತಿಂಗಳಾದ್ಯಂತ ಆಂದೋಲನ ಮುಂದುವರೆಯಲಿದ್ದು ಈ ಪೀಳಿಗೆಯ ಯುವಜನರ ಪ್ರಶ್ನೆಗಳನ್ನು ಎದುರಿಸುತ್ತಾ ಪರಸ್ಪರ ಮುಖಾಮುಖಿಯು ಹೊಸದನ್ನು ಕಲಿಸುವ ಸಾಧ್ಯತೆಯಿದೆ.

ಮಂಗಳೂರಿಗೆ ಮೋಹನ್ ಆಳ್ವಾ ಅಂತ ವ್ಯಕ್ತಿಯನ್ನ ಒಳಗೊಂಡಿದ್ದು ಸಹಾ ವಿಮರ್ಶೆಗೊಳಗಾಯಿತು. ವಿಮರ್ಶೆಯ ಕಣ್ಣಿನಿಂದಲೇ ಈ ಆಂದೋಲನದ ಜೊತೆ ಇರುವ ಅವಶ್ಯಕತೆ ಖಂಡಿತ ಇದೆ ಎಂದು ಎನಿಸುತ್ತದೆ. ತಮಗೆ ನೂರೆಂಟು ಮಿತಿಗಳನ್ನು ಹಾಕಿಕೊಂಡು, ಮಠಗಳನ್ನು ತಮ್ಮ ಸಮುದಾಯಗಳವರ ಹಿತಕ್ಕಾಗಿ, ಮಠದ ಆಸ್ತಿ ಮಾಡಲು ಮತ್ತು ರಾಜಕೀಯ ಮಾಡುವುದೇ ಉದ್ದೇಶವಾಗಿ ನಡೆಸುತ್ತಿರುವ ಹಲವು ಮಠಾಧೀಶರ ನಡುವೆ ನಿಜವಾಗಲೂ ಬಸವ ತತ್ವ ಪ್ರಚಾರಕರಾಗಿ ಮಾಡಬೇಕಾದ ಕೆಲಸವನ್ನು ಮತ್ತೆ ಕಲ್ಯಾಣದ ಮೂಲಕ ಪಂಡಿತಾರಾಧ್ಯ ಸ್ವಾಮೀಜಿಯವರು ವಿಭಿನ್ನವಾದ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನಿಸುತ್ತಿದೆ.

ಇಂತಹ ಪ್ರಯೋಗಗಳನ್ನು ನಡೆಸುವಾಗ ಬಹಳ ಎಚ್ಚರದಿಂದ ಹೆಜ್ಜೆ ಹಾಕಬೇಕಾಗುತ್ತದೆ. ನೀವು ಎಂತದ್ದೇ ಜನಪರವಾದ ಕಾರ್ಯಕ್ರಮವನ್ನು ಬೀದಿಗೆ ಬಂದು ಮಾಡಿ ಅದು ಆಳುವ ವರ್ಗದ ಪರವಿಲ್ಲದಿದ್ದರೆ ಅದಕ್ಕೆ ಕೊಡಬೇಕಾದಷ್ಟು ಪ್ರಾಶಾಸ್ತ್ಯವನ್ನು  ಮಾರಿಕೊಂಡ ಮಾಧ್ಯಮಗಳು ಕೊಡುವುದಿಲ್ಲ. ಇದು ಬೀದಿಗಿಳಿದು ಜನಪರ ಕೆಲಸ ಮಾಡುವ ದಲಿತ, ಜೀವಪರ ಹೋರಾಟಗಾರರ ಅನುಭವಕ್ಕೆ ಬಂದಿರುತ್ತದೆ. ಬಲಪಂಥೀಯ ಶಕ್ತಿಗಳು ಪದೇ ಪದೇ ಹಲವು ವಿಚಾರಗಳಲ್ಲಿ ಗೆಲುವು ಸಾಧಿಸಿದಾಗ ಯುವಜನರನ್ನು ಒಳಗೊಳ್ಳಬೇಕು ಎನ್ನುವ ಸಾಕಷ್ಟು ಮಾತು ಇದುವರೆಗೆ ನಡೆದಿದೆ.

ಬುದ್ಧಿವಂತರು ಯುವಜನರ ಜೊತೆ ಕೆಲಸ ಮಾಡುವಂತಹ ಜೀವಪರರಿಗೆ ಬೆಂಬಲಿಸದೆ ಜೊತೆ ನಿಲ್ಲದೆ ಇರುವ ಎಷ್ಟೋ ಉದಾಹರಣೆಗಳಿವೆ. ಮತ್ತೆ ಕಲ್ಯಾಣ ಯಾವುದೇ ವಿಮರ್ಶೆಗೆ ಅತೀತವಾದದ್ದಲ್ಲ. ಒಂದು ಮಠದ ಹಿನ್ನಲೆಯ ಸ್ವಾಮೀಜಿಯ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಾದ್ದರಿಂದ ಅನುಮಾನದಿಂದಲೇ ನೋಡಬೇಕಾದ ಅವಶ್ಯಕತೆ ಖಂಡಿತ ಇದೆ. ಆದರೆ ಇದೇ ವಿಚಾರವಾಗಿ ಆ ಆಂದೋಲನ ಎಲ್ಲರನ್ನು ಒಳಗೊಳ್ಳುವ ಮೂಲಕ ಏನನ್ನು ಹೇಳಲು ಹೊರಟಿದೆ ಎನ್ನುವುದನ್ನು ಯೋಚಿಸಬೇಕಿದೆ. ಈ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಹುಸಿ ದೇಶ/ದ್ವೇಷಭಕ್ತಿಯನ್ನೆ ಮನಸ್ಸಲ್ಲಿ ತುಂಬಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನಮ್ಮದೇ ನೆಲದಲ್ಲಿ ಒಂದು ಮಾನವೀಯ ತತ್ವಗಳ ಆಧಾರದಲ್ಲಿ ಹನ್ನೆರಡನೆ ಶತಮಾನದಲ್ಲಿ  ಒಂದು ಸಿದ್ದಾಂತ ಹುಟ್ಟಿತ್ತು, ಅದು ಸರ್ವ ಜಾತಿಗಳ ನಡುವೆ ಸಮಾನತೆಯನ್ನು ಬಯಸಿತ್ತು, ಕಾಯಕ ಘನತೆಯನ್ನು ಎತ್ತಿ ಹಿಡಿದಿತ್ತು, ಅಂತರ್ಜಾತಿ ವಿವಾಹಗಳನ್ನು ಮಾಡಲು ಸಂಘರ್ಷ ನಡೆಸಿತ್ತು, ಅದನ್ನು ನಾವು ಮತ್ತೆ ನೆನೆಪಿಸಿಕೊಳ್ಳಬೇಕಿದೆ ಎನಿಸುತ್ತದೆ.

ಇದರ ಅನುಭವದ ಹಿನ್ನೆಲೆಯಲ್ಲಿ ಜಾತಿವಿನಾಶದಂತಹ ದೊಡ್ಡ ಹೆಜ್ಜೆಗಳನ್ನಿಡಲು ಬಸವ ತತ್ವದಲ್ಲಿರುವ ಅಂಶಗಳು ಯಾವುವು, ಕರ್ಮಠತನಕ್ಕೆ ಒಗ್ಗಿಕೊಂಡ ಲಿಂಗಾಯತ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ ಎಂದು ಮುಂದಿನ ದಿನಗಳಲ್ಲಿ ಚಿಂತಿಸಬೇಕಿದೆ. ಈಗ ನಡೆಯುತ್ತಿರುವ ಆಂದೋಲನವನ್ನು ನಾವು ನೋಡಬೇಕಾದ ರೀತಿ ಹೇಗೆ ಎಂದು ಮರುಚಿಂತಿಸಬೇಕಿದೆ ಎನಿಸುತ್ತದೆ. ಶರಣರು ಸಾಮಾಜಿಕ ಸಮಸ್ಯೆಗಳಿಗೆ ಸೂಚಿಸಿದ ಮೌಲ್ಯಾಧಾರಿತ ಪರಿಹಾರಗಳು, ಅವರು ವಿಚಾರಗಳನ್ನು ಸರಳ ವಚನಗಳ ರೂಪದಲ್ಲಿ ಮನಸ್ಸಿನಾಳಕ್ಕೆ ಇಳಿಸಿದ ಬಗ್ಗೆ ಇನ್ನಷ್ಟು ಸಂಶೋಧನೆ, ಅಧ್ಯಯನವನ್ನು ಪ್ರಜ್ಞಾವಂತ ವಲಯ ಮಾಡಬೇಕಿದೆ. ನಮ್ಮದೇ ನೆಲದ ಬಸವ ಚಿಂತನೆಯನ್ನು ಇಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನಗಳಿಗೆ ಬಲ ತುಂಬ ಬೇಕಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...