Homeಕರ್ನಾಟಕಯುವಜನರೊಂದಿಗೆ ಸಮಾನತೆಯ ಆಶಯದೊಂದಿಗೆ ಸಂವಾದಕ್ಕಿಳಿದ 'ಮತ್ತೆ ಕಲ್ಯಾಣ'ದ ಪ್ರಯೋಗ ಜನಪರವಲ್ಲವೇ?

ಯುವಜನರೊಂದಿಗೆ ಸಮಾನತೆಯ ಆಶಯದೊಂದಿಗೆ ಸಂವಾದಕ್ಕಿಳಿದ ‘ಮತ್ತೆ ಕಲ್ಯಾಣ’ದ ಪ್ರಯೋಗ ಜನಪರವಲ್ಲವೇ?

- Advertisement -
- Advertisement -

ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳುವಳಿಯ ಆಶಯಗಳನ್ನು ಜನಸಾಮಾನ್ಯರು ಮತ್ತು ಯುವಜನರ ಬಳಿ ಮತ್ತೆ ತೆಗೆದುಕೊಂಡು ಹೋಗಬೇಕೆನ್ನುವ ಆಶಯದೊಂದಿಗೆ ಒಂದು ವಿಶಿಷ್ಟ ಕಾರ್ಯಕ್ರಮ ಶುರುವಾಗಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಜಿಗಳ ನೇತೃತ್ವದಲ್ಲಿ ವಿವಿಧ ಸ್ವಾಮೀಜಿಗಳು, ಜನಪರ ಸಂಘಟನೆಗಳ ಸಹಯೋಗದಲ್ಲಿ ಮತ್ತೆ ಕಲ್ಯಾಣ ಎಂಬ ಆಂದೋಲನ ನಡೆಯುತ್ತಿದೆ.

ಮತ್ತೆ ಕಲ್ಯಾಣದ ಪರಿಕಲ್ಪನೆ ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಾನವೀಯ ಮೌಲ್ಯಗಳನ್ನು ಮುನ್ನೆಲೆಗೆ ತಂದ ಶರಣ ಚಳುವಳಿಯ ಆಶಯಗಳನ್ನು ಸಮಾಜದ ಮಧ್ಯೆ ತೆಗೆದುಕೊಂಡು ಹೋಗಲು ಹುಟ್ಟಿಕೊಂಡ ಒಂದು ಆಂದೋಲನವಾಗಿದೆ. ಈ ಆಂದೋಲನವು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕಾರ್ಯಕ್ರಮವನ್ನು ನಡೆಸುತ್ತಿದ್ದು ಯುವಜನರೊಂದಿಗೆ ಸಂವಾದ ನಡೆಸುವುದು ಇದರ ಮುಖ್ಯವಾದ ಭಾಗವಾಗಿದೆ.

ನಾವು ಮುಖ್ಯವಾಗಿ ಗಮನಿಸಬೇಕೇರುವುದು ಬಹುಪಾಲು ವಾಟ್ಸಪ್ , ಫೇಸ್‌ಬುಕ್ ಪದವಿಧರರಾಗಿರುವ ಯುವಜನರ ಜೊತೆ ಈ ಆಂದೋಲನ ಎದುರಾಗುತ್ತಿರುವುದು. ಇಲ್ಲಿ ಸ್ವಾಮೀಜಿಯವರನ್ನು ಒಳಗೊಂಡಂತೆ ಇಬ್ಬರು ಚಿಂತಕರಿಗೆ ಬಂದಂತಹ ಹೆಚ್ಚಿನ ಪ್ರಶ್ನೆಗಳಾವುವು ನೋಡಬೇಕು. ಎಲ್ಲಾ ಕಡೆ ಎದುರಾಗುತ್ತಿರುವ ಪ್ರಶ್ನೆ ಎಂದರೆ ಮೀಸಲಾತಿಯಿಂದ ಮೇಲ್ಜಾತಿಯವರಿಗೆ ಅನ್ಯಾಯವಾಗುತ್ತಿದೆ. ಈ ಮೀಸಲಾತಿಯನ್ನು ಕೊನೆಗಾಣಿಸಬೇಕಲ್ಲವೆ ಎಂಬುದು. ಈ ರೀತಿಯ ಯೋಚನೆಗಳು ಇತ್ತೀಚಿಗೆ ಹೆಚ್ಚು ಕೇಳಿ ಬರುತ್ತಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣ ಬಲಪಂಥೀಯ ಶಕ್ತಿಗಳು ಸೋಷೀಯಲ್ ಮೀಡೀಯಾದಲ್ಲಿ ಇದನ್ನು ಒಂದು ನಿರಂತರ ಅಜೆಂಡಾವಾಗಿ ಮಾಡಿಕೊಂಡು ಅಭಿಪ್ರಾಯ ರೂಪಿಸಲು ಸತತವಾಗಿ ಪ್ರಯತ್ನಪಡುತ್ತಲೇ ಇವೆ. ಮೀಸಲಾತಿಯಿಂದಲೇ ಈ ದೇಶ ಹಿಂದುಳಿದಿದೆ ಎನ್ನುವಂತಹ ಮನಸ್ಥಿತಿಯನ್ನು ರೂಪಿಸುವಲ್ಲಿ ಒಂದು ಮಟ್ಟಿಗೆ ಯಶಸ್ಸನ್ನೂ ಪಡೆದಿದ್ದಾರೆ. ದುರಂತವೆಂದರೆ ಎಸ್.ಸಿ/ ಎಸ್.ಟಿ ಸಮುದಾಯಗಳಂತೆ ಮೀಸಲಾತಿಯ ಫಲಾನುಭವಿಗಳಾದಂತಹ ಒ.ಬಿ.ಸಿ ಸಮುದಾಯದ ಯುವಜನರಲ್ಲೇ  ಹೆಚ್ಚು ಈ ರೀತಿಯ ಮನಸ್ಥಿತಿ ಬೆಳೆಯುತ್ತಿದೆ.

ಈ ಪ್ರಶ್ನೆಯನ್ನು ಸಮರ್ಥವಾಗಿ ಎದುರಿಸುತ್ತಿರುವ ಪಂಡಿತಾರಾಧ್ಯ ಸ್ವಾಮೀಜಿಗಳು ಜಾತಿ ಇರುವವರೆಗೂ, ಅಸಮಾನತೆ ತೊಲಗುವವರೆಗೂ ಮೀಸಲಾತಿ ಅವಶ್ಯಕ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ನಿಜವಾಗಲೂ ಸಮಾನತೆ ಬಂದಮೇಲೆ ಮೀಸಲಾತಿ, ಬಡ್ತಿ ಮೀಸಲಾತಿಯ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದ್ದರು. ಈ ಸುಧ್ದಿ ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಕಟವಾಗಿ ನಂತರ ಸ್ವಾಮೀಜಿಯವರು ಸ್ಫಷ್ಟನೆ ನೀಡಬೇಕಾಗಿ ಬಂದಿತು. ಈ ಮಧ್ಯೆ ಸಾಕಷ್ಟು ಜನರ ಟೀಕೆಗಳು ಬಂದು ಹೋದವು. ಈಗ ಅರ್ಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮುಗಿಯುತ್ತಾ ಬಂದಿದೆ. ಎಲ್ಲಾ ಜಿಲ್ಲೆಗಳಲ್ಲೂ ಬಂದ ಜಾತಿ ಬಗೆಗಿನ, ಮೀಸಲಾತಿ ಬಗೆಗಿನ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದ್ದಾರೆ ಮತ್ತು ಲಿಂಗಾಯತ ಜಾತಿವಾದಿಗಳು ಸಹ ಕಟು ವಾಸ್ತವಗಳನ್ನು ಕೇಳಿಸಿಕೊಂಡಿದ್ದಾರೆ.

ತರಿಕೆರೆಯಲ್ಲಿ ಸ್ವಾಮೀಜಿಗಳಿಗೆ ಒಬ್ಬ ವಿದ್ಯಾರ್ಥಿ ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಮತ್ತು ಹನ್ನೆರಡನೆ ಶತಮಾನದ ಶರಣರ ಕೊಲೆಗಳು ಒಂದೇನಾ ? ಅನ್ನುವ ಪ್ರಶ್ನೆಗೆ ಇದು ಭಿನ್ನವಾದ ಸಂದರ್ಭದಲ್ಲಿ ನಡೆದ ಹತ್ಯೆಗಳಾದರೂ, ಹತ್ಯೆ ಮಾಡಿದರು ಒಂದೇ ವಂಶಜರು, ಪಟ್ಟಭದ್ರ ಹಿತಾಸಕ್ತಿಗಳಿಂದಲೇ ನಡೆಯಿತು ಎಂದು ಉತ್ತರಿಸಿದರು. ಈ ರೀತಿ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಮತ್ತೆ ಕಲ್ಯಾಣ ತಂಡ ಎದುರಿಸುತ್ತಾ ಯಶಸ್ವಿಯಾಗಿ ಇಂದಿಗೆ ೧೯ ಜಿಲ್ಲೆಗಳನ್ನು ಮುಕ್ತಾಯ ಮಾಡಿದೆ. ಈ ತಿಂಗಳಾದ್ಯಂತ ಆಂದೋಲನ ಮುಂದುವರೆಯಲಿದ್ದು ಈ ಪೀಳಿಗೆಯ ಯುವಜನರ ಪ್ರಶ್ನೆಗಳನ್ನು ಎದುರಿಸುತ್ತಾ ಪರಸ್ಪರ ಮುಖಾಮುಖಿಯು ಹೊಸದನ್ನು ಕಲಿಸುವ ಸಾಧ್ಯತೆಯಿದೆ.

ಮಂಗಳೂರಿಗೆ ಮೋಹನ್ ಆಳ್ವಾ ಅಂತ ವ್ಯಕ್ತಿಯನ್ನ ಒಳಗೊಂಡಿದ್ದು ಸಹಾ ವಿಮರ್ಶೆಗೊಳಗಾಯಿತು. ವಿಮರ್ಶೆಯ ಕಣ್ಣಿನಿಂದಲೇ ಈ ಆಂದೋಲನದ ಜೊತೆ ಇರುವ ಅವಶ್ಯಕತೆ ಖಂಡಿತ ಇದೆ ಎಂದು ಎನಿಸುತ್ತದೆ. ತಮಗೆ ನೂರೆಂಟು ಮಿತಿಗಳನ್ನು ಹಾಕಿಕೊಂಡು, ಮಠಗಳನ್ನು ತಮ್ಮ ಸಮುದಾಯಗಳವರ ಹಿತಕ್ಕಾಗಿ, ಮಠದ ಆಸ್ತಿ ಮಾಡಲು ಮತ್ತು ರಾಜಕೀಯ ಮಾಡುವುದೇ ಉದ್ದೇಶವಾಗಿ ನಡೆಸುತ್ತಿರುವ ಹಲವು ಮಠಾಧೀಶರ ನಡುವೆ ನಿಜವಾಗಲೂ ಬಸವ ತತ್ವ ಪ್ರಚಾರಕರಾಗಿ ಮಾಡಬೇಕಾದ ಕೆಲಸವನ್ನು ಮತ್ತೆ ಕಲ್ಯಾಣದ ಮೂಲಕ ಪಂಡಿತಾರಾಧ್ಯ ಸ್ವಾಮೀಜಿಯವರು ವಿಭಿನ್ನವಾದ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನಿಸುತ್ತಿದೆ.

ಇಂತಹ ಪ್ರಯೋಗಗಳನ್ನು ನಡೆಸುವಾಗ ಬಹಳ ಎಚ್ಚರದಿಂದ ಹೆಜ್ಜೆ ಹಾಕಬೇಕಾಗುತ್ತದೆ. ನೀವು ಎಂತದ್ದೇ ಜನಪರವಾದ ಕಾರ್ಯಕ್ರಮವನ್ನು ಬೀದಿಗೆ ಬಂದು ಮಾಡಿ ಅದು ಆಳುವ ವರ್ಗದ ಪರವಿಲ್ಲದಿದ್ದರೆ ಅದಕ್ಕೆ ಕೊಡಬೇಕಾದಷ್ಟು ಪ್ರಾಶಾಸ್ತ್ಯವನ್ನು  ಮಾರಿಕೊಂಡ ಮಾಧ್ಯಮಗಳು ಕೊಡುವುದಿಲ್ಲ. ಇದು ಬೀದಿಗಿಳಿದು ಜನಪರ ಕೆಲಸ ಮಾಡುವ ದಲಿತ, ಜೀವಪರ ಹೋರಾಟಗಾರರ ಅನುಭವಕ್ಕೆ ಬಂದಿರುತ್ತದೆ. ಬಲಪಂಥೀಯ ಶಕ್ತಿಗಳು ಪದೇ ಪದೇ ಹಲವು ವಿಚಾರಗಳಲ್ಲಿ ಗೆಲುವು ಸಾಧಿಸಿದಾಗ ಯುವಜನರನ್ನು ಒಳಗೊಳ್ಳಬೇಕು ಎನ್ನುವ ಸಾಕಷ್ಟು ಮಾತು ಇದುವರೆಗೆ ನಡೆದಿದೆ.

ಬುದ್ಧಿವಂತರು ಯುವಜನರ ಜೊತೆ ಕೆಲಸ ಮಾಡುವಂತಹ ಜೀವಪರರಿಗೆ ಬೆಂಬಲಿಸದೆ ಜೊತೆ ನಿಲ್ಲದೆ ಇರುವ ಎಷ್ಟೋ ಉದಾಹರಣೆಗಳಿವೆ. ಮತ್ತೆ ಕಲ್ಯಾಣ ಯಾವುದೇ ವಿಮರ್ಶೆಗೆ ಅತೀತವಾದದ್ದಲ್ಲ. ಒಂದು ಮಠದ ಹಿನ್ನಲೆಯ ಸ್ವಾಮೀಜಿಯ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಾದ್ದರಿಂದ ಅನುಮಾನದಿಂದಲೇ ನೋಡಬೇಕಾದ ಅವಶ್ಯಕತೆ ಖಂಡಿತ ಇದೆ. ಆದರೆ ಇದೇ ವಿಚಾರವಾಗಿ ಆ ಆಂದೋಲನ ಎಲ್ಲರನ್ನು ಒಳಗೊಳ್ಳುವ ಮೂಲಕ ಏನನ್ನು ಹೇಳಲು ಹೊರಟಿದೆ ಎನ್ನುವುದನ್ನು ಯೋಚಿಸಬೇಕಿದೆ. ಈ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಹುಸಿ ದೇಶ/ದ್ವೇಷಭಕ್ತಿಯನ್ನೆ ಮನಸ್ಸಲ್ಲಿ ತುಂಬಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನಮ್ಮದೇ ನೆಲದಲ್ಲಿ ಒಂದು ಮಾನವೀಯ ತತ್ವಗಳ ಆಧಾರದಲ್ಲಿ ಹನ್ನೆರಡನೆ ಶತಮಾನದಲ್ಲಿ  ಒಂದು ಸಿದ್ದಾಂತ ಹುಟ್ಟಿತ್ತು, ಅದು ಸರ್ವ ಜಾತಿಗಳ ನಡುವೆ ಸಮಾನತೆಯನ್ನು ಬಯಸಿತ್ತು, ಕಾಯಕ ಘನತೆಯನ್ನು ಎತ್ತಿ ಹಿಡಿದಿತ್ತು, ಅಂತರ್ಜಾತಿ ವಿವಾಹಗಳನ್ನು ಮಾಡಲು ಸಂಘರ್ಷ ನಡೆಸಿತ್ತು, ಅದನ್ನು ನಾವು ಮತ್ತೆ ನೆನೆಪಿಸಿಕೊಳ್ಳಬೇಕಿದೆ ಎನಿಸುತ್ತದೆ.

ಇದರ ಅನುಭವದ ಹಿನ್ನೆಲೆಯಲ್ಲಿ ಜಾತಿವಿನಾಶದಂತಹ ದೊಡ್ಡ ಹೆಜ್ಜೆಗಳನ್ನಿಡಲು ಬಸವ ತತ್ವದಲ್ಲಿರುವ ಅಂಶಗಳು ಯಾವುವು, ಕರ್ಮಠತನಕ್ಕೆ ಒಗ್ಗಿಕೊಂಡ ಲಿಂಗಾಯತ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ ಎಂದು ಮುಂದಿನ ದಿನಗಳಲ್ಲಿ ಚಿಂತಿಸಬೇಕಿದೆ. ಈಗ ನಡೆಯುತ್ತಿರುವ ಆಂದೋಲನವನ್ನು ನಾವು ನೋಡಬೇಕಾದ ರೀತಿ ಹೇಗೆ ಎಂದು ಮರುಚಿಂತಿಸಬೇಕಿದೆ ಎನಿಸುತ್ತದೆ. ಶರಣರು ಸಾಮಾಜಿಕ ಸಮಸ್ಯೆಗಳಿಗೆ ಸೂಚಿಸಿದ ಮೌಲ್ಯಾಧಾರಿತ ಪರಿಹಾರಗಳು, ಅವರು ವಿಚಾರಗಳನ್ನು ಸರಳ ವಚನಗಳ ರೂಪದಲ್ಲಿ ಮನಸ್ಸಿನಾಳಕ್ಕೆ ಇಳಿಸಿದ ಬಗ್ಗೆ ಇನ್ನಷ್ಟು ಸಂಶೋಧನೆ, ಅಧ್ಯಯನವನ್ನು ಪ್ರಜ್ಞಾವಂತ ವಲಯ ಮಾಡಬೇಕಿದೆ. ನಮ್ಮದೇ ನೆಲದ ಬಸವ ಚಿಂತನೆಯನ್ನು ಇಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನಗಳಿಗೆ ಬಲ ತುಂಬ ಬೇಕಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...