Homeಮುಖಪುಟಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!

ಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!

ತದ್ವಿರುದ್ಧ ಅನಿಸುವ ವಿಚಾರಗಳ ನಡುವೆಯೂ ನಿಜವಾದ ಪ್ರಾಮಾಣಿಕತೆ ಇದ್ದರೆ ಪರಸ್ಪರ ಗೌರವ ಸಾಧ್ಯ ಮತ್ತು ಅನ್ಯಾಯ, ದಮನಗಳ ವಿರುದ್ಧದ ಹೋರಾಟದಲ್ಲಿ ಸಮನ್ವಯ ಸಾಧ್ಯ.

- Advertisement -
- Advertisement -

ಚಿಂತಕ, ಸಂಘಟಕ ಮಹೇಂದ್ರ ಕುಮಾರ್ ಅವರು ಅಕಾಲಿಕವಾಗಿ ನಿಧನರಾದ ಸುದ್ದಿಯನ್ನು ಇಂದು ಬೆಳಿಗ್ಗೆ ಕೇಳಿದಾಗ ಆಘಾವಾಯಿತು. ಹಿಂದೆ ಅವರ ಮಾತುಗಳನ್ನು ಕೇಳಿದ್ದೆ. ನಿನ್ನೆ ತೀರಾ ತಡರಾತ್ರಿ ಯಾರೋ ಶೇರ್ ಮಾಡಿದ್ದ ಪೋಸ್ಟನ್ನು ಫೇಸ್‌ಬುಕ್ ಗ್ರೂಪೊಂದರಲ್ಲಿ ಅಪ್ರೂವ್ ಮಾಡಿದ್ದೆ. ಇವತ್ತು ಬೆಳಿಗ್ಗೆ ಕೂಡಾ ಅವರ ಸಂದರ್ಶನ ಕೇಳಿದ್ದೆ. ನಂತರ ಸಮಾಜಿಕ ಜಾಲತಾಣಗಳಲ್ಲಿ ಅವರದ್ದೇ ನಿಧನದ ಸುದ್ದಿ ಮತ್ತು ಸಂತಾಪಗಳು. ಕೆಲವು ತುಂಬಾ ಭಾವನಾತ್ಮಕವಾದವುಗಳು ಕೂಡಾ. ಅದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ನನಗ್ಯಾಕೋ ಇದನ್ನು ಬರೆಯಬೇಕು ಅನಿಸಿತು.

ಅವರು ಭಜರಂಗದಳದ ಸಂಸ್ಥಾಪಕರು ಮತ್ತು ಸಂಚಾಲಕರಾಗಿದ್ದ ಕಾರಣದಿಂದಲೋ ಏನೋ ನಾನು ಮೊದಮೊದಲಿಗೆ ಅವರನ್ನು ಸಂಶಯದಿಂದಲೇ ನೋಡುತ್ತಿದ್ದೆ ಮತ್ತು ಸಂಘಪರಿವಾರ ತಂತ್ರಗಳನ್ನು ಹತ್ತಿರದಿಂದ ಬಲ್ಲವರಿಗೆ ಅದು ಸಹಜವೂ ಆಗಿತ್ತು. ಅಲ್ಲದೇ ಚರ್ಚ್ ದಾಳಿ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದುದೂ ಒಂದು ಕಾರಣ. ನಂತರದಲ್ಲಿ ಅವರ ಅನೇಕ ಅಭಿಪ್ರಾಯಗಳು ನನಗೆ ಒಪ್ಪಿಗೆಯಾದವು ಮತ್ತು ಕೆಲವು ಮೆಚ್ಚಿಗೆಯೂ ಆದವು. ಅವರು ಅನೇಕ ವಿಷಯಗಳ ಬಗ್ಗೆ ಸ್ಪಷ್ಟ ಮತ್ತು ಖಚಿತ ಅಭಿಪ್ರಾಯ ಹೊಂದಿರುವುದು ಮನವರಿಕೆಯಾಯಿತು. ವಿಚಾರ ಏನೇ ಇರಲಿ, ಅದರಲ್ಲಿ ಪ್ರಾಮಾಣಿಕತೆ ಇದ್ದಾಗ ಅದು ಗೌರವಕ್ಕೆ ಪಾತ್ರವಾಗುತ್ತದೆ. ಅವರ ಮಾತುಗಳಲ್ಲಿ ಅಂತಹ ಪ್ರಾಮಾಣಿಕತೆ ಕಾಣುತ್ತಿತ್ತು.

ಬಲಪಂಥೀಯರು ಎನಿಸಿಕೊಂಡಿದ್ದ ಮಹೇಂದ್ರ ಕುಮಾರ್ ಅವರು ನಿಧಾನವಾಗಿ ಎಡಪಂಥದ ಕಡೆಗೆ ನಡಿಗೆ ಆರಂಭಿಸಿದುದರಲ್ಲಿ ನನಗೆ ಅಚ್ಚರಿಯೇನೂ ಕಾಣಿಸಿರುವುದಿಲ್ಲ. ಇಂದು ಚಿಂತಕರಾಗಿ ಹೆಸರಾಗಿರುವ ಒಂದು ತಲೆಮಾರಿನ ಬಾಲಕರನೇಕರು ಆರೆಸ್ಸೆಸ್ ವಿಷಪಾಠ ನುಂಗಿ, ನಂತರ ನಿಜ ತಿಳಿದು ಅದನ್ನು ಉಗುಳಿ ಬಂದವರು ಮತ್ತು ಇಂದು ಅದು ಪ್ರತಿಪಾದಿಸುವ ಮೇಲ್ಜಾತಿಯ ಸರ್ವಾಧಿಪತ್ಯ, ಮೇಲ್ಜಾತಿ- ವರ್ಗಗಳ ಗುಲಾಮಿ, ಅಲ್ಪಸಂಖ್ಯಾತರ ವಿರುದ್ಧ ದ್ವೇಷ, ಕುತಂತ್ರ, ಇಬ್ಬಗೆ ನೀತಿ ಇತ್ಯಾದಿ ಎಲ್ಲವನ್ನೂ ಸಕ್ರಿಯವಾಗಿ ವಿರೋಧಿಸುತ್ತಿರುವವರು. ಇದಕ್ಕೆ ಕಾರಣವೆಂದರೆ ಸಂಘದ ಶಾಖೆಗಳಲ್ಲಿ ಆಕರ್ಷಕ ಮತ್ತು ಪ್ರಿಯವಾದ ದೇಶಪ್ರೇಮದ ಹೆಸರಿನಲ್ಲಿ ಅಮಾಯಕ ಬಾಲಕರನ್ನು ಸಂಘಟನೆಗೆ ಸೇರಿಸಿಕೊಳ್ಳಲಾಗುತ್ತದೆ ಮತ್ತು ಚೆನ್ನಾಗಿ ಯೋಜಿಸಲಾದ ಆಟಗಳು ಮತ್ತು ತಿರುಚಿದ ಕಟ್ಟುಕತೆಗಳಿಂದ ಮುಗ್ಧ ಮನಸ್ಸುಗಳನ್ನು ತೊಳೆದು ದ್ವೇಷದ ವಿಷ ಮತ್ತು ಗುಲಾಮಿಯ ಕೊಳಕನ್ನು ತುಂಬಿಸಿ, ಸ್ವತಂತ್ರ ಚಿಂತನೆಯನ್ನು ಕೊಂದುಬಿಡಲಾಗುತ್ತದೆ.

ನಿಜವಾಗಿಯೂ ದೇಶವನ್ನು- ಅಂದರೆ, ಅದರಲ್ಲಿರುವ ಎಲ್ಲಾ ಜನರನ್ನು ಪ್ರೀತಿಸುವವರು, ಅವರ ಈ ಸಂಘಟನೆಯ ನಿಜ ಉದ್ದೇಶವನ್ನು ಬೇಗನೇ ತಿಳಿದುಕೊಂಡು ಅದರ ಕಟ್ಟಾ ವಿರೋಧಿಗಳಾಗುತ್ತಾರೆ. ಅಂತವರು ಎಡಪಂಥೀಯ ವಿಚಾರಗಳತ್ತ ಸರಿಯುತ್ತಾರೆ. (ವೈಯಕ್ತಿಕವಾಗಿ ನಾನೂ ಹೈಸ್ಕೂಲು ಬಾಲಕನಾಗಿದ್ದಾಗ ಕಲ್ಲಡ್ಕ ಪ್ರಭಾವಕ್ಕೆ ಬಿದ್ದು ಅವರ ಅಚ್ಚು ಮೆಚ್ಚಾಗಿದ್ದೆ. ಆದರೆ, ಅವರ ಬೇಗಡೆ ದೇಶಪ್ರೇಮ ಮತ್ತು ಕ್ರೂರ ದ್ವೇಷ ಮನೋಭಾವ, ಅಪ್ರಾಮಾಣಿಕ ಠಕ್ಕುತನಗಳನ್ನು ಬೇಗನೇ ತಿಳಿದು ಹೊರಬಂದು ಎಡಪಂಥೀಯನಾದೆ.)

ಮಹೇಂದ್ರ ಕುಮಾರ್ ಅವರ ಮಾತುಗಳನ್ನು ಕೇಳಿದಾಗ, ಅವುಗಳಲ್ಲಿ ಕಾಣುವುದು ಜನಪ್ರೀತಿ. ಭಾರತದ ಬಹುತೇಕ ಜನರು ಬೇರೆಬೇರೆ ಪ್ರಮಾಣಗಳಲ್ಲಿ ಧರ್ಮ ಮತ್ತು ದೈವನಿಷ್ಟರು. ಈ ನಂಬಿಕೆಗಳನ್ನು ಬಳಸಿಕೊಂಡು ಜನರನ್ನು ವಂಚಿಸಲೂ ಸಾಧ್ಯ ಮತ್ತು ಅವರ ಕರ್ತೃತ್ವ ಶಕ್ತಿಯನ್ನು ಬಡಿದೆಬ್ಬಿಸಲೂ ಸಾಧ್ಯ. ಈ ಎರಡನೆಯ ಸಾಧ್ಯತೆ ಮಹೇಂದ್ರ ಕುಮಾರ್ ಅವರಿಗೆ ಚೆನ್ನಾಗಿ ತಿಳಿದಿತ್ತು. ಸಾರಸಗಟಾಗಿ ಧರ್ಮ ದೇವರುಗಳನ್ನು ತಿರಸ್ಕರಿಸಿ, ನಿಂದಿಸಿದರೆ, ಜನರು ದೂರವಾಗುತ್ತಾರೆ ಎಂಬುದು ಸತ್ಯ.

ಮಹೇಂದ್ರ ಕುಮಾರ್ ಅವರು ತಮ್ಮ ನಿಧನದ ಹೊತ್ತಿನಲ್ಲಿ ಇಂತಹಾ ಸಮನ್ವಯರ ಸಂಧಿಕಾಲದಲ್ಲಿದ್ದರೆ?. ನನಗೆ ಅವರ ನೇರ ಪರಿಚಯ ಇರಲಿಲ್ಲವಾದರೂ, ಅವರ ನಿಧನದ ಸುದ್ದಿ ಕೇಳಿ, ಅವರ ವ್ಯಕ್ತಿತ್ವದ ಚಿತ್ರ ನನ್ನ ಕಣ್ಣಮುಂದೆ ಸುಳಿದಾಗ ನನಗೆ ತಕ್ಷಣ ನೆನಪಾದುದು ಫ್ರೀಯ್ ಬ್ರಿಟ್ಟೋ ಎಂಬ ಡೊಮಿನಿಕನ್ ಪಾದ್ರಿ ನಡೆಸಿದ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಅವರ ದೀರ್ಘ ಸಂದರ್ಶನದ ಪುಸ್ತಕ- “ಫಿಡೆಲ್ ಎಂಡ್ ರಿಲೀಜನ್”.  ನಾನಿದನ್ನು ಮೂರು ದಶಕಗಳ ಹಿಂದೆ ಓದಿದ್ದು, ನನ್ನ ಮೇಲೆ ಭಾರೀ ಪ್ರಭಾವ ಬೀರಿತ್ತು. ಇದು ನಿಜವಾದ ಧಾರ್ಮಿಕ ಪ್ರಜ್ಞೆ ಮತ್ತು ಸಮಾಜವಾದಿ ಮಾನವೀಯ ಪ್ರಜ್ಞೆಯ ಮುಖಾಮುಖಿಯಾಗಿತ್ತು. ಮಹೇಂದ್ರ ಕುಮಾರ್ ಅವರಿಗೂ ಫಿಡೆಲ್‌ಗೆ ಸಂಬಂಧಿಸಿದ ವಿಚಾರಗಳಿಗೂ ಏನು ಸಂಬಂಧ ಎಂದು ನಿಮಗೆ ಅಚ್ಚರಿಯಾಗಬಹಃದು. ನೀವೇ ಇದನ್ನಿಲ್ಲಿ ನೋಡಬಹುದು.

ಕೆಲವರಿಗೆ ಆಶ್ಚರ್ಯ ಆಗಬಹುದು- ಚರ್ಚ್ ಮತ್ತು ನಾಸ್ತಿಕ ಕ್ರಾಂತಿಕಾರಿಗಳು ಸಶಸ್ತ್ರ ಹೋರಾಟ ನಡೆಸಿದ ದೊಡ್ಡ ಪರಂಪರೆಯೇ ಲ್ಯಾಟಿನ್ ಅಮೇರಿಕಾದಲ್ಲಿದೆ. ಫ್ರೀಯ್ ಬ್ರಿಟ್ಟೋ ಧಾರ್ಮಿಕ ವ್ಯಕ್ತಿ; ನಾಸ್ತಿಕನಲ್ಲ. ಕ್ಯಾಸ್ಟ್ರೊ ಘೋಷಿತ ನಾಸ್ತಿಕ. ಆದರೆ, ಇಬ್ಬರೂ ಕರ್ಮಠರಲ್ಲ. ಇಬ್ಬರೂ ಸಮಾಜವಾದಿ ವಿಚಾರಗಳ ಎಡಪಂಥೀಯರು.

ಈ ಪುಸ್ತಕದಲ್ಲಿ ಒಂದು ಕಡೆ ಕ್ರಿಸ್ತನ ಪವಾಡಗಳ ಬಗ್ಗೆ ಫಿಡೆಲ್ ಅವರು ಮಾತನಾಡುತ್ತಾರೆ. ನನಗೆ ನೆನಪಿರುವಂತೆ ಅವರು ಹೇಳಿದ್ದು ಹೀಗೆ- “ಏಸು ಕ್ರಿಸ್ತ ಪವಾಡಗಳನ್ನು ಮಾಡಿದ. ಬ್ರೆಡ್ ಮತ್ತು ವೈನನ್ನು ದ್ವಿಗುಣಗೊಳಿಸಿದ, ಹೆಚ್ಚಿಸಿದ! -ಹಸಿದವರಿಗಾಗಿ. ನಾವು ಕಮ್ಯುನಿಸ್ಟರು ಕ್ರಾಂತಿಯಿಂದ ಏನು ಮಾಡುತ್ತಿದ್ದೇವೆ? ಹಸಿದವರಿಗೆ ಅಹಾರೋತ್ಪನ್ನ ಹೆಚ್ಚಿಸುವುದು, ಆಸ್ಪತ್ರೆಗಳನ್ನು ಹೆಚ್ಚಿಸುವುದು,

ಮಕ್ಕಳಿಗೆ ಶಾಲೆಗಳನ್ನು ಹೆಚ್ಚಿಸುವುದು, ದುಡಿಯುವ ಕೈಗಳಿಗೆ ಉದ್ಯೋಗ ಹೆಚ್ಚಿಸುವುದು… ಜನರ ಜೀವನ ಮಟ್ಟ ಹೆಚ್ಚಿಸುವುದು!.. ಕ್ರಿಸ್ತ ಮಾಡಿದ್ದಕ್ಕೂ, ನಾವು ಮಾಡುತ್ತಿರುವುದಕ್ಕೂ ಏನು ವ್ಯತ್ಯಾಸವಿದೆ?”

ಅಮೇರಿಕಾದ ಫ್ರುಟ್ ಇಂಡಸ್ಟ್ರಿಯ ಅಡಿಯಾಳಾಗಿದ್ದ ಬ್ಯಾಟಿಸ್ಟಾ ಎಂಬ ಸರ್ವಾಧಿಕಾರಿಯ ಹುಟ್ಟಡಗಿಸಿದ್ದ ಫಿಡೆಲ್, ಚೆ, ರೌಲ್, ಕ್ಯಾಮಿಲಿಯೊರಂತಹ ಬೆರಳೆಣಿಕೆಯ ಮತ್ತು ಆ ಕಾಲದಲ್ಲಿ ಅರೆಬೆಂದಿದ್ದ ಯುವ ಕಮ್ಯುನಿಸ್ಟರು,  ಸೈದ್ಧಾಂತಿಕತೆಯನ್ನೇ ಮುಂದುಮಾಡಿಕೊಂಡು ನಿಷ್ಕ್ರಿಯವಾಗಿದ್ದ ಕ್ಯೂಬನ್  ಕಮ್ಯುನಿಸ್ಟ್ ಪಾರ್ಟಿಯ ಕಣ್ಣೆದುರೇ ಕ್ರಾಂತಿ ಮಾಡಿದರಲ್ಲ. ಎಲ್ಲಾ ಟೀಕೆ, ವಿರೋಧಗಳ ನಡುವೆ ದೇಶ ಕಟ್ಟಿದರಲ್ಲ! ಅದು ಹೇಗೆ ಸಾಧ್ಯವಾಯಿತು? ಇಂತಹಾ ವಿಷಯಗಳಲ್ಲೇ ಮಹೇಂದ್ರ ಕುಮಾರ್ ಅಂತವರ ಸಂಘಟನಾ ಶಕ್ತಿಯ ಮಹತ್ವವಿರುವುದು.

ಅಜ್ಞಾನ, ಬಡತನ, ನಮ್ಮ ಹಿಂದೂತ್ವವಾದದಂತೆ ಇದ್ದ ಸ್ಪಾನಿಷ್ ಬ್ರಾಂಡಿನ- “ಕ್ರಿಸ್ತನನ್ನು ಮರೆತ ಕ್ರೂರ ಗುಲಾಮಿ ಕ್ರಿಶ್ಚಿಯಾನಿಟಿ”ಯ ಅಡಿಯಾಳುಗಳಾಗಿದ್ದ ಬಡಜನರಿಗೆ ನೀವು ಮೂರ್ಖರು, ಏಸುವಿನ ಪವಾಡ ಸುಳ್ಳು ಇತ್ಯಾದಿ ನಾಸ್ತಿಕ ಪ್ರವಚನ ಉದುರಿಸುತ್ತಿದ್ದರೆ, ಆ ಜನರು ಈ ಕ್ರಾಂತಿಕಾರಿಗಳನ್ನು- ಅವರ ಉದ್ದೇಶ ಎಷ್ಟೇ ಚೆನ್ನಾಗಿರಲಿ ಒದ್ದೋಡಿಸುತ್ತಿದ್ದರು. ಗ್ರ್ಯಾನ್ಮಾ ಎಂಬ ತಗಡು ಹಡಗಿನಲ್ಲಿ ಸ್ವಾತಂತ್ರ್ಯದ ಕನಸು ಹೊತ್ತು ಬಂದ ನೂರು ಚಿಲ್ಲರೆ ಯುವಕರಲ್ಲಿ ಮೊದಲ ದಾಳಿಯಲ್ಲಿ ಬದುಕುಳಿದ ಒಂದು ಡಜನ್ ಜನರು, ಒಂದು ವರ್ಷದೊಳಗೆ ಜನಸಾಗರವಾಗಿ, ಅಧಿಕಾರ ಹಿಡಿಯುತ್ತಿರಲಿಲ್ಲ.

ಜನರೇನಿದ್ದಾರೋ, ಅದೇ ಆಗಿದ್ದಾರೆ! ನಿಮ್ಮ ತತ್ತ್ವಕ್ಕಾಗಿ ಜನರಿಲ್ಲ. ಜನರಿಗಾಗಿ ನಿಮ್ಮ ತತ್ತ್ವವಿದೆ. ಸೈದ್ಧಾಂತಿಕ ಶುದ್ಧತೆ ಇರಲಿ ಬಿಡಿ, ಅಹಿಂದರು ಕೇಳುತ್ತಿರುವ ಸಮಾನತೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವೇ ಯುವಕರು ಅವರ ದಾರಿ ಹಿಡಿಯುತ್ತಾರೆ. ಬಹುಶಃ ಮಹೇಂದ್ರ ಕುಮಾರ್ ಇಂತದ್ದೇ ಚಿಂತನೆ ಹೊಂದಿದ್ದರು.

ನನಗೆ ಅವರ ಸಂದರ್ಭದಲ್ಲಿ ಇದೇ ವಿಷಯ ನೆನಪಿಗೆ ಬರಲು ಕಾರಣವೆಂದರೆ, ಕೆಲವು ದಿನಗಳ ಕಾಲ ನಡೆದ ಈ ದೀರ್ಘ ಸಂದರ್ಶನದ ಬಳಿಕ ನಂತರದ ದಿನಗಳಲ್ಲಿ ಬ್ರಿಟ್ಟೋ ಮತ್ತು ಕ್ಯಾಸ್ಟ್ರೊ ಹೇಳಿದ ಮಾತುಗಳು.

“ಒಂದು ದಿನ ಯಾರಾದರೂ ನನ್ನನ್ನು ನಾಸ್ತಿಕ ಕಮ್ಯುನಿಸ್ಟ್ ಆಗಿ ಮಾಡಲು ಸಾಧ್ಯವಿದ್ದರೆ, ಅದು ಫಿಡೆಲ್ ಕ್ಯಾಸ್ಟ್ರೊರಿಂದ ಮಾತ್ರ ಸಾಧ್ಯ” ಎಂದು ಫ್ರೀಯ್ ಬ್ರಿಟ್ಟೋ ಹೇಳಿದರೆ, ಫಿಡೆಲ್ ಕ್ಯಾಸ್ಟ್ರೊ ಹೇಳಿದ್ದು ಹೀಗೆ: “ಯಾರಾದರೂ ಒಂದು ದಿನ ನನ್ನನ್ನು ಆಸ್ತಿಕನಾಗಿ ಪರಿವರ್ತಿಸಿದರೆ, ಅದು ಆ ಪಾದ್ರಿ ಫ್ರೀಯ್ ಬ್ರಿಟ್ಟೋ”.

ತದ್ವಿರುದ್ಧ ಅನಿಸುವ ವಿಚಾರಗಳ ನಡುವೆಯೂ ನಿಜವಾದ ಪ್ರಾಮಾಣಿಕತೆ ಇದ್ದರೆ ಪರಸ್ಪರ ಗೌರವ ಸಾಧ್ಯ ಮತ್ತು ಅನ್ಯಾಯ, ದಮನಗಳ ವಿರುದ್ಧದ ಹೋರಾಟದಲ್ಲಿ ಸಮನ್ವಯ ಸಾಧ್ಯ. ತೀರಾ ಅನಿರೀಕ್ಷಿತ ಮತ್ತು ಅಕಾಲಿಕ ಅಗಲುವಿಕೆಯ ಈ ಸಂದರ್ಭದಲ್ಲಿ ಮಹೇಂದ್ರ ಕುಮಾರ್ ಇಂತಹಾ ಚಿಂತನೆಯ ಸಂಧಿಕಾಲದಲ್ಲಿದ್ದರು ಎಂದು ನನಗನಿಸುತ್ತದೆ.


ಇದನ್ನೂ ಓದಿ: ಪ್ರಗತಿಪರ ಚಿಂತಕ, ನಮ್ಮಧ್ವನಿ ಬಳಗದ ಮಹೇಂದ್ರ ಕುಮಾರ್‌ ಇನ್ನಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...