HomeUncategorizedನಮ್ಮ ವ್ಯಕ್ತಿ ಸ್ವಾತಂತ್ರ್ಯ ಸಾಮುದಾಯಿಕ ಹಿತವನ್ನು ಕಡೆಗಣಿಸಬಹುದೆ?

ನಮ್ಮ ವ್ಯಕ್ತಿ ಸ್ವಾತಂತ್ರ್ಯ ಸಾಮುದಾಯಿಕ ಹಿತವನ್ನು ಕಡೆಗಣಿಸಬಹುದೆ?

- Advertisement -
- Advertisement -

ಪ್ರತಿ ವರ್ಷದಂತೆ ಈ ವರ್ಷವೂ ಮೂಡಬಿದರೆಯ ಸಾಹುಕಾರರ ಮನೆಯ ವತಿಯಿಂದ ನಡೆಯುವ ನುಡಿಸಿರಿಗೆ ಸರ್ವಾಧ್ಯಕ್ಷರಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾದಂತಹ ಪ್ರೊ. ಮಲ್ಲಿಕಾ ಎಸ್ ಘಂಟಿ ಅವರನ್ನು ಆಯ್ಕೆಮಾಡಲಾಗಿದೆ ಎಂಬ ಸುದ್ದಿ “ಇದು ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ದಕ್ಕಿದ ಗೌರವ”À ಎಂಬ ಒಕ್ಕಣೆಯೊಂದಿಗೆ ಹೊರಬಿದ್ದಿದೆ…!
ಸದರಿ ಸುದ್ದಿ ಹೊರ ಬಿದ್ದತಕ್ಷಣ ಸಾಮಾಜಿಕ ಜಾಲತಾಣದಲ್ಲಿ ಮಲ್ಲಿಕಾ ಘಂಟಿ ಅವರ ನಿರ್ಣಂiÀiದ ಪರ/ವಿರೋಧ ಚರ್ಚೆ ಆರಂಭವಾಗಿದೆ. ಪ್ರಗತಿಪರ ವಲಯದ ಸಾಕಷ್ಟು ಮಂದಿ ಮೂಲತಃ ಶೋಷಕ ಸಂಸ್ಕøತಿ ಮತ್ತು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಜೊತೆ ಗುರುತಿಸಿಕೊಂಡಿರುವ ಮೂಡಬಿದರೆ ಸಾಹುಕಾರರು ನಡೆಸುವ ನುಡಿಸಿರಿಗೆ ಮಲ್ಲಿಕಾಘಂಟಿ ಅವರು ಒಪ್ಪಿಕೊಂಡದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಹಾಗೆ ವ್ಯಕ್ತಪಡಿಸಲು ಅವರಿಗಿದ್ದ ಏಕೈಕ ಮತ್ತು ಬಲವಾದ ಕಾರಣ ಮಲ್ಲಿಕಾ ಘಂಟಿ ಅವರು “ನಮ್ಮವರು ಎಂಬ ಪ್ರಜ್ಞೆ”.
ಒಂದು ಅರ್ಥದಲ್ಲಿ ಅದೂ ಸಹಜವೂ ಹೌದು. ಏಕೆಂದರೆ ಕರ್ನಾಟಕದ ಪ್ರಗತಿಪರ ಚಳವಳಿಯಲ್ಲಿ ಮಲ್ಲಿಕಾ ಘಂಟಿ ಅವರ ಹೆಸರು ಬಹಳ ಪ್ರಮುಖವಾದುದು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಇಷ್ಟಾಗಿಯೂ ಏಕೆ ಅವರು ಸಾಹುಕಾರರ ಆಹ್ವಾನ ಒಪ್ಪಿಕೊಂಡರು. .? ಅದರ ಜರೂರು ಏನಿತ್ತು? ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನು ಕಾಡಿದೆ. ಆದರ ಪರಿಣಾಮ ತೀರಾ ವೈಯಕ್ತಿಕ ಎನ್ನಬಹುದಾದ ಕೆಲವು ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿವೆ. ಈ ಎಲ್ಲಾ ಚರ್ಚೆಗಳ ಮಧ್ಯ ದಿವಂಗತ ಗೌರಿಲಂಕೇಶ ಅವರ ಹೆಸರಿನ ಪ್ರಸ್ತಾಪವೂ ಆಗಿಹೋಗಿದೆ.
ಅವರ ಕುರಿತು ತೀರಾ ವೈಯಕ್ತಿಕ ಎನ್ನಿಸುವ ಒಂದು ಟೀಕೆಗೆ (ಗೌರಿ ಲಂಕೇಶರು ಘಂಟಿಯವರನ್ನು ಕುಲಪತಿ ಮಾಡಲು ಪ್ರಯತ್ನಿಸಿದ್ದರು ಎಂಬ ಅಭಿಪ್ರಾಯ) ಪ್ರತಿಕ್ರಿಯಿಸಿರುವ ಮಲ್ಲಿಕಾಘಂಟಿ ಅವರು ‘ನನಗೆ ಸದರಿ ವೇದಿಕೆ ಯಾವುದು ಎಂಬ ಅರಿವಿದೆ, ಮತ್ತು ಅಲ್ಲಿ ಏನು ಮಾತನಾಡಬೇಕು ಎಂಬ ಸ್ಪಷ್ಟತೆಯಿದೆ ಈ ಹಿನ್ನೆಲೆಯಲ್ಲಿ ನಾನು ಪ್ರಗತಿಪರರ ಹೆಸರಿನ ಕೆಲವರ ದಾದಾಗಿರಿಗೆ ಹೆದರುವುದಿಲ್ಲ, ನಾನು ಹೆಣ್ಣಾಗಿ ಹುಟ್ಟಿದ್ದು, ನಮ್ಮಂತಹ ಕುಲದವರು ಆಸೆ ಪಡಬಾರದ ಕುಲಪತಿ ಹುದ್ದೆ ಏರಿದ್ದು ಕೆಲವರಿಗೆ ಸೈರಿಕೆಯಾಗುತ್ತಿಲ್ಲ, ಆ ಕಾರಣಕ್ಕೆ ನನ್ನನ್ನು ದೂಷಿಸಲಾಗುತ್ತಿದೆ…! ಆದರೆ ಬದುಕಿನುದ್ದಕ್ಕೂ ಇಂತಹ ಸಂಗತಿಗಳನ್ನು ಎದುರಿಸುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿರುವ ನನಗೆ, ವ್ಯಕ್ತಿಯಾಗಿ ಆಯ್ಕೆಯ ಹಕ್ಕಿದೆ ಅದನ್ನು ತಡೆಯಲು ನೀವು ಯಾರು? ಗೌರಿ ಹೆಸರಿನ ಕೆಲ ಕೈಗೂಲಿಗಳ ತಂತ್ರಕ್ಕೆ ನಾನು ಬಗ್ಗುವುದಿಲ್ಲ’ ಎಂದು ಖಾರವಾಗಿ ಉತ್ತರಿಸಿದ್ದಾರೆ.
ಘಂಟಿ ಅವರ ವ್ಯಕ್ತಿತ್ವವನ್ನು ಬಹಳ ಹಿಂದಿನಿಂದ ಬಲ್ಲವರು ಅವರ ಇಷ್ಟು ತೀಕ್ಷ್ಣ ಪ್ರತಿಕ್ರಿಯೆಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ ನಮ್ಮ ಕಾಲದ ಚಳವಳಿಯನ್ನು ನಿರ್ವಹಿಸುತ್ತಿರುವ ಹೊಸ ತಲೆಮಾರಿನ ಯುವ ಮನಸ್ಸುಗಳು ಮಾತ್ರ ಅವರು ಬಳಸಿದ ಪದಗಳಿಗೆ ನೊಂದುಕೊಂಡಿದ್ದಾರೆ. ನಾವು ನಂಬಿದ ಆದರ್ಶಗಳು ಹೀಗೆ ನಮ್ಮೆದುರು ನಮ್ಮ ನಂಬಿಕೆಗೆ ವಿರುದ್ಧವಾಗಿ ನಿಂತುಬಿಡುವುದನ್ನು ನಂಬುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆ…?
ಎರಡೂ ಬದಿಯಿಂದಲೂ ಸಮರ್ಥಿಸಬಹುದಾದ ಈ ಒಟ್ಟು ಚರ್ಚೆಯನ್ನು ಸಮಕಾಲೀನ ಸಂದರ್ಭದಲ್ಲಿ ಹೇಗೆ ನೋಡಬೇಕು. .? ಅದರಲ್ಲಿಯೂ ಸ್ವಾತಂತ್ರ್ಯ, ಸಮಾನತೆ ಮತ್ತು ಅಭಿವ್ಯಕ್ತಿಗಳ ಕುರಿತು ಮಾತನಾಡುವ ಪ್ರಗತಿಪರರು ಏಕೆ ಘಂಟಿ ಅವರ ಆಯ್ಕೆಯನ್ನು ವಿರೋಧಿಸಿದರು. . ? ಎಂಬುದು ಒಂದು ಕಡೆ ಆದರೆ, ದಶಕಗಳ ಕಾಲ ಪ್ರಗತಿಪರ ಹೋರಾಟದ ಭಾಗವಾಗಿದ್ದ ಘಂಟಿಯವರು ಏಕೆ ಮತ್ತು ಹೇಗೆ ಸಾಹುಕಾರರ ಸಿರಿಯ ಹಬ್ಬಕ್ಕೆ ಒಪ್ಪಿಕೊಂಡುಬಿಟ್ಟರು? ನಾನು ಹೆಣ್ಣು ಎಂಬ ಅಸ್ಮಿತೆಯನ್ನು ಮುಂದಕ್ಕೆ ತಂದ ಘಂಟಿಯವರಿಗೆ ಸಾಹುಕಾರರ ಶಿಕ್ಷಣ ಸಂಸ್ಥೆಯಲ್ಲಿ ನೇಣಿಗೆ ಕೊರಳೊಡ್ಡುತ್ತಿರುವ ಹೆಣ್ಣುಮಕ್ಕಳು ಕಾಣಲಿಲ್ಲವೇ? ಎಂಬ ಸೂಕ್ಷ್ಮ ಪ್ರಶ್ನೆಗಳು ನಮ್ಮೆದುರು ಬಂದು ನಿಲ್ಲುತ್ತವೆ. ಈ ಪ್ರಶ್ನೆಗಳಿಗೆ ಹೇಗೆ ಉತ್ತರ ಕಂಡುಕೊಳ್ಳಬೇಕು ಎಂಬ ಅಲೋಚನೆಗೆ ತುಸು ಸಮರ್ಥನೀಯ ಎಂಬ ಉತ್ತರ ದೊರಕಿದ್ದು ನಾನೇ ಬೋಧಿಸುವ ರಾಜ್ಯಶಾಸ್ತ್ರದ ಚರ್ಚೆಯೊಂದರ ಭಾಗವಾಗಿ.
ಈ ಸಂದರ್ಭದಲ್ಲಿ ಪ್ರಸಿದ್ಧ ರಾಜ್ಯಶಾಸ್ತ್ರ ಚಿಂತಕಿ ಹೆನ್ನಾ ಅರೆಂಟ್ ಅವರು “ರಾಜಕೀಯ ವ್ಯವಸ್ಥೆಯಲ್ಲಿ ವ್ಯಕ್ತಿಯ ಮೌಲ್ಯ ನಿರ್ಣಯದ” ಕುರಿತು ನೀಡಿದ ವಿವರಣೆ ಮಹತ್ವದ್ದು ಎನ್ನಿಸುತ್ತಿದೆ. ಆಕೆಯ ಪ್ರಕಾರ “ಪ್ರತಿಯೊಂದು ಜೀವಿಗೂ ತನ್ನದೇ ಆದ ಇಚ್ಛೆ/ಆಯ್ಕೆ ಎಂಬುದು ಇರುತ್ತದೆ. ವಾಸ್ತವದಲ್ಲಿ ಈ ಅಂಶ ಮಾತ್ರವೇ ಜೀವಿ ಮತ್ತು ಶವದ ನಡುವೆ ವ್ಯತ್ಯಾಸಕ್ಕೆ ಕಾರಣವಾಗಿದೆ. ಆದರೆ ಒಂದು ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಸಂಘಜೀವನ ನಡೆಸುತ್ತಿರುವ ವ್ಯಕ್ತಿಗೆ (ಮನುಷ್ಯನಿಗೆ) ವ್ಯವಸ್ಥೆಯ ಭಾಗವಾಗಿರುವ ಜನರ ಒಳಿತಿನ ಕಾರಣಕ್ಕೆ ತನ್ನ ವೈಯಕ್ತಿಕ ಇಚ್ಛೆ/ಸ್ವಾತಂತ್ರ್ಯಕ್ಕೆ ಕೆಲವು ನಿರ್ಬಂಧÀಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಇದನ್ನು ನಾವು ನೈತಿಕತೆ ಮತ್ತು ಸ್ವಾತಂತ್ರ್ಯದ ಕುರಿತ ಕಾನೂನು ಎನ್ನುತ್ತೇವೆ. ಸಮಾಜವೊಂದು ವ್ಯಕ್ತಿಯ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಭಾವಿಸುವ ಈ ಅಂಶ ಆಕೆಯ/ಆತನ ಸ್ವಾತಂತ್ರದ ಹರಣ ಎನ್ನಲಾಗದು. . ! ಬದಲಾಗಿ ಆಕೆ/ಆತನಿಗೆ ಇರುವ ಸ್ವಾತಂತ್ರ್ಯವನ್ನು ಸಾಮುದಾಯಿಕ ಹಿತಕ್ಕಾಗಿ ಸ್ವತಃ ಸಮುದಾಯವೇ ಕ್ರಮಬದ್ಧಗೊಳಿಸುವಂತೆ ಕೋರುವ ಸಹಜ ವಿಧಾನವಾಗಿದೆ ಎನ್ನುವ ಅರ್ಥದಲ್ಲಿ ಗ್ರಹಿಸಬೇಕಿದೆ.
ಈ ವಾದದ ಹಿನ್ನೆಲೆಯಲ್ಲಿ ಮಲ್ಲಿಕಾಘಂಟಿ ಅವರ ನಿರ್ಣಯವನ್ನು ವಿರೋಧಿಸಿದ ಕನ್ನಡದ ಸಾರ್ವಜನಿಕ ಒತ್ತಡದ ಕಾಳಜಿಗೆ ಘಂಟಿಯವರ ವ್ಯಕ್ತಿಗತ ಸ್ವಾತಂತ್ರ್ಯದ ಹರಣ ಮಾಡಬೇಕು, ಅವರು ಅಭಿವ್ಯಕ್ತಿಯ ಹಕ್ಕನ್ನು ಪ್ರಶ್ನಿಸಬೇಕು ಎಂಬ ಉದ್ದೇಶ ಖಂಡಿತ ಇರಲಿಕ್ಕಿಲ್ಲ. ಬದಲಾಗಿ ಒಂದು ಶೋಷಕ ವ್ಯವಸ್ಥೆಯನ್ನು ಎದುರಿಸುವ ಚಳವಳಿಯ ಭಾಗವಾಗಿ ನಿಮ್ಮ ವ್ಯಕ್ತಿಗತ ಆಯ್ಕೆಯನ್ನು/ಸ್ವಾತಂತ್ರ್ಯವನ್ನು ವ್ಯವಸ್ಥಿತಗೊಳಿಸಿಕೊಳ್ಳಿ/ಕ್ರಮಬದ್ಧಗೊಳಿಸಿಕೊಳ್ಳಿ. ಆ ಆಯ್ಕೆ ನಿಮ್ಮನ್ನು ಹೆಚ್ಚು ಸಮಾಜಜೀವಿಯಾಗಿ ಉಳಿಸುತ್ತದೆ ಮತ್ತು ಈ ಮಾದರಿಯ ನಿರ್ಣಯಗಳು ಮಾರುಕಟ್ಟೆ ಮತ್ತು ಧಾರ್ಮಿಕ ಮೂಲಭೂತವಾದಗಳು ಸೇರಿಕೊಂಡು ಮನುಷ್ಯನ ಕನಿಷ್ಟ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ಆಹಾರದ ಹಕ್ಕನ್ನು ವ್ಯಾಪಾರವಾಗಿಸಿ ಸಾಮುದಾಯಿಕ ಬದುಕುಗಳನ್ನು ಅಪಾಯಕ್ಕೆ ಸಿಲುಕಿಸಿರುವ ಈ ಹೊತ್ತಿನಲ್ಲಿ ಬಹಳ ಮಹತ್ವದ್ದು ಎಂಬ ಗೌರವದಿಂದ ಕೂಡಿದ ಸಾತ್ವಿಕ ಒತ್ತಾಯದ ಭಾಗವಾಗಿವೆ ಎಂದೆನ್ನಿಸುತ್ತದೆ. ಮಲ್ಲಿಕಾಘಂಟಿ ಅವರೂ ಈ ವಿರೋಧವನ್ನು ಹೀಗೆಯೇ ನೋಡಬೇಕಿದೆ. ಆದರೆ, ಘಂಟಿಯವರು ಹೀಗೆ ತಮ್ಮನ್ನು ವಿರೋಧಿಸಿದ ಹಲವರನ್ನು ‘ಗೌರಿ ಹೆಸರನ್ನು ಹೇಳಿಕೊಂಡು ಅಸ್ತಿತ್ವದಲ್ಲಿರುವ ಕೆಲ ಕೈಗೂಲಿಗಳು’ ಎಂದು ಕರೆದಿದ್ದಾರೆ. ನನ್ನಂಥ ಅನೇಕರು ಹುಟ್ಟುವುದಕ್ಕಿಂತಲೂ ಮೊದಲೇ ಎಡಪಂಥೀಯ ಚಳವಳಿಗಳಲ್ಲಿ ತೊಡಗಿಕೊಂಡಿದ್ದ ಘಂಟಿಯವರು ತಮ್ಮನ್ನು ಸಕಾರಣವಾಗಿ ವಿರೋಧಿಸಿದವರನ್ನು ‘ಕೂಲಿಗಳು’ ಎಂದು ಕರೆದಿರುವುದು ಶೋಚನೀಯ. ‘ಕೂಲಿಗಳು’ ಎಂದು ಹಂಗಿಸಿ ಮಾತಾಡುವುದು ಕೂಲಿ ಕೊಡುವ ಧಣಿಗಳೇ ಹೊರತು, ಘಂಟಿಯವರಿಗೆ ಈ ಮಾತು ಶೋಭೆಯಲ್ಲ ಎಂಬುದು ನಮ್ಮ ತಲೆಮಾರಿನ ಗ್ರಹಿಕೆ.
ಆದರಂತೆಯೇ ಘಂಟಿಯವರ ನಿರ್ಣಯವನ್ನು ವ್ಯಾಪಕವಾಗಿ ವಿರೋಧಿಸಿದ ಮನಸ್ಸುಗಳು ನಮ್ಮ ಕಾಲದಲ್ಲಿ “ವಿರೋಧ ಮತ್ತು ವಿಮರ್ಶೆಗಳ” ನಡುವಿನ ತೆಳುವಾದ ಗೆರೆಯನ್ನು ಗಮನಿಸುವ ಸೂಕ್ಷ್ಮತೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ಈ ಸೂಕ್ಷ್ಮತೆ ಇಲ್ಲದೆ ಹೋದರೆ ಖಂಡಿತ ಚಳವಳಿಗಳು ವಿಘಟನೆಗೊಳ್ಳುತ್ತವೆ. ಈಗಾಗಲೇ ಕನ್ನಡದ ಸಾಂಸ್ಕøತಿಕಲೋಕ ಗುಣಾತ್ಮಕ ಸಂವಾದಗಳ ಕೊರತೆಯ ಕಾರಣಕ್ಕೆ ಸಾಕಷ್ಟು ಕಳೆದುಕೊಂಡಿದೆ. ಈ ಕಾರಣಕ್ಕೆ ಪ್ರಗತಿಪರ ಮನಸ್ಸುಗಳ ನಡುವಿನ ಸಾತ್ವಿಕ ಮತ್ತು ತಾತ್ವಿಕ ಸಿಟ್ಟು/ಸೆಡವು/ವಿಮರ್ಶೆಗಳನ್ನು ದ್ವೇಷ/ಅಸೂಯೆಗಳ ಮಾದರಿಯಲ್ಲಿ ಬಿಂಬಿಸುವ ದೊಡ್ಡ ಶಕ್ತಿಗಳು ಇಂದು ಯಶಸ್ಸು ಸಾಧಿಸುತ್ತಿವೆ ಮತ್ತು ಈ ಪ್ರಕರಣದಲ್ಲಿ ಅದು ಇನ್ನೂ ನಿಚ್ಚಳವಾಗಿ ಕಾಣುತ್ತಿದೆ.
ಅಂತಿಮವಾಗಿ ಇಂದು ಚರ್ಚೆಗಳು/ಸಂವಾದಗಳು ನಡೆಯಬೇಕಿರುವುದು ನಮ್ಮಗಳ ನಡುವೆಯೇ ಹೊರತು ಬೇರೆಯವರೊಟ್ಟಿಗೆ ಅಲ್ಲ. ಏಕೆಂದರೆ ಸಾಹುಕಾರರಿಗೆ ತಮ್ಮ ನಿಲುವು ಮತ್ತು ಕ್ರಿಯೆಯ ಸ್ಪಷ್ಟ ಅರಿವಿದೆ. ಆದರ ಕೊರತೆ ಇರುವುದು ನಮಗೆ…!
ಇಂದು ನಾವು ಅವರ ವೇದಿಕೆಯಲ್ಲಿ ನಿಂತು ಮಾತನಾಡಿ ಅವರನ್ನು ಬದಲಿಸುತ್ತೇವೆ ಎನ್ನುವವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಸಾಕಷ್ಟು ಬಾರಿ ಉಡುಪಿಗೆ ಭೇಟಿ ನೀಡಿದ್ದರೂ, ಏಕೆ ಉಡುಪಿ ಮಠಕ್ಕೆ ಭೇಟಿ ನೀಡಿ ಮಠದವರ ಗ್ರಹಿಕೆಯನ್ನು ಬದಲಿಸಲು ಪ್ರಯತ್ನಿಸಲಿಲ್ಲ..? ಎಂಬ ಪ್ರಶ್ನೆ ಕೇಳಿಕೊಳ್ಳಬೇಕು. ಉತ್ತರ ಸರಳ. ಏಕೆಂದರೆ ಅವರಿಗೆ ತಾನು ಸಂವಾದಿಸಬೇಕಿರುವುದು ಯಾರೊಂದಿಗೆ ಎಂಬ ಕುರಿತು ಸ್ಪಷ್ಟ ಗ್ರಹಿಕೆ ಮತ್ತು ಬದ್ಧತೆ ಇತ್ತು. ಒಬ್ಬ ರಾಜಕಾರಣಿಗೆ ಇರುವ ಸೂಕ್ಷ್ಮತೆಯನ್ನು ವಿದ್ವಾಂಸರಿಂದ ಇಂದಿನ ತಲೆಮಾರಿನ ಯುವಜನತೆ ಬಯಸುವುದು ತಪ್ಪಲ್ಲ ಅನ್ನಿಸುತ್ತದೆ.
ಇಷ್ಟಾಗಿಯೂ ‘ನನ್ನ ಭಾಷಣ ಆ ಮನುಷ್ಯರನ್ನು ಬದಲಿಸಿಬಿಡುತ್ತದೆ’ ಎಂಬ ಅತಿ ಆತ್ಮವಿಶ್ವಾಸದಿಂದ ಯಾರಾದರೂ ಮಾತನಾಡಿದರೆ ಅವರಿಗೆ ಶುಭ ಕೋರೋಣ. ಅಂಥಾ ಭಾಷಣದ ಪರಿಣಾಮವಾಗಿ ಸಾಹುಕಾರರ ಶಿಕ್ಷಣ ಸಂಸ್ಥೆಯಲ್ಲಿ ದೀನದಲಿತರಿಗೆ ಉಚಿತ ಶಿಕ್ಷಣ, ಶಿಕ್ಷಕರಿಗೆ ಸಿಬ್ಬಂದಿಗೆ ನಿಯಮಬದ್ಧ ವೇತನ, ಸತ್ತ ಮಕ್ಕಳ ಕುಟುಂಬಗಳಿಗೆ ಸಾಂತ್ವನ ದೊರಕಲಿ ಎಂದು ಆಶಿಸೋಣ.

– ಕಿರಣ್ ಗಾಜನೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...