Homeಆರೋಗ್ಯಬಿಹಾರದಲ್ಲಿನ ನೂರಾರು ಮಕ್ಕಳ ಸಾವಿಗೆ ಅಪೌಷ್ಟಿಕತೆ ಮತ್ತು ಸರಕಾರಿ ನಿರ್ಲಕ್ಷವೇ ಕಾರಣ

ಬಿಹಾರದಲ್ಲಿನ ನೂರಾರು ಮಕ್ಕಳ ಸಾವಿಗೆ ಅಪೌಷ್ಟಿಕತೆ ಮತ್ತು ಸರಕಾರಿ ನಿರ್ಲಕ್ಷವೇ ಕಾರಣ

- Advertisement -
- Advertisement -

| ಡಾ. ಸ್ವಾತಿ ಶುಕ್ಲಾ |

ಅನುವಾದ: | ನಿಖಿಲ್ ಕೋಲ್ಪೆ |

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಎಕ್ಯೂಟ್ ಎನ್ಸಿಫಲೈಟಿಸ್ ಸಿಂಡ್ರೋಮ್ ಎಂಬ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 113ಕ್ಕೂ ಹೆಚ್ಚಾಗಿದೆ. ಈ ಕಾರಣದಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬಿಹಾರಕ್ಕೆ ಈ ರೋಗವು ಹೊಸದಲ್ಲ. ಲಿಚಿ ಹಣ್ಣಿನ ತೋಟಗಳು ಸಾಮಾನ್ಯವಾಗಿರುವ ಮುಜಾಫರ್‌ಪುರ ಮತ್ತು ನೆರೆಯ ಪ್ರದೇಶಗಳಲ್ಲಿ 1995ರಿಂದಲೇ ಎನ್ಸಿಫಲೈಟಿಸ್ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಈಗಿನ ಪರಿಸ್ಥಿತಿಗೆ ಅಪೌಷ್ಟಿಕತೆಯಿಂದ ಹಿಡಿದು, ಸೆಖೆ, ದುರ್ಬಲ ರೋಗ ನಿರೋಧಕತೆಯ ತನಕ ಹಲವು ಅಂಶಗಳು ಕಾರಣವಾಗಿದ್ದು, ಲಿಚಿಯಲ್ಲಿ ಇರುವ ಕೆಲವು ನಿರ್ದಿಷ್ಟ ರಾಸಾಯನಿಕಗಳು ಇದನ್ನು ಉಲ್ಭಣಿಸುವಂತೆ ಮಾಡಿವೆ.

What is AES? ಎಇಎಸ್ ಎಂದರೇನು?

ಎಕ್ಯೂಯೂ ಎಂಸೆಫಲೈಟಿಸ್ ಸಿಂಡ್ರೋಮ್ ಎಂದು ಮೆದುಳಿಗೆ ಸಂಬಂಧಿಸಿದ ರೋಗವಾಗಿದ್ದು, ಬ್ಯಾಕ್ಟೀರಿಯಾ, ವೈರಸ್, ಪರೋಪಜೀವಿಗಳು, ಶಿಲೀಂದ್ರಗಳು, ರಾಸಾಯನಿಕಗಳು, ಕೆಲವು ರೀತಿಯ ವಿಷವಸ್ತುಗಳು ಇದನ್ನು ಉಂಟುಮಾಡುತ್ತವೆ. ರೋಗ ಲಕ್ಷಣಗಳು ಜ್ವರ, ತಲೆನೋವು, ಅಪಸ್ಮಾರದ ಲಕ್ಷಣಗಳನ್ನು ಒಳಗೊಂಡಿರಬಹುದು. ಈ ರೋಗವು ಮಾನ್ಸೂನ್ ವೇಳೆ ಮತ್ತು ಅದರ ನಂತಥದ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು. ಅದು ಹೆಚ್ಚಾಗಿ ಬರುವುದು 15ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ. ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮುಂತಾದ ಗಂಗಾ ನದಿಬಯಲಿನ ಪ್ರದೇಶಗಳಲ್ಲಿ, ಅಸ್ಸಾಂ, ತಮಿಳುನಾಡಿನ ಕೆಲವು ಬಯಲುಗಳು ಈ ರೋಗಕ್ಕೆ ಸೂಕ್ತ ವಾತಾವರಣ ಒದಗಿಸುತ್ತವೆ. ತಕ್ಷಣ ಆಸ್ಪತ್ರೆಗೆ ಸೇರಿಸುವುದು ಮತ್ತು ಸೂಕ್ತ ಔಷದೋಪಚಾರದಿಂದ ಇದು ಗುಣವಾಗುವುದು.

ಹೆಚ್ಚಿನ ಪ್ರಕರಣಗಳು ಮಕ್ಕಳು ಹೊಟ್ಟೆಗೆ ಏನೂ ತಿನ್ನದೇ, ಬರಿಹೊಟ್ಟೆಯಲ್ಲಿ ಕಾಯಿ ಲೀಚಿ ತಿಂದಿದ್ದ ಪ್ರದೇಶದಲ್ಲಿಯೇ ವರದಿಯಾಗಿವೆ. ಕಾಯಿ ಲೀಚಿಯಲ್ಲಿ ವಿಷಕಾರಿಗಳಾದ ಹೈಪೋಗ್ಲೈಸಿನ್ ಎ ಮತ್ತು, ಮಿಥೈಲ್‌ ನ್ಸೈಕ್ಲೋಪ್ರೊಪೈಲ್‌ಗೈಸಿನ್ (ಎಂಸಿಪಿಜಿ) ಎಂಬ ಉದ್ದವಾದ ಮತ್ತು ಹೇಳಲು ಕಷ್ಟವಾಗುವ, ಹೆಸರುಗಳನ್ನು ಹೊಂದಿರುವ ರಾಸಾಯನಿಕಗಳನ್ನು ಹೊಂದಿದೆ. ಇವುಗಳಲ್ಲಿ ಹೈಪೋಗ್ಲೈಸಿನ್ ಎ ಎಂಬುದು ನೈಸರ್ಗಿಕವಾಗಿ ಉತ್ಪತ್ತಿಯಾಗುವ ಎಮಿನೋ ಅಮ್ಲವಾಗಿದ್ದು, ಎರಡನೆಯದಾದ ಎಂಸಿಪಿಜಿ ಎಂಬ ಸಂಯುಕ್ತ ರಾಸಾಯನಿಕವು ತೀವ್ರವಾದ ವಾಂತಿಯನ್ನು, ಅಂದರೆ, (ಜಮೈಕನ್ ವಾಮಿಟಿಂಗ್ ಡಿಸೀಸ್) ಎಂಬ ರೋಗ ಲಕ್ಷಣಗಳನ್ನು ಉಂಟುಮಾಡುತ್ತದೆ. ಇವುಗಳಲ್ಲಿ ಎಂಸಿಪಿಜಿ ಎಂಬುದು ಹಸಿ ಬೀಜಗಳಲ್ಲಿ ಇರುವ ರಕ್ತದಲ್ಲಿ ಸಕ್ಕರೆ ಅಂತ ಕಡಿಮೆ ಮಾಡುವುದು, ವಿಷಕಾರಿ ರಾಸಾಯನಿಕ ಸಂಯುಕ್ತವಾಗಿದ್ದು, ಏಕಾಏಕಿ ರಕ್ಕದೊಟ್ಟಡದ ಕುಸಿತ, ವಾಂತಿ, ಮಾನಸಿಕ ಸ್ಥಿತಿಯ ಬದಲಾವಣೆ- ಇದು ಸೋಮಾರಿತನದಲ್ಲಿ ಕಾಣಬಹುದು. ಈ ರಾಸಾಯನಿಕಗಳು ಹಸಿ ಲೀಚಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇವೆ ಎಂಬುದು ಅತ್ಯಂತ ಗಮನಾರ್ಹ. (ಲಿಚಿ ಎಂಬುದು ಒಂದು ಹಳ್ಳಿ ಮಕ್ಕಳು ತಿನ್ನುವ ವಿದೇಶಿ ಕಾಡು ಹಣ್ಣಾಗಿದ್ದು, ಇಂದು ಸಿರಿವಂತರ ನೆಚ್ಚಿನ ಗ್ಲಾಮರ್ ಹಣ್ಣಾಗಿದೆ-ಅನುವಾದಕ)

ಭಾರತೀಯ ರೋಗ ನಿಯಂತ್ರಣ ಸಂಸ್ಥೆಯ ಪ್ರಕಾರ ಮತ್ತು ಇತರ ಸಂಸ್ಥೆಗಳ ಪ್ರಕಾರ ಲಿಚಿ ಈ ರೋಗಕ್ಕೆ ಮುಖ್ಯ ಕಾರಣವಲ್ಲ. ಈಗಾಗಲೇ ಹೊಟ್ಟೆಗಿಲ್ಲದ ಮಕ್ಕಳು ಬೆಳಿಗ್ಗೆ ಎದ್ದ ಕೂಡಲೇ ಹಸಿವಿನಿಂದ ಕಾಯಿ ಲಿಚಿ ತಿನ್ನುವುದೇ ಆಗಿದೆ. ಅಪೌಷ್ಟಿಕತೆಯ ಕಾರಣದಿಂದ ಮೊದಲೇ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವ ಮಕ್ಕಳು ಇದನ್ನು ತಿನ್ನುವುದರಿಂದ ಸಕ್ಕರೆ, ಅಂದರೆ ಗ್ಲೂಕೋಸ್ ಇನ್ನೂ ಕಡಿಮೆಯಾಗಿ, ತೀವ್ರ ಪ್ರಕರಣಗಳಲ್ಲಿ ತಲೆ ಸುತ್ತುವಿಕೆ, ಕೊನೆಗೆ ಸಾವಿಗೂ ಕಾಣವಾಗಬಹುದು.

ಈ ಸಾವುಗಳನ್ನು ತಪ್ಪಿಸಬಹುದುದೇ? ಖಂಡಿತಾ!

ಹಿಂದೆಯೇ ಬರೆದಿರುವುದನ್ನು ಓದಿ. ಇಲ್ಲಿ ಇದು ಸಾಮಾನ್ಯ. 2012ರಲ್ಲಿ ಇಲ್ಲಿ 122 ಮಕ್ಕಳ ಸಾವುಗಳು ಸಂಭವಿಸಿವೆ. ಇಲ್ಲಿನ ಆರೋಗ್ಯ ಇಲಾಖೆ ಸ್ಟ್ಯಾಂಡರ್ಡ್ ಅಪರೇಟಿಂಗ್ ಪ್ರೊಸಿಜರ್ಸ್ (ಎಸ್ಓಪಿ)) ಎಂಬ ಒಂದು ವ್ಯವಸ್ಥೆಯನ್ನು ಜಾರಿಗೊಳಿಸಿತು. ಅದು ರೋಗ ಲಕ್ಷಣಗಳ ಆಧಾರದಲ್ಲಿ ಅದನ್ನು ನಿಯಂತ್ರಿಸುವ ಕುರಿತಾಗಿತ್ತು. ಸರಿ, ಈ ವ್ಯವಸ್ಥೆಯು ಆಶಾ ಕಾರ್ಯಕರ್ತೆಯರು, ಪಂಚಾಯತ್, ರಾಜ್ಯಾಡಳಿತ, ಮಾಧ್ಯಮ, ಸರ್ಕಾರೇತರ ಸಂಸ್ಥೆಗಳು, ಪ್ರಚಾರ ಅಭಿಯಾನಗಳು, ಇತ್ಯಾದಿಗಳನ್ನು ಒಳಗೊಂಡಿತ್ತು. ಇದು ರೋಗ ನಿಯಂತ್ರಣದಲ್ಲಿ ಬಹಳಷ್ಟು ಪರಿಣಾಮಕಾರಿಯಾಯಿತು. ಆ ಕಾಲದಲ್ಲಿ ಮುಜಾಫರ್‌ಪುರ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ, ವೈದ್ಯರು, ದಾದಿಗಳ ಹತ್ತಿರ ಗ್ಲೂಕೋಸ್ ಕಿಟ್ ಲಭ್ಯವಿತ್ತು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ದಿನ ರಾತ್ರಿ ತಪಾಸಣೆ ನಡೆಸುತ್ತಿದ್ದರು. ಕಾರಣ ಇಷ್ಟೇ. ಮಕ್ಕಳು ಬರೇ ಹೊಟ್ಟೆಯಲ್ಲಿ ಮಲಗುತ್ತಿದ್ದರೋ ಎಂದು ನೋಡಲು.

ಹಾಗಾಗಿ ಸರ್ಕಾರ ಈ ಕೂಡಲೇ ಬಡವರಿಗೆ ಸಹಾಯ ಹಸ್ತ ಚಾಚಬೇಕು. ಹಸಿದು ಮಲಗುವುದನ್ನು ತಪ್ಪಿಸಬೇಕು. ಆರೋಗ್ಯ ಸೇವೆಯನ್ನು ಉಚಿತಗೊಳಿಸಬೇಕು. ಉದ್ಯೋಗ ನೀಡುವುದಕ್ಕೆ ಮುಂದಾಗಬೇಕು. ಆಗ ಈ ರೋಗ ಬರದಂತೆ ತಡೆಯಬಹುದಾಗಿದೆ.

2019ರಲ್ಲಿ ತಪ್ಪೇನು?

ಸರಳವಾಗಿ ಹೇಳುವುದಾದರೆ, ಮೇಲೆ ಹೇಳಿದ ಎಸ್ಓಪಿ ನಿರ್ಲಕ್ಷ್ಯ, ತೀವ್ರ ಅಪೌಷ್ಟಿಕತೆ, ಬಿಸಿ ಗಾಳಿಯಿಂದ ಉಂಟಾದ ತೀವ್ರ ಸೆಖೆ, ಶುದ್ಧ ನೀರಿನ ಕೊರತೆ ಬಿಹಾರದಲ್ಲಿ ಈಗಿನ ಬಿಕ್ಕಟ್ಟಿಗೆ ಕಾರಣ.

ಬಿಹಾರದಲ್ಲಿ 44 ಶೇಕಡಾ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.  ಈ ಅಪೌಷ್ಟಿಕತೆಯು ಅವರ ರೋಗ ನಿರೋಧಕ ಶಕ್ತಿಯನ್ನು ಕುಗ್ಗುತ್ತದೆ.  ಈಗ ಸಾವಿಗೀಡಾದ ಮಕ್ಕಳಲ್ಲಿ ಬಹುತೇಕರು ತೀರಾ ಬಡ ಕುಟುಂಬದವರಾರಾಗಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ‘ಡೌನ್ ಟು ಅರ್ಥ್’ ಪತ್ರಿಕೆಯ ಒಂದು ವರದಿಯಲ್ಲಿ ಹೇಳಿರುವಂತೆ ಸಾಯುತ್ತಿರುವ ಮಕ್ಕಳಲ್ಲಿ 70 ಶೇಕಡಾ ಹೆಣ್ಣು ಮಕ್ಕಳು. ಅದರಲ್ಲೂ ಮುಖ್ಯವಾಗಿ ಅತ್ಯಂತ ದಲಿತರಾಗಿರುವ ಜಾತಿಗಳಿಗೆ ಸೇರಿದವರು. ಈ ತಡೆದುಯಬಹುದಾದ ಸಾವುಗಳಿಗೆ ಮುಖ್ಯ ಕಾರಣವೆಂದರೆ, ದಲಿತ ವರ್ಗಗಳ, ಅದಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳ ಕುರಿತು ಇರುವ ಅಸಡ್ಡೆ.

ಜೂನ್ 10ರಂದು ಒಂದೇ ದಿನ 20 ಮಕ್ಕಳು ಸತ್ತ ವರದಿ ಬಂದ ನಂತರವೇ ರಾಜ್ಯ ಘನಘೋರ ನಿದ್ದೆಯಿಂದ ಎಚ್ಚೆತ್ತುಕೊಂಡಿತು. ಆರೋಗ್ಯ ರಾಜ್ಯ ಮಂತ್ರಿ ಅಶ್ವಿನಿ ಚೌಧರಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾವುದೇ ಎಗ್ಗಿಲ್ಲದೇ ಚುನಾವಣಾ ಕಾರಣದಿಂದ ಈ ಬಾರಿ ಅರೋಗ್ಯ ಜಾಗೃತಿ ಕಾರ್ಯಕ್ರಮಗಳು ಸರಿಯಾಗಿ ನಡೆಯಲಿಲ್ಲ ಎಂದು ‘ಪ್ರಾಮಾಣಿಕ’ವಾಗಿಯೇ ಹೇಳಿಬಿಟ್ಟಿದ್ದಾರೆ. ಈ ಜಾಗೃತಿ ಕಾರ್ಯಕ್ರಮಗಳು ಎನ್ಓಪಿಯ ಮುಖ್ಯ ಭಾಗವಾಗಿದ್ದು, ಇದು ರಾಷ್ಟ್ರೀಯ ಸುದ್ದಿ ಆದ ಬಳಿಕವೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದಾರೆ.

ಉತ್ತರದಾಯಿತ್ವ ಎಲ್ಲಿದೆ? ಜನರಿಗೆ ನೀಡಬೇಕಾಗಿದ್ದ ಜನಶಕ್ತಿ ಮತ್ತು ಸಂಪನ್ಮೂಲಗಳನ್ನು ಚುನಾವಣೆ ಕಡೆಗೆ ತಿರುಗಿಸಲಾಗಿತ್ತು. ಇದರ ಸಂಪೂರ್ಣ ಜವಾಬ್ದಾರಿಯನ್ನು ಮುಂದಿನ ಐದು ವರ್ಷಗಳ ರಾಜ್ಯಭಾರಕ್ಕಾಗಿ ಚುನಾವಣಾ ಸಭೆಗಳಲ್ಲಿ ವ್ಯಸ್ತವಾಗಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಹಿಸಿಕೊಳ್ಳಬೇಡವೆ? ರಾಜ್ಯ ಸರಕಾರವು ಈ ಎಳೆಯ ಮಕ್ಕಳ ಅಪೌಷ್ಟಿಕತೆಯ ಪರಿಸ್ಥಿತಿಯನ್ನೂ ಬದಲಿಸುವಲ್ಲಿ ವಿಫಲವಾಗಿರುವುದನ್ನೂ ಒಪ್ಪಿಕೊಳ್ಳಬೇಡವೆ?

ಹೊಟ್ಟೆಗಿಲ್ಲದ ಮಕ್ಕಳು ಯಾವುದೇ ಹಣ್ಣು ತಿಂದರೆಂದು ಅವರನ್ನಾಗಲೀ, ಅವರ ಹೆತ್ತವರನ್ನಾಗಲೀ ಯಾರು ದೂರಲು ಸಾಧ್ಯವಿದೆಯೇ? ಯವುದೇ ಮಗು ಹೊಟ್ಟೆಗಿಲ್ಲದೇ ಮಲಗಲು ಬಿಡಬಾರದು ಎಂಬುದು ನಮ್ಮ ಜವಾಬ್ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...