Homeಅಂಕಣಗಳುನಾಗಸುಧೆ ಜಗಲಿಯಿಂದಮಮತೆಯ ಮಮತಾಗೆ 'ಮಯೂರ' ನ ಮನ್ನಣೆ: ಪ್ರಕಾಶ ಕಡಮೆ

ಮಮತೆಯ ಮಮತಾಗೆ ‘ಮಯೂರ’ ನ ಮನ್ನಣೆ: ಪ್ರಕಾಶ ಕಡಮೆ

ಸದಾ ಹೆಣ್ಣಿನ ಅಸ್ಮಿತೆಯ ಕುರಿತಾಗಿ ಕವಿತೆ ಬರೆಯುತ್ತಾ, ಹೆಣ್ಣಿನ ನೋವು, ಅನ್ಯಾಯದ ಕುರಿತಾಗಿ ತೀವ್ರ ಪ್ರತಿಭಟನೆಯ ಉಸಿರಾಗಿರುವ ಮಮತ ಅರಸೀಕೆರೆಯವರ ಕುರಿತು

- Advertisement -
- Advertisement -

ಹಸಿವಲ್ಲೂ ಸೊಗಸಿತ್ತು, ಬಗೆಬಗೆಯ ವಿಧವಿತ್ತು
ಮರಿ ಹಸಿವು, ಮುದಿ ಹಸಿವು,
ಗಂಡು ಹೆಣ್ಣಸಿವು ಮತ ಜಾತಿಯ ಹಂಗಿಲ್ಲದ ಹಸಿವು
ಏಕತೆಯಿತ್ತು ವೈವಿಧ್ಯಮಯಲ್ಲಿ
ಒಗ್ಗಟ್ಟಾಯಿತು ಧರ್ಮ ಗಡಿ ಮೀರಿದ ಭಾವದಲ್ಲಿ

ಎಂಬ ಮಾನವೀಯ ಭಾವನೆಗಳ ಕವಿತೆ ಬರೆಯುತ್ತಾ ಮತ್ತೊಬ್ಬರ ಹಸಿವು, ನೋವು, ಸಂಕಟ, ಸಂಕಷ್ಟಗಳನ್ನು ಅರಿತು ಶಿಕ್ಷಣ-ರಂಗಭೂಮಿ-ತಿರುಗಾಟ, ಸಾಹಿತ್ಯ-ಸಂಘಟನೆಗಳಲ್ಲಿ ತೊಡಗಿಸಿಕೊಂಡು ತನ್ನ ವೃತ್ತಿ ಬದುಕಿಗೆ ಧಕ್ಕೆ ಬರದ ಹಾಗೇ ಸದಾ ಜಾಗೃತೆಯೊಂದಿಗೆ; ಪ್ರಗತಿಪರ ನಿಲುವನ್ನು ಮೈಗೂಡಿಸಿಕೊಂಡು, ಅನ್ಯಾಯ ಕಂಡಲ್ಲೆಲ್ಲಾ ಪ್ರತಿಭಟಿಸುವ ಜನಪರ ನಿಲುವಿನ ಲೇಖಕಿ ಮಮತ ಅರಸೀಕೆರೆ ಇವರಿಗೆ, ಸಾಹಿತ್ಯದ ವಿವಿಧ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಲವತ್ತೈದು ವರ್ಷದೊಳಗಿನ ಯುವ ಸಾಹಿತಿಗಳಿಗೆ, ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯವರು ಕೊಡ ಮಾಡುವ ರಾಜ್ಯ ಮಟ್ಟದ “ಮಯೂರವರ್ಮ” ಪ್ರಶಸ್ತಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ ನೇತೃತ್ವದ ಆಯ್ಕೆ ಸಮಿತಿಯಿಂದ ಇನ್ನಿತರ ನಾಲ್ವರು ಯುವ ಸಾಧಕರೊಂದಿಗೆ ಆಯ್ಕೆ ಮಾಡಿರುವುದು ಅಭಿನಂದನೀಯ.

ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಮತ ಅರಸೀಕೆರೆ

ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯಲ್ಲಿ ಜನಿಸಿದ ಮಮತಾಗೆ ತಂದೆ-ತಾಯಿ ಸರಕಾರೀ ನೌಕರಿ ಮಾಡುತ್ತಿದ್ದರಿಂದ ಚಿಕ್ಕಂದಿನಿಂದಲೂ ಬಡತನದ ಅರಿವಿಲ್ಲದಿದ್ದರೂ ಬಡತನಕಾಗಿ ಮಿಡಿಯುವ ಮನಸ್ಸು ಮತ್ತು ಹೃದಯವಿತ್ತು. ಅಪ್ಪ ಅಂಚೆಯಣ್ಣನಾದರೆ, ಅಮ್ಮ ಮಕ್ಕಳ ಹೃದಯದಲ್ಲಿ ಅಕ್ಷರಗಳ ಬೀಜ ಬಿತ್ತುವ ಶಿಕ್ಷಕಿ. ಇದರಿಂದಾಗಿ ಮಮತಾ ಭಾವೈಕ್ಯತೆಯ ಮಡಿಲಲ್ಲೇ ಬೆಳೆದರು. ಊರಿನ ಸುಖ-ದುಃಖ, ನೋವು-ನಲಿವು, ಸಂಭ್ರಮ, ಮಂದಿರ-ಮಸೀದೆಯ ಸುದ್ಧಿ, ಮನಿಆರ್ಡರ್, ಪೆನ್ಷನ್, ದೇಶ ವಿದೇಶಗಳ ಸಣ್ಣ ಸಣ್ಣ ವಿಷಯದ ದೊಡ್ಡ ದೊಡ್ಡ ಸುದ್ದಿಗಳು ಸಂಜೆ ಅಪ್ಪ ಖುಷಿಯಲಿ ವಿವರಿಸುತ್ತಿದ್ದಂತೇ ಮಮತಾರಿಗೆ ಆಗಿನಿಂದಲೇ ಜಗತ್ತಿನ ಜನ ಲೋಕದ ಪರಿಚಯ ಮನೆ ಮಾಡುತ್ತಿದ್ದಂತೇ ಅಮ್ಮನ ಬದುಕು ಕಟ್ಟಿಕೊಳ್ಳುವಿಕೆಯ, ಮನುಷ್ಯ ಸಂಬಂಧದ ಪಾಠ ಮನೆಯಲ್ಲಿಯೂ ನಡೆದುದರಿಂದ, ಚಿಕ್ಕಂದಿನಿಂದಲೂ ಪುಸ್ತಕದ ಗೆಳೆತನ ಬೆಳೆದು ಭಾವನೆಗಳ ಹೊರ ಹಾಕಲೇಬೇಕಾದ ಅನಿವಾರ್ಯತೆ, ಒತ್ತಡಗಳಿಂದ ತಾನು ಅಕ್ಷರ ಲೋಕಕ್ಕೆ ಪಾದಾರ್ಪಣೆ ಮಾಡಬೇಕಾಯಿತು ಎನ್ನುವಾಗ ಇವರ ಕಣ್ಣಲ್ಲಿ ಕ್ರಾಂತಿ-ಶಾಂತಿಯ ಹೊಳಪು ಹೊರಹೊಮ್ಮುತಿತ್ತು. ಬದುಕು ರೂಪಿಸಿದ ಅಮ್ಮ, ಕಥೆಗಳನ್ನು ಹೊತ್ತು ತರುವ ಅಪ್ಪ ಮತ್ತು ಪುಸ್ತಕದ ಒಡನಾಟದ ಓದು ನನ್ನ ಭವಿಷ್ಯತ್ತನ್ನು ರೂಪಿಸಿತು ಎನ್ನುವಾಗ ಮಮತೆಯ ಮಮತಾಳ ಮೊಗದಲ್ಲಿ ವಿಶ್ವಾಸದ ನಗೆ ತುಂಬಿ ತುಳುಕುತ್ತಿತ್ತು.

ಮಮತಾರದು ಬಹುಮುಖ ಪ್ರತಿಭೆಯ ನಗು ಮೊಗದ ಮಗು ಮನಸ್ಸು. ಶಾಲೆಯಲ್ಲಿ ಶಿಕ್ಷಕಿಯಾಗಿ ಆ ಮಕ್ಕಳೊಡನೆಯ ಒಡನಾಟವೇ ಒಂದು ಅವಿಸ್ಮರಣೀಯ ಖುಷಿ ಎಂದು ನೆನೆದು ತಾವೂ ಮಗುವಾಗಿ ಬಿಡುವರು. ಸಾಹಿತ್ಯದೊಂದಿಗೆ ನಾಟಕ-ನಟನೆಯ ಅಭಿರುಚಿಯೂ ಬೆಳೆಯತೊಡಗಿತು. ಸಂಗೀತ-ರಂಗಭೂಮಿಯೂ ಮನದಲ್ಲಿ ಹಸಿರಾಯಿತು. ವಿಜ್ಞಾನ ಪರಿಷತ್ತಿನ ಕೆಲಸವೆಂದರೆ ಮಮತಾಗೆ ಪಂಚ ಪ್ರಾಣ. ಬೀದಿ ನಾಟಕ, ಪಪೆಟ್ ಶೋ, ಚಾರಣ, ಪರಿಸರ ಪಾಠ, ಬೀಜ ಬಿತ್ತುವಿಕೆ, ಗಿಡ ನಡುವದು, ನಟನೆ-ಸಂಘಟನೆಯಿಂದಾಗಿ ರಾಜ್ಯಾದ್ಯಂತ ಪ್ರವಾಸ; ತಮ್ಮ ಇತಿ ಮಿತಿಯ ಸಮಯದಲ್ಲಿ. ಓಡಾಟ ಒಡನಾಟದಿಂದಲೇ ಆತ್ಮಸ್ಥೈರ್ಯ ಎನ್ನುವ ಮಮತಾರಿಗೆ, ಗುರಿ ಉದ್ದೇಶ ಮುಖ್ಯ ಎನ್ನುವ ಕಾರ್ಯ ಸಾಧನೆಯ ಮನಸ್ಸಿದೆ. ಸಂಪ್ರದಾಯಿಕ ಹಿನ್ನೆಲೆಯಿಂದ ಬಂದ ಮಮತಾ ಅಂಜಿಕೆ, ಹಿಂಜರಿಕೆ, ಅಡಗಿಕೊಳ್ಳುವಿಕೆಯನ್ನು ಭೇದಿಸಿ ಸ್ತ್ರೀವಾದಿ ಪಟ್ಟ ಕಟ್ಟಿಕೊಳ್ಳುವಾಗ ಅನೇಕರ ಕೆಂಗಣ್ಣಿಗೂ ಗುರಿಯಾದರು. ಸಂಘಟನೆ-ತಿರುಗಾಟದ ನಡುವೆ ತಮ್ಮ ಸೃಜನಶೀಲತೆ ಬತ್ತಿಹೋಗದಂತೆ ಎಲ್ಲವನ್ನೂ ಕಾಪಿಟ್ಟು ನಿಭಾಯಿಸಿಕೊಂಡು ಬಂದವರು.

ಅರಸೀಕೆರೆಯ ಆ ಸುಂದರ ನೆಲದಲ್ಲಿ ಸುಮಾರು 15 ವರ್ಷಗಳ ಕಾಲ ಮಕ್ಕಳ ಬೇಸಿಗೆ ಶಿಬಿರ, ಮಕ್ಕಳ ನಾಟಕ ನಿರ್ಮಾಣ, ನಾಟಕೋತ್ಸವ, ಸಾಹಿತ್ಯ ಮತ್ತು ಜಾನಪದ ಕಮ್ಮಟಗಳು, ಕವಿಗೋಷ್ಠಿಗಳು, ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘಟನಾ ಕ್ಷೇತ್ರದಲ್ಲಿ ಮಮತಾ ತಮ್ಮನ್ನು ತಾವೇ ತೊಡಗಿಸಿಕೊಂಡು, ಈ ಪುಟ್ಟ ಊರನ್ನು ಕನ್ನಡ ನಾಡಿಗೇ ಪರಿಚಯಿಸಿ ತಮ್ಮ “ಅರಸೀ ಸಾಂಸ್ಕೃತಿಕ ವೇದಿಕೆ”ಯ ಮುಖಾಂತರ ಹಿರಿಯ ಸಾಹಿತಿಗಳು, ಕಲಾವಿದರು, ರಂಗ ಕರ್ಮಿಗಳು ಈ ಊರನ್ನು ಬೆರಗಿನಿಂದ ಕಾಣಲು ಕಾರಣರಾದವರು ಮಮತ ಅರಸೀಕೆರೆಯವರೇ.

ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ ಮತ್ತು ಸಿಆರ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಮತಾ ರಾಜ್ಯ ಶಾಸ್ತ್ರದ ಎಂಎ ಸ್ನಾತಕೋತ್ತರ ಪದವೀಧರೆ. ಹಿಂದಿಯಲ್ಲಿ ಬಿ.ಎ, ಬಿಎಡ್ ಮುಗಿಸಿದ ಇವರು ಅಭಿರುಚಿಗೆ ತಕ್ಕಂತೇ ಸಂಗೀತದ ಜ್ಯೂನಿಯರ್ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿರುವರು. ಶಿಕ್ಷಣದಲ್ಲಿ ರಂಗ ಕಲೆ ತರಬೇತಿಯನ್ನು ಎನ್.ಎಸ್.ಡಿ ಬೆಂಗಳೂರು ಮುಖಾಂತರ ಮುಗಿಸಿದ ಇವರು ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣವನ್ನೇ ತಮ್ಮ ಉಸಿರೆಂದು ನಂಬಿದವರು.

ಮಮತಾ ಸಾಂಸ್ಕೃತಿಕ ಸಂಘಟನೆ, ಅನ್ನ ಕೊಡುವ ವೃತ್ತಿ ಮತ್ತು ತಿರುಗಾಟದ ನಡುವೆ ತಾನು ಬರೆದದ್ದನ್ನು ಪ್ರಕಟಿಸಲು ವಿಳಂಬವಾದರೂ ಸಂತೆಯ ಸರಕು (ಕವನ ಸಂಕಲನ) ಕಾಲಡಿಯ ಮಣ್ಣು(ಹಿಂದಿಯಿಂದ ಅನುವಾದ) ಮಕ್ಕಳ ಮೂರು ನಾಟಕ (ವಿವಿಧ ಲೇಖಕರನ್ನೊಳಗೊಂಡು) ಕೃತಿಗಳನ್ನು ಪ್ರಕಟಿಸಿದ್ದು ಸದ್ಯದಲ್ಲಿಯೇ ಎರಡು ಕವನ ಸಂಕಲನ ಮತ್ತು ಒಂದು ಮಕ್ಕಳ ನಾಟಕ ಪುಸ್ತಕ ಹೊರಬರಲಿದೆ. ‘ಸಂತೆಯ ಸರಕು’ ಕವಿತೆಗಳು ಈಗಾಗಲೇ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದು ಅದಕ್ಕೆ ಹಾವೇರಿಯ ಕಣವಿ ಕಾವ್ಯ ಪುರಸ್ಕಾರ, ಮಂಡ್ಯದ ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ, ಬೆಂಗಳೂರಿನ ಹರಿಹರ ಯುವ ಪ್ರತಿಭಾ ಪುರಸ್ಕಾರ ಮತ್ತು ಹರಿಹರ ಶ್ರೀ ಪ್ರಶಸ್ತಿ ದೊರಕಿದೆ. ಅನುವಾದವೆಂದರೆ ಭಾಷೆಯ ಕೊಡ ಕೊಳ್ಳುವಿಕೆ; ಮತ್ತೊಂದು ಸಂಸ್ಕೃತಿಯ ಚಿತ್ರ. ಹಿಂದಿಯಿಂದ ಅನುವಾದ ಮಾಡಿದ ‘ಕಾಲಡಿಯ ಮಣ್ಣು’ ನವಿರಾದ ಭಾಷೆ ಮತ್ತು ವಸ್ತು ವಿನ್ಯಾಸದಲ್ಲಿ ಹೊಸತನದಿಂದ ತುಂಬಿದೆ. ಗೆಳೆಯರಿಂದೊಡಗೂಡಿ ರಚಿಸಿದ ‘ಮಕ್ಕಳ ಮೂರು ನಾಟಕ’ವೂ ವಿಭಿನ್ನ ದೃಷ್ಟಿಕೋನದಿಂದ ಒಳಗೊಂಡಿದ್ದು ಅನೇಕ ರಂಗ ಪ್ರಯೋಗವನ್ನು ಕಂಡು ಪ್ರೇಕ್ಷಕರ ಮನ ಸೂರೆಗೊಂಡಿದೆ.

ಆ ಹುಡುಗಿಯ ನೋವಿನ ಕೂಗು
ಇನ್ನೂ ಮಾರ್ಧನಿಸುತ್ತಲೇ ಇದೆ
ನನ್ನ ಕಿವುಡಿಯ ಮಾಡಯ್ಯ ತಂದೆ
ಆಕೆಯ ಮೇಲಿನ ದೌರ್ಜನ್ಯದ ಕಥೆಯ
ಪದ ಪದಗಳಲಿ ವಿವರಿಸದಂತೆ
ಎನ್ನ ಮೂಕಿಯ ಮಾಡಯ್ಯ ತಂದೆ
ಕಾರಣಕ್ಕೇ ಕಾರಣವಾದ
ದೂರ್ತರನ್ನೆಲ್ಲಾ
ಹೆಳವರ ಮಾಡಯ್ಯ ತಂದೆ
ಕ್ಷಮಿಸು ಹಿಂಸೆಯ ತಾಳಲಾರದ
ಈ ಹಳಹಳಿಕೆ
ಕೊನೆಗೊಳ್ಳಲಿ ಇಂದೆ

ಎನ್ನುವ ಮಮತಾರ ಮನಸ್ಸಿನ ಧ್ವನಿಯು ಸದಾ ಮಕ್ಕಳ, ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಪ್ರತಿಭಟಿಸುತ್ತಲೇ ಇರುತ್ತದೆ. ಮಮತಾ, ಮಹಿಳೆಯರು ಮತ್ತು ಮಕ್ಕಳಿಗಾಗಿ ಅನೇಕ ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವರು.

ಮಮತಾ ರಾಜ್ಯದ ಒಳಗೂ ಹೊರಗೂ ನೂರಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕೆಲ ಕಾವ್ಯ ಪ್ರೇಮಿಗಳ ಮನದಲ್ಲಿ ಇವರ ಕವಿತೆಗಳು ರಿಂಗಣಿಸುವದು. ಧಾರವಾಡದ ಮೇ ಸಾಹಿತ್ಯ ಮೇಳ, ಸಾಹಿತ್ಯ ಸಂಭ್ರಮ, ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳ ಅನೇಕ ಕವಿಗೋಷ್ಠಿ, ಮಹಾರಾಷ್ಟ್ರದ ಅಕ್ಕಲಕೋಟೆಯ ಕವಿ ಸಮ್ಮೇಳನ, ಮುಧೋಳದ ರನ್ನ ಉತ್ಸವದ ಕವಿಗೋಷ್ಠಿ, ಮೈಸೂರಿನ ದಸರಾ ಕವಿಗೋಷ್ಠಿ, ಹಂಪಿ ಉತ್ಸವದ ಕವಿಗೋಷ್ಠಿ ಇವುಗಳಲ್ಲಿ ಅತೀ ಮುಖ್ಯವಾಗಿರುತ್ತದೆ.

ಡಾ.ಎಚ್.ಆರ್ ಸ್ವಾಮಿಯವರೊಂದಿಗೆ ವೇದಿಕೆಯಲ್ಲಿ

ತನ್ನ ಈ ಎಲ್ಲಾ ಪ್ರಗತಿಪರ ಧೋರಣೆಗಳ ಕಾರ್ಯಕ್ರಮಕ್ಕೆ ಪ್ರೇರಣೆ ಡಾ.ಎಚ್.ಆರ್ ಸ್ವಾಮಿ ಮತ್ತು ನನ್ನ ಸಾಹಿತ್ಯಕ್ಕೆ ಬೆನ್ನೆಲವಾಗಿ ನಿಂತವರು ಸತೀಶ ಕುಲಕರ್ಣಿ, ಸರಜೂ ಕಾಟ್ಕರ್ ಮತ್ತು ಬರಗೂರ ರಾಮಚಂದ್ರಪ್ಪನವರು ಎನ್ನುವಾಗ ಇವರ ಮೊಗದಲ್ಲಿ ಧನ್ಯತಾ ಭಾವ ಎದ್ದು ಕಾಣುವುದು.

ಅವಳ ಒಂದೊಂದು ಹೆಜ್ಜೆ ಲಯದ ಸೂಕ್ಷ್ಮ ಸದ್ದಾಗಬೇಕು
ಅರಮನೆಯಿಂದ ಆನೆ ಲಾಯದ ದೂರ ಅಳೆಯಬೇಕು
ಅವಳುಟ್ಟ ಬಟ್ಟೆಯಿಂದ ಮುಸುಕು ಮುಚ್ಚಿಕೊಳ್ಳಬೇಕು
ಹೊಸ್ತಿಲ ದಾಟಿ ಪಾದ ಹೊರಗಿಟ್ಟ ಸಮಯ ತಿಳಿಯಬೇಕು
ಅದು ಅರ್ಧರಾತ್ರಿಯೇ ಆಗಿದ್ದರೆ ಸಮಯದ ಸಾಂದ್ರ
ಸವಿಯಬೇಕು
ನಾನೂ ಒಮ್ಮೆ ಅಮೃತಮತಿಯಾಗಬೇಕು.

ಎಂದು ಇವರು ಸದಾ ಹೆಣ್ಣಿನ ಅಸ್ಮಿತೆಯ ಕುರಿತಾಗಿ ಕವಿತೆ ಬರೆಯುತ್ತಾ, ಹೆಣ್ಣಿನ ನೋವು, ಅನ್ಯಾಯದ ಕುರಿತಾಗಿ ತೀವ್ರ ಪ್ರತಿಭಟನೆಯ ಉಸಿರಾಗಿರುವರು.

“ನೀವು ನಿಮ್ಮ ಅರಿವಿನ ಸಮಾಧಿಗೆ ಮೌನದ ಚಾದರ ಹೊದ್ದಿಸಿದ್ದಿರಿ” ಎಂಬ ಮಡುಗಟ್ಟಿದ ನೋವಿನಲ್ಲೂ ಸದಾ ಮೌನದ ನಗುಮೊಗದಲ್ಲೇ ಇಲ್ಲಿ ನಡೆಯುವ ಅನ್ಯಾಯ, ಅನಾಚಾರ, ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಇರುವ “ನಾಗಸುಧೆ”ಯ ಮಮತೆಯ ಮಮತಾಳಿಗೆ ನಾಡಿನ ಪ್ರತಿಷ್ಠಿತ “ಮಯೂರ ವರ್ಮ” ಪ್ರಶಸ್ತಿಗಾಗಿ ಶುಭ ಹಾರೈಸಿ ಅಭಿನಂದಿಸುವೆನು.

-ಪ್ರಕಾಶ ಕಡಮೆ

ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಸಪ್ತ ಸಾಗರದಾಚೆ ಕನ್ನಡ ಕಹಳೆಯೂದಿದ ನಾಗ ಐತಾಳ -ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...