Homeಮುಖಪುಟಮಣಿಪುರ; ರಾಷ್ಟ್ರೀಯ ಏಕತೆಯ ಸವಾಲಿಗೆ ರಾಷ್ಟ್ರೀಯತೆ ಕಣ್‌ಮುಚ್ಚಿರುವುದೇಕೆ?

ಮಣಿಪುರ; ರಾಷ್ಟ್ರೀಯ ಏಕತೆಯ ಸವಾಲಿಗೆ ರಾಷ್ಟ್ರೀಯತೆ ಕಣ್‌ಮುಚ್ಚಿರುವುದೇಕೆ?

- Advertisement -
- Advertisement -

ಕುಟುಂಬದ ಮುಖ್ಯಸ್ಥನ ಮೊದಲ ಹೊಣೆಗಾರಿಕೆ, ತನ್ನ ಕುಟುಂಬವನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳುವುದು ಮತ್ತು ಪಕ್ಕದ ಮನೆಯವರನ್ನು ವಿಚಾರಿಸಿಕೊಳ್ಳುವುದು ಹಾಗೂ ಓಣಿಯಲ್ಲಿ ಡಂಗುರ ಬಾರಿಸುವ ಸರದಿ ನಂತರವೇ ಬರುತ್ತೆ. ಇದೇ ರೀತಿಯಲ್ಲಿ ದೇಶದ ನಾಯಕತ್ವದ ಮೊದಲ ಹೊಣೆಗಾರಿಕೆ, ದೇಶದ ಎಲ್ಲಾ ಪ್ರದೇಶಗಳ, ವರ್ಗಗಳ ಹಾಗೂ ಸಮುದಾಯಗಳ ಏಕತೆಯನ್ನು ಖಚಿತಪಡಿಸುವುದು, ವೈಮನಸ್ಸು ಹುಟ್ಟುಕೊಳ್ಳಲು ಬಿಡದೇ, ಅಕಸ್ಮಾತ್ ಪರಸ್ಪರ ಆತಂಕ ಅಥವಾ ಜಗಳಗಳ ಮೊದಲ ಚಿಹ್ನೆ ಕಾಣಿಸಿದರೆ ಕೂಡಲೇ ಅದನ್ನು ಸರಿಪಡಿಸುವುದು. ಟಿವಿ ಸ್ಟುಡಿಯೋಗಳಲ್ಲಿ ಕುಳಿತುಕೊಂಡು ನೆರೆಯ ದೇಶದ ಮೇಲೆ ಗಾಳಿಯ ತಲವಾರನ್ನು ಝಳಪಿಸುವುದು ರಾಷ್ಟ್ರೀಯತೆಯ ಕುರುಹಲ್ಲ. ನಿಜವಾದ ರಾಷ್ಟ್ರೀಯತೆ ಸದ್ದುಗದ್ದಲವಿಲ್ಲದೇ ರಾಷ್ಟ್ರೀಯ ಏಕತೆಯಲ್ಲಿ ಕಂಡುಬಂದ ಎಲ್ಲಾ ಬಿರುಕುಗಳನ್ನು ಮುಚ್ಚುವುದು, ಎಲ್ಲಾ ವಿವಾದಗಳಲ್ಲಿ ನ್ಯಾಯ ಮತ್ತು ಸಮನ್ವಯ ಸಾಧಿಸುವುದು, ದೇಶವನ್ನು ತನ್ನೊಳಗಿನಿಂದಲೇ ಗಟ್ಟಿಗೊಳಿಸುವುದು. ರಾಷ್ಟ್ರದ ರೂಪದಲ್ಲಿರುವ ಮನೆಯಲ್ಲಿ ಹತ್ತಿಕೊಂಡ ಬೆಂಕಿಯನ್ನು ನೋಡಿ ಮುಖ ಬೇರೆಡೆ ತಿರುಗಿಸುವುದು ಅಥವಾ ಅದರಲ್ಲಿ ಪೆಟ್ರೋಲ್ ಚಿಮುಕಿಸುವುದು- ಅದು ಮತ್ತೇನೇ ಆಗಿರಲಿ ರಾಷ್ಟ್ರೀಯತೆಯಂತೂ ಆಗಲು ಸಾಧ್ಯವಿಲ್ಲ.

ಇಂದು ಮಣಿಪುರವು ಭಾರತೀಯ ರಾಷ್ಟ್ರೀಯತೆಯನ್ನು ಪರೀಕ್ಷೆಗೆ ಒಡ್ಡುತ್ತಿದೆ. ಭಾರತದ ಈ ಮಣಿ ತುಂಡಾಗುತ್ತಿದೆ. ಭಾರತ ಮಾತೆಯ 120 ಮಕ್ಕಳು ಇನ್ನೊಮ್ಮೆ ಏಳಲಾರದಂತೆ ಮಣ್ಣಿನಲ್ಲಿ ಮಲಗಿಬಿಟ್ಟಿದ್ದಾರೆ. ಸುಮಾರು 45,000 ಮನೆ ಕಳೆದುಕೊಂಡಿದ್ದಾರೆ. ಎರಡು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದ್ದರೂ ರಕ್ತ ಚಿಮ್ಮುವುದು ನಿಂತಿಲ್ಲ. ಪರಸ್ಪರ ಶತ್ರುಗಳಾಗಿ ರಕ್ತ ಹರಿಸಲು ನಿಂತಿರುವ ಸಮುದಾಯಗಳು ಸರಕಾರಿ ಶಸ್ತ್ರಾಗಾರಗಳನ್ನು ಲೂಟಿ ಮಾಡಿ, ಆಟೋಮ್ಯಾಟಿಕ್ ರೈಫಲ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಗಳಲ್ಲಿ ತಿರುಗಾಡುತ್ತಿದ್ದಾರೆ. ಡ್ರೋನ್‌ಗಳಿಂದ ತಮ್ಮ ವಿರೋಧಿ ಬಣಗಳ ಜನರ ಅಡಗುತಾಣಗಳನ್ನು ಹುಡುಕುತ್ತಿದ್ದಾರೆ, ದಾಳಿ ಮಾಡುತ್ತಿದ್ದಾರೆ. ಕೇವಲ ಪೊಲೀಸರಲ್ಲ, ಸೈನ್ಯವೂ ಹತಾಶವಾಗಿದೆ. ಆದರೆ ಈಶಾನ್ಯ ಭಾರತದ ಈ ದುರಂತದ ಬಗ್ಗೆ ದೇಶ ಕಣ್ಮುಚ್ಚಿಕೊಂಡು ಕುಳಿತಿದೆ. ಉಮ್ಮೀದ್ ಫಾಜಲಿ ಅವರ ಮಾತುಗಳಲ್ಲಿ ಹೇಳಬೇಕೆಂದರೆ, “ಗರ್ ಕಯಾಮತ್ ಯೆ ನಹೀಂ ತೊ ಕಯಾಮತ್ ಕ್ಯಾ ಹೈ/ ಶಹರ್ ಜಲತಾ ರಹಾ ಔರ್ ಲೋಗ್ ನ ಘರ್ ಸೆ ನಿಕಲೆ”- “ಇದು ಪ್ರಳಯವಲ್ಲ ಎಂದಾದರೆ ಮತ್ಯಾವುದು ಪ್ರಳಯ/ನಗರ ಉರಿಯುತ್ತಲಿತ್ತು ಹಾಗೂ ಜನರು ಮನೆಯಿಂದ ಹೊರಬರಲಿಲ್ಲ”.

ನರೇಂದ್ರ ಮೋದಿ

ದೇಶಕ್ಕೆ ಈ ಸತ್ಯದ ಅರಿವಿಲ್ಲದೇ ಇರಬಹುದು ಆದರೆ ಇದನ್ನು ನಮ್ಮ ಪ್ರಧಾನಮಂತ್ರಿಗಳಿಂದ ಮರೆಮಾಚಲು ಸಾಧ್ಯವಿಲ್ಲ. ದುರದೃಷ್ಟವೆಂದರೆ ಕಳೆದ ಎರಡು ತಿಂಗಳಿಂದ ನರೇಂದ್ರ ಮೋದಿ ಮಣಿಪುರದ ಸ್ಥಿತಿಯ ಬಗ್ಗೆ ಒಂದು ಮಾತನ್ನೂ ಹೇಳಿಲ್ಲ. ಶಾಂತಿಗಾಗಿ ಒಂದು ಮನವಿಯನ್ನೂ ಮಾಡಿಲ್ಲ. ಎರಡು ಸಾಂತ್ವನದ ಮಾತುಗಳನ್ನೂ ಆಡಿಲ್ಲ. ರಾಷ್ಟ್ರಕ್ಕೆ ಸಂಬೋಧಿಸಿಯೂ ಇದರ ಬಗ್ಗೆ ಮಾತಾಡಿಲ್ಲ. ಅವರ ಮನ್ ಕಿ ಬಾತ್‌ನಲ್ಲಿಯೂ ಮಣಿಪುರದ ಬಗ್ಗೆ ಒಂದು ಪದ ಬಂದಿಲ್ಲ. ಮಣಿಪುರದ ನೋವನ್ನು ಹೇಳಲು ಬಂದ ಪ್ರತಿನಿಧಿಮಂಡಲದೊಂದಿಗೆ ಎರಡು ನಿಮಿಷ ಮಾತನಾಡಲೂ ಪುರುಸೊತ್ತಿಲ್ಲ. ತಮ್ಮ ಪಕ್ಷದ ಮುಖ್ಯಮಂತ್ರಿ ಹಾಗೂ ಈ ಸಮಸ್ಯೆಯ ಮೂಲವಾಗಿರುವ ಬಿರೇನ್ ಸಿಂಗ್‌ರನ್ನು ತೆಗೆದುಹಾಕುವ ಯಾವ ಸಂಕೇತವನ್ನೂ ನೀಡಿಲ್ಲ. ಎರಡು ತಿಂಗಳಿಂದ ಈ ದುರಂತವನ್ನು ಬಗೆಹರಿಸುವಲ್ಲಿ ವಿಫಲವಾದ ದೇಶದ ಗೃಹಸಚಿವರಿಗೆ ಯಾವ ಸಂದೇಶವನ್ನೂ-ಸೂಚನೆಯನ್ನೂ ಕೊಟ್ಟಿಲ್ಲ. ಹಾಗೂ ಈ ಅರಾಜಕತೆಯನ್ನು ನಿಲ್ಲಿಸಲು ಕೇಂದ್ರ ಸರಕಾರಕ್ಕಿರಬೇಕಾದ ಸಾಂವಿಧಾನಿಕ ಹೊಣೆಗಾರಿಕೆ ಯಾವ ಅರಿವೂ ಇದ್ದಂತಿಲ್ಲ. ಒಂದು ವೇಳೆ ನೀವು ಅಥವಾ ನಾನು ಇಂದು ಮಣಿಪುರದ ವಾಸಿಗಳಾಗಿದ್ದರೆ ಖಂಡಿತವಾಗಿಯೂ ದೇಶದ ಪ್ರಧಾನಮಂತ್ರಿ ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದೆವು. ಅಥವಾ ಈ ದೇಶ ನನ್ನದೇ ಎಂಬ ಪ್ರಶ್ನೆಯನ್ನು ಈ ಪ್ರಕ್ಷುಬ್ದ ಕ್ಷಣಗಳಲ್ಲಿ ಕೇಳುತ್ತಿದ್ದೆವು.

ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಗುಂಡಿನ ಚಕಮಕಿಯಲ್ಲಿ ಮೈತಿ ಸಮುದಾಯದ ಇಬ್ಬರ ಸಾವು

ರಾಷ್ಟ್ರೀಯ ಏಕತೆಯ ಬಗ್ಗೆ ಪ್ರಧಾನಮಂತ್ರಿಯವರ ನಿರ್ಲಕ್ಷ್ಯಕ್ಕೆ ಇದು ಮೊದಲನೆಯ ಉದಾಹರಣೆಯೇನೂ ಅಲ್ಲ. ಕಳೆದ ಒಂಬತ್ತು ವರ್ಷಗಳಲ್ಲಿ ಯಾವಾಗೆಲ್ಲ ದೇಶ ಯಾವುದೇ ಭಾಗದಲ್ಲಿ ಇಂತಹ ಸವಾಲುಗಳು ಹುಟ್ಟಿಕೊಂಡವೋ, ಆಗೆಲ್ಲ ಪ್ರಧಾನಮಂತ್ರಿಯವರು ದೇಶದ ಮುಖ್ಯಸ್ಥನ ಜವಾಬ್ದಾರಿ ವಹಿಸುವ ಬದಲಿಗೆ ಮೌನ ತಳೆದಿದ್ದಾರೆ. ಪಂಜಾಬ್ ಮತ್ತು ಹರಿಯಾಣ ನಡುವೆ ಜಲವಿವಾದ ಎದುರಾದಾಗ, ಅದನ್ನು ಬಗೆಹರಿಸುವ ಯಾವ ಪ್ರಯತ್ನವನ್ನೂ ಪ್ರಧಾನಮಂತ್ರಿ ಮಾಡಲಿಲ್ಲ. ತನ್ನನ್ನು ತಾನು ರಾಷ್ಟ್ರೀಯವಾದಿ ಎಂದು ಘೋಷಿಸುವ ಅವರ ಪಕ್ಷವು ಹರಿಯಾಣದಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸದಲ್ಲಿ ತೊಡಗಿದ್ದಾಗ, ಅತ್ತ ಪಂಜಾಬಿನ ವಿಧಾನಸಭೆಯಲ್ಲಿ ಕುಳಿತ ಅವರ ಶಾಸಕರು ಪಂಜಾಬಿನ ಜನರನ್ನು ಓಲೈಸುವುದಕ್ಕಾಗಿ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದರು. ಪ್ರಧಾನಮಂತ್ರಿಯವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಟ್ಟಿಗೆ ಕೂರಿಸಿ ಈ ವಿಷಯವನ್ನು ಬಗೆಹರಿಸುವ ಪ್ರಯತ್ನವನ್ನೂ ಮಾಡಲಿಲ್ಲ ಹಾಗೂ ತಮ್ಮ ಪಕ್ಷಕ್ಕೆ ಬರಬಹುದಾದ ನಾಲ್ಕೈದು ವೋಟುಗಳ ಆಸೆ ಬಿಟ್ಟು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಲ್ಲಿ ಕೆಲಸ ಮಾಡಬೇಕು ಎಂಬ ಸಲಹೆಯನ್ನೂ ನೀಡಲಿಲ್ಲ. ಕರ್ನಾಟಕ ಮತ್ತು ತಮಿಳನಾಡು ನಡುವಿನ ಕಾವೇರಿ ಜಲವಿವಾದದ ಬಗ್ಗೆಯೂ ಇದೇ ರೀತಿಯ ರಾಜಕೀಯದ ಆಟವನ್ನು ಆಡಲಾಗುತ್ತಿದೆ. ಪ್ರಧಾನಮಂತ್ರಿಗೆ ತಮಿಳನಾಡಿನ ಸೆಂಗೋಲ್‌ಅನ್ನು ರಾಷ್ಟ್ರೀಯ ಪ್ರತೀಕವನ್ನಾಗಿಸುವುದರಲ್ಲಿ ಆಸಕ್ತಿ ಇದೆ ಆದರೆ ತಮಿಳನಾಡಿನ ರೈತರ ಕುಂದುಕೊರತೆಗಳನ್ನು ನೀಗಿಸಲು ಕರ್ನಾಟಕದಲ್ಲಿನ ತಮ್ಮದೇ ಪಕ್ಷದ ಮುಖ್ಯಮಂತ್ರಿಯೊಂದಿಗೆ ಮಾತುಕತೆ ಮಾಡಲು ಯಾವ ಆಸಕ್ತಿಯೂ ಇದ್ದಿಲ್ಲ. ಹರಿಯಾಣದಲ್ಲಿ ಜಾತೀಯ ಹಿಂಸೆ ಆದಾಗ, ಅಲ್ಲಿನ ಅನೇಕ ನಗರಗಳು ಹತ್ತಿಕೊಂಡು ಉರಿದವು, ಸರಕಾರ ಮೌನವಾಗಿತ್ತು, ಪ್ರಧಾನಮಂತ್ರಿ ಏನನ್ನೂ ಹೇಳಲಿಲ್ಲ. ಅವರ ಪಕ್ಷದ ನಾಯಕರು ಈ ಹಿಂಸೆಯಲ್ಲಿ ಮತಗಳ ಲಾಭ ನಷ್ಟದ ತಕ್ಕಡಿ ತೂಗುತ್ತಿದ್ದರು; ಆದರೆ ಪ್ರಧಾನಮಂತ್ರಿಯವರು ಮಾತ್ರ ಈ ಯಾವುದೇ ಒಂದು ಬಿರುಕನ್ನು ಸರಿಪಡಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ.

ರಾಜೀವ್ ಗಾಂಧಿ

ಆದರೆ, ಒಂದು ವೇಳೆ ಮನೆಗೆ ಬೆಂಕಿ ಬಿದ್ದಿದೆ ಹಾಗೂ ಅದರಲ್ಲಿ ಬೇಳೆ ಬೇಯಿಸಿಕೊಳ್ಳುವ ಅವಕಾಶ ಇದೆ ಎಂದಾಗ ಆ ಅವಕಾಶವನ್ನು ಮಾತ್ರ ನರೇಂದ್ರ ಮೋದಿಯವರು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಪ್ರಶ್ನೆ ಏನೆಂದರೆ, ಇದೆಂತಹ ರಾಷ್ಟ್ರೀಯತೆ, ರಾಷ್ಟ್ರವು ಒಡೆದುಹೋಗುತ್ತಿದ್ದರೂ ಅದರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ವಹಿಸುವ ರಾಷ್ಟ್ರೀಯತೆ ಎಂತಹದ್ದು?

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಅವಧಿಯನ್ನು ನೆನಪಿಸುವುದು ಸೂಕ್ತ. 1985ರಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾದಾಗ ಅವರ ವಯಸ್ಸು, ಅವರ ರಾಜಕೀಯ ತಿಳಿವಳಿಕೆ ಹಾಗೂ ಅನುಭವವು ನರೇಂದ್ರ ಮೋದಿಯವರಿಗೆ ಹೋಲಿಸಿದರೆ ಬಹಳ ಕಡಿಮೆ ಎನ್ನಬಹುದು. ಸಿಖ್ ನರಮೇಧದ ಕಳಂಕವೂ ಅವರ ಪಕ್ಷದ ಮೇಲಿತ್ತು. ಆದರೆ ಈ ಹೊಸ ಮತ್ತು ಅನನುಭವಿ ಪ್ರಧಾನಿಯು ಪಂಜಾಬಿನಲ್ಲಿ ಸಂತ ಲೋಂಗೊವಾಲ್‌ರೊಂದಿಗೆ ಒಪ್ಪಂದ ಮಾಡಿಕೊಂಡರು. ಆಸ್ಸಾಂನಲ್ಲಿ ಏಳು ವರ್ಷಗಳಿಂದ ನಡೆಯುತ್ತಿದ್ದ ಆಂದೋಲನವನ್ನು ಮುಕ್ತಾಯಗೊಳಿಸಿದರು, ತಮ್ಮ ಪಕ್ಷದ ಚುನಾವಣಾ ಸೋಲನ್ನು ಒಪ್ಪಿಕೊಂಡರು. ಮಿಜೋರಾಂನಲ್ಲಂತೂ ಅವರು ತಮ್ಮ ಪಕ್ಷದ ಸರಕಾರವನ್ನು ತೆಗೆದುಹಾಕಿ ವಿದ್ರೋಹಿ ಲಾಲಡೆಂಗ್‌ಅನ್ನು ಮುಖ್ಯಮಂತ್ರಿಯಾಗಿ ನೇಮಿಸಿದರು ಹಾಗೂ ಆ ಗಡಿಪ್ರದೇಶದ ರಾಜ್ಯದಲ್ಲಿ ದೀರ್ಘಕಾಲೀನ ಶಾಂತಿಗೆ ದಾರಿಮಾಡಿಕೊಟ್ಟರು. ತಮ್ಮ ಹೋಲಿಕೆಯನ್ನು ಜವಾಹರಲಾಲ್ ನೆಹರು ಅವರೊಂದಿಗೆ ಮಾಡಲು ಉತ್ಸುಕರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಹೋಲಿಕೆ ಬಹುಶಃ ಇಷ್ಟವಾಗದೇ ಇರಬಹುದು ಆದರೆ ರಾಷ್ಟ್ರೀಯ ಏಕತೆಗಾಗಿ ರಾಜಕೀಯ ರಿಸ್ಕ್‌ಗಳನ್ನು ತೆಗೆದುಕೊಂಡು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ವಿಷಯದಲ್ಲಿ ಸದ್ಯಕ್ಕೆ ರಾಜೀವ್ ಗಾಂಧಿಗಿಂತ ಅವರು ಹಿಂದಿದ್ದಾರೆ. ಈಗ ಅವರು ದೇಶಕ್ಕೆ ಮರಳಿದ್ದು ದೇಶದ ಮುಖ್ಯಸ್ಥನಿಗೆ ಇರಬೇಕಾದ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವ ಕೆಲಸದ ಆರಂಭವನ್ನು ಮಣಿಪುರದಿಂದ ಮಾಡುವವರು ಎಂದು ಆಶಿಸೋಣ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...