Homeಅಂಕಣಗಳುಸಹಬಾಳ್ವೆ-ಸಾಮರಸ್ಯ; ಸ್ಪಷ್ಟತೆಯ ಹಾದಿಯಲ್ಲಿ ಸಂಕಷ್ಟದ ಕಲ್ಲುಮುಳ್ಳುಗಳು

ಸಹಬಾಳ್ವೆ-ಸಾಮರಸ್ಯ; ಸ್ಪಷ್ಟತೆಯ ಹಾದಿಯಲ್ಲಿ ಸಂಕಷ್ಟದ ಕಲ್ಲುಮುಳ್ಳುಗಳು

- Advertisement -
- Advertisement -

ಉಡುಪಿಯ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶಕ್ಕೆ ರಂಗ ಸಜ್ಜಾಗಿದೆ. ಸಹಪಂಕ್ತಿ ಭೋಜನವನ್ನು ಇನ್ನೂ ಮೈಗೂಡಿಸಿಕೊಳ್ಳದ, ಆದರೆ ದೇಶದ ರಾಜಕೀಯದಲ್ಲಿ ಅಧಿಕಾರಯುತವಾದ ಸ್ಥಾನ ಹೊಂದಿರುವ ಮಠ ನೆಲೆಸಿರುವ, ಮಡಿಮೈಲಿಗೆಗಳನ್ನು, ತಾರತಮ್ಯವನ್ನು ಸಿದ್ಧಾಂತವನ್ನಾಗಿಸಿ-ತತ್ವಶಾಸ್ತ್ರವನ್ನಾಗಿಸಿ ದೊಡ್ಡಮಟ್ಟದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸೆಕ್ಟ್ ಒಂದು ಪ್ರಭಾವಿಯಾಗಿರುವ, ರಾಜ್ಯದಲ್ಲಿ ಕೋಮು ವಿಷಮತೆಯ ಪ್ರಯೋಗಶಾಲೆಯಾಗಿರುವ ನೆಲದಿಂದ ಇಂತಹ ಸೌಹಾರ್ದತೆ ಸಾರುವ ಸಮಾವೇಶ ಈಗ ಮತ್ತೊಮ್ಮೆ ಚಾಲನೆ ಪಡೆದುಕೊಳ್ಳುತ್ತಿದೆ. ಈಗಿನ ಬಹುಸಂಖ್ಯಾತವಾದದಲ್ಲಿ ಮೂಲೆಗುಂಪಾಗುವ-ದೌರ್ಜನ್ಯಕ್ಕೆ ಒಳಗಾಗುವ ಅಪಾಯ ಎದುರಿಸುತ್ತಿರುವ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಮತಧರ್ಮಗಳ ಕೆಲವು ವರ್ಗಗಳಲ್ಲಿ ಕೂಡ ಅವರವರ ಮತಧರ್ಮದ ಶ್ರೇಷ್ಠತೆಯನ್ನು ಮಾತ್ರ ಪ್ರತಿಪಾದಿಸುವ ವ್ಯಕ್ತಿಗಳು-ಗುಂಪುಗಳು ಇಲ್ಲವೆಂದಲ್ಲ. ಆದರೆ, ಸಮಾನತೆಯ ತಳಹದಿಯಲ್ಲಿ ಹೊಂದಾಣಿಕೆ-ಕೂಡುಬಾಳ್ವೆಯೆಡೆಗೆ ಇಲ್ಲಿಯವರೆಗೂ ಸಾಧಿಸಲು ಸಾಧ್ಯವಾಗಿದ್ದ ಚಲನೆಯನ್ನು ಇಂದು ನೆಲೆಸಿರುವ ದ್ವೇಷದ ರಾಜಕೀಯ ವಾತಾವರಣ ಮಣ್ಣುಮುಕ್ಕಿಸಿ, ಅಲ್ಪಸಂಖ್ಯಾತರನ್ನು ಅನ್ಯರನ್ನಾಗಿಸಿ ಎರಡನೇ ದರ್ಜೆಯ ನಾಗರಿಕರನ್ನಾಗಿಸಲು ಹೊರಟಿರುವಾಗ, ಈ ಸಾಮರಸ್ಯ-ಸಹಬಾಳ್ವೆಯ ಪರಿಕಲ್ಪನೆಗಳಿಗೆ ಸಂದರ್ಭಾನುಸಾರ ವಿಶಾಲ ಅರ್ಥಗಳು ದೊರಕುವುದು ಸಹಜ.

ಸದರಿ ಸಮಾವೇಶದ ಬಗ್ಗೆ ಕೆಲವರು ಎತ್ತಿರುವ ಪ್ರಾಮಾಣಿಕ ಮತ್ತು ಕಾಳಜಿಯ ಪ್ರಶ್ನೆಗಳಿಗೆ ಮತ್ತು ಕುಹಕದ ಪ್ರಶ್ನೆಗಳಿಗೂ ಉತ್ತರಗಳನ್ನು ಕಂಡುಕೊಳ್ಳುವುದರ ಮೂಲಕ ನಮ್ಮ ಗುರಿಯನ್ನು ಹೆಚ್ಚು ಸ್ಪಷ್ಟತೆಯಿಂದ ತಲುಪಲು ಪ್ರಯತ್ನಿಸಬಹುದೇನೋ! ಸಾಮರಸ್ಯದ ಪರಿಕಲ್ಪನೆಯನ್ನೇ ತೆಗೆದುಕೊಂಡರೆ, ಅದನ್ನು ಹಲವು ಸಂದರ್ಭಗಳಲ್ಲಿ ಸಮಾನತೆಯ ವಿರುದ್ಧವಾಗಿ ಪ್ರತಿಪಾದಿಸಿರುವುದನ್ನು ನಾವು ನೋಡಬಹುದು. ಆರ್‌ಎಸ್‌ಎಸ್‌ನ ಸಂಸ್ಥಾಪಕ ಗೋಲ್ವಾಲ್ಕರ್ ಹೇಳುವ ಮಾತು ಹೀಗಿದೆ: “ನಮ್ಮ ಧರ್ಮ ಕಮ್ಯುನಿಸ್ಟರು ಹೇಳುವ ಸಮಾನತ್ವ (ಇಕ್ವಾಲಿಟಿ) ಅಲ್ಲ, ಸಾಮರಸ್ಯ (ಹಾರ್ಮೊನಿ). ಪ್ರತಿಯೊಬ್ಬನೂ ತನ್ನ ಸ್ವಧರ್ಮವನ್ನು (ಅದು ಬಾಂಡಲಿ ಹೊರುವುದಾಗಲೂ, ಕಾರಿನಲ್ಲಿ ಕುಳಿತು ತಿರುಗುವುದಾಗಲೀ) ನಿರ್ವಹಿಸುತ್ತಾ ಹೋದರೆ ಎಲ್ಲವೂ ಪ್ರಶಾಂತವಾಗಿ ಸಾಮರಸ್ಯದಿಂದ ಇರುತ್ತದೆ”. ಹೀಗೆ ಸಾಮರಸ್ಯದ ಕಲ್ಪನೆಯನ್ನು ಈ ನೆಲದ ಮುಖ್ಯ ಗುಣವಾಗಿದ್ದ ತಾರತಮ್ಯವನ್ನು ಸಮರ್ಥಿಸಿಕೊಳ್ಳಲು ಬಳಸಲಾಗಿತ್ತು. ಇಂತಹ ಕೃತಕ ಸಾಮರಸ್ಯವನ್ನು ಇಂದಿಗೂ ಪ್ರತಿಪಾದಿಸುವ ಸಂಘ ಪರಿವಾರದ ಸಿದ್ಧಾಂತಿಗಳಿಗೆ ಬರವೇನಿಲ್ಲ. ಆದರೆ ಸದರಿ ಸಮಾವೇಶ ಸಮಾನತೆಯನ್ನು ಪ್ರತಿಪಾದಿಸುವ, ಜಾತಿ-ಧರ್ಮ ಪ್ರೇರಿತ ತಾರತಮ್ಯವನ್ನು ಹೋಗಲಾಡಿಸುವ ಇರಾದೆ ಹೊಂದಿರುವ ಸಂವಿಧಾನವನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಕನಿಷ್ಠ ಅಂತಹ ನಂಬಿಕೆಯುಳ್ಳ ಮುಖಂಡರು ಈ ಸಮಾವೇಶದ ಅಂತರಂಗವಾಗಿದ್ದಾರೆ. ಆ ನಿಟ್ಟಿನಲ್ಲಿ ಬಾಹ್ಯ ಪ್ರಾತಿನಿಧ್ಯಕ್ಕೂ ಸಮಾನತೆಯ ಮೂಲಕ ಸಾಮರಸ್ಯ ಕಂಡುಕೊಳ್ಳುವ ಹಾದಿ ಹಿಡಿದಿರುವವರನ್ನು ಒಳಗೊಳ್ಳಲು ಸಮಾವೇಶ ಶ್ರಮಿಸುತ್ತಿದೆ. ಯಾರ ಬಗ್ಗೆ ಅಪಸ್ವರ ಬಂದಿದೆಯೋ ಅಂತಹವರ ಬಗ್ಗೆ ಮರುಚಿಂತನೆ ನಡೆಸುವುದಾಗಿ ಕೂಡ ಸಂಘಟಕರು ವಿನಮ್ರವಾಗಿ ಹೇಳಿದ್ದಾರೆ.

ಇದೇ ನೆಲೆಯಲ್ಲಿ ಏಳುವ ಮತ್ತೊಂದು ಪ್ರಶ್ನೆ, ಹಲವು ಧರ್ಮಗುರುಗಳದ್ದು. ಈ ದೇಶದ ಪ್ರತಿಯೊಬ್ಬ ನಿವಾಸಿಗೂ ತನ್ನ ಇಚ್ಛೆಯ ಧರ್ಮವನ್ನು ಅನುಸರಿಸುವುದಕ್ಕೆ, ಪ್ರಸರಿಸುವುದಕ್ಕೆ ನಮ್ಮ ಸಂವಿಧಾನ ಅವಕಾಶವನ್ನಂತೂ ನೀಡಿದೆ. ಈ ಸಮಯದಲ್ಲಿ ವಿವಿಧ ಜಾತಿ ಮತಗಳಿಗೆ ಸೇರಿದ ಧರ್ಮಗುರುಗಳ ಪಾತ್ರವೇನು? ಎಷ್ಟೋ ಜಾತಿ-ಧರ್ಮಗುರುಗಳು ವೇದಿಕೆಗೆ ತಕ್ಕಂತೆ ಮಾತನಾಡುವವರು. ಬಾಬ್ರಿಮಸೀದಿ ಕೆಡವಿದ ಜಾಗದಲ್ಲಿ ರಾಮಮಂದಿರ ಕಟ್ಟಲೇಬೆಕೆಂದು ಕರೆನೀಡುವ, ಮತ್ತೊಂದು ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ರಂಗುರಂಗಾಗಿ ಬಣ್ಣಿಸುವ ಸ್ವಾಮಿಗಳು ಹಲವರು ಇದ್ದಾರೆ. ಸಾಮಾನ್ಯವಾಗಿ ಯಾವುದೇ ಜಾತಿ ಮತಗಳ ಧರ್ಮಗುರುಗಳು ಯಥಾಸ್ಥಿತಿಗೆ ಪುಷ್ಠಿ ನೀಡುವವರು. ಜಾತಿ-ಧರ್ಮ ಪಾರಮ್ಯವನ್ನು ಮೆರೆಯುವವರು. ಪ್ರಗತಿಯನ್ನು ತುಸು ಅನುಸರಿಸುವವರು ಕೆಲವರು ಇದ್ದಾರಾದರೂ, ಅವರ ತರಬೇತಿಯ ಕಾರಣಕ್ಕೆ, ತಮ್ಮ ಪರಂಪರೆಯನ್ನು ಸುಲಭವಾಗಿ ತ್ಯಜಿಸಲಾಗದ ಅವರ ಕೆಲಸದ ಸ್ವಭಾವದ ಕಾರಣಕ್ಕೆ ಅವರು ಎಲ್ಲ ಜನರ ಒಳಿತಿನ ಕಾಳಜಿಗಾಗಿ ದುಡಿಯಲಾರರು; ಪ್ರತಿ ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಇಂಟಲೆಕ್ಚುಯಲ್ ಪಾತ್ರವನ್ನು ಅವರು ವಹಿಸಿರುವುದು ವಿರಳಾತಿ ವಿರಳ. ಆದರೂ ಜನಪ್ರಿಯ ವೇದಿಕೆಗಳನ್ನು ಸೃಷ್ಟಿಸುವಾಗ, ಹಲವು ರೀತಿಯಲ್ಲಿ ಜನರನ್ನು ಪ್ರಭಾವಿಸಬಲ್ಲ ಜನಪ್ರಿಯ ವ್ಯಕ್ತಿಗಳನ್ನು ಕರೆತರುವುದೂ ಮುಖ್ಯವಾದೀತು. ಆ ಮುಖಾಂತರ ಸಹಬಾಳ್ವೆಯ ಪ್ರಾಥಮಿಕ ಪಾಠಗಳನ್ನು ಈ ಕರಾಳ ದಿನಗಳಲ್ಲಿ ಮತ್ತೆಮತ್ತೆ ನೆನಪಿಸುವ ಕೆಲಸಕ್ಕೆ ಸಮಾವೇಶ ಮುಂದಾಗಬಹುದು.

ಇಂದು ಯಾವುದೇ ಸುಳ್ಳು ಸಮರ್ಥನೆಗಳೂ ಬೇಕಾಗದೆ, ಸಮಾಜದಲ್ಲಿ ಕೋಮುಗಳ ನಡುವೆ ದ್ವೇಷ ಮೂಡಿಸಲು ಸಾಧ್ಯವಾಗುತ್ತಿರುವಂತಹ ಸನ್ನಿವೇಶದಲ್ಲಿ, ಎಲ್ಲ ಆಯಾಮಗಳಲ್ಲಿ ’ಪರ್ಫೆಕ್ಟ್’ ಅಲ್ಲದೆ ಇರಬಹುದಾದರೂ ಜನಪ್ರಿಯ ಸಂಸ್ಕೃತಿ ಮಾದರಿಯ ಚಿಂತನೆಗಳನ್ನೂ ಹರಿದುಬಿಡಬೇಕಾದ ತುರ್ತಿನಲ್ಲಿ ನಾವಿದ್ದೇವೆ. ಆ ನಿಟ್ಟಿನಲ್ಲಿ ಪಾರ್ಕ್‌ಗಳಾಗಲೀ, ಸಿನಿಮಾ ಮಂದಿರಗಳಾಗಲೀ, ಬೀಚ್ ಇನ್ನಿತರ ಸಾರ್ವಜನಿಕ ಪ್ರದೇಶಗಳು ಸೆಕ್ಯುಲರ್ ಆದ ಚಹರೆಯನ್ನು ಹೊಂದಿವೆ ಎನ್ನುವ ಮಾತುಗಳನ್ನು ಪದೇಪದೆ ನೆನಪಿಸಬೇಕಾಗುತ್ತದೆ. ಊರಹಬ್ಬಗಳು ಇಂದಿಗೂ ಕಟ್ಟಕಡೆಯ ದಮನಿತನನ್ನು ಒಳಗೊಳ್ಳದೆ ಹೋಗಿರುವ, ದೇವಸ್ಥಾನ ಪ್ರವೇಶಕ್ಕೆ ಇನ್ನೂ ಮುಕ್ತ ಅವಕಾಶ ನೀಡದಿರುವ ನೀಚ ತರತಮವನ್ನು ಮರೆಯದೆಯೂ, ಅಂತಹ ಹಬ್ಬಗಳಲ್ಲಿ ಹಲವು ಕೋಮುಗಳು ಸ್ವಲ್ಪಮಟ್ಟಿಗಾದರೂ ತರತಮತೆಯನ್ನು ತಗ್ಗಿಸಿಕೊಂಡು ಕೂಡಿ ಸಂಭ್ರಮಿಸುವ ಸಂಗತಿಯನ್ನು ಗುರುತಿಸಬೇಕಾಗಿದೆ ಅಲ್ಲವೇ? ಅಲ್ಲಿಂದ ಕನಿಷ್ಠ ಪಕ್ಷ ಇನ್ನೂ ಹಿಂದಕ್ಕೆ ಚಲಿಸದಂತೆ, ಇನ್ನಷ್ಟು ಪ್ರಗತಿಯತ್ತ ದಾಪುಗಾಲು ಇರಿಸಲು ಅನುವಾಗುವಂತೆ ಕೆಲಸಗಳಾಗಬೇಕಿವೆ.

ಇದೇ ಹಿನ್ನೆಲೆಯಲ್ಲಿ ಉಡುಪಿಯ ಸಮಾವೇಶವನ್ನೂ ಕಾಣಬಹುದೇ? ವೈಚಾರಿಕತೆಯಿಂದ ಜೀವನ ದೃಷ್ಟಿಯನ್ನು ಕಟ್ಟಿಕೊಂಡವನೊಬ್ಬನಿಗೆ ಹತ್ತಾರು ಸ್ವಾಮೀಜಿಗಳ ಉಪಸ್ಥಿತಿ ಕಸಿವಿಸಿಯನ್ನುಂಟುಮಾಡಬಲ್ಲದು. ಇಂತಹ ಸಾಮರಸ್ಯ ತೀವ್ರ ಮೇಲ್ಮಟ್ಟದ್ದು ಎಂಬ ಕಳವಳ ಉಂಟಾಗಬಹುದು. ಆದರೆ ಇಂತಹ ಸಮ್ಮೇಳನಗಳು ಕೂಡ ಜನಸಾಮಾನ್ಯರಲ್ಲಿ ಜನಪ್ರಿಯ ಮಟ್ಟದಲ್ಲಿ ಭರವಸೆ ತುಂಬಬಲ್ಲವು (ಇಂದಿನ ಮತೀಯ ಧ್ರುವೀಕರಣದಲ್ಲಿ ಶೋಷಣೆಗೆ ಒಳಗಾಗುತ್ತಿರುವವರಿಗೆ) ಮತ್ತು ವಿವೇಕವನ್ನೂ (ದ್ವೇಷ ಸಿದ್ಧಾಂತಕ್ಕೆ ಮರುಳಾಗುತ್ತಿರುವವರಿಗೆ). ಸಮಾಜದಲ್ಲಿ ಒಟ್ಟಾರೆಯಾಗಿ ಒಳಿತಿನ ಚಲನೆಯ ಕಡೆಗೆ ಒಲವಿರುವವರು ಎತ್ತುವ ಆಕ್ಷೇಪಗಳ ಜೊತೆಗೇ, ಅವುಗಳನ್ನೂ ಸಾಧ್ಯವಾದಷ್ಟು ಅಡ್ರೆಸ್ ಮಾಡುವುದರ ಜೊತೆಗೆ, ಈ ಸಹಬಾಳ್ವೆ ಸಮಾವೇಶ ಯಾವ ಗುರಿಯನ್ನು ಇಟ್ಟುಕೊಂಡಿದೆಯೋ ಅದನ್ನು ಸಾಧಿಸಬೇಕಿದೆ. ಆ ಗುರಿ, ಆಳುವ ಪ್ರಭುತ್ವ ಮತ್ತು ಅದರ ಸೈದ್ಧಾಂತಿಕ ಜತೆಗಾರರು ಸೃಷ್ಟಿಸುವ ಒಡಕಿಗೆ, ಧ್ರುವೀಕರಣಕ್ಕೆ ಇಲ್ಲಿನ ಸಾಮಾನ್ಯ ಜನ ಸಮ್ಮತಿಸುವುದಿಲ್ಲವೆಂದು ತೋರಿಸುವುದು. ಅವರ ಗುರಿಯಾಗಿರುವ ಅಲ್ಪಸಂಖ್ಯಾತ ಮುಸ್ಲಿಂ ಮತ್ತು ಇತರ ಸಮುದಾಯಗಳ ಜೊತೆಗೆ ನಾವಿದ್ದೇವೆ ಎಂಬುದನ್ನು ಗಟ್ಟಿಯಾಗಿ ಪ್ರತಿಪಾದಿಸುವುದು ಮತ್ತು ಕೃತಕವಾಗಿ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸಲಾಗುತ್ತಿರುವ ಈ ಕೋಮುಗಳ ನಡುವೆ ಒಡನಾಟ, ಪರಸ್ಪರ ಬಳಕೆ ಮುಂದಿನ ದಿನಗಳಲ್ಲಿ ಹೆಚ್ಚಾಗುವಂತೆ ಮಾಡಲು ಕಾರ್ಯಪ್ರವೃತ್ತರಾಗುವುದು. ಇದಕ್ಕಾಗಿ ಎಲ್ಲರ ಒಳಿತಿಗೆ ತುಡಿಯುವ ನಾಡಿನ ಪ್ರಜ್ಞಾವಂತರೆಲ್ಲರೂ ಕೈಜೋಡಿಸಿದಲ್ಲಿ ಕಷ್ಟವಾಗಲಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...