Homeಅಂಕಣಗಳುಸಹಬಾಳ್ವೆ-ಸಾಮರಸ್ಯ; ಸ್ಪಷ್ಟತೆಯ ಹಾದಿಯಲ್ಲಿ ಸಂಕಷ್ಟದ ಕಲ್ಲುಮುಳ್ಳುಗಳು

ಸಹಬಾಳ್ವೆ-ಸಾಮರಸ್ಯ; ಸ್ಪಷ್ಟತೆಯ ಹಾದಿಯಲ್ಲಿ ಸಂಕಷ್ಟದ ಕಲ್ಲುಮುಳ್ಳುಗಳು

- Advertisement -
- Advertisement -

ಉಡುಪಿಯ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶಕ್ಕೆ ರಂಗ ಸಜ್ಜಾಗಿದೆ. ಸಹಪಂಕ್ತಿ ಭೋಜನವನ್ನು ಇನ್ನೂ ಮೈಗೂಡಿಸಿಕೊಳ್ಳದ, ಆದರೆ ದೇಶದ ರಾಜಕೀಯದಲ್ಲಿ ಅಧಿಕಾರಯುತವಾದ ಸ್ಥಾನ ಹೊಂದಿರುವ ಮಠ ನೆಲೆಸಿರುವ, ಮಡಿಮೈಲಿಗೆಗಳನ್ನು, ತಾರತಮ್ಯವನ್ನು ಸಿದ್ಧಾಂತವನ್ನಾಗಿಸಿ-ತತ್ವಶಾಸ್ತ್ರವನ್ನಾಗಿಸಿ ದೊಡ್ಡಮಟ್ಟದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸೆಕ್ಟ್ ಒಂದು ಪ್ರಭಾವಿಯಾಗಿರುವ, ರಾಜ್ಯದಲ್ಲಿ ಕೋಮು ವಿಷಮತೆಯ ಪ್ರಯೋಗಶಾಲೆಯಾಗಿರುವ ನೆಲದಿಂದ ಇಂತಹ ಸೌಹಾರ್ದತೆ ಸಾರುವ ಸಮಾವೇಶ ಈಗ ಮತ್ತೊಮ್ಮೆ ಚಾಲನೆ ಪಡೆದುಕೊಳ್ಳುತ್ತಿದೆ. ಈಗಿನ ಬಹುಸಂಖ್ಯಾತವಾದದಲ್ಲಿ ಮೂಲೆಗುಂಪಾಗುವ-ದೌರ್ಜನ್ಯಕ್ಕೆ ಒಳಗಾಗುವ ಅಪಾಯ ಎದುರಿಸುತ್ತಿರುವ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಮತಧರ್ಮಗಳ ಕೆಲವು ವರ್ಗಗಳಲ್ಲಿ ಕೂಡ ಅವರವರ ಮತಧರ್ಮದ ಶ್ರೇಷ್ಠತೆಯನ್ನು ಮಾತ್ರ ಪ್ರತಿಪಾದಿಸುವ ವ್ಯಕ್ತಿಗಳು-ಗುಂಪುಗಳು ಇಲ್ಲವೆಂದಲ್ಲ. ಆದರೆ, ಸಮಾನತೆಯ ತಳಹದಿಯಲ್ಲಿ ಹೊಂದಾಣಿಕೆ-ಕೂಡುಬಾಳ್ವೆಯೆಡೆಗೆ ಇಲ್ಲಿಯವರೆಗೂ ಸಾಧಿಸಲು ಸಾಧ್ಯವಾಗಿದ್ದ ಚಲನೆಯನ್ನು ಇಂದು ನೆಲೆಸಿರುವ ದ್ವೇಷದ ರಾಜಕೀಯ ವಾತಾವರಣ ಮಣ್ಣುಮುಕ್ಕಿಸಿ, ಅಲ್ಪಸಂಖ್ಯಾತರನ್ನು ಅನ್ಯರನ್ನಾಗಿಸಿ ಎರಡನೇ ದರ್ಜೆಯ ನಾಗರಿಕರನ್ನಾಗಿಸಲು ಹೊರಟಿರುವಾಗ, ಈ ಸಾಮರಸ್ಯ-ಸಹಬಾಳ್ವೆಯ ಪರಿಕಲ್ಪನೆಗಳಿಗೆ ಸಂದರ್ಭಾನುಸಾರ ವಿಶಾಲ ಅರ್ಥಗಳು ದೊರಕುವುದು ಸಹಜ.

ಸದರಿ ಸಮಾವೇಶದ ಬಗ್ಗೆ ಕೆಲವರು ಎತ್ತಿರುವ ಪ್ರಾಮಾಣಿಕ ಮತ್ತು ಕಾಳಜಿಯ ಪ್ರಶ್ನೆಗಳಿಗೆ ಮತ್ತು ಕುಹಕದ ಪ್ರಶ್ನೆಗಳಿಗೂ ಉತ್ತರಗಳನ್ನು ಕಂಡುಕೊಳ್ಳುವುದರ ಮೂಲಕ ನಮ್ಮ ಗುರಿಯನ್ನು ಹೆಚ್ಚು ಸ್ಪಷ್ಟತೆಯಿಂದ ತಲುಪಲು ಪ್ರಯತ್ನಿಸಬಹುದೇನೋ! ಸಾಮರಸ್ಯದ ಪರಿಕಲ್ಪನೆಯನ್ನೇ ತೆಗೆದುಕೊಂಡರೆ, ಅದನ್ನು ಹಲವು ಸಂದರ್ಭಗಳಲ್ಲಿ ಸಮಾನತೆಯ ವಿರುದ್ಧವಾಗಿ ಪ್ರತಿಪಾದಿಸಿರುವುದನ್ನು ನಾವು ನೋಡಬಹುದು. ಆರ್‌ಎಸ್‌ಎಸ್‌ನ ಸಂಸ್ಥಾಪಕ ಗೋಲ್ವಾಲ್ಕರ್ ಹೇಳುವ ಮಾತು ಹೀಗಿದೆ: “ನಮ್ಮ ಧರ್ಮ ಕಮ್ಯುನಿಸ್ಟರು ಹೇಳುವ ಸಮಾನತ್ವ (ಇಕ್ವಾಲಿಟಿ) ಅಲ್ಲ, ಸಾಮರಸ್ಯ (ಹಾರ್ಮೊನಿ). ಪ್ರತಿಯೊಬ್ಬನೂ ತನ್ನ ಸ್ವಧರ್ಮವನ್ನು (ಅದು ಬಾಂಡಲಿ ಹೊರುವುದಾಗಲೂ, ಕಾರಿನಲ್ಲಿ ಕುಳಿತು ತಿರುಗುವುದಾಗಲೀ) ನಿರ್ವಹಿಸುತ್ತಾ ಹೋದರೆ ಎಲ್ಲವೂ ಪ್ರಶಾಂತವಾಗಿ ಸಾಮರಸ್ಯದಿಂದ ಇರುತ್ತದೆ”. ಹೀಗೆ ಸಾಮರಸ್ಯದ ಕಲ್ಪನೆಯನ್ನು ಈ ನೆಲದ ಮುಖ್ಯ ಗುಣವಾಗಿದ್ದ ತಾರತಮ್ಯವನ್ನು ಸಮರ್ಥಿಸಿಕೊಳ್ಳಲು ಬಳಸಲಾಗಿತ್ತು. ಇಂತಹ ಕೃತಕ ಸಾಮರಸ್ಯವನ್ನು ಇಂದಿಗೂ ಪ್ರತಿಪಾದಿಸುವ ಸಂಘ ಪರಿವಾರದ ಸಿದ್ಧಾಂತಿಗಳಿಗೆ ಬರವೇನಿಲ್ಲ. ಆದರೆ ಸದರಿ ಸಮಾವೇಶ ಸಮಾನತೆಯನ್ನು ಪ್ರತಿಪಾದಿಸುವ, ಜಾತಿ-ಧರ್ಮ ಪ್ರೇರಿತ ತಾರತಮ್ಯವನ್ನು ಹೋಗಲಾಡಿಸುವ ಇರಾದೆ ಹೊಂದಿರುವ ಸಂವಿಧಾನವನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಕನಿಷ್ಠ ಅಂತಹ ನಂಬಿಕೆಯುಳ್ಳ ಮುಖಂಡರು ಈ ಸಮಾವೇಶದ ಅಂತರಂಗವಾಗಿದ್ದಾರೆ. ಆ ನಿಟ್ಟಿನಲ್ಲಿ ಬಾಹ್ಯ ಪ್ರಾತಿನಿಧ್ಯಕ್ಕೂ ಸಮಾನತೆಯ ಮೂಲಕ ಸಾಮರಸ್ಯ ಕಂಡುಕೊಳ್ಳುವ ಹಾದಿ ಹಿಡಿದಿರುವವರನ್ನು ಒಳಗೊಳ್ಳಲು ಸಮಾವೇಶ ಶ್ರಮಿಸುತ್ತಿದೆ. ಯಾರ ಬಗ್ಗೆ ಅಪಸ್ವರ ಬಂದಿದೆಯೋ ಅಂತಹವರ ಬಗ್ಗೆ ಮರುಚಿಂತನೆ ನಡೆಸುವುದಾಗಿ ಕೂಡ ಸಂಘಟಕರು ವಿನಮ್ರವಾಗಿ ಹೇಳಿದ್ದಾರೆ.

ಇದೇ ನೆಲೆಯಲ್ಲಿ ಏಳುವ ಮತ್ತೊಂದು ಪ್ರಶ್ನೆ, ಹಲವು ಧರ್ಮಗುರುಗಳದ್ದು. ಈ ದೇಶದ ಪ್ರತಿಯೊಬ್ಬ ನಿವಾಸಿಗೂ ತನ್ನ ಇಚ್ಛೆಯ ಧರ್ಮವನ್ನು ಅನುಸರಿಸುವುದಕ್ಕೆ, ಪ್ರಸರಿಸುವುದಕ್ಕೆ ನಮ್ಮ ಸಂವಿಧಾನ ಅವಕಾಶವನ್ನಂತೂ ನೀಡಿದೆ. ಈ ಸಮಯದಲ್ಲಿ ವಿವಿಧ ಜಾತಿ ಮತಗಳಿಗೆ ಸೇರಿದ ಧರ್ಮಗುರುಗಳ ಪಾತ್ರವೇನು? ಎಷ್ಟೋ ಜಾತಿ-ಧರ್ಮಗುರುಗಳು ವೇದಿಕೆಗೆ ತಕ್ಕಂತೆ ಮಾತನಾಡುವವರು. ಬಾಬ್ರಿಮಸೀದಿ ಕೆಡವಿದ ಜಾಗದಲ್ಲಿ ರಾಮಮಂದಿರ ಕಟ್ಟಲೇಬೆಕೆಂದು ಕರೆನೀಡುವ, ಮತ್ತೊಂದು ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ರಂಗುರಂಗಾಗಿ ಬಣ್ಣಿಸುವ ಸ್ವಾಮಿಗಳು ಹಲವರು ಇದ್ದಾರೆ. ಸಾಮಾನ್ಯವಾಗಿ ಯಾವುದೇ ಜಾತಿ ಮತಗಳ ಧರ್ಮಗುರುಗಳು ಯಥಾಸ್ಥಿತಿಗೆ ಪುಷ್ಠಿ ನೀಡುವವರು. ಜಾತಿ-ಧರ್ಮ ಪಾರಮ್ಯವನ್ನು ಮೆರೆಯುವವರು. ಪ್ರಗತಿಯನ್ನು ತುಸು ಅನುಸರಿಸುವವರು ಕೆಲವರು ಇದ್ದಾರಾದರೂ, ಅವರ ತರಬೇತಿಯ ಕಾರಣಕ್ಕೆ, ತಮ್ಮ ಪರಂಪರೆಯನ್ನು ಸುಲಭವಾಗಿ ತ್ಯಜಿಸಲಾಗದ ಅವರ ಕೆಲಸದ ಸ್ವಭಾವದ ಕಾರಣಕ್ಕೆ ಅವರು ಎಲ್ಲ ಜನರ ಒಳಿತಿನ ಕಾಳಜಿಗಾಗಿ ದುಡಿಯಲಾರರು; ಪ್ರತಿ ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಇಂಟಲೆಕ್ಚುಯಲ್ ಪಾತ್ರವನ್ನು ಅವರು ವಹಿಸಿರುವುದು ವಿರಳಾತಿ ವಿರಳ. ಆದರೂ ಜನಪ್ರಿಯ ವೇದಿಕೆಗಳನ್ನು ಸೃಷ್ಟಿಸುವಾಗ, ಹಲವು ರೀತಿಯಲ್ಲಿ ಜನರನ್ನು ಪ್ರಭಾವಿಸಬಲ್ಲ ಜನಪ್ರಿಯ ವ್ಯಕ್ತಿಗಳನ್ನು ಕರೆತರುವುದೂ ಮುಖ್ಯವಾದೀತು. ಆ ಮುಖಾಂತರ ಸಹಬಾಳ್ವೆಯ ಪ್ರಾಥಮಿಕ ಪಾಠಗಳನ್ನು ಈ ಕರಾಳ ದಿನಗಳಲ್ಲಿ ಮತ್ತೆಮತ್ತೆ ನೆನಪಿಸುವ ಕೆಲಸಕ್ಕೆ ಸಮಾವೇಶ ಮುಂದಾಗಬಹುದು.

ಇಂದು ಯಾವುದೇ ಸುಳ್ಳು ಸಮರ್ಥನೆಗಳೂ ಬೇಕಾಗದೆ, ಸಮಾಜದಲ್ಲಿ ಕೋಮುಗಳ ನಡುವೆ ದ್ವೇಷ ಮೂಡಿಸಲು ಸಾಧ್ಯವಾಗುತ್ತಿರುವಂತಹ ಸನ್ನಿವೇಶದಲ್ಲಿ, ಎಲ್ಲ ಆಯಾಮಗಳಲ್ಲಿ ’ಪರ್ಫೆಕ್ಟ್’ ಅಲ್ಲದೆ ಇರಬಹುದಾದರೂ ಜನಪ್ರಿಯ ಸಂಸ್ಕೃತಿ ಮಾದರಿಯ ಚಿಂತನೆಗಳನ್ನೂ ಹರಿದುಬಿಡಬೇಕಾದ ತುರ್ತಿನಲ್ಲಿ ನಾವಿದ್ದೇವೆ. ಆ ನಿಟ್ಟಿನಲ್ಲಿ ಪಾರ್ಕ್‌ಗಳಾಗಲೀ, ಸಿನಿಮಾ ಮಂದಿರಗಳಾಗಲೀ, ಬೀಚ್ ಇನ್ನಿತರ ಸಾರ್ವಜನಿಕ ಪ್ರದೇಶಗಳು ಸೆಕ್ಯುಲರ್ ಆದ ಚಹರೆಯನ್ನು ಹೊಂದಿವೆ ಎನ್ನುವ ಮಾತುಗಳನ್ನು ಪದೇಪದೆ ನೆನಪಿಸಬೇಕಾಗುತ್ತದೆ. ಊರಹಬ್ಬಗಳು ಇಂದಿಗೂ ಕಟ್ಟಕಡೆಯ ದಮನಿತನನ್ನು ಒಳಗೊಳ್ಳದೆ ಹೋಗಿರುವ, ದೇವಸ್ಥಾನ ಪ್ರವೇಶಕ್ಕೆ ಇನ್ನೂ ಮುಕ್ತ ಅವಕಾಶ ನೀಡದಿರುವ ನೀಚ ತರತಮವನ್ನು ಮರೆಯದೆಯೂ, ಅಂತಹ ಹಬ್ಬಗಳಲ್ಲಿ ಹಲವು ಕೋಮುಗಳು ಸ್ವಲ್ಪಮಟ್ಟಿಗಾದರೂ ತರತಮತೆಯನ್ನು ತಗ್ಗಿಸಿಕೊಂಡು ಕೂಡಿ ಸಂಭ್ರಮಿಸುವ ಸಂಗತಿಯನ್ನು ಗುರುತಿಸಬೇಕಾಗಿದೆ ಅಲ್ಲವೇ? ಅಲ್ಲಿಂದ ಕನಿಷ್ಠ ಪಕ್ಷ ಇನ್ನೂ ಹಿಂದಕ್ಕೆ ಚಲಿಸದಂತೆ, ಇನ್ನಷ್ಟು ಪ್ರಗತಿಯತ್ತ ದಾಪುಗಾಲು ಇರಿಸಲು ಅನುವಾಗುವಂತೆ ಕೆಲಸಗಳಾಗಬೇಕಿವೆ.

ಇದೇ ಹಿನ್ನೆಲೆಯಲ್ಲಿ ಉಡುಪಿಯ ಸಮಾವೇಶವನ್ನೂ ಕಾಣಬಹುದೇ? ವೈಚಾರಿಕತೆಯಿಂದ ಜೀವನ ದೃಷ್ಟಿಯನ್ನು ಕಟ್ಟಿಕೊಂಡವನೊಬ್ಬನಿಗೆ ಹತ್ತಾರು ಸ್ವಾಮೀಜಿಗಳ ಉಪಸ್ಥಿತಿ ಕಸಿವಿಸಿಯನ್ನುಂಟುಮಾಡಬಲ್ಲದು. ಇಂತಹ ಸಾಮರಸ್ಯ ತೀವ್ರ ಮೇಲ್ಮಟ್ಟದ್ದು ಎಂಬ ಕಳವಳ ಉಂಟಾಗಬಹುದು. ಆದರೆ ಇಂತಹ ಸಮ್ಮೇಳನಗಳು ಕೂಡ ಜನಸಾಮಾನ್ಯರಲ್ಲಿ ಜನಪ್ರಿಯ ಮಟ್ಟದಲ್ಲಿ ಭರವಸೆ ತುಂಬಬಲ್ಲವು (ಇಂದಿನ ಮತೀಯ ಧ್ರುವೀಕರಣದಲ್ಲಿ ಶೋಷಣೆಗೆ ಒಳಗಾಗುತ್ತಿರುವವರಿಗೆ) ಮತ್ತು ವಿವೇಕವನ್ನೂ (ದ್ವೇಷ ಸಿದ್ಧಾಂತಕ್ಕೆ ಮರುಳಾಗುತ್ತಿರುವವರಿಗೆ). ಸಮಾಜದಲ್ಲಿ ಒಟ್ಟಾರೆಯಾಗಿ ಒಳಿತಿನ ಚಲನೆಯ ಕಡೆಗೆ ಒಲವಿರುವವರು ಎತ್ತುವ ಆಕ್ಷೇಪಗಳ ಜೊತೆಗೇ, ಅವುಗಳನ್ನೂ ಸಾಧ್ಯವಾದಷ್ಟು ಅಡ್ರೆಸ್ ಮಾಡುವುದರ ಜೊತೆಗೆ, ಈ ಸಹಬಾಳ್ವೆ ಸಮಾವೇಶ ಯಾವ ಗುರಿಯನ್ನು ಇಟ್ಟುಕೊಂಡಿದೆಯೋ ಅದನ್ನು ಸಾಧಿಸಬೇಕಿದೆ. ಆ ಗುರಿ, ಆಳುವ ಪ್ರಭುತ್ವ ಮತ್ತು ಅದರ ಸೈದ್ಧಾಂತಿಕ ಜತೆಗಾರರು ಸೃಷ್ಟಿಸುವ ಒಡಕಿಗೆ, ಧ್ರುವೀಕರಣಕ್ಕೆ ಇಲ್ಲಿನ ಸಾಮಾನ್ಯ ಜನ ಸಮ್ಮತಿಸುವುದಿಲ್ಲವೆಂದು ತೋರಿಸುವುದು. ಅವರ ಗುರಿಯಾಗಿರುವ ಅಲ್ಪಸಂಖ್ಯಾತ ಮುಸ್ಲಿಂ ಮತ್ತು ಇತರ ಸಮುದಾಯಗಳ ಜೊತೆಗೆ ನಾವಿದ್ದೇವೆ ಎಂಬುದನ್ನು ಗಟ್ಟಿಯಾಗಿ ಪ್ರತಿಪಾದಿಸುವುದು ಮತ್ತು ಕೃತಕವಾಗಿ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸಲಾಗುತ್ತಿರುವ ಈ ಕೋಮುಗಳ ನಡುವೆ ಒಡನಾಟ, ಪರಸ್ಪರ ಬಳಕೆ ಮುಂದಿನ ದಿನಗಳಲ್ಲಿ ಹೆಚ್ಚಾಗುವಂತೆ ಮಾಡಲು ಕಾರ್ಯಪ್ರವೃತ್ತರಾಗುವುದು. ಇದಕ್ಕಾಗಿ ಎಲ್ಲರ ಒಳಿತಿಗೆ ತುಡಿಯುವ ನಾಡಿನ ಪ್ರಜ್ಞಾವಂತರೆಲ್ಲರೂ ಕೈಜೋಡಿಸಿದಲ್ಲಿ ಕಷ್ಟವಾಗಲಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರಿಂದ ಬಂಧನ-ಹಲ್ಲೆ: ಇಬ್ಬರು ಪತ್ರಕರ್ತೆಯರ ಆರೋಪ

ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. '4 ಪಿಎಮ್ ನ್ಯೂಸ್ ನೆಟ್‌ವರ್ಕ್' (4 PM News...

ತ್ರಿಪುರಾ: ‘ದನ ಕಳ್ಳ’ ಎಂದು, ಖರೀದಿಸಿದ ದನಗಳೊಂದಿಗೆ ಹಿಂತಿರುಗುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪು ಹಲ್ಲೆ: 46 ವರ್ಷದ ಜಲೀಲುರ್ ರೆಹಮಾನ್ ಸಾವು

ಅಗರ್ತಲಾ: ಖರೀದಿಸಿದ ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ದನ ವ್ಯಾಪಾರಿಯೊಬ್ಬರನ್ನು ‘ದನ ಕಳ್ಳ’ ಎಂದು ಆರೋಪಿಸಿ ಗುಂಪೊಂದು ಥಳಿಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತ್ರಿಪುರಾದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ...

ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಸೂಕ್ಷ್ಮತೆಯಿಲ್ಲದ ನಡವಳಿಕೆ: ಗೀತಾಂಜಲಿ ಅಂಗಮೋ

ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ...

ಬಸವರಾಜ ಕನ್ನಾಳೆ ಸಿಂಡಿಕೇಟ್ ಸದಸ್ಯತ್ವ ರದ್ದಾಗುತ್ತಾ? ರಾಜಭವನದ ಮೌನಕ್ಕೆ ಮೂಡಿದ ಅನುಮಾನ

ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ತನಿಖಾ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಅವರಿಂದ...

‘ಜಿಡಿಪಿ ಬಿಟ್ಟು ನಿಮ್ಮ ಮುಖದ ಸೌಂದರ್ಯದ ರಹಸ್ಯ ತಿಳಿಸಿ..’; ಪ್ರಧಾನಿ ಮೋದಿ ಕಾಲೆಳೆದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಇತ್ತೀಚೆಗೆ ಬಿಡುಗಡೆಯಾದ ಭಾರತದ ತ್ರೈಮಾಸಿಕ ಜಿಡಿಪಿ ಅಂಕಿಅಂಶಗಳ ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ. 2026-27ರ ಹಣಕಾಸು ವರ್ಷದ ಮೊದಲ...

ರಾಜಕೀಯ ಪಕ್ಷಗಳ ಬಿಎಲ್‌ಎಗಳು ಎಸ್‌ಐಆರ್‌ನ ಎಲ್ಲ ಮಾಹಿತಿಗಳನ್ನೂ ಪರಿಶೀಲಿಸಲು ಜವಾಬ್ದಾರರಲ್ಲ : ದೆಹಲಿ ಹೈಕೋರ್ಟ್

ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಎಣಿಕೆ ನಮೂನೆಗಳಲ್ಲಿರುವ (ಎನ್ಯುಮರೇಷನ್ ಫಾರಂ) ಎಲ್ಲ ವಿವರಗಳನ್ನು ಪರಿಶೀಲಿಸಲು ಜವಾಬ್ದಾರರಲ್ಲ ಎಂದು ದೆಹಲಿ ಹೈಕೋರ್ಟ್...

‘ಕೈಯಿಂದ ಮಲ ಹೊರುವ ಪದ್ಧತಿ ಇಲ್ಲ’ ಎಂದ ಸರ್ಕಾರ: ‘ಹಾಗಾದರೆ ನಾವು ಇನ್ನೂ ಏಕೆ ಈ ಕೆಲಸ ಮಾಡುತ್ತಿದ್ದೇವೆ?’ ಎಂದು ಪ್ರಶ್ನಿಸಿದ ಮಹಿಳಾ ಕಾರ್ಮಿಕರು

ನವದೆಹಲಿ: ದೇಶದಲ್ಲಿ ಕೈಯಿಂದ ಮಲ ಹೊರುವ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿರುವ ಬೆನ್ನಲ್ಲೇ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಿಳಾ ನೈರ್ಮಲ್ಯ...

ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರ ಬಾರ್ ಕೌನ್ಸಿಲ್‌ಗಳಿಗೆ ಇಲ್ಲ; ನಲ್ಸಾರ್ ವಿವಿ ವಿರುದ್ಧದ ಬಿಸಿಐ ಅಧ್ಯಕ್ಷರ ಆದೇಶ ಕಾನೂನುಬಾಹಿರ : ಸುಪ್ರೀಂ ಕೋರ್ಟ್

ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಮತ್ತು ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ (ಸೆ.3) ಮಹತ್ವದ...

ದೇಶದ ಆರ್ಥಿಕ ಸ್ಥಿರತೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಸುಳ್ಳು ನಿರೂಪಣೆ ಸೃಷ್ಟಿ: ಶರದ್ ಪವಾರ್

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಸಂಕಷ್ಟದಲ್ಲಿರುವ ನೈಜ ಆರ್ಥಿಕತೆಯನ್ನು ಮರೆಮಾಚಲು ಕೇಂದ್ರ ಸರ್ಕಾರವು 'ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ತಿರುಚುತ್ತಿದೆ' ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ. "ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ...

ಮಹದೇವಪುರ, ಗಾಂಧಿನಗರ ವೋಟರ್ ಲಿಸ್ಟ್ ಹಗರಣ: ಇಸಿಐ ತನಿಖೆಗೆ ರಾಜ್ಯ ಚುನಾವಣಾ ಆಯೋಗ ಶಿಫಾರಸು

ಮಹದೇವಪುರ ಮತ್ತು ಗಾಂಧಿನಗರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸಂಸದ ಮನ್ಸೂರ್ ಅಲಿ ಖಾನ್ ನೀಡಿದ್ದ ದೂರನ್ನು ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗಕ್ಕೆ...