Homeಅಂಕಣಗಳುಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..

ಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..

- Advertisement -
- Advertisement -

ಮೊನ್ನೆ ಹೈದರಾಬಾದಿನ ಬೀದಿಯೊಂದರಲ್ಲಿ ದಲಿತ ಯುವಕ ನಾಗರಾಜುವನ್ನು ಮತಾಂಧ ಮುಸ್ಲಿಮನೊಬ್ಬ ಭೀಕರವಾಗಿ ಕೊಂದುಹಾಕಿದ. ಹದಿನೈದು ನಿಮಿಷಗಳ ಕಾಲ ನಡೆದ ಈ ಹಲ್ಲೆಯಿದು. ಕಬ್ಬಿಣದ ಸರಳಿನಿಂದ ಬಡಿದು ತಲೆ ಒಡೆಯಲಾಯಿತು. ಈ ಅಮಾನುಷ ಹತ್ಯೆ ಜರುಗಿದ್ದು ಧರ್ಮಕ್ಕಿಂತ ಹೆಚ್ಚಾಗಿ ಜಾತಿಯ ಕಾರಣಕ್ಕೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು.

ಶಾಲಾದಿನಗಳಿಂದಲೂ ಪ್ರೀತಿಸುತ್ತಿದ್ದ ಅಶ್ರಿನ್ ಸುಲ್ತಾನಾ ಮತ್ತು ನಾಗರಾಜು ವಿವಾಹವಾಗಿ ಮೂರು ತಿಂಗಳು ಕಳೆದಿತ್ತು. ಈ ಮದುವೆಗೆ ಸುಲ್ತಾನಾ ಮನೆಯವರ ವಿರೋಧವಿತ್ತು. ನಾಗರಾಜು ದಲಿತ ಕುಲದಲ್ಲಿ ಹುಟ್ಟಿದ್ದೇ ಕೊಲ್ಲುವ ಕಡು ಹಗೆಗೆ ಕಾರಣ. ತನ್ನ ಪ್ರೀತಿಯನ್ನು ದಕ್ಕಿಸಿಕೊಂಡು ಬಾಳಲು ಬಯಸಿದ್ದ ನಾಗರಾಜು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಲು ಸಿದ್ಧನಿದ್ದ. ವಿವಾಹಕ್ಕೆ ಮುನ್ನ ಈ ಇರಾದೆಯನ್ನು ಅಶ್ರಿನ್ ಕುಟುಂಬಕ್ಕೆ ತಿಳಿಯಪಡಿಸಿ ಅವರ ಸಮ್ಮತಿ ಬಯಸಿದ್ದ. ಮತಾಂತರ ಹೊಂದಿದರೆ ಸಾಮಾನ್ಯವಾಗಿ ಮದುವೆಗೆ ಸಮ್ಮತಿ ದೊರೆತ ಪ್ರಕರಣಗಳು ಸಾಕಷ್ಟಿವೆ. ಆದರೆ ’ಹೊಲೆಯ’ನೊಂದಿಗೆ ರಕ್ತಸಂಬಂಧ ಬೆಳೆಸಲು ಅಶ್ರಿನ್ ಸೋದರ ಸಿದ್ಧನಿರಲಿಲ್ಲ. ಕುಟುಂಬದ-ಕುಲದ ’ಗರಿಮೆಗೆ ಕಳಂಕ’ ತಂದ ತಂಗಿಯನ್ನು ನೇಣುಹಾಕಿ ಕೊಲ್ಲಲು ಮದುವೆಗೆ ಮುಂಚೆಯೇ ಎರಡು ಸಲ ಪ್ರಯತ್ನಿಸಿದ್ದ. ಪರಾರಿಯಾಗಿ ಆರ್ಯಸಮಾಜ ಮಂದಿರದಲ್ಲಿ ಮದುವೆಯಾಗಿತ್ತು ಈ ಜೋಡಿ. ಆದರೆ ಪ್ರಾಣಾಪಾಯ ತಪ್ಪಿರಲಿಲ್ಲ. ಸೋದರ ಸಾಯಹೊಡೆಯುತ್ತಾನೆಂಬ ಎಚ್ಚರಿಕೆಯನ್ನು ಖುದ್ದು ಅಶ್ರಿನ್ ತಾಯಿಯೇ ನೀಡಿದ್ದಳು. ತಲೆಮರೆಸಿಕೊಂಡಿದ್ದ ಈ ಜೋಡಿ ತಮ್ಮ ಮೊಬೈಲುಗಳ ಸಿಮ್ ಕಾರ್ಡುಗಳನ್ನು ಕೂಡ ಬದಲಾಯಿಸಿದ್ದರು. ಪೊಲೀಸರಿಂದ ರಕ್ಷಣೆ ಕೋರಿದ್ದರು.

ಅಶ್ರಿನ್ ಕುಟುಂಬ ಸೈಯದ್ ಎಂಬ ಅಘೋಷಿತ ಕುಲೀನ ’ಜಾತಿ’ಗೆ ಸೇರಿದ್ದು. ಮೇಲುಕೀಳು- ಜಾತಿಭೇದವನ್ನು ಇಸ್ಲಾಂ ಬೋಧಿಸುವುದಿಲ್ಲ ನಿಜ. ಆದರೆ ಈ ಧರ್ಮದ ಅನುಯಾಯಿಗಳು ಬಹುತೇಕರು ಈ ತಾರತಮ್ಯವನ್ನು ಗಟ್ಟಿಯಾಗಿ ಅಪ್ಪಿ ಹಿಡಿದು ಆಚರಿಸುತ್ತಾರೆ. ಹಿಂದುವಿಗೆ ಅಸ್ಪೃಶ್ಯ ಎನಿಸುವ ವ್ಯಕ್ತಿ, ಮುಸಲ್ಮಾನನಿಗೂ ಅಸ್ಪೃಶ್ಯನೇ ಎಂದು ಬಾಬಾಸಾಹೇಬರು ಹೇಳಿದ್ದಾರೆ.

ನಾಗರಾಜು ಒಂದು ವೇಳೆ ದಲಿತನಾಗಿರದೆ ಹಿಂದು ಸವರ್ಣೀಯನಾಗಿದ್ದರೆ ಹತ್ಯೆಗೆ ಈಡಾಗುತ್ತಿದ್ದನೇ ಎಂಬುದಾಗಿ ಎದ್ದಿರುವ ಪ್ರಶ್ನೆ ಅತ್ಯಂತ ಪ್ರಸ್ತುತ. ಇದೇ ರೀತಿ ಹಿಂದು ಸವರ್ಣೀಯನಿಂದ ಹತ್ಯೆಗೀಡಾಗುವ ದಲಿತನ ಪರ ಏಳುವ ದನಿಗಳು ಅತಿ ಕ್ಷೀಣ. ನಾಗರಾಜುವಿನ ಹತ್ಯೆ ಮೂಲಭೂತವಾಗಿ ಜಾತಿಯ ಪ್ರಶ್ನೆ ಎಂಬುದನ್ನು ಆತನ ಪರ ಎದ್ದಿರುವ ಸಹಾನುಭೂತಿಯ ಬಹುಪಾಲು ದನಿಗಳು ಒಪ್ಪಲು ತಯಾರಿಲ್ಲ. ಈ ದನಿಗಳಿಗೆ ಮುಸ್ಲಿಮರನ್ನು ಖಳನಾಯಕರನ್ನಾಗಿ ಕಟಕಟೆಯಲ್ಲಿ ನಿಲ್ಲಿಸುವುದು ಏಕೈಕ ಉದ್ದೇಶ. ಈ ಉದ್ದೇಶಕ್ಕೆ ಯಾರು ಒದಗಿ ಬಂದರೂ ಅವರನ್ನು ಬಳಸಿಕೊಂಡೇ ಸಿದ್ಧ.

ಹೆಣ್ಣು ಕುಟುಂಬದ ಆಸ್ತಿಪಾಸ್ತಿ ಎಂಬ ಪುರಾತನ ಪುರುಷಾಧಿಪತ್ಯ ಭಾರತೀಯ ಸಮಾಜದಲ್ಲಿ ಸಿಡಿಲಾಗಿ ಅಬ್ಬರಿಸಿದೆ. ಮಧ್ಯಯುಗದ ಅನಾಗರಿಕ ಮನಸ್ಥಿತಿಯಿದು. ಮನಸು ಬಯಸಿದ ಸಂಗಾತಿಯನ್ನು ಆರಿಸಿಕೊಂಡು ಬದುಕುವ ಸ್ವಾತಂತ್ರ್ಯವನ್ನು ಸಮಾನತೆಯನ್ನು ಆಕೆಗೆ ನಿರಾಕರಿಸಲಾಗಿದೆ. ಲಿಂಗ ತಾರತಮ್ಯದ ಮನುವಾದ, ಪುರುಷಾಧಿಪತ್ಯ, ಜಾತಿವ್ಯವಸ್ಥೆ, ಕೋಮುವಾದ, ಮೂಲಭೂತವಾದದ ಹಲವು ಅಂಶಗಳು ಕಲೆತು ಬೆರೆತಿರುವ ಸಂಕೀರ್ಣ ವಿದ್ಯಮಾನವಿದು.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಕಾವೇರಿದ ಚರ್ಚೆ ನಡೆದಿದೆ. ನಾಗರಾಜುವಿಗೆ ನ್ಯಾಯ ಕೇಳುವವರು ಹೆಚ್ಚಿನ ಸಂಖ್ಯೆಯಲ್ಲಿ ಯಾಕಿದ್ದಾರೆಂದರೆ ನಾಗರಾಜುವಿನ ಹಂತಕ ಒಬ್ಬ ಮುಸಲ್ಮಾನ. ಒಬ್ಬ ಹಿಂದು ಬಲಿಷ್ಠ ಜಾತಿಯವನು ನಾಗರಾಜುವನ್ನು ಕೊಂದಿದ್ದರೆ ನ್ಯಾಯ ಕೇಳುವವರೇ ದಿಕ್ಕಿರುತ್ತಿರಲಿಲ್ಲ. ಜಾತಿ ಎಂಬುದು ಸಾಮಾಜಿಕ ಅನಿಷ್ಟ. ಅರಿವು, ಅಧಿಕಾರ, ಆಸ್ತಿಪಾಸ್ತಿ, ಸಂಪನ್ಮೂಲಗಳು, ಘನತೆ ಗೌರವ, ಲೈಂಗಿಕ ದೃಷ್ಟಿಕೋನದ ನಿಯಂತ್ರಣ ಮತ್ತು ವಿತರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪಿಡುಗು.

ಭಾರತೀಯ ಮುಸಲ್ಮಾನರೂ ಈ ಜಾತಿ ಆಧಾರಿತ ಏಣಿಶ್ರೇಣಿ ವ್ಯವಸ್ಥೆಯ ಬಲಿಪಶುಗಳು. ಈ ಶ್ರೇಣಿಯ ತುತ್ತತುದಿಯಲ್ಲಿರುವವರು ಅಶ್ರಫ್ ಮುಸ್ಲಿಮರು. ಸೈಯದ್, ಶೇಖ್, ಮುಘಲ್, ಪಠಾಣ್ ಎಂದು ಕರೆದುಕೊಳ್ಳುವವರು ತಮ್ಮ ಮೂಲ ಪಶ್ಚಿಮ ಅಥವಾ ಮಧ್ಯ ಏಷ್ಯಾ ಎಂಬುದಾಗಿ ಗುರುತಿಸಿಕೊಳ್ಳುತ್ತಾರೆ. ಭಾರತದ ಬಲಿಷ್ಠ ಜಾತಿಗಳಿಂದ ಇಸ್ಲಾಮಿಗೆ ಮತಾಂತರ ಹೊಂದಿದವರು ತಮ್ಮನ್ನು ಮುಸ್ಲಿಮ್ ರಜಪೂತ, ತಾಗಾ ಅಥವಾ ತ್ಯಾಗಿ ಮುಸ್ಲಿಮ್, ಗಾಢೆ ಅಥವಾ ಗೌಡ್ ಮುಸ್ಲಿಮರೆಂದು ಹೇಳಿಕೊಳ್ಳುತ್ತಾರೆ. ಸೈಯದ್ ಎಂದು ಕರೆದುಕೊಳ್ಳುವವರು ಹಿಂದು ವರ್ಣವ್ಯವಸ್ಥೆಯ ಬ್ರಾಹ್ಮಣ ಜಾತಿಗೆ ಸರಿಸಮಾನ. ಈ ಅಸಮಾನತೆಯನ್ನು ’ಸೈಯದ್ ವಾದ’ ಎಂದು ಕರೆಯಲಾಗಿದೆ. ಈ ಅಶ್ರಫ್ ಯಜಮಾನಿಕೆಯ ವಿರುದ್ಧ ಕೆಳವರ್ಗದ ಅಜ್ಲಾಫ್ (ಹಿಂದುಳಿದವರು) ಮತ್ತು ಅರ್ಜಲ್ (ದಲಿತರು) ಮುಸಲ್ಮಾನರು ಹೋರಾಟ ನಡೆಸಿದ್ದಾರೆ. ಭಾರತೀಯ ಮುಸಲ್ಮಾನರ ಪೈಕಿ ಸವರ್ಣೀಯರ ಪ್ರಮಾಣ ಶೇ.15. ಉಳಿದವರು ಹಿಂದುಳಿದ, ದಲಿತ ಹಾಗು ಬುಡಕಟ್ಟು ಮುಸ್ಲಿಮರು. ಮುಸಲ್ಮಾನರಲ್ಲಿ ಅಸ್ಪೃಶ್ಯತೆ ಆಚರಣೆಯೂ ಉಂಟು. ಸ್ಟ್ಯಾಲಿನ್ ಪದ್ಮಾ ಎಂಬ ಪ್ರತಿಭಾವಂತ ನಿರ್ಮಿಸಿರುವ ಹೊಳಪಿನ ಸಾಕ್ಷ್ಯಚಿತ್ರ ’ಇಂಡಿಯಾ ಅನ್‌ಟಚ್ಡ್’ (India Untouched) ಈ ಮಾತಿಗೆ ಜೀವಂತ ಸಾಕ್ಷ್ಯ ನುಡಿಯುತ್ತದೆ.

ಧೋಬಿ, ಲೋಹಾರ-ಬಧಯಿ, ಧುನಿಯಾ- ಮನ್ಸೂರಿ, ಕಸಾಯಿ-ಖುರೇಶಿ, ಫಕೀರ್-ಆಲ್ವಿ, ಹಜ್ಜಾಮ್-ಸಲ್ಮಾನಿ, ಮೆಹ್ತಾರ್-ಹಲಾಲ್ಖೋರ್, ಗ್ವಾಲ-ಘೋಸಿ, ದರ್ಜಿ-ಇದ್ರಿಸಿ, ಕುಂಜ್ರೆ-ರಯೀನ್, ಜುಲಾಹೆ-ಅನ್ಸಾರಿ ಸಮುದಾಯಗಳು ’ಪಸ್ಮಾಂದ’ ಅಸ್ಮಿತೆಯಡಿ ಒಟ್ಟಾಗಿವೆ. ಪಸ್ಮಾಂದ ಎಂದರೆ ಹಿಂದುಳಿಸಲಾಗಿರುವವರು ಎಂದು ಅರ್ಥ.

ಮುಸ್ಲಿಮ್ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಕ್ಷೇತ್ರಗಳಲ್ಲಿ ಕುಲೀನ ಮುಸ್ಲಿಮರದೇ ಪ್ರಾಬಲ್ಯ. 1952ರಲ್ಲಿ ರಚಿತವಾದ ಒಂದನೆಯ ಲೋಕಸಭೆಯಿಂದ 2004ರ 14ನೆಯ ಲೋಕಸಭೆಯ ತನಕ ಲೋಕಸಭೆಗೆ ಆಯ್ಕೆಯಾದ ಮುಸಲ್ಮಾನ ಜನಪ್ರತಿನಿಧಿಗಳ ಒಟ್ಟು ಸಂಖ್ಯೆ 400. ಈ ಪೈಕಿ ಸವರ್ಣೀಯ ಅಶ್ರಫ್ ಮುಸಲ್ಮಾನರ ಸಂಖ್ಯೆ 340. ಈ ಹದಿನಾಲ್ಕು ಲೋಕಸಭೆಗಳಲ್ಲಿ ಆಯ್ಕೆಯಾದ ಪಸ್ಮಾಂದ ಮುಸಲ್ಮಾನರ ಸಂಖ್ಯೆ ಕೇವಲ 60.

2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅಶ್ರಫ್ ಮುಸ್ಲಿಮರ ಪ್ರಮಾಣ ಶೇ.2.1. ಪಸ್ಮಾಂದ ಮುಸ್ಲಿಮರ ಪ್ರಮಾಣ ಶೇ.11.4. ಲೋಕಸಭೆಯಲ್ಲಿ ಅಶ್ರಫ್ ಮುಸಲ್ಮಾನರ ಪ್ರಾತಿನಿಧ್ಯ ಒಟ್ಟು ಪ್ರಾತಿನಿಧ್ಯದ ಶೇ.2.1ರಷ್ಟಿದ್ದರೆ, ಪಸ್ಮಾಂದ ಮುಸಲ್ಮಾನರ ಪ್ರಾತಿನಿಧ್ಯ ಶೇ.0.8.

ಭಾರತೀಯ ಮುಸಲ್ಮಾನರ ಜೊತೆ ಬೆರೆತು ಕೆಲಸ ಮಾಡುವ ಅನುಭವವೊಂದನ್ನು ಕಾನ್ಶೀರಾಮ್ ಅವರು ಹೀಗೆ ಬಣ್ಣಿಸಿದ್ದಾರೆ: “ಮುಸಲ್ಮಾನ ಸಮುದಾಯವನ್ನು ಅವರ ನಾಯಕರ ಮೂಲಕ ಸಂಪರ್ಕಿಸುವುದು ಮೇಲೆಂದು ಅಂದುಕೊಂಡೆ. ಸುಮಾರು 50 ಮಂದಿ ಮುಸ್ಲಿಮ್ ನಾಯಕರನ್ನು ಭೇಟಿ ಮಾಡಿದ ಬಳಿಕ ಅವರಲ್ಲಿನ ಬ್ರಾಹ್ಮಣ್ಯವನ್ನು ಕಂಡು ದಂಗಾದೆ. ಸಮಾನತೆಯನ್ನು ಸಾಧಿಸುವ ಮತ್ತು ಅನ್ಯಾಯದ ವಿರುದ್ಧ ಹೋರಾಡಬೇಕೆಂದು ಇಸ್ಲಾಮ್ ಹೇಳಿಕೊಡುತ್ತದೆ. ಆದರೆ ಮುಸ್ಲಿಮ್ ನಾಯಕತ್ವದಲ್ಲಿ ಸೈಯದ್‌ಗಳು, ಶೇಖ್‌ಗಳು, ಮುಘಲರು ಹಾಗೂ ಪಠಾಣರಂತಹ ಬಲಿಷ್ಠ ಜಾತಿಗಳದೇ ಪ್ರಾಬಲ್ಯ. ಅನ್ಸಾರಿಗಳು, ಧುನಿಯಾಗಳು, ಖುರೇಶಿಗಳಂತಹ ಅಧೀನ ಜಾತಿಗಳು ತಮ್ಮ ಸಮಾನಕ್ಕೆ ಏರುವುದನ್ನು ಈ ಪ್ರಬಲ ಜಾತಿಗಳು ಸಹಿಸುವುದಿಲ್ಲ. ಹೀಗಾಗಿ ಹಿಂದೂ ಪರಿಶಿಷ್ಟ ಸಮುದಾಯಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ ಮುಸಲ್ಮಾನರನ್ನು (ಪಸ್ಮಾಂದ) ಮಾತ್ರವೇ ಪ್ರೋತ್ಸಾಹಿಸಿ ಬೆಳೆಸಲು ನಾನು ತೀರ್ಮಾನಿಸಿದೆ”. (’ಕಾನ್ಶೀರಾಮ್ ಕಿ ನೇಕ್ ಕಮಾಯಿ ಜಿಸ್ನೆ ಸೋಟಿ ಕ್ವಾಮ್ ಜಗಾಯಿ’ ಹೆಸರಿನ ಪುಸ್ತಕವೊಂದರಲ್ಲಿ ಸತ್ನಾಮ್ ಸಿಂಗ್ ಎಂಬ ಲೇಖಕರು ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ).

’ಹಿಂದೂ ಸಮಾಜದ ಅದೇ ಸಾಮಾಜಿಕ ಅನಿಷ್ಟಗಳು ಭಾರತೀಯ ಮುಸ್ಲಿಂ ಸಮಾಜಕ್ಕೂ ಬಡಿದುಕೊಂಡಿವೆ’ ಎಂಬ ಡಾ.ಅಂಬೇಡ್ಕರ್ ಅವರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹೈದರಾಬಾದ್ ಮಾರ್ಯಾದೆಹೀನ ಹತ್ಯೆ: ಸಂವಿಧಾನ ಮತ್ತು ಇಸ್ಲಾಂ ಪ್ರಕಾರ ಕ್ರಿಮಿನಲ್ ಕೃತ್ಯ – ಅಸಾದುದ್ದೀನ್ ಓವೈಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Hope this News is to get attention of anti communal minds.
    First off all know one is aware of arms act.
    They were using airguns which is permitted subject to permission from concerning authority.

    Some people fearing in kodagu.
    It’s so peaceful hear.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...