Homeಅಂಕಣಗಳುಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..

ಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..

- Advertisement -
- Advertisement -

ಮೊನ್ನೆ ಹೈದರಾಬಾದಿನ ಬೀದಿಯೊಂದರಲ್ಲಿ ದಲಿತ ಯುವಕ ನಾಗರಾಜುವನ್ನು ಮತಾಂಧ ಮುಸ್ಲಿಮನೊಬ್ಬ ಭೀಕರವಾಗಿ ಕೊಂದುಹಾಕಿದ. ಹದಿನೈದು ನಿಮಿಷಗಳ ಕಾಲ ನಡೆದ ಈ ಹಲ್ಲೆಯಿದು. ಕಬ್ಬಿಣದ ಸರಳಿನಿಂದ ಬಡಿದು ತಲೆ ಒಡೆಯಲಾಯಿತು. ಈ ಅಮಾನುಷ ಹತ್ಯೆ ಜರುಗಿದ್ದು ಧರ್ಮಕ್ಕಿಂತ ಹೆಚ್ಚಾಗಿ ಜಾತಿಯ ಕಾರಣಕ್ಕೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು.

ಶಾಲಾದಿನಗಳಿಂದಲೂ ಪ್ರೀತಿಸುತ್ತಿದ್ದ ಅಶ್ರಿನ್ ಸುಲ್ತಾನಾ ಮತ್ತು ನಾಗರಾಜು ವಿವಾಹವಾಗಿ ಮೂರು ತಿಂಗಳು ಕಳೆದಿತ್ತು. ಈ ಮದುವೆಗೆ ಸುಲ್ತಾನಾ ಮನೆಯವರ ವಿರೋಧವಿತ್ತು. ನಾಗರಾಜು ದಲಿತ ಕುಲದಲ್ಲಿ ಹುಟ್ಟಿದ್ದೇ ಕೊಲ್ಲುವ ಕಡು ಹಗೆಗೆ ಕಾರಣ. ತನ್ನ ಪ್ರೀತಿಯನ್ನು ದಕ್ಕಿಸಿಕೊಂಡು ಬಾಳಲು ಬಯಸಿದ್ದ ನಾಗರಾಜು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಲು ಸಿದ್ಧನಿದ್ದ. ವಿವಾಹಕ್ಕೆ ಮುನ್ನ ಈ ಇರಾದೆಯನ್ನು ಅಶ್ರಿನ್ ಕುಟುಂಬಕ್ಕೆ ತಿಳಿಯಪಡಿಸಿ ಅವರ ಸಮ್ಮತಿ ಬಯಸಿದ್ದ. ಮತಾಂತರ ಹೊಂದಿದರೆ ಸಾಮಾನ್ಯವಾಗಿ ಮದುವೆಗೆ ಸಮ್ಮತಿ ದೊರೆತ ಪ್ರಕರಣಗಳು ಸಾಕಷ್ಟಿವೆ. ಆದರೆ ’ಹೊಲೆಯ’ನೊಂದಿಗೆ ರಕ್ತಸಂಬಂಧ ಬೆಳೆಸಲು ಅಶ್ರಿನ್ ಸೋದರ ಸಿದ್ಧನಿರಲಿಲ್ಲ. ಕುಟುಂಬದ-ಕುಲದ ’ಗರಿಮೆಗೆ ಕಳಂಕ’ ತಂದ ತಂಗಿಯನ್ನು ನೇಣುಹಾಕಿ ಕೊಲ್ಲಲು ಮದುವೆಗೆ ಮುಂಚೆಯೇ ಎರಡು ಸಲ ಪ್ರಯತ್ನಿಸಿದ್ದ. ಪರಾರಿಯಾಗಿ ಆರ್ಯಸಮಾಜ ಮಂದಿರದಲ್ಲಿ ಮದುವೆಯಾಗಿತ್ತು ಈ ಜೋಡಿ. ಆದರೆ ಪ್ರಾಣಾಪಾಯ ತಪ್ಪಿರಲಿಲ್ಲ. ಸೋದರ ಸಾಯಹೊಡೆಯುತ್ತಾನೆಂಬ ಎಚ್ಚರಿಕೆಯನ್ನು ಖುದ್ದು ಅಶ್ರಿನ್ ತಾಯಿಯೇ ನೀಡಿದ್ದಳು. ತಲೆಮರೆಸಿಕೊಂಡಿದ್ದ ಈ ಜೋಡಿ ತಮ್ಮ ಮೊಬೈಲುಗಳ ಸಿಮ್ ಕಾರ್ಡುಗಳನ್ನು ಕೂಡ ಬದಲಾಯಿಸಿದ್ದರು. ಪೊಲೀಸರಿಂದ ರಕ್ಷಣೆ ಕೋರಿದ್ದರು.

ಅಶ್ರಿನ್ ಕುಟುಂಬ ಸೈಯದ್ ಎಂಬ ಅಘೋಷಿತ ಕುಲೀನ ’ಜಾತಿ’ಗೆ ಸೇರಿದ್ದು. ಮೇಲುಕೀಳು- ಜಾತಿಭೇದವನ್ನು ಇಸ್ಲಾಂ ಬೋಧಿಸುವುದಿಲ್ಲ ನಿಜ. ಆದರೆ ಈ ಧರ್ಮದ ಅನುಯಾಯಿಗಳು ಬಹುತೇಕರು ಈ ತಾರತಮ್ಯವನ್ನು ಗಟ್ಟಿಯಾಗಿ ಅಪ್ಪಿ ಹಿಡಿದು ಆಚರಿಸುತ್ತಾರೆ. ಹಿಂದುವಿಗೆ ಅಸ್ಪೃಶ್ಯ ಎನಿಸುವ ವ್ಯಕ್ತಿ, ಮುಸಲ್ಮಾನನಿಗೂ ಅಸ್ಪೃಶ್ಯನೇ ಎಂದು ಬಾಬಾಸಾಹೇಬರು ಹೇಳಿದ್ದಾರೆ.

ನಾಗರಾಜು ಒಂದು ವೇಳೆ ದಲಿತನಾಗಿರದೆ ಹಿಂದು ಸವರ್ಣೀಯನಾಗಿದ್ದರೆ ಹತ್ಯೆಗೆ ಈಡಾಗುತ್ತಿದ್ದನೇ ಎಂಬುದಾಗಿ ಎದ್ದಿರುವ ಪ್ರಶ್ನೆ ಅತ್ಯಂತ ಪ್ರಸ್ತುತ. ಇದೇ ರೀತಿ ಹಿಂದು ಸವರ್ಣೀಯನಿಂದ ಹತ್ಯೆಗೀಡಾಗುವ ದಲಿತನ ಪರ ಏಳುವ ದನಿಗಳು ಅತಿ ಕ್ಷೀಣ. ನಾಗರಾಜುವಿನ ಹತ್ಯೆ ಮೂಲಭೂತವಾಗಿ ಜಾತಿಯ ಪ್ರಶ್ನೆ ಎಂಬುದನ್ನು ಆತನ ಪರ ಎದ್ದಿರುವ ಸಹಾನುಭೂತಿಯ ಬಹುಪಾಲು ದನಿಗಳು ಒಪ್ಪಲು ತಯಾರಿಲ್ಲ. ಈ ದನಿಗಳಿಗೆ ಮುಸ್ಲಿಮರನ್ನು ಖಳನಾಯಕರನ್ನಾಗಿ ಕಟಕಟೆಯಲ್ಲಿ ನಿಲ್ಲಿಸುವುದು ಏಕೈಕ ಉದ್ದೇಶ. ಈ ಉದ್ದೇಶಕ್ಕೆ ಯಾರು ಒದಗಿ ಬಂದರೂ ಅವರನ್ನು ಬಳಸಿಕೊಂಡೇ ಸಿದ್ಧ.

ಹೆಣ್ಣು ಕುಟುಂಬದ ಆಸ್ತಿಪಾಸ್ತಿ ಎಂಬ ಪುರಾತನ ಪುರುಷಾಧಿಪತ್ಯ ಭಾರತೀಯ ಸಮಾಜದಲ್ಲಿ ಸಿಡಿಲಾಗಿ ಅಬ್ಬರಿಸಿದೆ. ಮಧ್ಯಯುಗದ ಅನಾಗರಿಕ ಮನಸ್ಥಿತಿಯಿದು. ಮನಸು ಬಯಸಿದ ಸಂಗಾತಿಯನ್ನು ಆರಿಸಿಕೊಂಡು ಬದುಕುವ ಸ್ವಾತಂತ್ರ್ಯವನ್ನು ಸಮಾನತೆಯನ್ನು ಆಕೆಗೆ ನಿರಾಕರಿಸಲಾಗಿದೆ. ಲಿಂಗ ತಾರತಮ್ಯದ ಮನುವಾದ, ಪುರುಷಾಧಿಪತ್ಯ, ಜಾತಿವ್ಯವಸ್ಥೆ, ಕೋಮುವಾದ, ಮೂಲಭೂತವಾದದ ಹಲವು ಅಂಶಗಳು ಕಲೆತು ಬೆರೆತಿರುವ ಸಂಕೀರ್ಣ ವಿದ್ಯಮಾನವಿದು.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಕಾವೇರಿದ ಚರ್ಚೆ ನಡೆದಿದೆ. ನಾಗರಾಜುವಿಗೆ ನ್ಯಾಯ ಕೇಳುವವರು ಹೆಚ್ಚಿನ ಸಂಖ್ಯೆಯಲ್ಲಿ ಯಾಕಿದ್ದಾರೆಂದರೆ ನಾಗರಾಜುವಿನ ಹಂತಕ ಒಬ್ಬ ಮುಸಲ್ಮಾನ. ಒಬ್ಬ ಹಿಂದು ಬಲಿಷ್ಠ ಜಾತಿಯವನು ನಾಗರಾಜುವನ್ನು ಕೊಂದಿದ್ದರೆ ನ್ಯಾಯ ಕೇಳುವವರೇ ದಿಕ್ಕಿರುತ್ತಿರಲಿಲ್ಲ. ಜಾತಿ ಎಂಬುದು ಸಾಮಾಜಿಕ ಅನಿಷ್ಟ. ಅರಿವು, ಅಧಿಕಾರ, ಆಸ್ತಿಪಾಸ್ತಿ, ಸಂಪನ್ಮೂಲಗಳು, ಘನತೆ ಗೌರವ, ಲೈಂಗಿಕ ದೃಷ್ಟಿಕೋನದ ನಿಯಂತ್ರಣ ಮತ್ತು ವಿತರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪಿಡುಗು.

ಭಾರತೀಯ ಮುಸಲ್ಮಾನರೂ ಈ ಜಾತಿ ಆಧಾರಿತ ಏಣಿಶ್ರೇಣಿ ವ್ಯವಸ್ಥೆಯ ಬಲಿಪಶುಗಳು. ಈ ಶ್ರೇಣಿಯ ತುತ್ತತುದಿಯಲ್ಲಿರುವವರು ಅಶ್ರಫ್ ಮುಸ್ಲಿಮರು. ಸೈಯದ್, ಶೇಖ್, ಮುಘಲ್, ಪಠಾಣ್ ಎಂದು ಕರೆದುಕೊಳ್ಳುವವರು ತಮ್ಮ ಮೂಲ ಪಶ್ಚಿಮ ಅಥವಾ ಮಧ್ಯ ಏಷ್ಯಾ ಎಂಬುದಾಗಿ ಗುರುತಿಸಿಕೊಳ್ಳುತ್ತಾರೆ. ಭಾರತದ ಬಲಿಷ್ಠ ಜಾತಿಗಳಿಂದ ಇಸ್ಲಾಮಿಗೆ ಮತಾಂತರ ಹೊಂದಿದವರು ತಮ್ಮನ್ನು ಮುಸ್ಲಿಮ್ ರಜಪೂತ, ತಾಗಾ ಅಥವಾ ತ್ಯಾಗಿ ಮುಸ್ಲಿಮ್, ಗಾಢೆ ಅಥವಾ ಗೌಡ್ ಮುಸ್ಲಿಮರೆಂದು ಹೇಳಿಕೊಳ್ಳುತ್ತಾರೆ. ಸೈಯದ್ ಎಂದು ಕರೆದುಕೊಳ್ಳುವವರು ಹಿಂದು ವರ್ಣವ್ಯವಸ್ಥೆಯ ಬ್ರಾಹ್ಮಣ ಜಾತಿಗೆ ಸರಿಸಮಾನ. ಈ ಅಸಮಾನತೆಯನ್ನು ’ಸೈಯದ್ ವಾದ’ ಎಂದು ಕರೆಯಲಾಗಿದೆ. ಈ ಅಶ್ರಫ್ ಯಜಮಾನಿಕೆಯ ವಿರುದ್ಧ ಕೆಳವರ್ಗದ ಅಜ್ಲಾಫ್ (ಹಿಂದುಳಿದವರು) ಮತ್ತು ಅರ್ಜಲ್ (ದಲಿತರು) ಮುಸಲ್ಮಾನರು ಹೋರಾಟ ನಡೆಸಿದ್ದಾರೆ. ಭಾರತೀಯ ಮುಸಲ್ಮಾನರ ಪೈಕಿ ಸವರ್ಣೀಯರ ಪ್ರಮಾಣ ಶೇ.15. ಉಳಿದವರು ಹಿಂದುಳಿದ, ದಲಿತ ಹಾಗು ಬುಡಕಟ್ಟು ಮುಸ್ಲಿಮರು. ಮುಸಲ್ಮಾನರಲ್ಲಿ ಅಸ್ಪೃಶ್ಯತೆ ಆಚರಣೆಯೂ ಉಂಟು. ಸ್ಟ್ಯಾಲಿನ್ ಪದ್ಮಾ ಎಂಬ ಪ್ರತಿಭಾವಂತ ನಿರ್ಮಿಸಿರುವ ಹೊಳಪಿನ ಸಾಕ್ಷ್ಯಚಿತ್ರ ’ಇಂಡಿಯಾ ಅನ್‌ಟಚ್ಡ್’ (India Untouched) ಈ ಮಾತಿಗೆ ಜೀವಂತ ಸಾಕ್ಷ್ಯ ನುಡಿಯುತ್ತದೆ.

ಧೋಬಿ, ಲೋಹಾರ-ಬಧಯಿ, ಧುನಿಯಾ- ಮನ್ಸೂರಿ, ಕಸಾಯಿ-ಖುರೇಶಿ, ಫಕೀರ್-ಆಲ್ವಿ, ಹಜ್ಜಾಮ್-ಸಲ್ಮಾನಿ, ಮೆಹ್ತಾರ್-ಹಲಾಲ್ಖೋರ್, ಗ್ವಾಲ-ಘೋಸಿ, ದರ್ಜಿ-ಇದ್ರಿಸಿ, ಕುಂಜ್ರೆ-ರಯೀನ್, ಜುಲಾಹೆ-ಅನ್ಸಾರಿ ಸಮುದಾಯಗಳು ’ಪಸ್ಮಾಂದ’ ಅಸ್ಮಿತೆಯಡಿ ಒಟ್ಟಾಗಿವೆ. ಪಸ್ಮಾಂದ ಎಂದರೆ ಹಿಂದುಳಿಸಲಾಗಿರುವವರು ಎಂದು ಅರ್ಥ.

ಮುಸ್ಲಿಮ್ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಕ್ಷೇತ್ರಗಳಲ್ಲಿ ಕುಲೀನ ಮುಸ್ಲಿಮರದೇ ಪ್ರಾಬಲ್ಯ. 1952ರಲ್ಲಿ ರಚಿತವಾದ ಒಂದನೆಯ ಲೋಕಸಭೆಯಿಂದ 2004ರ 14ನೆಯ ಲೋಕಸಭೆಯ ತನಕ ಲೋಕಸಭೆಗೆ ಆಯ್ಕೆಯಾದ ಮುಸಲ್ಮಾನ ಜನಪ್ರತಿನಿಧಿಗಳ ಒಟ್ಟು ಸಂಖ್ಯೆ 400. ಈ ಪೈಕಿ ಸವರ್ಣೀಯ ಅಶ್ರಫ್ ಮುಸಲ್ಮಾನರ ಸಂಖ್ಯೆ 340. ಈ ಹದಿನಾಲ್ಕು ಲೋಕಸಭೆಗಳಲ್ಲಿ ಆಯ್ಕೆಯಾದ ಪಸ್ಮಾಂದ ಮುಸಲ್ಮಾನರ ಸಂಖ್ಯೆ ಕೇವಲ 60.

2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅಶ್ರಫ್ ಮುಸ್ಲಿಮರ ಪ್ರಮಾಣ ಶೇ.2.1. ಪಸ್ಮಾಂದ ಮುಸ್ಲಿಮರ ಪ್ರಮಾಣ ಶೇ.11.4. ಲೋಕಸಭೆಯಲ್ಲಿ ಅಶ್ರಫ್ ಮುಸಲ್ಮಾನರ ಪ್ರಾತಿನಿಧ್ಯ ಒಟ್ಟು ಪ್ರಾತಿನಿಧ್ಯದ ಶೇ.2.1ರಷ್ಟಿದ್ದರೆ, ಪಸ್ಮಾಂದ ಮುಸಲ್ಮಾನರ ಪ್ರಾತಿನಿಧ್ಯ ಶೇ.0.8.

ಭಾರತೀಯ ಮುಸಲ್ಮಾನರ ಜೊತೆ ಬೆರೆತು ಕೆಲಸ ಮಾಡುವ ಅನುಭವವೊಂದನ್ನು ಕಾನ್ಶೀರಾಮ್ ಅವರು ಹೀಗೆ ಬಣ್ಣಿಸಿದ್ದಾರೆ: “ಮುಸಲ್ಮಾನ ಸಮುದಾಯವನ್ನು ಅವರ ನಾಯಕರ ಮೂಲಕ ಸಂಪರ್ಕಿಸುವುದು ಮೇಲೆಂದು ಅಂದುಕೊಂಡೆ. ಸುಮಾರು 50 ಮಂದಿ ಮುಸ್ಲಿಮ್ ನಾಯಕರನ್ನು ಭೇಟಿ ಮಾಡಿದ ಬಳಿಕ ಅವರಲ್ಲಿನ ಬ್ರಾಹ್ಮಣ್ಯವನ್ನು ಕಂಡು ದಂಗಾದೆ. ಸಮಾನತೆಯನ್ನು ಸಾಧಿಸುವ ಮತ್ತು ಅನ್ಯಾಯದ ವಿರುದ್ಧ ಹೋರಾಡಬೇಕೆಂದು ಇಸ್ಲಾಮ್ ಹೇಳಿಕೊಡುತ್ತದೆ. ಆದರೆ ಮುಸ್ಲಿಮ್ ನಾಯಕತ್ವದಲ್ಲಿ ಸೈಯದ್‌ಗಳು, ಶೇಖ್‌ಗಳು, ಮುಘಲರು ಹಾಗೂ ಪಠಾಣರಂತಹ ಬಲಿಷ್ಠ ಜಾತಿಗಳದೇ ಪ್ರಾಬಲ್ಯ. ಅನ್ಸಾರಿಗಳು, ಧುನಿಯಾಗಳು, ಖುರೇಶಿಗಳಂತಹ ಅಧೀನ ಜಾತಿಗಳು ತಮ್ಮ ಸಮಾನಕ್ಕೆ ಏರುವುದನ್ನು ಈ ಪ್ರಬಲ ಜಾತಿಗಳು ಸಹಿಸುವುದಿಲ್ಲ. ಹೀಗಾಗಿ ಹಿಂದೂ ಪರಿಶಿಷ್ಟ ಸಮುದಾಯಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ ಮುಸಲ್ಮಾನರನ್ನು (ಪಸ್ಮಾಂದ) ಮಾತ್ರವೇ ಪ್ರೋತ್ಸಾಹಿಸಿ ಬೆಳೆಸಲು ನಾನು ತೀರ್ಮಾನಿಸಿದೆ”. (’ಕಾನ್ಶೀರಾಮ್ ಕಿ ನೇಕ್ ಕಮಾಯಿ ಜಿಸ್ನೆ ಸೋಟಿ ಕ್ವಾಮ್ ಜಗಾಯಿ’ ಹೆಸರಿನ ಪುಸ್ತಕವೊಂದರಲ್ಲಿ ಸತ್ನಾಮ್ ಸಿಂಗ್ ಎಂಬ ಲೇಖಕರು ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ).

’ಹಿಂದೂ ಸಮಾಜದ ಅದೇ ಸಾಮಾಜಿಕ ಅನಿಷ್ಟಗಳು ಭಾರತೀಯ ಮುಸ್ಲಿಂ ಸಮಾಜಕ್ಕೂ ಬಡಿದುಕೊಂಡಿವೆ’ ಎಂಬ ಡಾ.ಅಂಬೇಡ್ಕರ್ ಅವರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹೈದರಾಬಾದ್ ಮಾರ್ಯಾದೆಹೀನ ಹತ್ಯೆ: ಸಂವಿಧಾನ ಮತ್ತು ಇಸ್ಲಾಂ ಪ್ರಕಾರ ಕ್ರಿಮಿನಲ್ ಕೃತ್ಯ – ಅಸಾದುದ್ದೀನ್ ಓವೈಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Hope this News is to get attention of anti communal minds.
    First off all know one is aware of arms act.
    They were using airguns which is permitted subject to permission from concerning authority.

    Some people fearing in kodagu.
    It’s so peaceful hear.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...