Homeಅಂಕಣಗಳುಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..

ಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..

- Advertisement -
- Advertisement -

ಮೊನ್ನೆ ಹೈದರಾಬಾದಿನ ಬೀದಿಯೊಂದರಲ್ಲಿ ದಲಿತ ಯುವಕ ನಾಗರಾಜುವನ್ನು ಮತಾಂಧ ಮುಸ್ಲಿಮನೊಬ್ಬ ಭೀಕರವಾಗಿ ಕೊಂದುಹಾಕಿದ. ಹದಿನೈದು ನಿಮಿಷಗಳ ಕಾಲ ನಡೆದ ಈ ಹಲ್ಲೆಯಿದು. ಕಬ್ಬಿಣದ ಸರಳಿನಿಂದ ಬಡಿದು ತಲೆ ಒಡೆಯಲಾಯಿತು. ಈ ಅಮಾನುಷ ಹತ್ಯೆ ಜರುಗಿದ್ದು ಧರ್ಮಕ್ಕಿಂತ ಹೆಚ್ಚಾಗಿ ಜಾತಿಯ ಕಾರಣಕ್ಕೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು.

ಶಾಲಾದಿನಗಳಿಂದಲೂ ಪ್ರೀತಿಸುತ್ತಿದ್ದ ಅಶ್ರಿನ್ ಸುಲ್ತಾನಾ ಮತ್ತು ನಾಗರಾಜು ವಿವಾಹವಾಗಿ ಮೂರು ತಿಂಗಳು ಕಳೆದಿತ್ತು. ಈ ಮದುವೆಗೆ ಸುಲ್ತಾನಾ ಮನೆಯವರ ವಿರೋಧವಿತ್ತು. ನಾಗರಾಜು ದಲಿತ ಕುಲದಲ್ಲಿ ಹುಟ್ಟಿದ್ದೇ ಕೊಲ್ಲುವ ಕಡು ಹಗೆಗೆ ಕಾರಣ. ತನ್ನ ಪ್ರೀತಿಯನ್ನು ದಕ್ಕಿಸಿಕೊಂಡು ಬಾಳಲು ಬಯಸಿದ್ದ ನಾಗರಾಜು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಲು ಸಿದ್ಧನಿದ್ದ. ವಿವಾಹಕ್ಕೆ ಮುನ್ನ ಈ ಇರಾದೆಯನ್ನು ಅಶ್ರಿನ್ ಕುಟುಂಬಕ್ಕೆ ತಿಳಿಯಪಡಿಸಿ ಅವರ ಸಮ್ಮತಿ ಬಯಸಿದ್ದ. ಮತಾಂತರ ಹೊಂದಿದರೆ ಸಾಮಾನ್ಯವಾಗಿ ಮದುವೆಗೆ ಸಮ್ಮತಿ ದೊರೆತ ಪ್ರಕರಣಗಳು ಸಾಕಷ್ಟಿವೆ. ಆದರೆ ’ಹೊಲೆಯ’ನೊಂದಿಗೆ ರಕ್ತಸಂಬಂಧ ಬೆಳೆಸಲು ಅಶ್ರಿನ್ ಸೋದರ ಸಿದ್ಧನಿರಲಿಲ್ಲ. ಕುಟುಂಬದ-ಕುಲದ ’ಗರಿಮೆಗೆ ಕಳಂಕ’ ತಂದ ತಂಗಿಯನ್ನು ನೇಣುಹಾಕಿ ಕೊಲ್ಲಲು ಮದುವೆಗೆ ಮುಂಚೆಯೇ ಎರಡು ಸಲ ಪ್ರಯತ್ನಿಸಿದ್ದ. ಪರಾರಿಯಾಗಿ ಆರ್ಯಸಮಾಜ ಮಂದಿರದಲ್ಲಿ ಮದುವೆಯಾಗಿತ್ತು ಈ ಜೋಡಿ. ಆದರೆ ಪ್ರಾಣಾಪಾಯ ತಪ್ಪಿರಲಿಲ್ಲ. ಸೋದರ ಸಾಯಹೊಡೆಯುತ್ತಾನೆಂಬ ಎಚ್ಚರಿಕೆಯನ್ನು ಖುದ್ದು ಅಶ್ರಿನ್ ತಾಯಿಯೇ ನೀಡಿದ್ದಳು. ತಲೆಮರೆಸಿಕೊಂಡಿದ್ದ ಈ ಜೋಡಿ ತಮ್ಮ ಮೊಬೈಲುಗಳ ಸಿಮ್ ಕಾರ್ಡುಗಳನ್ನು ಕೂಡ ಬದಲಾಯಿಸಿದ್ದರು. ಪೊಲೀಸರಿಂದ ರಕ್ಷಣೆ ಕೋರಿದ್ದರು.

ಅಶ್ರಿನ್ ಕುಟುಂಬ ಸೈಯದ್ ಎಂಬ ಅಘೋಷಿತ ಕುಲೀನ ’ಜಾತಿ’ಗೆ ಸೇರಿದ್ದು. ಮೇಲುಕೀಳು- ಜಾತಿಭೇದವನ್ನು ಇಸ್ಲಾಂ ಬೋಧಿಸುವುದಿಲ್ಲ ನಿಜ. ಆದರೆ ಈ ಧರ್ಮದ ಅನುಯಾಯಿಗಳು ಬಹುತೇಕರು ಈ ತಾರತಮ್ಯವನ್ನು ಗಟ್ಟಿಯಾಗಿ ಅಪ್ಪಿ ಹಿಡಿದು ಆಚರಿಸುತ್ತಾರೆ. ಹಿಂದುವಿಗೆ ಅಸ್ಪೃಶ್ಯ ಎನಿಸುವ ವ್ಯಕ್ತಿ, ಮುಸಲ್ಮಾನನಿಗೂ ಅಸ್ಪೃಶ್ಯನೇ ಎಂದು ಬಾಬಾಸಾಹೇಬರು ಹೇಳಿದ್ದಾರೆ.

ನಾಗರಾಜು ಒಂದು ವೇಳೆ ದಲಿತನಾಗಿರದೆ ಹಿಂದು ಸವರ್ಣೀಯನಾಗಿದ್ದರೆ ಹತ್ಯೆಗೆ ಈಡಾಗುತ್ತಿದ್ದನೇ ಎಂಬುದಾಗಿ ಎದ್ದಿರುವ ಪ್ರಶ್ನೆ ಅತ್ಯಂತ ಪ್ರಸ್ತುತ. ಇದೇ ರೀತಿ ಹಿಂದು ಸವರ್ಣೀಯನಿಂದ ಹತ್ಯೆಗೀಡಾಗುವ ದಲಿತನ ಪರ ಏಳುವ ದನಿಗಳು ಅತಿ ಕ್ಷೀಣ. ನಾಗರಾಜುವಿನ ಹತ್ಯೆ ಮೂಲಭೂತವಾಗಿ ಜಾತಿಯ ಪ್ರಶ್ನೆ ಎಂಬುದನ್ನು ಆತನ ಪರ ಎದ್ದಿರುವ ಸಹಾನುಭೂತಿಯ ಬಹುಪಾಲು ದನಿಗಳು ಒಪ್ಪಲು ತಯಾರಿಲ್ಲ. ಈ ದನಿಗಳಿಗೆ ಮುಸ್ಲಿಮರನ್ನು ಖಳನಾಯಕರನ್ನಾಗಿ ಕಟಕಟೆಯಲ್ಲಿ ನಿಲ್ಲಿಸುವುದು ಏಕೈಕ ಉದ್ದೇಶ. ಈ ಉದ್ದೇಶಕ್ಕೆ ಯಾರು ಒದಗಿ ಬಂದರೂ ಅವರನ್ನು ಬಳಸಿಕೊಂಡೇ ಸಿದ್ಧ.

ಹೆಣ್ಣು ಕುಟುಂಬದ ಆಸ್ತಿಪಾಸ್ತಿ ಎಂಬ ಪುರಾತನ ಪುರುಷಾಧಿಪತ್ಯ ಭಾರತೀಯ ಸಮಾಜದಲ್ಲಿ ಸಿಡಿಲಾಗಿ ಅಬ್ಬರಿಸಿದೆ. ಮಧ್ಯಯುಗದ ಅನಾಗರಿಕ ಮನಸ್ಥಿತಿಯಿದು. ಮನಸು ಬಯಸಿದ ಸಂಗಾತಿಯನ್ನು ಆರಿಸಿಕೊಂಡು ಬದುಕುವ ಸ್ವಾತಂತ್ರ್ಯವನ್ನು ಸಮಾನತೆಯನ್ನು ಆಕೆಗೆ ನಿರಾಕರಿಸಲಾಗಿದೆ. ಲಿಂಗ ತಾರತಮ್ಯದ ಮನುವಾದ, ಪುರುಷಾಧಿಪತ್ಯ, ಜಾತಿವ್ಯವಸ್ಥೆ, ಕೋಮುವಾದ, ಮೂಲಭೂತವಾದದ ಹಲವು ಅಂಶಗಳು ಕಲೆತು ಬೆರೆತಿರುವ ಸಂಕೀರ್ಣ ವಿದ್ಯಮಾನವಿದು.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಕಾವೇರಿದ ಚರ್ಚೆ ನಡೆದಿದೆ. ನಾಗರಾಜುವಿಗೆ ನ್ಯಾಯ ಕೇಳುವವರು ಹೆಚ್ಚಿನ ಸಂಖ್ಯೆಯಲ್ಲಿ ಯಾಕಿದ್ದಾರೆಂದರೆ ನಾಗರಾಜುವಿನ ಹಂತಕ ಒಬ್ಬ ಮುಸಲ್ಮಾನ. ಒಬ್ಬ ಹಿಂದು ಬಲಿಷ್ಠ ಜಾತಿಯವನು ನಾಗರಾಜುವನ್ನು ಕೊಂದಿದ್ದರೆ ನ್ಯಾಯ ಕೇಳುವವರೇ ದಿಕ್ಕಿರುತ್ತಿರಲಿಲ್ಲ. ಜಾತಿ ಎಂಬುದು ಸಾಮಾಜಿಕ ಅನಿಷ್ಟ. ಅರಿವು, ಅಧಿಕಾರ, ಆಸ್ತಿಪಾಸ್ತಿ, ಸಂಪನ್ಮೂಲಗಳು, ಘನತೆ ಗೌರವ, ಲೈಂಗಿಕ ದೃಷ್ಟಿಕೋನದ ನಿಯಂತ್ರಣ ಮತ್ತು ವಿತರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪಿಡುಗು.

ಭಾರತೀಯ ಮುಸಲ್ಮಾನರೂ ಈ ಜಾತಿ ಆಧಾರಿತ ಏಣಿಶ್ರೇಣಿ ವ್ಯವಸ್ಥೆಯ ಬಲಿಪಶುಗಳು. ಈ ಶ್ರೇಣಿಯ ತುತ್ತತುದಿಯಲ್ಲಿರುವವರು ಅಶ್ರಫ್ ಮುಸ್ಲಿಮರು. ಸೈಯದ್, ಶೇಖ್, ಮುಘಲ್, ಪಠಾಣ್ ಎಂದು ಕರೆದುಕೊಳ್ಳುವವರು ತಮ್ಮ ಮೂಲ ಪಶ್ಚಿಮ ಅಥವಾ ಮಧ್ಯ ಏಷ್ಯಾ ಎಂಬುದಾಗಿ ಗುರುತಿಸಿಕೊಳ್ಳುತ್ತಾರೆ. ಭಾರತದ ಬಲಿಷ್ಠ ಜಾತಿಗಳಿಂದ ಇಸ್ಲಾಮಿಗೆ ಮತಾಂತರ ಹೊಂದಿದವರು ತಮ್ಮನ್ನು ಮುಸ್ಲಿಮ್ ರಜಪೂತ, ತಾಗಾ ಅಥವಾ ತ್ಯಾಗಿ ಮುಸ್ಲಿಮ್, ಗಾಢೆ ಅಥವಾ ಗೌಡ್ ಮುಸ್ಲಿಮರೆಂದು ಹೇಳಿಕೊಳ್ಳುತ್ತಾರೆ. ಸೈಯದ್ ಎಂದು ಕರೆದುಕೊಳ್ಳುವವರು ಹಿಂದು ವರ್ಣವ್ಯವಸ್ಥೆಯ ಬ್ರಾಹ್ಮಣ ಜಾತಿಗೆ ಸರಿಸಮಾನ. ಈ ಅಸಮಾನತೆಯನ್ನು ’ಸೈಯದ್ ವಾದ’ ಎಂದು ಕರೆಯಲಾಗಿದೆ. ಈ ಅಶ್ರಫ್ ಯಜಮಾನಿಕೆಯ ವಿರುದ್ಧ ಕೆಳವರ್ಗದ ಅಜ್ಲಾಫ್ (ಹಿಂದುಳಿದವರು) ಮತ್ತು ಅರ್ಜಲ್ (ದಲಿತರು) ಮುಸಲ್ಮಾನರು ಹೋರಾಟ ನಡೆಸಿದ್ದಾರೆ. ಭಾರತೀಯ ಮುಸಲ್ಮಾನರ ಪೈಕಿ ಸವರ್ಣೀಯರ ಪ್ರಮಾಣ ಶೇ.15. ಉಳಿದವರು ಹಿಂದುಳಿದ, ದಲಿತ ಹಾಗು ಬುಡಕಟ್ಟು ಮುಸ್ಲಿಮರು. ಮುಸಲ್ಮಾನರಲ್ಲಿ ಅಸ್ಪೃಶ್ಯತೆ ಆಚರಣೆಯೂ ಉಂಟು. ಸ್ಟ್ಯಾಲಿನ್ ಪದ್ಮಾ ಎಂಬ ಪ್ರತಿಭಾವಂತ ನಿರ್ಮಿಸಿರುವ ಹೊಳಪಿನ ಸಾಕ್ಷ್ಯಚಿತ್ರ ’ಇಂಡಿಯಾ ಅನ್‌ಟಚ್ಡ್’ (India Untouched) ಈ ಮಾತಿಗೆ ಜೀವಂತ ಸಾಕ್ಷ್ಯ ನುಡಿಯುತ್ತದೆ.

ಧೋಬಿ, ಲೋಹಾರ-ಬಧಯಿ, ಧುನಿಯಾ- ಮನ್ಸೂರಿ, ಕಸಾಯಿ-ಖುರೇಶಿ, ಫಕೀರ್-ಆಲ್ವಿ, ಹಜ್ಜಾಮ್-ಸಲ್ಮಾನಿ, ಮೆಹ್ತಾರ್-ಹಲಾಲ್ಖೋರ್, ಗ್ವಾಲ-ಘೋಸಿ, ದರ್ಜಿ-ಇದ್ರಿಸಿ, ಕುಂಜ್ರೆ-ರಯೀನ್, ಜುಲಾಹೆ-ಅನ್ಸಾರಿ ಸಮುದಾಯಗಳು ’ಪಸ್ಮಾಂದ’ ಅಸ್ಮಿತೆಯಡಿ ಒಟ್ಟಾಗಿವೆ. ಪಸ್ಮಾಂದ ಎಂದರೆ ಹಿಂದುಳಿಸಲಾಗಿರುವವರು ಎಂದು ಅರ್ಥ.

ಮುಸ್ಲಿಮ್ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಕ್ಷೇತ್ರಗಳಲ್ಲಿ ಕುಲೀನ ಮುಸ್ಲಿಮರದೇ ಪ್ರಾಬಲ್ಯ. 1952ರಲ್ಲಿ ರಚಿತವಾದ ಒಂದನೆಯ ಲೋಕಸಭೆಯಿಂದ 2004ರ 14ನೆಯ ಲೋಕಸಭೆಯ ತನಕ ಲೋಕಸಭೆಗೆ ಆಯ್ಕೆಯಾದ ಮುಸಲ್ಮಾನ ಜನಪ್ರತಿನಿಧಿಗಳ ಒಟ್ಟು ಸಂಖ್ಯೆ 400. ಈ ಪೈಕಿ ಸವರ್ಣೀಯ ಅಶ್ರಫ್ ಮುಸಲ್ಮಾನರ ಸಂಖ್ಯೆ 340. ಈ ಹದಿನಾಲ್ಕು ಲೋಕಸಭೆಗಳಲ್ಲಿ ಆಯ್ಕೆಯಾದ ಪಸ್ಮಾಂದ ಮುಸಲ್ಮಾನರ ಸಂಖ್ಯೆ ಕೇವಲ 60.

2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅಶ್ರಫ್ ಮುಸ್ಲಿಮರ ಪ್ರಮಾಣ ಶೇ.2.1. ಪಸ್ಮಾಂದ ಮುಸ್ಲಿಮರ ಪ್ರಮಾಣ ಶೇ.11.4. ಲೋಕಸಭೆಯಲ್ಲಿ ಅಶ್ರಫ್ ಮುಸಲ್ಮಾನರ ಪ್ರಾತಿನಿಧ್ಯ ಒಟ್ಟು ಪ್ರಾತಿನಿಧ್ಯದ ಶೇ.2.1ರಷ್ಟಿದ್ದರೆ, ಪಸ್ಮಾಂದ ಮುಸಲ್ಮಾನರ ಪ್ರಾತಿನಿಧ್ಯ ಶೇ.0.8.

ಭಾರತೀಯ ಮುಸಲ್ಮಾನರ ಜೊತೆ ಬೆರೆತು ಕೆಲಸ ಮಾಡುವ ಅನುಭವವೊಂದನ್ನು ಕಾನ್ಶೀರಾಮ್ ಅವರು ಹೀಗೆ ಬಣ್ಣಿಸಿದ್ದಾರೆ: “ಮುಸಲ್ಮಾನ ಸಮುದಾಯವನ್ನು ಅವರ ನಾಯಕರ ಮೂಲಕ ಸಂಪರ್ಕಿಸುವುದು ಮೇಲೆಂದು ಅಂದುಕೊಂಡೆ. ಸುಮಾರು 50 ಮಂದಿ ಮುಸ್ಲಿಮ್ ನಾಯಕರನ್ನು ಭೇಟಿ ಮಾಡಿದ ಬಳಿಕ ಅವರಲ್ಲಿನ ಬ್ರಾಹ್ಮಣ್ಯವನ್ನು ಕಂಡು ದಂಗಾದೆ. ಸಮಾನತೆಯನ್ನು ಸಾಧಿಸುವ ಮತ್ತು ಅನ್ಯಾಯದ ವಿರುದ್ಧ ಹೋರಾಡಬೇಕೆಂದು ಇಸ್ಲಾಮ್ ಹೇಳಿಕೊಡುತ್ತದೆ. ಆದರೆ ಮುಸ್ಲಿಮ್ ನಾಯಕತ್ವದಲ್ಲಿ ಸೈಯದ್‌ಗಳು, ಶೇಖ್‌ಗಳು, ಮುಘಲರು ಹಾಗೂ ಪಠಾಣರಂತಹ ಬಲಿಷ್ಠ ಜಾತಿಗಳದೇ ಪ್ರಾಬಲ್ಯ. ಅನ್ಸಾರಿಗಳು, ಧುನಿಯಾಗಳು, ಖುರೇಶಿಗಳಂತಹ ಅಧೀನ ಜಾತಿಗಳು ತಮ್ಮ ಸಮಾನಕ್ಕೆ ಏರುವುದನ್ನು ಈ ಪ್ರಬಲ ಜಾತಿಗಳು ಸಹಿಸುವುದಿಲ್ಲ. ಹೀಗಾಗಿ ಹಿಂದೂ ಪರಿಶಿಷ್ಟ ಸಮುದಾಯಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ ಮುಸಲ್ಮಾನರನ್ನು (ಪಸ್ಮಾಂದ) ಮಾತ್ರವೇ ಪ್ರೋತ್ಸಾಹಿಸಿ ಬೆಳೆಸಲು ನಾನು ತೀರ್ಮಾನಿಸಿದೆ”. (’ಕಾನ್ಶೀರಾಮ್ ಕಿ ನೇಕ್ ಕಮಾಯಿ ಜಿಸ್ನೆ ಸೋಟಿ ಕ್ವಾಮ್ ಜಗಾಯಿ’ ಹೆಸರಿನ ಪುಸ್ತಕವೊಂದರಲ್ಲಿ ಸತ್ನಾಮ್ ಸಿಂಗ್ ಎಂಬ ಲೇಖಕರು ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ).

’ಹಿಂದೂ ಸಮಾಜದ ಅದೇ ಸಾಮಾಜಿಕ ಅನಿಷ್ಟಗಳು ಭಾರತೀಯ ಮುಸ್ಲಿಂ ಸಮಾಜಕ್ಕೂ ಬಡಿದುಕೊಂಡಿವೆ’ ಎಂಬ ಡಾ.ಅಂಬೇಡ್ಕರ್ ಅವರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹೈದರಾಬಾದ್ ಮಾರ್ಯಾದೆಹೀನ ಹತ್ಯೆ: ಸಂವಿಧಾನ ಮತ್ತು ಇಸ್ಲಾಂ ಪ್ರಕಾರ ಕ್ರಿಮಿನಲ್ ಕೃತ್ಯ – ಅಸಾದುದ್ದೀನ್ ಓವೈಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Hope this News is to get attention of anti communal minds.
    First off all know one is aware of arms act.
    They were using airguns which is permitted subject to permission from concerning authority.

    Some people fearing in kodagu.
    It’s so peaceful hear.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...