Homeಅಂಕಣಗಳುಎಲೆಮರೆಯಿಂದಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ಕೂಡಾ ಬ್ಯಾರಿ ಸಮುದಾಯದ ಈ ಪ್ರತಿಭಾವಂತ ಹಿರಿಯ ಸಾಹಿತಿಯನ್ನು ಗುರುತಿಸದೇ ಇರುವುದು ಖೇದಕರ.

- Advertisement -
- Advertisement -

ಕೊರೊನಾ ಲಾಕ್‌ಡೌನ್‌ನಿಂದಾಗಿ ಮಸೀದಿ ಬಾಗಿಲುಗಳು ಮುಚ್ಚಲ್ಪಟ್ಟಾಗ ಮೌಲ್ವಿಗಳು ಅಕ್ಷರಶಃ ನಿರುದ್ಯೋಗಿಗಳಾಗಿಬಿಟ್ಟಿದ್ದರು. ಈ ದುರಿತ ಕಾಲದಲ್ಲಿ ಕೆಲವರು ಜೀವನೋಪಾಯಕ್ಕಾಗಿ ಬೇರೆ ಕಸುಬುಗಳತ್ತ ಮುಖ ಮಾಡಿದರೆ, ಅದರ ಕುರಿತಾಗಿಯೂ ಪರ ವಿರೋಧ ಚರ್ಚೆಗಳೇರ್ಪಡುತ್ತಿವೆ.

ಮೌಲ್ವಿಗಳೆಂದರೆ ಮಸೀದಿಗೇ ಸೀಮಿತವಾಗಿರಬೇಕು, ಅವರ ಉಡುಗೆ-ತೊಡುಗೆಗಳು, ವಿಚಾರಗಳು ಅವರಿಗೆಂದೇ ನಿಗದಿಪಡಿಸಿದ ಅಚ್ಚಿನೊಳಗೆ ಕೂರುವಂತಿರಬೇಕು ಎಂಬುವುದು ನಮ್ಮ ಸಮಾಜದ ಸಂಕುಚಿತ ಧೋರಣೆಯಾಗಿದೆ. ಈ ಅಂತರ್ಗತ ಪೂರ್ವಾಗ್ರಹಗಳಿಗೆ ಅಂಜಿಕೊಂಡು ಅವರು ತಮಗೆ ತಾವೇ ಒಂದು ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗಗಳ ನಡುವೆ ಕೇವಲ ಆರು ವರ್ಷಗಳ ಕಾಲವಷ್ಟೇ ಮಸೀದಿಯಲ್ಲಿ ಮೌಲ್ವಿಯಾಗಿ ಸೇವೆ ಸಲ್ಲಿಸಿ ಆ ಬಳಿಕ ಪೂರ್ಣಕಾಲಿಕವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬ್ಯಾರಿ-ಮುಸ್ಲಿಂ ಸಮುದಾಯದ ಅಪ್ರತಿಮ ಪ್ರತಿಭೆ, ಪ್ರಗತಿಪರ ನಿಲುವಿನ ವಿದ್ವಾಂಸ ಸಾಲೆತ್ತೂರು ಅಬೂಬಕರ್ ಫೈಝಿ ನೆನಪಾಗುತ್ತಾರೆ. ಇಸ್ಲಾಮನ್ನು ಕನ್ನಡದಲ್ಲಿ ತೆರೆದಿಟ್ಟ ಬೆರಳೆಣಿಕೆಯ ಮೊದಲ ಹಂತದ ಸಾಹಿತಿಗಳಲ್ಲಿ ಫೈಝಿ ಅಂಗ್ರಪಂಕ್ತಿಯಲ್ಲಿ ಕಾಣಸಿಗುತ್ತಾರೆ. ಇಸ್ಲಾಮಿನ ಬೇರೆ ಬೇರೆ ಪ್ರವಾದಿಗಳ, ಸೂಫಿಗಳ ಮತ್ತು ಇತಿಹಾಸಪುರುಷರ ಬದುಕಿನ ಚಿತ್ರಗಳನ್ನು ಸೃಜನಶೀಲ ಪ್ರಕಾರದಲ್ಲಿ ಕಟ್ಟಿಕೊಟ್ಟವರಲ್ಲಿ ಫೈಝಿ ಮೊದಲಿಗರು. ನನ್ನರಿವಿಗೆ ನಿಲುಕಿದಂತೆ ಕನ್ನಡದಲ್ಲಿ ಸಾಹಿತ್ಯವನ್ನೇ ಜೀವನೋಪಾಯವಾಗಿಸಿದ ವಿರಳಾತಿವಿರಳರಲ್ಲಿ ಶಿವರಾಮ ಕಾರಂತರು ಪ್ರಮುಖರಾಗಿದ್ದರು. ಅಂತೆಯೇ ಈ ಸಾಲೆತ್ತೂರು ಫೈಝಿಯವರಿಗೆ ಸಾಹಿತ್ಯವೇ ಜೀವನೋಪಾಯ. ಚಿಕ್ಕಂದಿನಲ್ಲಿ ಅಂಗಡಿಯವನು ದಿನಸಿ ಕಟ್ಟಿಕೊಡುತ್ತಿದ್ದ – ಓದಿದರೂ ತಲೆಬುಡ ಸಿಗದ ಪತ್ರಿಕೆಗಳ ತುಂಡು ಕಾಗದಗಳು, ಸಾಹಿತ್ಯಾಸಕ್ತರಾಗಿದ್ದ ಅಣ್ಣ ಮುಹಮ್ಮದರು ಓದಿ ಅಟ್ಟದಲ್ಲಿ ಕಟ್ಟಿಹಾಕಿದ್ದ ಕನ್ನಡ ಕಾದಂಬರಿಗಳು ಓದಿನ ದಾಹ ತಣಿಸುತ್ತಿದ್ದವು. ಉದಯವಾಣಿ ಪತ್ರಿಕೆಯ ಅಂದಿನ ಪ್ರಮುಖ ಅಂಕಣಕಾರರಾಗಿದ್ದ ಕು.ಶಿ.ಹರಿದಾಸ ಭಟ್ಟ, ಕಳ್ಳಿಗೆ ಮಹಾಬಲ ಭಂಡಾರಿ ಮತ್ತು ಬೈಕಾಡಿ ವೆಂಕಟಕೃಷ್ಣ ರಾಯರ ಲೇಖನಗಳು ಅವರ ಓದಿನ ಹರವನ್ನು ವಿಸ್ತರಿಸಿಕೊಳ್ಳಲು ನೆರವಾಯಿತು.

ಫೈಝಿ ಕಲಿತದ್ದು ಐದನೇ ತರಗತಿಯವರೆಗೆ ಮಾತ್ರ. ಅಪಾರ ಓದು, ಸೂಕ್ಷ್ಮಗ್ರಾಹಿತ್ವ, ಸುತ್ತಮುತ್ತಲ ಪರಿಸರದ ಕುರಿತಂತೆ ತೀರದ ಕುತೂಹಲ ಅವರನ್ನು ಸಾಹಿತಿಯಾಗಿಸಿತ್ತು.

ಕರ್ನಾಟಕ – ಕೇರಳದ ಗಡಿಭಾಗದಲ್ಲಿರುವ ಪೊಯ್ಯತ್ತಬೈಲ್ ಎಂಬಲ್ಲಿ ಧಾರ್ಮಿಕ ಶಿಕ್ಷಣ ಕಲಿಯುತ್ತಿದ್ದ ಕಾಲದಲ್ಲಿ ಹಿರಿಯ ಸಾಹಿತಿ, ಸಂಶೋಧಕ ಬಿ.ಎಂ. ಇಚ್ಲಂಗೋಡು ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ “ತವನಿಧಿ” ಪತ್ರಿಕೆಯಲ್ಲಿ ಸೂಫಿಗಳ ಸುಲ್ತಾನ ಬಗ್ದಾದಿನ ಶೇಖ್ ಮುಹಿಯುದ್ದೀನರ ಬದುಕಿನ ಕುರಿತಂತೆ ಫೈಝಿಯವರ ಮೊದಲ ಲೇಖನ ಪ್ರಕಟವಾಯಿತು. ಅಲ್ಲಿಂದ ಮುಂದೆ ದಣಿವರಿಯದೇ ಬರೆಯತೊಡಗಿದರು.
ಕೇರಳದ ಪಟ್ಟಿಕ್ಕಾಡ್ ಎಂಬಲ್ಲಿನ ಜಾಮಿಯಾ ನೂರಿಯಾ ಇಸ್ಲಾಮಿಯಾ ಎಂಬ ಇಸ್ಲಾಮಿಕ್ ವಿದ್ಯಾಲಯದಿಂದ ಫೈಝಿ ಪದವಿ ಪಡೆದು ಮಸೀದಿಯಲ್ಲಿ ಮೌಲ್ವಿ ಉದ್ಯೋಗಕ್ಕೆ ನಿಂತರೂ ಸಾಹಿತ್ಯದೆಡೆಗಿನ ಒಲವು ಕಡಿಮೆಯಾಗಲಿಲ್ಲ. ಮಸೀದಿಯಲ್ಲಿ ಇಮಾಮರಾಗಿದ್ದಾಗಲೇ ’ಅಲ್-ಮುನೀರ್’ ಎಂಬ ಪತ್ರಿಕೆಯೊಂದನ್ನು ಹೊರತರುತ್ತಿದ್ದರು. ಅಲ್ಪಕಾಲದಲ್ಲೇ ಪತ್ರಿಕೆ ಆರ್ಥಿಕ ಅಡಚಣೆಯಿಂದ ಮುಚ್ಚಿಹೋಯಿತು.

1991ರಲ್ಲಿ ಇಬ್ರಾಹಿಂ ಬಾವ ಹಾಜಿ ಎಂಬವರು ಪ್ರಾರಂಭಿಸಿದ ಮುಸ್ಲಿಂ ಸಾಮಾಜಿಕ – ಧಾರ್ಮಿಕ ವಾರಪತ್ರಿಕೆಗೆ ಫೈಝಿಯವರನ್ನು ಸಂಪಾದಕರಾಗಿ ನೇಮಕ ಮಾಡಿದರು. ಮೂರು ವರ್ಷಗಳ ಕಾಲ ಹೆಚ್ಚುಕಡಿಮೆ ಏಕಾಂಗಿಯಾಗಿ ಇಡೀ ಪತ್ರಿಕೆಯನ್ನು ಅತ್ಯಂತ ಜತನದಿಂದ ಮತ್ತು ಜಾಣ್ಮೆಯಿಂದ ನಡೆಸಿದರು. ಆ ಕಾಲದಲ್ಲಿ ಮುಸ್ಲಿಂ ಬರಹಗಾರರ ಸಂಖ್ಯೆ ಬಹಳ ಕಡಿಮೆಯಿತ್ತು. ಹಾಗೆ ಕೆಲವು ಬರಹಗಾರರಿದ್ದರೂ ಅಲ್-ಅನ್ಸಾರ್ ಪತ್ರಿಕೆಯ ಚೌಕಟ್ಟಿನುಸಾರ ಬರೆಯುವವರ ಸಂಖ್ಯೆ ತೀರಾ ವಿರಳವಿತ್ತು. ಆ ಕಾಲದಲ್ಲಿ ಫೈಝಿಯೊಬ್ಬರೇ ಬಹುತೇಕ ಬರಹಗಳನ್ನು ಬೇರೆಬೇರೆ ಹೆಸರುಗಳಲ್ಲಿ ಪ್ರಕಟಿಸಿ ಪತ್ರಿಕೆಗೆ ಜೀವ ತುಂಬುತ್ತಿದ್ದರು. ಪತ್ರಿಕೆಯ ಮುಖಪುಟವು ಸಮಕಾಲೀನ ರಾಜಕೀಯ ವಿಶ್ಲೇಷಣೆಗೆ ಮೀಸಲಾದರೆ, ಒಳಪುಟಗಳಲ್ಲಿ ಇಸ್ಲಾಮೀ ಕರ್ಮಶಾಸ್ತ್ರ್ರ, ಧಾರಾವಾಹಿ, ಪ್ರಶ್ನೋತ್ತರ, ಪದಬಂಧ ಇತ್ಯಾದಿಗಳನ್ನೊಳಗೊಂಡು ಪ್ರಬುದ್ಧ ಪತ್ರಿಕೆಯಾಗಿ ಮುಸ್ಲಿಂ ಓದುಗ ವಲಯದಲ್ಲಿ ಜನಪ್ರಿಯವಾಯಿತು. ಮುಂದೆ ಕನ್ನಡದಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಂ ಬರಹಗಾರರು ಹೊರಬರಲು ಅಲ್-ಅನ್ಸಾರ್ ಪತ್ರಿಕೆಯ ಕೊಡುಗೆಯೂ ದೊಡ್ಡದಿದೆ ಎಂದರೆ ತಪ್ಪಾಗದು.

ಫೈಝಿ ಓರ್ವ ಧಾರ್ಮಿಕ ಸಾಹಿತಿಯಾಗಿ ಮಾತ್ರ ಉಳಿಯಲಿಲ್ಲ. 1994ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ ಅವರ ಕಾರು ಅತಿ ವೇಗವಾಗಿ ಚಲಾಯಿಸಿ ರಸ್ತೆಬದಿಯಲ್ಲಿದ್ದ ಬಡಪಾಯಿಯ ಸಾವಿಗೆ ಕಾರಣವಾಗಿತ್ತು. ಅಷ್ಟುಹೊತ್ತಿಗೆ ಸಂಪಾದಕ ಸ್ಥಾನ ಕೈತಪ್ಪಿದ್ದರಿಂದ ಅಲ್-ಅನ್ಸಾರ್‌ನಲ್ಲಿ ಕರುಣಾಕರನ್ ಅವರ ಬೇಜವಾಬ್ದಾರಿಯನ್ನು ವಿರೋಧಿಸಿ ಬರೆಯಲಾಗದ್ದಕ್ಕೆ ಲಂಕೇಶ್ ಪತ್ರಿಕೆಯಲ್ಲ್ಲಿ ಬರೆದು ತನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದರು.

ಸಾಮಾನ್ಯವಾಗಿ ದ.ಕ. ಮತ್ತು ಕೊಡಗು ಜಿಲ್ಲೆಯ ಹೆಚ್ಚಿನವರು ಧಾರ್ಮಿಕ ಪದವಿಗಾಗಿ ಕೇರಳದ ವಿದ್ಯಾಲಯಗಳನ್ನು ಆಶ್ರಯಿಸುತ್ತಾರೆ. ಆದುದರಿಂದ ಅವರ ಕನ್ನಡ ಬರಹಗಳಲ್ಲಿ ಮಲ್ಗನ್ನಡ ಪದಗಳು (ಮಲಯಾಳಂ+ಕನ್ನಡ) ಯಥೇಚ್ಛವಾಗಿ ಕಾಣಸಿಗುತ್ತವೆ. ಫೈಝಿಯವರು ಕೇರಳದಲ್ಲಿ ಕಲಿತವರಾದರೂ ಅವರ ಬರಹಗಳಲ್ಲಿ ದುರ್ಬೀನು ಹಿಡಿದು ಹುಡುಕಿದರೂ ಮಲ್ಗನ್ನಡ ಪದ ಸಿಗಲಾರದು. ಸಂಪಾದಕ ದ್ದೆ ಕೈತಪ್ಪಿದ ಬಳಿಕ ಒಂಭತ್ತು ವರ್ಷಗಳ ಕಾಲ ಹೊರಗಿಂದಲೇ ಅಲ್-ಅನ್ಸಾರ್‌ಗೆ ಲೇಖನಗಳನ್ನು ಬರೆಯುತ್ತಿದ್ದರು.
೨೦೦೯ರಲ್ಲ್ಲಿ ಮದರಂಗಿ ಎಂಬ ಮಾಸಿಕ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡರು. ಅವರ ಸಂಪಾದಕತ್ವದಲ್ಲಿ ಮದರಂಗಿ ಮಾಸಿಕ ಕರಾವಳಿ ಮುಸ್ಲಿಮರ ವಲಯದಲ್ಲಿ ಬಹಳ ಜನಪ್ರಿಯವಾಯಿತು. ೨೦೧೦ರ ಮಾರ್ಚ್ ತಿಂಗಳಲ್ಲಿ ಅವರೊಂದು ಅದ್ಭುತ ಸಂಪಾದಕೀಯ ಬರೆದಿದ್ದರು. “ಮಧುಮಾಸದ ಮಧುರಿಮೆ” ಎಂಬ ಶೀರ್ಷಿಕೆಯ ಆ ಸಂಪಾದಕೀಯದ ಪ್ರತಿಯೊಂದು ಪದವೂ “ಮ”ಕಾರದಿಂದ ಪ್ರಾರಂಭವಾಗಿತ್ತು. ಕನ್ನಡ ಪತ್ರಿಕೋದ್ಯಮದಲ್ಲಿ ಅದೊಂದು ವಿಶಿಷ್ಟ ಪ್ರಯೋಗವಾಗಿತ್ತು.
ಮದರಂಗಿಯಲ್ಲಿ ಅವರು ಬರೆಯುತ್ತಿದ್ದ “ಶಮ್ಮಿ ಕಾಲಮ”ನ್ನು ಮೊನ್ನೆ ಅವರಲ್ಲಿ ಮಾತಾಡುವವರೆಗೂ ಅದು ಹೆಣ್ಣೊಬ್ಬಳು ಬರೆಯುತ್ತಿದ್ದ ಅಂಕಣವೆಂದೇ ನಂಬಿದ್ದೆ. ಆ ಮಟ್ಟಿಗೆ ಹೆಣ್ಣೊಬ್ಬಳ ತುಮುಲವನ್ನು ಪರಿಣಾಮಕಾರಿಯಾಗಿ ಬರೆಯುತ್ತಿದ್ದರು.

ಫೈಝಿ ತನ್ನ ಬರಹದ ಆರಂಭಕಾಲದಿಂದಲೂ ವರದಕ್ಷಿಣೆ ಎಂಬ ಮಹಾಮಾರಿಯ ವಿರುದ್ಧ ಲೇಖನಿ ಝಳಪಿಸುತ್ತಾ ಬಂದಿದ್ದಾರೆ. ಕರಾವಳಿಯ ಮುಸ್ಲಿಂ ಸಮುದಾಯದೊಳಗೆ ಹಾಸುಹೊಕ್ಕಾಗಿದ್ದ ಮೌಢ್ಯಗಳ ವಿರುದ್ಧ ತನ್ನ ಬರಹಗಳ ಮೂಲಕ ಸಮರ ಸಾರಿದ್ದರು. ವಾಸ್ತು ಎಂಬ ಮನೆ ಒಡೆಯುವ ಹುಚ್ಚಾಟದಿಂದ ಮುಸ್ಲಿಂ ಸಮುದಾಯವೂ ಹೊರತಾಗಿರಲಿಲ್ಲ. ಅದರ ವಿರುದ್ಧ ಬರೆದಿದ್ದ “ವಾಸ್ತು-ವಾಸ್ತವವೇನು?” ಎಂಬ ಸರಣಿ ಬರಹಗಳು ಮುಸ್ಲಿಂ ವಾಸ್ತುತಜ್ಞರ ನಿದ್ದೆಗೆಡಿಸಿತ್ತು. ವಾಸ್ತು ಇಸ್ಲಾಮಿನಲ್ಲಿ ಇಲ್ಲವೇ ಇಲ್ಲ ಎಂದು ಖುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ವಾಸ್ತುತಜ್ಞರ ಹುನ್ನಾರವನ್ನು ಬಯಲಿಗೆಳೆದು ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾಗಿದ್ದರು. ಕರಾವಳಿಯ ಮುಸ್ಲಿಂ ಸಮುದಾಯದಲ್ಲಿ ವಾಸ್ತುವಿನ ಹುಚ್ಚು ಇಂದು ವಿರಳವಾಗಿದ್ದರೆ ಅದರ ಹಿಂದೆ ಫೈಝಿಯವರ ಬರಹದ ಪ್ರಭಾವವಿದೆ.

ಅವರ ಬರಹಗಳಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವ, ಚಿಂತನೆಗೆ ಹಚ್ಚುವ ಮತ್ತು ತಿದ್ದುವ ಶಕ್ತಿ ಇದೆ. ಪ್ರವಾದಿ ಮುಹಮ್ಮದ್ (ಸ): ಬದುಕು ಮತ್ತು ಆದರ್ಶ, ಗುಹೆಯಲ್ಲಿ ಹುಟ್ಟಿದ ಅದ್ಭುತ ಶಿಶು, ಕನಸಿನ ರಾಜ, ಸೇಬು ತಿಂದ ಹುಡುಗ, ಇಸ್ಲಾಮಿನ ಆಂತರ್ಯ, ಆಶುರಾ ಬೀಬಿ, ಲುಕ್ಮಾನುಲ್ ಹಕೀಂ, ಆಧುನಿಕ ವೈದ್ಯಶಾಸ್ತ್ರದ ಪಿತಾಮಹ ಇಬ್ನ್ ಸೀನಾ.. (ಅವಿಸ್ಸಿನ್ನಾ) ಹೀಗೆ ಸುಮಾರು ಇನ್ನೂರಕ್ಕೂ ಮಿಕ್ಕಿದ ಕೃತಿಗಳನ್ನು ಫೈಝಿ ರಚಿಸಿದ್ದಾರೆ. ಅವುಗಳಲ್ಲಿ ಮಲಯಾಳಂ ಮತ್ತು ಅರೆಬಿಕ್‌ನಿಂದ ಅನುವಾದಿಸಿದ ಗ್ರಂಥಗಳೂ ಸೇರಿವೆ. ಪ್ರಕಾಶಕರು ಅವರ ಕೃತಿಗಳನ್ನು ಮುಸ್ಲಿಂ ಧಾರ್ಮಿಕ ಸಮಾರಂಭಗಳಲ್ಲಿ ಮಾರಾಟ ಮಾಡಿ ಮುಗಿಸಿ ಲಾಭ ಗಳಿಸಿದರೇ ಹೊರತು ಕಾಸರಗೋಡು, ದ.ಕ. ಮತ್ತು ಕೊಡಗಿನಾಚೆಗೆ ತಲುಪಿಸುವ ಪ್ರಯತ್ನ ಮಾಡಲೇ ಇಲ್ಲ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ಕೂಡಾ ಬ್ಯಾರಿ ಸಮುದಾಯದ ಈ ಪ್ರತಿಭಾವಂತ ಹಿರಿಯ ಸಾಹಿತಿಯನ್ನು ಗುರುತಿಸದೇ ಇರುವುದು ಖೇದಕರ.


ಇದನ್ನೂ ಓದಿ: ದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...