Homeಅಂಕಣಗಳುಎಲೆಮರೆಯಿಂದಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ಕೂಡಾ ಬ್ಯಾರಿ ಸಮುದಾಯದ ಈ ಪ್ರತಿಭಾವಂತ ಹಿರಿಯ ಸಾಹಿತಿಯನ್ನು ಗುರುತಿಸದೇ ಇರುವುದು ಖೇದಕರ.

- Advertisement -
- Advertisement -

ಕೊರೊನಾ ಲಾಕ್‌ಡೌನ್‌ನಿಂದಾಗಿ ಮಸೀದಿ ಬಾಗಿಲುಗಳು ಮುಚ್ಚಲ್ಪಟ್ಟಾಗ ಮೌಲ್ವಿಗಳು ಅಕ್ಷರಶಃ ನಿರುದ್ಯೋಗಿಗಳಾಗಿಬಿಟ್ಟಿದ್ದರು. ಈ ದುರಿತ ಕಾಲದಲ್ಲಿ ಕೆಲವರು ಜೀವನೋಪಾಯಕ್ಕಾಗಿ ಬೇರೆ ಕಸುಬುಗಳತ್ತ ಮುಖ ಮಾಡಿದರೆ, ಅದರ ಕುರಿತಾಗಿಯೂ ಪರ ವಿರೋಧ ಚರ್ಚೆಗಳೇರ್ಪಡುತ್ತಿವೆ.

ಮೌಲ್ವಿಗಳೆಂದರೆ ಮಸೀದಿಗೇ ಸೀಮಿತವಾಗಿರಬೇಕು, ಅವರ ಉಡುಗೆ-ತೊಡುಗೆಗಳು, ವಿಚಾರಗಳು ಅವರಿಗೆಂದೇ ನಿಗದಿಪಡಿಸಿದ ಅಚ್ಚಿನೊಳಗೆ ಕೂರುವಂತಿರಬೇಕು ಎಂಬುವುದು ನಮ್ಮ ಸಮಾಜದ ಸಂಕುಚಿತ ಧೋರಣೆಯಾಗಿದೆ. ಈ ಅಂತರ್ಗತ ಪೂರ್ವಾಗ್ರಹಗಳಿಗೆ ಅಂಜಿಕೊಂಡು ಅವರು ತಮಗೆ ತಾವೇ ಒಂದು ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗಗಳ ನಡುವೆ ಕೇವಲ ಆರು ವರ್ಷಗಳ ಕಾಲವಷ್ಟೇ ಮಸೀದಿಯಲ್ಲಿ ಮೌಲ್ವಿಯಾಗಿ ಸೇವೆ ಸಲ್ಲಿಸಿ ಆ ಬಳಿಕ ಪೂರ್ಣಕಾಲಿಕವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬ್ಯಾರಿ-ಮುಸ್ಲಿಂ ಸಮುದಾಯದ ಅಪ್ರತಿಮ ಪ್ರತಿಭೆ, ಪ್ರಗತಿಪರ ನಿಲುವಿನ ವಿದ್ವಾಂಸ ಸಾಲೆತ್ತೂರು ಅಬೂಬಕರ್ ಫೈಝಿ ನೆನಪಾಗುತ್ತಾರೆ. ಇಸ್ಲಾಮನ್ನು ಕನ್ನಡದಲ್ಲಿ ತೆರೆದಿಟ್ಟ ಬೆರಳೆಣಿಕೆಯ ಮೊದಲ ಹಂತದ ಸಾಹಿತಿಗಳಲ್ಲಿ ಫೈಝಿ ಅಂಗ್ರಪಂಕ್ತಿಯಲ್ಲಿ ಕಾಣಸಿಗುತ್ತಾರೆ. ಇಸ್ಲಾಮಿನ ಬೇರೆ ಬೇರೆ ಪ್ರವಾದಿಗಳ, ಸೂಫಿಗಳ ಮತ್ತು ಇತಿಹಾಸಪುರುಷರ ಬದುಕಿನ ಚಿತ್ರಗಳನ್ನು ಸೃಜನಶೀಲ ಪ್ರಕಾರದಲ್ಲಿ ಕಟ್ಟಿಕೊಟ್ಟವರಲ್ಲಿ ಫೈಝಿ ಮೊದಲಿಗರು. ನನ್ನರಿವಿಗೆ ನಿಲುಕಿದಂತೆ ಕನ್ನಡದಲ್ಲಿ ಸಾಹಿತ್ಯವನ್ನೇ ಜೀವನೋಪಾಯವಾಗಿಸಿದ ವಿರಳಾತಿವಿರಳರಲ್ಲಿ ಶಿವರಾಮ ಕಾರಂತರು ಪ್ರಮುಖರಾಗಿದ್ದರು. ಅಂತೆಯೇ ಈ ಸಾಲೆತ್ತೂರು ಫೈಝಿಯವರಿಗೆ ಸಾಹಿತ್ಯವೇ ಜೀವನೋಪಾಯ. ಚಿಕ್ಕಂದಿನಲ್ಲಿ ಅಂಗಡಿಯವನು ದಿನಸಿ ಕಟ್ಟಿಕೊಡುತ್ತಿದ್ದ – ಓದಿದರೂ ತಲೆಬುಡ ಸಿಗದ ಪತ್ರಿಕೆಗಳ ತುಂಡು ಕಾಗದಗಳು, ಸಾಹಿತ್ಯಾಸಕ್ತರಾಗಿದ್ದ ಅಣ್ಣ ಮುಹಮ್ಮದರು ಓದಿ ಅಟ್ಟದಲ್ಲಿ ಕಟ್ಟಿಹಾಕಿದ್ದ ಕನ್ನಡ ಕಾದಂಬರಿಗಳು ಓದಿನ ದಾಹ ತಣಿಸುತ್ತಿದ್ದವು. ಉದಯವಾಣಿ ಪತ್ರಿಕೆಯ ಅಂದಿನ ಪ್ರಮುಖ ಅಂಕಣಕಾರರಾಗಿದ್ದ ಕು.ಶಿ.ಹರಿದಾಸ ಭಟ್ಟ, ಕಳ್ಳಿಗೆ ಮಹಾಬಲ ಭಂಡಾರಿ ಮತ್ತು ಬೈಕಾಡಿ ವೆಂಕಟಕೃಷ್ಣ ರಾಯರ ಲೇಖನಗಳು ಅವರ ಓದಿನ ಹರವನ್ನು ವಿಸ್ತರಿಸಿಕೊಳ್ಳಲು ನೆರವಾಯಿತು.

ಫೈಝಿ ಕಲಿತದ್ದು ಐದನೇ ತರಗತಿಯವರೆಗೆ ಮಾತ್ರ. ಅಪಾರ ಓದು, ಸೂಕ್ಷ್ಮಗ್ರಾಹಿತ್ವ, ಸುತ್ತಮುತ್ತಲ ಪರಿಸರದ ಕುರಿತಂತೆ ತೀರದ ಕುತೂಹಲ ಅವರನ್ನು ಸಾಹಿತಿಯಾಗಿಸಿತ್ತು.

ಕರ್ನಾಟಕ – ಕೇರಳದ ಗಡಿಭಾಗದಲ್ಲಿರುವ ಪೊಯ್ಯತ್ತಬೈಲ್ ಎಂಬಲ್ಲಿ ಧಾರ್ಮಿಕ ಶಿಕ್ಷಣ ಕಲಿಯುತ್ತಿದ್ದ ಕಾಲದಲ್ಲಿ ಹಿರಿಯ ಸಾಹಿತಿ, ಸಂಶೋಧಕ ಬಿ.ಎಂ. ಇಚ್ಲಂಗೋಡು ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ “ತವನಿಧಿ” ಪತ್ರಿಕೆಯಲ್ಲಿ ಸೂಫಿಗಳ ಸುಲ್ತಾನ ಬಗ್ದಾದಿನ ಶೇಖ್ ಮುಹಿಯುದ್ದೀನರ ಬದುಕಿನ ಕುರಿತಂತೆ ಫೈಝಿಯವರ ಮೊದಲ ಲೇಖನ ಪ್ರಕಟವಾಯಿತು. ಅಲ್ಲಿಂದ ಮುಂದೆ ದಣಿವರಿಯದೇ ಬರೆಯತೊಡಗಿದರು.
ಕೇರಳದ ಪಟ್ಟಿಕ್ಕಾಡ್ ಎಂಬಲ್ಲಿನ ಜಾಮಿಯಾ ನೂರಿಯಾ ಇಸ್ಲಾಮಿಯಾ ಎಂಬ ಇಸ್ಲಾಮಿಕ್ ವಿದ್ಯಾಲಯದಿಂದ ಫೈಝಿ ಪದವಿ ಪಡೆದು ಮಸೀದಿಯಲ್ಲಿ ಮೌಲ್ವಿ ಉದ್ಯೋಗಕ್ಕೆ ನಿಂತರೂ ಸಾಹಿತ್ಯದೆಡೆಗಿನ ಒಲವು ಕಡಿಮೆಯಾಗಲಿಲ್ಲ. ಮಸೀದಿಯಲ್ಲಿ ಇಮಾಮರಾಗಿದ್ದಾಗಲೇ ’ಅಲ್-ಮುನೀರ್’ ಎಂಬ ಪತ್ರಿಕೆಯೊಂದನ್ನು ಹೊರತರುತ್ತಿದ್ದರು. ಅಲ್ಪಕಾಲದಲ್ಲೇ ಪತ್ರಿಕೆ ಆರ್ಥಿಕ ಅಡಚಣೆಯಿಂದ ಮುಚ್ಚಿಹೋಯಿತು.

1991ರಲ್ಲಿ ಇಬ್ರಾಹಿಂ ಬಾವ ಹಾಜಿ ಎಂಬವರು ಪ್ರಾರಂಭಿಸಿದ ಮುಸ್ಲಿಂ ಸಾಮಾಜಿಕ – ಧಾರ್ಮಿಕ ವಾರಪತ್ರಿಕೆಗೆ ಫೈಝಿಯವರನ್ನು ಸಂಪಾದಕರಾಗಿ ನೇಮಕ ಮಾಡಿದರು. ಮೂರು ವರ್ಷಗಳ ಕಾಲ ಹೆಚ್ಚುಕಡಿಮೆ ಏಕಾಂಗಿಯಾಗಿ ಇಡೀ ಪತ್ರಿಕೆಯನ್ನು ಅತ್ಯಂತ ಜತನದಿಂದ ಮತ್ತು ಜಾಣ್ಮೆಯಿಂದ ನಡೆಸಿದರು. ಆ ಕಾಲದಲ್ಲಿ ಮುಸ್ಲಿಂ ಬರಹಗಾರರ ಸಂಖ್ಯೆ ಬಹಳ ಕಡಿಮೆಯಿತ್ತು. ಹಾಗೆ ಕೆಲವು ಬರಹಗಾರರಿದ್ದರೂ ಅಲ್-ಅನ್ಸಾರ್ ಪತ್ರಿಕೆಯ ಚೌಕಟ್ಟಿನುಸಾರ ಬರೆಯುವವರ ಸಂಖ್ಯೆ ತೀರಾ ವಿರಳವಿತ್ತು. ಆ ಕಾಲದಲ್ಲಿ ಫೈಝಿಯೊಬ್ಬರೇ ಬಹುತೇಕ ಬರಹಗಳನ್ನು ಬೇರೆಬೇರೆ ಹೆಸರುಗಳಲ್ಲಿ ಪ್ರಕಟಿಸಿ ಪತ್ರಿಕೆಗೆ ಜೀವ ತುಂಬುತ್ತಿದ್ದರು. ಪತ್ರಿಕೆಯ ಮುಖಪುಟವು ಸಮಕಾಲೀನ ರಾಜಕೀಯ ವಿಶ್ಲೇಷಣೆಗೆ ಮೀಸಲಾದರೆ, ಒಳಪುಟಗಳಲ್ಲಿ ಇಸ್ಲಾಮೀ ಕರ್ಮಶಾಸ್ತ್ರ್ರ, ಧಾರಾವಾಹಿ, ಪ್ರಶ್ನೋತ್ತರ, ಪದಬಂಧ ಇತ್ಯಾದಿಗಳನ್ನೊಳಗೊಂಡು ಪ್ರಬುದ್ಧ ಪತ್ರಿಕೆಯಾಗಿ ಮುಸ್ಲಿಂ ಓದುಗ ವಲಯದಲ್ಲಿ ಜನಪ್ರಿಯವಾಯಿತು. ಮುಂದೆ ಕನ್ನಡದಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಂ ಬರಹಗಾರರು ಹೊರಬರಲು ಅಲ್-ಅನ್ಸಾರ್ ಪತ್ರಿಕೆಯ ಕೊಡುಗೆಯೂ ದೊಡ್ಡದಿದೆ ಎಂದರೆ ತಪ್ಪಾಗದು.

ಫೈಝಿ ಓರ್ವ ಧಾರ್ಮಿಕ ಸಾಹಿತಿಯಾಗಿ ಮಾತ್ರ ಉಳಿಯಲಿಲ್ಲ. 1994ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ ಅವರ ಕಾರು ಅತಿ ವೇಗವಾಗಿ ಚಲಾಯಿಸಿ ರಸ್ತೆಬದಿಯಲ್ಲಿದ್ದ ಬಡಪಾಯಿಯ ಸಾವಿಗೆ ಕಾರಣವಾಗಿತ್ತು. ಅಷ್ಟುಹೊತ್ತಿಗೆ ಸಂಪಾದಕ ಸ್ಥಾನ ಕೈತಪ್ಪಿದ್ದರಿಂದ ಅಲ್-ಅನ್ಸಾರ್‌ನಲ್ಲಿ ಕರುಣಾಕರನ್ ಅವರ ಬೇಜವಾಬ್ದಾರಿಯನ್ನು ವಿರೋಧಿಸಿ ಬರೆಯಲಾಗದ್ದಕ್ಕೆ ಲಂಕೇಶ್ ಪತ್ರಿಕೆಯಲ್ಲ್ಲಿ ಬರೆದು ತನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದರು.

ಸಾಮಾನ್ಯವಾಗಿ ದ.ಕ. ಮತ್ತು ಕೊಡಗು ಜಿಲ್ಲೆಯ ಹೆಚ್ಚಿನವರು ಧಾರ್ಮಿಕ ಪದವಿಗಾಗಿ ಕೇರಳದ ವಿದ್ಯಾಲಯಗಳನ್ನು ಆಶ್ರಯಿಸುತ್ತಾರೆ. ಆದುದರಿಂದ ಅವರ ಕನ್ನಡ ಬರಹಗಳಲ್ಲಿ ಮಲ್ಗನ್ನಡ ಪದಗಳು (ಮಲಯಾಳಂ+ಕನ್ನಡ) ಯಥೇಚ್ಛವಾಗಿ ಕಾಣಸಿಗುತ್ತವೆ. ಫೈಝಿಯವರು ಕೇರಳದಲ್ಲಿ ಕಲಿತವರಾದರೂ ಅವರ ಬರಹಗಳಲ್ಲಿ ದುರ್ಬೀನು ಹಿಡಿದು ಹುಡುಕಿದರೂ ಮಲ್ಗನ್ನಡ ಪದ ಸಿಗಲಾರದು. ಸಂಪಾದಕ ದ್ದೆ ಕೈತಪ್ಪಿದ ಬಳಿಕ ಒಂಭತ್ತು ವರ್ಷಗಳ ಕಾಲ ಹೊರಗಿಂದಲೇ ಅಲ್-ಅನ್ಸಾರ್‌ಗೆ ಲೇಖನಗಳನ್ನು ಬರೆಯುತ್ತಿದ್ದರು.
೨೦೦೯ರಲ್ಲ್ಲಿ ಮದರಂಗಿ ಎಂಬ ಮಾಸಿಕ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡರು. ಅವರ ಸಂಪಾದಕತ್ವದಲ್ಲಿ ಮದರಂಗಿ ಮಾಸಿಕ ಕರಾವಳಿ ಮುಸ್ಲಿಮರ ವಲಯದಲ್ಲಿ ಬಹಳ ಜನಪ್ರಿಯವಾಯಿತು. ೨೦೧೦ರ ಮಾರ್ಚ್ ತಿಂಗಳಲ್ಲಿ ಅವರೊಂದು ಅದ್ಭುತ ಸಂಪಾದಕೀಯ ಬರೆದಿದ್ದರು. “ಮಧುಮಾಸದ ಮಧುರಿಮೆ” ಎಂಬ ಶೀರ್ಷಿಕೆಯ ಆ ಸಂಪಾದಕೀಯದ ಪ್ರತಿಯೊಂದು ಪದವೂ “ಮ”ಕಾರದಿಂದ ಪ್ರಾರಂಭವಾಗಿತ್ತು. ಕನ್ನಡ ಪತ್ರಿಕೋದ್ಯಮದಲ್ಲಿ ಅದೊಂದು ವಿಶಿಷ್ಟ ಪ್ರಯೋಗವಾಗಿತ್ತು.
ಮದರಂಗಿಯಲ್ಲಿ ಅವರು ಬರೆಯುತ್ತಿದ್ದ “ಶಮ್ಮಿ ಕಾಲಮ”ನ್ನು ಮೊನ್ನೆ ಅವರಲ್ಲಿ ಮಾತಾಡುವವರೆಗೂ ಅದು ಹೆಣ್ಣೊಬ್ಬಳು ಬರೆಯುತ್ತಿದ್ದ ಅಂಕಣವೆಂದೇ ನಂಬಿದ್ದೆ. ಆ ಮಟ್ಟಿಗೆ ಹೆಣ್ಣೊಬ್ಬಳ ತುಮುಲವನ್ನು ಪರಿಣಾಮಕಾರಿಯಾಗಿ ಬರೆಯುತ್ತಿದ್ದರು.

ಫೈಝಿ ತನ್ನ ಬರಹದ ಆರಂಭಕಾಲದಿಂದಲೂ ವರದಕ್ಷಿಣೆ ಎಂಬ ಮಹಾಮಾರಿಯ ವಿರುದ್ಧ ಲೇಖನಿ ಝಳಪಿಸುತ್ತಾ ಬಂದಿದ್ದಾರೆ. ಕರಾವಳಿಯ ಮುಸ್ಲಿಂ ಸಮುದಾಯದೊಳಗೆ ಹಾಸುಹೊಕ್ಕಾಗಿದ್ದ ಮೌಢ್ಯಗಳ ವಿರುದ್ಧ ತನ್ನ ಬರಹಗಳ ಮೂಲಕ ಸಮರ ಸಾರಿದ್ದರು. ವಾಸ್ತು ಎಂಬ ಮನೆ ಒಡೆಯುವ ಹುಚ್ಚಾಟದಿಂದ ಮುಸ್ಲಿಂ ಸಮುದಾಯವೂ ಹೊರತಾಗಿರಲಿಲ್ಲ. ಅದರ ವಿರುದ್ಧ ಬರೆದಿದ್ದ “ವಾಸ್ತು-ವಾಸ್ತವವೇನು?” ಎಂಬ ಸರಣಿ ಬರಹಗಳು ಮುಸ್ಲಿಂ ವಾಸ್ತುತಜ್ಞರ ನಿದ್ದೆಗೆಡಿಸಿತ್ತು. ವಾಸ್ತು ಇಸ್ಲಾಮಿನಲ್ಲಿ ಇಲ್ಲವೇ ಇಲ್ಲ ಎಂದು ಖುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ವಾಸ್ತುತಜ್ಞರ ಹುನ್ನಾರವನ್ನು ಬಯಲಿಗೆಳೆದು ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾಗಿದ್ದರು. ಕರಾವಳಿಯ ಮುಸ್ಲಿಂ ಸಮುದಾಯದಲ್ಲಿ ವಾಸ್ತುವಿನ ಹುಚ್ಚು ಇಂದು ವಿರಳವಾಗಿದ್ದರೆ ಅದರ ಹಿಂದೆ ಫೈಝಿಯವರ ಬರಹದ ಪ್ರಭಾವವಿದೆ.

ಅವರ ಬರಹಗಳಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವ, ಚಿಂತನೆಗೆ ಹಚ್ಚುವ ಮತ್ತು ತಿದ್ದುವ ಶಕ್ತಿ ಇದೆ. ಪ್ರವಾದಿ ಮುಹಮ್ಮದ್ (ಸ): ಬದುಕು ಮತ್ತು ಆದರ್ಶ, ಗುಹೆಯಲ್ಲಿ ಹುಟ್ಟಿದ ಅದ್ಭುತ ಶಿಶು, ಕನಸಿನ ರಾಜ, ಸೇಬು ತಿಂದ ಹುಡುಗ, ಇಸ್ಲಾಮಿನ ಆಂತರ್ಯ, ಆಶುರಾ ಬೀಬಿ, ಲುಕ್ಮಾನುಲ್ ಹಕೀಂ, ಆಧುನಿಕ ವೈದ್ಯಶಾಸ್ತ್ರದ ಪಿತಾಮಹ ಇಬ್ನ್ ಸೀನಾ.. (ಅವಿಸ್ಸಿನ್ನಾ) ಹೀಗೆ ಸುಮಾರು ಇನ್ನೂರಕ್ಕೂ ಮಿಕ್ಕಿದ ಕೃತಿಗಳನ್ನು ಫೈಝಿ ರಚಿಸಿದ್ದಾರೆ. ಅವುಗಳಲ್ಲಿ ಮಲಯಾಳಂ ಮತ್ತು ಅರೆಬಿಕ್‌ನಿಂದ ಅನುವಾದಿಸಿದ ಗ್ರಂಥಗಳೂ ಸೇರಿವೆ. ಪ್ರಕಾಶಕರು ಅವರ ಕೃತಿಗಳನ್ನು ಮುಸ್ಲಿಂ ಧಾರ್ಮಿಕ ಸಮಾರಂಭಗಳಲ್ಲಿ ಮಾರಾಟ ಮಾಡಿ ಮುಗಿಸಿ ಲಾಭ ಗಳಿಸಿದರೇ ಹೊರತು ಕಾಸರಗೋಡು, ದ.ಕ. ಮತ್ತು ಕೊಡಗಿನಾಚೆಗೆ ತಲುಪಿಸುವ ಪ್ರಯತ್ನ ಮಾಡಲೇ ಇಲ್ಲ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ಕೂಡಾ ಬ್ಯಾರಿ ಸಮುದಾಯದ ಈ ಪ್ರತಿಭಾವಂತ ಹಿರಿಯ ಸಾಹಿತಿಯನ್ನು ಗುರುತಿಸದೇ ಇರುವುದು ಖೇದಕರ.


ಇದನ್ನೂ ಓದಿ: ದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...