Homeಅಂಕಣಗಳುಎಲೆಮರೆಯಿಂದಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ಕೂಡಾ ಬ್ಯಾರಿ ಸಮುದಾಯದ ಈ ಪ್ರತಿಭಾವಂತ ಹಿರಿಯ ಸಾಹಿತಿಯನ್ನು ಗುರುತಿಸದೇ ಇರುವುದು ಖೇದಕರ.

- Advertisement -
- Advertisement -

ಕೊರೊನಾ ಲಾಕ್‌ಡೌನ್‌ನಿಂದಾಗಿ ಮಸೀದಿ ಬಾಗಿಲುಗಳು ಮುಚ್ಚಲ್ಪಟ್ಟಾಗ ಮೌಲ್ವಿಗಳು ಅಕ್ಷರಶಃ ನಿರುದ್ಯೋಗಿಗಳಾಗಿಬಿಟ್ಟಿದ್ದರು. ಈ ದುರಿತ ಕಾಲದಲ್ಲಿ ಕೆಲವರು ಜೀವನೋಪಾಯಕ್ಕಾಗಿ ಬೇರೆ ಕಸುಬುಗಳತ್ತ ಮುಖ ಮಾಡಿದರೆ, ಅದರ ಕುರಿತಾಗಿಯೂ ಪರ ವಿರೋಧ ಚರ್ಚೆಗಳೇರ್ಪಡುತ್ತಿವೆ.

ಮೌಲ್ವಿಗಳೆಂದರೆ ಮಸೀದಿಗೇ ಸೀಮಿತವಾಗಿರಬೇಕು, ಅವರ ಉಡುಗೆ-ತೊಡುಗೆಗಳು, ವಿಚಾರಗಳು ಅವರಿಗೆಂದೇ ನಿಗದಿಪಡಿಸಿದ ಅಚ್ಚಿನೊಳಗೆ ಕೂರುವಂತಿರಬೇಕು ಎಂಬುವುದು ನಮ್ಮ ಸಮಾಜದ ಸಂಕುಚಿತ ಧೋರಣೆಯಾಗಿದೆ. ಈ ಅಂತರ್ಗತ ಪೂರ್ವಾಗ್ರಹಗಳಿಗೆ ಅಂಜಿಕೊಂಡು ಅವರು ತಮಗೆ ತಾವೇ ಒಂದು ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗಗಳ ನಡುವೆ ಕೇವಲ ಆರು ವರ್ಷಗಳ ಕಾಲವಷ್ಟೇ ಮಸೀದಿಯಲ್ಲಿ ಮೌಲ್ವಿಯಾಗಿ ಸೇವೆ ಸಲ್ಲಿಸಿ ಆ ಬಳಿಕ ಪೂರ್ಣಕಾಲಿಕವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬ್ಯಾರಿ-ಮುಸ್ಲಿಂ ಸಮುದಾಯದ ಅಪ್ರತಿಮ ಪ್ರತಿಭೆ, ಪ್ರಗತಿಪರ ನಿಲುವಿನ ವಿದ್ವಾಂಸ ಸಾಲೆತ್ತೂರು ಅಬೂಬಕರ್ ಫೈಝಿ ನೆನಪಾಗುತ್ತಾರೆ. ಇಸ್ಲಾಮನ್ನು ಕನ್ನಡದಲ್ಲಿ ತೆರೆದಿಟ್ಟ ಬೆರಳೆಣಿಕೆಯ ಮೊದಲ ಹಂತದ ಸಾಹಿತಿಗಳಲ್ಲಿ ಫೈಝಿ ಅಂಗ್ರಪಂಕ್ತಿಯಲ್ಲಿ ಕಾಣಸಿಗುತ್ತಾರೆ. ಇಸ್ಲಾಮಿನ ಬೇರೆ ಬೇರೆ ಪ್ರವಾದಿಗಳ, ಸೂಫಿಗಳ ಮತ್ತು ಇತಿಹಾಸಪುರುಷರ ಬದುಕಿನ ಚಿತ್ರಗಳನ್ನು ಸೃಜನಶೀಲ ಪ್ರಕಾರದಲ್ಲಿ ಕಟ್ಟಿಕೊಟ್ಟವರಲ್ಲಿ ಫೈಝಿ ಮೊದಲಿಗರು. ನನ್ನರಿವಿಗೆ ನಿಲುಕಿದಂತೆ ಕನ್ನಡದಲ್ಲಿ ಸಾಹಿತ್ಯವನ್ನೇ ಜೀವನೋಪಾಯವಾಗಿಸಿದ ವಿರಳಾತಿವಿರಳರಲ್ಲಿ ಶಿವರಾಮ ಕಾರಂತರು ಪ್ರಮುಖರಾಗಿದ್ದರು. ಅಂತೆಯೇ ಈ ಸಾಲೆತ್ತೂರು ಫೈಝಿಯವರಿಗೆ ಸಾಹಿತ್ಯವೇ ಜೀವನೋಪಾಯ. ಚಿಕ್ಕಂದಿನಲ್ಲಿ ಅಂಗಡಿಯವನು ದಿನಸಿ ಕಟ್ಟಿಕೊಡುತ್ತಿದ್ದ – ಓದಿದರೂ ತಲೆಬುಡ ಸಿಗದ ಪತ್ರಿಕೆಗಳ ತುಂಡು ಕಾಗದಗಳು, ಸಾಹಿತ್ಯಾಸಕ್ತರಾಗಿದ್ದ ಅಣ್ಣ ಮುಹಮ್ಮದರು ಓದಿ ಅಟ್ಟದಲ್ಲಿ ಕಟ್ಟಿಹಾಕಿದ್ದ ಕನ್ನಡ ಕಾದಂಬರಿಗಳು ಓದಿನ ದಾಹ ತಣಿಸುತ್ತಿದ್ದವು. ಉದಯವಾಣಿ ಪತ್ರಿಕೆಯ ಅಂದಿನ ಪ್ರಮುಖ ಅಂಕಣಕಾರರಾಗಿದ್ದ ಕು.ಶಿ.ಹರಿದಾಸ ಭಟ್ಟ, ಕಳ್ಳಿಗೆ ಮಹಾಬಲ ಭಂಡಾರಿ ಮತ್ತು ಬೈಕಾಡಿ ವೆಂಕಟಕೃಷ್ಣ ರಾಯರ ಲೇಖನಗಳು ಅವರ ಓದಿನ ಹರವನ್ನು ವಿಸ್ತರಿಸಿಕೊಳ್ಳಲು ನೆರವಾಯಿತು.

ಫೈಝಿ ಕಲಿತದ್ದು ಐದನೇ ತರಗತಿಯವರೆಗೆ ಮಾತ್ರ. ಅಪಾರ ಓದು, ಸೂಕ್ಷ್ಮಗ್ರಾಹಿತ್ವ, ಸುತ್ತಮುತ್ತಲ ಪರಿಸರದ ಕುರಿತಂತೆ ತೀರದ ಕುತೂಹಲ ಅವರನ್ನು ಸಾಹಿತಿಯಾಗಿಸಿತ್ತು.

ಕರ್ನಾಟಕ – ಕೇರಳದ ಗಡಿಭಾಗದಲ್ಲಿರುವ ಪೊಯ್ಯತ್ತಬೈಲ್ ಎಂಬಲ್ಲಿ ಧಾರ್ಮಿಕ ಶಿಕ್ಷಣ ಕಲಿಯುತ್ತಿದ್ದ ಕಾಲದಲ್ಲಿ ಹಿರಿಯ ಸಾಹಿತಿ, ಸಂಶೋಧಕ ಬಿ.ಎಂ. ಇಚ್ಲಂಗೋಡು ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ “ತವನಿಧಿ” ಪತ್ರಿಕೆಯಲ್ಲಿ ಸೂಫಿಗಳ ಸುಲ್ತಾನ ಬಗ್ದಾದಿನ ಶೇಖ್ ಮುಹಿಯುದ್ದೀನರ ಬದುಕಿನ ಕುರಿತಂತೆ ಫೈಝಿಯವರ ಮೊದಲ ಲೇಖನ ಪ್ರಕಟವಾಯಿತು. ಅಲ್ಲಿಂದ ಮುಂದೆ ದಣಿವರಿಯದೇ ಬರೆಯತೊಡಗಿದರು.
ಕೇರಳದ ಪಟ್ಟಿಕ್ಕಾಡ್ ಎಂಬಲ್ಲಿನ ಜಾಮಿಯಾ ನೂರಿಯಾ ಇಸ್ಲಾಮಿಯಾ ಎಂಬ ಇಸ್ಲಾಮಿಕ್ ವಿದ್ಯಾಲಯದಿಂದ ಫೈಝಿ ಪದವಿ ಪಡೆದು ಮಸೀದಿಯಲ್ಲಿ ಮೌಲ್ವಿ ಉದ್ಯೋಗಕ್ಕೆ ನಿಂತರೂ ಸಾಹಿತ್ಯದೆಡೆಗಿನ ಒಲವು ಕಡಿಮೆಯಾಗಲಿಲ್ಲ. ಮಸೀದಿಯಲ್ಲಿ ಇಮಾಮರಾಗಿದ್ದಾಗಲೇ ’ಅಲ್-ಮುನೀರ್’ ಎಂಬ ಪತ್ರಿಕೆಯೊಂದನ್ನು ಹೊರತರುತ್ತಿದ್ದರು. ಅಲ್ಪಕಾಲದಲ್ಲೇ ಪತ್ರಿಕೆ ಆರ್ಥಿಕ ಅಡಚಣೆಯಿಂದ ಮುಚ್ಚಿಹೋಯಿತು.

1991ರಲ್ಲಿ ಇಬ್ರಾಹಿಂ ಬಾವ ಹಾಜಿ ಎಂಬವರು ಪ್ರಾರಂಭಿಸಿದ ಮುಸ್ಲಿಂ ಸಾಮಾಜಿಕ – ಧಾರ್ಮಿಕ ವಾರಪತ್ರಿಕೆಗೆ ಫೈಝಿಯವರನ್ನು ಸಂಪಾದಕರಾಗಿ ನೇಮಕ ಮಾಡಿದರು. ಮೂರು ವರ್ಷಗಳ ಕಾಲ ಹೆಚ್ಚುಕಡಿಮೆ ಏಕಾಂಗಿಯಾಗಿ ಇಡೀ ಪತ್ರಿಕೆಯನ್ನು ಅತ್ಯಂತ ಜತನದಿಂದ ಮತ್ತು ಜಾಣ್ಮೆಯಿಂದ ನಡೆಸಿದರು. ಆ ಕಾಲದಲ್ಲಿ ಮುಸ್ಲಿಂ ಬರಹಗಾರರ ಸಂಖ್ಯೆ ಬಹಳ ಕಡಿಮೆಯಿತ್ತು. ಹಾಗೆ ಕೆಲವು ಬರಹಗಾರರಿದ್ದರೂ ಅಲ್-ಅನ್ಸಾರ್ ಪತ್ರಿಕೆಯ ಚೌಕಟ್ಟಿನುಸಾರ ಬರೆಯುವವರ ಸಂಖ್ಯೆ ತೀರಾ ವಿರಳವಿತ್ತು. ಆ ಕಾಲದಲ್ಲಿ ಫೈಝಿಯೊಬ್ಬರೇ ಬಹುತೇಕ ಬರಹಗಳನ್ನು ಬೇರೆಬೇರೆ ಹೆಸರುಗಳಲ್ಲಿ ಪ್ರಕಟಿಸಿ ಪತ್ರಿಕೆಗೆ ಜೀವ ತುಂಬುತ್ತಿದ್ದರು. ಪತ್ರಿಕೆಯ ಮುಖಪುಟವು ಸಮಕಾಲೀನ ರಾಜಕೀಯ ವಿಶ್ಲೇಷಣೆಗೆ ಮೀಸಲಾದರೆ, ಒಳಪುಟಗಳಲ್ಲಿ ಇಸ್ಲಾಮೀ ಕರ್ಮಶಾಸ್ತ್ರ್ರ, ಧಾರಾವಾಹಿ, ಪ್ರಶ್ನೋತ್ತರ, ಪದಬಂಧ ಇತ್ಯಾದಿಗಳನ್ನೊಳಗೊಂಡು ಪ್ರಬುದ್ಧ ಪತ್ರಿಕೆಯಾಗಿ ಮುಸ್ಲಿಂ ಓದುಗ ವಲಯದಲ್ಲಿ ಜನಪ್ರಿಯವಾಯಿತು. ಮುಂದೆ ಕನ್ನಡದಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಂ ಬರಹಗಾರರು ಹೊರಬರಲು ಅಲ್-ಅನ್ಸಾರ್ ಪತ್ರಿಕೆಯ ಕೊಡುಗೆಯೂ ದೊಡ್ಡದಿದೆ ಎಂದರೆ ತಪ್ಪಾಗದು.

ಫೈಝಿ ಓರ್ವ ಧಾರ್ಮಿಕ ಸಾಹಿತಿಯಾಗಿ ಮಾತ್ರ ಉಳಿಯಲಿಲ್ಲ. 1994ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ ಅವರ ಕಾರು ಅತಿ ವೇಗವಾಗಿ ಚಲಾಯಿಸಿ ರಸ್ತೆಬದಿಯಲ್ಲಿದ್ದ ಬಡಪಾಯಿಯ ಸಾವಿಗೆ ಕಾರಣವಾಗಿತ್ತು. ಅಷ್ಟುಹೊತ್ತಿಗೆ ಸಂಪಾದಕ ಸ್ಥಾನ ಕೈತಪ್ಪಿದ್ದರಿಂದ ಅಲ್-ಅನ್ಸಾರ್‌ನಲ್ಲಿ ಕರುಣಾಕರನ್ ಅವರ ಬೇಜವಾಬ್ದಾರಿಯನ್ನು ವಿರೋಧಿಸಿ ಬರೆಯಲಾಗದ್ದಕ್ಕೆ ಲಂಕೇಶ್ ಪತ್ರಿಕೆಯಲ್ಲ್ಲಿ ಬರೆದು ತನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದರು.

ಸಾಮಾನ್ಯವಾಗಿ ದ.ಕ. ಮತ್ತು ಕೊಡಗು ಜಿಲ್ಲೆಯ ಹೆಚ್ಚಿನವರು ಧಾರ್ಮಿಕ ಪದವಿಗಾಗಿ ಕೇರಳದ ವಿದ್ಯಾಲಯಗಳನ್ನು ಆಶ್ರಯಿಸುತ್ತಾರೆ. ಆದುದರಿಂದ ಅವರ ಕನ್ನಡ ಬರಹಗಳಲ್ಲಿ ಮಲ್ಗನ್ನಡ ಪದಗಳು (ಮಲಯಾಳಂ+ಕನ್ನಡ) ಯಥೇಚ್ಛವಾಗಿ ಕಾಣಸಿಗುತ್ತವೆ. ಫೈಝಿಯವರು ಕೇರಳದಲ್ಲಿ ಕಲಿತವರಾದರೂ ಅವರ ಬರಹಗಳಲ್ಲಿ ದುರ್ಬೀನು ಹಿಡಿದು ಹುಡುಕಿದರೂ ಮಲ್ಗನ್ನಡ ಪದ ಸಿಗಲಾರದು. ಸಂಪಾದಕ ದ್ದೆ ಕೈತಪ್ಪಿದ ಬಳಿಕ ಒಂಭತ್ತು ವರ್ಷಗಳ ಕಾಲ ಹೊರಗಿಂದಲೇ ಅಲ್-ಅನ್ಸಾರ್‌ಗೆ ಲೇಖನಗಳನ್ನು ಬರೆಯುತ್ತಿದ್ದರು.
೨೦೦೯ರಲ್ಲ್ಲಿ ಮದರಂಗಿ ಎಂಬ ಮಾಸಿಕ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡರು. ಅವರ ಸಂಪಾದಕತ್ವದಲ್ಲಿ ಮದರಂಗಿ ಮಾಸಿಕ ಕರಾವಳಿ ಮುಸ್ಲಿಮರ ವಲಯದಲ್ಲಿ ಬಹಳ ಜನಪ್ರಿಯವಾಯಿತು. ೨೦೧೦ರ ಮಾರ್ಚ್ ತಿಂಗಳಲ್ಲಿ ಅವರೊಂದು ಅದ್ಭುತ ಸಂಪಾದಕೀಯ ಬರೆದಿದ್ದರು. “ಮಧುಮಾಸದ ಮಧುರಿಮೆ” ಎಂಬ ಶೀರ್ಷಿಕೆಯ ಆ ಸಂಪಾದಕೀಯದ ಪ್ರತಿಯೊಂದು ಪದವೂ “ಮ”ಕಾರದಿಂದ ಪ್ರಾರಂಭವಾಗಿತ್ತು. ಕನ್ನಡ ಪತ್ರಿಕೋದ್ಯಮದಲ್ಲಿ ಅದೊಂದು ವಿಶಿಷ್ಟ ಪ್ರಯೋಗವಾಗಿತ್ತು.
ಮದರಂಗಿಯಲ್ಲಿ ಅವರು ಬರೆಯುತ್ತಿದ್ದ “ಶಮ್ಮಿ ಕಾಲಮ”ನ್ನು ಮೊನ್ನೆ ಅವರಲ್ಲಿ ಮಾತಾಡುವವರೆಗೂ ಅದು ಹೆಣ್ಣೊಬ್ಬಳು ಬರೆಯುತ್ತಿದ್ದ ಅಂಕಣವೆಂದೇ ನಂಬಿದ್ದೆ. ಆ ಮಟ್ಟಿಗೆ ಹೆಣ್ಣೊಬ್ಬಳ ತುಮುಲವನ್ನು ಪರಿಣಾಮಕಾರಿಯಾಗಿ ಬರೆಯುತ್ತಿದ್ದರು.

ಫೈಝಿ ತನ್ನ ಬರಹದ ಆರಂಭಕಾಲದಿಂದಲೂ ವರದಕ್ಷಿಣೆ ಎಂಬ ಮಹಾಮಾರಿಯ ವಿರುದ್ಧ ಲೇಖನಿ ಝಳಪಿಸುತ್ತಾ ಬಂದಿದ್ದಾರೆ. ಕರಾವಳಿಯ ಮುಸ್ಲಿಂ ಸಮುದಾಯದೊಳಗೆ ಹಾಸುಹೊಕ್ಕಾಗಿದ್ದ ಮೌಢ್ಯಗಳ ವಿರುದ್ಧ ತನ್ನ ಬರಹಗಳ ಮೂಲಕ ಸಮರ ಸಾರಿದ್ದರು. ವಾಸ್ತು ಎಂಬ ಮನೆ ಒಡೆಯುವ ಹುಚ್ಚಾಟದಿಂದ ಮುಸ್ಲಿಂ ಸಮುದಾಯವೂ ಹೊರತಾಗಿರಲಿಲ್ಲ. ಅದರ ವಿರುದ್ಧ ಬರೆದಿದ್ದ “ವಾಸ್ತು-ವಾಸ್ತವವೇನು?” ಎಂಬ ಸರಣಿ ಬರಹಗಳು ಮುಸ್ಲಿಂ ವಾಸ್ತುತಜ್ಞರ ನಿದ್ದೆಗೆಡಿಸಿತ್ತು. ವಾಸ್ತು ಇಸ್ಲಾಮಿನಲ್ಲಿ ಇಲ್ಲವೇ ಇಲ್ಲ ಎಂದು ಖುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ವಾಸ್ತುತಜ್ಞರ ಹುನ್ನಾರವನ್ನು ಬಯಲಿಗೆಳೆದು ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾಗಿದ್ದರು. ಕರಾವಳಿಯ ಮುಸ್ಲಿಂ ಸಮುದಾಯದಲ್ಲಿ ವಾಸ್ತುವಿನ ಹುಚ್ಚು ಇಂದು ವಿರಳವಾಗಿದ್ದರೆ ಅದರ ಹಿಂದೆ ಫೈಝಿಯವರ ಬರಹದ ಪ್ರಭಾವವಿದೆ.

ಅವರ ಬರಹಗಳಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವ, ಚಿಂತನೆಗೆ ಹಚ್ಚುವ ಮತ್ತು ತಿದ್ದುವ ಶಕ್ತಿ ಇದೆ. ಪ್ರವಾದಿ ಮುಹಮ್ಮದ್ (ಸ): ಬದುಕು ಮತ್ತು ಆದರ್ಶ, ಗುಹೆಯಲ್ಲಿ ಹುಟ್ಟಿದ ಅದ್ಭುತ ಶಿಶು, ಕನಸಿನ ರಾಜ, ಸೇಬು ತಿಂದ ಹುಡುಗ, ಇಸ್ಲಾಮಿನ ಆಂತರ್ಯ, ಆಶುರಾ ಬೀಬಿ, ಲುಕ್ಮಾನುಲ್ ಹಕೀಂ, ಆಧುನಿಕ ವೈದ್ಯಶಾಸ್ತ್ರದ ಪಿತಾಮಹ ಇಬ್ನ್ ಸೀನಾ.. (ಅವಿಸ್ಸಿನ್ನಾ) ಹೀಗೆ ಸುಮಾರು ಇನ್ನೂರಕ್ಕೂ ಮಿಕ್ಕಿದ ಕೃತಿಗಳನ್ನು ಫೈಝಿ ರಚಿಸಿದ್ದಾರೆ. ಅವುಗಳಲ್ಲಿ ಮಲಯಾಳಂ ಮತ್ತು ಅರೆಬಿಕ್‌ನಿಂದ ಅನುವಾದಿಸಿದ ಗ್ರಂಥಗಳೂ ಸೇರಿವೆ. ಪ್ರಕಾಶಕರು ಅವರ ಕೃತಿಗಳನ್ನು ಮುಸ್ಲಿಂ ಧಾರ್ಮಿಕ ಸಮಾರಂಭಗಳಲ್ಲಿ ಮಾರಾಟ ಮಾಡಿ ಮುಗಿಸಿ ಲಾಭ ಗಳಿಸಿದರೇ ಹೊರತು ಕಾಸರಗೋಡು, ದ.ಕ. ಮತ್ತು ಕೊಡಗಿನಾಚೆಗೆ ತಲುಪಿಸುವ ಪ್ರಯತ್ನ ಮಾಡಲೇ ಇಲ್ಲ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ಕೂಡಾ ಬ್ಯಾರಿ ಸಮುದಾಯದ ಈ ಪ್ರತಿಭಾವಂತ ಹಿರಿಯ ಸಾಹಿತಿಯನ್ನು ಗುರುತಿಸದೇ ಇರುವುದು ಖೇದಕರ.


ಇದನ್ನೂ ಓದಿ: ದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...