Homeಆರೋಗ್ಯಏಡ್ಸ್ ರೋಗಕ್ಕೆ ಪತ್ತೆಯಾಯ್ತಾ ‘ಕಂಪ್ಲೀಟ್ ಕ್ಯೂರ್’ ಚಿಕಿತ್ಸೆ?

ಏಡ್ಸ್ ರೋಗಕ್ಕೆ ಪತ್ತೆಯಾಯ್ತಾ ‘ಕಂಪ್ಲೀಟ್ ಕ್ಯೂರ್’ ಚಿಕಿತ್ಸೆ?

- Advertisement -
- Advertisement -

ವಿಶ್ವದಾದ್ಯಂತ ಮೂರೂವರೆ ಕೋಟಿಗು ಹೆಚ್ಚು ಜನರ ಬದುಕನ್ನು ಯಾತನಮಯವಾಗಿಸಿರುವ ಏಡ್ಸ್ ಮಹಾಮಾರಿಗೆ ಕೊನೆಗೂ ಸಂಪೂರ್ಣ ಗುಣ ಮಾಡುವ ಚಿಕಿತ್ಸೆ ಲಭ್ಯವಾಯಿತೇ? ಟೆಂಪಲ್ ಯೂನಿವರ್ಸಿಟಿ ಮತ್ತು ನೆಬ್ರಾಸ್ಕಾ ಮೆಡಿಕಲ್ ಸೆಂಟರ್ ಯೂನಿವರ್ಸಿಟಿಯ ವಿಜ್ಞಾನಿಗಳು ಜಂಟಿಯಾಗಿ ನಡೆಸಿದ ಸಂಶೋಧನೆ ಮತ್ತು ಅದಕ್ಕೆ ಸಿಕ್ಕಿರುವ ಫಲಿತಾಂಶ ಇಂತದ್ದೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ಜುಲೈ 2ರಂದು Nature Communications ವೈದ್ಯಕೀಯ ಜರ್ನಲ್‍ನಲ್ಲಿ ಪ್ರಕಟಿಸಿರುವಂತೆ ಏಡ್ಸ್ ತಂದೊಡ್ಡುವ ಎಚ್.ಐ.ವಿ ವೈರಸ್ ಅನ್ನು ಜೀವಿಯ ದೇಹದಿಂದ ಸಂಪೂರ್ಣವಾಗಿ ನಿವಾರಿಸುವ ಚಿಕಿತ್ಸಾ ವಿಧಾನವನ್ನು ಕಂಡುಹಿಡಿದಿರುವುದಾಗಿ’ ವಿಜ್ಞಾನಿಗಳು ಘೋಷಿಸಿದ್ದಾರೆ. ಟೆಂಪಲ್ ಯೂನಿವರ್ಸಿಟಿಯ ನ್ಯೂರೋವೈರಾಲಜಿ ಸೆಂಟರ್‍ನ ನಿರ್ದೇಶಕ ಡಾ. ಕಮೆಲ್ ಖಲೀಲಿ ಮತ್ತು ನೆಬ್ರಾಸ್ಕಾ ಮೆಡಿಕಲ್ ಸೆಂಟರ್‍ನ ನ್ಯೂರೋ ಡೀಜನೆರೇಟಿವ್ ಡಿಸೀಸ್ ವಿಭಾಗದ ನಿರ್ದೇಶಕ ಹೊವಾರ್ಡ್ ಜೆಂಡಲ್‍ಮನ್ ನೇತೃತ್ವದಲ್ಲಿ ಈ ಸಂಶೋಧನೆ ನಡೆದಿದೆ.

ಎಚ್.ಐ.ವಿ ವೈರಸ್‍ನ ವರ್ಣತಂತುಗಳನ್ನೇ ಮಾರ್ಪಾಡು ಮಾಡುವ ಜೀನ್ ಎಡಿಟಿಂಗ್ ಥೆರಪಿ ಮೂಲಕ ವೈರಸ್‍ನ ಸಂತಾನಾಭಿವೃದ್ಧಿಯನ್ನು ನಿರ್ಬಂಧಿಸಿ ಅದು ಕ್ರಮೇಣ ದೇಹದ ಕೋಶಗಳು ಮತ್ತು ಸೋಂಕಿತ ಪ್ರಾಣಿಯ ಅಂಗಾಂಗಳಿಂದಲೇ ನಶಿಸಿಹೋಗುವಂತೆ ಈ ಚಿಕಿತ್ಸೆ ಮಾಡಲಿದೆ ಎನ್ನಲಾಗಿದೆ.

ಪ್ರಸ್ತುತ ಏಡ್ಸ್ ರೋಗಕ್ಕೆ `ಆ್ಯಂಟಿ-ರಿಟ್ರೋವೈರಲ್ ಥೆರಪಿ’ (ಎ.ಆರ್.ಟಿ) ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ, ಮಾನವನ ರಕ್ತದಲ್ಲಿ ಎಚ್.ಐ.ವಿ.ಯನ್ನು ಪತ್ತೆಹಚ್ಚಲಾಗದಷ್ಟು ಕನಿಷ್ಠ ಮಟ್ಟಕ್ಕೆ ಅದರ ಬೆಳವಣಿಗೆಯನ್ನು ಹತ್ತಿಕ್ಕಲಾಗುತ್ತಿದೆ. ಆದರೆ ಇದು ವೈರಸನ್ನು ಶಾಶ್ವತವಾಗಿ ದೇಹದಿಂದ ನಿರ್ಮೂಲನೆ ಮಾಡುವುದಿಲ್ಲ. ಅಂದರೆ, ಇದು ಶಾಶ್ವತ ಚಿಕಿತ್ಸೆಯಲ್ಲ, ರೋಗಿಯ ಜೀವಿತಾವಧಿಯನ್ನು ಸ್ವಲ್ಪವಷ್ಟೇ ಹಿಗ್ಗಿಸುವ ಪ್ರಯತ್ನ. ಎ.ಆರ್.ಟಿ ಚಿಕಿತ್ಸೆ ನೀಡುತ್ತಿರುವ ಸಮಯದಲ್ಲಿ ವೈರಸ್ ತಮ್ಮ ಆಕ್ರಮಣಕಾರಿ ಸಂತಾನಾಭಿವೃದ್ಧಿ ತಟಸ್ಥಗೊಳಿಸಿ ಅವಿತಿಟ್ಟುಕೊಂಡಿರುತ್ತದೆ. ಚಿಕಿತ್ಸೆ ನಿಲ್ಲುತ್ತಿದ್ದಂತೆಯೇ ವೈರಸ್ ಸಂಖ್ಯೆ ಉಲ್ಬಣಿಸಲು ಶುರುವಾಗುತ್ತಿತ್ತು.

ಎ.ಆರ್.ಟಿ ಚಿಕಿತ್ಸೆಯಿಂದಾಗಿ ರೋಗ ತಾತ್ಕಾಲಿಕವಾಗಿ ಉಪಶಮನಗೊಂಡ ತರುವಾಯ ಎಚ್.ಐ.ವಿ ವೈರಸ್ ಮತ್ತೆ ಉಲ್ಬಣಿಸಬೇಕೆಂದರೆ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಶೇಖರವಾಗಿರುತ್ತಿದ್ದ ವರ್ಣತಂತು ಘಟಕಗಳ ಜೊತೆಗೆ ಅದು ಸಂಯೋಜನೆಗೊಳ್ಳಬೇಕಿರುತ್ತದೆ. ಇಲ್ಲಿಯೇ, ವರ್ಷಗಟ್ಟಲೆ ಎ.ಆರ್.ಟಿ ಚಿಕಿತ್ಸೆಗೆ ಸ್ಪಂದಿಸದೆ ಎಚ್‍ಐವಿ ತನ್ನ ಸುಪ್ತ ಸ್ಥಿತಿಯಲ್ಲಿ ಅಡಗಿಕೊಳ್ಳಲು ಸಾಧ್ಯವಿರುವುದು.

ಡಾ. ಖಲೀಲಿಯವರ ತಂಡ CRISPR-Cas9 ತಂತ್ರಜ್ಞಾನದ ಮೂಲಕ ಇಂಥಾ ಸುಪ್ತ ಸ್ಥಿತಿಯಲ್ಲಿರುವ ಎಚ್.ಐ.ವಿ ವೈರಸ್‍ನ ವರ್ಣತಂತುಗಳನ್ನೇ ಮಾರ್ಪಾಡು ಮಾಡುವ ಪ್ರಯೋಗ ನಡೆಸಿದ್ದು ಅದೀಗ ಯಶಸ್ವಿಯಾಗಿದೆ. ಇಲಿಗಳನ್ನು ತಮ್ಮ ಪ್ರಯೋಗಕ್ಕೆ ಬಳಸಿಕೊಂಡಿರುವ ವಿಜ್ಞಾನಿಗಳು ಶೇ.33ರಷ್ಟು ಎಚ್.ಐ.ವಿ ಸೋಂಕಿತ ಇಲಿಗಳ ದೇಹದಿಂದ ಎಚ್.ಐ.ವಿ. ಡಿ.ಎನ್.ಎ ಅನ್ನೇ ಸಂಪೂರ್ಣವಾಗಿ ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಚಿಕಿತ್ಸೆ ಏಕಾಂಗಿಯಾಗಿ ಏಡ್ಸ್ ವೈರಸ್ ಅನ್ನು ನಿರ್ಮೂಲನೆ ಮಾಡದು, ಎ.ಆರ್.ಟಿ ಚಿಕಿತ್ಸೆಯ ಜೊತೆಗೆ ಇದನ್ನು ಪ್ರಯೋಗಿಸಿದರೆ ಯಶಸ್ಸು ಕಾಣಬಹುದು ಎಂದಿದ್ದಾರೆ ವಿಜ್ಞಾನಿಗಳು.

ಇದಕ್ಕೂ ಮೊದಲು ಇದೇ ನೆಬ್ರಾಸ್ಕಾ ಮೆಡಿಕಲ್ ಸೆಂಟರ್‍ನ ಸಂಶೋಧಕರುಗಳಾದ ಡಾ.ಜೆಂಡಲ್‍ಮನ್ ಮತ್ತು ಡಾ.ಬೆನ್ಸನ್ ಎಡಾಗ್ವಾ ಅವರು `ಲಾಂಗ್ ಆಕ್ಟಿಂಗ್ ಸ್ಲೋ-ಎಫೆಕ್ಟಿವ್ ರಿಲೀಸ್ (LASER) ಎ.ಆರ್.ಟಿ’ ಚಿಕಿತ್ಸೆಯನ್ನು ಶೋಧಿಸಿದ್ದರು. ಇದು ಸಹಾ ಎ.ಆರ್.ಟಿ.ಯಂತೆ ಏಡ್ಸ್ ರೋಗವನ್ನು ಸಂಪೂರ್ಣ ಗುಣಪಡಿಸದಿದ್ದರು ಮೇಲಿಂದ ಮೇಲೆ ಎಆರ್‍ಟಿ ಚಿಕಿತ್ಸೆ ಪಡೆಯುವ ಹೊರೆಯನ್ನು ತಪ್ಪಿಸಿತ್ತು. ಇದೀಗ ಈ LASER ಎ.ಆರ್.ಟಿ ಮತ್ತು CRISPR-Cas9 ತಂತ್ರಜ್ಞಾನಗಳ ಜಂಟಿ ಬಳಕೆಯ ಮೂಲಕ ಎಚ್.ಐ.ವಿ ರೋಗಾಣುವನ್ನು ಸಂಪೂರ್ಣವಾಗಿ ದೇಹದಿಂದ ನಾಶ ಪಡಿಸಲು ಸಾಧ್ಯ ಎನ್ನುವುದನ್ನು ಹೊಸ ಸಂಶೋಧನೆ ತೋರಿಸಿಕೊಟ್ಟಿದೆ.

ಇಲಿಗಳಲ್ಲಿ ಯಶಸ್ವಿಯಾಗಿರುವ ಈ ಪ್ರಯೋಗ ಮನುಷ್ಯನ ದೇಹದಲ್ಲಿ ಯಾವ ಪರಿಣಾಮ ಬೀರುತ್ತದೆ, ವರ್ಣತಂತುಗಳನ್ನೇ ಮಾರ್ಪಾಟು ಮಾಡುವ ಚಿಕಿತ್ಸೆಯಿಂದ ಏನಾದರು ಗಂಭೀರ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ ಎಂಬುದನ್ನು ಪರೀಕ್ಷೆಗೊಳಪಡಿಸುವುದಷ್ಟೇ ಈಗ ಬಾಕಿ ಉಳಿದಿರುವುದು. ಒಟ್ಟಿನಲ್ಲಿ ಏಡ್ಸ್ ರೋಗದ ವಿರುದ್ಧದ ವೈದ್ಯಕೀಯ ಹೋರಾಟದಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಶಾಶ್ವತ ಸಂಪೂರ್ಣ ಚಿಕಿತ್ಸೆ ಪತ್ತೆ ಮಾಡುವ ಗುರಿಗೆ ಸನಿಹವಾದಂತಾಗಿದೆ.

ಆಧಾರ: ಫಸ್ಟ್ ಪೋಸ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...