Homeಕರ್ನಾಟಕಮೈತ್ರಿ ಕಡೆಯಿಂದ ಎರಡು ಅಸ್ತ್ರ: ಶಾಸಕತ್ವದ ಅನರ್ಹತೆ, ಸಚಿವಗಿರಿಯ ಆಮಿಷ!

ಮೈತ್ರಿ ಕಡೆಯಿಂದ ಎರಡು ಅಸ್ತ್ರ: ಶಾಸಕತ್ವದ ಅನರ್ಹತೆ, ಸಚಿವಗಿರಿಯ ಆಮಿಷ!

- Advertisement -
- Advertisement -

ಸರ್ಕಾರ ಬೀಳುವ ಎಲ್ಲ ಲಕ್ಷಣಗಳು ಮೋಲ್ನೋಟಕ್ಕೆ ಮುಖಕ್ಕೆ ಹೊಡೆಯುತ್ತಿರುವ ವೇಳೆಯೂ, ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೊನೆ ಹಂತದ ರಕ್ಷಣೆಗೆ ಎಂಬಂತೆ ಎರಡು ಅಸ್ತ್ರಗಳನ್ನು 3 ಗಂಟೆ ಸುಮಾರಿಗೆ ಹೊರಬಿಟ್ಟಿದ್ದಾರೆ.

ಒಂದು, ರಾಜಿನಾಮೆ ನೀಡಿದ್ದೇವೆ ಎಂದು ಬಿಜೆಪಿ ಬಣದ ಜೊತೆ ಹೋಗಲು ಸಜ್ಜಾಗಿರುವ ಶಾಸಕರನ್ನು ಕಾನೂನಿನ ಅಸ್ತ್ರದಿಂದ ಬೆದರಿಸುವುದು. ಇನ್ನೊಂದು ನೀವು ಬಂದರೆ ನಿಮಗೆ ಸಚಿವಗಿರಿ (ಪರೋಕ್ಷವಾಗಿ ಇತರೆ ಸವಲತ್ತೂ ಸೇರಿ) ನೀಡುತ್ತೇವೆ ಎಂಬ ಪ್ರೀತಿಯ ಆಮಿಷ!

ಹಲವು ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಂವಿಧಾನದ ಶೆಡ್ಯೂಲ್ 10ರ ಪ್ಯಾರಾ 2ರ ಮೊರೆ ಹೋಗಿರುವ ಮೈತ್ರಿ ಬಣದ ನಾಯಕರು ಸೆಕ್ಷನ್ 164-1ಬಿ ಅಡಿ ಭಿನ್ನಮತದ ಬಾವುಟ ಹಾರಿಸಿರುವ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‍ಗೆ ದೂರು ನೀಡಲು ಸಜ್ಜಾಗಿದ್ದಾರೆ.

ಅಂತಹ ಸಂದೇಶವೊಂದನ್ನು ತೇಲಿ ಬಿಡುವ ಮೂಲಕ ಮುಂಬೈನ ಸೋಫಿಟೆಲ್ ಹೊಟೆಲ್‍ನಲ್ಲಿ ಕುಳಿತು ಕರ್ನಾಟಕದ ರಾಜಕೀಯ ಬೆಳವಣೆಗಳನ್ನು ಟಿವಿಯ ಮೂಲಕ ವೀಕ್ಷಿಸುತ್ತಿರುವ ಅತೃಪ್ತರಿಗೆ ಕಾನೂನಾತ್ಮಕ ಕ್ರಮದ ಗುಮ್ಮವನ್ನು ತೋರಿಸಿದ್ದಾರೆ. ಅಲ್ಲಿರುವ ಶಾಸಕರಿಗೆ ‘ಹಾಗೆಲ್ಲ ಮಾಡಲು ಆಗುವುದಿಲ್ಲ’ ಎಂದು ಬಿಜೆಪಿ ಅಭಯ ನೀಡುತ್ತಿರಬಹುದು. ಆದರೆ, ಕಳೆದ ವರ್ಷವಷ್ಟೇ ಹೆಚ್ಚೂ ಕಡಿಮೆ ಇದೇ ಮಾದರಿಯಲ್ಲಿ, ಇಂಥದ್ದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ 18 ಶಾಸಕರನ್ನು ಅನರ್ಹಗೊಳಿಸಿದ್ದು, ಅದನ್ನು ಅಲ್ಲಿನ ಕೋರ್ಟ್ ಮಾನ್ಯ ಮಾಡಿದ್ದು ಇನ್ನೂ ಹಚ್ಚ ಹಸಿರಾಗಿರುವಾಗ, ಅತೃಪ್ತ ಶಾಸಕರಲ್ಲಿ ಒಂದು ಅಳುಕಂತೂ ಮೂಡಿರಲು ಸಾಧ್ಯ.

ಈ ಸೆಕ್ಷನ್ ಅಳವಡಿಕೆ ಈಗಿನ ಸಂದರ್ಭದಲ್ಲಿ ಸಾಧ್ಯವೇ ಇಲ್ಲವೇ ಎಂಬುದು ಚರ್ಚೆಯ ವಿಷಯವೇ. ಆದರೆ ಸ್ಪೀಕರ್‍ಗೆ ಮನವರಿಕೆ ಮಾಡಲು, ಅದಕ್ಕೆ ತಕ್ಕ ಪುರಾವೆ ಒದಗಿಸಲು ಮೈತ್ರಿಬಣ ಯಶಸ್ವಿಯಾದರೆ, ರಾಜಿನಾಮೆ ಕೊಟ್ಟಿದ್ದೇವೆ ಎನ್ನುತ್ತಿರುವ ಶಾಸಕರ ಸದಸ್ಯತ್ವದ ಮೇಲೆ ತೂಗುಗತ್ತಿ ಗ್ಯಾರಂಟಿ. ಏಕೆಂದರೆ ಈಗ ಶಾಸಕರು ಸದನಕ್ಕೆ ರಾಜಿನಾಮೆ ಸಲ್ಲಿಸಿದ್ದಾರಷ್ಟೇ. ಅದೂ ಕೂಡ, ಇದನ್ನು ಅಂಗೀಕರಿಸುವ ಅಂತಿಮ ಅಧಿಕಾರವುಳ್ಳ ಸ್ಪೀಕರ್ ಕೈಗೆ ಅಧಿಕೃತವಾಗಿ ರಾಜಿನಾಮೆ ಪತ್ರಗಳು ತಲುಪಿಲ್ಲ. ಇದು ತಾಂತ್ರಿಕ ವಿಷಯವಾಗಿದ್ದರಿಮದ ಸ್ಪೀಕರ್ ವಿವೇಚನೆಯ ಮೇಲೆಯೇ ನಿಂತಿದೆ. ಈ ಅತೃಪ್ತರು ಪಕ್ಷಕ್ಕೆ ಇನ್ನೂ ರಾಜಿನಾಮೆ ನೀಡದೇ ಇರುವುದರಿಂದ ಉಭಯ ಪಕ್ಷಗಳು ಪಕ್ಷಾಂತರ ನಿಷೇಧ ಕಾನೂನಿನ ಅಡಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಬಹುದು. ಈ ಶಾಸಕರು ಬೇರೆ ಪಕ್ಷದೊಂದಿಗೆ ಗುರುತಿಸಿಕೊಂಡು ಮೂಲ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಿರೂಪಿಸಬೇಕು. ಇದು ಈಗಿನ ಪರಿಸ್ಥಿಯಲ್ಲಿ ಕೊಂಚ ಕಷ್ಟವಾದರೂ, ಶಾಸಕರಲ್ಲಿ ಮಾತ್ರ ಭಯ ಹುಟ್ಟಿಸಲು ಸಫಲವಾಗಿರಬಹುದು.

ಮೈತ್ರಿಯ ಉಭಯ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ಕರೆದು ವಿಪ್ ಜಾರಿ ಮಾಡಿದರೆ ಹಾಜರಾಗದ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‍ಗೆ ದೂರು ನೀಡಬಹುದು. ಅಷ್ಟರ ಮಟ್ಟಿಗೆ ಕಾನೂನಾತ್ಮಕ ಮೊದಲ ಅಸ್ತ್ರ ಶಾಸಕರಲ್ಲಿ ದಿಗಿಲು ಹುಟ್ಟಿಸುವಲ್ಲಿ ಸಫಲವಾಗಬಹುದು.

ಇನ್ನು ಎರಡನೇ ಅಸ್ತ್ರ ಬೆದರಿಕೆಯದ್ದಲ್ಲ, ಬದಲಿಗೆ ತಮ್ಮದೇ ಶಾಸಕರನ್ನು ರಮಿಸುವಂತದ್ದು. ಬನ್ನಿ ಬನ್ನಿ ಇಲ್ಲಿ ಸಚಿವ ಸಂಪುಟದ ಎಲ್ಲ ಸ್ಥಾನಗಳು ಖಾಲಿಯಿವೆ. ನಿಮಗೆಲ್ಲರಿಗೂ ಅವಕಾಶವಿದೆ ಎಂದು ಪ್ರತಿ ಆಹ್ವಾನ ನೀಡಲಾಗಿದೆ. ಅದಕ್ಕಾಗಿ ಎಲ್ಲ ಸಚಿವರ ರಾಜಿನಾಮೆ ಪಡೆದಿರುವುದಾಗಿ ಉಭಯ ಪಕ್ಷಗಳ ನಾಯಕರು ಅಧಿಕೃತವಾಗಿ ಘೋಷಿಸಿದ್ದಾರೆ.

ಮೊದಲ ಅಸ್ತ್ರಕ್ಕೆ ಬೆದರಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಕೆ. ಆರ್ ಪೇಟೆಯ ಶಾಸಕ ನಾರಾಯಣಗೌಡ ಥರದ ವೈಯಕ್ತಿಕ ವರ್ಚಸಿಲ್ಲದ ಶಾಸಕರು ಶರಣಾಗಿ ಹೇಗೂ ಸಚಿವ ಸ್ಥಾನ ಸಿಗಲಿದೆ ಎಂದು ಮಣಿಯಬಹುದು ಎಂದು ಮೈತ್ರಿ ಬಣ ಅಂದಾಜಿಸಿದೆ. ಸಚಿವರಾಗಲೆಂದೇ ಭಿನ್ನಮತ ಸಾರಿರುವ ರಾಮಲಿಂಗಾರೆಡ್ಡಿ, ಎಸ್‍ಟಿ ಸೋಮಶೇಖರ್, ಬೈರತಿ ಬಸವರಾಜ, ರಮೇಶ ಜಾರಕಿಹೊಳಿ ಥರದವರು ಖುಷಿಯಿಂದ ವಾಪಸ್ ಬರಬಹದೆಂಬ ನಿರೀಕ್ಷೆ ಮೈತ್ರಿಬಣದ್ದು.

ಆದರೆ ಇದೆಲ್ಲವು ಅಷ್ಟು ಸರಳವಾಗಿಲ್ಲ. ಸಂಕೀರ್ಣ ಕಾನೂನನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಕಾನೂನು ತಜ್ಞರಲ್ಲೇ ಭಿನ್ನಾಭಿಪ್ರಾಯ ಇವೆ. ಬಿಜೆಪಿ ಕೂಡ ಕಾನೂನು ಪಂಡಿತರೊಂದಿಗೆ ಸಮಾಲೋಚನೆ ನಡೆಸಿದ್ದು ಯಾವುದೇ ಅಪಾಯವಿಲ್ಲ ಎಂಬ ಭರವಸೆಯನ್ನು ನೀಡಲು ಸಫಲವಾದರೆ ಮಾತ್ರ ಅತೃಪ್ರಲ್ಲಿ ಧೈರ್ಯ ಬರಬಹುದು.

2006 ಮತ್ತು 2008ರ ಹಗ್ಗಜಗಾಟ ಮರುಕಳಿಸುವ ಎಲ್ಲ ಲಕ್ಷಣಗಳಿವೆ. ಸದ್ಯ ರಾಜಿನಾಮೆ ಕೊಟ್ಟ ಶಾಸಕರನ್ನು ಹೊರತುಪಡಿಸಿದರೆ ಬಿಜೆಪಿ ಸಂಖ್ಯೆ 106 ( ಪಕ್ಷೇತರ ನಾಗೇಶ ಸೇರಿದರೆ 107) ಇದ್ದರೆ ಮೈತ್ರ ಬಣದ ಸಂಖ್ಯೆ 104 ಇದೆ. ಈ ಲೆಕ್ಕಾಚಾರದಲ್ಲಿ ಕತ್ತಿಯಂಚಿನ ಸರಳ ಬಹುಮತವಷ್ಟೇ ಈಗ ಬಿಜೆಪಿಗೆ ಸಿಗುತ್ತದೆ. 104 ಸದಸ್ಯರನ್ನು ಹೊಂದಿರುವ ಮೈತ್ರಿ ಬಣವು ಆಪರೇಷನ್ ಶುರು ಮಾಡಿದರೆ ಮತ್ತೆ ಡೋಲಾಯಮಾನವೇ! 3 ಗಂಟೆಯ ನಂತರದ ಈ ಬೆಳವಣಿಗೆ ಈ ಅಧಿಕಾರದ ಆಟಕ್ಕೆ ಹೊಸ ತಿರುವನ್ನಂತೂ ನೀಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...