Homeಆರೋಗ್ಯಏಡ್ಸ್ ರೋಗಕ್ಕೆ ಪತ್ತೆಯಾಯ್ತಾ ‘ಕಂಪ್ಲೀಟ್ ಕ್ಯೂರ್’ ಚಿಕಿತ್ಸೆ?

ಏಡ್ಸ್ ರೋಗಕ್ಕೆ ಪತ್ತೆಯಾಯ್ತಾ ‘ಕಂಪ್ಲೀಟ್ ಕ್ಯೂರ್’ ಚಿಕಿತ್ಸೆ?

- Advertisement -
- Advertisement -

ವಿಶ್ವದಾದ್ಯಂತ ಮೂರೂವರೆ ಕೋಟಿಗು ಹೆಚ್ಚು ಜನರ ಬದುಕನ್ನು ಯಾತನಮಯವಾಗಿಸಿರುವ ಏಡ್ಸ್ ಮಹಾಮಾರಿಗೆ ಕೊನೆಗೂ ಸಂಪೂರ್ಣ ಗುಣ ಮಾಡುವ ಚಿಕಿತ್ಸೆ ಲಭ್ಯವಾಯಿತೇ? ಟೆಂಪಲ್ ಯೂನಿವರ್ಸಿಟಿ ಮತ್ತು ನೆಬ್ರಾಸ್ಕಾ ಮೆಡಿಕಲ್ ಸೆಂಟರ್ ಯೂನಿವರ್ಸಿಟಿಯ ವಿಜ್ಞಾನಿಗಳು ಜಂಟಿಯಾಗಿ ನಡೆಸಿದ ಸಂಶೋಧನೆ ಮತ್ತು ಅದಕ್ಕೆ ಸಿಕ್ಕಿರುವ ಫಲಿತಾಂಶ ಇಂತದ್ದೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ಜುಲೈ 2ರಂದು Nature Communications ವೈದ್ಯಕೀಯ ಜರ್ನಲ್‍ನಲ್ಲಿ ಪ್ರಕಟಿಸಿರುವಂತೆ ಏಡ್ಸ್ ತಂದೊಡ್ಡುವ ಎಚ್.ಐ.ವಿ ವೈರಸ್ ಅನ್ನು ಜೀವಿಯ ದೇಹದಿಂದ ಸಂಪೂರ್ಣವಾಗಿ ನಿವಾರಿಸುವ ಚಿಕಿತ್ಸಾ ವಿಧಾನವನ್ನು ಕಂಡುಹಿಡಿದಿರುವುದಾಗಿ’ ವಿಜ್ಞಾನಿಗಳು ಘೋಷಿಸಿದ್ದಾರೆ. ಟೆಂಪಲ್ ಯೂನಿವರ್ಸಿಟಿಯ ನ್ಯೂರೋವೈರಾಲಜಿ ಸೆಂಟರ್‍ನ ನಿರ್ದೇಶಕ ಡಾ. ಕಮೆಲ್ ಖಲೀಲಿ ಮತ್ತು ನೆಬ್ರಾಸ್ಕಾ ಮೆಡಿಕಲ್ ಸೆಂಟರ್‍ನ ನ್ಯೂರೋ ಡೀಜನೆರೇಟಿವ್ ಡಿಸೀಸ್ ವಿಭಾಗದ ನಿರ್ದೇಶಕ ಹೊವಾರ್ಡ್ ಜೆಂಡಲ್‍ಮನ್ ನೇತೃತ್ವದಲ್ಲಿ ಈ ಸಂಶೋಧನೆ ನಡೆದಿದೆ.

ಎಚ್.ಐ.ವಿ ವೈರಸ್‍ನ ವರ್ಣತಂತುಗಳನ್ನೇ ಮಾರ್ಪಾಡು ಮಾಡುವ ಜೀನ್ ಎಡಿಟಿಂಗ್ ಥೆರಪಿ ಮೂಲಕ ವೈರಸ್‍ನ ಸಂತಾನಾಭಿವೃದ್ಧಿಯನ್ನು ನಿರ್ಬಂಧಿಸಿ ಅದು ಕ್ರಮೇಣ ದೇಹದ ಕೋಶಗಳು ಮತ್ತು ಸೋಂಕಿತ ಪ್ರಾಣಿಯ ಅಂಗಾಂಗಳಿಂದಲೇ ನಶಿಸಿಹೋಗುವಂತೆ ಈ ಚಿಕಿತ್ಸೆ ಮಾಡಲಿದೆ ಎನ್ನಲಾಗಿದೆ.

ಪ್ರಸ್ತುತ ಏಡ್ಸ್ ರೋಗಕ್ಕೆ `ಆ್ಯಂಟಿ-ರಿಟ್ರೋವೈರಲ್ ಥೆರಪಿ’ (ಎ.ಆರ್.ಟಿ) ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ, ಮಾನವನ ರಕ್ತದಲ್ಲಿ ಎಚ್.ಐ.ವಿ.ಯನ್ನು ಪತ್ತೆಹಚ್ಚಲಾಗದಷ್ಟು ಕನಿಷ್ಠ ಮಟ್ಟಕ್ಕೆ ಅದರ ಬೆಳವಣಿಗೆಯನ್ನು ಹತ್ತಿಕ್ಕಲಾಗುತ್ತಿದೆ. ಆದರೆ ಇದು ವೈರಸನ್ನು ಶಾಶ್ವತವಾಗಿ ದೇಹದಿಂದ ನಿರ್ಮೂಲನೆ ಮಾಡುವುದಿಲ್ಲ. ಅಂದರೆ, ಇದು ಶಾಶ್ವತ ಚಿಕಿತ್ಸೆಯಲ್ಲ, ರೋಗಿಯ ಜೀವಿತಾವಧಿಯನ್ನು ಸ್ವಲ್ಪವಷ್ಟೇ ಹಿಗ್ಗಿಸುವ ಪ್ರಯತ್ನ. ಎ.ಆರ್.ಟಿ ಚಿಕಿತ್ಸೆ ನೀಡುತ್ತಿರುವ ಸಮಯದಲ್ಲಿ ವೈರಸ್ ತಮ್ಮ ಆಕ್ರಮಣಕಾರಿ ಸಂತಾನಾಭಿವೃದ್ಧಿ ತಟಸ್ಥಗೊಳಿಸಿ ಅವಿತಿಟ್ಟುಕೊಂಡಿರುತ್ತದೆ. ಚಿಕಿತ್ಸೆ ನಿಲ್ಲುತ್ತಿದ್ದಂತೆಯೇ ವೈರಸ್ ಸಂಖ್ಯೆ ಉಲ್ಬಣಿಸಲು ಶುರುವಾಗುತ್ತಿತ್ತು.

ಎ.ಆರ್.ಟಿ ಚಿಕಿತ್ಸೆಯಿಂದಾಗಿ ರೋಗ ತಾತ್ಕಾಲಿಕವಾಗಿ ಉಪಶಮನಗೊಂಡ ತರುವಾಯ ಎಚ್.ಐ.ವಿ ವೈರಸ್ ಮತ್ತೆ ಉಲ್ಬಣಿಸಬೇಕೆಂದರೆ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಶೇಖರವಾಗಿರುತ್ತಿದ್ದ ವರ್ಣತಂತು ಘಟಕಗಳ ಜೊತೆಗೆ ಅದು ಸಂಯೋಜನೆಗೊಳ್ಳಬೇಕಿರುತ್ತದೆ. ಇಲ್ಲಿಯೇ, ವರ್ಷಗಟ್ಟಲೆ ಎ.ಆರ್.ಟಿ ಚಿಕಿತ್ಸೆಗೆ ಸ್ಪಂದಿಸದೆ ಎಚ್‍ಐವಿ ತನ್ನ ಸುಪ್ತ ಸ್ಥಿತಿಯಲ್ಲಿ ಅಡಗಿಕೊಳ್ಳಲು ಸಾಧ್ಯವಿರುವುದು.

ಡಾ. ಖಲೀಲಿಯವರ ತಂಡ CRISPR-Cas9 ತಂತ್ರಜ್ಞಾನದ ಮೂಲಕ ಇಂಥಾ ಸುಪ್ತ ಸ್ಥಿತಿಯಲ್ಲಿರುವ ಎಚ್.ಐ.ವಿ ವೈರಸ್‍ನ ವರ್ಣತಂತುಗಳನ್ನೇ ಮಾರ್ಪಾಡು ಮಾಡುವ ಪ್ರಯೋಗ ನಡೆಸಿದ್ದು ಅದೀಗ ಯಶಸ್ವಿಯಾಗಿದೆ. ಇಲಿಗಳನ್ನು ತಮ್ಮ ಪ್ರಯೋಗಕ್ಕೆ ಬಳಸಿಕೊಂಡಿರುವ ವಿಜ್ಞಾನಿಗಳು ಶೇ.33ರಷ್ಟು ಎಚ್.ಐ.ವಿ ಸೋಂಕಿತ ಇಲಿಗಳ ದೇಹದಿಂದ ಎಚ್.ಐ.ವಿ. ಡಿ.ಎನ್.ಎ ಅನ್ನೇ ಸಂಪೂರ್ಣವಾಗಿ ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಚಿಕಿತ್ಸೆ ಏಕಾಂಗಿಯಾಗಿ ಏಡ್ಸ್ ವೈರಸ್ ಅನ್ನು ನಿರ್ಮೂಲನೆ ಮಾಡದು, ಎ.ಆರ್.ಟಿ ಚಿಕಿತ್ಸೆಯ ಜೊತೆಗೆ ಇದನ್ನು ಪ್ರಯೋಗಿಸಿದರೆ ಯಶಸ್ಸು ಕಾಣಬಹುದು ಎಂದಿದ್ದಾರೆ ವಿಜ್ಞಾನಿಗಳು.

ಇದಕ್ಕೂ ಮೊದಲು ಇದೇ ನೆಬ್ರಾಸ್ಕಾ ಮೆಡಿಕಲ್ ಸೆಂಟರ್‍ನ ಸಂಶೋಧಕರುಗಳಾದ ಡಾ.ಜೆಂಡಲ್‍ಮನ್ ಮತ್ತು ಡಾ.ಬೆನ್ಸನ್ ಎಡಾಗ್ವಾ ಅವರು `ಲಾಂಗ್ ಆಕ್ಟಿಂಗ್ ಸ್ಲೋ-ಎಫೆಕ್ಟಿವ್ ರಿಲೀಸ್ (LASER) ಎ.ಆರ್.ಟಿ’ ಚಿಕಿತ್ಸೆಯನ್ನು ಶೋಧಿಸಿದ್ದರು. ಇದು ಸಹಾ ಎ.ಆರ್.ಟಿ.ಯಂತೆ ಏಡ್ಸ್ ರೋಗವನ್ನು ಸಂಪೂರ್ಣ ಗುಣಪಡಿಸದಿದ್ದರು ಮೇಲಿಂದ ಮೇಲೆ ಎಆರ್‍ಟಿ ಚಿಕಿತ್ಸೆ ಪಡೆಯುವ ಹೊರೆಯನ್ನು ತಪ್ಪಿಸಿತ್ತು. ಇದೀಗ ಈ LASER ಎ.ಆರ್.ಟಿ ಮತ್ತು CRISPR-Cas9 ತಂತ್ರಜ್ಞಾನಗಳ ಜಂಟಿ ಬಳಕೆಯ ಮೂಲಕ ಎಚ್.ಐ.ವಿ ರೋಗಾಣುವನ್ನು ಸಂಪೂರ್ಣವಾಗಿ ದೇಹದಿಂದ ನಾಶ ಪಡಿಸಲು ಸಾಧ್ಯ ಎನ್ನುವುದನ್ನು ಹೊಸ ಸಂಶೋಧನೆ ತೋರಿಸಿಕೊಟ್ಟಿದೆ.

ಇಲಿಗಳಲ್ಲಿ ಯಶಸ್ವಿಯಾಗಿರುವ ಈ ಪ್ರಯೋಗ ಮನುಷ್ಯನ ದೇಹದಲ್ಲಿ ಯಾವ ಪರಿಣಾಮ ಬೀರುತ್ತದೆ, ವರ್ಣತಂತುಗಳನ್ನೇ ಮಾರ್ಪಾಟು ಮಾಡುವ ಚಿಕಿತ್ಸೆಯಿಂದ ಏನಾದರು ಗಂಭೀರ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ ಎಂಬುದನ್ನು ಪರೀಕ್ಷೆಗೊಳಪಡಿಸುವುದಷ್ಟೇ ಈಗ ಬಾಕಿ ಉಳಿದಿರುವುದು. ಒಟ್ಟಿನಲ್ಲಿ ಏಡ್ಸ್ ರೋಗದ ವಿರುದ್ಧದ ವೈದ್ಯಕೀಯ ಹೋರಾಟದಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಶಾಶ್ವತ ಸಂಪೂರ್ಣ ಚಿಕಿತ್ಸೆ ಪತ್ತೆ ಮಾಡುವ ಗುರಿಗೆ ಸನಿಹವಾದಂತಾಗಿದೆ.

ಆಧಾರ: ಫಸ್ಟ್ ಪೋಸ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...