Homeಆರೋಗ್ಯಏಡ್ಸ್ ರೋಗಕ್ಕೆ ಪತ್ತೆಯಾಯ್ತಾ ‘ಕಂಪ್ಲೀಟ್ ಕ್ಯೂರ್’ ಚಿಕಿತ್ಸೆ?

ಏಡ್ಸ್ ರೋಗಕ್ಕೆ ಪತ್ತೆಯಾಯ್ತಾ ‘ಕಂಪ್ಲೀಟ್ ಕ್ಯೂರ್’ ಚಿಕಿತ್ಸೆ?

- Advertisement -
- Advertisement -

ವಿಶ್ವದಾದ್ಯಂತ ಮೂರೂವರೆ ಕೋಟಿಗು ಹೆಚ್ಚು ಜನರ ಬದುಕನ್ನು ಯಾತನಮಯವಾಗಿಸಿರುವ ಏಡ್ಸ್ ಮಹಾಮಾರಿಗೆ ಕೊನೆಗೂ ಸಂಪೂರ್ಣ ಗುಣ ಮಾಡುವ ಚಿಕಿತ್ಸೆ ಲಭ್ಯವಾಯಿತೇ? ಟೆಂಪಲ್ ಯೂನಿವರ್ಸಿಟಿ ಮತ್ತು ನೆಬ್ರಾಸ್ಕಾ ಮೆಡಿಕಲ್ ಸೆಂಟರ್ ಯೂನಿವರ್ಸಿಟಿಯ ವಿಜ್ಞಾನಿಗಳು ಜಂಟಿಯಾಗಿ ನಡೆಸಿದ ಸಂಶೋಧನೆ ಮತ್ತು ಅದಕ್ಕೆ ಸಿಕ್ಕಿರುವ ಫಲಿತಾಂಶ ಇಂತದ್ದೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ಜುಲೈ 2ರಂದು Nature Communications ವೈದ್ಯಕೀಯ ಜರ್ನಲ್‍ನಲ್ಲಿ ಪ್ರಕಟಿಸಿರುವಂತೆ ಏಡ್ಸ್ ತಂದೊಡ್ಡುವ ಎಚ್.ಐ.ವಿ ವೈರಸ್ ಅನ್ನು ಜೀವಿಯ ದೇಹದಿಂದ ಸಂಪೂರ್ಣವಾಗಿ ನಿವಾರಿಸುವ ಚಿಕಿತ್ಸಾ ವಿಧಾನವನ್ನು ಕಂಡುಹಿಡಿದಿರುವುದಾಗಿ’ ವಿಜ್ಞಾನಿಗಳು ಘೋಷಿಸಿದ್ದಾರೆ. ಟೆಂಪಲ್ ಯೂನಿವರ್ಸಿಟಿಯ ನ್ಯೂರೋವೈರಾಲಜಿ ಸೆಂಟರ್‍ನ ನಿರ್ದೇಶಕ ಡಾ. ಕಮೆಲ್ ಖಲೀಲಿ ಮತ್ತು ನೆಬ್ರಾಸ್ಕಾ ಮೆಡಿಕಲ್ ಸೆಂಟರ್‍ನ ನ್ಯೂರೋ ಡೀಜನೆರೇಟಿವ್ ಡಿಸೀಸ್ ವಿಭಾಗದ ನಿರ್ದೇಶಕ ಹೊವಾರ್ಡ್ ಜೆಂಡಲ್‍ಮನ್ ನೇತೃತ್ವದಲ್ಲಿ ಈ ಸಂಶೋಧನೆ ನಡೆದಿದೆ.

ಎಚ್.ಐ.ವಿ ವೈರಸ್‍ನ ವರ್ಣತಂತುಗಳನ್ನೇ ಮಾರ್ಪಾಡು ಮಾಡುವ ಜೀನ್ ಎಡಿಟಿಂಗ್ ಥೆರಪಿ ಮೂಲಕ ವೈರಸ್‍ನ ಸಂತಾನಾಭಿವೃದ್ಧಿಯನ್ನು ನಿರ್ಬಂಧಿಸಿ ಅದು ಕ್ರಮೇಣ ದೇಹದ ಕೋಶಗಳು ಮತ್ತು ಸೋಂಕಿತ ಪ್ರಾಣಿಯ ಅಂಗಾಂಗಳಿಂದಲೇ ನಶಿಸಿಹೋಗುವಂತೆ ಈ ಚಿಕಿತ್ಸೆ ಮಾಡಲಿದೆ ಎನ್ನಲಾಗಿದೆ.

ಪ್ರಸ್ತುತ ಏಡ್ಸ್ ರೋಗಕ್ಕೆ `ಆ್ಯಂಟಿ-ರಿಟ್ರೋವೈರಲ್ ಥೆರಪಿ’ (ಎ.ಆರ್.ಟಿ) ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ, ಮಾನವನ ರಕ್ತದಲ್ಲಿ ಎಚ್.ಐ.ವಿ.ಯನ್ನು ಪತ್ತೆಹಚ್ಚಲಾಗದಷ್ಟು ಕನಿಷ್ಠ ಮಟ್ಟಕ್ಕೆ ಅದರ ಬೆಳವಣಿಗೆಯನ್ನು ಹತ್ತಿಕ್ಕಲಾಗುತ್ತಿದೆ. ಆದರೆ ಇದು ವೈರಸನ್ನು ಶಾಶ್ವತವಾಗಿ ದೇಹದಿಂದ ನಿರ್ಮೂಲನೆ ಮಾಡುವುದಿಲ್ಲ. ಅಂದರೆ, ಇದು ಶಾಶ್ವತ ಚಿಕಿತ್ಸೆಯಲ್ಲ, ರೋಗಿಯ ಜೀವಿತಾವಧಿಯನ್ನು ಸ್ವಲ್ಪವಷ್ಟೇ ಹಿಗ್ಗಿಸುವ ಪ್ರಯತ್ನ. ಎ.ಆರ್.ಟಿ ಚಿಕಿತ್ಸೆ ನೀಡುತ್ತಿರುವ ಸಮಯದಲ್ಲಿ ವೈರಸ್ ತಮ್ಮ ಆಕ್ರಮಣಕಾರಿ ಸಂತಾನಾಭಿವೃದ್ಧಿ ತಟಸ್ಥಗೊಳಿಸಿ ಅವಿತಿಟ್ಟುಕೊಂಡಿರುತ್ತದೆ. ಚಿಕಿತ್ಸೆ ನಿಲ್ಲುತ್ತಿದ್ದಂತೆಯೇ ವೈರಸ್ ಸಂಖ್ಯೆ ಉಲ್ಬಣಿಸಲು ಶುರುವಾಗುತ್ತಿತ್ತು.

ಎ.ಆರ್.ಟಿ ಚಿಕಿತ್ಸೆಯಿಂದಾಗಿ ರೋಗ ತಾತ್ಕಾಲಿಕವಾಗಿ ಉಪಶಮನಗೊಂಡ ತರುವಾಯ ಎಚ್.ಐ.ವಿ ವೈರಸ್ ಮತ್ತೆ ಉಲ್ಬಣಿಸಬೇಕೆಂದರೆ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಶೇಖರವಾಗಿರುತ್ತಿದ್ದ ವರ್ಣತಂತು ಘಟಕಗಳ ಜೊತೆಗೆ ಅದು ಸಂಯೋಜನೆಗೊಳ್ಳಬೇಕಿರುತ್ತದೆ. ಇಲ್ಲಿಯೇ, ವರ್ಷಗಟ್ಟಲೆ ಎ.ಆರ್.ಟಿ ಚಿಕಿತ್ಸೆಗೆ ಸ್ಪಂದಿಸದೆ ಎಚ್‍ಐವಿ ತನ್ನ ಸುಪ್ತ ಸ್ಥಿತಿಯಲ್ಲಿ ಅಡಗಿಕೊಳ್ಳಲು ಸಾಧ್ಯವಿರುವುದು.

ಡಾ. ಖಲೀಲಿಯವರ ತಂಡ CRISPR-Cas9 ತಂತ್ರಜ್ಞಾನದ ಮೂಲಕ ಇಂಥಾ ಸುಪ್ತ ಸ್ಥಿತಿಯಲ್ಲಿರುವ ಎಚ್.ಐ.ವಿ ವೈರಸ್‍ನ ವರ್ಣತಂತುಗಳನ್ನೇ ಮಾರ್ಪಾಡು ಮಾಡುವ ಪ್ರಯೋಗ ನಡೆಸಿದ್ದು ಅದೀಗ ಯಶಸ್ವಿಯಾಗಿದೆ. ಇಲಿಗಳನ್ನು ತಮ್ಮ ಪ್ರಯೋಗಕ್ಕೆ ಬಳಸಿಕೊಂಡಿರುವ ವಿಜ್ಞಾನಿಗಳು ಶೇ.33ರಷ್ಟು ಎಚ್.ಐ.ವಿ ಸೋಂಕಿತ ಇಲಿಗಳ ದೇಹದಿಂದ ಎಚ್.ಐ.ವಿ. ಡಿ.ಎನ್.ಎ ಅನ್ನೇ ಸಂಪೂರ್ಣವಾಗಿ ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಚಿಕಿತ್ಸೆ ಏಕಾಂಗಿಯಾಗಿ ಏಡ್ಸ್ ವೈರಸ್ ಅನ್ನು ನಿರ್ಮೂಲನೆ ಮಾಡದು, ಎ.ಆರ್.ಟಿ ಚಿಕಿತ್ಸೆಯ ಜೊತೆಗೆ ಇದನ್ನು ಪ್ರಯೋಗಿಸಿದರೆ ಯಶಸ್ಸು ಕಾಣಬಹುದು ಎಂದಿದ್ದಾರೆ ವಿಜ್ಞಾನಿಗಳು.

ಇದಕ್ಕೂ ಮೊದಲು ಇದೇ ನೆಬ್ರಾಸ್ಕಾ ಮೆಡಿಕಲ್ ಸೆಂಟರ್‍ನ ಸಂಶೋಧಕರುಗಳಾದ ಡಾ.ಜೆಂಡಲ್‍ಮನ್ ಮತ್ತು ಡಾ.ಬೆನ್ಸನ್ ಎಡಾಗ್ವಾ ಅವರು `ಲಾಂಗ್ ಆಕ್ಟಿಂಗ್ ಸ್ಲೋ-ಎಫೆಕ್ಟಿವ್ ರಿಲೀಸ್ (LASER) ಎ.ಆರ್.ಟಿ’ ಚಿಕಿತ್ಸೆಯನ್ನು ಶೋಧಿಸಿದ್ದರು. ಇದು ಸಹಾ ಎ.ಆರ್.ಟಿ.ಯಂತೆ ಏಡ್ಸ್ ರೋಗವನ್ನು ಸಂಪೂರ್ಣ ಗುಣಪಡಿಸದಿದ್ದರು ಮೇಲಿಂದ ಮೇಲೆ ಎಆರ್‍ಟಿ ಚಿಕಿತ್ಸೆ ಪಡೆಯುವ ಹೊರೆಯನ್ನು ತಪ್ಪಿಸಿತ್ತು. ಇದೀಗ ಈ LASER ಎ.ಆರ್.ಟಿ ಮತ್ತು CRISPR-Cas9 ತಂತ್ರಜ್ಞಾನಗಳ ಜಂಟಿ ಬಳಕೆಯ ಮೂಲಕ ಎಚ್.ಐ.ವಿ ರೋಗಾಣುವನ್ನು ಸಂಪೂರ್ಣವಾಗಿ ದೇಹದಿಂದ ನಾಶ ಪಡಿಸಲು ಸಾಧ್ಯ ಎನ್ನುವುದನ್ನು ಹೊಸ ಸಂಶೋಧನೆ ತೋರಿಸಿಕೊಟ್ಟಿದೆ.

ಇಲಿಗಳಲ್ಲಿ ಯಶಸ್ವಿಯಾಗಿರುವ ಈ ಪ್ರಯೋಗ ಮನುಷ್ಯನ ದೇಹದಲ್ಲಿ ಯಾವ ಪರಿಣಾಮ ಬೀರುತ್ತದೆ, ವರ್ಣತಂತುಗಳನ್ನೇ ಮಾರ್ಪಾಟು ಮಾಡುವ ಚಿಕಿತ್ಸೆಯಿಂದ ಏನಾದರು ಗಂಭೀರ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ ಎಂಬುದನ್ನು ಪರೀಕ್ಷೆಗೊಳಪಡಿಸುವುದಷ್ಟೇ ಈಗ ಬಾಕಿ ಉಳಿದಿರುವುದು. ಒಟ್ಟಿನಲ್ಲಿ ಏಡ್ಸ್ ರೋಗದ ವಿರುದ್ಧದ ವೈದ್ಯಕೀಯ ಹೋರಾಟದಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಶಾಶ್ವತ ಸಂಪೂರ್ಣ ಚಿಕಿತ್ಸೆ ಪತ್ತೆ ಮಾಡುವ ಗುರಿಗೆ ಸನಿಹವಾದಂತಾಗಿದೆ.

ಆಧಾರ: ಫಸ್ಟ್ ಪೋಸ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...