Homeಮುಖಪುಟಮಿಡ್‍ನೈಟ್ ಕೌಬಾಯ್ ಮತ್ತು ಮಿಡ್‍ನೈಟ್ ರನ್: ಮರೆಯಲಾಗದ ಎರಡು ಹಾಲಿವುಡ್ ಚಿತ್ರಗಳು

ಮಿಡ್‍ನೈಟ್ ಕೌಬಾಯ್ ಮತ್ತು ಮಿಡ್‍ನೈಟ್ ರನ್: ಮರೆಯಲಾಗದ ಎರಡು ಹಾಲಿವುಡ್ ಚಿತ್ರಗಳು

- Advertisement -
- Advertisement -

ನಮಗೆ ಯಾವಾಗಲೋ ನೋಡಿದ ಯಾವ್ಯಾವುದೋ ಚಿತ್ರಗಳು ತಲೆಯಲ್ಲಿ ಉಳಿದುಬಿಡುತ್ತವೆ. ಆ ಚಿತ್ರಗಳನ್ನು ನಾವೇಕೆ ಮರೆಯಲಿಲ್ಲ ಎನ್ನುವುದಕ್ಕೆ ಕಾರಣಗಳನ್ನು ಹುಡುಕುವುದು ಅಷ್ಟು ಸುಲಭವಲ್ಲ. ಅನೇಕ ಸಲ ಎಂದೋ ನೋಡಿದ, ಎಂದೋ ಓದಿದ ನಾವು ಇಷ್ಟಪಡದ ಕಥೆಗಳು, ಚಿತ್ರಗಳೂ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಕರ್ನಾಟಕದ ಮೂಲೆಗಳಲ್ಲಿ, ಇಂಗ್ಲಿಷ್ ಗೊತ್ತಿಲ್ಲದೇ ಬೆಳೆದ ನಮ್ಮಂತವರಿಗೆ ಹಾಲಿವುಡ್ ಎನ್ನುವುದು ಗೊತ್ತಾಗಿದ್ದು ಕಾಲೇಜಿಗೆ ತಲುಪಿದ ಮೇಲೆಯೇ. ಸಿಕ್ಕಸಿಕ್ಕ ಸಿನೆಮಾಗಳನ್ನು ನೋಡುತ್ತಿದ್ದ ನಮಗೆ ಯಾವ ಚಿತ್ರ ಯಾವ ಕಾರಣಕ್ಕೆ ಇಷ್ಟವಾಗುತ್ತಿದೆ ಎನ್ನುವುದು ತಿಳಿಯುತ್ತಿರಲಿಲ್ಲ (ತಿಳಿಯಬೇಕು ಎನ್ನುವ ಯಾವ ನಿಯಮವೂ ಇಲ್ಲ). ಈ ಎರಡು ಚಿತ್ರಗಳು ನೋಡಿ ಎರಡು ದಶಕಗಳಾಗುತ್ತಿದ್ದರೂ ಸ್ಮೃತಿಪಟಲದಿಂದ ಒಂದಿಷ್ಟೂ ಮಾಸಿಲ್ಲ. ಈ ಎರಡು ಚಿತ್ರಗಳೂ ಹಾಲಿವುಡ್ ಅನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ಬಿಟ್ಟರೆ ಬೇರಾವ ಸಾಮ್ಯತೆಗಳೂ ಇಲ್ಲ.

ಟೆಕ್ಸಾಸ್‍ನ ಹೋಟೆಲ್ ಒಂದರಲ್ಲಿ ಪಾತ್ರ ತೊಳೆಯುವ ಕೆಲಸಕ್ಕಿದ್ದ ಒಬ್ಬ ಯುವಕ ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಂಡು ನ್ಯೂಯಾರ್ಕ್‍ಗೆ ಬಂದಿಳಿಯುತ್ತಾನೆ. ಬಿಗ್ ಆ್ಯಪಲ್ ಎಂದು ಕರೆಯಲ್ಪಡುವ ದೊಡ್ಡ ನಗರ ನ್ಯೂ ಯಾರ್ಕ್‍ನಲ್ಲಿರುವ ಮಹಿಳೆಯರಿಗೆ ಸೆಕ್ಸ್ ಮಾಡಲು ಪುರುಷರೇ ಸಿಗುವುದಿಲ್ಲವೆಂದು, ತಾನೊಬ್ಬ ಒಳ್ಳೆಯ ಪ್ರೇಮಿಯಾಗಿದ್ದರಿಂದ ಒಬ್ಬ ಯಶಸ್ವೀ ಪುರುಷ ವೇಶ್ಯೆ ಆಗಬಹುದು ಎನ್ನುವ ಬಲವಾದ ನಂಬಿಕೆ ಜೋ ಬಕ್‍ನದು (ಜಾನ್ ವಾಯಿಟ್). ಟೆಕ್ಸಾಸ್‍ನಿಂದ ನ್ಯೂಯಾರ್ಕ್‍ವರೆಗಿನ ಪಯಣದಲ್ಲಿ ಕಾಣಿಸುವ ಎಲ್ಲಾ ಬಿಲ್‍ಬೋರ್ಡ್‍ಗಳು, ರೇಡಿಯೋದಲ್ಲಿ ಬರುವ ಜಾಹೀರಾತುಗಳೆಲ್ಲವೂ ಅವನ ನಂಬಿಕೆಯನ್ನು ಬಲಪಡಿಸುತ್ತಲೇ ಇರುತ್ತವೆ. ಜೇಬಿನಲ್ಲಿ ಒಂದಿಷ್ಟು ಕಾಸನ್ನು ಇಟ್ಟುಕೊಂಡು ಬಂದಿಳಿದು, ಒಂದು ಹೋಟೆಲ್‍ನಲ್ಲಿ ಉಳಿದುಕೊಳ್ಳುತ್ತಾನೆ. ತಾನೊಬ್ಬ ಗಟ್ಟಿಗ, ಪ್ರೇಮಿ ಎಂದು ತೋರಿಸಿಕೊಳ್ಳಲು ಕೌಬಾಯ್‍ಗಳು ಹಾಕಿಕೊಳ್ಳುವ ಒಂದು ಜಾಕೆಟ್ ಮತ್ತು ಹ್ಯಾಟ್‍ಅನ್ನು ಸದಾಕಾಲ ಹಾಕಿಕೊಂಡಿರುತ್ತಾನೆ.

ಈ ಹೊಸ ಅಪರಿಚಿತ ನಗರದಲ್ಲಿ ಗಮ್ ಅಗಿಯುತ್ತ, ರಸ್ತೆಗಳಲ್ಲಿ ಅಲೆಯುತ್ತ ಕಂಡಕಂಡ ಮಹಿಳೆಯರಿಗೆ ಮಾತನಾಡಿಸಲು ಪ್ರಯತ್ನಿಸುತ್ತಾನೆ. ಕನಸುಗಳು ಎಷ್ಟೇ ಪ್ರಬಲವಾಗಿದ್ದರೂ ಶಹರದ ವಾಸ್ತವ, ತನ್ನ ಕೆಲಸದಲ್ಲಿ ಮರೀಚಿಕೆಯಾದ ಯಶಸ್ಸು, ಬರಿದಾಗುತ್ತಿರುವ ಜೇಬು ಇವನನ್ನು ವಾಸ್ತವಕ್ಕೆ ಎಳೆಯುವ ಪ್ರಯತ್ನ ಮಾಡುತ್ತವೆ. ಆದರೆ ನಮ್ಮ ಹೀರೋನ ಭ್ರಮೆ ಅಷ್ಟು ಸುಲಭಕ್ಕೆ ಕರಗುವಷ್ಟು ಪೊಳ್ಳಾಗಿಲ್ಲ. ಆಗ ಅವನಿಗೆ ಸಿಗುವನು ರಿಕೊ/ರ್ಯಾಟ್ಸೋ (ಡಸ್ಟಿನ್ ಹಾಫ್‍ಮನ್). ರಿಕೋ ಸದಾ ಕೆಮ್ಮುತ್ತಿರುವ, ಕುಂಟುನಡೆಯುವ ಸಣ್ಣಪುಟ್ಟ ಕಳ್ಳತನ, ಜನರಿಗೆ ಟೋಪಿ ಹಾಕುವ ಕೆಲಸ ಮಾಡುವ ವ್ಯಕ್ತಿ. ಜೋ ಬಕ್‍ನನ್ನು ನೋಡಿದಕೂಡಲೇ, ಅವನ ಸ್ನೇಹ ಸಂಪಾದಿಸಿ, ಅವನು ಹೀಗೆಲ್ಲ ರಸ್ತೆಯಲ್ಲಿ ಹುಡುಕಾಟ ಮಾಡಬಾರದೆಂದೂ, ಅವನಿಗೆ ಒಬ್ಬ ಮ್ಯಾನೇಜರ್‍ನ ಅವಶ್ಯಕತೆ ಇದೆಯೆಂದು ನಂಬಿಸಿ, ಒಂದಿಷ್ಟು ದುಡ್ಡು ಕಿತ್ತುಕೊಂಡು ಕಳುಹಿಸುತ್ತಾನೆ. ತಾನು ಮೋಸ ಹೋದೆನೆಂದು ತಿಳಿಯಲು ಜೋಗೆ ಹೆಚ್ಚು ಸಮಯ ಹಿಡಿಯುವದಿಲ್ಲ.

ಜೋ ದುಡ್ಡು ಕಟ್ಟಿಲ್ಲವೆಂದು ಹೋಟೆಲ್‍ನಿಂದ ಹೊರದಬ್ಬಲ್ಪಟ್ಟು, ತಿನ್ನಲೂ ಕಾಸಿಲ್ಲದೇ ಅಲೆಯುತ್ತಿರುವಾಗ ಮತ್ತೆ ಸಿಗುವನು ರ್ಯಾಟ್ಸೋ. ಆಗ ಶುರುವಾಗುವುದು ಅವರಿಬ್ಬರ ಸೋಲು, ಗೆಲುವು, ನೋವು, ಹತಾಶೆಗಳ ಪಯಣ.

ಈ ಚಿತ್ರ ಏಕೆ ಇಷ್ಟವಾಗುತ್ತೆ ಎಂದು ಅನೇಕ ಸಲ ಪ್ರಶ್ನೆ ಕೇಳಿದ್ದೇನೆ. ಅಲೆಕ್ಸಾಂಡರ್ ಪೇನ್ ಒಂದು ಮಾತು ಹೇಳುತ್ತಾರೆ, ‘ನಿರ್ದೇಶನವೆಂದರೆ 90% ಕಾಸ್ಟಿಂಗ್ ಹಾಗೂ ಬಾಕಿ 10% ಮಾತ್ರ ನಿರ್ದೇಶನ’. ಈ ಚಿತ್ರದಲ್ಲಿ ಕನಸುಗಣ್ಣುಗಳ ಮುಗ್ಧ ಜಾನ್ ವಾಯಿಟ್ ಏನೇ ಮಾಡಿದರೂ ನಮಗೆ ಇಷ್ಟವಾಗುತ್ತಾನೆ. ಚಿತ್ರದಲ್ಲಿ ಬರುವ ಫ್ಲ್ಯಾಷ್‍ಬ್ಯಾಕ್, ಕನಸುಗಳು, ಪಾರ್ಟಿಯ ದೃಶ್ಯಗಳು, ಹಿಂಸೆ, ಲೈಂಗಿಕತೆಯ ಬಗ್ಗೆ ಟೀಕೆಗಳು ಬಂದಿವೆ. ಅವುಗಳು ಇಲ್ಲದಿದ್ದರೂ ಈ ಚಿತ್ರ ನಮಗೆ ಇಷ್ಟವಾಗುತ್ತಿತ್ತೇನೋ.

ನಮಗೆ ಈ ಚಿತ್ರ ನೆನಪಿನಲ್ಲುಳಿಯುವುದು ಪಾತ್ರಗಳ ಮುಗ್ಧತೆಯಿಂದ. ದೊಡ್ಡ ನಗರದಲ್ಲಿ ಮಿಸ್‍ಫಿಟ್ ಆಗಿರುವ ಇವರು, ನಿಜಜೀವನದಲ್ಲಿ ನಮಗೆ ಕಂಡರೆ ಬಹುಶಃ ಹೇಸಿಗೆ ಪಟ್ಟು ಮುಂದೆ ಹೋಗುತ್ತೇವೆ ಆದರೆ ಇಲ್ಲಿ ಅವರನ್ನೇ ಇಷ್ಟಪಡುತ್ತೇವೆ. ಇವರ ಮೂರ್ಖತೆ ಮುರ್ಖತೆಯಾಗಿ ಕಾಣಿಸದೇ ಮುಗ್ಧತೆಯಾಗಿ ಕಾಣಿಸುತ್ತದೆ. ಇವರ ಸತ್ಯವನ್ನು ನಾಗರಿಕ ಸಮಾಜವೇಕೆ ಅರ್ಥಮಾಡಿಕೊಳ್ಳುವುದಿಲ್ಲ ಎಂದು ದೂರುತ್ತೇವೆ. ತನ್ನನ್ನು ತಾನು ಒಪ್ಪಿಕೊಳ್ಳುವ ಕಥೆಯನ್ನು ಹೇಳುವ, ತನ್ನ ತಪ್ಪುಗಳನ್ನು ಕ್ಷಮಿಸುವ ಕಥೆಯಾಗಿ ನೆನಪಿನಲ್ಲಿ ಉಳಿಯುತ್ತದೆ ಜಾನ್ ಶ್ಲೆಲಿಂಜರ್ ಅವರ ನಿರ್ದೇಶನದ ಈ ಚಿತ್ರ ಮಿಡ್‍ನೈಟ್ ಕೌಬಾಯ್.

ಜಾಕ್ (ರಾಬರ್ಟ್ ಡಿ ನೀರೊ) ಒಬ್ಬ ಮಾಜಿ ಪೊಲೀಸ್, ಈಗ ಒಬ್ಬ ಬೌಂಟಿ ಹಂಟರ್, ಜಾಮೀನಿನ ಮೇಲೆ ಹೊರಗೆ ಬಂದು ತಪ್ಪಿಸಿಕೊಳ್ಳುವ ವ್ಯಕ್ತಿಗಳನ್ನು ಬಂಧಿಸುವುದು ಇವನ ಕೆಲಸ. ಜಾನಾಥನ್ ಒಬ್ಬ ಅಕೌಂಟಂಟ್, ಜಾಮೀನಿನಲ್ಲಿ ಹೊರಬಂದು ತಪ್ಪಿಸಿಕೊಂಡಿದ್ದಾನೆ. ಈಗ ಅವನನ್ನು ಹಿಡಿದು ಒಪ್ಪಿಸಬೇಕಿದೆ. ಇದು ಮಾರ್ಟಿನ್ ಬ್ರೆಸ್ಟ್ ಅವರ ಮಿಡ್‍ನೈಟ್ ರನ್ ಚಿತ್ರ.

ಜಾನಾಥನ್ ಎಂಬ ಈ ಅಕೌಂಟಂಟ್ ಜಿಮಿ ಸೆರಾನೋ ಎನ್ನುವ ಮಾಫಿಯಾ ಡಾನ್‍ನ ದುಡ್ಡನ್ನೆ ಎಗರಿಸಿ ಚಾರಿಟಿಗೆ ಹಂಚಿದ್ದಾನೆ. ಹಾಗಾಗಿ ಆ ಡಾನ್ ಇವನನ್ನು ಹುಡುಕಿ ಮುಗಿಸಬೇಕಿದೆ. ಪೊಲೀಸರಿಗೂ ಇವನ ಹುಡುಕಾಟ, ಜಾನಾಥನ್‍ನ್ನು ಜಾಕ್ ತನ್ನ ವಶಕ್ಕೆ ತೆಗೆದುಕೊಂಡರೆ ಪೊಲೀಸರ ಕೆಲಸ ಕೆಡುತ್ತೆ ಹಾಗಾಗಿ ಜಾಕ್ ಮೇಲೆ ಕಣ್ಣಿಟ್ಟಿದ್ದಾರೆ. ಯಾರೇ ಬಂಧಿಸಿದರೂ ತನ್ನನ್ನು ಮುಗಿಸಿಬಿಡುವರು ಎಂದು ಜಾನಾಥನ್‍ಗೆ ತಿಳಿದಿದೆ ಹಾಗಾಗಿ ಅವನು ಈ ಮೂವರಿಂದಲೂ ಪಾರಾಗಬೇಕು. ಜಾಕ್‍ಗೆ ಜಾನಾಥನ್‍ನನ್ನು ಹುಡುಕುವುದು ಕಷ್ಟವಾಗಿಲ್ಲ, ಆದರೆ ಅವನನ್ನು ನ್ಯೂ ಯಾರ್ಕ್‍ನಿಂದ ಲಾಸ್ ಏಂಜೆಲ್ಸ್‍ಗೆ ತರಲೇಬೇಕಿದೆ, ಇಲ್ಲದಿದ್ದರೆ ಅವನಿಗೆ ದುಡ್ಡು ಸಿಗುವುದಿಲ್ಲ. ಈ ಪಯಣದಲ್ಲಿ ಅವರಿಬ್ಬರ ಸಂಬಂಧ. ಇಬ್ಬರೂ ಒಳ್ಳೆಯವರೆ ಆದರೆ ಸಂದರ್ಭ ಒಳ್ಳೆಯತನಕ್ಕೆ ಅನುವು ಮಾಡಿಕೊಡುವುದಿಲ್ಲ.

ಇದೊಂದು ಪಕ್ಕಾ ಹಾಲಿವುಡ್ ಫಾರ್ಮುಲಾ ಸಿನೆಮಾ. ಇವುಗಳನ್ನು ‘ಬಡಿ’ (buddy) ಫಿಲ್ಮ್‍ಗಳು ಎನ್ನಲಾಗುತ್ತದೆ. ಇಬ್ಬರು ವ್ಯವಸ್ಥೆ ಮತ್ತು ತಮ್ಮತಮ್ಮ ಪರಿಸ್ಥಿತಿಗಳ ವಿರುದ್ಧ ಹೋರಾಡುವ ಕಥೆ ಹಾಗೂ ಇದೊಂದು ಕಾಮೆಡಿ. ಎಲ್ಲಾ ಪಾತ್ರಗಳಿಗೂ ಒಂದು ಉದ್ದೇಶವಿದೆ, ಕಥೆ ಲೀನಿಯರ್ ಆಗಿ, ಗಂಭೀರಗೊಂಡಂತೆ ಹೆಚ್ಚೆಚ್ಚು ಕಾಮೆಡಿಯಾಗತೊಡಗುತ್ತದೆ. ಸಂಘರ್ಷವೆನ್ನುವುದು ಗಟ್ಟಿಗೊಳ್ಳುತ್ತ ಕ್ಲೈಮ್ಯಾಕ್ಸ್ ತಲುಪುತ್ತದೆ. ಸಾಹಸದೃಶ್ಯಗಳು, ಚೇಸ್‍ಗಳು, ಚಾಪರ್ ಶಾಟ್‍ಗಳನ್ನು ಒಳಗೊಂಡ ಈ ಚಿತ್ರವನ್ನು ಫಾರ್ಮುಲಾ ಚಿತ್ರವೆಂದು ಕರೆದಲ್ಲಿ, ಫಾರ್ಮುಲಾ ಚಿತ್ರದ ಶ್ರೇಷ್ಠ ನಿದರ್ಶನ ಎನ್ನಬಹುದು. ಈ ಚಿತ್ರದ ವಿಶೇಷತೆಯೂ ಇದರ ಕಾಸ್ಟಿಂಗ್. ಬೌಂಟಿ ಹಂಟರ್ ಆಗಿರುವ ರಾಬರ್ಟ್ ಡಿ ನೀರೋ ಯಾವಾಗಲೂ ಗಂಭೀರವಾಗಿಯೇ ಇದ್ದಾನೆ; ಚಾಲ್ರ್ಸ್ ಗೋರ್ಡಿನ್ ಒಬ್ಬ ವೈಟ್‍ಕಾಲರ್ ಕೆಲಸದ ಸಂಭಾವಿತ ವ್ಯಕ್ತಿಯಾಗಿ ಶಾಂತವಾಗೇ ಇರುತ್ತಾನೆ. ಇವರು ಯಾವ ಸಂದರ್ಭದಲ್ಲೂ ಕಾಮೆಡಿ ಮಾಡುವ ಪ್ರಯತ್ನ ಮಾಡುವುದಿಲ್ಲ. ಅವರ ಪರಿಸ್ಥಿತಿಗಳೆ, ಅವರ ಸಂಕಷ್ಟಗಳೇ ಕಾಮೆಡಿಯಾಗಿ ಪರಿಣಮಿಸುತ್ತವೆ.

ಫಾರ್ಮುಲಾ ಚಿತ್ರವಾಗಿದ್ದು, ಹಾಲಿವುಡ್‍ನ ಸ್ಟ್ರಕ್ಚರ್‍ಗೆ ಬದ್ಧವಾಗಿದ್ದು, ಸ್ಟಾರ್‍ಗಳನ್ನು ಹಾಕಿಕೊಂಡರೂ ಈ ಚಿತ್ರ ಮಾನವೀಯತೆಗೆ ಬದ್ಧವಾಗಿದೆ. ಕಾಮೆಡಿ, ಥ್ರಿಲರ್, ಬಡಿ, ಚೇಸ್ ಸಿನೆಮಾ ಎಂಬ ಹಣೆಪಟ್ಟಿಯ ಅಡಿಯಲ್ಲಿ ಬಂದರೂ, ಪಾತ್ರಗಳು ಮಾನವೀಯತೆಯನ್ನು ಎತ್ತಿಹಿಡಿಯುತ್ತವೆ, ಅವರ ಸಮಸ್ಯೆಗಳಿಗೆ ಮಿಡಿಯುವಂತೆ ಮಾಡುತ್ತದೆ. ಜಾಕ್ ತನ್ನ ಮಾಜಿ ಹೆಂಡತಿಯನ್ನು ಭೇಟಿ ಮಾಡುವುದು, ತನ್ನ ಮಗಳನ್ನು ಅನೇಕ ವರ್ಷಗಳ ನಂತರ ನೋಡುವುದು, ಸೆಂಟಿಮೆಂಟಲ್ ಅಂಶಗಳನ್ನು ತುರುಕುವ ಸಲುವಾಗಿ ಸೇರಿಸಿಲ್ಲ. ತಾನು ಹೇಳಬೇಕಾದ ಕಥೆಗೆ ಬದ್ಧನಾಗಿ ಪ್ರಾಮಾಣಿಕವಾಗಿ ಹೇಳಿದ್ದರಿಂದಲೇ ಮೂಡಿಬಂದಿದ್ದು ಮಿಡ್‍ನೈಟ್ ರನ್ ಎನ್ನುವ ಮಾರ್ಟಿನ್ ಬ್ರೆಸ್ಟ್ ಅವರ ನಿರ್ದೇಶನದ ಅದ್ಭುತ ಚಿತ್ರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...