Homeಮುಖಪುಟಮಿಡ್‍ನೈಟ್ ಕೌಬಾಯ್ ಮತ್ತು ಮಿಡ್‍ನೈಟ್ ರನ್: ಮರೆಯಲಾಗದ ಎರಡು ಹಾಲಿವುಡ್ ಚಿತ್ರಗಳು

ಮಿಡ್‍ನೈಟ್ ಕೌಬಾಯ್ ಮತ್ತು ಮಿಡ್‍ನೈಟ್ ರನ್: ಮರೆಯಲಾಗದ ಎರಡು ಹಾಲಿವುಡ್ ಚಿತ್ರಗಳು

- Advertisement -
- Advertisement -

ನಮಗೆ ಯಾವಾಗಲೋ ನೋಡಿದ ಯಾವ್ಯಾವುದೋ ಚಿತ್ರಗಳು ತಲೆಯಲ್ಲಿ ಉಳಿದುಬಿಡುತ್ತವೆ. ಆ ಚಿತ್ರಗಳನ್ನು ನಾವೇಕೆ ಮರೆಯಲಿಲ್ಲ ಎನ್ನುವುದಕ್ಕೆ ಕಾರಣಗಳನ್ನು ಹುಡುಕುವುದು ಅಷ್ಟು ಸುಲಭವಲ್ಲ. ಅನೇಕ ಸಲ ಎಂದೋ ನೋಡಿದ, ಎಂದೋ ಓದಿದ ನಾವು ಇಷ್ಟಪಡದ ಕಥೆಗಳು, ಚಿತ್ರಗಳೂ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಕರ್ನಾಟಕದ ಮೂಲೆಗಳಲ್ಲಿ, ಇಂಗ್ಲಿಷ್ ಗೊತ್ತಿಲ್ಲದೇ ಬೆಳೆದ ನಮ್ಮಂತವರಿಗೆ ಹಾಲಿವುಡ್ ಎನ್ನುವುದು ಗೊತ್ತಾಗಿದ್ದು ಕಾಲೇಜಿಗೆ ತಲುಪಿದ ಮೇಲೆಯೇ. ಸಿಕ್ಕಸಿಕ್ಕ ಸಿನೆಮಾಗಳನ್ನು ನೋಡುತ್ತಿದ್ದ ನಮಗೆ ಯಾವ ಚಿತ್ರ ಯಾವ ಕಾರಣಕ್ಕೆ ಇಷ್ಟವಾಗುತ್ತಿದೆ ಎನ್ನುವುದು ತಿಳಿಯುತ್ತಿರಲಿಲ್ಲ (ತಿಳಿಯಬೇಕು ಎನ್ನುವ ಯಾವ ನಿಯಮವೂ ಇಲ್ಲ). ಈ ಎರಡು ಚಿತ್ರಗಳು ನೋಡಿ ಎರಡು ದಶಕಗಳಾಗುತ್ತಿದ್ದರೂ ಸ್ಮೃತಿಪಟಲದಿಂದ ಒಂದಿಷ್ಟೂ ಮಾಸಿಲ್ಲ. ಈ ಎರಡು ಚಿತ್ರಗಳೂ ಹಾಲಿವುಡ್ ಅನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ಬಿಟ್ಟರೆ ಬೇರಾವ ಸಾಮ್ಯತೆಗಳೂ ಇಲ್ಲ.

ಟೆಕ್ಸಾಸ್‍ನ ಹೋಟೆಲ್ ಒಂದರಲ್ಲಿ ಪಾತ್ರ ತೊಳೆಯುವ ಕೆಲಸಕ್ಕಿದ್ದ ಒಬ್ಬ ಯುವಕ ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಂಡು ನ್ಯೂಯಾರ್ಕ್‍ಗೆ ಬಂದಿಳಿಯುತ್ತಾನೆ. ಬಿಗ್ ಆ್ಯಪಲ್ ಎಂದು ಕರೆಯಲ್ಪಡುವ ದೊಡ್ಡ ನಗರ ನ್ಯೂ ಯಾರ್ಕ್‍ನಲ್ಲಿರುವ ಮಹಿಳೆಯರಿಗೆ ಸೆಕ್ಸ್ ಮಾಡಲು ಪುರುಷರೇ ಸಿಗುವುದಿಲ್ಲವೆಂದು, ತಾನೊಬ್ಬ ಒಳ್ಳೆಯ ಪ್ರೇಮಿಯಾಗಿದ್ದರಿಂದ ಒಬ್ಬ ಯಶಸ್ವೀ ಪುರುಷ ವೇಶ್ಯೆ ಆಗಬಹುದು ಎನ್ನುವ ಬಲವಾದ ನಂಬಿಕೆ ಜೋ ಬಕ್‍ನದು (ಜಾನ್ ವಾಯಿಟ್). ಟೆಕ್ಸಾಸ್‍ನಿಂದ ನ್ಯೂಯಾರ್ಕ್‍ವರೆಗಿನ ಪಯಣದಲ್ಲಿ ಕಾಣಿಸುವ ಎಲ್ಲಾ ಬಿಲ್‍ಬೋರ್ಡ್‍ಗಳು, ರೇಡಿಯೋದಲ್ಲಿ ಬರುವ ಜಾಹೀರಾತುಗಳೆಲ್ಲವೂ ಅವನ ನಂಬಿಕೆಯನ್ನು ಬಲಪಡಿಸುತ್ತಲೇ ಇರುತ್ತವೆ. ಜೇಬಿನಲ್ಲಿ ಒಂದಿಷ್ಟು ಕಾಸನ್ನು ಇಟ್ಟುಕೊಂಡು ಬಂದಿಳಿದು, ಒಂದು ಹೋಟೆಲ್‍ನಲ್ಲಿ ಉಳಿದುಕೊಳ್ಳುತ್ತಾನೆ. ತಾನೊಬ್ಬ ಗಟ್ಟಿಗ, ಪ್ರೇಮಿ ಎಂದು ತೋರಿಸಿಕೊಳ್ಳಲು ಕೌಬಾಯ್‍ಗಳು ಹಾಕಿಕೊಳ್ಳುವ ಒಂದು ಜಾಕೆಟ್ ಮತ್ತು ಹ್ಯಾಟ್‍ಅನ್ನು ಸದಾಕಾಲ ಹಾಕಿಕೊಂಡಿರುತ್ತಾನೆ.

ಈ ಹೊಸ ಅಪರಿಚಿತ ನಗರದಲ್ಲಿ ಗಮ್ ಅಗಿಯುತ್ತ, ರಸ್ತೆಗಳಲ್ಲಿ ಅಲೆಯುತ್ತ ಕಂಡಕಂಡ ಮಹಿಳೆಯರಿಗೆ ಮಾತನಾಡಿಸಲು ಪ್ರಯತ್ನಿಸುತ್ತಾನೆ. ಕನಸುಗಳು ಎಷ್ಟೇ ಪ್ರಬಲವಾಗಿದ್ದರೂ ಶಹರದ ವಾಸ್ತವ, ತನ್ನ ಕೆಲಸದಲ್ಲಿ ಮರೀಚಿಕೆಯಾದ ಯಶಸ್ಸು, ಬರಿದಾಗುತ್ತಿರುವ ಜೇಬು ಇವನನ್ನು ವಾಸ್ತವಕ್ಕೆ ಎಳೆಯುವ ಪ್ರಯತ್ನ ಮಾಡುತ್ತವೆ. ಆದರೆ ನಮ್ಮ ಹೀರೋನ ಭ್ರಮೆ ಅಷ್ಟು ಸುಲಭಕ್ಕೆ ಕರಗುವಷ್ಟು ಪೊಳ್ಳಾಗಿಲ್ಲ. ಆಗ ಅವನಿಗೆ ಸಿಗುವನು ರಿಕೊ/ರ್ಯಾಟ್ಸೋ (ಡಸ್ಟಿನ್ ಹಾಫ್‍ಮನ್). ರಿಕೋ ಸದಾ ಕೆಮ್ಮುತ್ತಿರುವ, ಕುಂಟುನಡೆಯುವ ಸಣ್ಣಪುಟ್ಟ ಕಳ್ಳತನ, ಜನರಿಗೆ ಟೋಪಿ ಹಾಕುವ ಕೆಲಸ ಮಾಡುವ ವ್ಯಕ್ತಿ. ಜೋ ಬಕ್‍ನನ್ನು ನೋಡಿದಕೂಡಲೇ, ಅವನ ಸ್ನೇಹ ಸಂಪಾದಿಸಿ, ಅವನು ಹೀಗೆಲ್ಲ ರಸ್ತೆಯಲ್ಲಿ ಹುಡುಕಾಟ ಮಾಡಬಾರದೆಂದೂ, ಅವನಿಗೆ ಒಬ್ಬ ಮ್ಯಾನೇಜರ್‍ನ ಅವಶ್ಯಕತೆ ಇದೆಯೆಂದು ನಂಬಿಸಿ, ಒಂದಿಷ್ಟು ದುಡ್ಡು ಕಿತ್ತುಕೊಂಡು ಕಳುಹಿಸುತ್ತಾನೆ. ತಾನು ಮೋಸ ಹೋದೆನೆಂದು ತಿಳಿಯಲು ಜೋಗೆ ಹೆಚ್ಚು ಸಮಯ ಹಿಡಿಯುವದಿಲ್ಲ.

ಜೋ ದುಡ್ಡು ಕಟ್ಟಿಲ್ಲವೆಂದು ಹೋಟೆಲ್‍ನಿಂದ ಹೊರದಬ್ಬಲ್ಪಟ್ಟು, ತಿನ್ನಲೂ ಕಾಸಿಲ್ಲದೇ ಅಲೆಯುತ್ತಿರುವಾಗ ಮತ್ತೆ ಸಿಗುವನು ರ್ಯಾಟ್ಸೋ. ಆಗ ಶುರುವಾಗುವುದು ಅವರಿಬ್ಬರ ಸೋಲು, ಗೆಲುವು, ನೋವು, ಹತಾಶೆಗಳ ಪಯಣ.

ಈ ಚಿತ್ರ ಏಕೆ ಇಷ್ಟವಾಗುತ್ತೆ ಎಂದು ಅನೇಕ ಸಲ ಪ್ರಶ್ನೆ ಕೇಳಿದ್ದೇನೆ. ಅಲೆಕ್ಸಾಂಡರ್ ಪೇನ್ ಒಂದು ಮಾತು ಹೇಳುತ್ತಾರೆ, ‘ನಿರ್ದೇಶನವೆಂದರೆ 90% ಕಾಸ್ಟಿಂಗ್ ಹಾಗೂ ಬಾಕಿ 10% ಮಾತ್ರ ನಿರ್ದೇಶನ’. ಈ ಚಿತ್ರದಲ್ಲಿ ಕನಸುಗಣ್ಣುಗಳ ಮುಗ್ಧ ಜಾನ್ ವಾಯಿಟ್ ಏನೇ ಮಾಡಿದರೂ ನಮಗೆ ಇಷ್ಟವಾಗುತ್ತಾನೆ. ಚಿತ್ರದಲ್ಲಿ ಬರುವ ಫ್ಲ್ಯಾಷ್‍ಬ್ಯಾಕ್, ಕನಸುಗಳು, ಪಾರ್ಟಿಯ ದೃಶ್ಯಗಳು, ಹಿಂಸೆ, ಲೈಂಗಿಕತೆಯ ಬಗ್ಗೆ ಟೀಕೆಗಳು ಬಂದಿವೆ. ಅವುಗಳು ಇಲ್ಲದಿದ್ದರೂ ಈ ಚಿತ್ರ ನಮಗೆ ಇಷ್ಟವಾಗುತ್ತಿತ್ತೇನೋ.

ನಮಗೆ ಈ ಚಿತ್ರ ನೆನಪಿನಲ್ಲುಳಿಯುವುದು ಪಾತ್ರಗಳ ಮುಗ್ಧತೆಯಿಂದ. ದೊಡ್ಡ ನಗರದಲ್ಲಿ ಮಿಸ್‍ಫಿಟ್ ಆಗಿರುವ ಇವರು, ನಿಜಜೀವನದಲ್ಲಿ ನಮಗೆ ಕಂಡರೆ ಬಹುಶಃ ಹೇಸಿಗೆ ಪಟ್ಟು ಮುಂದೆ ಹೋಗುತ್ತೇವೆ ಆದರೆ ಇಲ್ಲಿ ಅವರನ್ನೇ ಇಷ್ಟಪಡುತ್ತೇವೆ. ಇವರ ಮೂರ್ಖತೆ ಮುರ್ಖತೆಯಾಗಿ ಕಾಣಿಸದೇ ಮುಗ್ಧತೆಯಾಗಿ ಕಾಣಿಸುತ್ತದೆ. ಇವರ ಸತ್ಯವನ್ನು ನಾಗರಿಕ ಸಮಾಜವೇಕೆ ಅರ್ಥಮಾಡಿಕೊಳ್ಳುವುದಿಲ್ಲ ಎಂದು ದೂರುತ್ತೇವೆ. ತನ್ನನ್ನು ತಾನು ಒಪ್ಪಿಕೊಳ್ಳುವ ಕಥೆಯನ್ನು ಹೇಳುವ, ತನ್ನ ತಪ್ಪುಗಳನ್ನು ಕ್ಷಮಿಸುವ ಕಥೆಯಾಗಿ ನೆನಪಿನಲ್ಲಿ ಉಳಿಯುತ್ತದೆ ಜಾನ್ ಶ್ಲೆಲಿಂಜರ್ ಅವರ ನಿರ್ದೇಶನದ ಈ ಚಿತ್ರ ಮಿಡ್‍ನೈಟ್ ಕೌಬಾಯ್.

ಜಾಕ್ (ರಾಬರ್ಟ್ ಡಿ ನೀರೊ) ಒಬ್ಬ ಮಾಜಿ ಪೊಲೀಸ್, ಈಗ ಒಬ್ಬ ಬೌಂಟಿ ಹಂಟರ್, ಜಾಮೀನಿನ ಮೇಲೆ ಹೊರಗೆ ಬಂದು ತಪ್ಪಿಸಿಕೊಳ್ಳುವ ವ್ಯಕ್ತಿಗಳನ್ನು ಬಂಧಿಸುವುದು ಇವನ ಕೆಲಸ. ಜಾನಾಥನ್ ಒಬ್ಬ ಅಕೌಂಟಂಟ್, ಜಾಮೀನಿನಲ್ಲಿ ಹೊರಬಂದು ತಪ್ಪಿಸಿಕೊಂಡಿದ್ದಾನೆ. ಈಗ ಅವನನ್ನು ಹಿಡಿದು ಒಪ್ಪಿಸಬೇಕಿದೆ. ಇದು ಮಾರ್ಟಿನ್ ಬ್ರೆಸ್ಟ್ ಅವರ ಮಿಡ್‍ನೈಟ್ ರನ್ ಚಿತ್ರ.

ಜಾನಾಥನ್ ಎಂಬ ಈ ಅಕೌಂಟಂಟ್ ಜಿಮಿ ಸೆರಾನೋ ಎನ್ನುವ ಮಾಫಿಯಾ ಡಾನ್‍ನ ದುಡ್ಡನ್ನೆ ಎಗರಿಸಿ ಚಾರಿಟಿಗೆ ಹಂಚಿದ್ದಾನೆ. ಹಾಗಾಗಿ ಆ ಡಾನ್ ಇವನನ್ನು ಹುಡುಕಿ ಮುಗಿಸಬೇಕಿದೆ. ಪೊಲೀಸರಿಗೂ ಇವನ ಹುಡುಕಾಟ, ಜಾನಾಥನ್‍ನ್ನು ಜಾಕ್ ತನ್ನ ವಶಕ್ಕೆ ತೆಗೆದುಕೊಂಡರೆ ಪೊಲೀಸರ ಕೆಲಸ ಕೆಡುತ್ತೆ ಹಾಗಾಗಿ ಜಾಕ್ ಮೇಲೆ ಕಣ್ಣಿಟ್ಟಿದ್ದಾರೆ. ಯಾರೇ ಬಂಧಿಸಿದರೂ ತನ್ನನ್ನು ಮುಗಿಸಿಬಿಡುವರು ಎಂದು ಜಾನಾಥನ್‍ಗೆ ತಿಳಿದಿದೆ ಹಾಗಾಗಿ ಅವನು ಈ ಮೂವರಿಂದಲೂ ಪಾರಾಗಬೇಕು. ಜಾಕ್‍ಗೆ ಜಾನಾಥನ್‍ನನ್ನು ಹುಡುಕುವುದು ಕಷ್ಟವಾಗಿಲ್ಲ, ಆದರೆ ಅವನನ್ನು ನ್ಯೂ ಯಾರ್ಕ್‍ನಿಂದ ಲಾಸ್ ಏಂಜೆಲ್ಸ್‍ಗೆ ತರಲೇಬೇಕಿದೆ, ಇಲ್ಲದಿದ್ದರೆ ಅವನಿಗೆ ದುಡ್ಡು ಸಿಗುವುದಿಲ್ಲ. ಈ ಪಯಣದಲ್ಲಿ ಅವರಿಬ್ಬರ ಸಂಬಂಧ. ಇಬ್ಬರೂ ಒಳ್ಳೆಯವರೆ ಆದರೆ ಸಂದರ್ಭ ಒಳ್ಳೆಯತನಕ್ಕೆ ಅನುವು ಮಾಡಿಕೊಡುವುದಿಲ್ಲ.

ಇದೊಂದು ಪಕ್ಕಾ ಹಾಲಿವುಡ್ ಫಾರ್ಮುಲಾ ಸಿನೆಮಾ. ಇವುಗಳನ್ನು ‘ಬಡಿ’ (buddy) ಫಿಲ್ಮ್‍ಗಳು ಎನ್ನಲಾಗುತ್ತದೆ. ಇಬ್ಬರು ವ್ಯವಸ್ಥೆ ಮತ್ತು ತಮ್ಮತಮ್ಮ ಪರಿಸ್ಥಿತಿಗಳ ವಿರುದ್ಧ ಹೋರಾಡುವ ಕಥೆ ಹಾಗೂ ಇದೊಂದು ಕಾಮೆಡಿ. ಎಲ್ಲಾ ಪಾತ್ರಗಳಿಗೂ ಒಂದು ಉದ್ದೇಶವಿದೆ, ಕಥೆ ಲೀನಿಯರ್ ಆಗಿ, ಗಂಭೀರಗೊಂಡಂತೆ ಹೆಚ್ಚೆಚ್ಚು ಕಾಮೆಡಿಯಾಗತೊಡಗುತ್ತದೆ. ಸಂಘರ್ಷವೆನ್ನುವುದು ಗಟ್ಟಿಗೊಳ್ಳುತ್ತ ಕ್ಲೈಮ್ಯಾಕ್ಸ್ ತಲುಪುತ್ತದೆ. ಸಾಹಸದೃಶ್ಯಗಳು, ಚೇಸ್‍ಗಳು, ಚಾಪರ್ ಶಾಟ್‍ಗಳನ್ನು ಒಳಗೊಂಡ ಈ ಚಿತ್ರವನ್ನು ಫಾರ್ಮುಲಾ ಚಿತ್ರವೆಂದು ಕರೆದಲ್ಲಿ, ಫಾರ್ಮುಲಾ ಚಿತ್ರದ ಶ್ರೇಷ್ಠ ನಿದರ್ಶನ ಎನ್ನಬಹುದು. ಈ ಚಿತ್ರದ ವಿಶೇಷತೆಯೂ ಇದರ ಕಾಸ್ಟಿಂಗ್. ಬೌಂಟಿ ಹಂಟರ್ ಆಗಿರುವ ರಾಬರ್ಟ್ ಡಿ ನೀರೋ ಯಾವಾಗಲೂ ಗಂಭೀರವಾಗಿಯೇ ಇದ್ದಾನೆ; ಚಾಲ್ರ್ಸ್ ಗೋರ್ಡಿನ್ ಒಬ್ಬ ವೈಟ್‍ಕಾಲರ್ ಕೆಲಸದ ಸಂಭಾವಿತ ವ್ಯಕ್ತಿಯಾಗಿ ಶಾಂತವಾಗೇ ಇರುತ್ತಾನೆ. ಇವರು ಯಾವ ಸಂದರ್ಭದಲ್ಲೂ ಕಾಮೆಡಿ ಮಾಡುವ ಪ್ರಯತ್ನ ಮಾಡುವುದಿಲ್ಲ. ಅವರ ಪರಿಸ್ಥಿತಿಗಳೆ, ಅವರ ಸಂಕಷ್ಟಗಳೇ ಕಾಮೆಡಿಯಾಗಿ ಪರಿಣಮಿಸುತ್ತವೆ.

ಫಾರ್ಮುಲಾ ಚಿತ್ರವಾಗಿದ್ದು, ಹಾಲಿವುಡ್‍ನ ಸ್ಟ್ರಕ್ಚರ್‍ಗೆ ಬದ್ಧವಾಗಿದ್ದು, ಸ್ಟಾರ್‍ಗಳನ್ನು ಹಾಕಿಕೊಂಡರೂ ಈ ಚಿತ್ರ ಮಾನವೀಯತೆಗೆ ಬದ್ಧವಾಗಿದೆ. ಕಾಮೆಡಿ, ಥ್ರಿಲರ್, ಬಡಿ, ಚೇಸ್ ಸಿನೆಮಾ ಎಂಬ ಹಣೆಪಟ್ಟಿಯ ಅಡಿಯಲ್ಲಿ ಬಂದರೂ, ಪಾತ್ರಗಳು ಮಾನವೀಯತೆಯನ್ನು ಎತ್ತಿಹಿಡಿಯುತ್ತವೆ, ಅವರ ಸಮಸ್ಯೆಗಳಿಗೆ ಮಿಡಿಯುವಂತೆ ಮಾಡುತ್ತದೆ. ಜಾಕ್ ತನ್ನ ಮಾಜಿ ಹೆಂಡತಿಯನ್ನು ಭೇಟಿ ಮಾಡುವುದು, ತನ್ನ ಮಗಳನ್ನು ಅನೇಕ ವರ್ಷಗಳ ನಂತರ ನೋಡುವುದು, ಸೆಂಟಿಮೆಂಟಲ್ ಅಂಶಗಳನ್ನು ತುರುಕುವ ಸಲುವಾಗಿ ಸೇರಿಸಿಲ್ಲ. ತಾನು ಹೇಳಬೇಕಾದ ಕಥೆಗೆ ಬದ್ಧನಾಗಿ ಪ್ರಾಮಾಣಿಕವಾಗಿ ಹೇಳಿದ್ದರಿಂದಲೇ ಮೂಡಿಬಂದಿದ್ದು ಮಿಡ್‍ನೈಟ್ ರನ್ ಎನ್ನುವ ಮಾರ್ಟಿನ್ ಬ್ರೆಸ್ಟ್ ಅವರ ನಿರ್ದೇಶನದ ಅದ್ಭುತ ಚಿತ್ರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...