ಸಚಿವ ಈಶ್ವರಪ್ಪ ಜೋಕರ್ ಎಂದು ಹೆಸರು ಬದಲಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಅವಾಚ್ಯ ಪದ ಬಳಸಿದ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದ್ದು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಸಚಿವ ಈಶ್ವರಪ್ಪ ಮಾತಿಗೆ “ಹೊಲಸು ಬಾಯಿಯ ಈಶ್ವರಪ್ಪ, ಒಂದು ಕ್ಷಣವೂ ರಾಜಕೀಯ ಬದುಕಿನಲ್ಲಿ ಮುಂದುವರೆಯಲು ಅರ್ಹರಲ್ಲ. ಸಭ್ಯ, ಮರ್ಯಾದಸ್ಥ ಕನ್ನಡಿಗರಿಗೆ ಈಶ್ವರಪ್ಪ ಕಪ್ಪು ಚುಕ್ಕೆ. ಅವರು ಕೂಡಲೇ ರಾಜೀನಾಮೆ ನೀಡಲಿ, ಸಭ್ಯ ಕನ್ನಡಿಗರು ಮುಜುಗರಪಟ್ಟುಕೊಳ್ಳುವಂತೆ ನಾಲಿಗೆ ಹರಿಬಿಡುವುದನ್ನು ನಿಲ್ಲಿಸಲಿ. ತಮ್ಮ ನಾಲಿಗೆಯನ್ನು ಗೋಮೂತ್ರದಿಂದ ಶುಚಿಗೊಳಿಸಿಕೊಳ್ಳಲಿ!” ಎಂದು ಕಾಂಗ್ರೆಸ್ ಕಿಡಿ ಕಾರಿತ್ತು.
“ಮಾನಸಿಕ ಅನಾರೋಗ್ಯ ಹೊಂದಿದವರು ಚುನಾಯಿತ ಪ್ರತಿನಿಧಿಗಳ ಸ್ಥಾನದಲ್ಲಿರಲು ಅನರ್ಹರು ಎಂಬ ನಿಯಮವಿದೆ. ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ಕಾರಣ ಈಶ್ವರಪ್ಪನವರು. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ, ನಿಯಮದ ಪ್ರಕಾರ ಅವರನ್ನು ಜನಪ್ರತಿನಿಧಿಯ ಸ್ಥಾನದಿಂದ ಅನರ್ಹಗೊಳಿಸಬೇಕು. ಕನ್ನಡಿಗರ ಸಭ್ಯತನಕ್ಕೆ ಈಶ್ವರಪ್ಪನವರು ಅತೀ ದೊಡ್ಡ ಕಳಂಕ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: ಜನರ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ: ಡಿ.ಕೆ. ಶಿವಕುಮಾರ್
ಹೊಲಸು ಬಾಯಿಯ @ikseshwarappa ಒಂದು ಕ್ಷಣವೂ ರಾಜಕೀಯ ಬದುಕಿನಲ್ಲಿ ಮುಂದುವರೆಯಲು ಅರ್ಹರಲ್ಲ.
ಸಭ್ಯ, ಮರ್ಯಾದಸ್ಥ ಕನ್ನಡಿಗರಿಗೆ ಈಶ್ವರಪ್ಪ ಕಪ್ಪು ಚುಕ್ಕೆ.
ಅವರು ಕೂಡಲೇ ರಾಜೀನಾಮೆ ನೀಡಲಿ, ಸಭ್ಯ ಕನ್ನಡಿಗರು ಮುಜುಗರಪಟ್ಟುಕೊಳ್ಳುವಂತೆ ನಾಲಿಗೆ ಹರಿಬಿಡುವುದನ್ನು ನಿಲ್ಲಿಸಲಿ.
ತಮ್ಮ ನಾಲಿಗೆಯನ್ನು ಗೋಮೂತ್ರದಿಂದ ಶುಚಿಗೊಳಿಸಿಕೊಳ್ಳಲಿ!
— Karnataka Congress (@INCKarnataka) August 10, 2021
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮಾತಿಗೆ ಕ್ಷಮೆ ಕೇಳಿದ್ದಾರೆ. ಕೋಪದಲ್ಲಿ ಬಾಯಿಯಲ್ಲಿ ಬಂದ ಪದಕ್ಕೆ ಕ್ಷಮೆ ಕೇಳುತ್ತೇನೆ. ಅದನ್ನು ಮುಂದುವರೆಸುವುದು ಬೇಡ, ಆಡಿದ ಮಾತನ್ನು ಹಿಂಪಡೆಯುವುದಾಗಿ ಈಶ್ವರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ ಎನ್ಎಸ್ಯುಐ ಕಾರ್ಯಕರ್ತರು ಸಚಿವ ಈಶ್ವರಪ್ಪ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಈಶ್ವರಪ್ಪ ಅವರ ಹೇಳಿಕೆ ಬಿಜೆಪಿ ಸಂಸ್ಕೃತಿಯ ಪ್ರತಿಬಿಂಬ: ಡಿ.ಕೆ. ಶಿವಕುಮಾರ್…ವಿಡಿಯೊ ನೋಡಿ
ಇದನ್ನೂ ಓದಿ: ಜಂತರ್ ಮಂತರ್ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ: ಬಿಜೆಪಿ ಮುಖಂಡ ಸೇರಿ 6 ಜನರ ಬಂಧನ